Tag: Hindi Song

  • ‘ತೋತಾಪುರಿ’ ಸಾಂಗ್ ಟೀಸರ್ ಕಂಡು ಗರಂ ಆದ ಪ್ರೇಕ್ಷಕರು

    ‘ತೋತಾಪುರಿ’ ಸಾಂಗ್ ಟೀಸರ್ ಕಂಡು ಗರಂ ಆದ ಪ್ರೇಕ್ಷಕರು

    ನಿರ್ದೇಶಕ ವಿಜಯಪ್ರಸಾದ್, ನವರಸ ನಾಯಕ ಜಗ್ಗೇಶ್ ಹಿಟ್ ಕಾಂಬಿನೇಶನಲ್ಲಿ ಬರುತ್ತಿರುವ ‘ತೋತಾಪುರಿ’ ಸಿನಿಮಾ ಸ್ಯಾಂಡಲ್‍ವುಡ್ ಅಂಗಳದಲ್ಲಿ ಅಪಾರ ನಿರೀಕ್ಷೆ ಮೂಡಿಸಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗುತ್ತಿರುವ ಈ ಚಿತ್ರ ನೀರ್ ದೋಸೆ ಜೋಡಿಗೆ ಮತ್ತೊಂದು ಸೂಪರ್ ಸಕ್ಸಸ್ ತಂದು ಕೊಡಲಿದೆ ಎಂಬ ಭವಿಷ್ಯವಾಣಿ ಈಗಾಗಲೇ ಗಾಂಧಿನಗರದಲ್ಲಿ ಕೇಳಿ ಬರುತ್ತಿದೆ. ಸೆಟ್ಟೇರಿದ ದಿನದಿಂದ ಇಂತಹ ಮಾತುಗಳನ್ನು ಕೇಳಿಸಿಕೊಂಡು ಬಂದಿದ್ದ ಚಿತ್ರತಂಡಕ್ಕೆ ಈಗ ಅದೇ ಪ್ರೇಕ್ಷಕರು ಛೀಮಾರಿ ಹಾಕುತ್ತಿದ್ದಾರೆ. ಅಂತಹದ್ದೊಂದು ದೊಡ್ಡ ಪ್ರಮಾದವಾವನ್ನು ಚಿತ್ರತಂಡ ಮಾಡಿದೆ.

    ಹೌದು, ತೋತಾಪುರಿ ಚಿತ್ರತಂಡ ಇಂದು ಸಾಂಗ್ ಟೀಸರ್ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿತ್ತು. ಚಿತ್ರದ ಬಗ್ಗೆ ಯಾವುದೇ ಅಪ್‍ಡೇಟ್ ಸಿಗದೇ ಕಾದಿದ್ದ ಸಿನಿರಸಿಕರಿಗೆ ಈ ಸುದ್ದಿ ಸಖತ್ ಸಂತಸ ನೀಡಿತ್ತು. ಆದರೆ ಇಂದು ಬಿಡುಗಡೆಯಾದ ಸಾಂಗ್ ಟೀಸರ್ ಆ ಸಂತಸವನ್ನು ಕೋಪವನ್ನಾಗಿಸಿದೆ. ಇದಕ್ಕೆ ಕಾರಣ ಸಾಂಗ್ ಟೀಸರ್‌ನಲ್ಲಿರುವ ಹಿಂದಿ ಸಾಹಿತ್ಯ. ಸಣ್ಣದಾದ ಹಾಡಿನ ಝಲಕ್‍ನಲ್ಲಿ ಹಿಂದಿ ಹಾಗೂ ಉರ್ದು ಭಾಷೆಯಲ್ಲಿರುವ ಸಾಹಿತ್ಯ ಕಂಡು ನೋಡುಗರು ಚಿತ್ರತಂಡದ ಮೇಲೆ ಕೋಪಗೊಂಡಿದ್ದಾರೆ. ಕನ್ನಡ ಸಿನಿಮಾದಲ್ಲಿ ಹಿಂದಿ ಹಾಡು ಯಾಕೆ ಎಂದು ಪ್ರಶ್ನಿಸುತ್ತಿದ್ದಾರೆ. ಅಷ್ಟೇ ಅಲ್ಲ ಕನ್ನಡ ನಾಡು, ನುಡಿ ಎನ್ನುವ ನವರಸ ನಾಯಕ ಜಗ್ಗೇಶ್ ಈ ಹಾಡು ಮಾಡಲು ಒಪ್ಪಿಕೊಂಡ್ರಾ, ಇದು ಅವರ ಅರಿವಿಗೆ ಬರಲಿಲ್ವಾ? ಅದರಲ್ಲೂ ಹಿಂದಿ ಭಾಷೆ ಹೇರಿಕೆ ಬಗ್ಗೆ ಚರ್ಚೆ ನಡೆಯುತ್ತಿರುವ ಇಂತಹ ಸಂದರ್ಭದಲ್ಲಿ ಅಪ್ಪಟ ಕನ್ನಡ ಸಿನಿಮಾವೊಂದು ಈ ರೀತಿಯ ಉದ್ಧಟತನ ತೋರಿರುವುದು ಯಾಕೆ ಎಂದು ಚಿತ್ರತಂಡದ ವಿರುದ್ಧ ಗುಡುಗುತ್ತಿದ್ದಾರೆ.

    ತೋತಾಪುರಿ ಪ್ಯಾನ್ ಇಂಡಿಯಾ ಸಿನಿಮಾವಾಗಿ ಬಿಡುಗಡೆಯಾಗಲು ಸಜ್ಜಾಗಿದ್ದು ಒಂದು ವೇಳೆ ಚಿತ್ರತಂಡ ಹಿಂದಿ ಹಾಡಿನ ಟೀಸರ್ ಬಿಡಿಗಡೆ ಮಾಡಿರಬಹುದಾ ಎಂಬ ಗೊಂದಲವೂ ಎಲ್ಲರನ್ನೂ ಕಾಡುತ್ತಿದೆ. ಆದರೆ ಇಷ್ಟೆಲ್ಲಾ ಚರ್ಚೆ ಆಗುತ್ತಿದ್ದರು ಕೂಡ ಚಿತ್ರತಂಡ ಇಲ್ಲಿವರೆಗೂ ಯಾವುದೇ ಸ್ಪಷ್ಟತೆಯನ್ನು ನೀಡಿಲ್ಲ. ಈ ಗೊಂದಲವನ್ನು ಚಿತ್ರತಂಡ ಅಂದಹಾಗೆ ಪರಿಹರಿಸುತ್ತದೆ ಅನ್ನುವುದನ್ನ ಕಾದು ನೋಡಬೇಕಿದೆ. ಇದನ್ನೂ ಓದಿ: ಎರಡೂ ಡೋಸ್‌ ಲಸಿಕೆ ಪಡೆದ ಪ್ರಯಾಣಿಕರಿಗೆ ಕೋವಿಡ್‌ ಪರೀಕ್ಷೆ ಕಡ್ಡಾಯವಲ್ಲ: ಬ್ರಿಟನ್‌ ಪ್ರಧಾನಿ

    ಅಂದಹಾಗೆ ಚಿತ್ರದಲ್ಲಿ ಜಗ್ಗೇಶ್ ಜೋಡಿಯಾಗಿ ಅದಿತಿ ಪ್ರಭುದೇವ ನಟಿಸುತ್ತಿದ್ದು, ಡಾಲಿ ಧನಂಜಯ್, ಸುಮನ್ ರಂಗನಾಥ್, ದತ್ತಣ್ಣ, ವೀಣಾ ಸುಂದರ್, ಹೇಮಾ ದತ್ ಒಳಗೊಂಡ ಕಲಾವಿದರ ಬಳಗ ಚಿತ್ರದಲ್ಲಿದೆ. ಮೋನಿಫ್ಲಿಕ್ಸ್ ಸ್ಟುಡಿಯೋಸ್, ಸುರೇಶ್ ಆರ್ಟ್ಸ್ ಬ್ಯಾನರ್ ನಡಿ ಕೆ.ಎ ಸುರೇಶ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ನಿರ್ದೇಶನವಿದೆ. ಇದನ್ನೂ ಓದಿ: ಉತ್ತರಾಖಂಡ ಚುನಾವಣೆ: ರಾಮನಗರದಿಂದ ಮಾಜಿ ಸಿಎಂ ಹರೀಶ್ ರಾವತ್ ಕಣಕ್ಕೆ

  • ಏ ವತನ್ ಹಿಂದಿ ಗೀತೆ ಹಾಡಿದ ರಷ್ಯನ್ ಸೈನಿಕರು

    ಏ ವತನ್ ಹಿಂದಿ ಗೀತೆ ಹಾಡಿದ ರಷ್ಯನ್ ಸೈನಿಕರು

    ನವದೆಹಲಿ: ದೇಶಭಕ್ತಿಗೆ ಯಾವುದೇ ಗಡಿ, ಭಾಷೆಯ ಮಿತಿ ಇಲ್ಲ ಎನ್ನುವಂತೆ ರಷ್ಯನ್ ಕೆಡೆಟ್ಸ್ ‘ಆಯೆ ವತನ್’ ಹಿಂದಿ ಗೀತೆಯನ್ನು ಒಟ್ಟಿಗೆ ಹೇಳುವ ಮೂಲಕ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

    ಸಂತಸದಿಂದ ರಷ್ಯನ್ ಕೆಡೆಟ್‍ಗಳು ಈ ಗೀತೆಯನ್ನು ಹಾಡಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ದೇಶದ ಪ್ರಸಿದ್ಧ ದೇಶಭಕ್ತಿಗೀತೆಯನ್ನು ಹಾಡುವ ಮೂಲಕ ರಷ್ಯನ್ ಯುವ ಕೆಡೆಟ್‍ಗಳು ಮೆಚ್ಚುಗೆಗೆ ಪಾತ್ರವಾಗಿದ್ದು, ಅವರಿಗೆ ಭಾರತೀಯ ಸೇನೆಯ ಹಿರಿಯ ಅಧಿಕಾರಿ ಸಹ ಸಾಥ್ ನೀಡಿದ್ದಾರೆ.

    1965ರಲ್ಲಿ ಬಿಡುಗಡೆಯಾದ ಶಹೀದ್ ಚಿತ್ರದ ಗೀತೆ ಇದಾಗಿದೆ. ಅದೇ ಗೀತೆಯನ್ನು ರಷ್ಯನ್ ಕೆಡೆಟ್‍ಗಳು ಏ ವತನ್, ಏ ವತನ್, ಹಮ್ಕೊ ತೇರಿ ಕಸಮ್, ತೆರಿ ರಾಹೋನ್ ಮೇನ್ ಜಾನ್ ತಕ್ ಲುಟಾ ಜಾಯೆಂಗೆ’ ಎಂದು ಸುಂದರವಾಗಿ ಹಾಡಿದ್ದಾರೆ.

    ಈ ಗೀತೆಯನ್ನು ಗಾಯಕ ಮೊಹಮ್ಮದ್ ರಫಿ ಅವರು ಹಾಡಿದ್ದು, ಸಿನಿಮಾದಲ್ಲಿ ಭಗತ್ ಸಿಂಗ್‍ರನ್ನು ಗಲ್ಲಿಗೇರಿಸುವ ಮುನ್ನ ತನ್ನ ಸಹಚರ ಮಾಮ್ರೆಡ್‍ಗಳೊಂದಿಗೆ ಈ ಗೀತೆಯನ್ನು ಹಾಡುತ್ತಾರೆ. ಇದೀಗ ರಷ್ಯನ್ ಕೆಡೆಟ್‍ಗಳು ಈ ಹಾಡು ಹಾಡುವ ಮೂಲಕ ಟ್ವಿಟ್ಟರ್‍ನಲ್ಲಿ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

    ಲೆಫ್ಟಿನೆಂಟ್ ಕರ್ನಲ್ ಎನ್.ತ್ಯಾಗರಾಜನ್ ಅವರು ಈ ವಿಡಿಯೋ ಟ್ವೀಟ್ ಮಾಡಿದ್ದು, ಹಲವರು ಇದಕ್ಕೆ ಕಮೆಂಟ್ ಮಾಡಿದ್ದಾರೆ. ರಷ್ಯನ್ ಆರ್ಮಿ ಕೆಡೆಟ್‍ಗಳು ಆಯೆ ವತನ್ ಹಾಡು ಹಾಡುವ ಮೂಲಕ ಈ ನನ್ನ ದಿನವನ್ನು ಅದ್ಭುತವಾಗಿಸಿದ್ದಾರೆ ಎಂದು ಕಮೆಂಟ್ ಮಾಡಿದ್ದಾರೆ.

    ಈ ವಿಡಿಯೋವನ್ನು ರಷ್ಯಾ ರಾಜಧಾನಿ ಮಾಸ್ಕೋದ ಇಂಡಿಯನ್ ಎಂಬಸಿಯಲ್ಲಿ ಸೇನೆಯ ಸಲಹೆಗಾರರಾಗಿರುವ ಬ್ರಿಗೇಡಿಯರ್ ರಾಜೇಶ್ ಪುಷ್ಕರ್ ಅವರು ಹಂಚಿಕೊಂಡಿದ್ದು, ಇದಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಾಗಿನಿಂದ ರಷ್ಯಾ ನಮ್ಮ ಎದುರಾಳಿಯಾಗಿದೆ. ಈ ರೀತಿ ಬೆಂಬಲ ನೀಡುತ್ತಿರುವುದು ಸಂತಸ ತಂದಿದೆ ಎಂದು ಹಲವು ಕಮೆಂಟ್ ಮಾಡಿದ್ದಾರೆ.