Tag: Hikora

  • ಹಿಕೋರ ಚಿತ್ರೀಕರಣ ಪೂರ್ಣ

    ಹಿಕೋರ ಚಿತ್ರೀಕರಣ ಪೂರ್ಣ

    ಬೆಂಗಳೂರು: ಶ್ರೀನೀಲಕಂಠೇಶ್ವರ ಸಿನಿ ಕಂಬೈನ್ಸ್ ಲಾಂಛನದಲ್ಲಿ ತಯಾರಾಗಿರುವ ‘ಹಿಕೋರಾ` ಚಿತ್ರತಂಡ ಚಿತ್ರೀಕರಣ ಮುಗಿಸಿದ ಸಂತಸದಲ್ಲಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ತೊಡಗಿಕೊಂಡಿದೆ. ನೀನಾಸಂನಲ್ಲಿ ಸುಮಾರು 18 ವರ್ಷಗಳ ಕಾಲ ವಿದ್ಯಾರ್ಥಿಗಳಿಗೆ ಅನ್ನ ಉಣಬಡಿಸಿದ ರತ್ನಶ್ರೀಧರ್ ಈ ಚಿತ್ರದ ನಿರ್ಮಾಪಕರು. ಬಹುತೇಕ ನೀನಾಸಂನಲ್ಲಿ ತರಬೇತಿ ಪಡೆದು, ತಮ್ಮ ಕೈ ತುತ್ತು ತಿಂದು ಬೆಳೆದವರನ್ನೇ ಈ ಚಿತ್ರದಲ್ಲಿ ಕಲಾವಿದರನ್ನಾಗಿ ಬಳಸಿಕೊಂಡಿದ್ದಾರೆ ನಿರ್ಮಾಪಕರು. ಈ ಚಿತ್ರದ ನಿರ್ದೇಶಕ ಮತ್ತು ನಾಯಕ ಎಂ.ಜಿ.ಕೃಷ್ಣ, ಯಶವಂತ ಶೆಟ್ಟಿ, ಸ್ಪಂದನ ಪ್ರಸಾದ್, ಮಹಾಂತೇಶ್, ಸರ್ದಾರ್ ಸತ್ಯ ಮುಂತದಾವರೆಲ್ಲ ನೀನಾಸಂನವರೇ.


    ಚಿತ್ರದ ನಾಯಕರಾಗಿ ನಟಿಸಿರುವ ಕೃಷ್ಣಪೂರ್ಣ ಈ ಚಿತ್ರದ ನಿರ್ದೇಶಕರೂ ಹೌದು. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಕೃಷ್ಣಪೂರ್ಣ ಅವರೇ ಬರೆದಿದ್ದಾರೆ. ಪೂರ್ಣಚಂದ್ರತೇಜಸ್ವಿ ಸಂಗೀತ ನೀಡಿರುವ ಈ ಚಿತ್ರಕ್ಕೆ ಆಪ್ತಮಿತ್ರ, ಸಂಗೊಳ್ಳಿ ರಾಯಣ್ಣ ಖ್ಯಾತಿಯ ರಮೇಶ್‍ಬಾಬು ಅವರ ಛಾಯಾಗ್ರಹಣವಿದೆ. ಕಿರಣ್ ಸಂಕಲನ, ಮದನ್ – ಹರಿಣಿ ನೃತ್ಯ ನಿರ್ದೇಶನ ಹಾಗೂ ಡಾ.ನಾಗರಾಜ್ ಅವರ ಕಲಾ ನಿರ್ದೇಶನವಿರುವ ಈ ಚಿತ್ರದ ಸಹ ನಿರ್ಮಾಪಕರು ಕುಮಾರಿ ಆದ್ಯ. ಸುನೀಲ್ ಯಾದವ್ ಹಾಗೂ ವಿನಾಯಕರಾಮ ಕಲಗಾರು ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು. ಪ್ರೊಡಕ್ಷನ್ ಕಂಟ್ರೋಲರ್ ಆಗಿ ಅಭಿರಾಮ್ ಕಾರ್ಯ ನಿರ್ವಹಿಸಿದ್ದಾರೆ. ಅಂದುಕೊಂಡಿದ್ದಕ್ಕಿಂತಲೂ ಅದ್ಭುತವಾಗಿ ಚಿತ್ರ ಮೂಡಿಬಂದಿರುವುದಕ್ಕೆ ಚಿತ್ರತಂಡ ಸಂತಸದಲ್ಲಿದೆ.

    ಕೃಷ್ಣಪೂರ್ಣ, ಯಶ್ವಂತ್ ಶೆಟ್ಟಿ, ಸ್ಪಂದನಾ ಪ್ರಸಾದ್, ಪ್ರಕಾಶ್ ಬೆಳವಾಡಿ, ಸರ್ದಾರ್ ಸತ್ಯ, ಮಹಾಂತೇಶ್ ರಾಮದುರ್ಗ, ಆನಂದ್ ಮಾಸ್ಟರ್, ಲಾವಂತಿ, ಮುನಾಲಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಖ್ಯಾತ ನಟ ಪ್ರಕಾಶ್ ಬೆಳವಾಡಿ ಅತೀ ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದಾರೆ.

  • ಕೊಟ್ಟ ಮಾತಿಗೆ ತಪ್ಪಲ್ಲ-ನುಡಿದಂತೆ ನಡೆದ ಕರುನಾಡ ಚಕ್ರವರ್ತಿ

    ಕೊಟ್ಟ ಮಾತಿಗೆ ತಪ್ಪಲ್ಲ-ನುಡಿದಂತೆ ನಡೆದ ಕರುನಾಡ ಚಕ್ರವರ್ತಿ

    ಬೆಂಗಳೂರು: ಒಬ್ಬ ವ್ಯಕ್ತಿ ಎಷ್ಟೇ ದೊಡ್ಡ ವ್ಯಕ್ತಿಯಾಗಿದ್ರು, ಕೊಟ್ಟ ಮಾತಿಗೆ ಬದ್ಧನಾಗಿರಬೇಕು ಮತ್ತು ಉಪಕಾರದ ಋಣ ಅರಿತಿರಬೇಕು. ಅಭಿಮಾನಿಗಳ ಸಾರಥಿ ದರ್ಶನ್ ಮತ್ತೊಮ್ಮೆ ಮಾತಿಗೆ ತಪ್ಪದ ಮಗ ಹೇಳುವುದನ್ನು ಸಾಬೀತು ಮಾಡಿದ್ದಾರೆ. ದರ್ಶನ್ ನಿಜಕ್ಕೂ ಒಬ್ಬ ಒಳ್ಳೆಯ ವ್ಯಕ್ತಿಯಾಗಿ, ಕನ್ನಡ ಚಿತ್ರರಂಗದ ಶಕ್ತಿಯಾಗಿ ಬೆಳೆಯುತ್ತಿದ್ದಾರೆ. ನಡೆದು ಬಂದ ದಾರಿಯನ್ನ ಹೃದಯದಲ್ಲಿಟ್ಟುಕೊಂಡು ಸ್ನೇಹ ಪ್ರೀತಿ ವಿಶ್ವಾಸಕ್ಕೆ ತಲೆಬಾಗಿ ಬಾಳುತ್ತಿದ್ದಾರೆ.

    ದರ್ಶನ್ ಚಂದನವನಕ್ಕೆ ಪ್ರವೇಶ ನೀಡುವ ಮುನ್ನ ನೀನಾಸಂ ನಲ್ಲಿ ತರಬೇತಿ ಪಡೆಯುತ್ತಿದ್ದರು. ಈ ವೇಳೆ ಅಲ್ಲ ಅಡುಗೆ ಉಸ್ತುವಾರಿ ವಹಿಸಿಕೊಂಡಿದ್ದ ರತ್ನಾ ಶ್ರೀಧರ್ ಎಂಬವರು ಪ್ರೀತಿಯ ದರ್ಶನ್ ಗೆ ಕೈ ತುತ್ತು ನೀಡಿದ್ದರು. ಅಂದು ರತ್ನಾ ಅವರು ನೀಡಿದ್ದ ಕೈ ತುತ್ತನ್ನು ದರ್ಶನ್ ಇಂದಿಗೂ ಮರೆತಿಲ್ಲ. ರತ್ನ ಶ್ರೀಧರ್ ಇಂದು ಸಿನಿಮಾ ನಿರ್ಮಾಣದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

    ಅಂದು ಕೊಟ್ಟಿದ್ದರು ಮಾತು: ಅಷ್ಟಕ್ಕೂ ದರ್ಶನ್ ಈಗ `ಮುನಿರತ್ನ ಕುರುಕ್ಷೇತ್ರ’ ಚಿತ್ರಕ್ಕಾಗಿ ಹೈದರಾಬಾದ್‍ನ ರಾಮೋಜಿರಾಮ್ ಫಿಲ್ಮ್ ಸಿಟಿಯಲ್ಲಿ ಬ್ಯುಸಿಯಾಗಿದ್ದಾರೆ. ಆದ್ರೆ ರತ್ನಮ್ಮನವರ ಮೇಲಿನ ಅಭಿಮಾನ, ಪ್ರೀತಿಗಾಗಿ ನೀವು ಯಾವಾತ್ತಾದ್ದರು ಸಿನಿಮಾದ ಮುಹೂರ್ತ ಮಾಡಿ ನಾನು ಬಂದು ಸಾಥ್ ನೀಡುತ್ತೇನೆ. ನಾನೇ ಚಿತ್ರಕ್ಕೆ ಕ್ಲಾಪ್ ಕಟ್ ಮಾಡುತ್ತೇನೆ, ನಿಮ್ಮ ಜೊತೆ ನಾ ಇದ್ದೇನೆ ಎಂದು ಧೈರ್ಯ ತುಂಬಿದ್ದರು.

    ನೀನಾಸಂ ನಾಟಕ ಶಾಲೆಯಲ್ಲಿ ಅಭಿನಯ ಕಲೆತ ಕಲಾವಿದರೆಲ್ಲ ಸೇರಿ `ಹಿಕೋರಾ’ ಅನ್ನೊ ವಿಭಿನ್ನ ಟೈಟಲ್‍ನಲ್ಲಿ ಸಿನಿಮಾ ಮಾಡುತ್ತಿದ್ದಾರೆ. ಇದು ಸೈಕಾಲಿಜಿಕಲ್ ಥ್ರಿಲ್ಲರ್ ಸ್ಟೋರಿ. ರಂಗಕರ್ಮಿ ಕೃಷ್ಣ ಪೂರ್ವ ನೀನಾಸಂ ಕಲ್ಪನೆಯಲ್ಲಿ ಹಿಕೋರಾ ಮೂಡಿಬರಲಿದೆ. ಯಶ್ ಶೆಟ್ಟಿ, ಸ್ಪಂದನಾ ಪ್ರಸಾದ್ ಈ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದು, ಹಿರಿಯ ನಟಿ ಜೂಲಿ ಲಕ್ಷ್ಮೀ ಈ ಚಿತ್ರದ ಪ್ರಾಧಾನ ಪಾತ್ರವನ್ನ ಮಾಡುತ್ತಿದ್ದಾರೆ. ಹೊಸಬರ ವಿಭಿನ್ನ ಪ್ರಯತ್ನಕ್ಕೆ ದಾಸ ಕ್ಲಾಪ್ ಮಾಡುವ ಮೂಲಕ ಮುನ್ನುಡಿ ಬರೆದಿರುವುದು ಅಭಿಮಾನಿಗಳಿಗೆ ನಿಜಕ್ಕೂ ಸಂತೋಷವನ್ನು ತಂದಿದೆ.

    ಒಟ್ಟಿನಲ್ಲಿ ಮಾತಿಗೆ ತಕ್ಕ ಹಾಗೆ ದರ್ಶನ್ ನಡೆದುಕೊಂಡಿದ್ದಾರೆ. ಹೊಸ ಬರ ವಿನೂತನ ಪ್ರಯತ್ನಕ್ಕೆ ಬೆನ್ನತಟ್ಟುವುದರ ಜೊತೆಗೆ ಹಿಂದೆ ತನ್ನ ಕಷ್ಟದ ದಿನಗಳಲ್ಲಿ ತುತ್ತು ಅನ್ನ ನೀಡಿ ಆರೈಕೆ ಮಾಡಿದ್ದವರಿಗೆ ನೆರವಾಗಿದ್ದಾರೆ. ಇಂತಹ ವಿಶಿಷ್ಟ ವಿಷಯಗಳಿಗೆ ದರ್ಶನ್ ಕಳೆದ 15 ವಷದಿಂದ ಅಭಿಮಾನಿಗಳ ಹಾರ್ಟ್ ಫೆವರೇಟ್ ಆಗಿದ್ದಾರೆ.

    https://www.youtube.com/watch?v=ag4mpy2-Trw