Tag: helping

  • ಒಂದೊಳ್ಳೆ ಕಾರಣಕ್ಕೆ ಬೀದಿಗಿಳಿದಿದ್ದೇನೆ: ಸತೀಶ್ ನೀನಾಸಂ

    ಒಂದೊಳ್ಳೆ ಕಾರಣಕ್ಕೆ ಬೀದಿಗಿಳಿದಿದ್ದೇನೆ: ಸತೀಶ್ ನೀನಾಸಂ

    ಬೆಂಗಳೂರು: ಕೊರೊನಾ ಸೋಂಕಿನಿಂದ ಸಂಕಷ್ಟ ಎದುರಿಸುತ್ತಿರುವ ಜನರಿಗೆ ಸಾಕಷ್ಟು ಮಂದಿ ನೆರವಿಗೆ ಬಂದಿದ್ದಾರೆ. ಈಗ ಸ್ಯಾಂಡಲ್‍ವುಡ್ ನಟ ಸತೀಶ್ ನೀನಾಸಂ ಬೀದಿಗಿಳಿದು ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಿದ್ದಾರೆ.

    ಕೆಲಸ ಹಾಗೂ ಹೊಟ್ಟೆ ಊಟ ಇಲ್ಲದೆ ಕಷ್ಟಪಡುತ್ತಿರುವವರ ಸಹಾಯಕ್ಕೆ ಸಾಕಷ್ಟು ಮಂದಿ ಸೆಲೆಬ್ರಿಟಿಗಳು ಬಂದಿದ್ದಾರೆ. ರಾಗಿಣಿ, ಭುವನ್, ಹರ್ಷಿಕಾ, ದರ್ಶನ್, ಉಪೇಂದ್ರ, ಸುದೀಪ್ ಹೀಗೆ ಹಲವಾರು ಮಂದಿ ಸಿನಿ ಸ್ಟಾರ್‍ಗಳು ಕಷ್ಟದಲ್ಲಿರುವವ ನೆರವಿಗೆ ನಿಂತಿದ್ದಾರೆ. ಈಗ ಇದೆ ಸಾಲಿಗೆ ನಟ ಸತೀಶ್ ನೀನಾಸಂ ಅವರು ಸಹ ಒಂದೊಳ್ಳೆ ಕೆಲಸ ಮಾಡಲು ಬೀದಿಗೆ ಇಳಿದಿದ್ದಾರೆ.

    ದಿನಕ್ಕೆ ಸಾವಿರಾರು ಮಂದಿಗೆ ಆಹಾರ ವಿತರಣೆ ಮಾಡುವ ಮೂಲಕವಾಗಿ ನೆರವಾಗುತ್ತಿದ್ದಾರೆ. ಪ್ರತಿನಿತ್ಯ ಗಾಂಧಿ ಬಜಾರ್ ಸುತ್ತಮುತ್ತಲ ಪ್ರದೇಶದಲ್ಲಿರುವ ಸಾವಿರ ಜನರಿಗೆ ಆಹಾರ ವಿತರಿಸುತ್ತಿದ್ದಾರೆ. ತಳ್ಳುವ ಗಾಡಿಯ ವ್ಯಾಪಾರಿಗಳು, ಬಡವರು ಹಾಗೂ ನಿರ್ಗತಿಕರಿಗೆ ಊಟ ವಿತರಣೆ ಮಾಡಲಾಗುತ್ತಿದೆ. ಈ ಕಾರ್ಯದಲ್ಲಿ ಸತೀಶ್ ಅವರಿಗೆ ಸ್ನೇಹಿತರು ಕೈ ಜೋಡಿಸಿದ್ದಾರೆ.

  • ರೈತರಿಂದಲೇ ಟೊಮೇಟೋ ಖರೀದಿಸಿ ಅಗತ್ಯ ಇದ್ದವರಿಗೆ ಹಂಚಿದ ನಟ ಉಪೇಂದ್ರ

    ರೈತರಿಂದಲೇ ಟೊಮೇಟೋ ಖರೀದಿಸಿ ಅಗತ್ಯ ಇದ್ದವರಿಗೆ ಹಂಚಿದ ನಟ ಉಪೇಂದ್ರ

    ಬೆಂಗಳೂರು: ಕೊರೊನಾ ಬಿಕ್ಕಟ್ಟಿನ ಈ ಸಮಯದಲ್ಲಿ ಸಿನಿಕಾರ್ಮಿಕರಿಗೆ, ಬಡವರಿಗೆ ದಿನಸಿ ಕಿಟ್‍ಗಳನ್ನು ನೀಡುತ್ತಿರುವ ಸೂಪರ್ ಸ್ಟಾರ್ ಉಪೇಂದ್ರ ಅವರು ಈಗ ರೈತರಿಂದ ನೇರವಾಗಿ ತರಕಾರಿ ಖರೀದಿಸಿ ಅಗತ್ಯ ಇರುವವರಿಗೆ ಹಂಚುತ್ತಿದ್ದಾರೆ.

    ಈಗಾಗಲೇ ಸುಮಾರು 3 ಸಾವಿರ ಸಿನಿಕಾರ್ಮಿಕರ ಕುಟುಂಬಕ್ಕೆ ದಿನಸಿ ಕಿಟ್ ನೀಡಿದ್ದಾರೆ. ಇದೀಗ ಅವರು ರೈತರ ಸಂಕಷ್ಟಕ್ಕೂ ಮಿಡಿದಿದ್ದಾರೆ. ರೈತರು ಬೆಳೆದ ಬೆಳೆಯನ್ನು ನೇರವಾಗಿ ಅವರಿಂದಲೇ ಖರೀದಿಸುವುದಾಗಿ ಉಪ್ಪಿ ಹೇಳಿದ್ದರು. ಇದೀಗ ಅದು ಕೂಡ ನೆರವೇರಿದೆ.

    ಕೊರೊನಾ ಲಾಕ್‍ಡೌನ್‍ನಿಂದಾಗಿ ಬೆಳೆದ ಬೆಳೆಯನ್ನು ಮಾರಾಟ ಮಾಡಲು ಸಾಧ್ಯವಾಗದೇ ಎಷ್ಟೋ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ದಾನಿಗಳು ನೀಡಿರುವ ಹಣದಲ್ಲಿ ರೈತರಿಂದ ನೇರವಾಗಿ ತರಕಾರಿಗಳನ್ನು ಖರೀದಿ ಮಾಡಿ, ಅದನ್ನು ದಿನಸಿ ಕಿಟ್‍ಗಳ ಜೊತೆಗೆ ವಿತರಿಸುತ್ತೇವೆ ಎಂದು ಉಪೇಂದ್ರ ಹೇಳಿದ್ದರು.

    ಇದೀಗ ಹಳ್ಳಿಗಳಿಂದ ನೇರವಾಗಿ ರೈತರಿಂದಲೇ ಟೊಮೇಟೋ ಖರೀದಿಸಿದ್ದಾರೆ. ಟೊಮೇಟೋ ತುಂಬಿದ ಟ್ರಕ್‍ವೊಂದು ಈಗ ಉಪ್ಪಿ ಮನೆ ಮುಂದೆ ಬಂದು ನಿಂತಿದೆ. ಇದರ ಜೊತೆಗೆ ರೈತರಿಗೆ ಒಂದು ಮನವಿಯನ್ನು ಉಪೇಂದ್ರ ಮಾಡಿಕೊಂಡಿದ್ದಾರೆ. ರೈತರ ಗಮನಕ್ಕೆ ನಿಮ್ಮೆಲ್ಲರ ಅದ್ಭುತ ಪ್ರತಿಕ್ರಿಯೆಗೆ ಧನ್ಯವಾದಗಳು. ಬೆಳೆದ ಬೆಳೆ ವ್ಯಾಪಾರವಾಗದೇ ನಾಶವಾಗುವ ಬೆಳೆಯನ್ನು ನಾವು ಕೊಂಡು, ಅದನ್ನು ಸಂಕಷ್ಟದಲ್ಲಿರುವ ಜನರಿಗೆ ಉಚಿತವಾಗಿ ಹಂಚುತ್ತಿದ್ದೇವೆ. ಇದು ವ್ಯಾಪಾರ ಎಂದು ದಯವಿಟ್ಟು ತಿಳಿಯಬೇಡಿ. ಅಂತಹ ಸಂಕಷ್ಟದಲ್ಲಿರುವ ರೈತರು ಸಂಪರ್ಕಿಸಿ ಎಂದು ಹೇಳಿದ್ದಾರೆ.

    ರೈತರ ಬೆಳೆಯನ್ನು ಖರೀದಿ ಮಾಡಿ ಅಗತ್ಯ ಇರುವವರಿಗೆ ಹಂಚಿಕೆ ಮಾಡುತ್ತಿರುವ ಉಪೇಂದ್ರ ಅವರ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.