Tag: Healthcare

  • 5 ರಾಜ್ಯಗಳಲ್ಲಿ ಕೋವಿಡ್ ಹೆಚ್ಚಳ- ಭಾರತಕ್ಕೆ 4ನೇ ಅಲೆಯ ಮುನ್ಸೂಚನೆ

    ನವದೆಹಲಿ: ಈಗಾಗಲೇ ಚೀನಾ ದೇಶದ ಶಾಂಘೈನಗರದಲ್ಲಿ ಕೋವಿಡ್ ಹೆಚ್ಚಳವಾಗಿದ್ದು ಹಿರಿಯ ನಾಗರಿಕರ ಸರಣಿ ಸಾವುಗಳು ಸಂಭವಿಸುತ್ತಿದೆ. ಕೊರೊನಾ ನಿಯಂತ್ರಿಸಲು ಚೀನಾ ಸರ್ಕಾರವೂ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಿದೆ. ಇದೀಗ ಭಾರತದಲ್ಲೇ 5 ರಾಜ್ಯಗಳಲ್ಲಿ ಕೋವಿಡ್ ಪ್ರಕರಣಗಳು ಏರಿಕೆಯಾಗಿರುವುದು ನಾಲ್ಕನೇ ಅಲೆಯ ಮುನ್ಸೂಚನೆ ನೀಡಿದಂತಾಗಿದೆ. ‌

    CORONA CHINA

    ಚೀನಾ, ಅಮೆರಿಕ ಮತ್ತು ಯೂರೋಪ್‌ನ ಹಲವು ರಾಷ್ಟ್ರಗಳಲ್ಲಿ ಕೋವಿಡ್ ಪ್ರಕರಣಗಳಲ್ಲಿ ಏರಿಕೆಯಾಗಿದೆ. ಕೊರೊನಾ ವೈರಸ್‌ನ ರೂಪಾಂತರ ತಳಿಯಾದ ಓಮೈಕ್ರಾನ್‌ನ ಉಪ ತಳಿಯಾದ XE ತಳಿಯೂ ಸಹ ಭಾರತದಲ್ಲಿ 2 ಪ್ರಕರಣಗಳು ವರದಿಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಹಾಗಾಗಿ ಭಾರತದ ಕೇಂದ್ರ ಸರ್ಕಾರವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದೆ. ಇದನ್ನೂ ಓದಿ: XE ರೂಪಾಂತರಿ ಮಾರಣಾಂತಿಕವಲ್ಲ: ಮಹಾರಾಷ್ಟ್ರ ಸಚಿವ

    ದೇಶದ ಕೇರಳ, ಹರಿಯಾಣ, ಮಹಾರಾಷ್ಟ್ರ ದೆಹಲಿ ಹಾಗೂ ಮಿಜೋರಾಂಗಳಲ್ಲಿ ಕೋವಿಡ್ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗುತ್ತಿದ್ದು, ಕೋವಿಡ್ ಹರಡುವಿಕೆಯನ್ನು ನಿಯಂತ್ರಿಸಲು ತ್ವರಿತ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಸರ್ಕಾರವು ಆಯಾ ರಾಜ್ಯ ಸರ್ಕಾರಗಳಿಗೆ ಸೂಚಿಸಿ ಪತ್ರ ಬರೆದಿದೆ. ಕೋವಿಡ್ ಹೆಚ್ಚಳದ ಬಗ್ಗೆ ನಿಗಾ ವಹಿಸಿ ಹೆಚ್ಚು ಪ್ರಕರಣಗಳು ವರದಿಯಾಗುತ್ತಿರುವ ಪ್ರದೇಶಗಳಲ್ಲಿ ನಿಯಂತ್ರಣಾ ಕ್ರಮ ಕೈಗೊಳ್ಳಬೇಕು ಎಂದೂ ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಜೇಶ್ ಭೂಷಣ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ:  26 ಮಿಲಿಯನ್ ಜನರ ಕೋವಿಡ್ ಪರೀಕ್ಷೆಗೆ ಸಾವಿರಾರು ಮಿಲಿಟರಿ, ವೈದ್ಯರನ್ನು ಶಾಂಘೈಗೆ ಕಳುಹಿಸಿದ ಚೀನಾ

    covid

    ಭಾರತದಲ್ಲಿ ವರದಿಯಾದ ಒಟ್ಟು ಹೊಸ ಪ್ರಕರಣಗಳಲ್ಲಿ ಶೇ 31.8ರಷ್ಟು. ಕೋವಿಡ್ ಪಾಸಿಟಿವಿಟಿ ದರ ಅಲ್ಲಿ ಶೇ.13.45 ರಿಂದ 15.53ಕ್ಕೆ ಹೆಚ್ಚಾಗಿದೆ. ಅಲ್ಲದೆ ಕಳೆದ ವಾರ ಕೇರಳದಲ್ಲಿ 2321 ಹೊಸ ಪ್ರಕರಣಗಳು ವರದಿಯಾಗಿವೆ. ಏ.1ಕ್ಕೆ ಅಂತ್ಯಗೊAಡ ಒಂದು ವಾರ ದೆಹಲಿಯಲ್ಲಿ 724ಪ್ರಕರಣಗಳು ವರದಿಯಾಗಿದ್ದವು. ಆದರೆ ಏಪ್ರಿಲ್ 8ರ ಹೊತ್ತಿಗೆ 826 ಹೊಸ ಪ್ರಕರಣಗಳು ವರದಿಯಾಗಿವೆ. ಪಾಸಿಟಿವಿಟಿ ದರದಲ್ಲಿ ಶೇ 0.51 ರಿಂದ 1.25ರಷ್ಟು ಹೆಚ್ಚಾಗಿದೆ ಎಂದು ಪತ್ರದಲ್ಲಿ ಹೇಳಲಾಗಿದೆ.

    ಭಾನುವಾರವೂ ಸಹ ಭಾರತದಾದ್ಯಂತ 1,054 ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, 29 ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

  • ಸೌಂದರ್ಯಕ್ಕಾಗಿ ಮಾತ್ರವಲ್ಲ ಆರೋಗ್ಯವರ್ಧನೆಗಾಗಿ ಅರಿಶಿನ ಉಪಯುಕ್ತ

    ಸೌಂದರ್ಯಕ್ಕಾಗಿ ಮಾತ್ರವಲ್ಲ ಆರೋಗ್ಯವರ್ಧನೆಗಾಗಿ ಅರಿಶಿನ ಉಪಯುಕ್ತ

    ಇಂದಿನ ಫ್ಯಾಷನ್ ಯುಗದಲ್ಲಿ ಮಹಿಳೆಯರು ಹೆಚ್ಚಾಗಿ ಸೌಂದರ್ಯದ ಕಾಳಜಿಗಾಗಿ ತಲೆಕೆಡಿಸಿಕೊಳ್ಳುತ್ತಾರೆ. ಇಂದು ತರಾವರಿ ಸೌಂದರ್ಯ ವರ್ಧಕಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದರೂ ಅವುಗಳು ನೈಸರ್ಗಿಕ ಸೌಂದರ್ಯವರ್ಧಕದ ರಾಣಿಯೆಂದೇ ಕರೆಯುವ ‘ಅರಿಶಿನ’ದ ಜೊತೆ ಸ್ಪರ್ಧಿಸಲು ಸಾಧ್ಯವಾಗಿಲ್ಲ. ಚಲನಚಿತ್ರ ನಟಿಯರೂ ಸೇರಿದಂತೆ ಫ್ಯಾಷನ್ ಪ್ರಿಯ ಮಹಿಳೆಯರು ತಮ್ಮ ತ್ವಚೆಯನ್ನು ಕಾಪಾಡಿಕೊಳ್ಳಲು ಮತ್ತು ದೈಹಿಕ ಅರೋಗ್ಯವನ್ನು ಹೆಚ್ಚಿಸಿಕೊಳ್ಳಲು ಅರಿಶಿನ ಉತ್ಪನ್ನವನ್ನು ಬಳಕೆ ಮಾಡುತ್ತಾರೆ.

    ಅರಿಶಿನ ಕೇವಲ ತ್ವಚೆಯನ್ನು ಪೋಷಿಸುವುದಲ್ಲದೇ ಕಣ್ಣುಗಳ ಆರೋಗ್ಯದಲ್ಲಿಯೂ ಮಹತ್ವದ ಪಾತ್ರ ವಹಿಸುತ್ತದೆ. ಕಣ್ಣಿನಲ್ಲಿ ಧೂಳು ಸೇರಿಕೊಂಡು ಕಣ್ಣು ಉರಿ ಮತ್ತು ಕಣ್ಣು ಕೆಂಪಗಾಗಿದ್ದರೆ, ಒಂದು ಲೋಟ ನೀರಿಗೆ ಚಿಟಿಕೆ ಅರಿಶಿನ ಬೆರೆಸಿ 10 ನಿಮಿಷ ಪಕ್ಕಕ್ಕಿಡಿ. ಅರಿಶಿನ ಲೋಟದ ತಳಭಾಗದಲ್ಲಿ ಉಳಿದುಕೊಂಡು ನೀರು ತಿಳಿಯಾಗುತ್ತದೆ. ಈ ತಿಳಿನೀರನ್ನು ಕಣ್ಣಿಗೆ 2 ಹನಿ ಹಾಕುವುದರಿಂದ ಅಥವಾ ಈ ನೀರಿನಿಂದ ಕಣ್ಣುಗಳನ್ನೂ ತೊಳೆದುಕೊಳ್ಳುವುದರಿಂದ ಕಣ್ಣು ಉರಿ ಮತ್ತು ಕೆಂಪಗಾಗುವುದು ಕಡಿಮೆಯಾಗುತ್ತದೆ.

    ಅರಿಶಿನದಲ್ಲಿರುವ ಆರೋಗ್ಯವರ್ಧಕ ಅಂಶಗಳೇನು?
    1. ಅರಿಶಿನವು ಉರಿಯೂತ ಮತ್ತು ಬ್ಯಾಕ್ಟೀರಿಯಾ ನಿರೋಧಕ ಲಕ್ಷಣವನ್ನು ಹೊಂದಿದೆ.
    2. ಅರಿಶಿನವು ಆಂಟಿಸೆಪ್ಟಿಕ್ ಆಗಿರುವುದರಿಂದ ಗಾಯಗಳನ್ನು ಅತೀ ಬೇಗ ವಾಸಿಮಾಡುತ್ತದೆ.
    3. ಅರಶಿನ ಎಲ್ಲಾ ಕಾಲದಲ್ಲಿಯೂ ಎಲ್ಲಾ ತರಹದ ಚರ್ಮಕ್ಕೂ ಹೊಂದಿಕೆಯಾಗಿ ತ್ವಚೆಯನ್ನು ರಕ್ಷಿಸುವ ಅಂಶವನ್ನು ಹೊಂದಿದೆ.
    4. ಮುಖದಲ್ಲಿನ ಮೊಡವೆ ಮತ್ತು ಇತರೆ ಚರ್ಮ ಸಮಸ್ಯೆಗಳಿಗೂ ರಾಮಬಾಣ.


    5. ಮಹಿಳೆಯರಿಗೆ ಫೇಸ್‍ಪ್ಯಾಕ್ ಮತ್ತು ಬಾಡಿ ಸ್ಕ್ರಬರ್ ಗಳಲ್ಲಿ ಮುಖ್ಯ ಪದಾರ್ಥವಾಗಿದೆ.
    6. ಅರಿಶಿನದೊಂದಿಗೆ ಹಾಲಿನ ಕೆನೆ ಬೆರೆಸಿ ಮುಖಕ್ಕೆ ಹಚ್ಚುವುದರಿಂದ ಮುಖದ ಮೇಲಿನ ಗುಳ್ಳೆ ನಿವಾರಣೆಯಾಗಿ ಮುಖಕ್ಕೆ ಹೊಳಪು ತಂದುಕೊಂಡುತ್ತದೆ.
    7. ಹಾಲಿನೊಂದಿಗೆ ಅರಿಶಿನ ಪುಡಿ ಬೆರೆಸಿ ಕುಡಿಯುವುದರಿಂದ ಕೆಮ್ಮು, ಕಫ ನಿವಾರಣೆಯಾಗುತ್ತದೆ.
    8. ಅರಿಶಿನ ಪುಡಿಯೊಂದಿಗೆ, ಬೇವಿನ ಎಲೆಯನ್ನು ಅರೆದು ಚರ್ಮಕ್ಕೆ ಹಚ್ಚುವುದರಿಂದ ಫಂಗಸ್ ಸೊಂಕು ನಿವಾರಣೆಯಾಗುತ್ತದೆ.
    9. ಅರಿಶಿನ ಪುಡಿ ಹಾಗೂ ನೆಲ್ಲಿ ಕಾಯಿ ಪುಡಿಯನ್ನು ಸಮ ಪ್ರಮಾಣದಲ್ಲಿ ಬೆರೆಸಿ ಸೇವಿಸುವುದರಿಂದ ಮಧುಮೇಹ ಹತೋಟಿಗೆ ಬರುತ್ತದೆ.
    10. ಅರಿಶಿನ ಕಷಾಯವನ್ನು ಗಾಯಗಳನ್ನು ತೊಳೆಯಲು, ಬಿದ್ದಗಾಯದ ರಕ್ತ ತಡೆಗಟ್ಟಲು ಬಳಸಬಹುದು.
    11. ಋತುಸ್ರಾವದ ಸಂದರ್ಭದಲ್ಲಿ ಮಹಿಳೆಯರು ಅರಿಶಿನ ಬೆರೆಸಿದ ಬೆಚ್ಚಗಿನ ನೀರನ್ನು ಕುಡಿಯುವುದರಿಂದ ಕಿಬ್ಬೊಟ್ಟೆ ನೋವನ್ನು ಶಮನಗೊಳಿಸುತ್ತದೆ.

    ಹೀಗೆ ಹಲವಾರು ವೈದ್ಯಕೀಯ ಗುಣಗಳನ್ನು ಒಳಗೊಂಡಿರುವ ಅರಿಶಿನ ದಿನನಿತ್ಯ ಬಳಕೆಯ ಪ್ರಮುಖ ಪದಾರ್ಥ. ದೇವರ ಪೂಜೆಯಿಂದ ಹಿಡಿದು ಶುಭ ಕಾರ್ಯಗಳು, ಅಡುಗೆ ಮತ್ತು ಸೌಂದರ್ಯದವರೆಗೂ ಅರಿಶಿನ ಬಳಕೆ ಮಾಡದೇ ಇರುವವರೂ ಯಾರು ಇಲ್ಲ. ಬಹಳ ಹಿಂದಿನ ಕಾಲದಿಂದಲೂ ಅರಿಶಿನಕ್ಕೆ ಪ್ರಾಮುಖ್ಯತೆ ಹೆಚ್ಚಿದ್ದು, ‘ಆರೋಗ್ಯಕ್ಕೆ ಅರಿಶಿನ ಮದ್ದು’ ಎಂಬ ಶಿಫಾರಸ್ಸುಗಳು ಇಂದಿನ ಕಾಲದವರೆಗೂ ಉಪಯೋಗದಲ್ಲಿದೆ. ಎಲ್ಲಾದರೂ ಬಿದ್ದು ಗಾಯ ಮಾಡಿಕೊಂಡು ಬಂದ ಮಗುವಿಗೆ ಅಮ್ಮ ಮೊದಲು ಅರಿಶಿನ ಹಚ್ಚು ಎನ್ನುತ್ತಾಳೆ. ಅಂತಹ ಪುಟ್ಟ ಗಾಯಗಳಿಂದ ದೊಡ್ಡ ಕ್ಯಾನ್ಸರ್ ಕಾಯಿಲೆಗಳನ್ನು ನಿವಾರಿಸುವಲ್ಲಿ ಅರಿಶಿನ ಪರಿಣಾಮಕಾರಿ ಮದ್ದು. ದಿನನಿತ್ಯದ ಆಹಾರದಲ್ಲಿಯೂ ಅರಿಶಿನ ಬಳಸುತ್ತಾ ಬಂದರೆ ನಮ್ಮ ಜ್ಞಾಪಕ ಶಕ್ತಿಕೂಡ ಹೆಚ್ಚಾಗುತ್ತದೆ.

    ಆಯುರ್ವೇದದಲ್ಲಿ ಅರಿಶಿನವು ರಕ್ತ ಶುದ್ಧೀಕರಣದಲ್ಲಿ ಮುಖ್ಯವಾದುದು ಎಂದು ಹೇಳಲಾಗುತ್ತದೆ. ಅರಿಶಿನ ಬಳಕೆಯು ರಕ್ತವನ್ನು ಶುದ್ಧೀಕರಿಸುತ್ತದೆ. ಇದನ್ನು ತಿನ್ನುವ ಮೂಲಕ, ರಕ್ತದಲ್ಲಿ ಕಂಡುಬರುವ ವಿಷಕಾರಿ ವಸ್ತುಗಳು ಹೊರಬರುತ್ತವೆ ಮತ್ತು ರಕ್ತ ಪರಿಚಲನೆ ಸುಗಮವಾಗುತ್ತದೆ. ಹೃದಯದಲ್ಲಿ ರಕ್ತದ ಹರಿವು ಹೆಚ್ಚಾಗುವುದರಿಂದ ವ್ಯಕ್ತಿಗೆ ಹೃದಯದ ತೊಂದರೆಗಳು ಕಂಡು ಬರುವುದಿಲ್ಲ.