Tag: health

  • ಬಹುಭಾಷಾ ನಟಿ ಖುಷ್ಬೂ ಆಸ್ಪತ್ರೆಗೆ ದಾಖಲು

    ಬಹುಭಾಷಾ ನಟಿ ಖುಷ್ಬೂ ಆಸ್ಪತ್ರೆಗೆ ದಾಖಲು

    ಚೆನ್ನೈ: ದಕ್ಷಿಣ ಭಾರತದ ಖ್ಯಾತ ನಟಿ, ಕಾಂಗ್ರೆಸ್ ವಕ್ತಾರೆ ಖುಷ್ಬೂ ಆರೋಗ್ಯದಲ್ಲಿ ಏರುಪೇರು ಆಗಿದ್ದು ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ನಟಿ ಖುಷ್ಬೂ ಅವರ ಹೊಟ್ಟೆಯಲ್ಲಿ ಗಂಟು ಕಾಣಿಸಿಕೊಂಡಿದ್ದರಿಂದ ಶಸ್ತ್ರಚಿಕಿತ್ಸೆಗೆಂದು ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು. ಖುಷ್ಬೂ ಆರೋಗ್ಯದಲ್ಲಿ ಈಗ ಚೇತರಿಕೆ ಕಂಡುಬಂದಿದ್ದು, ಶೀಘ್ರದಲ್ಲೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ.

    ಶಸ್ತ್ರಚಿಕಿತ್ಸೆ ಬಗ್ಗೆ ಖುಷ್ಬೂ ತಮ್ಮ ಟ್ವಿಟ್ಟರ್ ನಲ್ಲಿ “ಸ್ನೇಹಿತರೇ, ಈಗ ನಾನು ನಿಮಗೆ ಸಾಕಷ್ಟು ವಿಷಯ ಹೇಳುವುದಿದೆ. ನಾನು ಆಸ್ಪತ್ರೆಯಲ್ಲಿ ದಾಖಲಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೇನೆ. ವೈದ್ಯರು ನನಗೆ ಎರಡೂ ವಾರಗಳ ಕಾಲ ವಿಶ್ರಾಂತಿ ಪಡೆಯಲು ತಿಳಿಸಿದ್ದಾರೆ. ನಿಮ್ಮ ಈ ಕಾಳಜಿಗಾಗಿ ಧನ್ಯವಾದಗಳು” ಎಂದು ಟ್ವೀಟ್ ಮಾಡಿದ್ದಾರೆ.

    ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡ ನಟಿ ಖುಷ್ಬೂಗೆ ಕೆಲವು ವಾರಗಳ ಕಾಲ ವಿಶ್ರಾಂತಿಗೆ ವೈದ್ಯರು ಸೂಚಿಸಿದ್ದಾರೆ.

  • ಆಪರೇಷನ್‍ಗಾಗಿ ಚಿನ್ನಾಭರಣ ಕದ್ದ ವೃದ್ಧ ಅರೆಸ್ಟ್- ಆತ್ಮಹತ್ಯೆ ಮಾಡ್ಕೊಳ್ಳೋಕೆ ರಿವಾಲ್ವರ್ ಕೂಡ ಕದ್ದಿದ್ರು!

    ಆಪರೇಷನ್‍ಗಾಗಿ ಚಿನ್ನಾಭರಣ ಕದ್ದ ವೃದ್ಧ ಅರೆಸ್ಟ್- ಆತ್ಮಹತ್ಯೆ ಮಾಡ್ಕೊಳ್ಳೋಕೆ ರಿವಾಲ್ವರ್ ಕೂಡ ಕದ್ದಿದ್ರು!

    ಬೆಂಗಳೂರು: ವಯೋವೃದ್ಧರೊಬ್ಬರು ಹೊಟ್ಟೆ ಹೊರೆಯೋದಕ್ಕೆ ಮನೆ ಮನೆಯಲ್ಲಿ ಕೆಲಸ ಮಾಡಿಕೊಂಡು ಜೀವನ ಮಾಡ್ತಿದ್ರು. ಆದ್ರೆ ಅವರಿಗೆ ಇನ್ನಿಲ್ಲದ ಕಾಯಿಲೆಗಳು ಬಂದು ಬಡಪಾಯಿಗೆ ಲಕ್ಷಾಂತರ ರೂಪಾಯಿ ಕೊಟ್ಟು ಆರೋಗ್ಯ ಸರಿ ಮಾಡಿಕೊಳ್ಳುವುದು ಕಷ್ಟವಾಗಿತ್ತು. ಅದಕ್ಕೆ ಕಳ್ಳತನ ಮಾಡಿ ಇದೀಗ ಸಿಕ್ಕಿಬಿದ್ದಿದ್ದಾರೆ.

    ಯಲಹಂಕ ನ್ಯೂಟೌನ್‍ನಲ್ಲಿರುವ ಉದ್ಯಮಿ ಸತೀಶ್ ಮನೆಯಲ್ಲಿ ಸೋಮವಾರದಂದು ರಿವಾಲ್ವರ್ ಮತ್ತು ಚಿನ್ನಾಭರಣ ಕಳುವಾಗಿದ್ವು. ನಕಲಿ ಕೀ ಬಳಸಿ ಮನೆಯ ಒಳಗೆ ಎಂಟ್ರಿ ಕೊಟ್ಟಿದ್ದ ಕಳ್ಳ ಎಲ್ಲವನ್ನು ಎತ್ತಿಕೊಂಡು ಹೋಗಿದ್ದ. ಆದ್ರೆ ಕಳ್ಳ ಯಾರು? ಯಾಕಾಗಿ ಕಳ್ಳತನ ಮಾಡಿದ್ದಾನೆ ಅನ್ನೋದು ಮಾತ್ರ ನಿಗೂಢವಾಗಿಯೇ ಉಳಿದಿತ್ತು.

    ಮಂಗಳವಾರದಂದು ಪೊಲೀಸರು ಕಳ್ಳನನ್ನು ಬಂಧಿಸಿದಾಗ ಆಶ್ಚರ್ಯ ಕಾದಿತ್ತು. ಯಾಕಂದ್ರೆ ಪೊಲೀಸರು ಅರೆಸ್ಟ್ ಮಾಡಿದ್ದು ಸತೀಶ್ ಮನೆಯಲ್ಲಿಯೇ ಕೆಲಸ ಮಾಡ್ತಿದ್ದ 63ರ ವಯೋವೃದ್ಧ ಪ್ರಸನ್ನ ಅಯ್ಯಂಗಾರ್ ಅವರನ್ನ.

    ವಯಸ್ಸಾದ ಪ್ರಸನ್ನ ಅಯ್ಯಂಗಾರ್ ಅವರನ್ನ ವಿಚಾರಣೆ ಮಾಡಿದಾಗ ಬೆಚ್ಚಿಬೀಳುವ ಸುದ್ದಿ ಹೊರಬಿದ್ದಿದೆ. ಪ್ರಸನ್ನ ಅವರಿಗೆ ಹೊಟ್ಟೆಯಲ್ಲಿ ಗೆಡ್ಡೆ ಬೆಳೆದಿತ್ತು. ಆದ್ರೆ ಆಪರೇಷನ್ ಮಾಡಿಸಿಕೊಳ್ಳಲು ಹಣ ಇರಲಿಲ್ಲ. ಹೀಗಾಗಿ ಆಪರೇಷನ್ ಮಾಡಿಸ್ಕೊಳ್ಳೋ ಸಲುವಾಗಿ ಚಿನ್ನಾಭರಣ ಕದ್ದಿದ್ದರು. ಒಂದು ವೇಳೆ ಆಪರೇಷನ್ ಫೇಲ್ ಆದ್ರೆ ಶೂಟ್ ಮಾಡಿಕೊಳ್ಳೋಕೆ ರಿವಾಲ್ವರ್ ಕದ್ದಿದ್ದರು.

    ಇಳಿವಯಸ್ಸಿನಲ್ಲಿ ಬದುಕುವ ಆಸೆ ಇಟ್ಟುಕೊಂಡು ಕಳ್ಳತನ ಮಾಡಿದ್ದ ವಯೋವೃದ್ಧ ಪ್ರಸನ್ನ ಈಗ ಜೈಲು ಪಾಲಾಗಿದ್ದಾರೆ. ಅತ್ತ ಆಪರೇಷನ್ ಇಲ್ಲ ಇತ್ತ ಬದುಕುವ ಆಸೆಯೂ ಇಲ್ಲದಂತಾಗಿದೆ ಪ್ರಸನ್ನ ಅವರ ಬದುಕು.

  • ಪ್ರತಿ ಜಿಲ್ಲೆಯಲ್ಲಿ ಒಂದು ಆಯುರ್ವೇದ ಆಸ್ಪತ್ರೆ  ಸ್ಥಾಪನೆ: ಮೋದಿ

    ಪ್ರತಿ ಜಿಲ್ಲೆಯಲ್ಲಿ ಒಂದು ಆಯುರ್ವೇದ ಆಸ್ಪತ್ರೆ ಸ್ಥಾಪನೆ: ಮೋದಿ

    ನವದೆಹಲಿ: ದೇಶದ ಪ್ರತಿ ಜಿಲ್ಲೆಯಲ್ಲಿ ಒಂದೊಂದು ಆಯುರ್ವೇದ ಆಸ್ಪತ್ರೆಯನ್ನು ಸ್ಥಾಪಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

    ದೇಶದ ಮೊದಲ ಅಖಿಲ ಭಾರತ ಆಯುರ್ವೇದ ಸಂಸ್ಥೆಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಆಯುರ್ವೇದವು ಪುರಾತನ ಭಾರತೀಯ ಸಂಸ್ಕತಿಯ ಕೊಡುಗೆಯಾಗಿದ್ದು, ಮತ್ತೆ ಪ್ರಕೃತಿ ಚಿಕಿತ್ಸೆಯ ಕಡೆಗೆ ಸಾಗಬೇಕಿದೆ. ಈ ನಿಟ್ಟಿನಲ್ಲಿ ಪ್ರತಿ ಜಿಲ್ಲೆಯಲ್ಲಿ ಒಂದೊಂದು ಆಯುರ್ವೇದ ಆಸ್ಪತ್ರೆ ಸ್ಥಾಪಿಸಲು ಸರ್ಕಾರ ಮುಂದಾಗಿದೆ ಎಂದು ತಿಳಿಸಿದರು.

    ಖಾಸಗಿ ಸಂಸ್ಥೆಗಳು ಸಹ ಈ ಯೋಜನೆಯಲ್ಲಿ ಭಾಗವಹಿಸುವ ಅಗತ್ಯವಿದ್ದು, ಆಯುರ್ವೇದ ಮಹತ್ವವನ್ನು ಸಾರುವ ದೃಷ್ಟಿಯಿಂದ ತಮ್ಮ ಬದ್ಧತೆಯನ್ನು ತೋರ್ಪಡಿಸುವ ಅಗತ್ಯವಿದೆ ಎಂದರು.

    ದೇಶದಲ್ಲಿ ಕಳೆದ 30 ವರ್ಷಗಳಿಂದ ಐಟಿ ಕ್ರಾಂತಿಯನ್ನು ಕಂಡಿದ್ದೇವೆ. ಪ್ರಸ್ತುತ ಆಯುರ್ವೇದ ಅಡಿಯಲ್ಲಿ ಆರೋಗ್ಯ ಜಾಗೃತಿ ಕುರಿತ ಕ್ರಾಂತಿ ನಡೆಯಬೇಕಿದೆ. ಈ ಹಿನ್ನೆಲೆಯಲ್ಲಿ ನಮ್ಮ ಸರ್ಕಾರ ದೇಶಾದ್ಯಂತ ಪ್ರತಿ ಜಿಲ್ಲೆಗೂ ಒಂದು ಆಯುರ್ವೇದ ಕೇಂದ್ರವನ್ನು ಸ್ಥಾಪಿಸಲು ಸಿದ್ಧವಿದೆ. ಈ ಕುರಿತು ಆಯುಷ್ ಸಚಿವಾಲಯವು ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.

    ಪ್ರಪಂಚದಾದ್ಯಂತ ಎಲ್ಲರಿಗೂ ಆರೋಗ್ಯದ ಕುರಿತ ಜಾಗೃತಿ ಹೆಚ್ಚಳವಾಗುತ್ತಿದ್ದು, ಆಯುರ್ವೇದ ಚಿಕಿತ್ಸೆಯನ್ನು ಅಭಿವೃದ್ಧಿ ಪಡಿಸಲು ಉತ್ತಮ ಸಮಯವಿದು. ಮುಂದೆ ಆಯುರ್ವೇದ ವಿದ್ಯಾರ್ಥಿಗಳಿಗೆ ಈ ಕುರಿತು ಉತ್ತಮ ಪಠ್ಯವನ್ನು ಸಿದ್ಧಪಡಿಸಲಾಗುವುದು. ಅಲ್ಲದೇ ವಿಶ್ವ ವಿದ್ಯಾಲಯಗಳಲ್ಲಿ ಹೆಚ್ಚಿನ ಸೀಟುಗಳು ಲಭ್ಯವಾಗುವಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದರು.

    ಆಯುಷ್ ಮತ್ತು ಕೃಷಿ ಇಲಾಖೆಯ ರೈತರಿಗೆ ಔಷಧಿಯ ಸಸಿಗಳ ಬಗ್ಗೆ ಮಾಹಿತಿ ನೀಡಿ ಬೆಳೆಯುವಂತೆ ಪ್ರೋತ್ಸಾಹಿಸಬೇಕು. ಆರ್ಯುವೇದ ಸಸಿಗಳನ್ನು ಬೆಳೆಯುವುದರ ಮೂಲಕ ರೈತರ ಆದಾಯವು ಹೆಚ್ಚಾಗುತ್ತದೆ. 2022ರ ವೇಳೆ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷವಾಗುವ ಸಮಯದಲ್ಲಿ ರೈತರ ಆದಾಯ ದ್ವಿಗುಣವಾಗಲು ನಾನಾ ಯೋಜನೆಗಳನ್ನು ಹಾಕಿಕೊಳ್ಳುತ್ತಿದ್ದು, ಇದರಲ್ಲಿ ಇದು ಒಂದು ಎಂದು ಮೋದಿ ಹೇಳಿದರು.

  • ವಾಸ್ತು ಸರಿ ಇಲ್ಲದ್ದಕ್ಕೆ ಸಚಿವ ರಮೇಶ್ ಕುಮಾರ್ ವಿಕಾಸ ಸೌಧಕ್ಕೆ ಶಿಫ್ಟ್!

    ವಾಸ್ತು ಸರಿ ಇಲ್ಲದ್ದಕ್ಕೆ ಸಚಿವ ರಮೇಶ್ ಕುಮಾರ್ ವಿಕಾಸ ಸೌಧಕ್ಕೆ ಶಿಫ್ಟ್!

    ಬೆಂಗಳೂರು: ಕೋಲಾರದಲ್ಲಿ ನವಜಾತ ಶಿಶುಗಳ ಮರಣ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾದ ಬಳಿಕ ಗುರುವಾರವೇ ವಿಧಾನ ಸೌಧದಿಂದ ವಿಕಾಸ ಸೌಧಕ್ಕೆ ಆರೋಗ್ಯ ಸಚಿವ ರಮೇಶ್‍ಕುಮಾರ್ ಶಿಫ್ಟ್ ಆಗಿದ್ದಾರೆ.

    ಹೌದು. ವಿಧಾನಸೌಧದ ಮೂರನೇ ಮಹಡಿಯ 343ರ ಕೊಠಡಿ ಸಂಖ್ಯೆಯಲ್ಲಿ ಸಚಿವ ರಮೇಶ್‍ಕುಮಾರ್ ಅವರ ಕಚೇರಿ ಇತ್ತು. ಆದರೆ ಈಗ ವಿಕಾಸಸೌಧದ ಮೊದಲನೇ ಮಹಡಿಯ 143 ರ ಕೊಠಡಿಗೆ ಶಿಫ್ಟ್ ಆಗಿದ್ದಾರೆ.

    ವಾಸ್ತು ಸರಿ ಇಲ್ಲ ಎಂದು ಹೇಳಿ ವಿಧಾನಸೌಧವನ್ನೇ ತೊರೆದ ಸಚಿವ ರಮೇಶ್ ಕುಮಾರ್ ಅವರ ನಡೆಯ ಬಗ್ಗೆ ವಿಧಾನ ಸೌಧದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ.

     

    https://youtu.be/sZPG6H46X98

    https://youtu.be/54XS1Azy9pM

  • ಬೆಡ್ ಖಾಲಿ ಇದ್ರೂ ನೆಲದಲ್ಲಿ ಚಿಕಿತ್ಸೆ: ಸ್ಮಾರ್ಟ್‍ಸಿಟಿ ದಾವಣಗೆರೆ ಜಿಲ್ಲಾಸ್ಪತ್ರೆಗೆ ಬಂದಿದೆ ರೋಗ!

    ಬೆಡ್ ಖಾಲಿ ಇದ್ರೂ ನೆಲದಲ್ಲಿ ಚಿಕಿತ್ಸೆ: ಸ್ಮಾರ್ಟ್‍ಸಿಟಿ ದಾವಣಗೆರೆ ಜಿಲ್ಲಾಸ್ಪತ್ರೆಗೆ ಬಂದಿದೆ ರೋಗ!

    ದಾವಣಗೆರೆ: ಸ್ಮಾರ್ಟ್ ಸಿಟಿಗೆ ನಗರ ಆಯ್ಕೆಯಾದಾಗ ದಾವಣೆಗೆರೆಯ ಜನ ಹೆಮ್ಮೆಪಟ್ಟುಕೊಂಡಿದ್ದರು. ಆದರೆ ಈಗ ನಗರದಲ್ಲಿರುವ ಜಿಲ್ಲಾಸ್ಪತ್ರೆಗೆ ರೋಗ ಬಂದಿದ್ದು, ದೂರದ ಊರಿನಿಂದ ಬರುವ ರೋಗಿಳನ್ನ ನೆಲದ ಮೇಲೆ ಮಲಗಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಜಿಲ್ಲಾಸ್ಪತ್ರೆಯ ಕೆಲ ವಾರ್ಡ್‍ಗಳಲ್ಲಿ ಬೆಡ್ ಗಳು ಖಾಲಿ ಇದ್ದರೂ ಕೂಡ ಮಹಿಳೆಯರನ್ನ ನೆಲದ ಮೇಲೆ ಮಲಗಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇನ್ನೂ ಕೆಲವು ವಾರ್ಡ್ ಗಳಲ್ಲಿ ಮಂಚದ ಕಾಲುಗಳಿಗೆ ಇಟ್ಟಿಗೆಗಳನ್ನು ಇಡಲಾಗಿದೆ.

    ಮಕ್ಕಳು, ಮಹಿಳೆಯರು, ವಿಕಲಚೇತನರು, ವೃದ್ಧರು ಹೀಗೆ ಆಸ್ಪತ್ರೆಗೆ ಬರುವ ಎಲ್ಲ ರೋಗಿಗಳನ್ನ ನೆಲದ ಮೇಲೆ ಮಲಗಿಸಲಾಗುತ್ತಿದೆ. ರೋಗಿಗಳು ಈ ಬಗ್ಗೆ ಜಿಲ್ಲಾಸ್ಪತ್ರೆ ಅಧೀಕ್ಷಕಿ ನೀಲಾಂಬಿಕೆ ಅವರನ್ನು ಪ್ರಶ್ನೆಮಾಡಿದರೆ, ನಾನೇನು ಮಾಡಲಿ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಯಾರಾದರೂ ಡಿಸ್ಚಾರ್ಜ್ ಆದರೆ ನಿಮಗೆ ಬೆಡ್ ನೀಡುತ್ತೇವೆ ಎಂದು ಹಾರಿಕೆಯ ಉತ್ತರವನ್ನು ನೀಡಿದ್ದಾರೆ.

    ಕೆಲ ವಾರ್ಡ್ ಗಳಲ್ಲಿ 2, 3 ರೂಮ್ ಗಳಿದ್ದು, ಸಾಕಷ್ಟು ಬೆಡ್ ಗಳು ಖಾಲಿ ಇವೆ. ಆದರೂ ಕೂಡ ರೋಗಿಗಳಿಗೆ ಆಸ್ಪತ್ರೆಯ ಸಿಬ್ಬಂದಿ ಈ ರೀತಿ ಹಿಂಸೆ ನೀಡುತ್ತಿದ್ದಾರೆ ಎಂದು ರೋಗಿಗಳ ಸಂಬಂಧಿಗಳು ಆರೋಪಿಸಿದ್ದಾರೆ.

    ಆಸ್ಪತ್ರೆ ಅಧೀಕ್ಷಕರಾಗಲಿ, ಜಿಲ್ಲಾಡಳಿತ, ಜಿಲ್ಲಾ ಕುಟುಂಬ ಮತ್ತು ಕಲ್ಯಾಣ ಇಲಾಖೆ ಅಧಿಕಾರಿಗಳ್ಯಾರು ಕೂಡ ರೋಗಿಗಳ ಅಳಲನ್ನ ಕೇಳುತ್ತಿಲ್ಲ. ರೋಗ ಗುಣಪಡಿಸಿಕೊಳ್ಳಲು ಬರುವ ರೋಗಿಗಳು ನೆಲದ ಮೇಲೆ ಮಲಗಿ ಸೊಳ್ಳೆಗಳ ಕಾಟಕ್ಕೆ ಮತ್ತಷ್ಟು ರೋಗ ಉಲ್ಬಣಗೊಳಿಸಿಕೊಂಡು ಖಾಸಗಿ ಆಸ್ಪತ್ರೆಗೆ ದಾಖಲಾಗುವ ಸ್ಥಿತಿ ನಿರ್ಮಾಣವಾಗಿದೆ.

  • ನೂಡಲ್ಸ್ ನಲ್ಲಿ ಬಂತು ಹಾವಿನ ಮರಿ!

    ನೂಡಲ್ಸ್ ನಲ್ಲಿ ಬಂತು ಹಾವಿನ ಮರಿ!

    ಬೀಜಿಂಗ್: ಇತ್ತೀಚಿಗೆ ನಾವುಗಳು ಹೋಟೆಲ್ ಮತ್ತು ಆನ್‍ಲೈನ್ ಗಳ ಮೂಲಕ ತರಿಸುವ ಆಹಾರಗಳಲ್ಲಿ ಹುಳು, ಪ್ಲಾಸ್ಟಿಕ್ ಕವರ್‍ಗಳು ಪತ್ತೆಯಾಗಿರುವುದು ನೋಡಿರುತ್ತವೆ. ಆದರೆ ಇಲ್ಲೊಬ್ಬ ಯುವತಿ ಹೋಟೆಲ್‍ನಿಂದ ತಾನು ತಂದ ನೂಡಲ್ಸ್ ನಲ್ಲಿ ಸತ್ತ ಹಾವಿನ ಮರಿಯೊಂದು ಪತ್ತೆಯಾಗಿದೆ.

    ಚೀನಾದ ಗುವಾಂಗ್ಕ್ಸಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯೊಬ್ಬಳು ಶುಕ್ರವಾರ ಕಾಲೇಜಿಗೆ ಹೋಗುವ ವೇಳೆ ಹೋಟೆಲ್‍ವೊಂದರಿಂದ ನೂಡಲ್ಸ್ ನ್ನು ಪಾರ್ಸೆಲ್ ತೆಗೆದುಕೊಂಡು ಹೋಗಿದ್ದಾಳೆ. ಕ್ಯಾಂಪಸ್‍ಗೆ ಹೋದ್ಮೇಲೆ ನೂಡಲ್ಸ್ ನಲ್ಲಿ ಸತ್ತ ಹಾವಿನ ಮರಿಯೊಂದು ಕಂಡಿದೆ. ನಾನು ಮೊದಲು ಪಾರ್ಸಲ್ ಓಪನ್ ಮಾಡಿ ಒಂದೆರೆಡು ತುತ್ತುಗಳನ್ನು ತಿಂದ ನಂತರ ನೂಡಲ್ಸ್ ನ ಹಸಿರು ತರಕಾರಿಯ ಮಧ್ಯ ಸತ್ತ ಹಾವಿನ ಮರಿ ಪತ್ತೆಯಾಯ್ತು ಎಂದು ವಿದ್ಯಾರ್ಥಿನಿ ಹೇಳಿದ್ದಾಳೆ ಎಂದು ಚೀನಾದ ಪತ್ರಿಕೆ ಹೇಳಿದೆ.

    ನೂಡಲ್ಸ್ ನಲ್ಲಿರುವ ಹಾವಿನ ಫೋಟೋವನ್ನು ತೆಗೆದ ಯುವತಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾಳೆ. ಫೋಟೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಸ್ಥಳೀಯ ಆರೋಗ್ಯ ಅಧಿಕಾರಿಗಳು ಹೋಟೆಲ್‍ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಅಧಿಕಾರಿಗಳು ಹೋಟೆಲನ್ನು ಮುಚ್ಚಿಸಿ, ಮಾಲೀಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಹೋಟೆಲ್‍ನಲ್ಲಿ ಅನಾರೋಗ್ಯಕರ ಆಹಾರವನ್ನು ಪೂರೈಕೆ ಮಾಡಲಾಗ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

     

  • ಬಡವರಿಗಾಗಿ ವಿನ್ಯಾಸಗೊಂಡಿದೆ ಬೈಕ್ ಅಂಬುಲೆನ್ಸ್!

    ಬಡವರಿಗಾಗಿ ವಿನ್ಯಾಸಗೊಂಡಿದೆ ಬೈಕ್ ಅಂಬುಲೆನ್ಸ್!

    ಹೈದರಾಬಾದ್: ಗ್ರಾಮೀಣ ಪ್ರದೇಶದಲ್ಲಿ ಸಾಮಾನ್ಯ ಅವಶ್ಯಕತೆಗಳಾದ ನೀರು, ಬಟ್ಟೆ, ವಸತಿಯೇ ಇರುವುದಿಲ್ಲ. ಅಂತಹದರಲ್ಲಿ ರಸ್ತೆಗಳು, ಆಸ್ಪತ್ರೆಗಳು ಎಲ್ಲಿ ಇರಬೇಕು. ಇಂತಹ ವಿಷಯನ್ನು ಮನಗೊಂಡು ವ್ಯಕ್ತಿಯೊಬ್ಬರು ಬೈಕ್ ಅಂಬುಲೆನ್ಸ್ ವಿನ್ಯಾಸಗೊಳಿಸಿದ್ದಾರೆ.

    ಹೈದರಾಬಾದಿನ ಮಹಮ್ಮದ್ ಶಾರೋಝ್ ಖಾನ್ ಎಂಬುವವರು ಬೈಕ್‍  ಅಂಬುಲೆನ್ಸ್ ತಯಾರಿಸಿದ್ದಾರೆ.

    ಯಾಕೆ ಈ ಅಂಬುಲೆನ್ಸ್ ತಯಾರಿಸಿದ್ದೀರಿ ಎಂದು ಕೇಳಿದ್ದಕ್ಕೆ, ನಾನು ಬೈಕ್, ಕಾರ್ ಮತ್ತು ಸ್ಕೂಟರ್‍ಗಳಂತಹ ವಾಹನಗಳನ್ನು ವಿನ್ಯಾಸಗೊಳಿಸುತ್ತಿದ್ದೆ. ಹಾಗಾಗಿ ಗ್ರಾಮೀಣ ಪ್ರದೇಶದಲ್ಲಿನ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಬೈಕಿನಿಂದ ಆಂಬುಲೆನ್ಸ್ ತಯಾರಿಸಬಾರದು ಯಾಕೆ ಎಂದು ಯೋಚಿಸಿ, ಈ ವಿಶೇಷ ಅಂಬುಲೆನ್ಸ್ ತಯಾರಿಸಿದೆ ಎಂದು ಹೇಳಿದರು.

    ಅಂಬುಲೆನ್ಸ್ ನಲ್ಲಿ ಏನಿದೆ?
    ಸಾಮಾನ್ಯವಾಗಿ ಅಂಬುಲೆನ್ಸ್ ಒದಗಿಸುವ ಎಲ್ಲಾ ಸೌಲಭ್ಯಗಳನ್ನು ಮಿನಿ ಅಂಬುಲೆನ್ಸ್ ಒದಗಿಸುತ್ತದೆ. ಆಮ್ಲಜನಕದ ಸಿಲಿಂಡರ್, ಹಾಸಿಗೆ, ಚಿಕ್ಕ ಫ್ಯಾನ್, ಫಸ್ಟ್ ಎಡ್ ಬಾಕ್ಸ್, ಸ್ಟ್ರೇಚರ್‍ನ್ನು ಒಳಗೊಂಡಿದೆ. ಸರ್ಕಾರದಿಂದ ಅನುಮತಿ ಪಡೆದ ನಂತರ ಮಾರುಕಟ್ಟೆಗೆ ಪರಿಚಯಿಸಲು ಮಹಮ್ಮದ್ ತೀರ್ಮಾನಿಸಿದ್ದಾರೆ.

     

  • ನೆಲದ ಮೇಲೆಯೇ ಪತಿಯನ್ನು ಎಳೆದೊಯ್ದ ಪ್ರಕರಣ – ವೃದ್ಧ ಅಮೀರ್ ಸಾಬ್ ಆರೋಗ್ಯ ಸ್ಥಿತಿ ಗಂಭೀರ

    ನೆಲದ ಮೇಲೆಯೇ ಪತಿಯನ್ನು ಎಳೆದೊಯ್ದ ಪ್ರಕರಣ – ವೃದ್ಧ ಅಮೀರ್ ಸಾಬ್ ಆರೋಗ್ಯ ಸ್ಥಿತಿ ಗಂಭೀರ

    ಶಿವಮೊಗ್ಗ: ಮೆಗ್ಗಾನ್ ಆಸ್ಪತ್ರೆಯಲ್ಲಿ ವ್ಹೀಲ್ ಚೇರ್ ಸಿಗದೆ ಮಹಿಳೆಯೊಬ್ಬರು ತನ್ನ ವೃದ್ಧ ಪತಿಯನ್ನು ನೆಲದ ಮೇಲೆ ಎಳೆದೊಯ್ದ ಪ್ರಕರಣದ ಬಗ್ಗೆ ಸಾಕಷ್ಟು ಸುದ್ದಿಯಾಗಿತ್ತು. ಇದೀಗ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅಮೀರಸಾಬ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಮೆಗ್ಗಾನ್ ಆಸ್ಪತ್ರೆಯ ವೈದ್ಯ ಡಾ. ರಘುನಂದನ್ ತಿಳಿಸಿದ್ದಾರೆ.

    ಬೆಳಗ್ಗಿನವರೆಗೂ ಅಮೀರ್ ಸಾಬ್ ಆರೋಗ್ಯ ಚೆನ್ನಾಗಿತ್ತು ಹಾಗು ಚೇತರಿಸಿಕೊಳ್ಳುತ್ತಿದ್ದರು. ಆದರೆ ಬೆಳಗ್ಗೆ 9.30ರ ವೇಳೆಯಲ್ಲಿ ಅರೆಪ್ರಜ್ಞಾವಸ್ಥೆ ತಲುಪಿದ್ದಾರೆ. ಎಂಅರ್‍ಐ ಸ್ಕ್ಯಾನಿಂಗ್ ಮಾಡಿಸಿದಾಗ ಸ್ಟ್ರೋಕ್ ಆಗಿ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿರುವುದು ದೃಢಪಟ್ಟಿದೆ. ಇದಕ್ಕೆ ಚಿಕೆತ್ಸೆ ನೀಡಲು ನ್ಯೂರೋ ಸರ್ಜನ್ ಬೇಕು. ಈ ವ್ಯವಸ್ಥೆ ಮೆಗ್ಗಾನ್ ನಲ್ಲಿ ಇಲ್ಲದ ಕಾರಣ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲು ಮಾಡಲು ಸೂಚಿಸಿದ್ದೇವೆ ಎಂದು ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.

    ಗುರುವಾರ ಮೆಗ್ಗಾನ್ ಆಸ್ಪತ್ರೆಯಲ್ಲಿ ಅಮೀರಸಾಬ್ ಅವರಿಗೆ ಎಕ್ಸ್ ರೇ ಕೊಠಡಿಗೆ ಕರೆದುಕೊಂಡು ಹೋಗಲು ವೀಲ್ ಚೇರ್ ಸಿಗದೇ ಇದ್ದಾಗ ಅವರ ಪತ್ನಿ ಫಮೀದಾ ಪತಿಯನ್ನು ನೆಲದ ಮೇಲೆಯೇ ಎಳೆದುಕೊಂಡು ಹೋಗಿದ್ದರು.

    ಇದನ್ನೂ ಓದಿ: ಅಮಾನವೀಯ ದೃಶ್ಯದ ವಿಡಿಯೋ ಮಾಡಿದ್ದು ಯಾಕೆ? ನೋವಿನ ಕಥೆಯನ್ನು ಮುರಳಿ ನಾಯಕ್ ಹೇಳ್ತಾರೆ ಓದಿ

    ಇದನ್ನೂ ಓದಿ: ಅಮಾನವೀಯ ಘಟನೆ: ರೋಗಿಯ ಪತ್ನಿಯನ್ನೇ ಆರೋಪಿಯನ್ನಾಗಿಸಿದ ಮೆಗ್ಗಾನ್ ಆಸ್ಪತ್ರೆ

    https://www.youtube.com/watch?v=FIfROhD1LVc

     

  • ಜಿಎಸ್‍ಟಿ ಸೇವಾ ತೆರಿಗೆ: ಯಾವುದಕ್ಕೆ ಎಷ್ಟು? ದುಬಾರಿಯಾಗಲಿದೆ ಕನ್ನಡ ಸಿನಿಮಾ ಟಿಕೆಟ್ ದರ

    ಜಿಎಸ್‍ಟಿ ಸೇವಾ ತೆರಿಗೆ: ಯಾವುದಕ್ಕೆ ಎಷ್ಟು? ದುಬಾರಿಯಾಗಲಿದೆ ಕನ್ನಡ ಸಿನಿಮಾ ಟಿಕೆಟ್ ದರ

    ಶ್ರೀನಗರ: ಜುಲೈ 1ರಿಂದ ದೇಶಾದ್ಯಂತ ಜಾರಿಗೆ ಬರಲಿರುವ `ಏಕರಾಷ್ಟ್ರ, ಏಕ ತೆರಿಗೆ’ ಪರಿಕಲ್ಪನೆಯ ಜಿಎಸ್‍ಟಿಯ ಸೇವಾ ತೆರಿಗೆಯ ದರ ಅಂತಿಮಗೊಂಡಿದೆ. ನಾಲ್ಕು ಹಂತದಲ್ಲಿ ಜಿಎಸ್‍ಟಿ ದರ ಘೋಷಿಸಲಾಗಿದ್ದು, ಶೇ.5, 12, 18 ಹಾಗೂ 28ರಷ್ಟು ತೆರಿಗೆ ವಿಧಿಸಲು ಹಣಕಾಸು ಸಚಿವ ಅರುಣ್ ಜೇಟ್ಲಿ ನೇತೃತ್ವದಲ್ಲಿ ನಡೆದ ಎರಡನೇ ದಿನದ ಸಭೆಯಲ್ಲಿ ಅಂಕಿತ ಸಿಕ್ಕಿದೆ.

    ಶಿಕ್ಷಣ ಹಾಗೂ ಆರೋಗ್ಯ ಸೇವೆಗಳಿಗೆ ವಿನಾಯ್ತಿ ನೀಡಲಾಗಿದ್ದು, ಐಷಾರಾಮಿ ಜೀವನ ದುಬಾರಿಯಾಗಲಿದೆ. ಆದ್ರೆ, ಚಿನ್ನದ ಮೇಲಿನ ತೆರಿಗೆ ಇನ್ನು ಅಂತಿಮಗೊಂಡಿಲ್ಲ. ಹೀಗಾಗಿ ಜೂನ್ 3ರಂದು ಮತ್ತೊಂದು ಸುತ್ತಿನ ಜಿಎಸ್‍ಟಿ ಸಭೆ ನಡೆಯಲಿದೆ.

    ಯಾವುದಕ್ಕೆ ಎಷ್ಟು ತೆರಿಗೆ?
    ರಸ್ತೆ, ರೈಲ್ವೇ ಸೇವೆಗಳ ಮೇಲೆ ಶೇ.5 ರಷ್ಟು ತೆರಿಗೆ (ಓಲಾ, ಉಬರ್ ಕ್ಯಾಬ್ ಸೇವೆಗಳಿಗೆ ಶೇ.5 ರಷ್ಟು ತೆರಿಗೆ) ವಿಧಿಸಲಾಗಿದ್ದರೆ, ಎಸಿ ಸೌಲಭ್ಯವಿಲ್ಲದ ಹೋಟೆಲ್‍ಗಳಲ್ಲಿ ಶೇ.12 ರಷ್ಟು ತೆರಿಗೆ ಹಾಕಲಾಗಿದೆ.

    1 ಸಾವಿರ ರೂ. ಬಾಡಿಗೆ ಇರುವ ಹೋಟೆಲ್‍ಗಳಿಗೆ ತೆರಿಗೆ ಇಲ್ಲ. ಆದರೆ 2,500 ರೂ. ನಿಂದ 5000 ರೂ. ಹೊಟೇಲ್ ಬಾಡಿಗೆ ಕೊಟ್ಟರೆ ಶೇ.12ರಷ್ಟು ತೆರಿಗೆ ಕಟ್ಟಬೇಕಾಗುತ್ತದೆ. ಫೈವ್‍ಸ್ಟಾರ್ ಹೋಟೆಲ್‍ಗಳಿಗೆ ಶೇ.18 ರಷ್ಟು ತೆರಿಗೆ ವಿಧಿಸಲಾಗಿದ್ದು, 5 ಸಾವಿರ ರೂಪಾಯಿ ಮೇಲ್ಪಟ್ಟ ಹೋಟೆಲ್ ವ್ಯವಹಾರಗಳಿಗೆ ಶೇ.28ರಷ್ಟು ತೆರಿಗೆ ವಿಧಿಸಲು ಒಪ್ಪಿಗೆ ಸಿಕ್ಕಿದೆ.

    ಸಿನಿಮಾ, ಜೂಜಿನ ಮೇಲೆ ಶೇ.28ರಷ್ಟು ತೆರಿಗೆ, ಹಣಕಾಸು, ದೂರಸಂಪರ್ಕದ ಮೇಲೆ ಶೇ.18ರಷ್ಟು ತೆರಿಗೆ, ಬ್ರಾಂಡೆಂಡ್ ಬಟ್ಟೆಗಳಿಗೆ ಶೇ.18ರಷ್ಟು ತೆರಿಗೆ ವಿಧಿಸಲಾಗಿದೆ. ರೆಫ್ರಿಜರೇಟರ್, ಎಸಿ, ಟಿವಿ, ಕಾರ್ ಸೇರಿದಂತೆ ಐಷಾರಾಮಿ ವಸ್ತುಗಳಿಗೆ ಶೇ.28ರಷ್ಟು ತೆರಿಗೆ ವಿಧಿಸಲಾಗಿದ್ದು, ಶಿಕ್ಷಣ ಮತ್ತು ಆರೋಗ್ಯದ ಸೆಸ್ ರದ್ದು ಮಾಡಲಾಗಿದೆ.

    ಕನ್ನಡ ಸಿನಿಮಾ ಟಿಕೆಟ್ ರೇಟ್ ದುಬಾರಿ:
    ಜಿಎಸ್‍ಟಿ ಕಾಯ್ದೆಯಡಿ ಎಲ್ಲಾ ಭಾಷೆಯ ಚಿತ್ರಗಳಿಗೆ ಶೇ.28 ಏಕರೂಪ ಟ್ಯಾಕ್ಸ್ ವಿಧಿಸಲಾಗಿದೆ. ಇದರಿಂದಾಗಿ ಕನ್ನಡ ಚಿತ್ರ ವೀಕ್ಷಕರಿಗೆ ಹೊರೆಯಾಗಲಿದೆ ಏಕರೂಪ ಟ್ಯಾಕ್ಸ್. ಹಳೆಯ ತೆರಿಗೆಯ ನಿಯಮ ಪ್ರಕಾರ ಕನ್ನಡ ಚಿತ್ರಗಳಿಗೆ ಸರ್ಕಾರ ಮನರಂಜನಾ ತೆರಿಗೆ ವಿನಾಯ್ತಿ ನೀಡಿತ್ತು. ಇಲ್ಲಿವರೆಗೆ ಕನ್ನಡ ವೀಕ್ಷಕರು ಕೇಂದ್ರ ಸರ್ಕಾರದ ಸೇವಾ ತೆರಿಗೆ ಶೇ.15 ಹಾಗೂ ಇತರೆ ಸೆಸ್ ಸೇರಿ ಶೇ. 17 ಟ್ಯಾಕ್ಸ್ ಮಾತ್ರ ನೀಡುತ್ತಿದ್ದರು. ಆದರೆ ಜಿಎಸ್‍ಟಿಯಿಂದ ಈಗ ಕನ್ನಡ ಹಾಗೂ ಎಲ್ಲಾ ಭಾಷೆಯ ಸಿನಿಮಾಗಳಿಗೆ ಶೇ.28 ಆಗಲಿದೆ. ಇದರ ಪರಿಣಾಮ ಕನ್ನಡ ಚಿತ್ರ ವೀಕ್ಷಕರಿಗೆ ಶೇ.10 ಶೇ.11 ತೆರಿಗೆ ಹೆಚ್ಚಾಗಲಿದೆ. ಪರಭಾಷೆ ಚಿತ್ರ ಪ್ರೇಕ್ಷಕರಿಗೆ ಶೇ.3 ರಿಂದ ಶೇ.5 ತೆರಿಗೆ ಕಡಿಮೆಯಾಗಲಿದೆ .

    ಕನ್ನಡ ಮತ್ತು ಕನ್ನಡೇತರ ಸಿನಿಮಾಗಳಿಗೆ ಎಷ್ಟು ತೆರಿಗೆ ಇತ್ತು?
    ಇಲ್ಲಿಯವರೆಗೆ ಕನ್ನಡ ಸಿನಿಮಾಗಳಿಗೆ ಶೇ.100 ರಷ್ಟು ಮನರಂಜನಾ ತೆರಿಗೆ ಉಚಿತವಾಗಿದ್ದರೆ, ಕನ್ನಡೇತರ ಸಿನಿಮಾಗಳಿಗೆ ಶೇ.30 ತೆರಿಗೆ ವಿಧಿಸಲಾಗುತಿತ್ತು. ಪ್ರದರ್ಶನ ತೆರಿಗೆ ಕನ್ನಡ ಚಿತ್ರಗಳಿಗೆ 48 ರೂ. ಇದ್ದರೆ, ಕನ್ನಡೇತರ ಸಿನಿಮಾಗಳಿಗೆ 118 ರೂ. ಇತ್ತು. ಕನ್ನಡ ಮತ್ತು ಕನ್ನಡೇತರ ಸಿನಿಮಾಗಳಿಗೆ ಸೇವಾ ಶುಲ್ಕ 3 ರೂ. ಮತ್ತು ಪ್ರತಿ ಟಿಕೆಟ್ ಗೆ 1 ರೂ. ಹೆಚ್ಚುವರಿ ಶುಲ್ಕ ವಿಧಿಸಲಾಗುತಿತ್ತು.

    ಪರಿಹಾರ ಏನು?
    ದಶಕಗಳಿಂದ ಕನ್ನಡ ಚಿತ್ರಗಳಿಗೆ ಇದ್ದ ಮನರಂಜನಾ ತೆರಿಗೆ ವಿನಾಯಿತಿ ಉಳಿಸಿಕೊಳ್ಳಲು ಪರಿಹಾರವೂ ಇದೆ. ಈ ವಿನಾಯ್ತಿ ಮತ್ತೆ ಬೇಕಾದರೆ ಮೋದಿ ಸರ್ಕಾರದ ಜಿಎಸ್‍ಟಿ ಕೌನ್ಸಿಲ್‍ಗೆ ರಜ್ಯ ಸರ್ಕಾರ ಮೊರೆ ಹೋಗಬೇಕು. ಜಿಎಸ್‍ಟಿ ಕೌನ್ಸಿಲ್‍ಗೆ ತೆರಿಗೆ ಮರುಪರಿಶೀಲನೆ ಮಾಡುವ ಅಧಿಕಾರವಿದೆ. ರಾಜ್ಯ ಸರ್ಕಾರವೂ ಕೂಡ ತಮ್ಮ ತೆರಿಗೆ ಆದಾಯದಿಂದ ರೀಫಂಡ್ ಮಾಡುವ ಅವಕಾಶವಿದೆ.

    ಇದನ್ನೂ ಓದಿ: ಜಿಎಸ್‍ಟಿಯಲ್ಲಿ ದಿನಬಳಕೆಯ ವಸ್ತುಗಳಿಗೆ ಎಷ್ಟು ತೆರಿಗೆ? ಯಾವುದು ಅಗ್ಗ? ಯಾವುದು ದುಬಾರಿ?

  • ಪಾರ್ವತಮ್ಮ ರಾಜ್‍ಕುಮಾರ್ ಆರೋಗ್ಯ ಸ್ಥಿತಿ ಗಂಭೀರ

    ಪಾರ್ವತಮ್ಮ ರಾಜ್‍ಕುಮಾರ್ ಆರೋಗ್ಯ ಸ್ಥಿತಿ ಗಂಭೀರ

    ಬೆಂಗಳೂರು: ಪಾರ್ವತಮ್ಮ ರಾಜ್‍ಕುಮಾರ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಪಾರ್ವತಮ್ಮ ರಾಜ್‍ಕುಮಾರ್ ಅವರ ಆರೋಗ್ಯದ ಬಗ್ಗೆ ಇಂದು ವೈದ್ಯರು ಸುದ್ದಿಗೋಷ್ಠಿ ನಡೆಸಿ ವಿವರ ನೀಡಿದರು.

    ಮುಖ್ಯ ವೈದ್ಯ ಡಾ. ನರೇಶ್ ಮಾತನಾಡಿ, ಪಾರ್ವತಮ್ಮ ರಾಜ್‍ಕುಮಾರ್ ಅವರಿಗೆ ಉಸಿರಾಡಲು ಸ್ವಲ್ಪ ಕಷ್ಟವಾಗುತ್ತಿದೆ.ಈಗ ಮೆಕ್ಯಾನಿಕಲ್ ವೆಂಟಿಲೇಟರ್ ನಲ್ಲಿ ಇದ್ದಾರೆ. ಕಿಡ್ನಿ ಸಣ್ಣ ಫೇಲ್ಯೂರ್ ಆಗಿದೆ. ಡಯಾಲಿಸಿಸ್ ಮಾಡಬೇಕೋ ಬೇಡವೋ ಎನ್ನುವುದು ಇನ್ನೂ ನಿರ್ಧಾರವಾಗಿಲ್ಲ. ಇಂದು ಮಧ್ಯಾಹ್ನದ ಬಳಿಕ ನಿರ್ಧಾರ ಕೈಗೊಳ್ಳಲಾಗುವುದು. ಆರೋಗ್ಯದ ಮಾಹಿತಿಯ ಬಗ್ಗೆ ಮೆಡಿಕಲ್ ಬುಲೆಟಿನ್ ಪ್ರಕಟಿಸುತ್ತೇವೆ ಎಂದು ವೈದ್ಯರು ತಿಳಿಸಿದರು.

    ನಿನ್ನೆಗೆ ಹೋಲಿಸಿದರೆ ಇವತ್ತು ಆರೋಗ್ಯ ಸ್ವಲ್ಪ ಸುಧಾರಣೆಯಾಗಿದೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ. ಆರೋಗ್ಯದ ಬಗ್ಗೆ ಸುಳ್ಳು ಸುದ್ದಿ ಹರಡಿಸಬೇಡಿ. ಆರೋಗ್ಯ ಸುಧಾರಣೆಗಾಗಿ ಪ್ರಾರ್ಥನೆ ಮಾಡಿ ಎಂದು ಜನರಲ್ಲಿ ವೈದ್ಯರು ಮನವಿ ಮಾಡಿದ್ದಾರೆ.

    ರಕ್ತದೊತ್ತಡ ಹಾಗೂ ಮಧುಮೇಹ ಕಾಯಿಲೆಯಿಂದಾಗಿ ಪಾರ್ವತಮ್ಮ ರಾಜ್‍ಕುಮಾರ್ ಸೋಮವಾರದಂದು ಆಸ್ಪತ್ರೆಗೆ ದಾಖಲಾಗಿದ್ದರು.

    https://www.youtube.com/watch?v=hzotf2i2ehw