Tag: health

  • ಇಮ್ಮ್ಯೂನೋಥೆರಪಿಯಿಂದ ಲಾಭ ಏನು? ಕ್ಯಾನ್ಸರ್ ರೋಗಿಗಳಿಗೆ ಹೇಗೆ ನೆರವಾಗುತ್ತೆ?

    ಇಮ್ಮ್ಯೂನೋಥೆರಪಿಯಿಂದ ಲಾಭ ಏನು? ಕ್ಯಾನ್ಸರ್ ರೋಗಿಗಳಿಗೆ ಹೇಗೆ ನೆರವಾಗುತ್ತೆ?

    ಕ್ಯಾನ್ಸರ್ ರೋಗ ಪರೀಕ್ಷೆ ಎಂದರೇನೇ ರೋಗಿಯ ಎದೆ ಬಡಿತ ಏರುಪೇರಾಗುತ್ತದೆ. ಶಸ್ತ್ರ ಚಿಕಿತ್ಸೆ, ಕಿಮೋಥೆರಪಿ ಅಥವಾ ರೇಡಿಯೇಷನ್ ಯಾವುದೇ ಇರಲಿ, ಮುಂದೇನು ಕಾದಿದೆಯೋ ಎಂಬ ಭಯವೇ ರೋಗಿ ಮತ್ತು ಅವರ ಪರಿವಾರದವರು ಇನ್ನಷ್ಟು ಹೈರಾಣಾಗುವಂತೆ ಮಾಡುತ್ತದೆ. ಹಾಗಾಗಿ ರೋಗಿಯ ಚಿಕಿತ್ಸೆಗಾಗಿ ರೂಪಿಸಲ್ಪಟ್ಟ ಯೋಜನೆಯನ್ನು ಅನುಭವಿ ತಜ್ಞರೆ ನಿಖರವಾಗಿ ನಿರ್ಧರಿಸಲ್ಪಟ್ಟ ಹಂತಗಳನ್ನು ಅನುಸರಿಸುವ ಮೂಲಕ ಕಾರ್ಯರೂಪಕ್ಕೆ ತರಬೇಕಾಗುತ್ತದೆ.

    ಈಗ ಲಭ್ಯವಿರುವ ಎಲ್ಲಾ ಚಿಕಿತ್ಸಾ ವಿಧಾನಗಳಲ್ಲಿ ಕಿಮೋಥೆರಪಿಯ ಕುರಿತು ಇರುವ ಕಟ್ಟುಕತೆ, ಅನಿಸಿಕೆ ಸಂಶಯ ಏನೆಂದರೆ, ಪ್ರಸ್ತುತ ಇರುವ ಕಿಮೋಥೆರಪಿಯು ರೋಗಿಯಲ್ಲಿ ಕ್ಯಾನ್ಸರ್‍ನ ಹರಡುವಿಕೆಯನ್ನು ತಡೆಗಟ್ಟಲು ಇಂದು ಅತ್ಯಂತ ಸುರಕ್ಷಿತ ಮತ್ತು ಅತಿ ಹೆಚ್ಚು ಪರಿಣಾಮಕಾರಿ ವಿಧಾನ; ಇದನ್ನು ಅನುಷ್ಠಾನಗೊಳಿಸುವ ವಿಶೇಷ ವೈದ್ಯಕೀಯ ಪರಿಣತಿ ಮತ್ತು ಕ್ಷೇತ್ರದಲ್ಲಿ ಅನುಭವ ಅತ್ಯಗತ್ಯ.

    ಕ್ಯಾನ್ಸರ್ ಚಿಕಿತ್ಸೆಯಲ್ಲಿ ಎಲ್ಲಕ್ಕಿಂತ ಹೆಚ್ಚು ಭಯಾನಕ ಜಟಿಲತೆ ಎಂದರೆ ರೋಗನಿರೋಧಕ ಶಕ್ತಿಯ ಕುಗ್ಗುವಿಕೆ. ಮಾನವನ ರೋಗನಿರೋಧಕ ಶಕ್ತಿಯನ್ನು ಕ್ಯಾನ್ಸರ್ ನಿಯಂತ್ರಣಕ್ಕೆ ಬಳಸಿಕೊಳ್ಳಲು ಕ್ಯಾನ್ಸರ್ ವಿಜ್ಞಾನಿಗಳು ಹಲವು ದಶಕಗಳಿಂದ ಶ್ರಮಿಸುತ್ತಿದ್ದಾರೆ. ಈ ದಿಶೆಯಲ್ಲಿ ಅನೇಕ ಮೈಲಿಗಲ್ಲುಗಳನ್ನು ಕಂಡು ಹಿಡಿದಿದ್ದಾರೆ. ಆದರೆ ಪ್ರಸ್ತುತ ದಶಕದಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ಸಂಬಂಧಿಸಿದಂತೆ ರೋಗನಿರೋಧಕ ಶಕ್ತಿಯನ್ನು ಬಳಸಿಕೊಳ್ಳುವಲ್ಲಿ ವಿಜ್ಞಾನಿಗಳು ಮಹತ್ತರ ಯಶಸ್ಸನ್ನು ಪಡೆದಿದ್ದಾರೆ. ಬೆಂಗಳೂರಿನಲ್ಲಿರುವ ಆಧುನಿಕ ಕ್ಯಾನ್ಸರ್ ಚಿಕಿತ್ಸಾ ಆಸ್ಪತ್ರೆ ಸೈಟ್ ಕೇರ್ ನ ಹಿರಿಯ ಕನ್ಸಲ್ಟೆಂಟ್ ವೈದ್ಯರಾಗಿರುವ ಡಾ. ಪ್ರಸಾದ್ ನಾರಯಣನ್‍ರವರ ಮಾತಿನಲ್ಲಿ, “ಪ್ರಮುಖ ಕ್ಯಾನ್ಸರ್ ಚಿಕಿತ್ಸೆಯಾಗಿ ಇಮ್ಮ್ಯೂನೋಥೆರಪಿಯ ಬೆಳವಣಿಗೆ ಬಹಳಷ್ಟು ಕ್ಯಾನ್ಸರ್ ರೋಗಿಗಳ ಜೀವನದಲ್ಲಿ ಬಹಳ ಒಳ್ಳೆಯ ಪರಿಣಾಮ ಉಂಟುಮಾಡಿದೆ. ಕ್ಯಾನ್ಸರ್ ಚಿಕಿತ್ಸೆ ಬಹಳ ಕಠಿಣ ಎನ್ನುವ ಕಾಲವೊಂದಿತ್ತು. ಆದರೆ ಈಗ ಮೆಲನೋಮಾದಂತೆ ಇಮ್ಮ್ಯೂನೋಥೆರಪಿಗೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಈ ವಿಧಾನವು ಭಾರತದಲ್ಲಿ ಶ್ವಾಸಕೋಶ, ತಲೆ, ಕುತ್ತಿಗೆ, ಉದರ/ಹೊಟ್ಟೆ, ಸರ್ವಿಕ್ಸ್ (ಗರ್ಭಕಂಠ) ಮತ್ತು ಜೆನಿಟೋ ಯೂರಿನರಿ ಕ್ಯಾನ್ಸರುಗಳಂತಹ ಅನೇಕ ಸಾಮಾನ್ಯ ಕ್ಯಾನ್ಸರುಗಳ ಚಿಕಿತ್ಸೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಅನೇಕ ಇಮ್ಮ್ಯೂನೋ ಮಾಡ್ಯುಲೇಟರಿ ಔಷಧಗಳು ಕ್ಯಾನ್ಸರನ್ನು ಎದುರಿಸುವ ವಿಧಾನದಲ್ಲಿ ಬಹಳಷ್ಟು ಪ್ರಭಾವ ಬೀರಿವೆ. ಉದಾಹರಣೆಗೆ ಗ್ರಾಮೀಣ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಶ್ವಾಸಕೋಶದ ಕ್ಯಾನ್ಸರ್ ಚಿಕಿತ್ಸೆ ಕಳೆದ ದಶಕದಲ್ಲಿ ಸಂಪೂರ್ಣ ಬದಲಾವಣೆಯನ್ನು ಕಂಡಿದೆ.

    ಶ್ವಾಸಕೋಶದ ಕ್ಯಾನ್ಸರಿಗೆ ಕಾರಣವಾಗುವ ಜೆನೆಟಿಕ್ ಫ್ರೇಮ್ ವರ್ಕ್‍ಗಳಲ್ಲಿ ನಿರ್ದಿಷ್ಟ ಸಮಸ್ಯೆಗಳ ಕುರಿತು ಹೆಚ್ಚಿದ ತಿಳುವಳಿಕೆಯ ಪರಿಣಾಮವಾಗಿ ಬಹಳಷ್ಟು ಕ್ಯಾನ್ಸರ್ ರೋಗಿಗಳು ಯೋಜಿತ ಚಿಕಿತ್ಸೆ ಮತ್ತು ಇಮ್ಮ್ಯೂನೋಥೆರಪಿಯ ಲಾಭ ಪಡೆದು ಉತ್ತಮ ಪರಿಣಾಮ ಕಂಡಿದ್ದಾರೆ. ಸರಿಯಾದ ಇಮ್ಮ್ಯೂನೋಥೆರಪಿಯನ್ನು ನಿರ್ಣಯಿಸಲು ರೋಗಿಗಳನ್ನು ತರಬೇತಿ ಹೊಂದಿರುವ ಆಂಕಾಲಜಿಸ್ಟರು ನೋಡಬೇಕು. ಬಹುಮುಖ ವಿಶೇಷಜ್ಞರ ತಂಡದಿಂದ ಚಿಕಿತ್ಸಾಪೂರ್ವ ಪರೀಕ್ಷೆ ನಡೆಸಿದ ನಂತರ ಒಂದು ಪೂರ್ಣರೂಪದ ಚಿಕಿತ್ಸಾ ಯೋಜನೆಯನ್ನು ರೋಗಿಗೆ ನೀಡಲಾಗುತ್ತದೆ. ರೋಗಿಗೆ ನಿಯಮಿತ ಮೇಲ್ವಿಚಾರಣೆ ವತ್ತು ಯೋಜಿತ ಅನುಕರಣೆಯ ಮೂಲಕ ಹೊರರೋಗಿಯಂತೆ ಚಿಕಿತ್ಸೆ ನೀಡಲಾಗುತ್ತದೆ. ಇಮ್ಮ್ಯೂನೋ ಚಿಕಿತ್ಸೆಯನ್ನು ಪಡೆಯುವ ಕ್ಯಾನ್ಸರ್ ರೋಗಿಗಳಿಗೆ ಒಂದು ಸಮಗ್ರ ಆರೈಕೆಯ ವ್ಯವಸ್ಥೆ ರೋಗಿಗಷ್ಟೇ ಸಹಾಯಕವಾಗುದಲ್ಲದೆ ಅವರ ಕುಟುಂಬಕ್ಕೂ ಸಾಂತ್ವನಕಾರಿಯಾಗಿರುತ್ತದೆ”.

    ಆದರೆ ಇಮ್ಮ್ಯೂನೋಥೆರಪಿಯಲ್ಲಿ ಅಪಾಯವೇ ಇಲ್ಲವೇ? ‘ಅಪಾಯವೇ ಇಲ್ಲದ ಕ್ಯಾನ್ಸರ್ ಚಿಕಿತ್ಸೆ ಬಹಳ ಕಡಿಮೆ.’ ಎನ್ನುತ್ತಾರೆ ಡಾ ಪ್ರಸಾದ್ ನಾರಾಯಣನ್‍ರವರು. ಆದರೆ ಇಮ್ಮ್ಯೂನೊಥೆರಪಿಯನ್ನು ಆರಂಭಿಸುವ ಮುನ್ನ ಅದರಲ್ಲಿನ ಅಪಾಯ ಮತ್ತು ಲಾಭದ ಕುರಿತು ತೂಗಿನೊಡಬೇಕಾದ್ದೂ ಅನಿವಾರ್ಯ ಎಂದು ಹೇಳುತ್ತಾರೆ. ಇಮ್ಮ್ಯೂನೋಥೆರಪಿ ಒದಗಿಸುವ ಕ್ಯಾನ್ಸರ್ ಕೇಂದ್ರಗಳ ಸಾಮಥ್ರ್ಯ ಗಮನಿಸಬೇಕಾದ್ದೂ ಬಹಳ ಮುಖ್ಯ ಎನ್ನುತ್ತಾರೆ.

    ಇಮ್ಮ್ಯೂನೋಥೆರಪಿಯಲ್ಲಿ ಅಡ್ಡಪರಿಣಾಮಗಳು ಇಲ್ಲದಿಲ್ಲ. ನಾವು ರೋಗಿಯ ರೋಗನಿರೋಧಕ ಶಕ್ತಿಯನ್ನು ಉದ್ದೀಪಿಸುತ್ತೇವೆ. ಆಗ ಅದು ಅಗತ್ಯಕ್ಕಿಂತ ಹೆಚ್ಚು ಉದ್ದೀಪನಗೊಳ್ಳುವ ಸಾಧ್ಯತೆ ಇದೆ. ಆದರೆ ಎಲ್ಲಾ ಸಮಯದಲ್ಲೂ ಚಿಕಿತ್ಸೆಯು ನಮಗೆ ಬೇಕಾದ ಹಾಗೆಯೇ ನಡೆಯುತ್ತದೆ ಎಂದು ಹೇಳಲು ಬರುವುದಿಲ್ಲ. ಆದ್ದರಿಂದ ಈ ರೀತಿಯ ಜಟಿಲ ಚಿಕಿತ್ಸೆಗಳಿಗಾಗಿ ಈ ಚಿಕಿತ್ಸೆಗಳಲ್ಲಿ ಉತ್ತಮ ಸಾಮಥ್ರ್ಯ ಹೊಂದಿದ ವಿಶೇಷ ಆಸ್ಪತ್ರೆಗಳನ್ನು ಅವಲಂಬಿಸುವುದು ಅಗತ್ಯ. ಎನ್ನುತ್ತಾರೆ ಸೈಟ್ ಕೇರ್ ನ ವಿಶೇಷಜ್ಞರಾದ ಡಾ. ಪ್ರಸಾದ್.

    “ಪ್ರಸ್ತುತ ಪರಿಸ್ಥಿತಿಯಲ್ಲಿ ಇಮ್ಮ್ಯೂನೋಥೆರಪಿ ಕ್ಯಾನ್ಸರ್ ಚಿಕಿತ್ಸೆಯ ಬತ್ತಳಿಕೆಗೆ ಇಂದು ಮುಖ್ಯ ಸೇರ್ಪಡೆ. ರೋಗಿಗಳ ರೋಗನಿರೋಧಕ ಶಕ್ತಿಯನ್ನು ಹೀರುವ ಮೂಲಕ ಈ ಚಿಕಿತ್ಸೆ ಕೆಲಸ ಮಾಡುತ್ತದೆ. ಇದು ರೋಗನಿರೋಧಕವನ್ನು ಮಾರ್ಪಡಿಸುವ ಮೂಲಕ ವಿಪರೀತ ವಿಭಜನೆಗೊಳ್ಳುವ ಕ್ಯಾನ್ಸರ್ ಕಣಗಳನ್ನು ಸಂಭಾಳಿಸಲು ದೇಹವನ್ನೇ ಸಶಕ್ತಗೊಳಿಸುತ್ತದೆ. ಕ್ಯಾನ್ಸರ್ ಎದುರಿಸಲು ದೇಹವು ತನ್ನದೇ ರೋಗನಿರೋಧಕ ಶಕ್ತಿಯನ್ನು ಉತ್ತೇಜಿಸುವಂತೆ ಮಾಡುವುದು ಇಲ್ಲಿನ ಉದ್ದೇಶ.”
    ಡಾ.ಪ್ರಸಾದ್ ನಾರಾಯಣನ್, ಸೀನಿಯರ್ ಕನ್ಸಲ್ಟೆಂಟ್, ಮೆಡಿಕಲ್ ಆಂಕಾಲಜಿ

    ಕ್ಯಾನ್ಸರ್ ಕುರಿತ ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ: www.cytecare.com 

  • ಗರ್ಭಿಣಿಯರು ಪಾಲಿಸಲೇಬೇಕಾದ ನಿಯಮಗಳ ಪಟ್ಟಿ ಇಲ್ಲಿದೆ

    ಗರ್ಭಿಣಿಯರು ಪಾಲಿಸಲೇಬೇಕಾದ ನಿಯಮಗಳ ಪಟ್ಟಿ ಇಲ್ಲಿದೆ

    ಸುನಿತಾ ಎ.ಎನ್.

    ರ್ಭಾವಸ್ಥೆ ಎಂಬುದು ಹೆಣ್ಣಿನ ಬಾಳಿನಲ್ಲಿ ಅತ್ಯಾನಂದವನ್ನುಂಟು ಮಾಡುವ ಸಮಯವಾಗಿದೆ. ಈ ಸಮಯದಲ್ಲಿ ತನ್ನ ಆರೋಗ್ಯ ಮಾತ್ರವಲ್ಲದೆ ಗರ್ಭದೊಳಗಿರುವ ಕೂಸಿನ ಕಾಳಜಿಯನ್ನು ಆಕೆ ಮಾಡಬೇಕು. ನವ ಮಾಸವೂ ಆ ಮಗುವನ್ನು ಗರ್ಭದಲ್ಲಿ ಹೊತ್ತು ತನ್ನ ಮತ್ತು ಮಗುವಿನ ಆರೋಗ್ಯವನ್ನು ಕಾಪಾಡಬೇಕಾಗುತ್ತದೆ. ಕೆಲವೊಂದು ನಿಯಮಗಳನ್ನು ಚಾಚೂ ತಪ್ಪದೆ ಅನುಸರಿಸಬೇಕಾಗುತ್ತದೆ.

    ಏನು ತಿನ್ನಬೇಕು? ಏನು ತಿನ್ನಬಾರದು? ಎಂಬುದಾಗಿ ಪಟ್ಟಿ ಮಾಡಿ ಆ ರೀತಿಯೇ ಸೇವಿಸಬೇಕು. ನಿಮಗಿಷ್ಟವಿದ್ದರೂ ಅದು ನಿಮ್ಮ ಮಗುವಿನ ಮೇಲೆ ಪರಿಣಾಮ ಬೀರಬಹುದಾದ್ದರಿಂದ ಕೆಲವು ಆಹಾರಗಳನ್ನು ಕೆಲವೊಂದು ಚಟುವಟಿಕೆಗಳನ್ನು ನೀವು ಮಾಡಲೇಬಾರದು. ವೈದ್ಯರ ಸಲಹೆಯನ್ನು ಪ್ರತಿಯೊಂದು ಹೆಜ್ಜೆ ಹೆಜ್ಜೆಯಲ್ಲೂ ಪಡೆದುಕೊಳ್ಳುತ್ತಿರಬೇಕಾಗುತ್ತದೆ.

    ನಿಮ್ಮ ಗರ್ಭಾವಸ್ಥೆಯ ಸಮಯದಲ್ಲಿ ನಿಮಗೆ ತಿಳಿಯದಂತೆ ನಿಮ್ಮ ದೇಹದಲ್ಲಿ ಅನೇಕ ಬದಲಾವಣೆಗಳು ಉಂಟಾಗುತ್ತಿರುತ್ತವೆ. ಈ ಸಮಯದಲ್ಲಿ ಮನೆಯ ಇತರ ಸದಸ್ಯರುಗಳಿಗಿಂತ ಹೆಚ್ಚಾಗಿ ನೀವು ನಿಮ್ಮ ಗರ್ಭದೊಳಗಿರುವ ಕಂದನಿಗೆ ಹೆಚ್ಚಿನ ಅಸ್ಥೆ ಕಾಳಜಿಯನ್ನು ನೀಡಬೇಕಾಗುತ್ತದೆ. ನಿಮ್ಮ ಆಹಾರದ ಕಡೆಗೆ ಗಮನ ಹರಿಸುವುದರ ಜೊತೆಗೆ ಮದ್ಯಪಾನ, ಧೂಮಪಾನ, ಹೆಚ್ಚಿನ ಕೆಫೀನ್ ಅಂಶಗಳ ಸೇವನೆಯನ್ನು ನೀವು ತ್ಯಜಿಸಬೇಕಾಗುತ್ತದೆ. ಇದರೊಂದಿಗೆ ಇನ್ನೂ ಹೆಚ್ಚಿನ ಚಟುವಟಿಕೆಗಳನ್ನು ನೀವು ಮಾಡುತ್ತಿದ್ದಲ್ಲಿ ಅದಕ್ಕೆಲ್ಲಾ ಪೂರ್ಣ ವಿರಾಮ ಇಡುವ ಸಮಯ ಇದಾಗಿದೆ. ಹೀಗಾಗಿ ಇಲ್ಲಿ ನಿಮ್ಮ ಮತ್ತು ಮಗುವಿನ ಉತ್ತಮ ಆರೋಗ್ಯಕ್ಕಾಗಿ ನೀವು ಏನು ಮಾಡಬೇಕು ಏನು ಮಾಡಬಾರದು ಎನ್ನುವ ಮಾಹಿತಿಯನ್ನು ನೀಡಲಾಗಿದೆ. ಇದನ್ನೂ ಓದಿ: ಗರ್ಭಿಣಿಯರು ಸೇವಿಸಬೇಕಾದ 10 ಸಸ್ಯಹಾರಿ ಆಹಾರ

    ಮಗುವಿನ ಉತ್ತಮ ಆರೋಗ್ಯಕ್ಕಾಗಿ ಏನು ಮಾಡಬೇಕು?

    1. ಸಾಹಸ ಕ್ರಿಯೆಗಳಲ್ಲಿ ಭಾಗವಹಿಸುವುದು ಅಮ್ಯೂಸ್‍ಮೆಂಟ್ ಪಾರ್ಕ್ ಗಳಲ್ಲಿ ಸಾಹಸ ಕ್ರೀಡೆಗಳು, ಏರುವುದು, ಹತ್ತುವುದು, ನೀರಾಟ ಮೊದಲಾದ ಚಟುವಟಿಕೆಗಳಿರುತ್ತವೆ. ನಿಮ್ಮ ಗರ್ಭಾವಸ್ಥೆಯಲ್ಲಿ ಇಂತಹ ಕ್ರಿಯೆಗಳನ್ನು ನೀವು ಮಾಡಲೇಬಾರದು. ರೋಲರ್ ಕೋಸ್ಟರ್ ಸವಾರಿ, ನೀರಿನಾಟ ಮತ್ತು ಒಮ್ಮೆಲೆ ನಿಲ್ಲುವಿಕೆಗಳನ್ನು ಒಳಗೊಂಡಿರುವ ಚಟುವಟಿಕೆಗಳನ್ನು ಮಾಡಬೇಡಿ. ಇದರಿಂದ ಗರ್ಭಪಾತ ಅಥವಾ ನಿಮ್ಮ ಮಗುವಿಗೆ ಹಾನಿಯಾಗುವ ಸಾಧ್ಯತೆ ಇರುತ್ತದೆ.

    2. ಕ್ರೀಡೆಗಳಲ್ಲಿ ಭಾಗವಹಿಸದಿರಿ ಎಲ್ಲಾ ರೀತಿಯ ಕ್ರೀಡೆಗಳು ಗರ್ಭಾವಸ್ಥೆಯ ಸಮಯದಲ್ಲಿ ಹೆಚ್ಚು ಹಾನಿಕಾರಕವಾಗಿರುತ್ತವೆ. ಕ್ರೀಡೆಗಳಲ್ಲಿ ಭಾಗವಹಿಸದಿರಿ. ಫುಟ್‍ಬಾಲ್, ಕ್ರಿಕೆಟ್ ಮತ್ತು ವಾಲಿಬಾಲ್‍ನಂತಹ ಕ್ರೀಡೆಗಳನ್ನು ಗರ್ಭಾವಸ್ಥೆಯಲ್ಲಿ ಆಡಲೇಬಾರದು.

    3. ಸೈಕಲ್ ಸವಾರಿ ಮಾಡಬೇಡಿ. ಮೂರನೇ ತ್ರೈಮಾಸಿಕದಲ್ಲಿ ನಿಮಗೆ ಸೈಕಲ್ ಸವಾರಿಯ ಹುಚ್ಚಿದ್ದರೂ ಈ ಕ್ರಿಯೆಗೆ ಇಳಿಯಬೇಡಿ. ಸೈಕಲ್ ಸವಾರಿ ಮಾಡುವಾಗ ಸೈಕಲ್ ನಿರ್ವಹಣೆಯನ್ನು ಮಾಡುವುದು ಗರ್ಭಕ್ಕೆ ದುಷ್ಪರಿಣಾಮವನ್ನುಂಟು ಮಾಡಬಹುದು. ಅದಲ್ಲದೆ ನೀವು ನಿಯಂತ್ರಣ ತಪ್ಪಿ ಕೆಳಕ್ಕೆ ಬೀಳುವ ಸಾಧ್ಯತೆ ಕೂಡ ಇರುತ್ತದೆ.

    5. ಭಾರ ಎತ್ತುವ ವ್ಯಾಯಾಮಗಳನ್ನು ಮಾಡಬೇಡಿ. ಗರ್ಭಾವಸ್ಥೆಯಲ್ಲಿ ಸಕ್ರಿಯರಾಗಿರುವುದು ಒಳ್ಳೆಯ ವಿಷಯವೇ. ಆದರೆ ಈ ಸಮಯದಲ್ಲಿ ಯಾವುದೇ ಭಾರ ಎತ್ತುವ ವ್ಯಾಯಾಮಗಳನ್ನು ಮಾಡಬೇಡಿ. ಹೊಟ್ಟೆಯ ಮೇಲೆ ಮಲಗಿ ಮಾಡುವ ವ್ಯಾಯಾಮಗಳನ್ನು ಅನುಸರಿಸದಿರಿ. ಹೆಚ್ಚು ನೋವನ್ನುಂಟು ಮಾಡುವ ಸಾಧ್ಯತೆ ಇರುತ್ತದೆ.

    6. ಬಿಸಿ ಬಿಸಿ ನೀರಿನ ಸ್ನಾನ ಮಾಡದಿರಿ. ಹಾಟ್ ಟಬ್‍ನಲ್ಲಿ ಸ್ನಾನ ಮಾಡುವುದು ಅನಾರೋಗ್ಯವನ್ನುಂಟು ಮಾಡುವ ಸಾಧ್ಯತೆ ಇರುತ್ತದೆ. ನಿಮ್ಮ ಮಗುವಿನ ಆರೋಗ್ಯದ ಮೇಲೆ ಇದು ಹಾನಿಯನ್ನುಂಟು ಮಾಡಬಹುದು. ಸೌನಾ ಅಥವಾ ಹಾಟ್ ಬಾತ್ ನಿಮ್ಮ ಆರೋಗ್ಯದ ಮೇಲೆ ಹಾನಿಯನ್ನು ಉಂಟು ಮಾಡಿ ಮಗುವಿಗೆ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ಉಗುರು ಬೆಚ್ಚಗಿನ ನೀರಿನ ಸ್ನಾನ ಉತ್ತಮ.

    7. ಜಾಗಿಂಗ್ ಬೇಡ ಎರಡನೆಯ ಮತ್ತು ಮೂರನೆಯ ಮಾಸಿಕದಲ್ಲಿ ಓಡುವುದು, ನೆಗೆಯುವುದು ಮೊದಲಾದ ಕ್ರಿಯೆಗಳನ್ನು ಮಾಡಬೇಡಿ. ಓಟದಲ್ಲಿ ಹೆಚ್ಚಿನ ನಿಯಂತ್ರಣ ಬೇಕಾಗಿರುತ್ತದೆ ಈ ಸಮಯದಲ್ಲಿ ನಮ್ಮ ದೇಹ ಒಗ್ಗುವುದಿಲ್ಲ. ಆದ್ದರಿಂದ ಓಡುವುದನ್ನು ಮಾಡದಿರಿ. ಇದರಿಂದ ಗರ್ಭಪಾತವಾಗುವ ಸಾಧ್ಯತೆ ಇರುತ್ತದೆ.

    8. ಯೋಗ ಮನಸ್ಸಿಗೆ ಉಲ್ಲಾಸ ನೀಡುತ್ತದೆ. ಹಾಗೆಂದ ಮಾತ್ರಕ್ಕೆ ಯೋಗದಲ್ಲಿ ಕಷ್ಟದ ಭಂಗಿಗಳನ್ನು ಅಭ್ಯಸಿಸಬೇಡಿ. ಗರ್ಭಾವಸ್ಥೆಯಲ್ಲಿ ನೀವು ಯೋಗವನ್ನು ಮಾಡದಿರಿ. ಆದರೆ ಕಷ್ಟವಾಗಿರುವ ಭಂಗಿಗಳನ್ನು ಮಾಡದಿರಿ.

    9. ಮನೆಯ ಸ್ವಚ್ಛತೆ ಮಾಡದಿರಿ. ಗರ್ಭಾವಸ್ಥೆಯಲ್ಲಿ ಎಲ್ಲಾ ಕೆಲಸಗಳನ್ನು ಮಾಡುವುದು ಸರಳ ಹೆರಿಗೆಗೆ ಅನುಕೂಲವಾಗಿರುತ್ತದೆ. ಆದರೆ ಮನೆಗೆಲಸ ಮಾಡುವಾಗ ಎತ್ತುವುದು, ಎಳೆಯುವುದು ಮೊದಲಾದ ಕೆಲಸಗಳನ್ನು ಮಾಡದಿರಿ. ಮನೆಯ ಇತರ ಸದಸ್ಯರು ಈ ಕೆಲಸಗಳನ್ನು ಮಾಡುತ್ತಾರೆ. ನೀವು ಆದಷ್ಟು ನಿಮ್ಮ ಆರೋಗ್ಯಕ್ಕೆ ಹೆಚ್ಚು ಗಮನ ನೀಡಬೇಕು. ಅದರಲ್ಲೂ ಮನೆಯ ಸ್ವಚ್ಛಗೊಳಿಸುವ ಕಾರ್ಯದಲ್ಲಿ ಅತಿ ಹೆಚ್ಚಾಗಿ ಬಗ್ಗುವಂತಹ ಕೆಲಸಗಳನ್ನು ಮಾಡಕೂಡದು. ಏಕೆಂದರೆ ಈ ಪರಿ ಬಗ್ಗುವುದರಿಂದ (sciatic nerve) ಅಥವಾ ಬೆನ್ನುಮೂಳೆಯ ಕೆಳಭಾಗದಿಂದ ಕಾಲಿಗೆ ಧಾವಿಸುವ ನರದ ಮೇಲೆ ಹೆಚ್ಚಿನ ಒತ್ತಡ ಬಿದ್ದು ಈ ನರವನ್ನು ಘಾಸಿಗೊಳಿಸಬಹುದು.

    10. ಕೆಲವರಿಗೆ ಕುದುರೆ ಸವಾರಿ ಮಾಡುವ ಅಭ್ಯಾಸವಿರುತ್ತದೆ. ಆದರೆ ಗರ್ಭಾವಸ್ಥೆಯಲ್ಲಿ ಕುದುರೆ ಸವಾರಿ ಮಾಡುವುದು ನಿಮ್ಮ ಗರ್ಭಕ್ಕೆ ಹಾನಿಯನ್ನುಂಟು ಮಾಡುವ ಸಾಧ್ಯತೆ ಹೆಚ್ಚು.

    11. ಹೈಕಿಂಗ್ ನಮ್ಮ ದೇಹಕ್ಕೆ ಉತ್ತಮ ಚಟುವಕೆಯನ್ನು ನೀಡುವ ಕ್ರಿಯೆಯಾಗಿದೆ ಹೈಕಿಂಗ್. ಆದರೆ ಹೈಕಿಂಗ್ ಸಮಯದಲ್ಲಿ ನೀವು ಬೀಳುವ, ಏಟು ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ. ಇದರಿಂದ ನಿಮ್ಮ ಮಗುವಿಗೆ ಹಾನಿಯುಂಟಾಗುವುದು ಹೆಚ್ಚು.

    12. ಗುಡಿಸುವುದು, ಬಟ್ಟೆ ಒಣಗಿಸುವುದು ಇವುಗಳನ್ನೆಲ್ಲಾ ಮಾಡಬೇಡಿ. ಗುಡಿಸುವುದು, ಭಾರವಾದ ವಸ್ತುಗಳನ್ನು ಮೇಲಿಡುವುದು, ಬಟ್ಟೆ ಒಣಗಿಸುವುದು ಗರ್ಭಾವಸ್ಥೆಯಲ್ಲಿ ದೇಹದ ಪ್ರಮುಖ ಗಂಟುಗಳು ಮತ್ತು ಮಡಚುವ ಮೂಳೆಗಳ ಭಾಗಗಳು ಕೊಂಚ ಮೆತ್ತಗಾಗುತ್ತವೆ. ಆದ್ದರಿಂದ ಇತರ ಸಮಯದಲ್ಲಿ ಸುಲಭವಾಗುತ್ತಿದ್ದ ಕೆಲಸಗಳು ಈಗ ಕಷ್ಟವಾಗುತ್ತವೆ. ಆದ್ದರಿಂದ ಈ ಕೆಲಸಗಳಿಗೆಲ್ಲಾ ಮನೆಯವರ ಅಥವಾ ಕೆಲಸದವರ ಸಹಾಯ ಪಡೆಯುವುದು ಒಳ್ಳೆಯದು. ಗುಡಿಸುವುದು, ಭಾರವಾದ ವಸ್ತುಗಳನ್ನು ಮೇಲಿಡುವುದು, ಬಟ್ಟೆ ಒಣಗಿಸುವುದು ಮೊದಲಾದ ಕೆಲಸಗಳಿಗೆ ಸಹಾಯ ಪಡೆದುಕೊಳ್ಳುವುದೇ ಜಾಣತನವಾಗಿದೆ.

     

    13. ಬೆಕ್ಕಿನ ಸಂಗ ಬಿಟ್ಟು ಬಿಡಿ! ಒಂದು ವೇಳೆ ನಿಮ್ಮ ಮನೆಯಲ್ಲಿ ಸಾಕಿರುವ ಬೆಕ್ಕು ಇದ್ದರೆ ಬೆಕ್ಕಿನ ಸಂಗ ಈ ಸಮಯದಲ್ಲಿ ಸಲ್ಲದು. ವಿಶೇಷವಾಗಿ ಬೆಕ್ಕಿನ ಮಲವನ್ನು ಸ್ವಚ್ಛಗೊಳಿಸುವುದಿರಲಿ, ಬಳಿಗೂ ಸುಳಿಯಕೂಡದು. ಏಕೆಂದರೆ ಇದರಲ್ಲಿ ಕೆಲವು ಪರಾವಲಂಬಿ ಕ್ರಿಮಿಗಳಿದ್ದು ಗರ್ಭಿಣಿಗೆ ಮಾರಕವಾಗುತ್ತವೆ. ಅಷ್ಟೇ ಅಲ್ಲ, ಬೆಕ್ಕಿನ ಕೂದಲು ಯಾವುದೇ ಕಾರಣಕ್ಕೂ ಆಹಾರ ಅಥವಾ ನೀರಿನ ಮೂಲಕ ದೇಹ ಪ್ರವೇಶಿಸಬಾರದು. ಇದು ಭಾರೀ ಅಲರ್ಜಿಕಾರಕವಾಗಿದ್ದು ಗರ್ಭಿಣಿಯ ಆರೋಗ್ಯವನ್ನು ಕೆಡಿಸಬಹುದು.

    ಧ್ಯಾನ ಮಾಡಿ
    * ನಿಮಗೆ ಆರಾಮವೆನಿಸುವ ಭಂಗಿಯಲ್ಲಿ ಚಕ್ಕಲೆಮಕ್ಕಲೆ ಕುಳಿತುಕೊಳ್ಳಿ. ಆರಾಮ ಅನ್ನಿಸದಿದ್ದರೆ ಕುರ್ಚಿಯ ಮೇಲೂ ಕುಳಿತುಕೊಳ್ಳಹುದು. ಸಾಧ್ಯವಾದಷ್ಟು ಬೆನ್ನುಮೂಳೆ ನೆಟ್ಟಗೇ ಇರಲಿ.
    * ಮನಸ್ಸು ಸೆಳೆಯುವ ಯಾವುದೇ ವಸ್ತು ಎದುರಿಗಿರದಂತೆ ನೋಡಿಕೂಳ್ಳಿ. ಕಣ್ಣುಮುಚ್ಚಿಕೊಂಡು ನಿಮ್ಮ ಗಮನವನ್ನು ಒಂದು ವಿಷಯದತ್ತ ಕೇಂದ್ರೀಕರಿಸಿ.
    * ಈ ಸಮಯದಲ್ಲಿ ಕೇವಲ ಧನಾತ್ಮಕ ವಿಚಾರಗಳು ಆವರಿಸಲಿ. ಉದಾಹರಣೆಗೆ ನನಗೆ ಹುಟ್ಟಲಿರುವ ಮಗು ಉತ್ತಮ ವ್ಯಕ್ತಿಯಾಗಿದ್ದು ಸಮಾಜದಲ್ಲಿ ಮನ್ನಣೆ ಮತ್ತು ಗೌರವ ಪಡೆಯುತ್ತಾನೆ/ತ್ತಾಳೆ ಇತ್ಯಾದಿ.
    * ಪ್ರತಿದಿನ ಒಂದೇ ಸಮಯವನ್ನು ಆಯ್ದುಕೊಂಡು ಆ ಪ್ರಕಾರವೇ ಅನುಸರಿಸಿ. ಇದರಿಂದ ಹೆರಿಗೆಯ ಸಮಯದಲ್ಲಿ ಮಾತ್ರವಲ್ಲ ಮುಂದಿನ ಜೀವನದಲ್ಲಿಯೂ ಒತ್ತಡವನ್ನು ಸಮರ್ಥವಾಗಿ ಎದುರಿಸಲು ಸಾಧ್ಯ.

    ಗರ್ಭಪಾತದ ಸಾಧ್ಯತೆ:
    ಗರ್ಭಾವಸ್ಥೆಯಲ್ಲಿ ಉಂಟಾಗುವ ಒತ್ತಡವು ಗರ್ಭಕೋಶದಲ್ಲಿ ರಾಸಾಯನಿಕ ಹಾನಿಯನ್ನುಂಟುಮಾಡುವುದು ಎಂದು ವೈದ್ಯರು ಹೇಳುತ್ತಾರೆ. ಒತ್ತಡ ಉಂಟಾದಾಗ ಕಾರ್ಟಿಕೋಟ್ರೋಪಿನ್ ಎನ್ನುವ ಹಾರ್ಮೋನ್ ಬಿಡುಗಡೆಯಾಗುವುದು. ಈ ಹಾರ್ಮೋನ್‍ಗಳ ಬದಲಾವಣೆಯಿಂದ ಗರ್ಭಕೋಶದಲ್ಲಿ ಅಧಿಕ ಸಂಕೋಚನವನ್ನು ಉಂಟುಮಾಡುವುದು. ಇದು ಬಹುತೇಕ ಸಂದರ್ಭದಲ್ಲಿ ಗರ್ಭವನ್ನು ಕುಗ್ಗಿಸುವುದು ಅಥವಾ ಗರ್ಭಪಾತಕ್ಕೆ ಕಾರಣವಾಗುವುದು. ಹಾಗಾಗಿ ಬಾಹ್ಯ ಪರಿಸ್ಥಿತಿ ಹೇಗೇ ಇರಲಿ, ನಿಮ್ಮ ಮಗುವಿನ ಬೆಳವಣಿಗೆ ಉತ್ತಮವಾಗಿರಬೇಕು ಎಂದು ನೀವು ಬಯಸುವುದಾದರೆ ಒತ್ತಡದಿಂದ ದೂರ ಇರಲು ಪ್ರಯತ್ನಿಸಿ. ಮಾನಸಿಕ ಹಾಗೂ ದೈಹಿಕವಾಗಿ ಆರೋಗ್ಯ ಉತ್ತಮವಾಗಿರಿಸಿಕೊಳ್ಳಲು ಹೇಗಿರಬೇಕು ಎನ್ನುವುದರ ಕುರಿತು ಚಿಂತಿಸಿ.

    ಭ್ರೂಣದ ಮೆದುಳು ಬೆಳವಣಿಗೆ:
    ತಾಯಿಯಲ್ಲಾಗುವ ಒತ್ತಡವು ಮಗುವಿನ ಮಿದುಳು ಬೆಳವಣಿಗೆಯ ಮೇಲೆ ನೇರವಾದ ಪ್ರಭಾವ ಉಂಟಾಗುವುದು ಎಂದು ವೈದ್ಯರು ಹೇಳುತ್ತಾರೆ. ಇದು ಮಗುವಿನ ಮೇಲೆ ದೀರ್ಘ ಕಾಲದ ಪರಿಣಾಮ ಬೀರುವುದು ಎಂದು ಹೇಳಲಾಗುವುದು. ಮಗುವಿನ ಮೆದುಳಿನ ಮೇಲೆ ಉಂಟಾದ ಪ್ರಭಾವಗಳು ಮಗು ಹುಟ್ಟಿದ ತಕ್ಷಣ ತಿಳಿಯದು. ದಿನಕಳೆದಂತೆ ಮಗುವಿನ ಬೆಳವಣಿಗೆ ನಡೆಯುವುದು. ಆಗ ಸಮಸ್ಯೆಗಳನ್ನು ಗುರುತಿಸಬಹುದು. ಇಂತಹ ಮಕ್ಕಳಲ್ಲಿ ಅಧಿಕ ರಕ್ತದ ಒತ್ತಡದಂತಹ ಅಪಾಯ ಉಂಟಾಗಬಹುದು. ಮಕ್ಕಳಲ್ಲಿ ಮಾನಸಿಕ ಬದಲಾವಣೆಗಳು ಚಿಂತನೀಯ ರೀತಿಯಲ್ಲಿ ಉಂಟಾಗುವುದು. ಅಲ್ಲದೆ ಮಕ್ಕಳು ಬೆಳವಣಿಗೆ ಹೊಂದಿದ ನಂತರ ಜೀವನದಲ್ಲೂ ಬಹುಬೇಗ ಅಧಿಕ ಒತ್ತಡಕ್ಕೆ ಒಳಗಾಗುವ ಮಾನಸಿಕ ಶಕ್ತಿಯನ್ನು ಪಡೆದುಕೊಳ್ಳುವರು.

  • ಆರೋಗ್ಯಕ್ಕೆ ಉತ್ತಮವಾದ ರಾಗಿ ದೋಸೆ ಮಾಡೋದು ಹೇಗೆ?

    ಆರೋಗ್ಯಕ್ಕೆ ಉತ್ತಮವಾದ ರಾಗಿ ದೋಸೆ ಮಾಡೋದು ಹೇಗೆ?

    ರಾಗಿ ದೇಹಕ್ಕೆ ಆರೋಗ್ಯಕರ. ಅದರಿಂದ ಮಾಡಿದ ಯಾವುದೇ ತಿಂಡಿ, ತಿಸುಗಳು ಅಷ್ಟೇ ಆರೋಗ್ಯ ಕರವಾಗಿರುತ್ತದೆ. ಶುಗರ್ ರೋಗಿಗಳಿಗೆ ಮತ್ತು ಡಯಟಿಂಗ್ ಮಾಡುವರಿಗೂ ಈ ರಾಗಿಯಿಂದ ತಯಾರಿಸೋ ದೋಸೆ ಉತ್ತಮ. ಜೊತೆಗೆ ರಾಗಿ ದೋಸೆಯನ್ನು ತಕ್ಷಣಕ್ಕೆ ಮಕ್ಕಳಿಗೂ ಮಾಡಿಕೊಡಬಹುದು. ಆದ್ದರಿಂದ ಕಡಿಮೆ ಸಮಯದಲ್ಲಿ ರಾಗಿ ದೋಸೆ ಮಾಡುವ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಾನು:
    1. ರಾಗಿ ಹಿಟ್ಟು – 1 ಕಪ್
    2. ರವೆ – 2 ಟೇಬಲ್ ಚಮಚ
    3. ಅಕ್ಕಿ ಹಿಟ್ಟು – ಅರ್ಧ ಕಪ್
    4. ಮೊಸರು – ಅರ್ಧ ಕಪ್
    5. ಉಪ್ಪು -ರುಚಿಗೆ ತಕ್ಕಷ್ಟು
    6. ಸೋಡ -ಚಿಟಿಕೆ
    7. ಎಣ್ಣೆ – ಅರ್ಧ ಕಪ್

    ಮಾಡುವ ವಿಧಾನ:
    * ಮೊದಲು ರಾಗಿ ಹಿಟ್ಟು, ಅಕ್ಕಿ ಹಿಟ್ಟು, ರವಿ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಸೋಡ ಹಾಕಿ ಮಿಕ್ಸ್ ಮಾಡಿ.
    * ಬಳಿಕ ಮೊಸರು ಹಾಕಿ ಮಿಕ್ಸ್ ಮಾಡಿ.
    * ಸ್ವಲ್ಪ ಸ್ವಲ್ಪ ನೀರು ಹಾಕಿ ದೋಸೆ ಹಿಟ್ಟಿನ ಹದ ಬರುವಾಗೆ ಮಿಕ್ಸ್ ಮಾಡಿ, 15 ನಿಮಿಷ ನೆನೆಸಿಡಿ.
    * ದೋಸೆ ಹಂಚನ್ನು ಬಿಸಿಗೆ ಹಿಡಿ.
    * ನಂತರ ಕಾದಿರುವ ಹಂಚಿನ ಮೇಲೆ ದೋಸೆ ರೀತಿ ಬಿಡಿ.
    * ಹಂಚಿನ ಮೇಲೆ ಬಿಟ್ಟ ರಾಗಿ ದೋಸೆಗೆ ಸುತ್ತಲು ಒಂದು ಚಮಚ ಎಣ್ಣೆ ಚಿಮುಕಿಸಿ.
    * ಅದರ ಮೇಲೆ ಒಂದು ಪ್ಲೇಟ್ ಮುಚ್ಚಿ ಒಂದು ನಿಮಿಷ ಬೇಯಲು ಬಿಡಿ.
    * ಬಳಿಕ ರಾಗಿ ದೋಸೆಯನ್ನು ಉಲ್ಟ ಮಾಡಿ ಬೇಯಿಸಿರಿ.
    * ಬಳಿಕ ಒಂದು ಪ್ಲೇಟಿಗೆ ಹಾಕಿಕೊಂಡು, ಕಾಯಿ ಚಟ್ನಿ ಜೊತೆಗೆ ಸವಿಯಿರಿ.

  • ಉಡುಪಿಯ ಶಿರೂರು ಶ್ರೀಗಳು ವಿಧಿವಶ

    ಉಡುಪಿಯ ಶಿರೂರು ಶ್ರೀಗಳು ವಿಧಿವಶ

    ಉಡುಪಿ: ಇಲ್ಲಿನ ಅಷ್ಠಮಠಾಧೀಶರಲ್ಲಿ ಒಬ್ಬರಾದ ಶಿರೂರು ಮಠಾಧೀಶ ಲಕ್ಷ್ಮೀವರತೀರ್ಥ ಶ್ರೀಗಳು ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ  ವಿಧಿವಶರಾಗಿದ್ದಾರೆ.

    ಬುಧವಾರ ಬೆಳಗ್ಗೆ ಫುಡ್ ಪಾಯ್ಸನ್ ಹಿನ್ನೆಲೆಯಲ್ಲಿ ಮಣಿಪಾಲದ ಕೆಎಂಸಿಗೆ ದಾಖಲಾಗಿದ್ದ ಶ್ರೀಗಳ ಆರೋಗ್ಯ ಬಿಗಡಾಯಿಸಿತ್ತು. ಹೀಗಾಗಿ ಶ್ರೀಗಳನ್ನು ವೆಂಟಿಲೇಟರ್ ನಲ್ಲಿ ಇಡಲಾಗಿತ್ತು. ಅಲ್ಲದೇ ಡ್ರಿಪ್ಸ್ ಕೂಡ ಹಾಕಲಾಗಿತ್ತು.

    ಕಳೆದ ಕೆಲ ತಿಂಗಳುಗಳಿಂದ ಶ್ರೀಗಳಿಗೆ ಆಗಾಗ ಆರೋಗ್ಯ ಸಮಸ್ಯೆ ಎದುರಾಗುತ್ತಲೇ ಇತ್ತು. ಈ ಹಿಂದೆ ಥೈರಾಯ್ಡ್ ಸಮಸ್ಯೆ ಇದ್ದಿದ್ದರಿಂದ ಶಿರೂರು ಶ್ರೀಗಳಿಗೆ ಶಸ್ತ್ರ ಚಿಕಿತ್ಸೆ ನಡೆಸಲಾಗಿತ್ತು. ನಂತರದ ದಿನಗಳಲ್ಲಿ ಪದೇ ಪದೇ ಆಸ್ಪತ್ರೆಗಳಿಗೆ ಚೆಕಪ್ ಗೆ ತೆರಳುತ್ತಿದ್ದ ಶ್ರೀಗಳು ಒಮ್ಮೆ ಗುಣಮುಖರಾದ್ರೆ ಮತ್ತೊಮ್ಮೆ ಅನಾರೋಗ್ಯಕ್ಕೆ ಈಡಾಗುತ್ತಲೇ ಇದ್ದರು.

    ಚುನಾವಣೆ ಸಂದರ್ಭ ನಿರ್ಜಲೀಕರದಿಂದ ಅಸ್ವಸ್ಥರಾಗಿದ್ದರು. ನಿನ್ನೆ ಬೆಳಗ್ಗೆ ಶ್ರೀಗಳನ್ನು ಕೆಎಂಸಿಗೆ ದಾಖಲಿಸಲಾಗಿತ್ತು. ಅವರು ರಕ್ತವಾಂತಿ ಮಾಡಿದ್ದರಿಂದ ಸಂಜೆಯಿಂದಲೇ ಕೃತಕ ಉಸಿರಾಟ ವ್ಯವಸ್ಥೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಇದೀಗ ಆಸ್ಪತ್ರೆಯಲ್ಲೇ ವಿಧಿವಶರಾಗಿದ್ದಾರೆ.

  • ಗರ್ಭಿಣಿಯರು ಸೇವಿಸಬೇಕಾದ 10 ಸಸ್ಯಹಾರಿ ಆಹಾರ

    ಗರ್ಭಿಣಿಯರು ಸೇವಿಸಬೇಕಾದ 10 ಸಸ್ಯಹಾರಿ ಆಹಾರ

    ರ್ಭಿಣಿಯರಿಗೆ ತಮ್ಮ ಡಯಟ್‍ನಲ್ಲಿ ಯಾವ ರೀತಿಯ ಆಹಾರವನ್ನು ಸೇವಿಸಬೇಕು ಎನ್ನುವ ಗೊಂದಲ ಇದ್ದೇ ಇರುತ್ತೆ. ತಾಯ್ತನದ ಖುಷಿಯನ್ನು ಸವಿಯಲು ನಾವು ನಿಮಗೆ ಸಹಾಯ ಮಾಡ್ತಿವಿ. ಹೌದು, ಗರ್ಭಾವಸ್ಥೆಯಲ್ಲಿ ಮಹಿಳೆಯರು ಯಾವ ರೀತಿ ಸಸ್ಯಹಾರಿ ಆಹಾರವನ್ನು ಸೇವಿಸಿದರೇ ಒಳ್ಳೆಯದು ಎನ್ನುವ ಒಂದೊಳ್ಳೆ ಸಸ್ಯಹಾರಿ ಆಹಾರಗಳ ಪಟ್ಟಿ ಇಲ್ಲಿದೆ. ಇದನ್ನು ಅನುಸರಿಸಿ ಉತ್ತಮ ಆರೋಗ್ಯವನ್ನು ನಿಮ್ಮದಾಗಿಸಿಕೊಳ್ಳಿ.

    ಉತ್ತಮ ಪೌಷ್ಠಿಕಾಂಶವನ್ನು ಸಸ್ಯಹಾರ ಆಹಾರಗಳು ಹೊಂದಿರುತ್ತದೆ. ಅದರಲ್ಲಿ ಹೆಚ್ಚಿನ ಪ್ರೊಟೀನ್ ಅಂಶ ಅಡಗಿರುತ್ತದೆ. ಸಸ್ಯಹಾರಿ ಆಹಾರವನ್ನು ಸೇವಿಸುವುದರಿಂದ ಗರ್ಭಿಣಿಯರಿಗೆ ಉತ್ತಮ ಪ್ರೊಟೀನ್ ಸಿಗುತ್ತದೆ ಹಾಗೂ ಮಗುವಿನ ಬೆಳವಣಿಗೆಗೆ ಈ ರೀತಿಯ ಆಹಾರಗಳು ಸಹಾಯಕಾರಿ.

    ಸಸ್ಯಹಾರಿ ಆಹಾರಗಳ ಪಟ್ಟಿ ಈ ಕೆಳಗಿನಂತಿದೆ:

    1. ಒಣ ಹಣ್ಣು:
    ಒಣ ದ್ರಾಕ್ಷಿ, ಗೋಡಂಬಿ, ಪಿಸ್ತಾ, ವಾಲ್‍ನಟ್, ಬಾದಾಮಿ ಇತ್ಯಾದಿಗಳಲ್ಲಿ ಹೆಚ್ಚಿನ ಪ್ರೊಟೀನ್ ಅಂಶ ಅಡಕವಾಗಿರುತ್ತದೆ. ಇವುಗಳ ಸೇವನೆಯಿಂದ ದೇಹಕ್ಕೆ ಅವಶ್ಯಕವಾಗಿರುವ ವಿಟಮಿನ್-ಇ ಅಂಶ ಸಿಗುತ್ತದೆ. ಹಾಗೆಯೇ ನಿಮ್ಮ ತೂಕವನ್ನು ಹೆಚ್ಚಿಸಿ ಉತ್ತಮ ಆರೋಗ್ಯ ನೀಡುತ್ತದೆ.

    2. ತೆಂಗಿನಕಾಯಿ:
    ಇದರಲ್ಲಿ ಆರೋಗ್ಯಕರ ಕೊಬ್ಬಿನ ಅಂಶ ಹೇರಳವಾಗಿರುತ್ತದೆ. ದೇಹಕ್ಕೆ ಬೇಕಾಗುವ ಶಕ್ತಿಯನ್ನು ತೆಂಗಿನಕಾಯಿ ತಿನ್ನುವುದರಿಂದ ಪಡೆಯಬಹುದು. ಇದನ್ನು ನೀವು ನೇರವಾಗಿಯು ತಿನ್ನಬಹುದು, ಇಲ್ಲದಿದ್ದರೆ ಇದರಿಂದ ಚಟ್ನಿ ತಯಾರಿಸಿ ಬೇರೆ ಡಿಶ್ ಗಳ ಜೊತೆಗೆ ಸವಿಯಬಹುದು.

    3. ಧಾನ್ಯಗಳು:
    ಧಾನ್ಯಗಳು ಹಾಗೂ ಬೇಳೆಕಾಳುಗಳಲ್ಲಿ ಹೆಚ್ಚಿನ ಪ್ರೊಟೀನ್ ಇರುತ್ತದೆ. ಇವುಗಳನ್ನು ತಾವು ಸೇವಿಸುವ ಆಹಾರಗಳಲ್ಲಿ ಬಳಸುವುದರಿಂದ ಗರ್ಭಿಣಿಯರಿಗೆ ಉತ್ತಮ ಪ್ರೊಟೀನ್ ದೊರೆಯುತ್ತದೆ.

    4. ಬೀನ್ಸ್:
    ಬೀನ್ಸ್ ಪ್ರೊಟೀನ್ ಜೊತೆಗೆ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಪ್ರತಿದಿನ ಬೀನ್ಸ್ ಸೇವನೆಯಿಂದ ನಮಗೆ ಉತ್ತಮ ಫೈಬರ್ ಅಂಶ ದೊರೆಯುತ್ತದೆ. ಸ್ಟ್ರಿಂಗ್ ಬೀನ್ಸ್, ಹಸಿರು ಬೀನ್ಸ್, ಫಾವಾ ಬೀನ್ಸ್ ಮುಂತಾದ ವಿವಿಧ ಬಗೆಯ ಬೀನ್ಸ್‍ಗಳನ್ನು ಸೇವಿಸಬಹುದು.

    5. ಕ್ಯಾರೆಟ್ (ಗಜ್ಜರಿ):
    ಕ್ಯಾರೆಟ್ ವಿಟಮಿನ್-ಎ ಅಂಶವನ್ನು ಹೊಂದಿರುತ್ತದೆ. ಇದನ್ನು ಗರ್ಭಿಣಿಯರು ತಮ್ಮ ಆಹಾರದಲ್ಲಿ ಬಳಸುವುದು ಒಳ್ಳೆಯದು. ಕ್ಯಾರೇಟ್ ಸೇವನೆಯಿಂದ ನಿಮ್ಮ ಕಣ್ಣುಗಳ ದೃಷ್ಟಿ ಮಾತ್ರವಲ್ಲದೆ ಮಗುವಿನ ದೃಷ್ಟಿಯು ಉತ್ತಮವಾಗುತ್ತದೆ.

    6. ಸೋಯಾ:
    ಗರ್ಭಿಣಿಯರಿಗೆ ಅವಶ್ಯಕವಾಗಿರುವ ಪ್ರೊಟೀನ್ ಅಂಶವನ್ನು ಸೋಯಾ ಹೊಂದಿರುತ್ತದೆ. ಸೋಯಾದಲ್ಲಿ ವಿಟಮಿನ್-ಡಿ ಪೂರಕವಾಗಿರುತ್ತದೆ. ಹೀಗಾಗಿ ಗರ್ಭಿಣಿಯರು ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದು ಒಳ್ಳೆಯದು.

    7. ಮೊಸರು:
    ಮೊಸರು ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ. ಒಳ್ಳೆಯ ಬ್ಯಾಕ್ಟೀರಿಯಾ ಹಾಗೂ ಕ್ಯಾಲ್ಸಿಯಂನ ಒಂದೊಳ್ಳೆ ಮಿಶ್ರಣ ಎಂದರೆ ಮೊಸರು. ಗರ್ಭಿಣಿಯರಲ್ಲಿ ಹೆಚ್ಚಾಗಿ ಎದೆಯುರಿ ಕಾಣಿಸಿಕೊಳ್ಳುತ್ತದೆ. ಮೊಸರು ಸೇವಿಸುವುದರಿಂದ ಎದೆಯುರಿಯನ್ನು ಕಡಿಮೆ ಮಾಡಿಕೊಳ್ಳಬಹುದು.

    8. ಕಿಡ್ನಿ ಬೀನ್ಸ್:
    ಸಸ್ಯಹಾರಿ ಮೂಲವಾದ ಕಿಡ್ನಿ ಬೀನ್ಸ್ ನಲ್ಲಿ ಪ್ರೊಟೀನ್ ಹೇರಳವಾಗಿರುತ್ತದೆ. ಇದು ಮಗುವಿನ ಬೆಳವಣಿಗೆಗೆ ಸಹಾಯಕಾರಿ. ಅಲ್ಲದೇ ಇದು ಗರ್ಭಿಣಿಯರಿಗೆ ಉತ್ತಮ ಆಹಾರವಾಗಿರುತ್ತದೆ.

    9. ಹಸಿರು ತರಕಾರಿಗಳು:
    ಶೂನ್ಯ ಕ್ಯಾಲರಿ ಹಾಗೂ ಹೆಚ್ಚಿನ ಕ್ಯಾಲ್ಸಿಯಂ ಹೊಂದಿರುವ ಅದ್ಭುತ ಆಹಾರವೆಂದರೆ ಅದು ಹಸಿರು ತರಕಾರಿಗಳು. ಪಾಲಕ್, ಬ್ರೊಕಲಿ, ಸೊಪ್ಪು ಇತ್ಯಾದಿಗಳನ್ನು ಅವಶ್ಯವಾಗಿ ಗರ್ಭಿಣಿಯರು ಸೇವಿಸಬೇಕು.

    10. ಪನ್ನೀರ್:
    ಪನ್ನೀರ್ ಹೆಚ್ಚಿನ ಪ್ರೋಟಿನ್ ಹೊಂದಿರುತ್ತದೆ. ಇದರಲ್ಲಿ ಹಾಲಿನ ಅಂಶ ಹಾಗೂ ಕ್ಯಾಲ್ಸಿಯಂ ಅಡಕವಾಗಿರುತ್ತದೆ. ಆದ್ದರಿಂದ ಮಗುವಿನ ಬೆಳವಣಿಗೆಗೆ ಪನ್ನೀರ್ ಸಹಕಾರಿ.

    ತಾಯ್ತನ ಎಂಬುದು ಮಹಿಳೆಯ ಜೀವನದಲ್ಲಿ ಬರುವ ಒಂದು ಅತ್ಯಮೂಲ್ಯವಾದ ಒಂದು ಭಾಗ. ತಾನು ನೋವು ತಿಂದು ಮತ್ತೊಂದು ಜೀವಕ್ಕೆ ಜನ್ಮಕೊಡುವ ಮೂಲಕ ತಾನು ಹೊಸ ಜನ್ಮ ಪಡೆಯುತ್ತಾಳೆ ತಾಯಿ. ಈ ವಿಶೇಷ ಸಮಯದಲ್ಲಿ ಗರ್ಭಿಣಿ ಮಹಿಳೆಯರಿಗೆ ಉತ್ತಮ ಆರೈಕೆ ಹಾಗೂ ಪೌಷ್ಠಿಕ ಆಹಾರವನ್ನು ನೀಡಬೇಕು.

  • ತೂಕ ಕಡಿಮೆ ಮಾಡುತ್ತೆ ಬಾರ್ಲಿ ನೀರು!

    ತೂಕ ಕಡಿಮೆ ಮಾಡುತ್ತೆ ಬಾರ್ಲಿ ನೀರು!

    ಡಿಮೆ ಸಮಯದಲ್ಲಿ ಉತ್ತಮ ಫಲಿತಾಂಶ ಕೊಡುವ ಒಂದು ಅದ್ಭುತ ಉಪಾಯ ಇಲ್ಲಿದೆ. ಅದೇ ಬಾರ್ಲಿ ನೀರು. ಏನಪ್ಪ ಕೇವಲ ಬಾರ್ಲಿ ನೀರು ಸೇವನೆಯಿಂದ ತೂಕ ಕಡಿಮೆ ಆಗುತ್ತಾ? ಅಂತ ನಿಮಗೆ ಡೌಟ್ ಇರಬಹುದು ಆದ್ರೆ ನಿಜವಾಗಿಯು ಇದು ಸತ್ಯ.

    ತೂಕ ಕಡಿಮೆ ಮಾಡಿಕೊಳ್ಳುವುದು ಎಂದರೆ ರುಚಿಕರವಾದ ತಿಂಡಿ ತಿನಿಸುಗಳ ಆಸೆ ಬಿಟ್ಟು, ಆರೋಗ್ಯಕರ ಆಹಾರ ಪದ್ಧತಿಯನ್ನು ಸ್ವಾಗತಿಸುವುದು ಎಂದು ಎಲ್ಲರಿಗೂ ಗೊತ್ತು. ತೂಕ ಕಡಿಮೆ ಮಾಡಿಕೊಳ್ಳಲು ಬಹಳಷ್ಟು ಜನರು ಡಯಟ್, ವ್ಯಾಯಾಮ ಹೀಗೆ ಹಲವು ಪದ್ಧತಿಯನ್ನು ಪಾಲಿಸುತ್ತಾರೆ. ಆದರೆ ಇದೆಲ್ಲ ಮಾಡಲು ಸಾಕಷ್ಟು ಸಮಯವನ್ನು ತ್ಯಾಗಮಾಡಬೇಕು. ಆದ್ರೆ ಬಾರ್ಲಿ ನೀರು ಸೇವನೆಯಿಂದ ಸುಲಭವಾಗಿ ನಿಮಗೆ ಬೇಡವಾದ ಕೊಲೆಸ್ಟ್ರಾಲ್ ಹಾಗೂ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು.

    ಬಾರ್ಲಿಯ ಪ್ರಯೋಜನಗಳು:
    ಬಾರ್ಲಿಯಲ್ಲಿರುವ ಬೀಟಾ ಗ್ಲುಕನ್ ಅಂಶದಿಂದ ದೇಹದಲ್ಲಿರುವ ಬೇಡದ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ. ಬಾರ್ಲಿಯಲ್ಲಿರುವ ಫೈಬರ್ ಅಂಶಗಳು ಕೊಲೆಸ್ಟ್ರಾಲ್ ಮಟ್ಟವನ್ನು ಪರಿಶೀಲನೆ ಮಾಡಿ ಉತ್ತಮ ಆರೋಗ್ಯ ನೀಡುತ್ತದೆ. ಪ್ರತಿನಿತ್ಯ ಬಾರ್ಲಿ ನೀರಿನ ಸೇವನೆ ಮಾಡುವುದರಿಂದ ದೇಹದಲ್ಲಿರುವ ಟಾಕ್ಸಿನ್‍ಗಳನ್ನು ದೇಹದಿಂದ ಮೂತ್ರದ ಮೂಲಕ ಹೊರಹಾಕುತ್ತದೆ. ಮೂತ್ರಪಿಂಡದ ಸಮಸ್ಯೆಗಳನ್ನು ನಿವಾರಿಸುತ್ತದೆ ಹಾಗೂ ದೇಹದ ಆರೋಗ್ಯವನ್ನು ಕಾಪಾಡುತ್ತದೆ.

    ಬಾರ್ಲಿ ನೀರು ತಯಾರಿಸುವ ವಿಧಾನ:
    1. ಮೊದಲು ಮೂರು ಲೋಟ ನೀರಿಗೆ ಒಂದು ಲೋಟ ಬಾರ್ಲಿ ಧಾನ್ಯ ಪಾತ್ರೆಯಲ್ಲಿ ಹಾಕಿ ಕುದಿಸಬೇಕು.
    2. ಕುದಿಸಿದ ನೀರನ್ನು ಧಾನ್ಯದಿಂದ ಬೇರೆ ಮಾಡಿ, ಕುದಿಸಿದ ನೀರನ್ನು ತಣ್ಣಗಾಗಲು ಬಿಡಿ.
    3. ಬರೀ ಬಾರ್ಲಿ ನೀರನ್ನು ನೇರವಾಗಿ ಸೇವಿಸಲು ಆಗದಿದ್ದರೆ, ಅದಕ್ಕೆ ಕಿತ್ತಳೆ, ಜೇನು ಅಥವಾ ನಿಂಬೆ ಹಣ್ಣಿನ ರಸವನ್ನು ಸೇರಿಸಿ ಕುಡಿಯಬಹುದು. ಹಾಗೆಯೇ ಬಾರ್ಲಿ ನೀರಿಗೆ ಸ್ವಲ್ಪ ದಾಲ್ಚಿನ್ನಿ ಅಥವಾ ಶುಂಠಿಯನ್ನು ಸ್ವಾಧಕ್ಕಾಗಿ ಬೆರಸಿ ಕುಡಿಯಬಹುದು.
    4. ನಿಮಗೆ ಸಿಹಿ ಬೇಕಾದರೆ ಬಾರ್ಲಿ ನೀರಿಗೆ ಸ್ವಲ್ಪ ಬ್ರೌನ್ ಶುಗರ್‍ನ್ನು ಸೇರಿಸಿ ಕುಡಿಯಬಹುದು. ಅದು ತೂಕ ಹೆಚ್ಚು ಮಾಡುವುದಿಲ್ಲ.
    5. ಬಾರ್ಲಿ ನೀರು ಹೆಚ್ಚು ಕಾಲ ಉಳಿಯಬೇಕು ಎಂದರೆ ಅದನ್ನು ಫ್ರಿಡ್ಜ್ ನಲ್ಲಿಟ್ಟು ಸಂಗ್ರಹಿಸಿ ಇಡಬಹುದು.

    ಹೇಗೆ ತೂಕ ಕಡಿಮೆ ಮಾಡುತ್ತದೆ:
    ಬಾರ್ಲಿ ನೀರು ಉತ್ತಮ ಫೈಬರ್ ಸತ್ವವನ್ನು ಹೊಂದಿರುವುದರಿಂದ ಹೊಟ್ಟೆ ಭಾಗದಲ್ಲಿ ಇರುವ ಕೊಬ್ಬಿನ ಅಂಶವನ್ನು ಕಡಿಮೆ ಮಾಡುತ್ತದೆ. ದೀರ್ಘಕಾಲದ ತನಕ ಹಸಿವಾಗದ ರೀತಿ ಮಾಡಿ ಜಂಕ್ ಅಥವಾ ಕರಿದ ಆಹಾರಗಳಿಂದ ನಿಮ್ಮನ್ನು ದೂರವಿರುವಂತೆ ಮಾಡುತ್ತದೆ. ಫೈಬರ್ ಅಂಶವು ಜೀರ್ಣ ಶಕ್ತಿ ಹೆಚ್ಚಿಸುವುದರ ಜೊತೆಗೆ ಬಾರ್ಲಿ ನೀರನ್ನು ಕುಡಿದರೆ ಕ್ಯಾಲೋರಿ ಅಂಶ ಕಡಿಮೆಯಾಗಿ ಉತ್ತಮ ಆರೋಗ್ಯ ಸಿಗುತ್ತದೆ.

    ಆರೋಗ್ಯಕರವಾಗಿ ತೂಕ ಕಡಿಮೆ ಮಾಡಿಕೊಳ್ಳಲು ನಿಮ್ಮ ದಿನನಿತ್ಯದ ವ್ಯಾಯಾಮ ಹಾಗೂ ಡಯಟ್‍ನೊಂದಿಗೆ ಬಾರ್ಲಿ ನೀರನ್ನು ಸೇವಿಸಲು ಆರಂಭಿಸಿ ಉತ್ತಮ ಆರೋಗ್ಯವನ್ನು ಹೊಂದಿ.

  • ಮಳೆಗಾಲದಲ್ಲಿ ಪಾಲನೆ ಮಾಡಬೇಕಾದ ಆರೋಗ್ಯ ಸೂತ್ರಗಳು

    ಮಳೆಗಾಲದಲ್ಲಿ ಪಾಲನೆ ಮಾಡಬೇಕಾದ ಆರೋಗ್ಯ ಸೂತ್ರಗಳು

    ಹೊರಗೆ ಮಳೆ ಬರುತ್ತಿದೆ ಎಂದರೆ ಹಾಸಿಗೆ ಬಿಟ್ಟು ಏಳಲು ಮನಸ್ಸೇ ಆಗುವುದಿಲ್ಲ. ಬಿಸಿ ಬಿಸಿ ಬಜ್ಜಿ, ಬೋಂಡಾ, ಸಮೋಸ, ಪಾನಿಪುರಿ, ಗೋಬಿ, ಬಾಯಿ ಚಪ್ಪರಿಸುವ ತಿಂಡಿಗಳನ್ನು ತಿನ್ನಬೇಕೆನಿಸುತ್ತದೆ. ಹಾಗಾದ್ರೆ ಸ್ವಲ್ಪ ತಾಳಿ, ನೀವು ಮಳೆಗಾಲದಲ್ಲಿ ಮನಬಂದಂತೆ ಹೊರಗಿನ ತಿಂಡಿ, ಬೀದಿಬದಿಯ ತಿನಿಸುಗಳನ್ನು ತಿಂದರೆ ವೈದ್ಯರೇ ಬಳಿ ಹೋಗೋದು ಗ್ಯಾರೆಂಟಿ.

    ಜ್ವರ, ಶೀತ, ನೆಗಡಿ ಹೀಗೆ ಅನೇಕ ರೋಗಗಳು ನಿಮ್ಮನ್ನು ಆವರಿಸಬಹುದು. ಮಳೆಗಾಲದಲ್ಲಿ ನೀರಿನಲ್ಲಿ ಸೂಕ್ಷ್ಮಾಣುಗಳು ಉತ್ಪತ್ತಿ ಆಗುತ್ತದೆ. ನೀರಿನ ಮೂಲಕ ರೋಗಾಣುಗಳು ನಿಮ್ಮನ್ನು ಅಟ್ಯಾಕ್ ಮಾಡಲು ಹೊಂಚು ಹಾಕುತ್ತಿರುತ್ತದೆ. ಆದ್ದರಿಂದ ಈ ಕಾಲದಲ್ಲಿ ನೀವು ಎಚ್ಚರಿಕೆಯಿಂದಿರಬೇಕು. ಅದರಲ್ಲೂ ನೀರಿನ ವಿಚಾರದಲ್ಲಿ ಸ್ವಲ್ಪ ಕಾಳಜಿ ಹೆಚ್ಚಿದರೆ ಒಳ್ಳೆಯದು.

    ಮಳೆಗಾಲದಲ್ಲಿ ಪಾಲಿಸಬೇಕಾದ ಕೆಲವು ಟಿಪ್ಸ್ ಗಳು ಹೀಗಿವೆ

    * ಈ ಕಾಲದಲ್ಲಿ ರೋಗಗಳು ಹೆಚ್ಚಾಗಿ ನೀರಿನಿಂದ ಹರಡುತ್ತದೆ. ಹೀಗಾಗಿ ನೀರನ್ನು ಕುದಿಸಿ, ಆರಿಸಿ ಕುಡಿಯಿರಿ.
    * ದೇಹದಲ್ಲಿ ರೋಗ ನಿರೋಧಕ ಶಕ್ತಿ ಕುಗ್ಗುತ್ತದೆ. ಹೀಗಾಗಿ ಕಷಾಯ, ಹರ್ಬಲ್ ಟೀ ಸೇವಿಸಿ, ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುವಂತೆ ಮಾಡುತ್ತದೆ.
    * ರಸ್ತೆ ಬದಿಯ ತಿಂಡಿ ತಿನಿಸುಗಳಿಂದ ಸಾಧ್ಯವಾದಷ್ಟು ದೂರವಿರಿ.
    * ಬಿಸಿಯಾದ ಆಹಾರ ಸೇವಿಸಿ, ಹಸಿರು ಸೊಪ್ಪು, ತಾಜಾ ತರಕಾರಿಗಳ ಸೇವನೆ ಆರೋಗ್ಯಕರ.

    * ತರಕಾರಿಗಳನ್ನು ನೀರಿನಲ್ಲಿ ಚೆನ್ನಾಗಿ ತೊಳೆದು ಅಡುಗೆ ಮಾಡಲು ಬಳಸಿ.
    * ಬೆಳಗ್ಗೆ ಮನೆಯಿಂದ ಹೊರಡುವಾಗ ಸ್ನಾನ ಮಾಡಿದ್ದರೂ, ಮತ್ತೊಮ್ಮೆ ಸಂಜೆ ಸ್ನಾನ ಮಾಡಿ. ಇದ್ರಿಂದ ಬೆವರಿನಿಂದ ಬರಬಹುದಾದ ಸೋಂಕಿನಿಂದ ರಕ್ಷಣೆ ಸಿಗುತ್ತದೆ.
    * ಚಳಿ ಇರುವಾಗ ಹೆಚ್ಚು ಬಾಯಾರಿಕೆ ಆಗುವುದಿಲ್ಲ. ಆದರೂ ನೀವು ನೀರು ಕುಡಿಯುವುದನ್ನು ಕಡಿಮೆ ಮಾಡಲೇಬೇಡಿ.
    * ಮಳೆಯಲ್ಲಿ ಹೆಚ್ಚಾಗಿ ಹೊರಗೆ ಹೋಗಬೇಡಿ, ಇದ್ರಿಂದ ವೈರಲ್ ರೋಗಗಳು ಬರುವ ಸಾಧ್ಯತೆ ಹೆಚ್ಚು.

    * ಮನೆಯಲ್ಲಿ ತೇವ ಅಥವಾ ಒದ್ದೆ ಇರುವ ಗೋಡೆಗಳಿದ್ದರೆ ಶಿಲೀಂದ್ರಗಳ ಅವಾಸಸ್ಥಾನವಾಗುತ್ತೆ. ಉಸಿರಾಟ ಸಮಸ್ಯೆ ಇರುವವರು ಎಚ್ಚರದಿಂದಿರಿ.
    * ಪದೇ ಪದೇ ಕೊಳೆ ಇರುವ, ತೊಳೆಯದ ಕೈಗಳಿಂದ ಕಣ್ಣುಗಳನ್ನು ಮುಟ್ಟಿಕೊಳ್ಳಬೇಡಿ. ವೈರಸ್ ಹರಡಬಹುದು.
    * ಮನೆಯಲ್ಲಿ ಮಕ್ಕಳಿದ್ದರೆ ಅವರು ತಿನ್ನುವ ಆಹಾರ, ಕುಡಿಯುವ ನೀರಿನ ಬಗ್ಗೆ ಗಮನ ವಹಿಸಿ.
    * ಮಕ್ಕಳನ್ನು ನೀರಿನಲ್ಲಿ ಆಡಲು & ಮಳೆಯಲ್ಲಿ ನೆನೆಯಲು ಬಿಡಬೇಡಿ.. ಬಟ್ಟೆ ಒದ್ದೆಯಾಗಿರದಂತೆ ನೋಡಿಕೊಳ್ಳಿ.
    * ನಿಮ್ಮ ಸುತ್ತಮುತ್ತಲಿನ ಪರಿಸರ ಕಲುಷಿತಗೊಂಡಿದ್ದರೆ ರೋಗ ಕಟ್ಟಿಟ್ಟಬುತ್ತಿ. ಹೀಗಾಗಿ ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಿ. ಇದ್ರಿಂದ ಸೊಳ್ಳೆ, ನೊಣಗಳು ದಾಳಿ ತಪ್ಪುತ್ತದೆ.

  • ದೇವೇಗೌಡ್ರ ಮಾತಿನಿಂದಾಗಿ ಸಿಎಂ ಎಚ್.ಡಿ ಕುಮಾರಸ್ವಾಮಿ ಇನ್ಮುಂದೆ ಕೂಲ್ ಕೂಲ್!

    ದೇವೇಗೌಡ್ರ ಮಾತಿನಿಂದಾಗಿ ಸಿಎಂ ಎಚ್.ಡಿ ಕುಮಾರಸ್ವಾಮಿ ಇನ್ಮುಂದೆ ಕೂಲ್ ಕೂಲ್!

    ಬೆಂಗಳೂರು: ಬಜೆಟ್ ಮಂಡನೆ ಮತ್ತು ಸಚಿವ ಸಂಪುಟ ರಚನೆ, ಜನತಾ ದರ್ಶನ ಹೀಗೆ ಪ್ರತಿದಿನ ಬ್ಯುಸಿಯಾಗಿದ್ದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ತಂದೆ ಹೇಳಿದ ಮಾತಿನಂತೆ ರಿಲ್ಯಾಕ್ಸ್ ಆಗಿದ್ದಾರೆ.

    ಮಾಜಿ ಪ್ರಧಾನಿ ಮತ್ತು ಜೆಡಿಎಸ್ ವರಿಷ್ಠ ಅಧಿಕಾರಿ ಎಚ್.ಡಿ. ದೇವೇಗೌಡ ಅವರು, ನೀನು ಆರೋಗ್ಯದ ಕಡೆ ಗಮನ ಕೊಡು. ಆಡಳಿತ, ಆರೋಗ್ಯ ಇದರ ಬಗ್ಗೆ ಮಾತ್ರ ನಿನ್ನ ಗಮನ ಇರಲಿ ಎಂದು ಮಗನಿಗೆ ಸಲಹೆ ಕೊಟ್ಟಿದ್ದಾರೆ ಎನ್ನಲಾಗಿದೆ.

    ಸರ್ಕಾರ ಎಷ್ಟು ದಿನ ಇರುತ್ತೋ, ಬಿಡುತ್ತೋ ಅನ್ನೋ ಚಿಂತೆ ನಿನಗೆ ಬೇಡ. ನಾನು ಎಲ್ಲವನ್ನು ನೋಡಿಕೊಳ್ಳುತ್ತೀನಿ. ಮುಂದೆ ನಿಂತು ನಾನು ಲೀಡ್ ಮಾಡ್ತೀನಿ. ನೀನು ನಿನ್ನ ಆರೋಗ್ಯ ನೋಡಿಕೋ. ಮೈತ್ರಿ ಸರ್ಕಾರದ ರಾಜಕಾರಣ ನನಗೆ ಬಿಡು. ಕಾಂಗ್ರೆಸ್ ಹೈಕಮಾಂಡ್ ಹತ್ತಿರ ನಾನು ಮಾತನಾಡುತ್ತೇನೆ. ರಾಜ್ಯ ನಾಯಕರು, ಶಾಸಕರ ಬಗ್ಗೆ ತಲೆಕೆಡಿಸಿಕೊಳ್ಳಬೇಡ. ಅವರ ರಿಮೋಟ್ ನನ್ ಹತ್ರ ಇದೆ ಎಂದು ಕುಮಾರಸ್ವಾಮಿಗೆ ತಂದೆ ದೇವೇಗೌಡರು ಉಪದೇಶ ಮಾಡಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

  • ಭದ್ರತಾ ಶಿಷ್ಟಾಚಾರ ಉಲ್ಲಂಘಿಸಿ ಏಮ್ಸ್ ಗೆ ತೆರಳಿ ಮೋದಿಯಿಂದ ವಾಜಪೇಯಿ ಭೇಟಿ

    ಭದ್ರತಾ ಶಿಷ್ಟಾಚಾರ ಉಲ್ಲಂಘಿಸಿ ಏಮ್ಸ್ ಗೆ ತೆರಳಿ ಮೋದಿಯಿಂದ ವಾಜಪೇಯಿ ಭೇಟಿ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಭದ್ರತಾ ಶಿಷ್ಟಾಚಾರವನ್ನು ಉಲ್ಲಂಘಿಸಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಭೇಟಿ ಮಾಡಿದ್ದಾರೆ.

    ಮೋದಿ ಭಾನುವಾರ ರಾತ್ರಿ 9.05ಕ್ಕೆ ಏಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಅಟಲ್ ಬಿಹಾರಿ ವಾಜಪೇಯಿ ಅವರ ಆರೋಗ್ಯವನ್ನು ವಿಚಾರಿಸಿ 9.25ಕ್ಕೆ ತೆರಳಿದ್ದಾರೆ.

    ಸಾಧಾರಣವಾಗಿ ಪ್ರಧಾನಿ ಭೇಟಿ ವಿಚಾರವನ್ನು ಮುಂಚಿತವಾಗಿ ತಿಳಿಸಲಾಗುತ್ತದೆ. ಆದರೆ ಭಾನುವಾರ ಪ್ರಧಾನಿ ಭೇಟಿ ನೀಡುತ್ತಿದ್ದ ವಿಚಾರ ಏಮ್ಸ್ ವೈದ್ಯರಿಗೆ ತಿಳಿದಿರಲಿಲ್ಲ. ಅಷ್ಟೇ ಅಲ್ಲದೇ ಯಾವುದೇ ಭದ್ರತಾ ಸಿಬ್ಬಂದಿಯೂ ಅವರ ಜೊತೆ ಇರಲಿಲ್ಲ ಎಂದು ವಾಹಿನಿಯೊಂದು ವರದಿ ಮಾಡಿದೆ.

    ಮೋದಿ ಭೇಟಿ ನೀಡಿ ತೆರಳಿದ ನಂತರ ಏಮ್ಸ್ ಆಡಳಿತಕ್ಕೆ ಪ್ರಧಾನಿ ಆಗಮಿಸಿದ ವಿಚಾರ ಗೊತ್ತಾಗಿದೆ. 7 ಲೋಕಮಾನ್ಯ ತಿಲಕ್ ರಸ್ತೆಯ ಮೂಲಕ ಏಮ್ಸ್ ಆಸ್ಪತ್ರೆಗೆ ಕಾರಿನಲ್ಲಿ ತೆರಳುತ್ತಿದ್ದಾಗ ಸಂಚಾರ ನಿಯಮನ್ನು ಮೋದಿ ಪಾಲಿಸಿದ್ದರು. ಎಲ್ಲ ಟ್ರಾಫಿಕ್ ಸಿಗ್ನಲ್ ನಲ್ಲಿ ಕಾರು ನಿಂತುಕೊಂಡಿತ್ತು ಎಂದು ವರದಿಯಾಗಿದೆ.

    ವಾಜಪೇಯಿಯವರು ಮೂತ್ರನಾಳದ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದು, ಸದ್ಯ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ಚಿಕಿತ್ಸೆಗೆ ಸ್ಪಂದಿಸುತ್ತಿದ್ದು ಶೀಘ್ರವೇ ಗುಣಮುಖರಾಗಲಿದ್ದಾರೆ. ಸೋಂಕು ಗುಣಮುಕ್ತವಾಗುವವರೆಗೂ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಮುಂದುವರಿಯಲಿದೆ ಎಂದು ಏಮ್ಸ್ ಈ ಹಿಂದೆ ತಿಳಿಸಿತ್ತು. ಜೂನ್ 11 ರಂದು ವಾಜಪೇಯಿ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು.

  • ಶ್ರೀ ಶಿವಕುಮಾರ ಸ್ವಾಮೀಜಿಗಳ ಆರೋಗ್ಯದಲ್ಲಿ ಚೇತರಿಕೆ- ಒಂದು ವಾರ ಭಕ್ತರಿಗೆ ದರ್ಶನವಿಲ್ಲ

    ಶ್ರೀ ಶಿವಕುಮಾರ ಸ್ವಾಮೀಜಿಗಳ ಆರೋಗ್ಯದಲ್ಲಿ ಚೇತರಿಕೆ- ಒಂದು ವಾರ ಭಕ್ತರಿಗೆ ದರ್ಶನವಿಲ್ಲ

    ತುಮಕೂರು: ಬೆಂಗಳೂರಿನ ಕೆಂಗೇರಿಯಲ್ಲಿರೋ ಬಿಜಿಎಸ್ ಆಸ್ಪತ್ರೆಯಿಂದ ಗುರುವಾರ ಡಿಸ್ಚಾರ್ಜ್ ಆದ ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ.

    ಎಂದಿನಂತೆ ಹಳೇ ಮಠದ ಕೊಠಡಿಯಲ್ಲಿ ಶ್ರೀಗಳು ವಿಶ್ರಾಂತಿ ಪಡೆಯುತ್ತಿದ್ದಾರೆ. ನಸುಕಿನ ಜಾವವೇ ಎದ್ದಿರುವ ಶ್ರೀಗಳು, ಇಷ್ಟಲಿಂಗ ಪೂಜೆಯಲ್ಲಿ ನಿರತರಾಗಿದ್ದಾರೆ.

    ಇನ್ನು ಮೂರ್ನಾಲ್ಕು ದಿನ ಶ್ರೀಮಠದಲ್ಲೇ ನಡೆದಾಡುವ ದೇವರಿಗೆ ಚಿಕಿತ್ಸೆ ಮುಂದುವರೆಸಲಾಗುತ್ತದೆ. ಶ್ರೀಗಳ ವಿಶ್ರಾಂತಿ ಕೊಠಡಿಯಲ್ಲಿ ಎಲ್ಲಾ ವೈದ್ಯಕೀಯ ವ್ಯವಸ್ಥೆ ಮಾಡಲಾಗಿದೆ. ನಾಲ್ಕು ವೈದ್ಯರ ತಂಡ ಶ್ರೀಗಳ ಆರೋಗ್ಯದ ಬಗ್ಗೆ ನಿಗಾವಹಿಸಲಿದ್ದಾರೆ. ಹೀಗಾಗಿ ಒಂದು ವಾರಗಳ ಕಾಲ ಶ್ರೀಗಳ ದರ್ಶನ ಲಭ್ಯವಿರುವುದಿಲ್ಲ. ಭಕ್ತರು ಸಹಕರಿಸಬೇಕಾಗಿ ವೈದ್ಯರು ಮನವಿ ಮಾಡಿದ್ದಾರೆ.

    ಪಿತ್ತಕೋಶಕ್ಕೆ ಸ್ಟಂಟ್ ಅಳವಡಿಸಿ ಆರು ತಿಂಗಳು ಕಳೆದ ಹಿನ್ನೆಲೆಯಲ್ಲಿ ಶತಾಯುಷಿ ತುಮಕೂರಿನ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳು, ಜನರಲ್ ಚೆಕ್ ಅಪ್ ಗಾಗಿ ಬಿಜಿಎಸ್ ಆಸ್ಪತ್ರೆಗೆ ನಿನ್ನೆ ಆಗಮಿಸಿದ್ದರು. ಮುಂಜಾನೆ ಆಗಮಿಸಿದ ಶ್ರೀಗಳು ಕಾರಿನಿಂದ ಇಳಿದು ವ್ಹೀಲ್ ಚೇರ್ ನಂತಹ ಸೌಲಭ್ಯ ನಿರಾಕರಿಸಿ ನಡೆದುಕೊಂಡೇ ಆಸ್ಪತ್ರೆ ಒಳಗೆ ಹೋಗಿದ್ದರು.

    ಜನವರಿ 27 ರಂದು ಬಿಜಿಎಸ್‍ಗೆ ದಾಖಲಾಗಿದ್ದ ಶ್ರೀಗಳಿಗೆ ಮೂರು ಸ್ಟಂಟ್ ಅಳವಡಿಸಲಾಗಿತ್ತು. ಅದಕ್ಕೂ ಮುನ್ನ 5 ಸ್ಟಂಟ್ ಸೇರಿ ಒಟ್ಟು 8 ಸ್ಟಂಟ್ ಅಳವಡಿಸಲಾಗಿದೆ. ಸ್ಟಂಟ್ ಅಳವಡಿಸಿದ ಆರು ತಿಂಗಳಾದ ಕಾರಣ ಜನರಲ್ ಚೆಕ್ ಅಪ್ ಗಾಗಿ ಶ್ರೀಗಳು ಆಸ್ಪತ್ರೆಗೆ ಚಿಕಿತ್ಸೆಗೆ ಆಗಮಿಸಿದ್ದು, ಡಾ. ರವೀಂದ್ರ ನೇತೃತ್ವದಲ್ಲಿ ವೈದ್ಯಕೀಯ ತಪಾಸಣೆ ನಡೆಸಿದ್ದರು.