Tag: health

  • ನಡೆದಾಡುವ ದೇವರ ಆರೋಗ್ಯದಲ್ಲಿ ಚೇತರಿಕೆ – ಮಠಕ್ಕೆ ವಾಪಸ್ ಸಾಧ್ಯತೆ

    ನಡೆದಾಡುವ ದೇವರ ಆರೋಗ್ಯದಲ್ಲಿ ಚೇತರಿಕೆ – ಮಠಕ್ಕೆ ವಾಪಸ್ ಸಾಧ್ಯತೆ

    ಚೆನ್ನೈ: ನಡೆದಾಡುವ ದೇವರು ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ಇನ್ನು ಎರಡು ದಿನದಲ್ಲಿ ಡಿಸ್ಚಾರ್ಜ್ ಆಗುವ ಸಾಧ್ಯತೆಯಿದೆ.

    ಸಿದ್ದಗಂಗಾ ಶ್ರೀಗಳು ಚೆನ್ನೈನ ರೇಲಾ ಆಸ್ಪತ್ರೆಗೆ ದಾಖಲಾಗಿ ಇಂದಿಗೆ 13 ದಿನ ಕಳೆದಿದೆ. ಶ್ರೀಗಳಿಗೆ ಶಸ್ತ್ರಚಿಕಿತ್ಸೆ ನಡೆದ ಬಳಿಕ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ಇಂದು ಅಥವಾ ನಾಳೆ ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ. ಈ ಸಂಬಂಧ ಇಂದು ವೈದ್ಯರು ನಿರ್ಧಾರ ಕೈಗೊಳ್ಳಲಿದ್ದಾರೆ. ಬಹುತೇಕ ಇಂದು ಶ್ರೀಗಳು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಸಾಧ್ಯತೆಯಿದ್ದು, ನಂತರ ಶ್ರೀಗಳು ಮಠದಲ್ಲೇ ವಿಶ್ರಾಂತಿ ಪಡೆಯಲಿದ್ದಾರೆ ಎಂದು ಕಿರಿಯ ಶ್ರೀಗಳು ಹೇಳಿದ್ದಾರೆ.

    ಮಂಗಳವಾರ ಶ್ರೀಗಳನ್ನ ವಾರ್ಡ್ ಗೆ ಶಿಫ್ಟ್ ಮಾಡಲಾಗಿದ್ದು, ಎಂದಿನಂತೆ ಇಷ್ಟಲಿಂಗ ಪೂಜೆ ಮಾಡಿದ್ದಾರೆ. ದ್ರವರೂಪದ ಆಹಾರವನ್ನ ಸೇವಿಸಿದ್ದಾರೆ. ಸದ್ಯಕ್ಕೆ ಶ್ರೀಗಳು ಸಂಪೂರ್ಣ ಗುಣಮುಖರಾಗಲು ಕೆಲವು ಸಮಯವಕಾಶ ಬೇಕಾಗಿದ್ದು, ಅಗತ್ಯ ಚಿಕಿತ್ಸೆಯನ್ನ ಸಿದ್ದಗಂಗಾ ಆಸ್ಪತ್ರೆಯಲ್ಲೇ ನೀಡಲು ಸಿದ್ಧತೆ ನಡೆದಿದೆ ಎಂದು ತಿಳಿದು ಬಂದಿದೆ.

    ಒಂದು ವೇಳೆ ಶ್ರೀಗಳು ಇಂದು ಡಿಸ್ಚಾರ್ಜ್ ಆದರೆ ಏರ್ ಅಂಬುಲೆನ್ಸ್ ಮೂಲಕ ಹೆಚ್‍ಎಎಲ್‍ಗೆ ಬಂದಿಳಿಯಲಿದ್ದಾರೆ. ಹೆಚ್‍ಎಎಲ್‍ನಿಂದ ನೇರವಾಗಿ ಸಿದ್ದಗಂಗಾ ಮಠಕ್ಕೆ ತೆರಳಲಿದ್ದು, ಅಲ್ಲಿ ಚಿಕಿತ್ಸೆ ಮುಂದುವರಿಯಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ- ಡಿಸ್ಚಾರ್ಜ್ ಬಗ್ಗೆ ಶೀಘ್ರವೇ ನಿರ್ಧಾರ

    ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ- ಡಿಸ್ಚಾರ್ಜ್ ಬಗ್ಗೆ ಶೀಘ್ರವೇ ನಿರ್ಧಾರ

    ಚೆನ್ನೈ: ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಚೆನ್ನೈನ ರೇಲಾ ಆಸ್ಪತ್ರೆಯಲ್ಲಿ ಪಿತ್ತಕೋಶ ಸೋಂಕಿನ ಆಪರೇಷನ್ ಗೆ ಒಳಗಾಗಿದ್ದ ಸಿದ್ದಗಂಗಾ ಶ್ರೀಗಳ ಆರೋಗ್ಯ ಸ್ಥಿರವಾಗಿದೆ.

    ಮಂಗಳವಾರದಿಂದ ಶ್ರೀಗಳು ದ್ರವರೂಪದ ಆಹಾರವನ್ನು ಸೇವಿಸುತ್ತಿದ್ದಾರೆ. ಕಳೆದ ಮೂರು ದಿನಗಳಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶ್ರೀಗಳನ್ನು ಇಂದು ಸ್ಪೆಷಲ್ ವಾರ್ಡ್ ಗೆ ಶಿಫ್ಟ್ ಮಾಡುವ ಸಾಧ್ಯತೆ ಇದೆ. ಸ್ವಲ್ಪ ಮಟ್ಟಿಗೆ ಇಂದು ವೈದ್ಯರು ಶ್ರೀಗಳನ್ನು ವಾಕಿಂಗ್ ಮಾಡಿಸುವ ಸಾಧ್ಯತೆ ಇದೆ.

    ಈಗಾಗಲೇ ದ್ರವ ರೂಪದ ಆಹಾರವನ್ನು ನೀಡಿರೋ ವೈದ್ಯರು, ಇಂದು ಸಹ ದ್ರವರೂಪದ ಆಹಾರವನ್ನು ಮುಂದುವರಿಸಲಿದ್ದಾರೆ. ಇಂದು ಬೆಳೆಗ್ಗೆ ಮತ್ತೊಮ್ಮೆ ವಿವಿಧ ರೀತಿಯ ಪರೀಕ್ಷೆಗಳನ್ನು ವೈದ್ಯರು ಮಾಡಲಿದ್ದಾರೆ. ವೈದ್ಯರು ಶ್ರೀಗಳನ್ನು ಯಾವಾಗ ಡಿಸ್ಚಾರ್ಜ್ ಮಾಡಬೇಕು ಎನ್ನುವುದರ ಬಗ್ಗೆ ನಿರ್ಧಾರ ಮಾಡಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶ್ರೀರಾಮುಲು ಇದ್ದಕ್ಕಿದ್ದಂತೆ ಸೈಲೆಂಟ್ ಆಗಿದ್ದು ಏಕೆ – ಪ್ರಶ್ನೆಗೆ ಉತ್ತರ ಕೊಟ್ಟ ಶೆಟ್ಟರ್

    ಶ್ರೀರಾಮುಲು ಇದ್ದಕ್ಕಿದ್ದಂತೆ ಸೈಲೆಂಟ್ ಆಗಿದ್ದು ಏಕೆ – ಪ್ರಶ್ನೆಗೆ ಉತ್ತರ ಕೊಟ್ಟ ಶೆಟ್ಟರ್

    ಬೆಳಗಾವಿ: ಬಿಜೆಪಿ ಶಾಸಕ ಶ್ರೀರಾಮುಲು ಅವರಿಗೆ ಆರೋಗ್ಯ ಸಮಸ್ಯೆಯಿದೆ. ಅನಾರೋಗ್ಯದಿಂದಾಗಿ ಅವರು ಈಗ ಮಾತನಾಡುತ್ತಿಲ್ಲ ಎಂದು ಜಗದೀಶ್ ಶೆಟ್ಟರ್ ಹೇಳಿದ್ದಾರೆ.

    ಸುವರ್ಣಸೌಧದ ಹೊರಗಡೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪಕ್ಷ ಎಂದಿಗೂ ರೈತರ ಪರ ಇರುತ್ತೆ. ಬಿಎಸ್ ಯಡಿಯೂರಪ್ಪ ಉಪಮುಖ್ಯಮಂತ್ರಿಯಾಗಿದ್ದಾಗ ರೈತರ ಸಾಲ ಮನ್ನಾ ಮಾಡಲಾಗಿತ್ತು. ಆದರೆ ಇಂದು ಕುಮಾರಸ್ವಾಮಿ ಅವರು ಹಲವು ನಿಯಮಗಳನ್ನು ಹಾಕಿ ಸಾಲ ಮನ್ನಾ ಮಾಡಿದ್ದಾರೆ. 4 ಜನರಿಗೆ ಋಣ ಮುಕ್ತ ಪತ್ರ ಕೊಟ್ಟು ನಾಟಕ ಮಾಡಿದ್ದಾರೆ ಅಷ್ಟೇ ಎಂದರು.

    ಇದೇ ವೇಳೆ ಶ್ರೀರಾಮುಲು ಅವರ ಕುರಿತ ಪ್ರಶ್ನೆಗೆ, ರಾಮುಲು ಅವರು ಅನಾರೋಗ್ಯದಿಂದ ಇರುವ ಕಾರಣ ಹೆಚ್ಚು ಮಾತನಾಡಲು ಆಗುತ್ತಿಲ್ಲ ಎಂದು ಉತ್ತರಿಸಿದರು.

    ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಶೆಟ್ಟರ್ ಅವರು, ಸ್ವತಃ ಕಾಂಗ್ರೆಸ್ ಪಕ್ಷದ ನಾಯಕರೇ ತಮ್ಮ ತಪ್ಪುಗಳ್ನು ಒಪ್ಪಿಕೊಂಡಿದ್ದಾರೆ. ಲಿಂಗಾಯತ ಧರ್ಮ ಒಡೆಯುವ ವಿಚಾರದಲ್ಲಿ ಸಚಿವ ಡಿಕೆ ಶಿವಕುಮಾರ್ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ. ಸಿದ್ದರಾಮಯ್ಯ ಅವರು ಕೂಡ ಈ ಬಗ್ಗೆ ಪಶ್ಚಾತ್ತಾಪ ಪಟ್ಟಿದ್ರು. ಅದ್ರೆ ಈ ಬಗ್ಗೆ ಪ್ರಧಾನಿ ಮೋದಿ ಅವರ ಮೇಲೆ ಬಾರ ಹಾಕಲು ಪ್ರಯತ್ನ ಪಟ್ಟಿದ್ದಾರೆ. ಇದನ್ನು ತಿಳಿದು ರಾಜಕೀಯಕ್ಕಾಗಿ ಧರ್ಮ ಮಾಡಲು ಹೋಗಿದ್ದ ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಿ ಎಂದು ಕರೆ ನೀಡಿದರು.

    ಸಮ್ಮಿಶ್ರ ಸರ್ಕಾರ ಮಾಡುತ್ತಿರುವ ರೈತರ ಸಾಲಮನ್ನಾ ನಾಟಕ ಕೂಡ ಬಹಳ ದಿನ ನಡೆಯಲ್ಲ, ರೈತರ ಸಾಲಮನ್ನಾ ಆಗುವವರೆಗೂ ನಾವು ಹೋರಾಟ ಮಾಡುತ್ತೇವೆ. ಬರದಿಂದ ಜನ ಕಂಗಾಲಾಗಿದ್ದು, ಹಲವು ಗ್ರಾಮಗಳಲ್ಲಿ ಕುಡಿಯಲು ನೀರು, ಸಾಕು ಪ್ರಾಣಿಗಳಿಗೆ ಮೇವು ಇಲ್ಲದೇ ಗುಳೆ ಹೋಗುತ್ತಿದ್ದಾರೆ. ಸರ್ಕಾರದ ಯಾವ ಅಧಿಕಾರಿ, ಸಚಿವವರು ಭೇಟಿ ನೀಡಿಲ್ಲ. ಲಾಟರಿ ಹೊಡೆದಂತೆ ಸಿಎಂ ಆಗಿರುವ ಸರ್ಕಾರ ಪತನ ನಿಶ್ಚಿತ ಎಂದು ಎಚ್ಚರಿಕೆ ನೀಡಿದರು.

    ಬಿಎಸ್‍ವೈ ಎಲ್ಲಿ ಮಲಗಿದ್ರು ಎಂಬ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ ಹೇಳಿಕೆಗೆ ಕಿಡಿಕಾರಿದ ಶೆಟ್ಟರ್, ಇದು ಕುಮಾರಸ್ವಾಮಿ ಅಂಡ್ ಟೀಂನ ಸಂಸ್ಕೃತಿ ತೋರಿಸುತ್ತದೆ. ಹಿಂದೆ ರೈತ ಮಹಿಳೆಗೆ ಸಿಎಂ ಕೇಳಿದ್ರು, ಈಗ ಅದೇ ದಾರಿಯಲ್ಲಿ ಅವರ ಶಾಸಕರು ಮುಂದುವರಿಯುತ್ತಿದ್ದಾರೆ ಎಂದು ಟಾಂಗ್ ನೀಡಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಚಳಿಗಾಲದಲ್ಲಿ ಮಗು ಆರೋಗ್ಯವಾಗಿರಲು ಹೀಗೆ ಮಾಡಿ

    ಚಳಿಗಾಲದಲ್ಲಿ ಮಗು ಆರೋಗ್ಯವಾಗಿರಲು ಹೀಗೆ ಮಾಡಿ

    ಕಿಲಕಿಲ ನಗುವ ಮಗು ಮನೆಯಲ್ಲಿದ್ದರೆ ಯಾರಿಗೆ ತಾನೇ ಇಷ್ಟ ಆಗಲ್ಲ. ಆ ಮಗು ಆರೋಗ್ಯವಾಗಿರಬೇಕೆಂದು ಮನೆಯಲ್ಲಿ ಎಲ್ಲರೂ ಬಯಸುತ್ತಾರೆ. ಆದರೆ ಚಳಿಗಾಲ ಬಂದರೆ ಸಾಕು ಮಕ್ಕಳನ್ನು ಆರೈಕೆ ಮಾಡುವುದು ಕಷ್ಟವಾಗುತ್ತದೆ. ಇಂತಹ ಕಾಲದಲ್ಲಿ ಮಕ್ಕಳನ್ನು ಹೆಚ್ಚಾಗಿ ಕೇರ್ ಮಾಡಬೇಕಾಗುತ್ತದೆ. ಈ ವಿಂಟರ್ ನಲ್ಲಿ ಆರೋಗ್ಯವಂತ ಮಗುವಿಗಾಗಿ ಹೀಗೆ ಮಾಡಿ.

    * ಶೀತ ಮತ್ತು ನೆಗಡಿ:
    – ನೆಗಡಿ ಮತ್ತು ಶೀತ ಚಳಿಗಾಲದಲ್ಲಿ ಹೆಚ್ಚಾಗಿ ಮಕ್ಕಳನ್ನು ಕಾಡುವ ಸಮಸ್ಯೆಯಾಗಿದೆ. ಹೀಗಾಗಿ ಮಕ್ಕಳನ್ನು ತುಂಬಾ ಬೆಚ್ಚಗೆ ಇಡಬೇಕಾಗುತ್ತದೆ. ನೀರಿನಲ್ಲಿ ಹೆಚ್ಚು ಸಮಯ ಆಡಲು ಬಿಡಬಾರದು. ಮಕ್ಕಳಿಗೆ ಬಿಸಿ ನೀರು ಕುಡಿಸಬೇಕು. ಆಟವಾಡಿದ ಮೇಲೆ ಮಕ್ಕಳ ಕೈ, ಕಾಲುಗಳನ್ನು ನೀರಿನಿಂದ ತೊಳೆಯಬೇಕು. ಇದರಿಂದ ರೋಗಕಾರಕ ಕೀಟಾಣುಗಳು (viral infection) ಹರಡುವುದನ್ನು ತಡೆಯಬಹುದು.

    * ಉಸಿರಾಟ ಸಮಸ್ಯೆ:
    – ಚಳಿಗಾಲದ ವೇಳೆ ಮಕ್ಕಳಲ್ಲಿ ಉಸಿರಾಟದ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಇದರಿಂದ ಹೆಚ್ಚು ಚಳಿ ಇದ್ದಾಗ ಮಕ್ಕಳನ್ನು ಹೊರಗೆ ಕರೆದುಕೊಂಡು ಹೋಗುವುದನ್ನು ಕಡಿಮೆ ಮಾಡಬೇಕು. ಔಟಿಂಗ್ ಹೋಗಲೇಬೇಕಿದ್ದರೆ ಬೆಚ್ಚನೆಯ ಸ್ವೆಟರ್, ಸ್ಕಾರ್ಫ್, ಟೋಪಿ ಧರಿಸಿ ಕರೆದುಕೊಂಡು ಹೋಗಿ.

    * ಡ್ರೈ ಸ್ಕಿನ್:
    – ಮಕ್ಕಳು ಬೆಣ್ಣೆಯಂತಹ ಚರ್ಮ ಹೊಂದಿದ್ದರೆ ಎತ್ತಿಕೊಂಡು ಮುದ್ದಾಡಲು ಚೆಂದ. ಆದರೆ ರ‌್ಯಾಶಸ್, ಒರಟು ಚರ್ಮದಿಂದ ಇರಿಸುಮುರಿಸಾಗುತ್ತದೆ. ಹೀಗಾಗಿ ಚಳಿಗಾಲದಲ್ಲಿ ಚರ್ಮ ಒಡೆಯುವುದನ್ನು ತಪ್ಪಿಸಬೇಕು. ಮಕ್ಕಳಿಗೆ ಸ್ನಾನ ಮಾಡಿಸಿದ ನಂತರ ಲೋಷನ್, ಕ್ರೀಮ್ ಹಚ್ಚುವುದು. ಸ್ನಾನದ ಬಳಿಕ ಚರ್ಮದ ರಂಧ್ರಗಳು ಓಪನ್ ಆಗಿರುತ್ತವೆ. ಈ ವೇಳೆ ಲೋಷನ್ ಹಚ್ಚಿದರೆ ಚರ್ಮದ ಆಳಕ್ಕೆ ಇಳಿದು ದೀರ್ಘ ಕಾಲ ತೇವಾಂಶವನ್ನು ಕಾಪಾಡುತ್ತದೆ.

    * ಜ್ವರ, ನೆಗಡಿ, ಕೆಮ್ಮು ಬಾಧಿತರಿಂದ ದೂರ ಇರಿಸಿ:
    – ಇದು ದೊಡ್ಡ ಕಾಯಿಲೆ ಏನಲ್ಲ. ಆದರೆ ಒಬ್ಬರಿಂದ ಒಬ್ಬರಿಗೆ ಬೇಗ ಹರಡುತ್ತದೆ. ಮಕ್ಕಳು ಹೆಚ್ಚಾಗಿ ಸೆನ್ಸಿಟೀವ್ ಆಗಿರುತ್ತಾರೆ. ಇದರಿಂದ ಬಹುಬೇಗನೇ ರೋಗಾಣುಗಳು ದೇಹ ಸೇರಬಹುದು. ಬಳಿಕ ಜ್ವರ, ನೆಗಡಿ, ಕೆಮ್ಮು, ಇತರೆ ಅಲರ್ಜಿಗಳಾಗಿ ಯಾತನೆ ಅನುಭವಿಸಬೇಕಾಗುತ್ತದೆ. ಇದಕ್ಕಾಗಿ ಜ್ವರ, ಕೆಮ್ಮು ಬಂದವರಿಂದ ಆದಷ್ಟು ಮಕ್ಕಳನ್ನು ದೂರ ಇರಿಸಿ. ದೂರ ಇರುವಂತೆ ಸೂಚಿಸಿ. ಮನೆಯವರಾಗಲಿ, ಅಕ್ಕಪಕ್ಕದವರಾಗಲಿ ಯಾರೇ ಆಗಲಿ ನಮ್ಮ ಮಕ್ಕಳ ಆರೋಗ್ಯ ಮುಖ್ಯ.

    * ಹಣ್ಣು ತರಕಾರಿಗಳ ಸೇವನೆ:
    – ನಿಮ್ಮ ಮಕ್ಕಳಿಗೆ ವಿಟಮಿನ್‍ಯುಕ್ತ, ಪ್ರೊಟೀನ್‍ಯುಕ್ತ ಆಹಾರವನ್ನು ತಿನ್ನಿಸಿ. ಮನೆಯಲ್ಲೇ ತಯಾರಿಸಿದ ಆಹಾರವನ್ನು ಬಿಸಿ ಇರುವಾಗಲೇ ಸೇವಿಸುವಂತೆ ಬಲವಂತ ಮಾಡಿ. ಇದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಲು ಸಹಾಯಕವಾಗುತ್ತದೆ.

    * ಪ್ರತ್ಯೇಕ ಬಾಟಲ್, ಹ್ಯಾಂಡ್ ಟವಲ್:
    – ನಿಮ್ಮ ಮನೆಯಲ್ಲಿ ಶಾಲೆಗೆ ಹೋಗುವ ಮಕ್ಕಳಿದ್ದರೆ ಅವರಿಗೆ ಪ್ರತ್ಯೇಕವಾದ ನೀರಿನ ಬಾಟಲ್, ಹ್ಯಾಂಡ್ ಟವಲ್ ಅನ್ನು ಕೊಟ್ಟು ಕಳಿಸಿ. ಇದರಿಂದ ಶಾಲೆಯಲ್ಲಿ ಮಕ್ಕಳೊಂದಿಗೆ ಆಡುವ ಮೂಲಕ ಹರಡಬಹುದಾದ ವೈರಲ್ ಸೋಂಕುಗಳನ್ನು ತಡೆಯಬಹುದು. ಮನೆಗೆ ಬಂದ ಬಳಿಕ ಬಾಟಲಿ ಮತ್ತು ಹ್ಯಾಂಡ್ ಟವಲ್ ಅನ್ನು ಡೆಟಲ್ ಹಾಕಿ ಬಿಸಿ ನೀರಿನಿಂದ ತೊಳೆದಿಡಿ.

    ಕೆಲವೊಂದು ಸಿಂಪಲ್ ಟಿಪ್ಸ್
    * ಕೈ ತೊಳೆಯಲು ಹ್ಯಾಂಡ್ ವಾಷಿಂಗ್ ಲಿಕ್ವಿಡ್ ಬಳಸಿ.
    * ಹೊರಗಿಂದ ಬಂದ ತಕ್ಷಣ ಕೈ, ಕಾಲು, ಮುಖ ತೊಳೆಯುವುದು.
    * ಕೈ ಬೆರಳುಗಳ ಮಧ್ಯೆ, ಉಗುರುಗಳ ಮಧ್ಯೆ ಚೆನ್ನಾಗಿ ತೊಳೆಯುವುದು.
    * ಮನೆಯಿಂದ ಹೊರ ಹೋಗುವಾಗ ಬೆಚ್ಚನೆಯ ಉಡುಪು ಧರಿಸುವುದು.
    * ಕಸ ಹಾಕಿ ಬಂದ ಬಳಿಕ, ಪ್ರಾಣಿಗಳನ್ನು ಮುಟ್ಟಿದ ನಂತ್ರ, ಟಾಯ್ಲೆಟ್‍ಗೆ ಹೋಗಿಬಂದ ಮೇಲೆ, ಮಕ್ಕಳಿಗೆ ಡೈಪರ್ ಚೇಂಜ್ ಮಾಡಿದ ನಂತ್ರ ಚೆನ್ನಾಗಿ ಕೈಗಳನ್ನು ತೊಳೆದುಕೊಳ್ಳುವುದು.


    * ಸೀನುವಾಗ, ಕೆಮ್ಮುವಾಗ ಬಾಯಿಗೆ ಅಡ್ಡಲಾಗಿ ಬಟ್ಟೆ ಬಳಸುವುದು.
    * ಮನೆಯಲ್ಲಿ, ಮತ್ತೆ ಹೊರ ಹೋಗುವಾಗ ಪ್ರತ್ಯೇಕ ನೀರಿನ ಬಾಟಲ್, ಹ್ಯಾಂಡ್ ಟವಲ್ ಬಳಸುವುದು.
    * ರಾತ್ರಿ ವೇಳೆ ಮಕ್ಕಳನ್ನು ಬೆಚ್ಚಗಿಡುವುದು.
    * ಮಲಗುವಾಗ ಮಕ್ಕಳ ಕೈ, ಕಾಲುಗಳಿಗೆ ಕ್ರೀಮ್ ಹಚ್ಚುವುದು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಲವಲವಿಕೆಯಿಂದ ಇದ್ದಾರೆ ನಡೆದಾಡುವ ದೇವರು – ಡಿಕೆಶಿ ಜೊತೆಗಿನ ಸಂಭಾಷಣೆ ವಿಡಿಯೋ ವೈರಲ್

    ಲವಲವಿಕೆಯಿಂದ ಇದ್ದಾರೆ ನಡೆದಾಡುವ ದೇವರು – ಡಿಕೆಶಿ ಜೊತೆಗಿನ ಸಂಭಾಷಣೆ ವಿಡಿಯೋ ವೈರಲ್

    ಚೆನ್ನೈ: ನಗರದ ರೇಲಾ ಆಸ್ಪತ್ರೆಯಲ್ಲಿರುವ ನಡೆದಾಡುವ ದೇವರು, ಸಿದ್ದಗಂಗಾ ಶ್ರೀಗಳು ಕ್ಷೇಮವಾಗಿದ್ದು, ಲವಲವಿಕೆಯಿಂದ ಇದ್ದಾರೆ.

    ಶನಿವಾರ ಸಿದ್ದಗಂಗಾ ಶ್ರೀಗಳನ್ನ ವೈದ್ಯಕೀಯ ಶಿಕ್ಷಣ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದರು. ಈ ವೇಳೆ ಶ್ರೀಗಳು ಮತ್ತು ಡಿಕೆಶಿ ಸಂಭಾಷಣೆಯ ವಿಡಿಯೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಶ್ರೀಗಳು ಮತ್ತು ಸಚಿವರ ನಡುವಿನ ಸಂಭಾಷಣೆ:

    ಡಿಕೆಶಿ: ನೋವಿದಿಯಾ ಇನ್ನೂ..?
    ಸಿದ್ದಗಂಗಾ ಶ್ರೀಗಳು : ಇಲ್ಲ, ಭುಜ ಎತ್ತಿದಿದರೆ ನೋವಾಗುತ್ತೆ.
    ಡಿಕೆಶಿ: ಓ. ಗೊತ್ತಾಯಿತು ಗೊತ್ತಾಯಿತು ಶಿವ ಕಾಪಾಡುತ್ತಾನೆ ಬನ್ನಿ.
    ಸಿದ್ದಗಂಗಾ ಶ್ರೀಗಳು: ಎದ್ದು ಕುಳಿತುಕೊಳ್ಳಬೇಕು.
    ಡಿಕೆಶಿ: ಇರಿ ಇರಿ ಇವತ್ತೊಂದಿನ ಇರಿ ನಾಳೆ ನಾಡಿದ್ರಲ್ಲಿ ಅವರೇ ನಿಮ್ಮನ್ನ ಎದ್ದು ಕೂಡಿಸುತ್ತಾರೆ ಇವತ್ತು ಬೇಡ ನಾಳೆ ಎದ್ದು ಕೂಡಿಸುತ್ತಾರೆ.
    ಸಿದ್ದಗಂಗೆ ಶ್ರೀ: ಇವತ್ತು ಬೇಡ್ವಾ..
    ಡಿಕೆಶಿ: ಬೇಡ ಇವತ್ತು ಬೇಡ ನಾಳೆ ಡಾಕ್ಟರ್ ನಿಮ್ಮನ್ನ ಕೂರಿಸುತ್ತೇನೆ ಅಂತ ಹೇಳಿದ್ದಾರೆ. ಅವರು ಕುಳಿತುಕೊಳ್ಳಬೇಕು, ಕುಳಿತುಕೊಳ್ಳಬೇಕು ಅಂತಾರೆ..
    ಸಿದ್ದಗಂಗಾ ಶ್ರೀ: ನನಗೆ ಎದ್ದು ಕುಳಿತುಕೊಳ್ಳಬೇಕು ಅಂತಾ ಅನ್ನಿಸುತ್ತಿದೆ.
    ಡಿಕೆಶಿ: ಇವತ್ತು ಒಂದು ದಿನ ಇದ್ದು ಬಿಡಿ, ನಾಳೆ ನಿಮ್ಮನ್ನ ಎದ್ದು ಕೂಡಿಸುತ್ತಾರೆ.
    ಲವಲವಿಕೆಯಿಂದ ಇದ್ದಾರೆ ನಡೆದಾಡುವ ದೇವರು – ಡಿಕೆಶಿ ಜೊತೆಗಿನ ಸಂಭಾಷಣೆ ವಿಡಿಯೋ ವೈರಲ್ ನೀವು ಹೇಗೆ ಬಂದ್ರಿ.
    ಡಿಕೆಶಿ : ನಾನು ವಿಮಾನದಲ್ಲೇ ಬಂದೆ.
    ಸಿದ್ದಗಂಗಾ ಶ್ರೀ: ಇಲ್ಲಿರೋರೆಲ್ಲ ಯಾರು
    ಡಿಕೆಶಿ : ಇಲ್ಲಿಯವರೇ ಆಸ್ಪತ್ರೆಯವರೇ, ಆಸ್ಪತ್ರೆಗೆ ಯಾರನ್ನು ಸಹ ಬಿಡುವುದಿಲ್ಲ. ನಾನು ಯಾರನ್ನೂ ಬಿಡಬೇಡಿ ಬೇಡ ಅಂತ ಹೇಳಿದ್ದಿನಿ. ನೀವು ಇನ್ನೂ ಹತ್ತಾರು ವರ್ಷ ಹೀಗೆ ಇರಿ. ನಮ್ಮ ಆಯಸ್ಸೆಲ್ಲ ನಿಮಗೆ ಸಿಗಲಿ..

    ಶ್ರೀಗಳಿಗೆ ಪದೇ ಪದೇ ಆರೋಗ್ಯದಲ್ಲಿ ಕಾಣಿಸಿಕೊಳ್ಳುತ್ತಿರುವ ಸಮಸ್ಯೆ ಸಂಪೂರ್ಣವಾಗಿ ನಿವಾರಣೆಯಾಗಬೇಕು ಎಂದು ಈ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಶನಿವಾರ ಡಾ. ಮೊಹಮ್ಮದ್ ರೇಲಾ ನೇತೃತ್ವದಲ್ಲಿ ಶಸ್ತ್ರಚಿಕಿತ್ಸೆ ನಡೆದಿದ್ದು, ಸತತ 2 ಗಂಟೆಗಳ ಕಾಲ ಶ್ರೀಗಳಿಗೆ ಶಸ್ತ್ರಚಿಕಿತ್ಸೆ ಮಾಡಿ ಯಶಸ್ವಿಯಾಗಿದೆ. ಯಾರು ಆತಂಕ ಪಡೋದು ಬೇಡ. ಶಸ್ತ್ರಚಿಕಿತ್ಸೆ ನಂತರ ಕೆಲದಿನಗಳ ಕಾಲ ಶ್ರೀಗಳು ವಿಶ್ರಾಂತಿ ಪಡೆಯಬೇಕು ಎಂದು ವೈದ್ಯರು ಸ್ಪಷ್ಟಪಡಿಸಿದ್ದರು.

    ಶ್ರೀಗಳ ಆರೋಗ್ಯದ ಕುರಿತು ಬಿಜಿಎಸ್ ಆಸ್ಪತ್ರೆ ವೈದ್ಯರಾದ ಡಾ. ರವೀಂದ್ರ ಅವರು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದು, ಶ್ರೀಗಳಿಗೆ ನಡೆದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ಸದ್ಯಕ್ಕೆ ಶ್ರೀಗಳ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಭಕ್ತರು ಯಾವುದೇ ಆತಂಕ ಪಡಬೇಕಿಲ್ಲ. ಶಸ್ತ್ರಚಿಕಿತ್ಸೆ ನಂತರ ಸ್ವಾಮೀಜಿಗಳನ್ನ ಐಸಿಯುಗೆ ಶಿಫ್ಟ್ ಮಾಡಲಾಗಿದೆ. ಮೂರು ದಿನಗಳವರೆಗೂ ಐಸಿಯುನಲ್ಲೇ ಇರಬೇಕಾಗಿದೆ. ಸ್ವಾಮೀಜಿಗಳನ್ನ ಸದ್ಯ ಯಾರು ಭೇಟಿ ಮಾಡುವ ಹಾಗಿಲ್ಲ, ಅವರು ವಿಶ್ರಾಂತಿ ಪಡೆಯಬೇಕಿದೆ ಎಂದು ಮಾಹಿತಿ ನೀಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪಾನಿಪುರಿ C/o ಯಮಪುರಿ-ಪಬ್ಲಿಕ್ ಟಿವಿ ಸ್ಟಿಂಗ್ ಆಪರೇಷನ್

    ಪಾನಿಪುರಿ C/o ಯಮಪುರಿ-ಪಬ್ಲಿಕ್ ಟಿವಿ ಸ್ಟಿಂಗ್ ಆಪರೇಷನ್

    ಗದಗ: ಗೋಬಿಮಂಚೂರಿ ಹಾಗೂ ಪಾನಿಪುರಿ ಐಟಮ್ಸ್, ಈ ಹೆಸರು ಕೇಳಿದರೆ ಎಲ್ಲರಿಗೂ ತಿನ್ನಬೇಕು ಅನ್ನಿಸುತ್ತದೆ. ಆದರೆ ಜಂಕ್ ಫುಡ್ ಹೇಗೆ, ಎಲ್ಲಿ ತಯಾರಾಗುತ್ತೆ ಅನ್ನೋ ಹಿಂದಿನ ಅಸಲಿ ಸತ್ಯ ಬಯಲಾಗಿದೆ.

    ಇತ್ತೀಚೆಗೆ ಎಲ್ಲೆಂದರಲ್ಲಿ ಚೈನಿಸ್ ಫುಡ್‍ಗಳದ್ದೇ ಹಾವಳಿವಾಗಿದ್ದು, ಅದರಲ್ಲೂ ಗೋಬಿಮಂಚುರಿ, ಪಾನಿಪುರಿ ಐಟಮ್ಸ್ ಅಂದರೆ ಸಾಕು ಜನ ಮುಗಿಬೀಳುತ್ತಾರೆ. ಆದರೆ ಮುದ್ರಣಾ ಕಾಶಿ ಗದಗನಲ್ಲಿ ಲಾಭದಾಸೆಗಾಗಿ ಜಂಕ್‍ಫುಡ್ ಮಾಡುವ ವ್ಯಾಪರಿಗಳು ಅವುಗಳನ್ನ ಅನೇಕ ಕೊಳೆತ ವಸ್ತುಗಳಿಂದ ತಯಾರಿಸುತ್ತಾರೆ. ಬೆಟಗೇರಿಯ ಬಸ್ ನಿಲ್ದಾಣದ ಹಿಂಭಾಗ, ತೆಂಗಿನಕಾಯಿ ಬಜಾರ, ತೋಂಟದಾರ್ಯ ಮಠದ ಮುಂದಿನ ರಸ್ತೆ, ಹಾತಲಗೇರಿ ನಾಕಾ, ಮುಳಗುಂದ ನಾಕಾ ಸೇರಿದಂತೆ ಅನೇಕ ಕಡೆಗಳಲ್ಲಿ ಜಂಕ್ ಫುಡ್ ಹೇಗೆಲ್ಲಾ ತಯಾರುತ್ತವೆ ಎಂಬುದನ್ನು ಪಬ್ಲಿಕ್ ಟಿವಿತಂಡ ರಹಸ್ಯ ಕಾರ್ಯಾಚರಣೆ ಮೂಲಕ ಬಯಲು ಮಾಡಿದೆ.

    ಜಂಕ್‍ಫುಡ್‍ಗೆ ಕೆಟ್ಟಿರುವ ಹೂ ಕೋಸು, ಕ್ಯಾಬೇಜ್, ಸ್ಟಾಕ್ ಮೈದಾಹಿಟ್ಟು, ಟೆಸ್ಟಿಂಗ್ ಪೌಡರ್, ಐಸ್ ಹೀಗೆ ಅನೇಕ ವಸ್ತುಗಳನ್ನ ಬಳಸಿ ತಯಾರಿಸಲಾಗುತ್ತದೆ. ಇದನ್ನು ಸೇವಿಸುವುದರಿಂದ ಮನುಷ್ಯ ಮಾರಕ ಕಾಯಿಲೆ ಒಳಗಾಗುತ್ತಾನೆ. ಕೊಬ್ಬಿನಾಂಶ, ಹೆಪಟೈಟಿಸ್-ಬಿ, ಕಾಮಾಲೆ, ಕ್ಯಾನ್ಸರ್, ಟೈಫಾಯಿಡ್ ಸೇರಿದಂತೆ ಗ್ಯಾಸ್ಟ್ರಿಕ್ ನಂತಹ ಮಾರಕ ರೋಗಗಳು ನಿಮಗೆ ಗೊತ್ತಿಲ್ಲದೇ ನಿಮ್ಮನ್ನ ಆವರಿಸಿಕೊಳ್ಳುತ್ತವೆ ಎಂಬುದು ವೈದ್ಯರ ಸಲಹೆಯಾಗಿದೆ.

    ಗಬ್ಬೆದ್ದು ನಾರುವ ಜಾಗದಲ್ಲಿ, ಶೌಚಾಲಯ ಪಕ್ಕದಲ್ಲಿ ಇದನ್ನೆಲ್ಲಾ ತಯಾರಿಸುತ್ತಾರೆ. ಜೊತೆಗೆ ಪೇಂಟಿಂಗ್ ಪ್ಲಾಸ್ಟಿಕ್ ಡಬ್ಬಗಳಲ್ಲಿ ಸಾಸ್ ತಯಾರಿಸುತ್ತಾರೆ. ಕೆಟ್ಟು, ಹುಳುಹತ್ತಿದ ಕ್ಯಾಬೇಜ್ ಹಾಗೂ ಹೂ ಕೋಸು ಬಳಸಿ ಗೋಬಿ ತಯಾರಿಸುತ್ತಾರೆ. ಹೋಟೆಲ್‍ಗಳಲ್ಲಿ ಪುರಿ, ಮಿರ್ಚಿ-ಬಜ್ಜಿ, ಕಾಂದಾ ಬಜ್ಜಿ, ಸೇವ್ ತಯಾರಿಸಿ ಉಳಿದ ವೆಸ್ಟ್ ಆಗಿರುವ ಎಣ್ಣೆ ತಂದು ಪಾನಿಪುರಿ ತೆಗೆಯುತ್ತಾರೆ. ಅಷ್ಟೇ ಅಲ್ಲದೇ ಬೇರೆ ಬೇರೆ ಎಣ್ಣೆ, ಬಹಳ ದಿನದ ಸ್ಟಾಕ್ ಮೈದಾಹಿಟ್ಟು, ಟೆಸ್ಟಿಂಗ್ ಪೌಡರ್, ಹೀಗೆ ಅನುಪಯುಕ್ತ ವಸ್ತುಗಳು, ಕಲುಷಿತ ನೀರಲ್ಲಿ ಕೆಟ್ಟುಹೋದ ಐಸ್ ಹಾಕುತ್ತಾರೆ ಎಂದು ತಿಳಿದು ಬಂದಿದೆ.

    ಇವತ್ತು ನಾಯಿ ಕೊಡೆಗಳ ರೀತಿ ಪಾನಿಪೂರಿ ಸ್ಟಾಲ್‍ಗಳು, ಗೋಬಿ ಮಂಚೂರಿ ಸ್ಟಾಲ್‍ಗಳು ತಲೆ ಎತ್ತಿವೆ. ದಾರಿಲೀ ಹೋಗುತ್ತಿದ್ದರೆ ಘಮ ಘಮ ಅನ್ನೋ ವಾಸನೆ ಮೂಗಿಗೆ ರಪ್ ಅಂತಾ ಹೊಡೆಯುತ್ತದೆ. ಇವುಗಳ ನಡುವೆ ಗೋಲ್‍ಗಪ್ಪಾ ಮಾರೋರ ಹಾವಳಿ ಬೇರೆ ಹೆಚ್ಚಾಗಿದೆ ಎಂದು ಪಾನಿಪುರಿ ಪ್ರಿಯರಾದ ಕವಿತಾ ಹೇಳಿದ್ದಾರೆ.

    ಇಷ್ಟೆಲ್ಲಾ ಅಕ್ರಮ ನಡೆಯುತ್ತಿದ್ದರೂ ಆಹಾರ ಮತ್ತು ನಾಗರಿಕ ಅಧಿಕಾರಿಗಳು, ಆರೋಗ್ಯ ಅಧಿಕಾರಿಗಳು ಸುಮ್ಮನ್ನಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಅಧಿಕಾರಿಗಳು ಈ ವಿಚಾರದಲ್ಲಿ ಎಚ್ಚೆತ್ತುಕೊಳ್ಳದೇ ಹೋದರೆ ಆರೋಗ್ಯ ಇಲಾಖೆ ಹಾಗೂ ಆಹಾರ ಇಲಾಖೆ ಇದ್ದೂ ಇಲ್ಲದಂತಾಗುತ್ತವೆ. ಹೀಗಾಗಿ ಈ ಬಗ್ಗೆ ಗದಗನ ಜಿಲ್ಲಾ ಮಟ್ಟದ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ. ಕಳಪೆಮಟ್ಟದ ಪದಾರ್ಥಗಳನ್ನ ಬಳಸಿ ಸಿದ್ಧಗೊಳ್ಳುವ ಆಹಾರಕ್ಕೆ ಕಡಿವಾಣ ಹಾಕಬೇಕಿದೆ. ಈ ಮೂಲಕ ಅಮಾಯಕ ಜನರ ಆರೋಗ್ಯವನ್ನ ಉಳಿಸಬೇಕು ಎಂಬುದು ಜನರ ಉತ್ತಾಯವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವೇದಿಕೆಯಲ್ಲೇ ಕುಸಿದು ಬಿದ್ದ ಕೇಂದ್ರ ಸಚಿವ ಗಡ್ಕರಿ

    ವೇದಿಕೆಯಲ್ಲೇ ಕುಸಿದು ಬಿದ್ದ ಕೇಂದ್ರ ಸಚಿವ ಗಡ್ಕರಿ

    ಮುಂಬೈ: ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ವಿಶ್ವವಿದ್ಯಾಲಯದ ಕಾರ್ಯಕ್ರಮದಲ್ಲಿ ವೇದಿಕೆಯಲ್ಲೇ ಕುಸಿದು ಬಿದ್ದಿದ್ದಾರೆ.

    ಅಹ್ಮದ್‍ನಗರದಲ್ಲಿರುವ ಮಹಾತ್ಮ ಪುಲೆ ಕೃಷಿ ವಿಶ್ವವಿದ್ಯಾಲಯದ ಘಟಿಕೋತ್ಸವ ಕಾರ್ಯಕ್ರಮದಲ್ಲಿ ನಿತಿನ್ ಗಡ್ಕರಿ ಪಾಲ್ಗೊಂಡಿದ್ದರು.

    ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಗಡ್ಕರಿ ವೇದಿಕೆಯಲ್ಲೇ ಕುಸಿದು ಬಿದ್ದಿದ್ದಾರೆ. ಕುಸಿದ ಬಿದ್ದ ನಂತರ ಗಡ್ಕರಿ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

    ಗಡ್ಕರಿ ಲೋ ಬಿಪಿಯಿಂದ ಬಳಲಿ ಬಿದ್ದಿದ್ದಾರೆ ಎನ್ನುವ ಮಾಹಿತಿ ಈಗ ಲಭ್ಯವಾಗಿದೆ. ಗಡ್ಕರಿ ಬಿದ್ದ ಕೂಡಲೇ ವೈದ್ಯರು ಸ್ಥಳಕ್ಕೆ ಧಾವಿಸಿ ಚಿಕಿತ್ಸೆ ನೀಡಿದ್ದಾರೆ. ಮಹಾರಾಷ್ಟ್ರ ರಾಜ್ಯಪಾಲ ವಿದ್ಯಾಸಾಗರ್ ರಾವ್ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ- ಸೋಮವಾರ ಡಿಸ್ಚಾರ್ಜ್?

    ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ- ಸೋಮವಾರ ಡಿಸ್ಚಾರ್ಜ್?

    ಬೆಂಗಳೂರು: ಶತಾಯುಷಿ, ನಡೆದಾಡುವ ದೇವರು ಸಿದ್ದಗಂಗಾ ಶ್ರೀಗಳಿಗೆ ಮತ್ತೊಮ್ಮೆ ಯಶಸ್ವಿ ಚಿಕಿತ್ಸೆ ನೀಡಲಾಗಿದ್ದು, ಸದ್ಯ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಆದರೆ ಶ್ರೀಗಳಿಗೆ ವಿಶ್ರಾಂತಿಯ ಅಗತ್ಯವಿದ್ದು, ಸೋಮವಾರ ಬೆಳಗ್ಗೆ ಡಿಸ್ಚಾರ್ಜ್ ಮಾಡುವ ನಿರ್ಧಾರ ಮಾಡಲಾಗಿದೆ ಎಂದು ಬಿಜಿಎಸ್ ಮುಖ್ಯವೈದ್ಯರಾದ ಡಾ. ರವೀಂದ್ರ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

    ಶ್ರೀಗಳ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ ವೈದ್ಯರು, ಸ್ವಾಮೀಜಿ ಅವರ ಆರೋಗ್ಯ ಉತ್ತಮವಾಗಿದೆ. ಇಂದು ಮಧ್ಯಾಹ್ನ ಪೂಜೆ ಮಾಡಿದ್ದಾರೆ. ಅವರಿಗೆ ಯಾವುದೇ ಸಮಸ್ಯೆ ಇಲ್ಲ. ಆದರೆ ಕಿಡ್ನಿ ಹಾಗೂ ರಕ್ತ ಪರೀಕ್ಷೆ ಮಾಡುವ ಕಾರಣದಿಂದ ಇಂದು ಆಸ್ಪತ್ರೆಯಲ್ಲಿ ಉಳಿಯಲಿದ್ದಾರೆ. ನಾಳೆ ರಕ್ತ ಪರೀಕ್ಷೆ ಮಾಡಿ ಡಿಸ್ಚಾರ್ಜ್ ಮಾಡಲಾಗುತ್ತದೆ. ಶ್ರೀಗಳು ಈಗಾಗಲೇ ಮಠಕ್ಕೆ ಹೋಗುತ್ತೇನೆ ಎಂದು ಹೇಳಿದ್ದಾರೆ. ಆದರೆ ನಾವೇ ಬೇಡ ಎಂದು ಇಂದು ರಾತ್ರಿ ಮಾತ್ರ ಆಸ್ಪತ್ರೆಯಲ್ಲಿ ಇರುವುದು ಒಳ್ಳೆಯದು ಎಂದು ಉಳಿಸಿಕೊಂಡಿದ್ದೆವೆ ಎಂದು ತಿಳಿಸಿದ್ದಾರೆ.

    ಶ್ರೀಗಳ ಆರೋಗ್ಯದಲ್ಲಿ ಕೊಂಚ ಏರುಪೇರಾದ ಹಿನ್ನೆಲೆಯಲ್ಲಿ ಬಿಜಿಎಸ್ ಆಸ್ಪತ್ರೆಗೆ ಶನಿವಾರ ಅವರನ್ನ ದಾಖಲು ಮಾಡಲಾಗಿತ್ತು. ಪಿತ್ತಕೋಶದಲ್ಲಿ ಅಳವಡಿಸಿದ್ದ ಸ್ಟಂಟ್ ಬ್ಲಾಕ್ ನಲ್ಲಿ ತೊಂದರೆ ಕಾಣಿಸಿಕೊಂಡಿದ್ದು, ವೈದ್ಯರು ಎಂಡೋಸ್ಕೋಪಿ ಮಾಡುವ ಮೂಲಕ ಸ್ಟಂಟ್ ಅಳವಡಿಕೆ ಮಾಡಿದ್ದಾರೆ. ಶ್ರೀಗಳು ಆಸ್ಪತ್ರೆಗೆ ದಾಖಲಾಗುತ್ತಿದಂತೆ ಡಾ. ರವೀಂದ್ರ ನೇತೃತ್ವದ ತಂಡ ಶ್ರೀಗಳಿಗೆ ಅಲ್ಟ್ರಾಸೌಂಡ್, ಬ್ಲಡ್ ಚೆಕಪ್ ಸೇರಿದಂತೆ ವೈದ್ಯಕೀಯ ತಪಾಸಣೆ ನಡೆಸಿದರು.

    ಭಾನುವಾರ ಕೂಡ ಚಿಕಿತ್ಸೆ ಮುಂದುವರಿದು ಮತ್ತೆರಡು ಸ್ಟಂಟ್ ಗಳನ್ನು ಯಶಸ್ವಿಯಾಗಿ ಅಳವಡಿಸಿದರು. ತಪಾಸಣೆ ವೇಳೆ ಶ್ರೀಗಳಿಗೆ ರಕ್ತದಲ್ಲಿ ಹಾಗೂ ಪಿತ್ತಕೋಶ, ಪಿತ್ತನಾಳದಲ್ಲಿ ಸೋಂಕು ಕಂಡು ಬಂದ ಹಿನ್ನೆಲೆಯಲ್ಲಿ ಮತ್ತೆರಡು ಸ್ಟಂಟ್ ಅಳವಡಿಕೆ ಮಾಡಲಾಯಿತು. ಬ್ಲಾಕ್ ಆಗಿದ್ದ ಸ್ಟಂಟ್ ಸ್ವಚ್ಛ ಗೊಳಿಸುವ ಜೊತೆಗೆ ಎಂಡೋಸ್ಕೋಪಿ ಮೂಲಕ ಸ್ಟಂಟ್ ಅಳವಡಿಸಲಾಗಿದ್ದು ಶಸ್ತ್ರ ಚಿಕಿತ್ಸೆ ಮಾಡದೇ ಅಳವಡಿಸಿರುವುದು ವಿಶೇಷವಾಗಿದೆ.

    ಶ್ರೀಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿನ್ನಲೆಯಲ್ಲಿ ಆದಿಚುಂಚನಗಿರಿ ಮಠದ ನಿರ್ಮಾಲನಂದ ಸ್ವಾಮಿಜಿಗಳು ಭೇಟಿ ನೀಡಿ ಶ್ರೀಗಳ ಆರೋಗ್ಯ ವಿಚಾರಿಸಿದರು. ಮೇಯರ್ ಗಂಗಾಂಬಿಕಾ ಮಲ್ಲಿಕಾರ್ಜುನ್, ವಿ. ಸೋಮಣ್ಣ, ಶ್ರೀಗಳ ಆರೋಗ್ಯ ತಪಾಸಣೆ ನಡೆಸುತ್ತಿದ್ದ ಡಾ. ವೆಂಕಟರಮಣ ಆಗಮಿಸಿ ಆರೋಗ್ಯ ವಿಚಾರಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಯಾವುದೇ ಸಮಸ್ಯೆಯಿಲ್ಲ- ಬಿಜಿಎಸ್ ವೈದ್ಯರಿಂದ ಸ್ಪಷ್ಟನೆ

    ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಯಾವುದೇ ಸಮಸ್ಯೆಯಿಲ್ಲ- ಬಿಜಿಎಸ್ ವೈದ್ಯರಿಂದ ಸ್ಪಷ್ಟನೆ

    ಬೆಂಗಳೂರು: ನಡೆದಾಡುವ ದೇವರು ತುಮಕೂರಿನ ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಬಿಜಿಎಸ್ ಆಸ್ಪತ್ರೆಯ ವೈದ್ಯರ ತಂಡ ಸ್ಪಷ್ಟಪಡಿಸಿದೆ.

    ಶ್ರೀಗಳು ಶನಿವಾರ ತಮ್ಮ ಆರೋಗ್ಯ ತಪಾಸಣೆಗಾಗಿ ಬೆಂಗಳೂರಿನ ಕೆಂಗೇರಿ ಬಳಿಯ ಬಿಜಿಎಸ್ ಆಸ್ಪತ್ರೆಗೆ ಬಂದಿದ್ದರು. 6 ತಿಂಗಳ ನಂತರ ಶ್ರೀಗಳು ಜನರಲ್ ಚೆಕಪ್‍ಗೆ ಬಂದು ದಾಖಲಾಗಿದ್ದರು.

    ಡಾ. ರವೀಂದ್ರ ತಂಡ ಶ್ರೀಗಳ ಆರೋಗ್ಯ ತಪಾಸಣೆ ನಡೆಸಿ ಏನೂ ಸಮಸ್ಯೆ ಇಲ್ಲ ಎಂದು ತಿಳಿಸಿದ್ದಾರೆ. ಇಂದು ಬೆಳಗ್ಗೆ 5.30ರ ಸುಮಾರಿಗೆ ಎದ್ದಿರುವ ಶ್ರೀಗಳು, ಎಂದಿನಂತೆ ಲವಲವಿಕೆಯಿಂದ ಪೂಜೆ ಮಾಡಿದ್ದಾರೆ. ಮಧ್ಯಾಹ್ನದ ವೇಳೆಗೆ ಬಿಜಿಎಸ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಸಾಧ್ಯತೆಗಳಿವೆ.

    ಶ್ರೀಗಳ ಜೊತೆ ಕಿರಿಯ ಶ್ರೀ ಸಿದ್ಧಲಿಂಗ ಸ್ವಾಮೀಜಿ ಹಾಗೂ ಕಣ್ಣೂರು ಸ್ವಾಮೀಜಿ ಆಗಮಿಸಿದ್ದು, ವೈದ್ಯಕೀಯ ವರದಿ ಬಳಿಕ ವೈದ್ಯರ ಸಲಹೆ ಮೇರೆಗೆ ಮಠಕ್ಕೆ ವಾಪಸ್ ಕರೆ ತರಲಾಗುವುದು ಎಂದು ನಿನ್ನೆ ಮಾಧ್ಯಮಗಳಿಗೆ ತಿಳಿಸಿದ್ದರು.

    ಪೊಲೀಸ್ ಬೆಂಗಾವಲಿನಲ್ಲಿ ಶ್ರೀಗಳನ್ನು ಕೆಂಗೇರಿ ಬಿಜಿಎಸ್ ಆಸ್ಪತ್ರೆಗೆ ಕರೆ ತರಲಾಗಿತ್ತು. ಕಳೆದ ಜೂನ್ ನಲ್ಲಿ 5 ಸ್ಟಂಟ್ ಗಳನ್ನು ಅಳವಡಿಸಲಾಗಿತ್ತು. ಬಳಿಕ 3 ಸ್ಟಂಟ್ ಅಳವಡಿಸಲಾಗಿತ್ತು. ಇದರಿಂದ 6 ತಿಂಗಳಿಗೆ ಒಮ್ಮೆ ತಪಾಸಣೆಗೆ ನಡೆಸಲಾಗುತ್ತದೆ ಎಂದು ವೈದ್ಯರು ಮಾಹಿತಿ ನೀಡಿದ್ದರು. ಹೀಗಾಗಿ ನಿನ್ನೆ ಮಧ್ಯಾಹ್ನ 3 ಗಂಟೆಗೆ ತುಮಕೂರಿನಿಂದ ಹೊರಟ ಶ್ರೀಗಳು ಆಸ್ಪತ್ರೆಗೆ ಆಗಮಿಸಿದ್ದರು. ಈ ವೇಳೆ ಆಸ್ಪತ್ರೆಯ ಒಳಗೆ ತೆರಳಲು ವೀಲ್ಹ್ ಚೇರ್ ನಲ್ಲಿ ಕುಳಿತುಕೊಳ್ಳಲು ನಿರಾಕರಿಸಿ ತಾವೇ ನಡೆದುಕೊಂಡು ತೆರಳಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಇಂದು ವಿಶ್ವ ಏಡ್ಸ್ ದಿನ – ಈ ವಿಷಯಗಳು ನಿಮಗೆ ಗೊತ್ತಿರಲಿ

    ಇಂದು ವಿಶ್ವ ಏಡ್ಸ್ ದಿನ – ಈ ವಿಷಯಗಳು ನಿಮಗೆ ಗೊತ್ತಿರಲಿ

    1987ರಲ್ಲಿ ಭಾರತದಲ್ಲಿ ಮೊದಲ ಏಡ್ಸ್ ಪ್ರಕರಣ ಪತ್ತೆಯಾಯಿತು. 1990ರಿಂದ ಇದನ್ನು ಗಂಭೀರವಾಗಿ ಪರಿಗಣಿಸಿದ ಭಾರತ ಸರ್ಕಾರ ಮಾರಕ ಕಾಯಿಲೆ ನಿಯಂತ್ರಣಕ್ಕೆ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಏಡ್ಸ್ ಗೆ ಗುರಿಯಾಗುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆ ಆಗುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿಯಲ್ಲಿ ತಿಳಿಸಿದೆ.

    ಕರ್ನಾಟಕ ರಾಜ್ಯದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅತಿ ಹೆಚ್ಚು ಹೆಚ್‍ಐವಿ ಮತ್ತು ಏಡ್ಸ್ ರೋಗ ಪೀಡಿತರಿದ್ದು, 2006ರಿಂದ ಸೋಂಕಿತರ ದೃಢೀಕರಣವಾಗಿರುವ ಪ್ರಕಾರ ART ಮಾತ್ರೆ ಪಡೆದುಕೊಳ್ಳುವರ ಸಂಖ್ಯೆ ಜಿಲ್ಲೆಯಲ್ಲಿ 14,994 ಇದ್ದು, ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿದ್ದಾರೆ. ಈ ಹಿಂದೆ ಬಾಗಲಕೋಟೆ ಜಿಲ್ಲೆಯಲ್ಲಿ ಹೆಚ್‍ಐವಿ ಮತ್ತು ಏಡ್ಸ್ ರೋಗ ಪೀಡಿತರ ಸಂಖ್ಯೆ ಹೆಚ್ಚಾಗಿದ್ದು, ಮೊದಲ ಸ್ಥಾನದಲ್ಲಿತ್ತು.

    ವಿಶ್ವ ಆರೋಗ್ಯ ಸಂಸ್ಥೆ (WHO) ನಡೆಸುವ ವಿಶ್ವ ಏಡ್ಸ್ ದಿನವನ್ನು 1988ರ ಡಿಸೆಂಬರ್ 1ರಿಂದ ಪ್ರತಿ ವರ್ಷ ಆಚರಿಸುತ್ತಾ ಬಂದಿದೆ. ಈ ದಿನದಂದು ಹೆಚ್‍ಐವಿ ಸೋಂಕಿನಿಂದ ಉಂಟಾಗುವ ಏಡ್ಸ್ ಸಾಂಕ್ರಾಮಿಕ ರೋಗದ ಬಗ್ಗೆ ಅರಿವು ಮೂಡಿಸುವ ಮೂಲಕ ಆಚರಿಸಲಾಗುತ್ತದೆ. 2017ರ ಏಡ್ಸ್ ದಿನವನ್ನು “”Right to Health” ಎಂಬ ಧ್ಯೇಯವಾಕ್ಯದೊಂದಿಗೆ ಆಚರಿಸಲಾಗಿತ್ತು. 2018ರ ಏಡ್ಸ್ ದಿನವನ್ನು #KnowYourStatus ಎಂಬ ಧ್ಯೇಯವಾಕ್ಯದೊಂದಿಗೆ ಆಚರಣೆ ಮಾಡಲಾಗುತ್ತಿದೆ.

    ಏಡ್ಸ್ ಅಂದರೇನು?
    ಅಕ್ವೈರ್ಡ್ ಇಮ್ಯುನೋ ಡಿಫಿಷಿಯೆನ್ಸಿ ಸಿಂಡ್ರೋಮ್ ಹೃಸ್ವ ರೂಪವೇ ಏಡ್ಸ್ (Acquired immune deficiency syndrome.) ಇದನ್ನು ರೋಗ ಅನ್ನುವಂತಕ್ಕಿಂತ ರೋಗಗಳ ಸರಮಾಲೆ ಎಂದು ಕರೆಯಬಹುದು. ಇದನ್ನು ಮೊಟ್ಟ ಮೊದಲ ಬಾರಿಗೆ 1981ರಲ್ಲಿ ಅಮೆರಿಕದಲ್ಲಿ ಗುರುತಿಸಲಾಯಿತು. ಭಾರತದಲ್ಲಿ 1986ರಲ್ಲಿ ಭಾರತದ ಚೆನ್ನೈನಲ್ಲಿ ಪತ್ತೆ ಮಾಡಲಾಯಿತು. ಏಡ್ಸ್ ಗೆ ಕಾರಣವಾದ ವೈರಸ್ ಹೆಚ್‍ಐವಿ (Human Immuno Deficiency Virus) ಇದನ್ನು ಮೊಟ್ಟ ಮೊದಲ ಬಾರಿಗೆ 1983ರಲ್ಲಿ ಫ್ರೆಂಚ್ ವಿಜ್ಞಾನಿಗಳು ಪತ್ತೆ ಹಚ್ಚಿದರು. 1984ರಲ್ಲಿ ಅಮೆರಿಕಾದ ವಿಜ್ಞಾನಿಗಳು ಏಡ್ಸ್ ಗೆ ಕಾರಣವಾಗುವ ವೈರಸ್ ಬಗ್ಗೆ ಸವಿವರವಾದ ಮಾಹಿತಿ ನೀಡಿದರು.

    ಅಭಾದತೆ: ರೋಗಗಳ ವಿರುದ್ಧ ತನ್ನನ್ನು ರಕ್ಷಿಸಿಕೊಳ್ಳಬಲ್ಲ ದೇಹದ ಸಾಮಥ್ರ್ಯಕ್ಕೆ ಅಭಾದತೆ ಎಂದು ಕರೆಯಲಾಗುತ್ತದೆ. ಈ ಅಭಾದತೆಯನ್ನು ಹಾಳುಮಾಡಬಲ್ಲ ರೋಗವೇ ಏಡ್ಸ್.

    ಏಡ್ಸ್ ಪತ್ತೆಯಾಗುವುದಕ್ಕೆ ಮುಂಚೆ, ಮಾನವರಲ್ಲಿ ಅಭಾದತೆ ಕುಂಠಿತಗೊಳ್ಳುವ ಮೂರು ಪರಿಸ್ಥಿತಿಗಳನ್ನು ಗುರುತಿಸಲಾಗಿತ್ತು.
    1. ಅನುವಂಶೀಯ (ತಂದೆ-ತಾಯಿಯಿಂದ ಮಕ್ಕಳಿಗೆ)
    2. ಪ್ರೇರಪಿತ (ಕಸಿ ಮಾಡುವಿಕೆಯಿಂದ)
    3. ಅರ್ಜಿತ (ಲೈಂಗಿಕ ಸಂಪರ್ಕದ ಮೂಲಕ ಉಂಟಾಗುವಿಕೆ)

    ಕುಂಠಿತಗೊಂಡ ಅಭಾದತೆಯು ಆಫ್ರಿಕಾದ ದೇಶಗಳಲ್ಲಿ ಹಾಗು ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಿರುವ ಏಷಿಯಾದ ಭಾರತ ಸೇರಿದಂತೆ ಇತರೆ ದೇಶಗಳಲ್ಲಿ ಹೆಚ್ಚಾಗಿ ಪತ್ತೆಯಾಗುತ್ತಿತ್ತು. ಆದರೆ ಇದನ್ನು ಪರಾವಲಂಬಿ ಜೀವಿಗಳಿಂದ ಉಂಟಾದ ರೋಗಗಳೆಂದು ಜೊತೆಗೆ ಪೋಷಣೆಯ ಕೊರತೆಯಿಂದಾಗಿ ಇನ್ನಷ್ಟು ಸಂಕೀರ್ಣಗೊಂಡ ಕಾಯಿಲೆಗಳಿಂದ ಭಾವಿಸಲಾಗಿತ್ತು.

    ಹೆಚ್‍ಐವಿ ರಚನೆ:
    ಹೆಚ್.ಐ.ವಿ ದುಂಡಾಗಿದ್ದು RNA ಯನ್ನು ಅನುವಂಶೀಯ ವಸ್ತುವನ್ನಾಗಿ ಹೊಂದಿದೆ. RNA ಸುತ್ತಲೂ ಪ್ರೋಟಿನ್ ಕವಚವಿದೆ. ಅದರ ಸುತ್ತಲೂ ಕೊಬ್ಬಿನ ಪದರ ಮಧ್ಯದಲ್ಲಿ ಆರ್.ಎನ್.ಎ ಜೊತೆಗೆ ರಿಸರ್ವ್ ಟ್ರಾನ್ಸ್ ಕಿಪ್ಟೇಸ್ ಎಂಬ ಕಿಣ್ವ ಇದೆ. ಹೆಚ್.ಐ.ವಿ ರಿಟ್ರೋವೈರಸ್ ಗಳ ಗುಂಪಿಗೆ ಸೇರುತ್ತದೆ. ಹೆಚ್.ಐ.ವಿ ಪೋಷಕ ಜೀವಿಯನ್ನು ಪ್ರವೇಶಿಸಿದ ನಂತರ ಲಿಂಪೋಸೈಟ್ ಗಳನ್ನು ನಾಶಪಡಿಸುತ್ತದೆ. ಬಿ ಮತ್ತು ಟಿ ಲಿಂಪೋಸೈಟ್ ಗಳು ಸೋಂಕಿನ ವಿರುದ್ಧ ದೇಹಕ್ಕೆ ರಕ್ಷಣೆಯನ್ನು ಒದಗಿಸುತ್ತದೆ.

    ಏಡ್ಸ್ ನ ಲಕ್ಷಣಗಳು:
    ಹೆಚ್‍ಐವಿ ವೈರಾಣುಗಳು ವ್ಯಕ್ತಿಯ ರಕ್ತವನ್ನು ಪ್ರವೇಶಿಸಿದ ಎರಡು ಅಥವಾ ಮೂರು ವಾರಗಳ ನಂತರ ಆತನಲ್ಲಿ ಜ್ವರ. ತಲೆನೋವು, ಕೀಲುಗಳಲ್ಲಿ ನೋವು ಹಾಗು ಬಾಯಿ ಮತ್ತು ಗಂಟಲಿನಲ್ಲಿ ಹುಣ್ಣುಗಳು ಕಾಣಿಸಿಕೊಳ್ಳುತ್ತವೆ. ದುಗ್ಧ ಗ್ರಂಥಿಗಳು ಊದಿಕೊಳ್ಳುವ ಜೊತೆಗೆ ಚರ್ಮದ ತುರಿಕೆ ಸಹ ಪ್ರಾರಂಭವಾಗುತ್ತದೆ. ಕೆಲವೊಮ್ಮೆ ತುರಿಕೆ ನಂತರ ಕಡಿಮೆ ಆಗುತ್ತದೆ. ಈ ಲಕ್ಷಣಗಳ ಜೊತೆಗೆ ವೈರಾಣುಗಳ ಸಂಖ್ಯೆ ಅಭಿವೃದ್ಧಿ ಹೊಂದುತ್ತಾ ಹೋಗುತ್ತದೆಯಾದರೂ ಯಾವುದೇ ಬಾಹ್ಯ ಲಕ್ಷಣಗಳು ಕಾಣಿಸಿಕೊಳ್ಳದೇ ಇರಬಹುದು.

    ಕ್ರಮೇಣ ದೇಹದ ರೋಗ ನಿರೋಧಕ ಶಕ್ತಿ ಕುಂದುತ್ತಾ ಹೋಗುತ್ತದೆ. ಏಡ್ಸ್ ರೋಗ ಪೂರ್ತಿ ಪ್ರಕಟವಾಗಲು ಮೊದಲು ದುಗ್ಧಗ್ರಂಥಿಗಳು ಊದಿಕೊಳ್ಳುತ್ತವೆ. ಅದರಲ್ಲಿಯೂ ಕತ್ತಿನ ಭಾಗದ ಸುತ್ತಮುತ್ತ ಈ ಊಟ ಕಂಡು ಬರುತ್ತದೆ. ಇದು ಏಡ್ಸ್ ರೋಗ ಸಂಪೂರ್ಣವಾಗಿ ಪ್ರಾರಂಭವಾಗಿರುವುದನ್ನು ಸೂಚಿಸುತ್ತದೆ. ಈ ಎಲ್ಲವನ್ನು ಮೊದಲ ಹಂತದ ಲಕ್ಷಣಗಳು ಎಂದು ಕರೆಯುತ್ತಾರೆ.

    ದ್ವಿತೀಯ ಹಂತದ ಲಕ್ಷಣಗಳು:
    1. ರೋಗ ನಿರೋಧಕ ಶಕ್ತಿ ಪೂರ್ಣವಾಗಿ ಕುಂದಿರುತ್ತದೆ.
    2. ಪ್ರತಿ ತಿಂಗಳು 10% ತೂಕ ಕಡಿಮೆ ಆಗುತ್ತದೆ.
    3. ಚರ್ಮದಲ್ಲಿ ತುರಿಕೆ, ಉಸಿರ್ನಾಳದಲ್ಲಿ ಉರಿಯೂತ, ಕೆಮ್ಮು ಹಾಗು ಕಫ ಉಂಟಾಗುವಿಕೆ
    4. ನಿರಂತರವಾಗಿ ತೀವ್ರ ಧಣಿವಾಗುವುದು.
    5. ಒಂದು ತಿಂಗಳಿಗೂ ದೀರ್ಘಕಾಲ ಉಳಿಯುವ ಜ್ವರ
    6. ಬಾಯಿಯಲ್ಲಿ ಬಿಳಿ ಮಚ್ಚೆಗಳು ಕಾಣಿಸಿಕೊಳ್ಳುಬವುದು.
    7. ಒಂದು ತಿಂಗಳಿಗೂ ಅಧಿಕ ಕಾಲ ಅತಿಸಾರ ಭೇದಿಯಾಗುದವುದು.
    8. ವ್ಯಕ್ತಿಯ ನೆನಪಿನನ ಶಕ್ತಿ ಕುಂದುತ್ತದೆ.

    ಸೋಂಕು ತಗುಲವ ರೀತಿ:
    1. ಸೋಂಕು ತಗುಲಿರುವ ವ್ಯಕ್ತಿಯ ಜೊತೆಗೆ ಅಸುರಕ್ಷಿತ ಲೈಂಗಿಕ ಸಂಪರ್ಕ: ಬಹುತೇಕ ಏಡ್ಸ್ ರೋಗಿಗಳು ಈಗಾಗಲೇ ಸೋಂಕು ತಗುಲಿರುವ ವ್ಯಕ್ತಿಗಳ ಜೊತೆಗೆ ಅಸುರಕ್ಷಿತ ಲೈಂಗಿಕ ಸಂಪರ್ಕ ಹೊಂದುವ ಮೂಲಕ ತಾವು ಸೋಂಕಿಗೆ ಒಳಗಾಗಿದ್ದಾರೆ.
    2. ಸೋಂಕು ತಗುಲಿದ ವ್ಯಕ್ತಿಯ ರಕ್ತವನ್ನು ದಾನ ಪಡೆಯುವ ಮೂಲಕ: ವೈರಾಣು ಇರುವ ರಕ್ತವನ್ನು ವ್ಯಕ್ತಿಯೊಬ್ಬನಿಂದ ದಾನ ಪಡೆದ ವ್ಯಕ್ತಿಗೆ ಸೋಂಕು ತಗುಲಬಹುದು.
    3. ಸೋಂಕು ತಗುಲಿದ ತಾಯಿಯಿಂದ ಮಗುವಿಗೆ: ಹೆಚ್‍ಐವಿ ಸೋಂಕು ತಗುಲಿರುವ ತಾಯಿಯಿಂದ ಆಕೆಯ ಮಗುವಿಗೆ ಈ ಕೆಳಗಿನ ರೀತಿಗಳಲ್ಲಿ ವೈರಾಣುಂವಿನ ಸೋಂಕು ಉಂಟಾಗಬಹುದು.
    ಎ. ಜರಾಯುವಿನ ಮೂಲಕ ಭ್ರೂಣಕ್ಕೆ(ಜರಾಯು ಎಂಬುದು ಬೆಳವಣಿಗೆಯಾಗುತ್ತಿರುವ ಭ್ರೂಣವನ್ನು ಗರ್ಭಾಶಯದ ಭಿತ್ತಿಗೆ ಜೋಡಿಸುವ ಒಂದು ಅಂಗ)
    ಬಿ. ಹೆರಿಗೆಯಾಗುವ ಸಂದರ್ಭದಲ್ಲಿ
    ಸಿ. ಮೊಲೆಯೂಡಿಸುವ ಮೂಲಕ
    4. ಸೋಂಕು ತಗುಲಿದ ವ್ಯಕ್ತಿಗಳು ಬಳಸಿದ ಸಿರಿಂಜ್ ಹಾಗೂ ಸೂಜಿಗಳನ್ನು ಸಂಸ್ಕರಿಸದೆ ಮತ್ತೆ ಬಳಕೆಸುವದರಿಂದ

    ಹೆಚ್‍ಐವಿ ಪತ್ತೆಗೆ ಇರುವ ಲಕ್ಷಣಗಳು:
    1. ಎಲಿಸಾ (ELISA) (Enzyme Linked Immunosorbent Assay)
    2. ಪಿಸಿಆರ್ ಪಾಲಿಮರೇಸ್ ಚೈನ್ ರಿಯಾಕ್ಷನ್ (Polymer Chain Reaction)
    3. ವೆಸ್ಟರ್ನ್ ಬ್ಲಾಟ್

    ಹೆಚ್‍ಐವಿ ವೈರಾಣವು ಒಬ್ಬ ವ್ಯಕ್ತಿಯ ದೇಹವನ್ನು ಪ್ರವೇಶಿಸಿದರೂ ದೀರ್ಘ ಸಮಯ ಯಾವುದೇ ರೋಗಲಕ್ಷಣವನ್ನು ಉಂಟು ಮಾಡದೇ ಇರಬಹುದು. ರೋಗವು ಪಕ್ವಗೊಳ್ಳುವ ಅವಧಿಯಲ್ಲಿ ಸೋಂಕು ತಗುಲಿದ ವ್ಯಕ್ತಿ ಸಾಮನ್ಯನಂತೆಯೇ ಇರುತ್ತಾನೆ. ಈ ಅವಧಿ ಮಕ್ಕಳಲ್ಲಿ 18 ರಿಂದ 24 ತಿಂಗಳಿದ್ದರೆ ಪ್ರೌಢವ್ಯಕ್ತಿಯಲ್ಲಿ 8 ರಿಂದ 10 ವರ್ಷಗಳಷ್ಟಿರಬಹುದು. ಒಂದು ತಿಳುವಳಿಕೆಯ ಪ್ರಕಾರ ಸೋಂಕು ತಗುಲಿದ ವ್ಯಕ್ತಿಗಳಲ್ಲಿ ಪ್ರತಿಶತ ಸುಮಾರು 50 ಮಂದಿಯಲ್ಲಿ ಏಡ್ಸ್ ರೋಗ ಸುಮಾರು ಹತ್ತು ವರ್ಷಗಳಲ್ಲಿ ಕಾಣಿಸಿಕೊಳ್ಳುತ್ತದೆ.

    ಏಡ್ಸ್ ಒಂದು ಸಾಂಕ್ರಾಮಿಕ ರೋಗವಾದರೂ ಅದು ಗಾಳಿ, ಆಹಾರಗಳ ಮೂಲಕ ಹರಡುವುದಿಲ್ಲ. ನೆಗಡಿ. ಇನ್ ಫ್ಲೂಯೆಂಜ್, ದಡಾರ ಮುಂತಾದ ರೋಗಗಳಂತೆ ಇದು ಸಾಂಕ್ರಾಮಿಕವಾಗಿ ಹರಡುವುದಿಲ್ಲ. ಇಂಥ ಒಂದು ಭಯಾನಕ ರೋಗಕ್ಕೆ ಯಾವುದೇ ರೀತಿಯ ಔಷಧವನ್ನು ಕಂಡುಹಿಡಿದಿಲ್ಲ. ಆದ್ರೆ ರೋಗ ಹರಡುವ ವೇಗವನ್ನು ಕುಂಠಿತಗೊಳಿಸುವ ಹಾಗೂ ರೋಗಿಯಲ್ಲಿ ಕಾಣಿಸಿಕೊಳ್ಳುವ ತಡೆಯುವ ಪ್ರಯತ್ನಗಳು ನಿರಂತರವಾಗಿ ಸಾಗಿವೆ.

    ಏಡ್ಸ್ ಈ ರೀತಿ ಹರಡಲ್ಲ:
    1. ಏಡ್ಸ್ ರೋಗಿ ಜೊತೆ ಹಸ್ತಲಾಘವ ಮಾಡುವ ಮೂಲಕ
    2. ಆಲಿಂಗನ ಮಾಡಿಕೊಳ್ಳುವ ಮೂಲಕ
    3. ಏಡ್ಸ್ ರೋಗಿ ಬಳಸಿದ ತಟ್ಟೆ, ಲೋಟ ಪಾತ್ರೆಗಳನ್ನು ಬಳಸುವುದರಿಂದ
    4. ರೋಗಿಯ ಜೊತೆ ಆಹಾರ ಸೇವಿಸುವುದರಿಂದ
    5. ಸಾರ್ವಜನಿಕ ಶೌಚಾಲಯಗಳನ್ನು, ಪಾರ್ಕ್, ಈಜುಕೊಳಗಳನ್ನು ಬಳಸುವುದರಿಂದ
    6. ಸೊಳ್ಳೆ ಅಥವಾ ಇತರ ಕೀಟಗಳ ಕಡಿತದಿಂದ

    ಎಚ್ಚರಿಕೆಯ ಕ್ರಮಗಳು
    1. ಸೋಂಕು ತಗುಲಿದ ವ್ಯಕ್ತಿಯ ಜೊತೆಗೆ ಲೈಂಗಿಕ ಸಂಪರ್ಕ ಹೊಂದುವುದನ್ನು ಸಂಪೂರ್ಣವಾಗಿ ತಡೆಯುವುದು.
    2. ಏಡ್ಸ್ ರೋಗಿ ಬಳಸಿದ ಸೂಜಿ ಸಿರಿಂಜ್ ಗಳನ್ನು ಬಳಸದೇ ಇರುವುದು
    3. ರಕ್ತದಾನ ಮಾಡುವುದಕ್ಕೆ ಇಲ್ಲವೇ ಪಡೆಯುವುದಕ್ಕೆ ಮುಂಚೆ ಹೆಚ್‍ಐವಿ ಸೋಂಕು ಇಲ್ಲದಿರುವುದನ್ನು ಖಚಿತ ಪಡಿಸಿಕೊಳ್ಳುವುದು.
    4. ಹೆಚ್‍ಐವಿ ಸೋಂಕು ತಗುಲಿರುವ ತಾಯಿಯ ತನ್ನ ಮಗುವಿಗೆ ಮೊಲೆಹಾಲು ನೀಡುವುದನ್ನು ತಡೆಯುವುದು.
    5. ಮಾದಕ ದ್ರವ್ಯ ವ್ಯಸನಿಯಾಗದಂತೆ ವ್ಯಕ್ತಿಗಳನ್ನು ತಡೆಯುವುದು. ಅಂಥವರಿಗೆ ದ್ರವ್ಯಸೇವನೆಯಯ ಹಂತದಲ್ಲಿ ಸೋಂಕು ತಗುಲುವ ಸಾಧ್ಯತೆಗಳಿರುತ್ತವೆ.

    ಏಡ್ಸ್ ಸೋಂಕಿತರಿಗೆ ಇರುವ ಯೋಜನೆಗಳು:
    ಅಂತ್ಯೋದಯ ಯೋಜನೆ, ರಾಜೀವ್ ಗಾಂಧಿ ವಸತಿ ಮನೆ ನಿರ್ಮಾಣ, ಉಚಿತ ಪರೀಕ್ಷೆ, ಕಡ್ಡಾಯ ಶಿಕ್ಷಣ, ವಿದ್ಯಾರ್ಥಿ ವೇತನ, ಧನಶ್ರೀ, ಮೈತ್ರಿ, ಚೇತನ ಯೋಜನೆ, ಉಚಿತ ಕಾನೂನು ಸೇವೆ, ಕಾಬಾ ಯೋಜನೆಗಳನ್ನು ಸರ್ಕಾರ ಅನುಷ್ಠಾನಗೊಳಿಸಿದೆ. ಸೋಂಕಿತ ಮಕ್ಕಳಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಆರೋಗ್ಯ ಆರೈಕೆಗಾಗಿ ಮಾಸಿಕ 650 ರೂ. ಮತ್ತು 750 ರೂ. ನೀಡಲಾಗುತ್ತಿದೆ.

    ಏಡ್ಸ್ ಬಗ್ಗೆ ಅರಿವು ಮೂಡಿಸಲು ಭಾರತೀಯ ರೈಲ್ವೆಯು ರೆಡ್ ರಿಬ್ಬನ್ ಎಕ್ಸ್ ಪ್ರೆಸ್ ಎಂಬ ಹೊಸ ರೈಲನ್ನು 2007 ಡಿಸೆಂಬರ್ 1ರಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಉದ್ಘಾಟಿಸಿದ್ದರು. 2017 ಡಿಸೆಂಬರ್ 2ರಂದು ಭಾರತ ಸರ್ಕಾರ ಆರೋಗ್ಯ ಮತ್ತು ಕಲ್ಯಾಣ ಕುಟುಂಬ ಕಲ್ಯಾಣ ಇಲಾಖೆ 2001-2014ರ ಅವಧಿಯ ರಾಷ್ಟ್ರೀಯ ಕಾರ್ಯತಂತ್ರ ಯೋಜನೆ ಮತ್ತು ಸಂಪರ್ಕ ಅಭಿಯಾನವನ್ನು ಡಿಸೆಂಬರ್ 1ರ ಏಡ್ಸ್ ದಿನಾಚರಣೆ ಅಂಗವಾಗಿ ಉದ್ಘಾಟಿಸಿದೆ. 2030ರೊಳಗೆ ಸಾಂಕ್ರಾಮಿಕ ರೋಗ ಏಡ್ಸ್ ನ್ನು ಸಂಪೂರ್ಣ ಹತೋಟಿಗೆ ತರುವ ಉದ್ದೇಶದಿಂದ 90:90:90 ಕಾರ್ಯತಂತ್ರವನ್ನು ಕೇಂದ್ರ ಸರ್ಕಾರ ರೂಪಿಸಿದೆ. ಇದರ ಅರ್ಥ ಶೇ.90 ದೇಶದ ಜನರಿಗೆ ಏಡ್ಸ್ ರೋಗದ ಬಗ್ಗೆ ಅರಿವು ಕಾರ್ಯಕ್ರಮಗಳನ್ನು ಮೂಡಿಸುವುದು. ಶೇ.90 ರಷ್ಟು ಹೆಚ್‍ಐವಿ ರೋಗದ ಸ್ಥಿತಿಯನ್ನು ಶೀಘ್ರವಾಗಿ ಗುರುತಿಸಿ ಎ.ಆರ್.ಟಿ. ಚಿಕಿತ್ಸೆ ನೀಡುವುದು ಮತ್ತು ಶೇ.90 ರಷ್ಟು ಜನರಿಗೆ ಎಆರ್‍ಟಿ (Antietroviral Theraphy) ಚಿಕಿತ್ಸೆ ನೀಡುವುದು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv