Tag: health

  • ಪೇಜಾವರ ಶ್ರೀಗಳ ಆರೋಗ್ಯ ಸುಧಾರಣೆಯಾಗಿದೆ- ಸಿಎಂ ಬಿಎಸ್‍ವೈ

    ಪೇಜಾವರ ಶ್ರೀಗಳ ಆರೋಗ್ಯ ಸುಧಾರಣೆಯಾಗಿದೆ- ಸಿಎಂ ಬಿಎಸ್‍ವೈ

    -ಆಸ್ಪತ್ರೆಗೆ ಭಕ್ತರು ಬರೋದು ಬೇಡ

    ಉಡುಪಿ: ಕಳೆದ ಎರಡು ದಿನಗಳಿಗೆ ಹೋಲಿಸಿದರೆ ಶ್ರೀಗಳ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆಯಾಗಿದೆ. ಈಗ ಶ್ರೀಗಳು ಕಣ್ಣು ಬಿಡುತ್ತಿದ್ದು, ಸಹಜ ಉಸಿರಾಟಕ್ಕೆ ಪ್ರಯತ್ನ ಮಾಡುತ್ತಿದ್ದಾರೆಂದು ಶ್ರೀಗಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ತಿಳಿಸಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.

    ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪೇಜಾವರ ಶ್ರೀಗಳನ್ನು ಭೇಟಿ ಮಾಡಿ ಮಾಧ್ಯಮಗಳ ಜತೆಗೆ ಮಾತನಾಡಿದ ಅವರು, ಪೇಜಾವರ ಶ್ರೀಪಾದರು ಶೀಘ್ರ ಗುಣಮುಖರಾಗಿ, ಮತ್ತೆ ಅವರು ಕೃಷ್ಣ ಮಠಕ್ಕೆ ಬಂದು ಕೃಷ್ಣನ ಸೇವೆ ಮಾಡುವಂತಾಗಬೇಕು. ಅದನ್ನು ನೋಡುವ ಸೌಭಾಗ್ಯ ನಮಗೆ ಸಿಗಬೇಕೆಂದು ಭಗವಂತನಲ್ಲಿ ಪ್ರಾರ್ಥನೆ ಮಾಡುತ್ತೇನೆ. ಮಣಿಪಾಲ ಕೆಎಂಸಿಯ ತಜ್ಞ ವೈದ್ಯರ ತಂಡ ಶ್ರೀಗಳ ಆರೋಗ್ಯ ಸುಧಾರಣೆಗೆ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದಾರೆ ಎಂದರು.

    ಶ್ರೀಗಳ ಆರೋಗ್ಯದಲ್ಲಿ ನಿನ್ನೆಗಿಂತ ಇಂದು ಸುಧಾರಣೆ ಆಗಿದೆ. ಕಣ್ಣು ಬಿಡುತ್ತಿದ್ದಾರೆ. ಮಾಧ್ಯಮದವರು ತಪ್ಪು ತಿಳಿಯುವ ಅಗತ್ಯವಿಲ್ಲ. ಶ್ರೀಗಳ ಆರೋಗ್ಯದ ದೃಷ್ಟಿಯಿಂದ ಭದ್ರತೆಯನ್ನು ಬಿಗಿ ಮಾಡಲಾಗಿದೆ ಎಂದು ಹೇಳಿದರು. ಹೆಚ್ಚು ಕಟ್ಟೆಚ್ಚರ ವಹಿಸಲಾಗಿದೆ. ಇದಕ್ಕೆ ಮಾಧ್ಯಮದವರು ಸಹಕರಿಸಬೇಕು. ಶ್ರೀಗಳ ಅಭಿಮಾನಿಗಳು, ಭಕ್ತರಲ್ಲಿ ವಿನಂತಿ ಮಾಡುತ್ತೇನೆ. ಆಸ್ಪತ್ರೆಗೆ ಭೇಟಿ ನೀಡುವುದು ಬೇಡ, ಅವರು ಗುಣಮುಖರಾಗಿ ಕೃಷ್ಣಮಠಕ್ಕೆ ಬಂದ ನಂತರ ಅವರ ದರ್ಶನ ಪಡೆಯಬಹುದು ಎಂದು ತಿಳಿಸಿದರು.

    ಪ್ರಧಾನಿ ಮೋದಿ, ಗೃಹ ಮಂತ್ರಿ ಅಮಿತ್ ಶಾ ಅವರು ಕೂಡ ದೂರವಾಣಿ ಮೂಲಕ ಶ್ರೀಗಳ ಆರೋಗ್ಯ ವಿಚಾರಿಸಿದ್ದಾರೆ. ಪೇಜಾವರ ಶ್ರೀಗಳ ಆಪೇಕ್ಷೆಯಂತೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಗುತ್ತಿದೆ. ಅದಕ್ಕೆ ಶ್ರೀಗಳ ಆಶೀರ್ವಾದ ಸಿಗಬೇಕೆಂಬುವುದೇ ಎಲ್ಲರ ಆಶಯವಾಗಿದೆ. ಇತ್ತೀಚೆಗೆ ಶ್ರೀಗಳನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ಆಶೀರ್ವಾದ ಪಡೆದಿದ್ದೆ ಎಂದು ಹೇಳಿದರು.

  • ಪೇಜಾವರಶ್ರೀ ಗುಣಮುಖಕ್ಕೆ ನವಗ್ರಹ ಪೂಜೆ, ಮೃತ್ಯುಂಜಯ ಜಪ

    ಪೇಜಾವರಶ್ರೀ ಗುಣಮುಖಕ್ಕೆ ನವಗ್ರಹ ಪೂಜೆ, ಮೃತ್ಯುಂಜಯ ಜಪ

    ಚಾಮರಾಜನಗರ: ಉಡುಪಿ ಪೇಜಾವರ ಮಠದ ವಿಶ್ವೇಶ್ವರ ತೀರ್ಥರ ಆರೋಗ್ಯ ಸುಧಾರಣೆಗಾಗಿ ನಗರದ ಕೊಳದ ಗಣಪತಿ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

    ಚಾಮರಾಜನಗರದಲ್ಲಿ ಪೇಜಾವರ ಶ್ರೀ ಶೀಘ್ರವೇ ಗುಣಮುಖರಾಗಲಿ ಎಂದು ಮೃತ್ಯುಂಜಯ ಜಪ ಹಾಗೂ ವಿಶೇಷ ಪೂಜೆ ಸಲ್ಲಿಸಲಾಯಿತು. ಪೇಜಾವರಶ್ರೀ ಶೀಘ್ರ ಗುಣಮುಖರಾಗಲು ನವಗ್ರಹ ಪೂಜೆ, ಮೃತ್ಯುಂಜಯ ಜಪಹರಳುಕೋಟೆ ಜನಾರ್ಧನಸ್ವಾಮಿ ದೇಗುಲದ ಅರ್ಚಕ ಅನಂತಪ್ರಸಾದ್ ನೇತೃತ್ವದಲ್ಲಿ ನವಗ್ರಹ ಪೂಜೆ, ಮೃತ್ಯುಂಜಯ ಜಪ ನೆರವೇರಿಸಿ ಪೇಜಾವರ ಶ್ರೀಗಳು ಶೀಘ್ರ ಗುಣಮುಖರಾಗಲಿ ಎಂದು ಮನವಿ ಮಾಡಿದರು.

    ಈ ವೇಳೆ ಮಾತನಾಡಿದ ಅರ್ಚಕ ಅನಂತಪ್ರಸಾದ್, ಧಾರ್ಮಿಕ ಮುಖಂಡರಾಗಿ, ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಪೇಜಾವರಶ್ರೀಗಳ ಸೇವೆ ನಾಡಿಗೆ ಅಗತ್ಯವಿದೆ ಎಂದರು.

  • ಪೇಜಾವರ ಶ್ರೀಗಳ ಆರೋಗ್ಯಕ್ಕಾಗಿ ರಾಯಚೂರಿನಲ್ಲಿ ವಿಶೇಷ ಪ್ರಾರ್ಥನೆ

    ಪೇಜಾವರ ಶ್ರೀಗಳ ಆರೋಗ್ಯಕ್ಕಾಗಿ ರಾಯಚೂರಿನಲ್ಲಿ ವಿಶೇಷ ಪ್ರಾರ್ಥನೆ

    ರಾಯಚೂರು: ಉಡುಪಿಯ ಪೇಜಾವರ ಶ್ರೀಗಳು ಅನಾರೋಗ್ಯದಿಂದ ಆಸ್ಪತ್ರೆ ದಾಖಲಾದ ಹಿನ್ನೆಲೆ ಬೇಗ ಗುಣಮುಖರಾಗಲಿ ಎಂದು ಅವರ ಶಿಷ್ಯ ಬಳಗ ರಾಯಚೂರಿನಲ್ಲಿ ವಿಶೇಷ ಪೂಜೆ ಮಾಡಿಸಿದ್ದಾರೆ.

    ರಾಯಚೂರು ನಗರದ ಕೋಟೆ ಪ್ರದೇಶದಲ್ಲಿರುವ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ವಿಪ್ರ ಯುವಕ ಸಂಘ ಹಾಗೂ ರಾಘವೇಂದ್ರ ವಿದ್ಯಾರ್ಥಿ ವಸತಿ ನಿಲಯದ ವಿದ್ಯಾರ್ಥಿಗಳು ಪ್ರಾರ್ಥನೆ ಸಲ್ಲಿಸಿದರು.

    ಹಿಂದು ಧರ್ಮದ ಉನ್ನತಿಗೆ ಶ್ರಮಿಸಿ ಹಿಂದು ಧರ್ಮದ ಪ್ರಮುಖರಾಗಿರುವ ಶ್ರೀ ವಿಶ್ವೇಶತೀರ್ಥ ಸ್ವಾಮಿಗಳು ಬೇಗ ಗುಣಮುಖರಾಗಲಿ ಇನ್ನಷ್ಟು ದಿನ ಭಕ್ತರಿಗೆ ಶಿಷ್ಯರಿಗೆ ಮಾರ್ಗದರ್ಶನ ನೀಡಲಿ ಎಂದು ಪ್ರಾರ್ಥಿಸಿದರು. ನೂರಾರು ಜನರು ವಿಷ್ಣು ಸಹಸ್ರ ಪರಾಯಣ, ಮನ್ನಿಸೋತ್ರು, ಸುಂದರಕಾಂಡ, ಗುರುಸ್ತ್ರೋತ್ರ ಪಾರಾಯಣ ಮಾಡಿದರು. ಸ್ವಾಮಿಗಳ ಆರೋಗ್ಯ ವೃದ್ಧಿಯಾಗಲಿ ಎಂದು ಶ್ರೀರಾಘವೇಂದ್ರ ಸ್ವಾಮಿಗಳು ಹಾಗೂ ಟೀಕಾರಾಯರ ಸನ್ನಿದಿಯಲ್ಲಿ ಪ್ರಾರ್ಥಿಸಿದರು.

  • 2 ನಿಮಿಷದಲ್ಲಿ ನಿಮ್ಮ ಮಕ್ಕಳ ಹೊಟ್ಟೆ ಸೇರಬಹುದು ವಿಷ

    2 ನಿಮಿಷದಲ್ಲಿ ನಿಮ್ಮ ಮಕ್ಕಳ ಹೊಟ್ಟೆ ಸೇರಬಹುದು ವಿಷ

    – ಮಾರಾಟವಾಗ್ತಿವೆ ಅವಧಿ ಮುಗಿದ ನೂಡಲ್ಸ್

    ಬೆಂಗಳೂರು: ಪ್ರತಿಯೊಬ್ಬರಿಗೂ ಹೊಟ್ಟೆ ಹಸಿದಾಗ ನೆನಪಾಗುವುದು ಫಟಾಫಟ್ ನೂಡಲ್ಸ್. ಎರಡೇ ಎರಡೂ ನಿಮಿಷದಲ್ಲಿ ರೆಡಿಯಾಗುವ ಈ ನೂಡಲ್ಸ್ ಎಂದರೆ ಮಕ್ಕಳಿಗೆ ತುಂಬ ಇಷ್ಟ. ಬಿಸಿ ಬಿಸಿಯಾದ, ವೆರೈಟಿ ಟೇಸ್ಟಿ ನೂಡಲ್ಸ್ ಗಳನ್ನು ಬಾಯಿ ಚಪ್ಪರಿಸಿಕೊಂಡು ತಿನ್ನುವ ಮುನ್ನ ಈ ಸ್ಟೋರಿ ಓದಿ.

    ಎರಡು ನಿಮಿಷದಲ್ಲಿ ತಯಾರಾಗುವ ನೂಡಲ್ಸ್ ಗಳು ನಮ್ಮ ದೇಹಕ್ಕೆ ಅಪಾಯಕಾರಿಯಾಗಿದ್ದು, ಪಬ್ಲಿಕ್ ಟಿವಿ ನಡೆಸಿದ ಸ್ಟಿಂಗ್ ಆಪರೇಷನ್‍ನಲ್ಲಿ ಇದು ಬಯಲಾಗಿದೆ. ಈ ನೂಡಲ್ಸ್ ಆಡಿಕ್ಷನ್‍ನ್ನೇ ಬಳಸಿಕೊಂಡು ಈಗ ಬೆಂಗಳೂರಿನಲ್ಲಿ ಅವಧಿ ಮುಗಿದ ನೂಡಲ್ಸ್ ಅನ್ನು ಮಾರಟ ಮಾಡಲಾಗುತ್ತಿದೆ.

    ಸ್ಟಿಂಗ್ ಆಪರೇಷನ್ 1
    ಸ್ಥಳ: ಕೆ.ಆರ್ ಮಾರುಕಟ್ಟೆ
    ಕೆ.ಆರ್ ಮಾರುಕಟ್ಟೆಯ ರಸ್ತೆ ಬದಿಯಲ್ಲಿರುವ ದಿನಸಿ ಅಂಗಡಿಗಳಲ್ಲಿ ನೂಡಲ್ಸ್ ಅನ್ನು ಗೋಣಿಚೀಲದಲ್ಲಿ ಮಾರಾಟಕ್ಕಿಡಲಾಗಿದೆ. ಅವಧಿ ಮುಗಿದ ಪ್ರತಿಷ್ಠಿತ ಕಂಪೆನಿಗಳ ನೂಡಲ್ಸ್ ಗಳನ್ನು, ಇಲ್ಲಿ ಪ್ಯಾಕೇಟ್ ಕತ್ತರಿಸಿ, ಧೂಳು ಬೀಳುವ ಹಾಗೆ ರಾಶಿ ರಾಶಿ ತುಂಬಿಟ್ಟಿದ್ದಾರೆ. ಸಾಮಾನ್ಯವಾಗಿ 300 ಗ್ರಾಂನ ಒಂದು ನೂಡಲ್ಸ್ ಪ್ಯಾಕೇಟ್‍ಗೆ 40 ರೂ. ಇರುತ್ತೆ. ಆದರೆ ಇದೇ ಕಂಪೆನಿಯ ನೂಡಲ್ಸ್ ಇಲ್ಲಿ ಕೆ.ಜಿಗೆ ಕೇವಲ 40 ರೂ. ಸಿಗುತ್ತಿದೆ.

    ಸ್ಟಿಂಗ್ ಆಪರೇಷನ್ 2
    ಸ್ಥಳ: ಶಿವಾಜಿನಗರ
    ಶಿವಾಜಿನಗರದಲ್ಲೂ ಯಾವುದೇ ಪ್ಯಾಕೆಟ್‍ಗಳಿಲ್ಲದೇ, ಬಿಡಿ ಬಿಡಿಯಾಗಿ ಮಾರಾಟವಾಗಿದೆ. ಅಷ್ಟೇ ಅಲ್ಲದೇ ನೂಡಲ್ಸ್ ಪ್ರಿಪೇರ್ ಮಾಡಲು ಬಳಸುವ ಮಸಾಲಾ ಪ್ಯಾಕೆಟ್‍ನ ಮೇಲೂ ಯಾವುದೇ ರೀತಿಯ ಡೇಟ್‍ಗಳಿಲ್ಲ. ಇವುಗಳನ್ನು ಎಷ್ಟು ವರ್ಷದಿಂದ ಮಾರಲಾಗುತ್ತಿದೆ ಎಂಬ ಸುಳಿವು ಸಹ ಇಲ್ಲ. ಅವಧಿ ಮುಗಿದ ನೂಡಲ್ಸ್ ಗಳನ್ನೇ ಮಾರುತ್ತೇವೆಂದು ಸ್ವತಃ ವ್ಯಾಪಾರಿಗಳೇ ಒಪ್ಪಿಕೊಳ್ಳುತ್ತಾರೆ.

    ಪ್ರತಿನಿಧಿ: ಕೊಡೋದು ಹೇಳಿ ಸರ್
    ವ್ಯಾಪಾರಿ: ಒಳ್ಳೆಯದು ಬೇಕಾದ್ರೆ ಆಗಲ್ಲ. ಮಿಕ್ಸ್ ಇದೆ, ಮೂಟೆ ಇದೆ ಹಾಗೆ ಎತ್ತಿ ಕೊಡ್ತೇನೆ. ಕೆ.ಜಿಗೆ 35ರೂ
    ಪ್ರತಿನಿಧಿ: ಇದು ಏಕ್ಸ್ ಪೈರಿ ಡೇಟ್ ಆಗಿರೋದಾ?
    ವ್ಯಾಪಾರಿ: ಹಾ. ಇದು ಡ್ಯಾಮೇಜ್ ಆಗಿರೋದು.

    ಪ್ಯಾಕೆಟ್ ಇಲ್ಲದೇ ಬೀದಿ ಬದಿಯಲ್ಲಿ ಬಿಕರಿಯಾಗಿ ನೂಡಲ್ಸ್ ಗಳನ್ನು ಮಾರುವುದೇ ತಪ್ಪು. ಜೊತೆಗೆ ಹೀಗೆ ಸಂಗ್ರಹಿಸಿದ ಮಸಾಲಾ ಬಳಸುವುದೇ ತಪ್ಪು ಎಂದು ಆಹಾರ ತಜ್ಞರು ಹೇಳುತ್ತಾರೆ.

    ಕಳಪೆ ಹಾಗೂ ಅವಧಿ ಮುಗಿದ ನೂಡಲ್ಸ್ ಗಳನ್ನ ತಿನ್ನುವುದರಿಂದ ಆಗುವ ದುಷ್ಪರಿಣಾಮಗಳು:
    * ಅವಧಿ ಮುಗಿದ ನೂಡಲ್ಸ್ ಕ್ರಮೇಣ ವಿಷವಾಗುವುದರಿಂದ ಹೊಟ್ಟೆಗೆ ವಿಷ ಸೇರಲಿದೆ.
    * ನೂಡಲ್ಸ್ ನಲ್ಲಿರುವ ಮಸಾಲಾ ರಾಸಾಯನಿಕವಾಗಿ ಬದಲಾಗಿ ನಮ್ಮ ದೇಹ ಸೇರುತ್ತೆ.
    * ಮಸಾಲಾದಲ್ಲಿ ಫಂಗಸ್‍ಗಳು ಉತ್ಪತ್ತಿಯಾಗಿ, ಹೊಟ್ಟೆ ನೋವು, ವಾಂತಿ-ಭೇದಿ ಬರಬಹುದು.

    ನಮ್ಮ ಕಣ್ಣೇದಿರುಲ್ಲೇ ಅವಧಿ ಮೀರಿದ ಪದಾರ್ಥಗಳು ಮಾರಾಟವಾಗುತ್ತಿದೆ. ಆದರೂ, ಏನೂ ಗೊತ್ತಿಲ್ಲದಂತೆ ಅಧಿಕಾರಿಗಳು ಕಣ್ಮುಚ್ಚಿದ್ದಾರೆ.

  • 11 ತಿಂಗಳ ಪೋರಿಗೆ ಸಕ್ಕರೆ ಕಾಯಿಲೆ- 3 ವರ್ಷದ ಮಗನಿಗೆ ಹೃದಯದ ಸಮಸ್ಯೆ

    11 ತಿಂಗಳ ಪೋರಿಗೆ ಸಕ್ಕರೆ ಕಾಯಿಲೆ- 3 ವರ್ಷದ ಮಗನಿಗೆ ಹೃದಯದ ಸಮಸ್ಯೆ

    -ಫ್ರಿಡ್ಜ್ ಇಲ್ಲದೇ ಮಡಿಕೆಯಲ್ಲಿ ಔಷಧಿ ಇರಿಸೋ ತಂದೆ
    -ಸಹಾಯದ ನಿರೀಕ್ಷೆಯಲ್ಲಿ ಬಡ ದಂಪತಿ

    ಕೊಪ್ಪಳ: ಹೊಟ್ಟೆ ತುಂಬ ಬೇಕಾದ್ರೆ ಪ್ರತಿದಿನ ದುಡಿಯಲೇ ಬೇಕು. ಅಂತಹ ಬಡಕುಟುಂಬದ ದಂಪತಿಗೆ ಮುದ್ದಾದ ಎರಡು ಕಂದಮ್ಮಗಳಿವೆ. ಬಡತನವಿದ್ದರೆ ಪರವಾಗಿಲ್ಲ ಹೇಗೋ ಜೀವನ ನಡೆಸಬಹುದಿತ್ತು. ಆದರೆ ದಂಪತಿಯ ಮಕ್ಕಳು ಅನಾರೋಗ್ಯದಿಂದ ಬಳಲುತ್ತಿದ್ದು, ಕುಟುಂಬ ಸಹಾಯದ ನಿರೀಕ್ಷೆಯಲ್ಲಿದೆ.

    ದುರ್ಗಪ್ಪ ಮತ್ತು ಸಣ್ಣ ಮರೆಕ್ಕ ದಂಪತಿ ಜಿಲ್ಲೆಯ ಗಂಗಾವತಿ ನಗರದಲ್ಲಿರುವ ಪುಟ್ಟ ಗುಡಿಸಲಲ್ಲಿ ವಾಸವಾಗಿದ್ದಾರೆ. ದುರ್ಗಪ್ಪ ಮೀನು ಮಾರಾಟದ ವ್ಯಾಪಾರ ನಡೆಸುತ್ತಿದ್ದಾರೆ. ಈ ವ್ಯಾಪಾರದಿಂದಲೇ ಬಂದ ಹಣದಿಂದ ಕುಟುಂಬದ ನಿರ್ವಹಣೆ ನಡೆಯುತ್ತಿತ್ತು. ದಂಪತಿಯ ಇಬ್ಬರು ಮಕ್ಕಳು ಆನಾರೋಗ್ಯದಿಂದ ಬಳಲುತ್ತಿದ್ದಾರೆ. ಮೂರು ವರ್ಷದ ಮಗ ಹನುಮೇಶ್ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರೆ, 11 ತಿಂಗಳ ದೀಪಿಕಾಗೆ ಸಕ್ಕರೆ ಅಂಶ ಕಡಿಮೆ ಆಗುತ್ತಿರುತ್ತದೆ.

    11 ತಿಂಗಳ ಪುಟಾಣಿ ದೀಪಿಕಾಗೆ ದಿನಕ್ಕೆ ನಾಲ್ಕು ಬಾರಿ ರಕ್ತ ಪರೀಕ್ಷೆ ನಡೆಸಿ ಸಕ್ಕರೆ ಅಂಶವನ್ನು ಪರಿಶೀಲಿಸಬೇಕು. ಹಾಗೆಯೇ ಪ್ರತಿದಿನ ಇನ್ಸುಲಿನ್ ಇಂಜೆಕ್ಷನ್ ನೀಡಬೇಕು. ರಕ್ತ ಪರೀಕ್ಷೆ ಮತ್ತು ಇಂಜೆಕ್ಷನ್ ನೀಡಲು ಆಸ್ಪತ್ರೆಗೆ ಹೋದರೆ ನೂರಾರು ರೂಪಾಯಿ ಹಣ ನೀಡಬೇಕು. ಆದ್ದರಿಂದ ತಂದೆ ಮನೆಯಲ್ಲಿ ಮಗಳಿಗೆ ಇಂಜೆಕ್ಷನ್ ಮತ್ತು ರಕ್ತ ಪರೀಕ್ಷೆ ನಡೆಸುತ್ತಾರೆ. ಸಕ್ಕರೆ ಅಂಶ ಕಡಿಮೆ ಆದಾಗ ದೀಪಿಕಾಗೆ ಇಂಜೆಕ್ಷನ್ ನೀಡೋದು ಅನಿವಾರ್ಯವಾಗಿದೆ.

    ದೀಪಿಕಾಗೆ ಸಕ್ಕರೆ ಅಂಶ ಕಡಿಮೆಯಾದ್ರೆ ಪಿಟ್ಸ್ ಬರುತ್ತೆ. ಹಾಗಾಗಿ ಆಕೆಯ ಸಕ್ಕರೆ ಅಂಶದ ಬಗ್ಗೆ ಪೋಷಕರು ಗಮನ ನೀಡಲೇಬೇಕು. ಮಕ್ಕಳ ಆರೋಗ್ಯ ನೋಡುತ್ತಾ ದುರ್ಗಪ್ಪ ಮನೆಯಲ್ಲಿ ಕುಳಿತರೆ ಹೊಟ್ಟೆ ತುಂಬಲ್ಲ. ಈಗಾಗಲೇ ಮಗಳ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿ ವ್ಯಯ ಮಾಡಿ ಸಾಲಗಾರರಾಗಿದ್ದಾರೆ. ಪ್ರತಿದಿನ ದೀಪಿಕಾಗೆ ಇಂಜೆಕ್ಷನ್ ನೀಡಬೇಕಾಗಿದ್ದರಿಂದ ನೂರಾರು ರೂಪಾಯಿ ಹಣ ಖರ್ಚು ಮಾಡಬೇಕು. ವೈದ್ಯರು ನೀಡಿರುವ ಇಂಜೆಕ್ಷನ್ ಗಳನ್ನು ಫ್ರಿಡ್ಜ್ ನಲ್ಲಿ ಇರಿಸುವಂತೆ ಹೇಳಿದ್ದಾರೆ. ವಿದ್ಯುತ್ ಸಂಪರ್ಕವೇ ಇಲ್ಲದ ಈ ಜೋಪಡಿಯಲ್ಲಿ ಫ್ರಿಡ್ಜ್ ಕನಸಿನ ಮಾತು. ಹಾಗಾಗಿ ಇಂಜೆಕ್ಷನ್ ಗಳನ್ನು ಮಡಿಕೆಯಲ್ಲಿ ಇಡುತ್ತೇವೆ ಎಂದು ದುರ್ಗಪ್ಪ ಹೇಳುತ್ತಾರೆ.

    ಇದೊಂದು ಅನುವಂಶಿಕ ಕಾಯಿಲೆಯಾಗಿದ್ದು, ಸಕ್ಕರೆ ಅಂಶ ಕಡಿಮೆ ಆಯ್ತು ಅಂದ್ರೆ ಮಕ್ಕಳಿಗೆ ಪಿಟ್ಸ್ ಬರುವ ಸಾದ್ಯತೆ ಇದೆ. ಈ ಕಾಯಿಲೆ ಲಕ್ಷ ಮಕ್ಕಳಿಗೆ ಒಂದರಿಂದ ಇಬ್ಬರಲ್ಲಿ ಮಾತ್ರ ಕಾಣಿಸುತ್ತದೆ. ನಾವು ಪ್ರಾಥಮಿಕ ಚಿಕಿತ್ಸೆ ನೀಡಿ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವಂತೆ ಸೂಚಿಸಲಾಗಿತ್ತು. ದಂಪತಿ ಮಗಳನ್ನು ಕರೆದುಕೊಂಡು ಹೋದಾಗ ದೀಪಿಕಾಗೆ ಸಕ್ಕರೆ ಅಂಶ ಕಡಿಮೆ ಇರೋದು ಗೊತ್ತಾಗಿದೆ. ಪ್ರತಿದಿನ ದೀಪಿಕಾಗೆ ಚಿಕಿತ್ಸೆ ನೀಡಬೇಕು. ಇಲ್ಲವಾದ್ರೆ ಅದು ಆಕೆಯ ಪ್ರಾಣಕ್ಕೆ ಅಪಾಯ ಎಂದು ಡಾ.ಅಮರೇಶ್ ಪಾಟೀಲ್ ಹೇಳುತ್ತಾರೆ.

    ಇಬ್ಬರು ಮಕ್ಕಳಿಗೂ ಪ್ರತಿದಿನ ಔಷಧಿಯ ಉಪಚಾರ ಬೇಕಿದೆ. ಈಗಾಗಲೇ ಮಗಳ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿರುವ ದುರ್ಗಪ್ಪ ಸಹಾಯದ ನಿರೀಕ್ಷೆಯಲ್ಲಿದ್ದಾರೆ.

  • ತನ್ವೀರ್ ಸೇಠ್ ಆರೋಗ್ಯದಲ್ಲಿ ಚೇತರಿಕೆ- ಆಸ್ಪತ್ರೆಯಿಂದ ಡಿಸ್ಚಾರ್ಜ್

    ತನ್ವೀರ್ ಸೇಠ್ ಆರೋಗ್ಯದಲ್ಲಿ ಚೇತರಿಕೆ- ಆಸ್ಪತ್ರೆಯಿಂದ ಡಿಸ್ಚಾರ್ಜ್

    ಮೈಸೂರು: ಹಲ್ಲೆಗೆ ಒಳಗಾಗಿದ್ದ ನರಸಿಂಹರಾಜ ಕ್ಷೇತ್ರದ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

    ನಗರದ ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತನ್ವೀರ್ ಸೇಠ್ ಅವರು ಸೋಮವಾರ ರಾತ್ರಿ ಡಿಸ್ಚಾರ್ಜ್ ಆಗಿ ಮನೆಗೆ ತೆರಳಿದ್ದಾರೆ. ಆರೋಗ್ಯದಲ್ಲಿ ಚೇತರಿಕೆ ಕಂಡ ಹಿನ್ನೆಲೆಯಲ್ಲಿ ವೈದ್ಯರು ಡಿಸ್ಚಾರ್ಜ್ ಆಗುವಂತೆ ಸೂಚಿಸಿದ್ದು, ಮನೆಯಲ್ಲೆ ವಿಶ್ರಾಂತಿ ಪಡೆಯಲು ತಿಳಿಸಿದ್ದಾರೆ.

    ಕಳೆದ ಎಂಟು ದಿನಗಳಿಂದ ಶಾಸಕರು ಚಿಕಿತ್ಸೆ ಪಡೆಯುತ್ತಿದ್ದರು. ಕೊಲೆ ಯತ್ನದಿಂದಾಗಿ ಶಾಸಕರ ಕುತ್ತಿಗೆ ಹಾಗೂ ಕಿವಿ ಭಾಗಕ್ಕೆ ಗಾಯವಾಗಿತ್ತು. ಆರೋಗ್ಯದಲ್ಲಿ ಚೇತರಿಕೆ ಕಂಡ ಹಿನ್ನೆಲೆಯಲ್ಲಿ ನವೆಂಬರ್ 18ರ ರಾತ್ರಿಯಿಂದ ಶಾಸಕರಿಗೆ ಅಳವಡಿಸಿದ್ದ ವೆಂಟಿಲೇಟರ್ ತೆಗೆಯಲಾಗಿತ್ತು. ಇದೀಗ ತನ್ವೀರ್ ಆರೋಗ್ಯದಲ್ಲಿ ಆಸ್ಪತ್ರೆಯಿಂದ ಚೇತರಿಕೆ ಕಂಡಿದ್ದು, ಡಿಸ್ಚಾರ್ಜ್ ಆಗಿದ್ದಾರೆ.

    ಈ ವಿಚಾರವಾಗಿ ಅಂದು ಮಾತನಾಡಿದ್ದ ಕೊಲಂಬಿಯಾ ಏಷಿಯಾ ಆಸ್ಪತ್ರೆ ವೈದ್ಯ ಡಾ.ಉಪೇಂದ್ರ ಶಣೈ, ಕುತ್ತಿಗೆ ಭಾಗಕ್ಕೆ ಚಾಕು ಹಾಕಿರುವ ಕಾರಣ ತೀವ್ರವಾಗಿ ಪೆಟ್ಟಾಗಿದೆ. ತನ್ವೀರ್ ಸೇಠ್ ಅವರ ರಕ್ತನಾಳ ನರಗಳಿಗೆ ತೀವ್ರ ಗಾಯವಾಗಿದೆ. ಬಿಪಿ, ಶುಗರ್ ಸಮಾನ್ಯ ಸ್ಥಿತಿಗೆ ತರಲು ಪ್ರಯತ್ನ ಪಡುತ್ತಿದ್ದೇವೆ. ಆಗಲೇ ಒಂದು ಶಸ್ತ್ರ ಚಿಕಿತ್ಸೆಯನ್ನು ಮಾಡಿದ್ದೇವೆ. ಮುಂದಿನ 48 ಗಂಟೆಯವರೆಗೂ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ಹೇಳಿದ್ದರು.

    ನವೆಂಬರ್ 17ರ ರಾತ್ರಿ ತನ್ವೀರ್ ಸೇಠ್ ಬನ್ನಿ ಮಂಟಪ ಸಮೀಪದ ಪಾರ್ಟಿ ಹಾಲಿಗೆ ತಮ್ಮ ಆತ್ಮೀಯ ಮಗನ ಮದುವೆಯ ಬೀಗರೂಟಕ್ಕೆ ಆಗಮಿಸಿದ್ದರು. ಈ ವೇಳೆ ಯುವಕ ಫರಾನ್ (24) ಚಾಕುವಿನಿಂದ ಹಲ್ಲೆ ಮಾಡಿದ್ದ. ಅವರ ಕತ್ತಿಗೆ ಭಾಗಕ್ಕೆ ಚಾಕು ಹಾಕಿ ಪರಾರಿಯಾಗುತ್ತಿದ್ದ ಆತನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ನಂತರ ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಸೇಠ್ ಅವರನ್ನು ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

  • ಆರೋಗ್ಯಕರವಾದ ಸೀಬೆಕಾಯಿ ಜ್ಯೂಸ್ ಮಾಡೋ ಸುಲಭ ವಿಧಾನ

    ಆರೋಗ್ಯಕರವಾದ ಸೀಬೆಕಾಯಿ ಜ್ಯೂಸ್ ಮಾಡೋ ಸುಲಭ ವಿಧಾನ

    ಸೀಬೆಕಾಯಿ ಅಥವಾ ಪೇರಳೆ ಅಂದರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಎಲ್ಲರಿಗೂ ಚಿರಪರಿಚಿತ. ಕಡಿಮೆ ಬೆಲೆಗೆ ಸಿಗುವ ಈ ಹಣ್ಣಿನಲ್ಲಿ ಆರೋಗ್ಯ ಕಾಪಾಡುವ ಅನೇಕ ಅಂಶಗಳಿವೆ. ಸೀಬೆಕಾಯಿ ಜ್ಯೂಸ್ ಕೂಡ ಆರೋಗ್ಯಕ್ಕೆ ಬಹಳ ಉಪಯೋಗಕಾರಿ. ಇದು ತಂಪಿನ ಜೊತೆ ಪೋಷಕಾಂಶಗಳನ್ನು ದೇಹಕ್ಕೆ ಪೂರೈಕೆ ಮಾಡುತ್ತದೆ. ಸೀಬೆ ಜ್ಯೂಸ್ ನಮ್ಮ ದೇಹದ ವಿಟಮಿನ್ ಸಿ ಕೊರತೆಯನ್ನು ಹೋಗಲಾಡಿಸುತ್ತದೆ. ಹೀಗಾಗಿ ಅಂಗಡಿಗಳಲ್ಲಿ ಜ್ಯೂಸ್ ಕೊಂಡು ಕುಡಿಯುವ ಬದಲಾಗಿ ಮನೆಯಲ್ಲಿಯೇ ಬೇಗನೇ ಜ್ಯೂಸ್ ತಯಾರಿಸಬಹುದು. ಸೀಬೆ ಜ್ಯೂಸ್ ತಯಾರಿಸುವ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಾಗ್ರಿಗಳು:
    ತೊಳೆದು ಸಿಪ್ಪೆ ಬಿಡಿಸಿ ಹೆಚ್ಚಿದ ಸೀಬೆ ಹಣ್ಣು – 1 ಕಪ್
    ಸಕ್ಕರೆ- 1 ಟೀ ಚಮಚ
    ತಣ್ಣನೆಯ ನೀರು – 1/2 ಕಪ್
    ಪುದಿನ ಎಲೆಗಳು – 3
    ಐಸ್ ಕ್ಯೂಬ್

    ಮಾಡುವ ವಿಧಾನ:
    * ಸೀಬೆಹಣ್ಣುಗಳ ಸಿಪ್ಪೆಯನ್ನು ತೆಗೆದು ಸಣ್ಣದಾಗಿ 1 ಕಪ್ ನಷ್ಟು ಕತ್ತರಿಸಿಕೊಳ್ಳಬೇಕು.
    * ನಂತರ ಸೀಬೆ ಹಣ್ಣನ್ನು ಮಿಕ್ಸರ್‍ನಲ್ಲಿ ಮಿಕ್ಸಿ ಮಾಡಿ ತಣ್ಣನೆಯ ನೀರು ಮತ್ತು ಸಕ್ಕರೆಯನ್ನು ಹಾಕಬೇಕು. ಹಣ್ಣಿನ ಮಿಶ್ರಣ ನುಣುಪಾಗ ಬೇಕು.
    * ಮಿಕ್ಸಿಯಾದ ಮೇಲೆ ಅದನ್ನು 1 ಕಪ್‍ನಲ್ಲಿ ಸೋಸಿ ಬೀಜಗಳನ್ನು ಹೊರತೆಗೆಯ ಬೇಕು.
    * ಕೊನೆಗೆ ಜ್ಯೂಸ್‍ಗೆ ಐಸ್ ಕ್ಯೂಬ್ ಮತ್ತು ಪುದಿನ ಎಲೆಗಳನ್ನು ಸೇರಿಸಿದರೆ ರುಚಿ ರುಚಿಯಾದ ಸೀಬೆ ಹಣ್ಣಿನ ಜ್ಯೂಸ್ ಕುಡಿಯಲು ರೆಡಿ.

    ಉಪಯೋಗಗಳು:
    * ಸೀಬೆಕಾಯಿಯ ಸಿಪ್ಪೆ, ಬೀಜ ಯಾವುದನ್ನು ಬಿಸಾಡುವಂತಿಲ್ಲ. ಅವುಗಳಲ್ಲಿ ದೇಹಕ್ಕೆ ಬೇಕಾದ ಪೋಷಕಾಂಶಗಳು ಇರುತ್ತವೆ. ಸೀಬೆಕಾಯಿಂದ ಮೊಡವೆಗಳು ಹೋಗುತ್ತದೆ, ಹಲ್ಲಿನ ತೊಂದರೆಗಳು ಮಾಯವಾಗುತ್ತದೆ.

    * ಸೀಬೆ ಹಣ್ಣಿನಲ್ಲಿ ಕಿತ್ತಳೆ ಹಣ್ಣಿಗಿಂತ ಹೆಚ್ಚು ವಿಟಮಿನ್ ಸಿ ಪೋಷಕಾಂಶವಿರುತ್ತದೆ. ಇದು ರಕ್ತದ ಒತ್ತಡವನ್ನು ತಡೆಗಟ್ಟುವಲ್ಲಿ ಮುಖ್ಯ ಪಾತ್ರವನ್ನುವಹಿಸುತ್ತದೆ ಮತ್ತು ಹೃದಯ ಸಂಬಂಧಿ ತೊಂದರೆಗಳಿಂದ ರಕ್ಷಿಸುತ್ತದೆ.

    * ಸೀಬೆಹಣ್ಣಿನಲ್ಲಿ ಕಡಿಮೆ ಕ್ಯಾಲೋರಿ ಇರುವ ಕಾರಣ ದೇಹದ ತೂಕ ಇಳಿಸಲು ಸಹಾಯ ಮಾಡುತ್ತದೆ. ದಿನನಿತ್ಯದ ಆಹಾರದ ಭಾಗವಾಗಿ ಇದನ್ನು ಸೇರಿಸಿದರೆ ಆರೋಗ್ಯಕ್ಕೆ ಬಹಳ ಒಳ್ಳೆಯದು.

    * ಈ ಜ್ಯೂಸ್ ರೋಗಗಳ ವಿರುದ್ಧ ಹೋರಾಡಲು ಸಹಾಯ ಮಡುತ್ತದೆ. ದೇಹದಲ್ಲಿ ಪೋಷಕಾಂಶಗಳನ್ನು ಹೆಚ್ಚಿಸುತ್ತದೆ. ಇದರಲ್ಲಿ ಪೋಷಕಾಂಶಗಳು ಇರುವ ಕಾರಣ ಮುಖದಲ್ಲಿ ಮೊಡವೆಗಳ ಆಗದಂತೆ ನೋಡಿಕೊಳ್ಳುತ್ತದೆ ಮತ್ತು ಚರ್ಮದ ಹೊಳಪನ್ನು ಹೆಚ್ಚಿಸುತ್ತದೆ.

    * ಸೀಬೆಕಾಯಿ ಜ್ಯೂಸ್ ಕಣ್ಣಿಗೆ ಸಂಬಂಧಿಸಿದ ತೊಂದರೆಗಳಿಗೆ ಬಹಳ ಉಪಯೋಗಕಾರಿ. ದೃಷ್ಟಿ ದೋಷವನ್ನು ತಡೆಯುವಲ್ಲಿ ಸಹಾಯಕಾರಿ.

  • 16 ದಿನದಲ್ಲಿ ಒಂದೇ ಗ್ರಾಮದ 11 ಜನರ ನಿಗೂಢ ಸಾವು- ಗ್ರಾಮಸ್ಥರಲ್ಲಿ ಶುರುವಾಯ್ತು ಆತಂಕ

    16 ದಿನದಲ್ಲಿ ಒಂದೇ ಗ್ರಾಮದ 11 ಜನರ ನಿಗೂಢ ಸಾವು- ಗ್ರಾಮಸ್ಥರಲ್ಲಿ ಶುರುವಾಯ್ತು ಆತಂಕ

    ಕೋಲಾರ: ಗ್ರಾಮದಲ್ಲಿ ಕಳೆದ 16 ದಿನಗಳಿಂದ ನಡೆಯುತ್ತಿರುವ ಸರಣಿ ನಿಗೂಢ ಸಾವು ಗ್ರಾಮಸ್ಥರನ್ನು ಬೆಚ್ಚಿ ಬೀಳಿಸಿದ ಘಟನೆ ಮುಳಬಾಗಿಲು ತಾಲೂಕಿನಲ್ಲಿ ನಡೆದಿದೆ.

    ಆಂಧ್ರಪ್ರದೇಶ ಗಡಿಭಾಗಕ್ಕೆ ಹೊಂದಿಕೊಂಡಿರುವ ಚಮಕಲಹಳ್ಳಿಯಲ್ಲಿ 16 ದಿನದಲ್ಲಿ 11 ಜನರು ನಿಗೂಢವಾಗಿ ಮೃತಪಟ್ಟಿದ್ದಾರೆ. ಆರೋಗ್ಯವಾಗಿದ್ದ ಜನರೇ ಕೆಲವು ದಿನಗಳ ಹಿಂದೆ ಕಾಣಿಸಿಕೊಂಡ ಸಣ್ಣ-ಪುಟ್ಟ ಕಾಯಿಲೆ ನೆಪ ಹೇಳಿಕೊಂಡು ಆಸ್ಪತ್ರೆಗಳಿಗೆ ಹೋಗುವ ಮುನ್ನವೇ ಜನರು ಸಾವನ್ನಪ್ಪುತ್ತಿದ್ದಾರೆ.

    ಮುಳಬಾಗಿಲು ತಾಲೂಕಿನಲ್ಲಿ ಚಮಕಲಹಳ್ಳಿಯ ನಿವಾಸಿ ನಿಸ್ಸಾರ್ (38), ಖಾದರ್ (46), ಶಹೀದಾ (23), ಅಕ್ಬರ್ ಬೇಗ್ (40), ಮಂಜುನಾಥ್ (28), ಹೈದರ್ (90), ಅಮೀನ್ ತಾಜ್ (95), ಖಾದರ್ ಪಾಷಾ (65), ನಜೀಬ್ (68), ನವಾಜ್ ಬೇಗ್ (52), ಫಯಾಜ್ (37) ಮೃತ ದುರ್ದೈವಿಗಳು. ಈ ಪೈಕಿ ಕೆಲವರು ಹೊಟ್ಟೆನೋವು ಬಂದು ಪ್ರಾಣಬಿಟ್ಟರೆ, ಮತ್ತೆ ಕೆಲವರು ವಾಂತಿ ಮಾಡಿಕೊಂಡು ಸಾವನ್ನಪ್ಪಿದ್ದಾರೆ. ಇಬ್ಬರು ದೀರ್ಘಕಾಲದ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ.

    ಗ್ರಾಮದಲ್ಲಿ ನಡೆಯುತ್ತಿರುವ ನಿಗೂಢ ಸರಣಿ ಸಾವಿನಿಂದ ಜನರು ಆತಂಕಕ್ಕೊಳಗಾಗಿದ್ದಾರೆ. ಯಾವಾಗ ಯಾರ ಮನೆಯಲ್ಲಿ ಸಾವು ಸಂಭವಿಸುತ್ತದೆಯೋ ಎನ್ನುವ ಭಯದಲ್ಲಿ ಜೀವನ ಕಳೆಯುತ್ತಿದ್ದಾರೆ. ಸಂಜೆಯಾದರೆ ಮನೆಯಿಂದ ಹೊರಗೆ ಹೋಗಲು ಚಮಕಲಹಳ್ಳಿಯ ಗ್ರಾಮಸ್ಥರು ಹಿಂದೇಟು ಹಾಕುತ್ತಿದ್ದಾರೆ.

    ಜಿಲ್ಲಾ ಆರೋಗ್ಯಾಧಿಕಾರಿಗಳು, ವೈದ್ಯರು ಹಾಗೂ ಸಿಬ್ಬಂದಿ ಚಮಕಲಹಳ್ಳಿಯ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ನಾಗೇಶ್ ಅವರ ಕ್ಷೇತ್ರವಾದ ಚಮಕಲಹಳ್ಳಿ ಗ್ರಾಮದಲ್ಲಿ ಸುಮಾರು 800 ಮನೆಗಳಿವೆ. ಅಲ್ಪಸಂಖ್ಯಾತರೆ ಹೆಚ್ಚಿರುವ ಈ ಗ್ರಾಮದಲ್ಲಿ, ಮೃತಪಟ್ಟವರಲ್ಲಿ ಹೆಚ್ಚಿನ ಜನರು ಕೂಡ ಮುಸ್ಲಿಂ ಸಮುದಾಯದವರೇ ಆಗಿದ್ದಾರೆ.

    ಗ್ರಾಮದಲ್ಲಿ ಸ್ವಚ್ಛತೆ ಕೊರತೆ ಅಥವಾ ಬೇರೆ ಯಾವುದೋ ಸಾಂಕ್ರಾಮಿಕ ರೋಗದಿಂದ ಸಾವು ಸಂಭವಿಸುತ್ತಿರಬಹುದು ಎಂಬ ಶಂಕೆ ವ್ಯಕ್ತವಾಗಿಲ್ಲ. ಈ ವಿಷಯ ತಿಳಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ವಿಜಯಕುಮಾರ್ ಸೇರಿದಂತೆ ವೈದ್ಯರ ತಂಡ ಮಂಗಳವಾರ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಈ ವೇಳೆ ಗ್ರಾಮದಲ್ಲಿ ಸಣ್ಣ ಪುಟ್ಟ ರೋಗ ಲಕ್ಷಣ ಇರುವವರ ರಕ್ತ ಹಾಗೂ ನೀರಿನ ಮಾದರಿಗಳನ್ನು ಸಂಗ್ರಹಿಸಿಕೊಂಡು ಹೋಗಿದ್ದಾರೆ. ಜೊತೆಗೆ ನಾಳೆಯಿಂದ ಗ್ರಾಮದಲ್ಲಿ ವೈದ್ಯರ ತಂಡ ಕಳಿಸಿ ಸಂಪೂರ್ಣ ಪರೀಕ್ಷೆ ನಡೆಸುವುದಾಗಿ ಜಿಲ್ಲಾ ಆರೋಗ್ಯಾಧಿಕಾರಿ ತಿಳಿಸಿದ್ದಾರೆ.

  • ಶಾಸಕ ತನ್ವೀರ್ ಸೇಠ್ ಆರೋಗ್ಯದಲ್ಲಿ ಚೇತರಿಕೆ

    ಶಾಸಕ ತನ್ವೀರ್ ಸೇಠ್ ಆರೋಗ್ಯದಲ್ಲಿ ಚೇತರಿಕೆ

    ಮೈಸೂರು: ಹಲ್ಲೆಗೆ ಒಳಗಾಗಿದ್ದ ನರಸಿಂಹರಾಜ ಕ್ಷೇತ್ರದ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ನಿನ್ನೆ ರಾತ್ರಿಯಿಂದ ಶಾಸಕರಿಗೆ ಅಳವಡಿಸಿದ್ದ ವೆಂಟಿಲೇಟರ್ ತೆಗೆದು ಹಾಕಲಾಗಿದೆ ಎಂದು ವೈದ್ಯರು ಹೇಳಿದ್ದಾರೆ.

    ಭಾನುವಾರ ರಾತ್ರಿ ಮದುವೆ ಸಮಾರಂಭಕ್ಕೆ ಹೋಗಿದ್ದ ತನ್ವೀರ್ ಸೇಠ್ ಅವರ ಮೇಲೆ ಚಾಕುವಿನಿಂದ ಹಲ್ಲೆ ಮಾಡಲಾಗಿತ್ತು. ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಅವರನ್ನು ಕೊಲಂಬಿಯಾ ಏಷಿಯಾ ಆಸ್ಪತ್ರಗೆ ದಾಖಲು ಮಾಡಲಾಗಿತ್ತು. ತುರ್ತು ಶಸ್ತ್ರಚಿಕಿತ್ಸೆ ಮಾಡಿದ್ದ ವೈದ್ಯರು ಅವರನ್ನು ವೆಂಟಿಲೇಟರ್ ನಲ್ಲಿ ಇಟ್ಟಿದ್ದರು.

    ಈ ವಿಚಾರವಾಗಿ ಸೋಮವಾರ ಮಾತನಾಡಿದ್ದ ಕೊಲಂಬಿಯಾ ಏಷಿಯಾ ಆಸ್ಪತ್ರೆ ವೈದ್ಯ ಡಾ ಉಪೇಂದ್ರ ಶಣೈ, ಅವರಿಗೆ ಕುತ್ತಿಗೆ ಭಾಗಕ್ಕೆ ಚಾಕು ಹಾಕಿರುವ ಕಾರಣ ತೀವ್ರವಾಗಿ ಪೆಟ್ಟಾಗಿದೆ. ಅವರ ರಕ್ತನಾಳ ನರಗಳಿಗೆ ತೀವ್ರ ಗಾಯವಾಗಿದೆ. ಬಿಪಿ ಶುಗರ್ ಅನ್ನು ಸಮಾನ್ಯ ಸ್ಥಿತಿಗೆ ತರಲು ಪ್ರಯತ್ನ ಪಡುತ್ತಿದ್ದೇವೆ. ಆಗಲೇ ಒಂದು ಶಸ್ತ್ರಚಿಕಿತ್ಸೆಯನ್ನು ಮಾಡಿದ್ದೇವೆ. ಮುಂದಿನ 48 ಗಂಟೆಯವರೆಗೂ ಏನನನ್ನು ಹೇಳಲು ಸಾಧ್ಯವಿಲ್ಲ ಎಂದು ಹೇಳಿದ್ದರು.

    ಇಂದು ಆರೋಗ್ಯ ಸ್ಥಿತಿ ಸುಧಾರಿಸಿದ್ದು, ನಿನ್ನೆ ರಾತ್ರಿಯಿಂದ ತನ್ವೀರ್ ಸೇಠ್‍ಗೆ ಅಳವಡಿಸಿದ್ದ ವೆಂಟಿಲೇಟರ್ ತೆರವು ಮಾಡಲಾಗಿದೆ. ಸೇಠ್ ಅವರು ವೆಂಟೆಲೇಟರ್ ಇಲ್ಲದೆ ಸ್ವತಂತ್ರವಾಗಿ ಉಸಿರಾಡುತ್ತಿದ್ದಾರೆ. ಅವರ ದೇಹ ಚಿಕಿತ್ಸೆಗೆ ಸ್ಪಂದಿಸುತ್ತಿದೆ. ಇಂದು ಇಡೀ ದಿನ ತೀವ್ರ ನಿಗಾಘಟಕದಲ್ಲಿ ಇರಿಸಿ ಚಿಕಿತ್ಸೆ ಮಾಡಿ ಆರೋಗ್ಯದಲ್ಲಿ ಚೇತರಿಕೆ ಕಂಡರೆ ವಾರ್ಡ್‍ಗೆ ಶಿಫ್ಟ್ ಮಾಡಲು ನಿರ್ಧಾರ ಮಾಡಿದ್ದೇವೆ ಎಂದು ವೈದ್ಯರು ಹೇಳಿದ್ದಾರೆ.

    ಭಾನುವಾರ ರಾತ್ರಿ ಮೈಸೂರಿನ ತನ್ವೀರ್ ಸೇಠ್ ಬನ್ನಿ ಮಂಟಪ ಸಮೀಪದ ಪಾರ್ಟಿ ಹಾಲಿಗೆ ತಮ್ಮ ಆತ್ಮೀಯ ಮಗನ ಮದುವೆಯ ಬೀಗರೂಟಕ್ಕೆ ಆಗಮಿಸಿದ್ದರು. ಈ ವೇಳೆ ಯುವಕ ಫರಾನ್ (24) ಚಾಕುವಿನಿಂದ ಹಲ್ಲೆ ಮಾಡಿದ್ದ. ಅವರ ಕತ್ತಿಗೆ ಭಾಗಕ್ಕೆ ಚಾಕು ಹಾಕಿ ಪರಾರಿಯಾಗುತ್ತಿದ್ದ ಆತನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ನಂತರ ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಸೇಠ್ ಅವರನ್ನು ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

  • ಶಾಸಕ ತನ್ವೀರ್ ಸೇಠ್ ಆರೋಗ್ಯ ಸ್ಥಿತಿ ಗಂಭೀರ

    ಶಾಸಕ ತನ್ವೀರ್ ಸೇಠ್ ಆರೋಗ್ಯ ಸ್ಥಿತಿ ಗಂಭೀರ

    ಮೈಸೂರು: ನರಸಿಂಹರಾಜ ಕ್ಷೇತ್ರದ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಆದರೆ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಕೊಲಂಬಿಯಾ ಏಷ್ಯಾ ಆಸ್ಪತ್ರೆಯ ಮುಖ್ಯಸ್ಥ ಡಾ.ಉಪೇಂದ್ರ ಶೆಣೈ ಹೇಳಿದ್ದಾರೆ.

    ತನ್ವೀರ್ ಸೇಠ್ ಅವರ ಕುತ್ತಿಗೆ ಭಾಗದಲ್ಲಿ ಗಾಯವಾಗಿದೆ. ಕುತ್ತಿಗೆಯಲ್ಲಿರುವ ರಕ್ತನಾಳ, ನರಗಳಿಗೆ ಪೆಟ್ಟಾಗಿದೆ. ಕುತ್ತಿಗೆ ಭಾಗವು ಮೆದುಳಿಗೆ ಮತ್ತು ಹೃದಯಕ್ಕೆ ಸಂಬಂಧಿಸಿದೆ. ಆದ್ದರಿಂದ ಅವರ ಅರೋಗ್ಯ ಸ್ಥಿತಿ ಸದ್ಯಕ್ಕೆ ಗಂಭೀರ ವಾಗಿದೆ. ಇನ್ನು 48 ಗಂಟೆಗಳ ಕಾಲ ಏನನ್ನು ಹೇಳಲು ಸಾಧ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

    ಒಳಗಿನ ನರಗಳು ಮತ್ತು ಬೆನ್ನು ಹುರಿಗೆ ಯಾವ ರೀತಿ ಹಾನಿಯಾಗಿದೆ ಎಂಬುದು ಮುಂದಿನ ಹಂತದ ಚಿಕಿತ್ಸೆಯಲ್ಲಿ ತಿಳಿಯಲಿದೆ. ರಾತ್ರಿ ಅವರ ಗಾಯಗಳಿಗೆ ರಕ್ತಸ್ರಾವಾಗದ ರೀತಿ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಕಿಡ್ನಿ ಸ್ವಲ್ಪ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿದೆ. ಬಿಪಿ, ಶುಗರ್ ಸಾಮಾನ್ಯ ಸ್ಥಿತಿಗೆ ತರಲು ಪ್ರಯತ್ನ ಪಡುತ್ತಿದ್ದೇವೆ. ಅದರ ಹೊರತಾಗಿ ಯಾವುದೇ ರೀತಿಯ ಆರೋಗ್ಯ ಏರುಪೇರಿಲ್ಲ. ಜನರು ಪ್ರಾರ್ಥನೆ ಮಾಡಲಿ. ಆಸ್ಪತ್ರೆಗೆ ಬರುವುದು ಬೇಡ. ಬರುವವರನ್ನು ಒಳಗೆ ನೋಡಲು ಬಿಡುತ್ತಿಲ್ಲ ಎಂದು ಡಾ.ಉಪೇಂದ್ರ ಶೆಣೈ ಅವರು ಹೇಳಿದ್ದಾರೆ. ಇದನ್ನು ಓದಿ: ಕಾಲಿಗೆ ಬಿದ್ದು ಆಶೀರ್ವಾದ ಪಡೆಯುತ್ತಿದ್ದಾನೆ ಎಂದುಕೊಂಡ್ವಿ, ಆದ್ರೆ ಮಚ್ಚಿನಿಂದ ಹೊಡೆದು ಓಡಿ ಹೋದ: ಪ್ರತ್ಯಕ್ಷದರ್ಶಿ

    ನಡೆದಿದ್ದೇನು?
    ಭಾನುವಾರ ರಾತ್ರಿ ಮೈಸೂರಿನ ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಬನ್ನಿ ಮಂಟಪ ಸಮೀಪದ ಪಾರ್ಟಿ ಹಾಲಿಗೆ ತಮ್ಮ ಆತ್ಮೀಯ ಮಗನ ಮದುವೆಯ ಬೀಗರೂಟಕ್ಕೆ ಆಗಮಿಸಿದ್ದರು. ಈ ವೇಳೆ ಯುವಕ ಫರಾನ್ (24) ಚಾಕುವಿನಿಂದ ಹಲ್ಲೆ ಮಾಡಿದ್ದ. ಅವರ ಕತ್ತಿಗೆ ಭಾಗಕ್ಕೆ ಚಾಕು ಹಾಕಿ ಪರಾರಿಯಾಗುತ್ತಿದ್ದ ಆತನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ನಂತರ ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಸೇಠ್ ಅವರನ್ನು ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.