Tag: health

  • ಜೈಲು ಸೇರಿದ ಕೇಜ್ರಿವಾಲ್‌ 4.5 ಕೆಜಿ ಕಳೆದುಕೊಂಡಿದ್ದಾರೆ: ಆಪ್‌ ಗಂಭೀರ ಆರೋಪ

    ಜೈಲು ಸೇರಿದ ಕೇಜ್ರಿವಾಲ್‌ 4.5 ಕೆಜಿ ಕಳೆದುಕೊಂಡಿದ್ದಾರೆ: ಆಪ್‌ ಗಂಭೀರ ಆರೋಪ

    ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರನ್ನು ಮಾರ್ಚ್ 21 ರಂದು ಬಂಧಿಸಿದಾಗಿನಿಂದ 4.5 ಕೆಜಿ ಕಳೆದುಕೊಂಡಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ (AAP) ನಾಯಕಿ ಮತ್ತು ಸಚಿವ ಅತಿಶಿ (Atishi) ಇಂದು ಹೇಳಿದ್ದಾರೆ.

    ಇಂದು ಬೆಳಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಅತಿಶಿ, ಕೇಜ್ರಿವಾಲ್ ಅವರು ಮಧುಮೇಹದಿಂದ ಬಳಲುತ್ತಿದ್ದಾರೆ. ಆರೋಗ್ಯ ಸಮಸ್ಯೆ ಇದ್ದರೂ ಅವರು ರಾಷ್ಟ್ರದ ಸೇವೆಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಅವರ ಬಂಧನಗೊಂಡ ದಿನದಿಂದ ಕೇಜ್ರಿವಾಲ್ ಅವರು 4.5 ಕೆಜಿ ತೂಕವನ್ನು ಕಳೆದುಕೊಂಡಿದ್ದಾರೆ. ಇದು ತುಂಬಾ ಕಳವಳಕಾರಿಯಾಗಿದೆ. ಬಿಜೆಪಿ ಅವರ ಆರೋಗ್ಯವನ್ನು ಅಪಾಯಕ್ಕೆ ತಳ್ಳುತ್ತಿದೆ. ಅರವಿಂದ್ ಕೇಜ್ರಿವಾಲ್ ಅವರಿಗೆ ಏನಾದರೂ ಸಂಭವಿಸಿದರೆ, ದೇಶವೇ ಅಲ್ಲ, ದೇವರು ಕೂಡ ಅವರನ್ನು ಕ್ಷಮಿಸುವುದಿಲ್ಲ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಯಾರೇ ಹೇಳಲಿ, ಬಿಡಲಿ ನಮ್ಮ ಕ್ಷೇತ್ರದಲ್ಲಿ ಸುಧಾಕರ್‌ಗೆ ಬಹುಮತ ಕೊಡುತ್ತೇವೆ: ಎಸ್‌ಆರ್‌ ವಿಶ್ವನಾಥ್‌

    ಮದ್ಯ ಹಗರಣಕ್ಕೆ (Liquor Scam) ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ (ED) ಬಂಧನಕ್ಕೊಳಗಾದ ಕೇಜ್ರಿವಾಲ್‌ ಅವರನ್ನು ಏಪ್ರಿಲ್ 15 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ನಂತರ ಸೋಮವಾರ ತಿಹಾರ್ ಜೈಲಿಗೆ ಸ್ಥಳಾಂತರಿಸಲಾಯಿತು.

    ಮುಖ್ಯಮಂತ್ರಿಗಳಿಗೆ ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕೆ ಮನೆಯ ಆಹಾರವನ್ನು ನೀಡಲಾಗುತ್ತದೆ. ಅವರ ಆರೋಗ್ಯದ ಮೇಲೆ ನಿಗಾ ಇಡಲಾಗಿದೆ. ಯಾವುದೇ ತುರ್ತು ಪರಿಸ್ಥಿತಿಗಾಗಿ ಅವರ ಸೆಲ್ ಬಳಿ ಕ್ವಿಕ್‌ ರೆಸ್ಪಾನ್ಸ್‌ ತಂಡವನ್ನು ನಿಯೋಜಿಸಲಾಗಿದೆ ಎಂದು ಜೈಲಿನ ಅಧಿಕಾರಿಗಳು ಹೇಳಿದ್ದಾರೆ.

  • ಜ್ವರದಿಂದ ಬಳಲುತ್ತಿದ್ದಾರೆ ನಟ ಪವನ್ ಕಲ್ಯಾಣ್

    ಜ್ವರದಿಂದ ಬಳಲುತ್ತಿದ್ದಾರೆ ನಟ ಪವನ್ ಕಲ್ಯಾಣ್

    ಚುನಾವಣೆ ಘೋಷಣೆ ಆಗುತ್ತಿದ್ದಂತೆಯೇ ಕಾಲಿಗೆ ಚಕ್ರಕಟ್ಟಿಕೊಂಡು ರಾಜ್ಯ ಸುತ್ತುತ್ತಿದ್ದಾರೆ ನಟ ಪವನ್ ಕಲ್ಯಾಣ್ (Pawan Kalyan). ಲೋಕಸಭೆ ಮತ್ತು ಮುಂದಿನ ಆಂಧ್ರದ ವಿಧಾನಸಭೆ ಚುನಾವಣೆಗಾಗಿ ಅವರು ಭರ್ಜರಿ ಸಿದ್ದತೆ ನಡೆಸಿದ್ದಾರೆ. ಹಗಲು ರಾತ್ರಿ ಪ್ರಚಾರದಲ್ಲಿ ತೊಡಗಿದ್ದರಿಂದ ಪವನ್ ಕಲ್ಯಾಣ್ ಆಯಾಸಗೊಂಡಿದ್ದಾರಂತೆ.

    ಪಿಠಾಪುರಂ ಕ್ಷೇತ್ರದಿಂದ ಪವನ್ ಕಲ್ಯಾಣ್ ಚುನಾವಣೆಗೆ ಸ್ಪರ್ಧಿಸುವುದರಿಂದ ಅಲ್ಲಿ ಹೆಚ್ಚೆಚ್ಚು ಸಭೆಗಳನ್ನು ನಡೆಸಿದ್ದಾರೆ. ನಿನ್ನೆ ನಡೆದ ಸಭೆಯ ನಂತರ ಪವನ್ ಅಸ್ವಸ್ಥರಾದರು ಎನ್ನಲಾಗುತ್ತಿದೆ. ಜೊತೆಗೆ ಅವರಿಗೆ ಜ್ವರ ಕೂಡ ಬಾಧಿಸುತ್ತಿದೆ ಎಂದು ಅವರ ಆಪ್ತರು ತಿಳಿಸಿದ್ದಾರೆ.

     

    ಜ್ವರ ಮತ್ತು ಕೆಮ್ಮಿನಿಂದ ವಿಪರೀತ ಬಳಲುತ್ತಿರುವ ಪವನ್ ಕಲ್ಯಾಣ್, ಈಗಾಗಲೇ ಚಿಕಿತ್ಸೆ ಪಡೆದುಕೊಂಡು ವಿಶ್ರಾಂತಿ ಪಡೆಯುತ್ತಿದ್ದಾರಂತೆ. ಮತ್ತೆ ಅವರು ತಮ್ಮ ರಾಜಕೀಯ ಚಟುವಟಿಕೆಯಲ್ಲಿ ಭಾಗಿಯಾಗಲಿದ್ದಾರೆ.

  • ಮಕ್ಕಳನ್ನು ಕಾಡುತ್ತಿದೆ ಮಂಗನಬಾವು ಕಾಯಿಲೆ – ಲಕ್ಷಣಗಳೇನು? ಚಿಕಿತ್ಸೆ ಹೇಗೆ?

    ಮಕ್ಕಳನ್ನು ಕಾಡುತ್ತಿದೆ ಮಂಗನಬಾವು ಕಾಯಿಲೆ – ಲಕ್ಷಣಗಳೇನು? ಚಿಕಿತ್ಸೆ ಹೇಗೆ?

    ಣ್ಣ ಮಕ್ಕಳ ದೇಹ ಬಹಳ ಸೂಕ್ಷ್ಮವಾಗಿರುವುದರಿಂದ ಅವರಿಗೆ ಸೋಂಕುಗಳು ಬಹಳ ಬೇಗನೆ ತಗುಲುತ್ತದೆ. ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಮಂಪ್ಸ್ ಕಾಯಿಲೆ (ಮಂಗನ ಬಾವು) ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಅದರಲ್ಲೂ ದೇವರನಾಡು ಕೇರಳದಲ್ಲಿ ಈ ಕಾಯಿಲೆ ಹೆಚ್ಚಾಗಿ ಕಾಣಿಸಿಕೊಂಡಿದ್ದು, ಕೇವಲ 2 ತಿಂಗಳಲ್ಲಿ 15,000ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದೆ ಎಂದು ಕೇರಳದ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಅದೇ ರೀತಿ ಈ ಸೋಂಕು ಕರ್ನಾಟಕಕ್ಕೂ ಲಗ್ಗೆ ಇಟ್ಟಿದೆ. ದಿನೇ ದಿನೇ ಶಾಲಾ ಮಕ್ಕಳಲ್ಲಿ ಈ ಸೋಂಕು ಕಾಣಿಸತೊಡಗಿದ್ದು, ಪೋಷಕರು ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಒಳಿತು. ಹಾಗಿದ್ರೆ ಮಂಪ್ಸ್ ಕಾಯಿಲೆಯ ಲಕ್ಷಣಗಳೇನು? ಚಿಕಿತ್ಸೆ ಹೇಗೆ ಎಂಬುದರ ಕುರಿತು ಸಣ್ಣ ಮಾಹಿತಿ ಇಲ್ಲಿ ವಿವರಿಸಲಾಗಿದೆ.

    ಮಂಗನಬಾವು ಎಂದರೇನು?
    ಮಂಗನಬಾವು ಅಥವಾ ಮಂಪ್ಸ್ (Mumps Disease) ಎಂದು ಕರೆಯಲ್ಪಡುವ ಕಾಯಿಲೆ ಒಂದು ಸಾಂಕ್ರಮಿಕ ರೋಗವಾಗಿದೆ. ಇದು ಒಬ್ಬರಿಂದ ಮತ್ತೊಬ್ಬರಿಗೆ ಬಹಳ ಬೇಗ ಹರಡುತ್ತದೆ. ಮಂಪ್ಸ್ ಸೋಂಕಿತರು ಸೀನುವುದು ಅಥವಾ ಕೆಮ್ಮಿದಾಗ ಅವರ ಲಾಲಾರಸದಲ್ಲಿರುವ ವೈರಸ್ ಗಾಳಿಯಲ್ಲಿ ಹರಡುವುದರಿಂದ ಮತ್ತೊಬ್ಬರಿಗೆ ಈ ಕಾಯಿಲೆ ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ.

    ಮಂಪ್ಸ್ ಕಾಯಿಲೆ ಲಕ್ಷಣಗಳೇನು?
    *ಮಂಪ್ಸ್ ವೈರಸ್ ಉಸಿರಾಟದ ಮೂಲಕ ದೇಹವನ್ನು ಪ್ರವೇಶಿಸುತ್ತದೆ. ಇದರ ಪರಿಣಾಮ ವಿಪರೀತ ತಲೆನೋವು, ಜ್ವರ ಮತ್ತು ಆಯಾಸದಂತಹ ಲಕ್ಷಣಗಳು ಕಾಣಿಸತೊಡಗುತ್ತದೆ.
    *ನಂತರ ಲಾಲಾರಸ ಗ್ರಂಥಿಗಳಲ್ಲಿ ತೀವ್ರವಾದ ಊತ ಕಾಣಿಸುತ್ತದೆ. ಅಲ್ಲದೇ ದವಡೆಗಳು ಮತ್ತು ಕೆನ್ನೆಗಳು ವಿಪರೀತ ಊದಿಕೊಳ್ಳುತ್ತವೆ. ಈ ರೀತಿಯಾದ ಊತದಿಂದ ಆಹಾರ ಸೇವನೆಗೆ ತೊಂದರೆಯುಂಟಾಗುತ್ತದೆ.
    *ಕೆಲವೊಮ್ಮೆ ಈ ವೈರಸ್ ಮೆದುಳು, ಮೇದೋಜ್ಜೀರಕ ಗ್ರಂಥಿ, ವೃಷಣಗಳು ಅಥವಾ ಅಂಡಾಂಶಯಗಳು ಸೇರಿದಂತೆ ಇತರೆ ಅಂಗಾಂಗಳ ಮೇಲೆ ಪರಿಣಾಮ ಬೀರಬಹುದು.
    *ವಯಸ್ಕರಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಈ ಕಾಯಿಲೆಗೆ ತುತ್ತಾಗಬಹುದು.

    ಕಾಯಿಲೆಗೆ ಚಿಕಿತ್ಸೆ ಏನು?
    ಹಿಂದೆ ಮಂಗನಬಾವು ಮಕ್ಕಳಲ್ಲಿ ಉಂಟಾಗುವ ಬಹಳ ಸಾಮಾನ್ಯ ಕಾಯಿಲೆಯಾಗಿತ್ತು. 1967ರಲ್ಲಿ ಮಂಪ್ಸ್ ಲಸಿಕೆ ಲಭ್ಯವಾದ ನಂತರ ಈ ರೋಗದ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಯಿತು. ದಡಾರ-ಮಂಪ್ಸ್-ರುಬೆಲ್ಲಾ (ಎಂಎಂಆರ್) ಲಸಿಕೆಯನ್ನು ಕೊಡಿಸುವ ಮೂಲಕ ನಿಮ್ಮ ಮಗುವಿಗೆ ಮಂಗನಬಾವು ಬಾರದಂತೆ ಮುನ್ನೆಚ್ಚರಿಕೆ ವಹಿಸಬಹುದು. ಊದಿಕೊಂಡ ಲಾಲಾರಸ ಗ್ರಂಥಿಗಳ ಮೇಲೆ ತಂಪಾದ ಅಥವಾ ಬೆಚ್ಚಗಿನ ಬಟ್ಟೆಯನ್ನು ಹಾಕಿ.

    ಮಂಗನಬಾವು ಲಸಿಕೆ ಸಾಮಾನ್ಯವಾಗಿ ನೀಡಲಾಗುವ ಬಾಲ್ಯದ ವ್ಯಾಕ್ಸಿನೇಷನ್‌ಗಳ ಒಂದು ಭಾಗವಾಗಿದೆ. ಇದನ್ನು ಸಾಮಾನ್ಯವಾಗಿ ಸಂಯೋಜಿತ ದಡಾರ-ಮಂಪ್ಸ್-ರುಬೆಲ್ಲಾ ಲಸಿಕೆಯಾಗಿ ನೀಡಲಾಗುತ್ತದೆ. 12 ಮತ್ತು 15 ತಿಂಗಳ ವಯಸ್ಸಿನ ನಡುವಿನ ಮೊದಲ ಡೋಸ್ ಹಾಗೂ ಶಾಲೆಗೆ ಪ್ರವೇಶಿಸುವ ಮೊದಲು 4 ಮತ್ತು 6 ವರ್ಷಗಳ ನಡುವಿನ ಎರಡನೇ ಡೋಸ್ ನೀಡಲಾಗುತ್ತದೆ.

    ಮಂಗನಬಾವು ಸಾಮಾನ್ಯವಾಗಿ 2-12 ವರ್ಷ ವಯಸ್ಸಿನ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ವಯಸ್ಕರಿಗೂ ಈ ಸಮಸ್ಯೆ ಕಾಡುತ್ತದೆ. ಈ ಸಮಸ್ಯೆಗೆ ಯಾವುದೇ ನಿರ್ದಿಷ್ಟ ಆಂಟಿವೈರಲ್ ಚಿಕಿತ್ಸೆ ಇಲ್ಲ. ಅದರೆ ಆರಂಭದಲ್ಲೇ ಇದನ್ನು ಪತ್ತೆ ಹಚ್ಚಿದರೆ ಸಮಸ್ಯೆಯನ್ನು ತಡೆಗಟ್ಟಬಹುದು.

    ಈ ಲಕ್ಷಣಗಳು ನಿಮ್ಮಲ್ಲಿ ಕಾಣಿಸಿಕೊಂಡರೆ ಹೆಚ್ಚು ನೀರು ಕುಡಿಯಿರಿ, ತಕ್ಷಣ ವೈದ್ಯರನ್ನು ಸಂಪರ್ಕಿಸಿ.
    *ಊದಿಕೊಂಡ ಸ್ಥಳಕ್ಕೆ ಬೆಚ್ಚಗಿನ ಅಥವಾ ತಣ್ಣನೆಯ ಶಾಖವನ್ನು ನೀಡುವುದು ಸಹ ಉತ್ತಮ.
    *ಬೆಚ್ಚಗಿನ ನೀರಿಗೆ ಸ್ವಲ್ಪ ಉಪ್ಪು ಬೆರೆಸಿ ಬಾಯಿ ಮುಕ್ಕಳಿಸಿ. ದಿನಕ್ಕೆ 2-3 ಬಾರಿ ಇದನ್ನು ಪುನರಾವರ್ತಿಸಿ.
    *ವೈರಸ್ ಹರಡುವುದನ್ನು ತಡೆಯಲು ಸೋಂಕಿತ ವ್ಯಕ್ತಿಯಿಂದ ದೂರವಿರುವುದು ಉತ್ತಮ.
    *ಗಟ್ಟಿ ಪದಾರ್ಥಗಳನ್ನು ಜಗಿಯಲು ಕಷ್ಟವಾಗಿರುವುದರಿಂದ ಮೃದು ಆಹಾರ ಅಥವಾ ದ್ರವ ರೂಪದ ಆಹಾರ ಸೇವನೆ ಉತ್ತಮ.

  • ಎಲೆಗಳು ಮಾತ್ರವಲ್ಲದೆ ತುಳಸಿ ಬೀಜಗಳೂ ಆರೋಗ್ಯಕ್ಕೆ ಒಳ್ಳೆಯದು!

    ಎಲೆಗಳು ಮಾತ್ರವಲ್ಲದೆ ತುಳಸಿ ಬೀಜಗಳೂ ಆರೋಗ್ಯಕ್ಕೆ ಒಳ್ಳೆಯದು!

    ಹಿಂದೂ ಧರ್ಮದಲ್ಲಿ ಮಾತ್ರವಲ್ಲದೆ ಆಯುರ್ವೇದದಲ್ಲಿ ತುಳಸಿ ಗಿಡಕ್ಕೆ ಹೆಚ್ಚಿನ ಪ್ರಾಶಸ್ತ್ಯವಿದೆ. ವಾಸ್ತವವಾಗಿ ತುಳಸಿ ಎಲೆಗಳ ಸೇವನೆಯು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಇದು ಸಾಕಷ್ಟು ಔಷಧೀಯ ಗುಣಗಳನ್ನು ಹೊಂದಿದೆ. ಇದರ ಎಲೆಗಳಿಂದ ಶೀತ ಮತ್ತು ಕೆಮ್ಮು ಸುಲಭವಾಗಿ ಗುಣವಾಗುತ್ತದೆ. ತುಳಸಿ ಎಲೆಗಳು ಮಾತ್ರವಲ್ಲದೆ ಅದರ ಬೀಜಗಳೂ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.

    ತುಳಸಿ ಬೀಜಗಳಿಂದಾಗುವ ಪ್ರಯೋಜನಗಳೇನು..?
    * ತುಳಸಿ ಬೀಜಗಳು (Tulsi Seeds) ಹೆಚ್ಚಿನ ರೋಗನಿರೋಧಕ ಶಕ್ತಿಯನ್ನು ಹೊಂದಿವೆ. ಇದು ಅನೇಕ ರೋಗಗಳು ಮತ್ತು ಸೋಂಕುಗಳಿಂದ ನಮ್ಮನ್ನು ರಕ್ಷಿಸುತ್ತದೆ. ಹೀಗಾಗಿ ತುಳಸಿ ಬೀಜಗಳ ಕಷಾಯವನ್ನು ಕುಡಿಯುವುದರಿಂದ ದೇಹಕ್ಕೆ ಪ್ರಯೋಜನಕಾರಿಯಾಗಿದೆ.

    * ತುಳಸಿ ಬೀಜಗಳು ಮಧುಮೇಹ ರೋಗಿಗಳಿಗೆ ಪ್ರಯೋಜನಕಾರಿ. ಇದನ್ನು ಸೇವಿಸುವುದರಿಂದ ನಿಮ್ಮ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುತ್ತದೆ. ಇದರಲ್ಲಿರುವ ಅನೇಕ ಪೋಷಕಾಂಶಗಳು ಆರೋಗ್ಯಕ್ಕೆ ಪ್ರಯೋಜನಕಾರಿ. ಇದನ್ನೂ ಓದಿ: ರಾತ್ರಿ ಮಲಗೋ ಮುನ್ನ ಕುಡಿಯುವ 1 ಲೋಟ ಬೆಚ್ಚಗಿನ ನೀರಿನಿಂದ ಆಗುವ ಪ್ರಯೋಜನಗಳು

    * ಮಲಬದ್ಧತೆಯಂತಹ ಸಮಸ್ಯೆಗಳಿಂದ ತ್ವರಿತ ಪರಿಹಾರವನ್ನು ನೀಡುತ್ತದೆ. ಬೆಳಗ್ಗೆ ಇದರ ಸೇವನೆಯು ನಿಮ್ಮ ಹೊಟ್ಟೆಯ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದನ್ನು ಸೇವಿಸುವುದರಿಂದ ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಸರಿಪಡಿಸುತ್ತದೆ.

    * ದಿನದಿಂದ ದಿನಕ್ಕೆ ನಿಮ್ಮ ತೂಕದಲ್ಲಿ ಹೆಚ್ಚಳ ಕಂಡುಬರುತ್ತಿದ್ದರೆ ಇದರ ಪ್ರಯೋಜನ ಪಡೆದುಕೊಳ್ಳಬಹುದು. ಇದರಲ್ಲಿ ಫೈಬರ್ ಅಂಶ ಹೇರಳವಾಗಿದ್ದು, ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತದೆ. ಹೀಗಾಗಿ ನಿಮಗೆ ದಪ್ಪವಾಗುತ್ತಿದ್ದೇನೆ ಎಂಬ ಭಾವನೆ ಬಂದರೆ ಈ ಬೀಜಗಳನ್ನು ಸೇವಿಸುವುದರಿಂದ ದೀರ್ಘಕಾಲ ಹಸಿವಾಗುವುದಿಲ್ಲ. ಇದರಿಂದಾಗಿ ನಿಮ್ಮ ತೂಕ ಕ್ರಮೇಣ ಕಡಿಮೆಯಾಗುತ್ತದೆ.

    * ಗ್ಯಾಸ್ಟ್ರಿಕ್‌ ನಂತಹ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೊಂದಿದ್ದರೆ, ತುಳಸಿ ಬೀಜಗಳು ನಿಮಗೆ ಪ್ರಯೋಜನಕಾರಿಯಾಗಬಲ್ಲವು. ಒಂದು ಚಮಚ ತುಳಸಿ ಕಾಳುಗಳನ್ನು ಒಂದು ಲೋಟ ನೀರಿಗೆ ಹಾಕಿ ಊದಿಕೊಂಡ ನಂತರ ಕುಡಿಯಿರಿ. ಈ ನೀರನ್ನು ಕುಡಿಯುವುದರಿಂದ ಜೀರ್ಣಕ್ರಿಯೆಗೆ ಸಹಕಾರಿಯಾಗುತ್ತದೆ.

  • ದಕ್ಷಿಣ ಏಷ್ಯಾದ ಮೊದಲ ZAP-X ಯಂತ್ರ – ಬ್ರೈನ್ ಟ್ಯೂಮರ್ ವಿರುದ್ಧ ಇದು ಹೇಗೆ ಹೋರಾಡುತ್ತದೆ?

    ದಕ್ಷಿಣ ಏಷ್ಯಾದ ಮೊದಲ ZAP-X ಯಂತ್ರ – ಬ್ರೈನ್ ಟ್ಯೂಮರ್ ವಿರುದ್ಧ ಇದು ಹೇಗೆ ಹೋರಾಡುತ್ತದೆ?

    ಬ್ರೈನ್ ಟ್ಯೂಮರ್ ಮೆದುಳಿಗೆ ಸಂಬಂಧ ಪಟ್ಟ ಆರೋಗ್ಯ ಸಮಸ್ಯೆಯಾಗಿದ್ದು, ಇದನ್ನು ʼಮೆದುಳಿನ ಕ್ಯಾನ್ಸರ್’ ಎಂದು ಕರೆಯುತ್ತಾರೆ. ಮೆದುಳಿನ ಜೀವಕೋಶಗಳು ಕೆಲವೊಂದು ಕಾರಣಗಳಿಂದ ನಿಧಾನವಾಗಿ ಹಾನಿಯಾಗಿ ಗೆಡ್ಡೆಯಾಕಾರದಲ್ಲಿ ಬೆಳೆದು ಈ ಕಾಯಿಲೆಯಾಗಿ ಕಾಣಿಸಿಕೊಳ್ಳುತ್ತದೆ. ಈ ಕಾಯಿಲೆಯನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಾಗದಿದ್ದರೂ ಆರಂಭದ ಹಂತದಲ್ಲೇ ಚಿಕಿತ್ಸೆ ಪಡೆದುಕೊಳ್ಳುವ ಮೂಲಕ ಹತೋಟಿಯಲ್ಲಿಡಬಹುದು. ಇನ್ನೂ ಕೆಲವೇ ಕೆಲವು ಬೆರಳೆಣಿಕೆಯಷ್ಟು ಜನ ಗುಣಮುಖರಾಗುತ್ತಾರೆ ಎಂಬ ಮಾತಿದೆ. ಇದೀಗ ಈ ಸಮಸ್ಯೆಗೆ ನೂತನ ಚಿಕಿತ್ಸೆಯಾದ ZAP-X ಭಾರತದಲ್ಲಿ ಲಭ್ಯವಿದ್ದು, ಇದು ದಕ್ಷಿಣ ಏಷ್ಯಾದಲ್ಲೇ ಮೊದಲಾಗಿದೆ.

    ಮಾರಣಾಂತಿಕ ಕಾಯಿಲೆಯಾದ ಬ್ರೈನ್ ಟ್ಯೂಮರ್ ವಿರುದ್ಧ ಇಡೀ ವೈದ್ಯಕೀಯ ಲೋಕವೇ ಹೋರಾಡುತ್ತಿದೆ. ಅದೇ ರೀತಿ ದೆಹಲಿಯ ಇಂದ್ರಪ್ರಸ್ಥ ಅಪೊಲೊ ಆಸ್ಪತ್ರೆ ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಹೆಜ್ಜೆ ಇಟ್ಟಿದೆ. ದಕ್ಷಿಣ ಏಷ್ಯಾದಲ್ಲೇ ಮೊದಲ ಬಾರಿಗೆ ಈ ಆಸ್ಪತ್ರೆಯಲ್ಲಿ ZAP-X ಯಂತ್ರವನ್ನು ಅಳವಡಿಸಲಾಗಿದ್ದು, ಇದು ಮೆದುಳಿನ ಕ್ಯಾನ್ಸರ್‌ಗೆ ನೋವಿಲ್ಲದ ಚಿಕಿತ್ಸಾ ವಿಧಾನವಾಗಿದೆ. ಈ ವಿಧಾನದಲ್ಲಿ ಕ್ಯಾನ್ಸರ್‌ ಸೆಲ್‌ಗಳನ್ನು ಅಥವಾ ಗಡ್ಡೆಗಳನ್ನು ಕರಗಿಸಲು ನಿಖರವಾಗಿ ವಿಕಿರಣವನ್ನು ಬಳಸಿ ಚಿಕಿತ್ಸೆ ನೀಡಲಾಗುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಒಂದೇ ಸೆಷನ್‌ನಲ್ಲಿ ಚಿಕಿತ್ಸೆ ನೀಡಬಹುದಾಗಿದೆ. ಇದನ್ನೂ ಓದಿ: ಸಿಎಎಗೆ ತಡೆ ಇಲ್ಲ: ಅರ್ಜಿಗಳಿಗೆ 3 ವಾರದಲ್ಲಿ ಪ್ರತಿಕ್ರಿಯೆ ನೀಡುವಂತೆ ಕೇಂದ್ರಕ್ಕೆ ಸುಪ್ರೀಂ ಸೂಚನೆ 

    ಬ್ರೈನ್ ಟ್ಯೂಮರ್ ಸಮಸ್ಯೆ ಮೊದಲು ಮೆದುಳಿನಲ್ಲಿ ಪ್ರಾರಂಭವಾದರೆ ಅದನ್ನು ‘ ಪ್ರೈಮರಿ ಬ್ರೈನ್ ಟ್ಯೂಮರ್ ‘ ಎಂದು, ಮನುಷ್ಯನ ದೇಹದ ಇತರ ಭಾಗಗಳಲ್ಲಿ ಕ್ಯಾನ್ಸರ್ ಕಾಯಿಲೆ ಉಂಟಾಗಿ ನಂತರ ಅದು ಮೆದುಳಿಗೆ ಹಬ್ಬಿದರೆ ಅದನ್ನು ‘ ಸೆಕೆಂಡರಿ ಬ್ರೈನ್ ಟ್ಯೂಮರ್ ‘ ಅಥವಾ ‘ ಮೆಟಾಸ್ಟಾಟಿಕ್ ಬ್ರೈನ್ ಟ್ಯೂಮರ್ ‘ ಎಂದು ಗುರುತಿಸಲಾಗುತ್ತದೆ.

    ZAP-X ಹೇಗೆ ಕೆಲಸ ಮಾಡುತ್ತದೆ?

    ಯಂತ್ರವು ಹೆಚ್ಚಿನ ತೀವ್ರತೆಯ, ಕೇಂದ್ರೀಕೃತ ವಿಕಿರಣವನ್ನು ಕೇವಲ ಮೆದುಳಿನ ಗೆಡ್ಡೆಗೆ ಕಡಿಮೆ ಅಂತರದಲ್ಲಿ ತಲುಪಿಸುತ್ತದೆ. ಇದರಿಂದ ಸುತ್ತಮುತ್ತಲಿನ ಅಂಗಾಂಶಗಳಿಗೆ ಈ ಚಿಕಿತ್ಸೆಯಿಂದ ಹಾನಿ ಉಂಟಾಗದೆ, ಕೇವಲ ಗೆಡ್ಡೆಯನ್ನು ಮಾತ್ರ ಗುರಿಯಾಗಿಸಿ ದಾಳಿ ಮಾಡುತ್ತದೆ. ಇದರಿಂದಾಗಿ ಕ್ಯಾನ್ಸರ್ ಗಡ್ಡೆ ಕರಗುತ್ತದೆ.

    ಯಂತ್ರದ ಸೃಷ್ಟಿಕರ್ತ ಮತ್ತು Zap ಶಸ್ತ್ರಚಿಕಿತ್ಸಾ ಸಿಇಒ ಡಾ.ಜಾನ್ ಆಡ್ಲರ್ ಪ್ರಕಾರ, ರೇಡಿಯೊ ಸರ್ಜರಿಯು ಅಮೆರಿಕಾದಲ್ಲಿ ನರಶಸ್ತ್ರ ಚಿಕಿತ್ಸಕರು ಮಾಡುವ ಅತ್ಯಂತ ಸಾಮಾನ್ಯವಾದ ವಿಧಾನವಾಗಿದೆ. ಪ್ರಪಂಚದ ಎಲ್ಲಾ ಭಾಗಗಳನ್ನು ಗಮನದಲ್ಲಿಟ್ಟುಕೊಂಡು ಈ ಯಂತ್ರವನ್ನು ವಿನ್ಯಾಸಗೊಳಿಸಲಾಗಿದೆ. ಇದರಿಂದ ಭಾರತದಲ್ಲಿ ಸುಮಾರು 10 ಲಕ್ಷ ಜನರು ಈ ಚಿಕಿತ್ಸೆಯಿಂದ ಪ್ರಯೋಜನ ಪಡೆಯಬಹುದು ಎಂಬುದು ಅವರ ಅಭಿಪ್ರಾಯ.

    ಸಾಂಪ್ರದಾಯಿಕ ಶಸ್ತ್ರಚಿಕಿತ್ಸೆಗಿಂತ ZAP-X ಹೇಗೆ ಭಿನ್ನ?

    ರೋಗಿಗಳು ಆಸ್ಪತ್ರೆಗೆ ದಾಖಲಾದ ಒಂದು ದಿನದಲ್ಲೇ ಡಿಸ್ಚಾರ್ಜ್‌ ಮಾಡಬಹುದು. ZAP-X ಚಿಕಿತ್ಸೆಗೆ ಅರಿವಳಿಕೆ ನೀಡುವ ಅಗತ್ಯ ಇರುವುದಿಲ್ಲ. ಚಿಕಿತ್ಸೆಯ ನಂತರ ವಿಶ್ರಾಂತಿಯ ಅಗತ್ಯವಿಲ್ಲದೆ ರೋಗಿಗಳು ಮನೆಗೆ ತೆರಳಬಹುದಾಗಿದೆ. ಚಿಕಿತ್ಸೆಯನ್ನು ಕೇವಲ 30 ನಿಮಿಷದಿಂದ ಗರಿಷ್ಠ 1 ಗಂಟೆ 30 ನಿಮಿಷಗಳವರೆಗೆ ಒಂದೇ ಅವಧಿಯಲ್ಲಿ ಮಾಡಲಾಗುತ್ತದೆ. ಗೆಡ್ಡೆ ತುಂಬಾ ದೊಡ್ಡದಾಗಿದ್ದರೆ ಅಥವಾ ಮೆದುಳಿನಲ್ಲಿನ ಪ್ರಮುಖ ರಚನೆಗಳಿಗೆ ಹತ್ತಿರದಲ್ಲಿದ್ದಾಗ ಮಾತ್ರ ಹೆಚ್ಚಿನ ಸಮಯ ಹಿಡಿಯುತ್ತದೆ ಎಂಬುದು ವೈದ್ಯರ ಅಭಿಪ್ರಾಯ. 

    ಮೆದುಳಿನ ಆಳವಾದ, ಬಹುಮುಖ್ಯ ರಚನೆಗಳಿಗೆ ಹತ್ತಿರವಿರುವ (ಇತರ ಸಮಸ್ಯೆಗಳಿಗೆ ಸ್ಕ್ಯಾನ್ ಮಾಡುವಾಗ ಪತ್ತೆಯಾದ ಸಣ್ಣ ಗೆಡ್ಡೆಗಳು) ರೋಗಿಗಳಿಗೆ ಇದು ಶಸ್ತ್ರಚಿಕಿತ್ಸೆಗಿಂತ ಉತ್ತಮವಾಗಿರುತ್ತದೆ. ಯಂತ್ರವು ಗೆಡ್ಡೆಗಳಿಗೆ ಚಿಕಿತ್ಸೆ ನೀಡುವುದಲ್ಲದೆ, ಇದು ಮೆದುಳಿನಲ್ಲಿನ ಆಳವಾದ ಗಾಯಗಳು ಅಥವಾ ಅಪಧಮನಿಯ ವಿರೂಪತೆಗೆ ಸಹ ಚಿಕಿತ್ಸೆ ನೀಡುತ್ತದೆ.

    ರೇಡಿಯೋ ಸರ್ಜರಿ ತಂತ್ರಗಳಲ್ಲಿ ಬಳಸುವ ರೇಡಿಯೋಥೆರಪಿಯಿಂದ Zap-X ಹೇಗೆ ಭಿನ್ನ?

    ರೇಡಿಯೋಥೆರಪಿಯು ಸೂರ್ಯನ ಬೆಳಕಿನಂತೆ ಚದರುತ್ತದೆ. ಅಲ್ಲದೇ ಇದರ ಪರಿಣಾಮವು ಕಡಿಮೆಯಾಗಿದೆ. ಚಿಕಿತ್ಸೆಗೆ ತಗಲುವ ಸಮಯವು ಹೆಚ್ಚು. ರೇಡಿಯೊಸರ್ಜರಿ – ಮತ್ತು Zap-X ತಂತ್ರಜ್ಞಾನ ವಿಕಿರಣವನ್ನು ನಿರ್ದಿಷ್ಟ ಬಿಂದುವಿಗೆ ಕೇಂದ್ರೀಕರಿಸಲು ಭೂತಗನ್ನಡಿಯನ್ನು ಬಳಸುವುದಕ್ಕೆ ಸಮಾನವಾಗಿದೆ ಎಂಬುದು ಡಾ.ಆಡ್ಲರ್ ಅಭಿಪ್ರಾಯವಾಗಿದೆ.

    ಚಿಕಿತ್ಸೆಯ ವೆಚ್ಚ ಎಷ್ಟು? 

    Zap-X ಚಿಕಿತ್ಸೆಯ ವೆಚ್ಚವು ಸಾಂಪ್ರದಾಯಿಕ ಶಸ್ತ್ರಚಿಕಿತ್ಸೆಗೆ ಸಮನಾಗಿರುತ್ತದೆ. ಇದರ ವೆಚ್ಚ ಭಾರತದಲ್ಲಿ 1,90,000 ರೂ. ಆಗಲಿದ್ದು, ಭಾರತದ ಹೊರಗೆ, ಇದರ ಬೆಲೆ ಸುಮಾರು 3,30,000 ರೂ. ಆಗಲಿದೆ. 

    ಈ ಹೊಸ ಬೆಳವಣಿಗೆಯು ಭಾರತದ ವೈದ್ಯಕೀಯ ಪ್ರವಾಸೋದ್ಯಮದ ಭವಿಷ್ಯವನ್ನು ವೃದ್ಧಿಸುವ ಭರವಸೆ ಮೂಡಿಸಿದೆ. ಏಕೆಂದರೆ ಇದರಿಂದ ದಕ್ಷಿಣ ಏಷ್ಯಾ ಮತ್ತು ಹತ್ತಿರದ ಪ್ರದೇಶಗಳ ಜನರಿಗೆ ಮೆದುಳಿನ ಗೆಡ್ಡೆಗಳಿಗೆ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ಲಭ್ಯವಾಗಲಿದೆ. ಇದನ್ನೂ ಓದಿ: JMM ತೊರೆದು ಬಿಜೆಪಿ ಸೇರಿದ ಹೇಮಂತ್ ಸೊರೇನ್‌ ಸೊಸೆ ಸೀತಾ ಸೊರೇನ್‌

  • ಭಗವಂತ್ ಖೂಬಾಗೆ ಟಿಕೆಟ್ ಬೆನ್ನಲ್ಲೇ ಚೌಹಾಣ್‌ಗೆ ಎದೆನೋವು!

    ಭಗವಂತ್ ಖೂಬಾಗೆ ಟಿಕೆಟ್ ಬೆನ್ನಲ್ಲೇ ಚೌಹಾಣ್‌ಗೆ ಎದೆನೋವು!

    ಬೀದರ್: ಲೋಕಸಭಾ ಚುನಾವಣೆಗೆ ಬಿಜೆಪಿ ಬಿಡುಗಡೆ ಮಾಡಿರುವ ಅಭ್ಯರ್ಥಿಗಳ ಪಟ್ಟಿಯಿಂದ ಹಲವರು ಅಸಮಾಧಾನಗೊಂಡಿದ್ದಾರೆ. ವಿರೋಧದ ನಡುವೆಯೂ ಭಗವಂತ ಖೂಬಾಗೆ ಮತ್ತೆ ಬೀದರ್​ ಟಿಕೆಟ್​ (Bidar Ticket) ಸಿಕ್ಕಿದೆ. ಈ ಬೆನ್ನಲ್ಲೇ ಬಿಜೆಪಿ ಶಾಸಕ ಪ್ರಭು ಚೌಹಾಣ್ (Prabu Chauhan) ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

    ಪ್ರಭು ಚೌಹಾಣ್ ಅವರು 3 ದಿನಗಳ‌ ಹಿಂದೆ ಮುಂಬೈ ನಗರಕ್ಕೆ ತೆರಳಿದ್ದರು. ಗುರುವಾರ ಸಂಜೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೂಡಲೇ ಅವರನ್ನು ಮುಂಬೈ ನಗರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಸದ್ಯ ಅವರಿಗೆ ಕಿರು ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಯಶಸ್ವಿಯಾಗಿದೆ. ಪ್ರಸ್ತುತ ಚೌಹಾಣ್ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.‌ ಇನ್ನೆರಡು ದಿನಗಳಲ್ಲಿ ಗುಣಮುಖರಾಗಿ ಹೊರಬರಲಿದ್ದಾರೆ ಎಂದು ಚೌಹಾಣ್‌ ಆಪ್ತವಲಯ ಮಾಹಿತಿ ನೀಡಿದೆ.  ಇದನ್ನೂ ಓದಿ: ಮಮತಾ ಬ್ಯಾನರ್ಜಿಗೆ ಗಂಭೀರ ಗಾಯ, ಆಸ್ಪತ್ರೆಗೆ ದಾಖಲು

    2022ರಲ್ಲೂ ಕೂಡಾ ಉಸಿರಾಟದ ಸಮಸ್ಯೆಯಿಂದ ಚೌಹಾಣ್ ಆಸ್ಪತ್ರೆ ಸೇರಿದ್ದರು. ಈ ಬಾರಿಯ ಲೋಕಸಭಾ ಚುನಾವಣೆಗೆ ಬೀದರ್‌ ಕ್ಷೇತ್ರದಿಂದ ಭಗವಂತ್ ಖೂಬಾಗೆ ಟಿಕೆಟ್ ನೀಡಬೇಡಿ ಎಂದು ಪ್ರಭು ಚೌಹಾಣ್ ಪಟ್ಟು ಹಿಡಿದಿದ್ದರು. ಅಲ್ಲದೇ ವೇದಿಕೆಯಲ್ಲೇ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರ ಕಾಲಿಗೆ ಬಿದ್ದು ಬೇಡಿಕೊಂಡಿದ್ದರು. ಆದರೆ ಬಿಜೆಪಿ ಹೈಕಮಾಂಡ್ ಮತ್ತೆ ಬೀದರ್​ ಟಿಕೆಟ್​ ಭಗವಂತ್ ಖೂಬಾಗೆ ನೀಡಿದೆ.

  • ರಾತ್ರಿ ಮಲಗೋ ಮುನ್ನ ಕುಡಿಯುವ 1 ಲೋಟ ಬೆಚ್ಚಗಿನ ನೀರಿನಿಂದ ಆಗುವ ಪ್ರಯೋಜನಗಳು

    ರಾತ್ರಿ ಮಲಗೋ ಮುನ್ನ ಕುಡಿಯುವ 1 ಲೋಟ ಬೆಚ್ಚಗಿನ ನೀರಿನಿಂದ ಆಗುವ ಪ್ರಯೋಜನಗಳು

    ನೀರು ಕುಡಿಯುವುದರಿಂದ ದೇಹಕ್ಕೆ ಎಷ್ಟು ಲಾಭ ಇದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಅದರಲ್ಲೂ ಬಿಸಿನೀರಿನಿಂದ (Warm Water) ನಮ್ಮ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನ ಇದೆ. ಆರೋಗ್ಯ ತಜ್ಞರು ಕೂಡ ಬೆಳಗ್ಗೆ ಎದ್ದ ತಕ್ಷಣ ಮೊದಲು ಬಿಸಿ ನೀರು ಕುಡಿಯುವಂತೆ ಹೇಳುತ್ತಾರೆ. ಆದರೆ ರಾತ್ರಿ ಮಲಗುವ ಮುನ್ನ ಬಿಸಿನೀರು ಕುಡಿಯುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ (Health Benifits) ಎಂಬುದು ಇಲ್ಲಿ ಗಮನಾರ್ಹ. ಮಲಗುವ ಮುನ್ನ 1 ಲೋಟ ಬೆಚ್ಚಗಿನ ನೀರನ್ನು ಕುಡಿಯುವುದು ಉತ್ತಮ ನಿದ್ರೆಗೆ ಸಹಾಯ ಮಾಡುತ್ತದೆ. ಜೊತೆಗೆ ಇತರ ಅನೇಕ ಸಮಸ್ಯೆಗಳಿಗೂ ರಾಮಬಾಣವಾಗಿದೆ.

    ಬಿಸಿ ನೀರು ಕುಡಿಯುವುದರಿಂದ ಆಗುವ ಲಾಭಗಳೇನು?:
    * ಬಿಸಿನೀರು ನಿಮ್ಮ ದೇಹದ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ನೀವು ಬಿಸಿ ನೀರಿಗೆ ಸ್ವಲ್ಪ ನಿಂಬೆ ರಸವನ್ನು ಕೂಡ ಸೇರಿಸಬಹುದು. ಇದರಿಂದ ನಿಮಗೆ ಶಕ್ತಿಯೂ ಸಿಗುತ್ತದೆ.
    * ಉಗುರುಬೆಚ್ಚನೆಯ ನೀರನ್ನು ಕುಡಿಯುವುದು ತೂಕವನ್ನು ಕಡಿಮೆ ಮಾಡುತ್ತದೆ. ರಾತ್ರಿ ಊಟವಾದ ಅರ್ಧ ಗಂಟೆಯ ನಂತರ ಅಥವಾ ಮಲಗುವ ಒಂದು ಅಥವಾ ಎರಡು ಗಂಟೆಗಳ ಮೊದಲು ಉಗುರು ಬೆಚ್ಚಗಿನ ನೀರನ್ನು ಕುಡಿಯುವುದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಅಲ್ಲದೆ ಬೆಳಗ್ಗೆ ದೇಹದಿಂದ ವಿಷವನ್ನು ಹೊರಹಾಕುತ್ತದೆ.

    * ರಾತ್ರಿ ಮಲಗುವ ಮುನ್ನ ಉಗುರುಬೆಚ್ಚನೆಯ ನೀರು ಕುಡಿಯುವುದರಿಂದ ಒತ್ತಡ ಮತ್ತು ಖಿನ್ನತೆ ಕಡಿಮೆಯಾಗುತ್ತದೆ. ನೀರಿನ ಕೊರತೆಯು ನಿಮ್ಮ ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ರಾತ್ರಿ ಮಲಗುವ ಮೊದಲು ಬೆಚ್ಚಗಿನ ನೀರನ್ನು ಕುಡಿಯುವುದು ನಿದ್ರೆಗೆ ಸಹಾಯ ಮಾಡುತ್ತದೆ ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ.
    * ರಾತ್ರಿ ಮಲಗುವ ಮುನ್ನ ಬಿಸಿನೀರು ಕುಡಿಯುವುದರಿಂದ ಹೊಟ್ಟೆಗೆ ಸಂಬಂಧಿಸಿದ ಅನೇಕ ಕಾಯಿಲೆಗಳು ನಿಯಂತ್ರಣಕ್ಕೆ ಬರುತ್ತವೆ. ಮಲಬದ್ಧತೆ, ಅಜೀರ್ಣಕ್ಕೆ ಬಿಸಿ ನೀರು ರಾಮಬಾಣವಾಗಿರುತ್ತದೆ. ರಾತ್ರಿಯಲ್ಲಿ ನಮ್ಮ ಜೀರ್ಣಾಂಗ ವ್ಯವಸ್ಥೆಯು ದುರ್ಬಲವಾಗಿರುತ್ತದೆ. ಹೀಗಾಗಿ ಬಿಸಿನೀರು ಕುಡಿಯುವುದರಿಂದ ನಿಮ್ಮ ಆಹಾರವನ್ನು ತ್ವರಿತವಾಗಿ ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ.

    * ವಯಸ್ಸು ಹೆಚ್ಚಾದಂತೆ ಮುಖದಲ್ಲಿ ಸುಕ್ಕುಗಳು ಕಾಣಿಸಿಕೊಳ್ಳುತ್ತವೆ. ಈ ಸಮಸ್ಯೆ ನಿಮ್ಮಲ್ಲೂ ಕಂಡುಬರುತ್ತಿದ್ದರೆ ಈ ಕ್ಷಣದಿಂದಲೇ ಬಿಸಿನೀರು ಕುಡಿಯಲು ಪ್ರಾರಂಭಿಸಿ. ಬಿಸಿನೀರು ಚರ್ಮವನ್ನು ಬಿಗಿಗೊಳಿಸುವುದರ ಜೊತೆಗೆ ಕಾಂತಿಯನ್ನು ಹೆಚ್ಚಿಸುತ್ತದೆ.
    * ವಾಸ್ತವವಾಗಿ ಬಿಸಿನೀರು ಕೊಬ್ಬನ್ನು ಸುಡುತ್ತದೆ. ಇದರಿಂದ ಜೀರ್ಣಕ್ರಿಯೆಯೂ ಉತ್ತಮವಾಗಿ ಉಳಿಯುತ್ತದೆ ಮತ್ತು ನೀರು ಕುಡಿಯುವುದರಿಂದ ಮತ್ತೆ ಮತ್ತೆ ಹಸಿವಾಗುವುದಿಲ್ಲ.

  • ಸಂಸದ ರಮೇಶ್ ಜಿಗಜಿಣಗಿ ಆಸ್ಪತ್ರೆಗೆ ದಾಖಲು – ಐಸಿಯುನಲ್ಲಿ ಚಿಕಿತ್ಸೆ

    ಸಂಸದ ರಮೇಶ್ ಜಿಗಜಿಣಗಿ ಆಸ್ಪತ್ರೆಗೆ ದಾಖಲು – ಐಸಿಯುನಲ್ಲಿ ಚಿಕಿತ್ಸೆ

    ಬೆಳಗಾವಿ: ವಿಜಯಪುರದ ಬಿಜೆಪಿ ಸಂಸದ ರಮೇಶ್ ಜಿಗಜಿಣಗಿ (Ramesh Jigajinagi) ಆರೋಗ್ಯ ಏರು ಪೇರಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಮಿದುಳಿನ ರಕ್ತಸ್ರಾವದ ಹಿನ್ನೆಲೆಯಲ್ಲಿ ಬೆಳಗಾವಿ ಕೆಎಲ್‌ಇ ಆಸ್ಪತ್ರೆಗೆ (KLE Hospital) ಮಜಿ ಕೇಂದ್ರ ಸಚಿವ ದಾಖಲಾಗಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ – ಪ್ರತೀ ಕ್ಷೇತ್ರಕ್ಕೆ ತಲಾ 10 ಕೋಟಿ ಬಿಡುಗಡೆ: ಡಿಕೆಶಿ

     

    ಜಿಗಜಿಣಗಿ ಆರೋಗ್ಯ ಚಿಂತಾಜನಕವಾಗಿದ್ದು, ವೈದ್ಯರು ತೀವ್ರ ನಿಗಾಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡುತ್ತಿದ್ದಾರೆ.

  • ಬೊಜ್ಜು ಕರಗಿಸಬೇಕೆ?- ಹಾಗಿದ್ರೆ ಬೆಳ್ಳಂಬೆಳಗ್ಗೆ ತಿನ್ನಿ ಮಖಾನ

    ಬೊಜ್ಜು ಕರಗಿಸಬೇಕೆ?- ಹಾಗಿದ್ರೆ ಬೆಳ್ಳಂಬೆಳಗ್ಗೆ ತಿನ್ನಿ ಮಖಾನ

    ಹೊಸ ಯುಗದ ಗಡಿಬಿಡಿ, ಅನಿಯಮಿತ ಜೀವನಶೈಲಿ ಮತ್ತು ತಪ್ಪು ಆಹಾರ ಪದ್ಧತಿಯಿಂದಾಗಿ ಹೆಚ್ಚಿನ ಜನರು ಸ್ಥೂಲಕಾಯತೆಗೆ (ಅತೀ ಹೆಚ್ಚು ಕೊಬ್ಬಿನಾಂಶ) ಬಲಿಯಾಗುತ್ತಿದ್ದಾರೆ. ಅದನ್ನು ಕಡಿಮೆ ಮಾಡಲು ಜನರು ಅನೇಕ ಪ್ರಯತ್ನಗಳನ್ನು ಮಾಡುತ್ತಾರೆ. ಆದರೆ ನಿಮ್ಮ ಆಹಾರ ಕ್ರಮ ಸರಿಯಿಲ್ಲದಿದ್ದರೆ ನೀವು ಎಷ್ಟೇ ಪ್ರಯತ್ನಿಸಿದರೂ ಬೊಜ್ಜು ಕಡಿಮೆಯಾಗುವುದಿಲ್ಲ. ಹೀಗಾಗಿ ಮಖಾನಾವನ್ನು (Makhana) ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ಬೊಜ್ಜು ಹೋಗಲಾಡಿಸಬಹುದು.

    ಉತ್ಕರ್ಷಣ ನಿರೋಧಕಗಳು, ಕ್ಯಾಲ್ಸಿಯಂ ಫೈಬರ್, ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟ್‌ಗಳಂತಹ ಅನೇಕ ಪೋಷಕಾಂಶಗಳು ಮಖಾನಾದಲ್ಲಿ ಕಂಡುಬರುತ್ತವೆ. ಇದು ಜೀರ್ಣಕ್ರಿಯೆ ಸಾಮರ್ಥ್ಯವನ್ನು ಸುಧಾರಿಸುತ್ತದೆ. ಆಯುರ್ವೇದದ ಪ್ರಕಾರ, ಇದು ವಯಸ್ಸಾದ ವಿರೋಧಿ ಗುಣಗಳನ್ನು ಹೊಂದಿದ್ದು ಅದು ನಿಮ್ಮ ತ್ವಚೆಯನ್ನು ಉತ್ತಮವಾಗಿ ನೋಡಿಕೊಳ್ಳುತ್ತದೆ. ನೀವು ಇದನ್ನು ಬೆಳಗ್ಗೆ ಸೇವಿಸಿದರೆ ಪ್ರಯೋಜನಗಳು ಹಲವಾರು ಪಟ್ಟು ಹೆಚ್ಚಾಗುತ್ತದೆ. ಇದನ್ನೂ ಓದಿ: 50ರ ಹರೆಯದಲ್ಲೂ ಹೀರೋಯಿನ್‌ನಂತೆ ಫಿಟ್ ಆಗಿರಲು ಈ 5 ಆಹಾರವನ್ನು ನಿಮ್ಮ ಡಯಟ್‌ನಲ್ಲಿ ಸೇರಿಸಿ

    ಹೇರಳವಾಗಿದೆ ಪೋಷಕಾಂಶ: ಒಂದು ಕಪ್ ಮಖಾನಾದಲ್ಲಿ 5 ಗ್ರಾಂ ಪ್ರೋಟೀನ್, 20 ಗ್ರಾಂ ಕಾರ್ಬೋಹೈಡ್ರೇಟ್, 33 ಮೈಕ್ರೋಗ್ರಾಂ ಫೋಲಿಕ್ ಆಮ್ಲ, 1.2 ಮಿಗ್ರಾಂ ಕಬ್ಬಿಣಾಂಶ, ಕ್ಯಾಲ್ಸಿಯಂ 52 ಮಿಗ್ರಾಂ, ಪೊಟ್ಯಾಸಿಯಮ್ 430 ಮಿಗ್ರಾಂ, ರಂಜಕ 198 ಮಿಗ್ರಾಂ, ಒಮೆಗಾ-3 ಕೊಬ್ಬಿನಾಮ್ಲಗಳು 32 ಮಿಗ್ರಾಂ ಮತ್ತು 340 ಮಿಗ್ರಾಂ ಒಮೆಗಾ ಇರುತ್ತದೆ. ಇದನ್ನು ನಿಮ್ಮ ಆಹಾರದಲ್ಲಿ ಸೇರಿಸುವುದರಿಂದ ಕಡಿಮೆ ಕ್ಯಾಲೋರಿಗಳೊಂದಿಗೆ ಸಾಕಷ್ಟು ಫೈಬರ್ ಅನ್ನು ಪಡೆಯುತ್ತೀರಿ. ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ ಪ್ರತಿದಿನ ಬೆಳಗ್ಗೆ ಒಂದು ಹಿಡಿ ಮಖಾನವನ್ನು ತಿನ್ನಿರಿ.

    ಪ್ರಯೋಜನಗಳೇನು?
    * ಮಖಾನ ಒಣ ಹಣ್ಣಾಗಿದ್ದು ದೈಹಿಕ ದೌರ್ಬಲ್ಯವನ್ನು ಹೋಗಲಾಡಿಸಲು ಅತ್ಯುತ್ತಮ ಪರಿಹಾರವಾಗಿದೆ. ಇದು ಆರೋಗ್ಯವನ್ನು ಸುಧಾರಿಸುತ್ತದೆ. ಅಲ್ಲದೇ ಗರ್ಭಧಾರಣೆಯ ಸಮಸ್ಯೆ ಇರುವವರಿಗೆ ಸಹಾಯ ಮಾಡುತ್ತದೆ.
    * ಪೌಷ್ಟಿಕಾಂಶ ಸಮೃದ್ಧವಾಗಿರುವ ಇದು ಮಧುಮೇಹ ರೋಗಿಗಳಿಗೆ ಸಹ ಪ್ರಯೋಜನಕಾರಿಯಾಗಿದೆ. ಇದರ ನಿರಂತರ ಸೇವನೆಯು ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
    * ಮಖಾನದಲ್ಲಿ ಆ್ಯಂಟಿ ಆಕ್ಸಿಡೆಂಟ್ ಹೇರಳವಾಗಿರುವುದರಿಂದ ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನಾಲ್ಕೈದು ಮಖಾನ ತಿಂದರೆ ಮುಖದ ಮೇಲಿನ ವಯಸ್ಸಿನ ಗುರುತುಗಳು ಕಡಿಮೆಯಾಗಿ ತ್ವಚೆಯು ಯೌವನ ಪಡೆಯುತ್ತದೆ.
    * ಮಖಾನ ಮೂತ್ರಪಿಂಡಕ್ಕೆ ತುಂಬಾ ಒಳ್ಳೆಯದು. ಇದು ಕನಿಷ್ಠ ಕ್ಯಾಲೋರಿಗಳನ್ನು ಹೊಂದಿದೆ. ಆದ್ದರಿಂದ ಮೂಳೆಗಳನ್ನು ಬಲಪಡಿಸಲು ಇದನ್ನು ಉತ್ತಮ ಆಹಾರವೆಂದು ಪರಿಗಣಿಸಲಾಗುತ್ತದೆ.

    ಹೇಗೆ ಸೇವಿಸಬೇಕು?: ಪೌಷ್ಟಿಕ ಅಂಶಗಳಿಂದ ತುಂಬಿರುವ ಒಣ ಹಣ್ಣು ಮಖಾನಾವನ್ನು ದೇಸಿ ತುಪ್ಪದಲ್ಲಿ ಹುರಿದು ಉಪ್ಪು, ಕರಿಮೆಣಸು ಸೇರಿಸಿ ತಿಂಡಿಯಾಗಿ ತಿನ್ನಬಹುದು. ಇಲ್ಲವೆಂದಲ್ಲಿ ಹಾಲು ಇಷ್ಟವಾದರೆ ಹಾಲಿನಲ್ಲಿ ಕುದಿಸಿ ಕುಡಿಯಬಹುದು.

  • BBMP Budget 2024: ಬಡವರ ಹಸಿವು ನೀಗಿಸಲು 50 ಹೊಸ ಇಂದಿರಾ ಕ್ಯಾಂಟೀನ್

    BBMP Budget 2024: ಬಡವರ ಹಸಿವು ನೀಗಿಸಲು 50 ಹೊಸ ಇಂದಿರಾ ಕ್ಯಾಂಟೀನ್

    ಬೆಂಗಳೂರು: ಬಡವರ ಹಸಿವು ನೀಗಿಸಲು, ಕೈಗೆಟಕುವ ದರದಲ್ಲಿ ಆಹಾರ ಸಿಗುವಂತಾಗಲು ಮತ್ತೆ ಹೊಸ 50 ಇಂದಿರಾ ಕ್ಯಾಂಟೀನ್‌ಗಳು‌ (Indira Canteen) ಬೆಂಗಳೂರಿನಲ್ಲಿ (Bengaluru) ತಲೆ ಎತ್ತಲಿವೆ.

    ಬಿಬಿಎಂಪಿ ಬಜೆಟ್‌ನಲ್ಲಿ (BBMP Budget) ಘೋಷಿಸಿದ ಈ ಹೊಸ ಇಂದಿರಾ ಕ್ಯಾಂಟೀನ್‌ಗಳು ಸ್ಥಿರ ಅಥವಾ ಮೊಬೈಲ್ ಮೋಡ್‌ನಲ್ಲಿ ಸ್ಥಾಪನೆಯಾಗಲಿವೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ಈ ವರ್ಷ ಹೊಸದಾಗಿ ಇಂದಿರಾ ಕ್ಯಾಂಟೀನ್ ಸ್ಥಾಪನೆಯಾಗಲಿದೆ. ಇಂದಿರಾ ಕ್ಯಾಂಟೀನ್‌ಗಳಿಗಾಗಿ ಈ ವರ್ಷದ ಬಜೆಟ್‌ನಲ್ಲಿ ಒಟ್ಟು 70 ಕೋಟಿ ರೂ.ಗಳನ್ನು ನೀಡಲಾಗಿದೆ. ಇದನ್ನೂ ಓದಿ: BBMP Budget 2024: ಪಾಲಿಕೆಯ ಶಾಲಾ/ಕಾಲೇಜು ವಿದ್ಯಾರ್ಥಿಗಳು, ಪೋಷಕರಿಗೆ ‘ಆಯುಷ್ಮಾನ್‌ ಭಾರತ್‌’ ವಿಮೆ!

    ಬ್ರ‍್ಯಾಂಡ್ ಬೆಂಗಳೂರು- ಆರೋಗ್ಯಕರ ಬೆಂಗಳೂರು – ಆರೋಗ್ಯ ಕ್ಷೇತ್ರಕ್ಕೇನು ಸಿಕ್ತು?
    – ಬೆಂಗಳೂರಿನಲ್ಲಿ ಆರೋಗ್ಯ ಸೇವೆ ಉನ್ನತೀಕರಣಕ್ಕೆ ಮುಂದಿನ 2 ವರ್ಷದಲ್ಲಿ 200 ಕೋಟಿ ರೂ. ವೆಚ್ಚ. ಇದರಲ್ಲಿ ಈ ವರ್ಷ 100 ಕೋಟಿ ರೂ.ಗಳ ಯೋಜನೆ ಶುರು.
    – ಬೆಂಗಳೂರು ಆರೋಗ್ಯ ಆಯುಕ್ತ ಹೊಸ ಹುದ್ದೆ ಸೃಷ್ಟಿ.
    – 144 ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, 225 ನಮ್ಮ ಕ್ಲಿನಿಕ್, 27 ಹೆರಿಗೆ ಆಸ್ಪತ್ರೆ, 7 ಫಸ್ಟ್ ರೆಫರಲ್ ಯೂನಿಟ್ ನಿರ್ವಹಣೆಗೆ 20 ಕೋಟಿ ರೂ.
    – ಸಮಗ್ರ ಸದೃಢ ಆರೋಗ್ಯ ಯೋಜನೆಯಡಿ ಮುಂದಿನ 3 ವರ್ಷಕ್ಕೆ ಸಮಗ್ರ ಯೋಜನೆ
    – ಇದರ ಅಡಿಯಲ್ಲಿ 40 ಹೊಸ ನಗರ ಪ್ರಾಥಮಿಕ ಕೇಂದ್ರ ನಿರ್ಮಾಣ ಮತ್ತು 81 ಪ್ರಾಥಮಿಕ ಆರೋಗ್ಯ ಕೇಂದ್ರ ನವೀಕರಣಕ್ಕೆ ಒಟ್ಟು 64 ಕೋಟಿ ರೂ.
    – 24 ಹೆರಿಗೆ ಆಸ್ಪತ್ರೆಗಳು ಮತ್ತು ರೆಫರಲ್ ಘಟಕಗಳಲ್ಲಿ ಹೆಚ್ಚುವರಿ ಕೊಠಡಿಗಳ ನಿರ್ಮಾಣಕ್ಕೆ 24 ಕೋಟಿ ರೂ.
    – ಈ ವರ್ಷ 27 ಉಚಿತ ಫಿಸಿಯೋಥೆರಪಿ ಕೇಂದ್ರಗಳ ಸ್ಥಾಪನೆ.
    – ಎಲೆಕ್ಟ್ರಿಕ್ ವಾಹನದಲ್ಲಿ ಮನೆ ಬಾಗಿಲಿನಲ್ಲೇ ಚುಚ್ಚುಮದ್ದು ಹಾಕಿಸುವ ಆರೋಗ್ಯ ಸಾರಥಿ ಯೋಜನೆ.
    – ನಮ್ಮ ಕ್ಲಿನಿಕ್‌ಗಳ 100 ಪ್ರಯೋಗಾಲಯಗಳಲ್ಲಿ ಇನ್ನೂ ಹೆಚ್ಚಿನ 20 ವಿವಿಧ ಚಿಕಿತ್ಸಾ ಸಂಬಂಧಿತ ಪರೀಕ್ಷೆ.
    – 14 ಅತ್ಯಾಧುನಿಕ ಜೀವ ರಕ್ಷಕ ಅಂಬುಲೆನ್ಸ್ ಖರೀದಿ.
    – ಈ ಎಲ್ಲಾ ಕಾರ್ಯಗಳಿಗೆ ಈ ವರ್ಷ 25 ಕೋಟಿ ರೂ. ಅನುದಾನ.
    – ವಿಶೇಷ ಚೇತನ ಮಕ್ಕಳಿಗೆ ದಿನದ ಆರೈಕೆ ಕೇಂದ್ರ ಸ್ಥಾಪನೆಗೆ 1 ಕೋಟಿ ರೂ.
    – ಪಾಲಿಕೆಯ ಆಂತರಿಕ ವೈದ್ಯರ ತಂಡ ಹಾಗೂ ಕ್ಷೇತ್ರ ತಜ್ಞರ ಸಹಾಯದಿಂದ ಮನೋಬಿಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಸಂವಾದ.
    – ಪಾಲಿಕೆ ವ್ಯಾಪ್ತಿಯಲ್ಲಿ ಹೊಸ ರುದ್ರಭೂಮಿ, ಚಿತಾಗಾರ ನಿರ್ಮಾಣ. ರುದ್ರಭೂಮಿ ಹಾಗೂ ಚಿತಾಗಾರ ಉನ್ನತೀಕರಿಸಲು 15 ಕೋಟಿ ರೂ.
    – ಶುಚಿಯಾದ ಮಾಂಸದ ಬೇಡಿಕೆ ಈಡೇರಿಕೆ ಹಾಗೂ ಪೂರೈಕೆಗೆ 2 ವಲಯಗಳಲ್ಲಿ ಆಧುನಿಕ ಕಸಾಯಿಖಾನೆ ನಿರ್ಮಾಣ. ಪ್ರಾಣಿಗಳ ತ್ಯಾಜ್ಯ ವಿಲೇವಾರಿಗಾಗಿ 4 ಘಟಕ ನಿರ್ಮಾಣಕ್ಕೆ ಒಟ್ಟು 10 ಕೋಟಿ ರೂ. ನೀಡಲಾಗಿದೆ. ಇದನ್ನೂ ಓದಿ: BBMP Budget 2024: ಆಟದ ಮೈದಾನದ ಕೆಳಗೆ ಬರಲಿದೆ ಅಂಡರ್‌ಗ್ರೌಂಡ್‌ ಪಾರ್ಕಿಂಗ್!‌