Tag: headquarters

  • ಹಾಡಹಗಲಲ್ಲೇ ಸರ್ಕಾರಿ ಕಚೇರಿಗೆ ನುಗ್ಗಿ ಮೂವರು ಮಹಿಳೆಯರಿಗೆ ಕತ್ತಿಯಿಂದ ಕಡಿದ ದುಷ್ಕರ್ಮಿ

    ಹಾಡಹಗಲಲ್ಲೇ ಸರ್ಕಾರಿ ಕಚೇರಿಗೆ ನುಗ್ಗಿ ಮೂವರು ಮಹಿಳೆಯರಿಗೆ ಕತ್ತಿಯಿಂದ ಕಡಿದ ದುಷ್ಕರ್ಮಿ

    – ಆರೋಪಿಯನ್ನು ಪೊಲೀಸರಿಗೊಪ್ಪಿಸಿದ ಸ್ಥಳೀಯರು

    ಮಂಗಳೂರು: ನಗರದ ಕರಂಗಲಪಾಡಿಯಲ್ಲಿನ ಡಯಟ್ ಸಂಸ್ಥೆಯಲ್ಲಿ ದುಷ್ಕರ್ಮಿಯೊಬ್ಬ ಅಟ್ಟಹಾಸ ಮೆರೆದಿದ್ದಾನೆ. ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಒಳಗೆ ಶಿಕ್ಷಕಿಗೆ ಗಿಫ್ಟ್ ಕೊಡುವ ನೆಪದಲ್ಲಿ ಬಂದಿದ್ದ ದುಷ್ಕರ್ಮಿ ಮೂವರು ಮಹಿಳಾ ಸಿಬ್ಬಂದಿಗಳ ಮೇಲೆ ತಲವಾರು ಅಟ್ಯಾಕ್ ಮಾಡಿದ್ದಾನೆ.

    ಬರ್ಕೆ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ತಲವಾರು ದಾಳಿ ನಡೆಸಿದ ವ್ಯಕ್ತಿಯನ್ನು ಉಡುಪಿ ಜಿಲ್ಲೆಯ ಕುಂದಾಪುರ ಮೂಲದ 31 ವರ್ಷದ ನವೀನ್ ಎಂದು ಗುರುತಿಸಲಾಗಿದೆ. ನವೀನ್‍ನನ್ನು ಪೊಲೀಸರು ಬಂಧಿಸಿದ್ದು, ಈತ ಇಲ್ಲಿನ ಹಳೆ ವಿದ್ಯಾರ್ಥಿ ಎಂದು ತಿಳಿದುಬಂದಿದೆ.

    ಶಿಕ್ಷಕಿಯೊಬ್ಬರ ಮೇಲೆ ದ್ವೇಷ ಸಾಧನೆಗಾಗಿ ಈ ಕೃತ್ಯ ಎಸಗಿರುವ ಮಾಹಿತಿಯಿದೆ. ಘಟನೆಯಲ್ಲಿ ಇಲ್ಲಿನ ಸಿಬ್ಬಂದಿ ನಿರ್ಮಲಾ, ರೀನಾ ರಾಯ್, ಗುಣವತಿ ಎಂಬವರಿಗೆ ಗಾಯವಾಗಿದ್ದು, ನಿರ್ಮಲಾ ಅವರ ಸ್ಥಿತಿ ಗಂಭೀರವಾಗಿದೆ. ಗಾಯಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ:  ಪ್ರಚಾರದ ಹುಚ್ಚಿಗೆ ಬಿದ್ದು ಯಡವಟ್ಟು ಮಾಡಿಕೊಂಡ್ವಿ -ಪೊಲೀಸರ ಮುಂದೆ ಕಣ್ಣೀರಿಟ್ಟ ಯುವಕರು

    ಪ್ರಾರಂಭದಲ್ಲಿ ಸಂಸ್ಥೆಯ ಒಳಗೆ ಬಂದಿದ್ದ ಈ ನವೀನ್ ಶಿಕ್ಷಕರೊಬ್ಬರನ್ನು ಕೇಳಿದ್ದಾನೆ. ಅವರಿಗೆ ಗಿಫ್ಟ್ ಒಂದನ್ನು ನೀಡೊದಕ್ಕೆ ಬಂದಿರೋದಾಗಿ ಹೇಳಿದ್ದಾನೆ. ಆದರೆ ಆ ಸಂದರ್ಭ ಆತ ಕೇಳಿಕೊಂಡು ಬಂದ ಶಿಕ್ಷಕ ಇರಲಿಲ್ಲ. ಇದರಿಂದ ಸಿಟ್ಟಿಗೆದ್ದ ಆತ ತಕ್ಷಣ ತನ್ನ ಬ್ಯಾಗ್ ಒಳಗಿಂದ ತಲವಾರು ತೆಗೆದು ಅಲ್ಲಿಂದ ಇತರ ಸಿಬ್ಬಂದಿ ಮೇಲೆ ದಾಳಿ ಮಾಡಿದ್ದಾನೆ.

    ಘಟನೆ ಸಂದರ್ಭ ಇಬ್ಬರು ಸಿಬ್ಬಂದಿ ಓಡಿ ಬಂದು ಪಕ್ಕದಲ್ಲೇ ಇದ್ದ ಜೈಲು ಸಿಬ್ಬಂದಿ ಬಳಿ ವಿಷಯ ಹೇಳಿದ್ದಾರೆ. ತಕ್ಷಣ ಸ್ಥಳೀಯರು ಮತ್ತು ಜೈಲು ಸಿಬ್ಬಂದಿ ಆತನನ್ನು ಹಿಡಿದು ಬರ್ಕೆ ಠಾಣಾ ಪೊಲೀಸರಿಗೆ ಒಪ್ಪಿಸಿದ್ದಾರೆ. ಗಾಯಗೊಂಡವರಲ್ಲಿ ಒಬ್ಬರಿಗೆ ತಲೆ, ಮತ್ತಿಬ್ಬರ ಕೈಗೆ ಗಾಯವಾಗಿದೆ. ಪೆÇಲೀಸರು ಬಂಧಿತ ನವೀನ್‍ನನ್ನು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಅಮೆರಿಕದ ರಕ್ಷಣಾ ಕಾರ್ಯದರ್ಶಿ ಜೊತೆ ರಾಜನಾಥ್ ಮಾತುಕತೆ

    ನವೀನ್ ಕುಂದಾಪುರದಲ್ಲಿ ಜವಾನ ಕೆಲಸ ಮಾಡ್ತಿದ್ದ ಎಂದು ತಿಳಿದುಬಂದಿದೆ. ಆದ್ರೆ ಈತನಿಗೆ ಶಿಕ್ಷಕಿಯೊಬ್ಬರ ಮೇಲೆ ಇದ್ದ ದ್ವೇಷ ಏನು ಎಂಬ ಬಗ್ಗೆಯು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

    ಘಟನೆಯಿಂದ ಸಂಸ್ಥೆಯಲ್ಲಿದ್ದ ಸಿಬ್ಬಂದಿ ಆತಂಕಕ್ಕೆ ಒಳಗಾಗಿದ್ದು, ಒಂದು ಕ್ಷಣದಲ್ಲಿ ಏನಾಯ್ತು ಎಂಬುದೇ ತಿಳಿಯದಂತಾಗಿದ್ದಾರೆ. ಒಟ್ಟಿನಲ್ಲಿ ತಲವಾರು ದಾಳಿ ನಡೆಸಿದ ಆಗಂತುಕ ಇದೀಗ ಬಂಧಿಸಿದ್ದು, ಹೆಚ್ಚಿನ ತನಿಖೆ ಇನ್ನಷ್ಟು ನಡೆಯಲಿದೆ. ಇದನ್ನೂ ಓದಿ: ಹುಣಸೋಡು ಸ್ಫೋಟ ಪ್ರಕರಣ – ಆರನೇ ವ್ಯಕ್ತಿ ಮೃತದೇಹ ಡಿಎನ್‍ಎ ವರದಿಯಿಂದ ಪತ್ತೆ

  • ಸಿಆರ್‌ಪಿಎಫ್ ಸಿಬ್ಬಂದಿಗೆ ಸೋಂಕು- ಮುಖ್ಯ ಕಚೇರಿ ಸೀಲ್

    ಸಿಆರ್‌ಪಿಎಫ್ ಸಿಬ್ಬಂದಿಗೆ ಸೋಂಕು- ಮುಖ್ಯ ಕಚೇರಿ ಸೀಲ್

    ನವದೆಹಲಿ: ಸಿಆರ್‌ಪಿಎಫ್‍ನ ಹಿರಿಯ ಅಧಿಕಾರಿಯೊಬ್ಬರ ಆಪ್ತ ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನಲೆ ದೆಹಲಿಯಲ್ಲಿರುವ ಕೇಂದ್ರ ಕಚೇರಿಯನ್ನು ಸಂಪೂರ್ಣ ಸೀಲ್ ಮಾಡಲಾಗಿದ್ದು, ಸ್ಯಾನಿಟೈಜರ್ ಸಿಂಪಡಿಸಲಾಗುತ್ತಿದೆ.

    ಸಿಆರ್‌ಪಿಎಫ್‍ನ ಹೆಚ್ಚುವರಿ ಮಹಾ ನಿರ್ದೇಶಕ ಜಾವೇದ್ ಅಖ್ತಾರ್ ಮತ್ತು ಅವರ ಸ್ಟೇನೋಗ್ರಾಫರ್ ಅವರನ್ನು ಇಂದು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಪರೀಕ್ಷೆ ವೇಳೆ ಸ್ಟೇನೋಗ್ರಾಫರ್ ನಲ್ಲಿ ಪಾಸಿಟಿವ್ ವರದಿ ಬಂದಿದ್ದರಿಂದ ಲೋಧಿ ರಸ್ತೆಯ ಸಿಜಿಓ ಕಾಂಪ್ಲೆಕ್ಸ್ ನಲ್ಲಿರುವ ಸಿಆರ್‌ಪಿಎಫ್‍ ಕಚೇರಿಯನ್ನು ಪ್ರೊಟೊಕಾಲ್ ಪ್ರಕಾರ ಸೀಲ್ ಮಾಡಲಾಯಿತು. ಇದನ್ನೂ ಓದಿ:  68 ಮಂದಿ ಸಿಆರ್‌ಪಿಎಫ್ ಯೋಧರಿಗೆ ಸೋಂಕು

    ಈ ಮೊದಲು ಕೇಂದ್ರ ಕಚೇರಿಯೊಂದಿಗೆ ಸಂಪರ್ಕವಿಟ್ಟುಕೊಂಡಿದ್ದ ಚಾಲಕನಿಗೂ ಕೊರೊನಾ ಸೋಂಕು ಇರುವುದು ಪತ್ತೆಯಾಗಿರುವುದರಿಂದ ಇತರೆ ನೌಕರರು ಕೆಲಸ ಮಾಡಲು ಅವಕಾಶವನ್ನು ನೀಡಿಲ್ಲ. ನೌಕರರು ಕೇಂದ್ರ ಕಚೇರಿ ಕಟ್ಟಡಕ್ಕೆ ಪ್ರವೇಶಿಸಲು ಅನುಮತಿ ನೀಡುತ್ತಿಲ್ಲ ಎಂದು ಸಿ.ಆರ್.ಪಿ.ಎಫ್ ಮೂಲಗಳು ತಿಳಿಸಿವೆ.

    ಹೆಚ್ಚುವರಿ ಮಹಾ ನಿರ್ದೇಶಕರ ಕುಟುಂಬ, ಮನೆ ಸಿಬ್ಬಂದಿ ಮತ್ತು ಇವರ ಸೋಂಕಿತ ವ್ಯಕ್ತಿಯ ಸಂಪರ್ಕದಲ್ಲಿದ್ದ ಹಿರಿಯ ಅಧಿಕಾರಿಗಳು ಎಲ್ಲ ಸಿಬ್ಬಂದಿ ಮತ್ತು ಅವರ ಮನೆಗಳನ್ನು ಸೀಲ್ ಮಾಡಿದ್ದು, ಕ್ವಾರಂಟೈನ್‍ನಲ್ಲಿರುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.

    ಇದಕ್ಕೂ ಮೊದಲು ದೆಹಲಿಯ ಮಯೂರ್ ವಿಹಾರ್ ಫೇಸ್ 3ರಲ್ಲಿರುವ ಸಿಆರ್‍ಪಿಎಫ್ ನ ಮೂರನೇ ಬೆಟಾಲಿಯನ್‍ನಲ್ಲಿ 144 ಯೋಧರಿಗೆ ಸೋಂಕು ಕಾಣಿಸಿಕೊಂಡಿದೆ. ಈವರೆಗೂ ಓರ್ವ ಯೋಧ ಸಾವನ್ನಪ್ಪಿದ್ದರೆ, ಮತ್ತೊಬ್ಬರು ಚೇತರಿಸಿಕೊಂಡಿದ್ದು ಇನ್ನು 20 ಮಂದಿಯ ವರದಿ ನಿರೀಕ್ಷೆಯಲ್ಲಿದೆ.

  • ಒಂದೂವರೆ ವರ್ಷದಲ್ಲಿ ನಿರ್ಮಾಣವಾಯ್ತು ಬಿಜೆಪಿ ಹೈಟೆಕ್ ಕಚೇರಿ-ವಿಶೇಷತೆ ಏನು?

    ಒಂದೂವರೆ ವರ್ಷದಲ್ಲಿ ನಿರ್ಮಾಣವಾಯ್ತು ಬಿಜೆಪಿ ಹೈಟೆಕ್ ಕಚೇರಿ-ವಿಶೇಷತೆ ಏನು?

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಬಿಜೆಪಿ ಪಕ್ಷದ ನೂತನ ಕಚೇರಿಯನ್ನು ದೆಹಲಿಯಲ್ಲಿ ಉದ್ಘಾಟನೆ ಮಾಡಿದ್ದಾರೆ.

    ನವದೆಹಲಿಯ ದೀನ್ ದಿಯಾಳ್ ಉಪಾಧ್ಯಾಯ ಮಾರ್ಗ್ 6ರಲ್ಲಿ ಬಿಜೆಪಿಯ ನೂತನ ಮುಖ್ಯ ಕಚೇರಿ ನಿರ್ಮಿಸಲಾಗಿದೆ. ಉದ್ಘಾಟನಾ ಸಮಾರಂಭದಲ್ಲಿ ಪಕ್ಷದ ಹಿರಿಯ ನಾಯಕರಾದ ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ್ ಜೋಷಿ, ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸೇರಿದಂತೆ ಪಕ್ಷ ಪ್ರಮುಖ ನಾಯಕರು ಭಾಗವಹಿಸಿದ್ದರು.

    ಸುಪ್ರೀಂ ಕೋರ್ಟ್ ಸೂಚನೆಯಂತೆ ರಾಷ್ಟ್ರ ರಾಜಧಾನಿ ಕೇಂದ್ರ ಭಾಗದಲ್ಲಿರುವ ರಾಜಕೀಯ ಕಚೇರಿಗಳನ್ನು ಬೇರೆಡೆ ಸ್ಥಳಾಂತರಿಸಲಾಗುತ್ತಿದೆ. ಇದರಂತೆ ಬಿಜೆಪಿ ಪಕ್ಷ ತನ್ನ ಕೇಂದ್ರ ಕಚೇರಿಯನ್ನು ಬದಲಾಯಿಸಿದೆ. 2016 ಆಗಸ್ಟ್ ನಲ್ಲಿ ಪ್ರಧಾನಿ ಮೋದಿ ನೂತನ ಕಚೇರಿಗೆ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದ್ದರು. ಕೇವಲ 18 ತಿಂಗಳುಗಳಲ್ಲಿ ಭವ್ಯ ಕಚೇರಿ ನಿರ್ಮಾಣವಾಗಿದೆ.

    ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ ಪಕ್ಷದ ಕಚೇರಿ ನಿರ್ಮಾಣದಲ್ಲಿ ಶ್ರಮವಹಿಸಿದ ಪಕ್ಷದ ಎಲ್ಲಾ ಕಾರ್ಯಕರ್ತರು ಹಾಗೂ ನಾಯಕರಿಗೆ ಧನ್ಯವಾದ ತಿಳಿಸಿದರು. ಅಲ್ಲದೇ ಪಕ್ಷದ ಬೆಳವಣಿಗೆಗೆ ತಮ್ಮ ಜೀವನವನ್ನು ಆರ್ಪಿಸಿದ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ, ಪಂಡಿತ್ ದೀನ್ ದಯಾಳ್ ಉಪಾಧ್ಯಾಯರನ್ನು ಸ್ಮರಿಸಿದರು.

    ವಿಶೇಷತೆಗಳು: ಕಟ್ಟದದಲ್ಲಿ ಪ್ರಮುಖವಾಗಿ ಎರಡು ವಿಭಾಗಗಳಿವೆ. ಮೊದಲ ಭಾಗದಲ್ಲಿ 3 ಮಹಡಿ, ಎರಡನೇ ಭಾಗದಲ್ಲಿ 7 ಅಂತಸ್ತಿನ ಸಂಕೀರ್ಣ ಕಟ್ಟಡ ಹೊಂದಿದೆ. ಇಲ್ಲಿ ಪ್ರಮುಖವಾಗಿ ಪಕ್ಷ ಮುಖಂಡರು ಸಭೆ ನಡೆಸಲು ಬೇಕಾದ ಸಭಾಂಗಣ, ಸಭಾ ಕೊಠಡಿ ಮತ್ತು ಟಿವಿ ಸ್ಟುಡಿಯೋ ಹೊಂದಿದೆ. ಕಚೇರಿಯಲ್ಲಿ ಆಧುನಿಕ ಗ್ರಂಥಾಲಯವನ್ನು ನಿರ್ಮಾಣ ಮಾಡಲಾಗಿದೆ.

    ಕೇಂದ್ರ ಕಚೇರಿಯಿಂದ ದೇಶದ ಎಲ್ಲಾ ರಾಜ್ಯಗಳ ಪಕ್ಷದ ಕಚೇರಿಗಳು ವಿಡಿಯೋ ಕಾನ್ಫರೆನ್ಸ್ ವ್ಯವಸ್ಥೆ ಕಲ್ಪಿಸುವ ಆಧುನಿಕ ತಂತ್ರಜ್ಞಾನ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಆಯಾ ರಾಜ್ಯಗಳ ಆರ್ಟ್ ಲೈಬ್ರೆರಿಯಲ್ಲಿ ಸಾಹಿತ್ಯ ಪುಸ್ತಕ ಹಾಗೂ ನೂತನ ಪತ್ರಿಕೆಗಳು ಹೊಂದಿರುತ್ತದೆ. ದೇಶದ ಎಲ್ಲಾ ರಾಜಕೀಯ ಪಕ್ಷಗಳ ಕೇಂದ್ರ ಕಚೇರಿಗಳಿಗಿಂತ ದೊಡ್ಡ ಕಚೇರಿಯನ್ನು ಬಿಜೆಪಿ ಈಗ ಹೊಂದಿದೆ. ಕೇಂದ್ರ ಕಚೇರಿಯೂ ಕಾರ್ಪೋರೆಟ್ ಕಂಪನಿಯ ಶೈಲಿಯಲ್ಲಿ ನಿರ್ಮಾಣವಾಗಿದೆ.