Tag: HDK Budget

  • ಮೈತ್ರಿ ಬಜೆಟ್ ಎಫೆಕ್ಟ್: ಹೆಚ್ಚಾಗಲಿದೆ ಪೆಟ್ರೋಲ್, ಡೀಸೆಲ್ ಬೆಲೆ

    ಮೈತ್ರಿ ಬಜೆಟ್ ಎಫೆಕ್ಟ್: ಹೆಚ್ಚಾಗಲಿದೆ ಪೆಟ್ರೋಲ್, ಡೀಸೆಲ್ ಬೆಲೆ

    ಬೆಂಗಳೂರು: ಬಹು ನಿರೀಕ್ಷಿತ ಸಮ್ಮಿಶ್ರ ಸರ್ಕಾರದ ಬಜೆಟ್ ನ್ನು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಇಂದು ಮಂಡಿಸಿದರು. 34 ಸಾವಿರ ಕೋಟಿ ರೂ. ಸಾಲಮನ್ನಾ ಮಾಡಿದ್ದು, ಒಂದೆಡೆ ಕೆಲವರಿಗೆ ಖುಷಿಯನ್ನು ತಂದಿದ್ರೆ, ಒಂದು ಕಡೆ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ತೆರಿಗೆ ಹೆಚ್ಚಿಸಿದ ಪರಿಣಾಮ ಅವುಗಳ ಬೆಲೆ ಏರಿಕೆಯಾಗಲಿದೆ.

    1. ಪೆಟ್ರೋಲ್ ಮತ್ತು ಡಿಸೇಲ್:
    ಇತ್ತ ರಾಜ್ಯದ ಅಭಿವೃದ್ಧಿ ಕಾರ್ಯಕ್ರಮಗಳಿಗಾಗಿ ಸಂಪನ್ಮೂಲಗಳ ಕ್ರೋಡಿಕರಣಕ್ಕಾಗಿ ಪಟ್ರೋಲ್, ಡೀಸೆಲ್, ಮದ್ಯ, ಸಾರಿಗೆ ತೆರಿಗೆ ಮತ್ತು ವಿದ್ಯುತ್ ದರವನ್ನು ಹೆಚ್ಚಳ ಮಾಡಲಾಗಿದೆ. ಪೆಟ್ರೋಲ್ ಮೇಲಿನ ತೆರಿಗೆಯನ್ನು ಪ್ರಸ್ತುತ ಶೇ.30 ರಿಂದ ಶೇ.32 ಮತ್ತು ಡೀಸೆಲ್ ತೆರಿಗೆ ದರವನ್ನು ಪ್ರಸ್ತುತ ಶೇ.19ರಿಂದ 21ಕ್ಕೆ ಏರಿಗೆ ಮಾಡಲಾಗಿದೆ. ಒಟ್ಟಾರೆಯಾಗಿ ಲೀಟರ್ ಒಂದಕ್ಕೆ ಪೆಟ್ರೋಲ್ ಮೇಲಿನ ಬೆಲೆಯಲ್ಲಿ 1.14 ರೂ. ಮತ್ತು ಡೀಸೆಲ್ ಮೇಲಿನ ಬೆಲೆಯಲ್ಲಿ ರೂ.1.12 ಪ್ರಮಾಣದಲ್ಲಿ ಹೆಚ್ಚಳವಾಗಲಿದೆ.

    2. ಅಬಕಾರಿ:
    ಮದ್ಯ ಎಲ್ಲಾ 18 ಫೋಷಿತ ಬೆಲೆ ಸ್ಲಾಬ್ ಗಳ ಮೇಲಿನ ಹೆಚ್ಚುವರಿ ಅಬಕಾರಿ ಸುಂಕದ ದರಗಳನ್ನು ಅನುಬಂಧ-ಅರಲ್ಲಿರುವಂತೆ ಹಾಲಿ ಇರುವ ದರಗಳ ಮೇಲೆ ಶೇಕಡ 4ರಷು ಹೆಚ್ಚಿಸಲಾಗಿದೆ.

    3. ಸಾರಿಗೆ:
    ಮೋಟಾರು ವಾಹನ ತೆರಿಗೆಯನ್ನು ಈ ಬಾರಿಯ ಬಜೆಟ್‍ನಲ್ಲಿ ಹೆಚ್ಚಳದ ಪ್ರಸ್ತಾವನೆಯನ್ನು ಉಲ್ಲೇಖಿಸಲಾಗಿದೆ. ಖಾಸಗಿ ಸೇವಾ ವಾಹನ ತೆರಿಗೆಯನ್ನು ಪ್ರತಿ ಚದರ ಮೀಟರ್ ಗೆ ಶೇ.50ರಂತೆ ಹೆಚ್ಚಳ. ಅಂದರೆ ಈಗಿರುವ ರೂ.1,100, 1,200, 1,300 ಮತ್ತು 1,500ಗಳನ್ನು ಕ್ರಮವಾಗಿ ರೂ. 1650, 1800, 1950 ಮತ್ತು 2250 ಗಳಿಗೆ ಏರಿಕೆ ಮಾಡಲಾಗುವುದು ಎಂದು ಬಜೆಟ್‍ನಲ್ಲಿ ತಿಳಿಸಲಾಗಿದೆ.

    4. ವಿದ್ಯುತ್:
    ವಿದ್ಯುತ್ ಬಳಕೆ ಮೇಲಿನ ತೆರಿಗೆಯನ್ನು ಚಾಲ್ತಿಯಲ್ಲಿರುವ ಶೇ.6 ರಿಂದ ಶೇ.9ಕ್ಕೆ ಹೆಚ್ಚಿಸಲಾಗಿದೆ. ಸ್ವಂತ ಬಳಕೆಯ ವಿದ್ಯುತ್ (Taxation On Captive Consumption) ಮೇಲಿನ ತೆರಿಗೆ ದರವನ್ನು ಪ್ರತಿ ಯೂನಿಟ್ ದರ 10 ಪೈಸೆಯಿಂದ 20 ಪೈಸೆಗೆ ಏರಿಕೆ ಮಾಡಲಾಗಿದೆ.

  • ‘ಸಂಧ್ಯಾ ಸುರಕ್ಷಾ’ ಹೆಚ್ಚುವರಿ ಹಣ ಬರೋಕೆ ನವೆಂಬರ್ ವರೆಗೆ ಕಾಯಬೇಕು!

    ‘ಸಂಧ್ಯಾ ಸುರಕ್ಷಾ’ ಹೆಚ್ಚುವರಿ ಹಣ ಬರೋಕೆ ನವೆಂಬರ್ ವರೆಗೆ ಕಾಯಬೇಕು!

    – ಕಂದಾಯ ಇಲಾಖೆಗೆ ಎಚ್‍ಡಿಕೆ ಕೊಟ್ಟಿದ್ದೇನು?

    ಬೆಂಗಳೂರು: ಎಚ್.ಡಿ.ಕುಮಾರಸ್ವಾಮಿ ಅವರು ಇಂದು ಮಂಡಿಸಿದ ಬಜೆಟ್‍ನಲ್ಲಿ ಸಂಧ್ಯಾ ಸುರಕ್ಷಾ ಯೋಜನೆಯಲ್ಲಿ ಫಲಾನುಭವಿಗಳ ಮಾಸಾಶನವನ್ನು ಏರಿಕೆ ಮಾಡಲಾಗಿದೆ. ಇದುವರೆಗೆ 600 ರೂ. ಇದ್ದ ಮಾಸಾಶನ ಇನ್ನು ಮುಂದೆ 1000 ರೂ.ಗೆ ಏರಿಕೆಯಾಗಿದೆ. ಆದರೆ ಈ ಏರಿಕೆ ಈ ವರ್ಷ ನವೆಂಬರ್ 1ರಿಂದ ಜಾರಿಗೆ ಬರಲಿದೆ.

    65 ವರ್ಷ ಮೀರಿದ 32.92 ಲಕ್ಷ ವೃದ್ಧರಿಗೆ ಇದರ ಪ್ರಯೋಜನ ಪಡೆಯಲಿದ್ದಾರೆ. ಈ ಮೊತ್ತ ಮುಂದಿನ 5 ವರ್ಷಗಳಲ್ಲಿ ಹಂತ ಹಂತವಾಗಿ ಏರಿಕೆಯಾಗಲಿದೆ. ಇದಕ್ಕಾಗಿ ಈ ಬಜೆಟ್‍ನಲ್ಲಿ ಹೆಚ್ಚುವರಿ 660 ಕೋಟಿ ರೂ. ಒದಗಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

    ರಾಜ್ಯದಲ್ಲಿ ಮರು ಭೂಮಾಪನಾ ಕಾರ್ಯ ಆರಂಭವಾಗಲಿದೆ. ಹಂತ ಹಂತವಾಗಿ ಈ ಪ್ರಕ್ರಿಯೆ ನಡೆಯಲಿದ್ದು, ಮೊದಲಿಗೆ 5 ಜಿಲ್ಲೆಗಳಲ್ಲಿ ಮರು ಭೂ ಮಾಪನ ಆರಂಭವಾಗಲಿದೆ. 50 ನಾಡ ಕಚೇರಿಗಳ ಮೂಲಭೂತ ಸೌಕರ್ಯ ಕಲ್ಪಿಸಲು 10 ಕೋಟಿ ರೂಪಾಯಿ ನೀಡುವುದಾಗಿ ಸಿಎಂ ಕುಮಾರಸ್ವಾಮಿ ಅವರು ಘೋಷಿಸಿದ್ದಾರೆ.

  • ಕೋಲಾರ, ಚಿತ್ರದುರ್ಗದಲ್ಲಿ ಇಸ್ರೇಲ್ ಮಾದರಿಯ ಕೃಷಿ – ಬಜೆಟ್‍ನಲ್ಲಿ ಕೃಷಿಗೆ ಸಿಕಿದ್ದೇನು..?

    ಕೋಲಾರ, ಚಿತ್ರದುರ್ಗದಲ್ಲಿ ಇಸ್ರೇಲ್ ಮಾದರಿಯ ಕೃಷಿ – ಬಜೆಟ್‍ನಲ್ಲಿ ಕೃಷಿಗೆ ಸಿಕಿದ್ದೇನು..?

    ಬೆಂಗಳೂರು: ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಆಗಿರುವ ಹೆಚ್.ಡಿ.ಕುಮಾರಸ್ವಾಮಿ ಇಂದು ತಮ್ಮ ಚೊಚ್ಚಲ ಬಜೆಟ್ ಮಂಡನೆ ಮಾಡಿದ್ದಾರೆ. ಈಗಾಗಲೇ 34 ಸಾವಿರ ಕೋಟಿ ರೂ. ಸಾಲಮನ್ನಾ ಮಾಡಲಾಗಿದ್ದು, ಒಟ್ಟಾರೆಯಾಗಿ ಕೃಷಿ ವಲಯಕ್ಕೆ ಬಜೆಟ್‍ನಲ್ಲಿ ಸಿಕ್ಕಿರುವ ಮಾಹಿತಿ ಈ ಕೆಳಗಿನಂತಿದೆ.

    ಕೃಷಿಗೆ –
    1. ಕೋಲಾರ, ಚಿತ್ರದುರ್ಗ, ಕೊಪ್ಪಳ, ಮತ್ತು ಗದಗ ಮೊದಲ ಹಂತದಲ್ಲಿ ತಲಾ 500 ಹೆಕ್ಟೇರ್ ಖುಷ್ಕಿ ಜಮೀನಿನಲ್ಲಿ ಇಸ್ರೇಲ್ ಮಾದರಿ ನೀರಾವರಿ ಸೌಲಭ್ಯ ಒದಗಿಸಲು 150 ಕೋಟಿ ರೂ. ಮೀಸಲು.
    2.ಆಂಧ್ರ ಪ್ರದೇಶ ಸರ್ಕಾರವು ಜಾರಿಗೊಳಿಸುತ್ತಿರುವ ಶೂನ್ಯ ಬಂಡವಾಳ ಸಹಜ ಕೃಷಿ ಪದ್ದತಿಯನ್ನು ರಾಜ್ಯದ ರೈತರು ಅಳವಡಿಸಿಕೊಳ್ಳಲು ಸರ್ಕಾರದಿಂದ ಸಹಾಯ. ಈ ಯೋಜನೆಗಾಗಿ 50 ಕೋಟಿ ರೂ. ಮೀಸಲು
    3. ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಕೃಷಿ ಹಾಗು ಕೃಷಿ ಸಂಬಂಧಿತ ಇಲಾಖೆಗಳ ಸಚಿವರನ್ನೊಳಗೊಂಡ ಕೃಷಿ ಸಮನ್ವಯ ಉನ್ನಯ ಸಮಿತಿಯ ರಚನೆ. ಈ ಸಮಿತಿಯಿಂದ ಮೂರು ತಿಂಗಳಿಗೊಮ್ಮೆ ಸಭೆ
    4. ಕೃಷಿಯನ್ನು ಲಾಭದಾಯಕ ಉದ್ದಿಮೆಯನ್ನಾಗಿ ಮಾಡಲು ಸರ್ಕಾರದಿಂದ ಪ್ರಯತ್ನ.

    5. ರೈತರ ಸಂಘಟನೆ ಹಾಗು ಸಾಮಥ್ರ್ಯ ಬಲವರ್ಧನೆ ಮಾಡಲು ರಾಜ್ಯದ ರೈತ ಉತ್ಪಾದಕ ಸಂಸ್ಥೆ(ಎಫ್.ಪಿ.ಓ)ನೀತಿ ಜಾರಿ.
    6. ಕೇಂದ್ರ ಸರ್ಕಾರದ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯ ಮಾರ್ಗಸೂಚಿಯಂತೆ ಸೂಕ್ತ ಯೋಜನೆಗಳಿಗೆ ಮಂಜೂರಾತಿ. ಸಿರಿಧಾನ್ಯ, ಬೇಳೆಕಾಳುಗಳು, ಎಣ್ಣೆ ಕಾಳುಗಳು, ಮುಸುಕಿನ ಜೋಳ ಇತ್ಯಾದಿ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ಸೌಲಭ್ಯ

    7. ಪರಿಸರ ಸ್ನೇಹಿ ಡಿಟರ್ಜಂಟ್ ಉದ್ಯಮದ ಅವಕಾಶಕ್ಕೆ ಸಹಾಯ. ಅಂಟುವಾಳ ಕಾಯಿ ಆಧಾರಿತ ಅನುಕೂಲವಾಗುವಂತೆ ಅಂಟುವಾಳ ಕಾಯಿ ಮರಗಳ ವ್ಯಾಪಕ ಬೇಸಾಯಕ್ಕಾಗಿ ಕಾರ್ಯಕ್ರಮ ಅನುಷ್ಠಾನ. ಕಾರ್ಯಕ್ರಮಕ್ಕಾಗಿ 10 ಕೋಟಿ. ರೂ.ನಿಗದಿ
    8. ಪರಿಶುದ್ಧ ಎಣ್ಣೆಯ ಮಾರಾಟಕ್ಕಾಗಿ ನಂದಿನಿ ಮತ್ತು ಇ-ಮಾರ್ಕೆಟಿಂಗ್ ಯೋಜನೆಗಳನ್ನು ಅನುಷ್ಠಾನಗೊಳಿಸಲು 5 ಕೋಟಿ ರೂ. ಮೀಸಲು.

    9. ರೈತರಿಗೆ ತಂತ್ರಜ್ಞಾನ ಪರಿಚಯಪಡಿಸಲು ಧಾರವಾಡ ಕೃಷಿ ವಿಶ್ವ ವಿದ್ಯಾಲಯಕ್ಕೆ 3 ಕೋಟಿ ರೂ.
    10. ಡ್ರೋಣ್‍ಗಳನ್ನು ಬಳಸಿ ಬೆಳೆ ಪರಿಸ್ಥಿತಿಯ ಮಾಹಿತಿ, ನೀರಾವರಿಯಲ್ಲಿ ಸೆನ್ಸರ್ ಸೇರಿದಂತೆ ಹಲವು ನವೋದ್ಯಮಗಳು ಹೊಸ ಅವಿಷ್ಕಾರಗಳಿಗೆ ಉತ್ತೇಜನ.

  • ಗುರುವಾರವೇ ಬಜೆಟ್ ಮಂಡಿಸುತ್ತಿರೋದು ಯಾಕೆ..?

    ಗುರುವಾರವೇ ಬಜೆಟ್ ಮಂಡಿಸುತ್ತಿರೋದು ಯಾಕೆ..?

    ಬೆಂಗಳೂರು: ಮೈತ್ರಿ ಸರ್ಕಾರ ರಚನೆಯಾದ ಬಳಿಕ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಗುರುವಾರ ಬಜೆಟ್ ಮಂಡಿಸಲಿದ್ದಾರೆ. ಸಾಮನ್ಯವಾಗಿ ಹಿಂದಿನ ಸರ್ಕಾರಗಳು ಶುಕ್ರವಾರ ಬಜೆಟ್ ಮಂಡಿಸಲಾಗುತ್ತಿತ್ತು. ಶನಿವಾರ ಮತ್ತು ಭಾನುವಾರ ಬಜೆಟ್ ಪುಸ್ತಕ ಓದಲು ಅನಕೂಲವಾಗಲಿ ಎಂಬ ಉದ್ದೇಶದಿಂದ ಮಂಡನೆ ಮಾಡಲಾಗುತ್ತಿತ್ತು.

    ಎಲ್ಲದಕ್ಕೂ ವಾಸ್ತು ಮತ್ತು ಮುಹೂರ್ತ ನೋಡುವ ಸಚಿವ ಹೆಚ್.ಡಿ.ರೇವಣ್ಣ ಬಜೆಟ್ ಮಂಡನೆಗೂ ಮುನ್ನವೇ ಶಾಸ್ತ್ರ ಕೇಳಿದ್ದರಂತೆ. ಶುಕ್ರವಾರ ಅಷ್ಟಮಿ ತಿಥಿ ಇರುವ ಕಾರಣ ಶುಭ ಕಾರ್ಯವನ್ನ ಈ ದಿನ ಮಾಡಲು ಮುಂದಾಗುವುದಿಲ್ಲ. ಜುಲೈ 5ರಂದು ಸಪ್ತಮಿ ತಿಥಿ ಪೂರ್ವಾಭದ್ರ ನಕ್ಷತ್ರದ ಕನ್ಯಾ ಲಗ್ನದ ಶುಭ ಘಳಿಗೆಯಲ್ಲಿ ಬಜೆಟ್ ಮಂಡನೆಗೆ ಮುಹೂರ್ತ ಫಿಕ್ಸ್ ಮಾಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

    ಈ ಹಿಂದೆಯೂ ರಾಹುಕಾಲದ ಬಳಿಕವೇ ಹೆಚ್.ಡಿ.ರೇವಣ್ಣ ಪ್ರಮಾಣ ವಚನ ಸ್ವೀಕರಿಸಿದ್ದರು. ಎರಡು ದಿನಗಳ ಹಿಂದೆ ಹಾಸನದಲ್ಲಿ ಕಟ್ಟಡ ಶಂಕು ಸ್ಥಾಪನೆ ವೇಳೆ ವಾಸ್ತು ಪ್ರಕಾರ ಪೂಜೆ ಮಾಡುತ್ತಿಲ್ಲ ಎಂದು ಅರ್ಚಕರಿಗೆ ಕ್ಲಾಸ್ ತೆಗೆದುಕೊಂಡಿದ್ದ ವಿಡಿಯೋ ವೈರಲ್ ಆಗಿತ್ತು. ಸಮ್ಮಿಶ್ರ ಸರ್ಕಾರದ ಮೊದಲ ಬಜೆಟ್ ತೀವ್ರ ಕುತೂಹಲವನ್ನು ಹುಟ್ಟು ಹಾಕಿದ್ದು, ಯಾವ ಪ್ರಮಾಣದಲ್ಲಿ ರೈತರ ಸಾಲಮನ್ನ ಮಾಡಲಾಗುತ್ತೆ ಎಂದು ನಿರೀಕ್ಷೆಯನ್ನು ಮೂಡಿಸಿದೆ.

  • ಸಾಲಮನ್ನಾದ ಕ್ರೆಡಿಟ್‍ಗೆ ದೋಸ್ತಿಗಳ ಕಸರತ್ತು !

    ಸಾಲಮನ್ನಾದ ಕ್ರೆಡಿಟ್‍ಗೆ ದೋಸ್ತಿಗಳ ಕಸರತ್ತು !

    – ರೈತರ ಅಕೌಂಟ್‍ಗೆ ನೇರ ವರ್ಗಾವಣೆಗೆ ಪ್ಲಾನ್

    ಬೆಂಗಳೂರು: ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಲ್ಲಿಂದ ಇಲ್ಲಿವರೆಗೆ ಸಾಲಮನ್ನಾ ವಿಚಾರವಾಗಿಯೇ ದಿನನಿತ್ಯವೂ ಸುದ್ದಿಯಾಗ್ತಿದೆ. ಇಷ್ಟು ದಿನ ಸಾಲಮನ್ನಾ ಮಾಡೋದು ಹೇಗೆ ಅನ್ನೋದೇ ದೊಡ್ಡ ತಲೆಬಿಸಿಯಾಗಿತ್ತು. ಆದ್ರೀಗ ಸಾಲಮನ್ನಾದ ಕ್ರೆಡಿಟ್ ವಿಚಾರವಾಗಿ ಸಮ್ಮಿಶ್ರ ಸರ್ಕಾರದ ದೋಸ್ತಿಗಳ ನಡುವೆ ಶೀತಲ ಸಮರ ನಡೆದಿದೆ ಎಂದು ಹೇಳಲಾಗುತ್ತಿದೆ.

    ಸಾಲಮನ್ನಾದ ಎಲ್ಲಾ ಕ್ರೆಡಿಟ್ ತಾವು ಪಡೆಯಲು ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪ್ಲಾನ್ ಮಾಡಿದ್ದಾರಂತೆ. ಅದಕ್ಕಾಗಿ ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ ಬಳಿ ನೀಲನಕ್ಷೆ ಸಿದ್ಧಪಡಿಸಲು ಸೂಚಿಸಿದ್ದಾರೆ. ಅದರಂತೆ ರೈತರ ಅಕೌಂಟಿಗೆ ನೇರವಾಗಿ ಸಾಲಮನ್ನಾದ ಹಣ ಹಾಕಿ, ಅಲ್ಲಿಂದ ನೇರವಾಗಿ ಸಹಕಾರಿ ಬ್ಯಾಂಕ್‍ಗಳ ಅಕೌಂಟ್‍ಗೆ ಜಮೆ ಮಾಡಲು ಪ್ಲಾನ್ ಮಾಡಲಾಗಿದೆ ಎನ್ನಲಾಗಿದೆ.

    ಸಾಲ ಮಾಡಿದ್ದು ನಾವು, ಆದ್ರೆ ನಮ್ಮ ಅಕೌಂಟ್‍ಗೆ ಹಣ ಹಾಕಿ ಸಾಲ ತೀರಿಸಿದ್ದು ಕುಮಾರಸ್ವಾಮಿ ಸರ್ಕಾರ ಅನ್ನೋ ಭಾವನೆ ರೈತರಲ್ಲಿ ಮೂಡಿಸೋದು ಸಿಎಂ ತಂತ್ರವಾಗಿದೆ. ಇಷ್ಟೇ ಅಲ್ಲ, ಸಾಲಮನ್ನಾ ವಿಚಾರದಲ್ಲಿ ಸಹಕಾರಿ ಬ್ಯಾಂಕುಗಳು ರೈತರಿಗೆ ಮೋಸ ಮಾಡದಂತೆ ತಡೆಯಲು ವಿಚಕ್ಷಣ ದಳವೊಂದನ್ನು ರಚಿಸಲು ನಿರ್ಧರಿಸಿದ್ದಾರೆ. ಸಾಲಮನ್ನಾ ಸಂಬಂಧ ಸಹಕಾರಿ ಬ್ಯಾಂಕುಗಳು ವಂಚಿಸಿದ್ರೆ ಅಥವಾ ಸರಿಯಾಗಿ ಸ್ಪಂದಿಸದಿದ್ದಲ್ಲಿ ಈ ವಿಚಕ್ಷಣ ದಳ ರೈತರ ಪರ ನಿಲ್ಲಲಿದೆ.

    ಈ ಮೂಲಕ ಕುಮಾರಸ್ವಾಮಿ ಒಬ್ಬರೇ ರೈತರ ಪರವಾಗಿ ಇರೋದು ಅನ್ನೋ ವೇವ್‍ನ್ನು ಲೋಕಸಭೆ ಚುನಾವಣೆ ವೇಳೆಗೆ ಕ್ರಿಯೇಟ್ ಮಾಡಲು ಪ್ಲಾನ್ ರೂಪಿಸಲಾಗಿದೆ ಎಂಬ ಮಾಹಿತಿಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿವೆ.

    ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸರ್ಕಾರಕ್ಕೆ ಸವಾಲಾಗಿದ್ದ ಸಾಲಮನ್ನಾಕ್ಕೆ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳ ಅನುಷ್ಠಾನ ಸಮಿತಿ (ಸಿಎಂಪಿ) ಸಮ್ಮತಿ ನೀಡಿದೆ. ಆದರೆ ಸಂಪೂರ್ಣ ಸಾಲ ಬದಲಿಗೆ ಬೆಳೆ ಸಾಲಮನ್ನಾಕ್ಕೆ ಮಾತ್ರ ಗ್ರೀನ್ ಸಿಗ್ನಲ್ ಸಿಕ್ಕಿದೆ. ಸಮಿತಿ ಅಧ್ಯಕ್ಷ ವೀರಪ್ಪ ಮೊಯ್ಲಿ, ಸಚಿವರಾದ ಡಿ.ಕೆ. ಶಿವಕುಮಾರ್, ಆರ್.ವಿ. ದೇಶಪಾಂಡೆ, ಹೆಚ್. ಡಿ. ರೇವಣ್ಣ, ಬಂಡೆಪ್ಪ ಕಾಶೆಂಪುರ್ ನೇತೃತ್ವದ ಕರಡು ಸಮಿತಿಯ ವರದಿ ಇಂದು ಸಮನ್ವಯ ಸಮಿತಿಗೆ ರವಾನೆಯಾಗಲಿದೆ. ಭಾನುವಾರ ಮಧ್ಯಾಹ್ನ 3 ಗಂಟೆಗೆ ಸಮನ್ವಯ ಸಮಿತಿಯ ಸಭೆ ನಡೆಯಲಿದ್ದು, ಅಲ್ಲಿ ಒಪ್ಪಿಗೆ ಸಿಕ್ಕರೆ ಅನುಷ್ಠಾನಕ್ಕೆ ಬರಲಿದೆ. ಇವತ್ತು ಸಿಎಂಪಿ ತೆಗೆದುಕೊಂಡ ನಿರ್ಧಾರ ಹೀಗಿದೆ.

    ಸಿಎಂಪಿ ಶಿಫಾರಸು:
    * ಸದ್ಯಕ್ಕೆ ಸಂಪೂರ್ಣ ಸಾಲಮನ್ನಾ ಇಲ್ಲ
    * ಕೇವಲ ಬೆಳೆ ಸಾಲ ಮಾತ್ರ ಮನ್ನಾ
    * ರಾಷ್ಟ್ರೀಕೃತ, ಸಹಕಾರಿ ಬ್ಯಾಂಕ್‍ಗಳಲ್ಲಿನ ಬೆಳೆ ಸಾಲ ಮನ್ನಾ
    * ಏಪ್ರಿಲ್ 1, 2009ರಿಂದ ಮೇ 31, 2018ರವರೆಗಿನ ಸಾಲ ಮನ್ನಾ
    * ಗರ್ಭಿಣಿಯರಿಗೆ ಮಾಸಿಕ 6000 ಭತ್ಯೆ
    * ಮಗು ಹುಟ್ಟುವ 3 ತಿಂಗಳು ಮುನ್ನ, ಹುಟ್ಟಿದ 3 ತಿಂಗಳ ನಂತರ ಭತ್ಯೆ
    * ಸದ್ಯಕ್ಕೆ ವೃದ್ಧಾಪ್ಯ ವೇತನ ಹೆಚ್ಚಳ ಇಲ್ಲ

  • ಜುಲೈ 5ರ ರಾಜ್ಯ ಬಜೆಟ್ ದಿನ ನಾ ಬರಲ್ಲ: ಡಿಕೆಶಿ

    ಜುಲೈ 5ರ ರಾಜ್ಯ ಬಜೆಟ್ ದಿನ ನಾ ಬರಲ್ಲ: ಡಿಕೆಶಿ

    ರಾಮನಗರ: ಮುಂದಿನ ತಿಂಗಳು 5 ರಂದು ನಡೆಯುವ ಬಜೆಟ್ ದಿನ ನಾನು ವಿಧಾನಸಭೆಯಲ್ಲಿ ಇರುವುದಿಲ್ಲ. ನಾನು ನಂಬಿರುವ ಶಕ್ತಿ ದೇವರ ದೇವಾಲಯ ಕಟ್ಟಿಸುತ್ತಿದ್ದು, ಅಲ್ಲಿಗೆ ತೆರಳುತ್ತಿದ್ದೇನೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಕನಕಪುರದಲ್ಲಿ ತಿಳಿಸಿದ್ದಾರೆ.

    ಕನಕಪುರ ಹೊರವಲಯದ ಅರಳಾಳು ಸಮೀಪದಲ್ಲಿ ಚುನಾವಣೆಯಲ್ಲಿ ಗೆದ್ದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರಿಗೆ ಕೃತಜ್ಞತೆ ಹಾಗೂ ಅಭಿನಂದನೆ ಕಾರ್ಯಕ್ರಮ ನಡೆಸಿದ್ರು. ಇದೇ ವೇಳೆ ಮಾತನಾಡಿದ ಅವರು ಜಿಲ್ಲೆಗೆ ಈ ಬಾರಿಯ ಬಜೆಟ್‍ನಲ್ಲಿ ಹಲವು ನಿರೀಕ್ಷೆಗಳಿವೆ. ಮುಖ್ಯಮಂತ್ರಿಗಳ ಬಳಿ ಬಜೆಟ್ ವಿಚಾರವಾಗಿ ಚರ್ಚೆ ನಡೆಸಿದ್ದೇವೆ. ಕನಕಪುರಕ್ಕೆ ಮೆಡಿಕಲ್ ಕಾಲೇಜು ನೀಡುವ ಭರವಸೆಯನ್ನ ಮಾಜಿ ಸಿಎಂ ಸಿದ್ದರಾಮಯ್ಯ ನೀಡಿದ್ರು. ಆದ್ರೆ ಅದು ಆಗಲಿಲ್ಲ ಎಂದರು.

    300 ರಿಂದ 400 ಬೆಡ್ ಗಳ ಆಸ್ಪತ್ರೆ ಕನಕಪುರಕ್ಕೆ ಬೇಕು ಎಂಬ ನಿರೀಕ್ಷೆ ಇದೆ. ಈಗ ಸಿಎಂ ಕುಮಾರಸ್ವಾಮಿ ಅವರ ಬಳಿ ಈ ವಿಚಾರ ಮಾತನಾಡಿದ್ದೇನೆ. ಬಜೆಟ್ ದಿನ ನಾನು ನಂಬಿರುವ ಶಕ್ತಿ ದೇವರ ದೇವಾಲಯ ಉದ್ಘಾಟನೆ ಇದೆ. ಅಲ್ಲಿಗೆ ಗವರ್ನರ್ ಕೂಡಾ ಬರ್ತಿದ್ದಾರೆ. ನಾನು ಅಲ್ಲಿಂದ ಬರುವಷ್ಟರಲ್ಲಿ ಸಾಯಂಕಾಲವಾಗಿರುತ್ತೆ. ಬಜೆಟ್‍ನಲ್ಲಿ ಕನಕಪುರಕ್ಕೆ ಏನಾದ್ರೂ ಸಿಕ್ಕಿದ್ಯಾ ಅನ್ನೋದನ್ನ ನೀವೇ ಮೊದಲು ತಿಳಿದುಕೊಳ್ತೀರಿ ಎಂದು ಡಿಕೆಶಿ ಹೇಳಿದರು.