Tag: HD Thammaiah

  • ಡಿಕೆಶಿ ಸಿಎಂ ಆಗುವಂತೆ ಆಶೀರ್ವದಿಸಿ – ವಿನಯ್ ಗುರೂಜಿಗೆ ಶಾಸಕ ತಮ್ಮಯ್ಯ ಮನವಿ

    ಡಿಕೆಶಿ ಸಿಎಂ ಆಗುವಂತೆ ಆಶೀರ್ವದಿಸಿ – ವಿನಯ್ ಗುರೂಜಿಗೆ ಶಾಸಕ ತಮ್ಮಯ್ಯ ಮನವಿ

    ಚಿಕ್ಕಮಗಳೂರು: ಡಿಸಿಎಂ ಡಿ.ಕೆ ಶಿವಕುಮಾರ್‌ (DK Shivakumar) ಅವರಿಗೆ ಸಿಎಂ ಆಗುವಂತೆ ಆಶೀರ್ವದಿಸಿ ಎಂದು ಚಿಕ್ಕಮಗಳೂರು ಕಾಂಗ್ರೆಸ್ ಶಾಸಕ ಹೆಚ್.ಡಿ ತಮ್ಮಯ್ಯ (HD Thammaiah) ಮನವಿ ಮಾಡಿದ್ದಾರೆ.

    ಜಿಲ್ಲೆಯ ಕೊಪ್ಪ ತಾಲೂಕಿನ ಸ್ವರ್ಣಪೀಠಿಕೇಶ್ವರಿ ದತ್ತಾಶ್ರಮದಲ್ಲಿ ಮಾತನಾಡಿದ ಅವರು, ಡಿಕೆಶಿ ಸಿಎಂ ಆಗುವ ಆಸೆಯನ್ನ ನೂರಾರು ಜನರ ಮುಂದೆ ಹೊರಹಾಕಿದ್ದಾರೆ. ನಮಗೆಲ್ಲ ಟಿಕೆಟ್ ನೀಡಿ ತುಂಬಾ ಸಹಾಯ ಮಾಡಿದ್ದಾರೆ. ಅವರಿಗೆ ಸಿಎಂ ಆಗುವಂತೆ ಆಶೀರ್ವದಿಸಿ ಎಂದು ಅವಧೂತ ವಿನಯ್ ಗುರೂಜಿ (Vinay Guruji) ಬಳಿ ಮನವಿ ಮಾಡಿದ್ದಾರೆ.

    ಇದೇ ವೇಳೆ ಜೆಡಿಎಸ್ (JDS) ವಿಧಾನ ಪರಿಷತ್ ಸದಸ್ಯ ಶರವಣ ಮಾತನಾಡಿ, ಕೂಡ ಅವಧೂತ ವಿನಯ್ ಗುರೂಜಿ ಮೂರು ಉಂಗುರ ಮಾಡಿಸಿದ್ದರು. 2018ರಲ್ಲಿ ಒಂದನ್ನು ಕುಮಾರಸ್ವಾಮಿಗೆ ಕೊಟ್ಟಿದ್ದರು. ಮತ್ತೊಂದನ್ನ ಯಡಿಯೂರಪ್ಪನವರಿಗೆ ನೀಡಿದ್ದರು, ಇಬ್ಬರೂ ಸಿಎಂ ಆಗಿದ್ದರು. ಉಳಿದೊಂದು ಉಂಗುರವನ್ನ ಡಿ.ಕೆ.ಶಿವಕುಮಾರ್ ಅವರಿಗೆ ನೀಡಿದ್ದಾರೆ. ಇದಕ್ಕೆ ನಾನೇ ಸಾಕ್ಷಿ ಎಂದು ನುಡಿದಿದ್ದಾರೆ. ಇದನ್ನೂ ಓದಿ: ಬಡವರಿಗೆ ಬೇಕಾಗಿರುವುದು ಅಕ್ಕಿ, ದುಡ್ಡಲ್ಲ: ಸಿಟಿ ರವಿ ವಿರುದ್ಧ ಜಾರ್ಜ್ ವಾಗ್ದಾಳಿ

    ಚುನಾವಣೆಗೂ ಮುನ್ನವೇ ನಾನು ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬರುವುದಿಲ್ಲವಾ? ಕುಮಾರಸ್ವಾಮಿಯವರು ಸಿಎಂ ಆಗುವುದಿಲ್ಲವಾ? ಎಂದು ಕೇಳಿದ್ದೆಕ್ಕೆ ಇಲ್ಲ ಇಲ್ಲ ಈ ಬಾರಿ ಡಿಕೆಶಿ ಸರ್ಕಾರ ಬರುವುದು ಎಂದು ಹೇಳಿದ್ದರು. ಡಿಕೆಶಿ ಕೂಡ ಮುಖ್ಯಮಂತ್ರಿ ಅಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದರು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‍ಗೆ ಅಂಬೇಡ್ಕರ್ ಅಷ್ಟೆ ಅಲ್ಲ, ಭಗತ್ ಸಿಂಗ್, ರಾಜಗುರು, ಸುಖದೇವ್ ಸಹ ವಿರೋಧಿಗಳು: ಸಿ.ಟಿ ರವಿ

    ದೇವರು ಇರುವುದೇ ಬಂಡೆ ಮೂರ್ತಿಯಲ್ಲಿ:
    ಶಾಸಕ ತಮ್ಮಯ್ಯ ಹಾಗೂ ಶರವಣ ಅವರ ಮನವಿ ಪುರಸ್ಕರಿಸಿದ ವಿನಯ್ ಗುರೂಜಿ ಅವರು ಡಿಕೆಶಿ ಸಿಎಂ ಆಗುವುದರ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಶಾಸಕ ತಮ್ಮಯ್ಯ ಮನವಿ ಮಾಡಿದ್ದು, ಅವರ ಆ ಬಯಕೆ ಈಡೇರಿಕೆಯ ದಿನಗಳು ದೂರವಿಲ್ಲ. ಡಿ.ಕೆ.ಶಿವಕುಮಾರ್ ಮಗುವಿನಂತಹ ಮನಸ್ಸಿನವರು, ಅವರು ಮಠಕ್ಕೆ ಚಿರಪರಿಚಿತರು. ದೇವರು ಇರುವುದೇ ಬಂಡೆಯ ಮೂರ್ತಿಯಲ್ಲಿ, ನಾವು ಮೊದಲು ಅದನ್ನ ಕರೆಯುವುದೇ ಬಂಡೆ ಎಂದು. ಬಂಡೆಯೊಳಗೊಂದು ಮುಗ್ಧ ಮನಸ್ಸು ಇದೆ ಎಂದು ಡಿಕೆಶಿ ಅವರನ್ನ ಹಾಡಿ ಹೊಗಳಿದ್ದಾರೆ.

  • ಬೈಕಿನಲ್ಲೇ ಹಳ್ಳಿ-ಹಳ್ಳಿ ಸುತ್ತಿ ಹೆಚ್‌ಡಿ ತಮ್ಮಯ್ಯ ಮತದಾರರಿಗೆ ಧನ್ಯವಾದ

    ಬೈಕಿನಲ್ಲೇ ಹಳ್ಳಿ-ಹಳ್ಳಿ ಸುತ್ತಿ ಹೆಚ್‌ಡಿ ತಮ್ಮಯ್ಯ ಮತದಾರರಿಗೆ ಧನ್ಯವಾದ

    ಚಿಕ್ಕಮಗಳೂರು: ಚುನಾವಣೆಯಲ್ಲಿ (Election) ಗೆದ್ದು ಶಾಸಕರಾದ ಹಿನ್ನೆಲೆ ಚಿಕ್ಕಮಗಳೂರು (Chikkamagaluru) ಶಾಸಕ ಹೆಚ್‌ಡಿ ತಮ್ಮಯ್ಯ (H.D.Thammaiah) ತಮ್ಮ ಬೈಕಿನಲ್ಲಿ ತಾಲೂಕಿನ ಹಳ್ಳಿ- ಹಳ್ಳಿಗಳನ್ನು ಸುತ್ತಿ ಮತದಾರರಿಗೆ ಧನ್ಯವಾದಗಳನ್ನು ಸಲ್ಲಿಸುತ್ತಿದ್ದಾರೆ.

    ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ (Congress) ಪಕ್ಷದ ಹೆಚ್‌ಡಿ ತಮ್ಮಯ್ಯ ಮತ್ತು ಬಿಜೆಪಿಯಿಂದ (BJP) ಸ್ಪರ್ಧಿಸಿದ್ದ ಸಿಟಿ ರವಿಯವರ (C.T.Ravi) ನಡುವೆ ಭಾರೀ ಪೈಪೋಟಿ ನಡೆದಿತ್ತು. ಕೊನೆಗೆ 5,000 ಮತಗಳ ಅಂತರದಲ್ಲಿ ಸಿಟಿ ರವಿಯವರನ್ನು ಮಣಿಸಿ ತಮ್ಮಯ್ಯ ಮೊದಲ ಬಾರಿಗೆ ಗೆಲುವನ್ನು ಸಾಧಿಸಿದ್ದಾರೆ. ಈ ಹಿನ್ನೆಲೆ ಹಳ್ಳಿ – ಹಳ್ಳಿಗಳನ್ನು ಸುತ್ತಿ ತನಗೆ ಮತ ಹಾಕಿ ಗೆಲ್ಲಿಸಿದ ಮತದಾರರಿಗೆ ಧನ್ಯವಾದ ತಿಳಿಸುವ ಕಾರ್ಯವನ್ನು ತಮ್ಮಯ್ಯ ಮಾಡುತ್ತಿದ್ದಾರೆ. ಇದನ್ನೂ ಓದಿ: ನೀರಿನ ಕ್ಯಾನಿನಲ್ಲೇ ಮದ್ಯ- ಎಣ್ಣೆ ಏಟಿನಲ್ಲೇ ನೂತನ ಸಚಿವರನ್ನು ಸ್ವಾಗತಿಸಿದ ಕಾರ್ಯಕರ್ತರು

    ಕಾಂಗ್ರೆಸ್ ಸೇರಿದ 2 ತಿಂಗಳಿಗೆ ಟಿಕೆಟ್ ತಂದು ಮೊದಲ ಬಾರಿ ಗೆದ್ದ ತಮ್ಮಯ್ಯ ತನ್ನ ಬೈಕಿನಲ್ಲಿ ವಿಲೇಜ್ ರೌಂಡ್ಸ್ ಹೊಡೆಯುತ್ತಿದ್ದಾರೆ. ಇವರಿಗೆ ತಾಲೂಕಿನ ಹಳ್ಳಿಗಳ ಯುವಕರು ಸಾಥ್ ನೀಡುತ್ತಿದ್ದಾರೆ. ಇದನ್ನೂ ಓದಿ: ಕರೆಂಟ್ ಬಿಲ್ ಕೇಳಲು ಬಂದ್ರೆ ನನ್ನನ್ನು ಕರೆಯಿರಿ: ಸುರೇಶ್ ಗೌಡ

  • ಚಿಕ್ಕಮಗಳೂರು ಅಖಾಡ ಹೇಗಿದೆ? – ಸತತ 5ನೇ ಬಾರಿ ಗೆಲ್ತಾರಾ ಸಿಟಿ ರವಿ?

    ಚಿಕ್ಕಮಗಳೂರು ಅಖಾಡ ಹೇಗಿದೆ? – ಸತತ 5ನೇ ಬಾರಿ ಗೆಲ್ತಾರಾ ಸಿಟಿ ರವಿ?

    ಚಿಕ್ಕಮಗಳೂರು: ಬಿಜೆಪಿಯ (BJP) ಭದ್ರಕೋಟೆಯಾದ ಚಿಕ್ಕಮಗಳೂರು (Chikmagaluru) ತಾಲೂಕಿನಲ್ಲಿ ಈ ಬಾರಿ ಗುರು-ಶಿಷ್ಯರ ಕಾಳಗದಲ್ಲಿ ಚುನಾವಣಾ ಕಣ ರಂಗೇರಿದೆ. ಒಂದೆಡೆ ಹಿಂದೂ ಹುಲಿ ಎಂದೇ ಕರೆಸಿಕೊಳ್ಳುವ ಬಿಜೆಪಿಯ ಸಿ.ಟಿ.ರವಿ (CT Ravi) ಮತ್ತೊಂದೆಡೆ ಅದೇ ಹಿಂದೂ ಹುಲಿ ಗರಡಿಯಲ್ಲಿ ಕಾಂಗ್ರೆಸ್ಸಿನ ಹೆಚ್.ಡಿ.ತಮ್ಮಯ್ಯ (H D Thammaiah) ಪಳಗಿದ್ದು ಇಬ್ಬರ 20 ವರ್ಷಗಳ ಸ್ನೇಹ ಇದೀಗ ನಾನಾ-ನೀನಾ ಎನ್ನುವಂತಿದೆ.

    2004ರ ಚುನಾವಣೆಯಿಂದ ಸತತ ಗೆಲ್ಲುತ್ತಿರುವ ಸಿ.ಟಿ.ರವಿಗೆ ಈ ಚುನಾವಣೆ ಒಂದಷ್ಟು ಟೆನ್ಷನ್ ತಂದಿರುವುದು ಸತ್ಯ. ಸಿ.ಟಿ.ರವಿಯ ಜೊತೆಗೆ ಇದ್ದು ರಾಜಕೀಯ ತಂತ್ರಗಳನ್ನು ಕರಗತ ಮಾಡಿಕೊಂಡಿದ್ದ ಮಾಜಿ ಬಿಜೆಪಿ ನಾಯಕ, ಹಾಲಿ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಡಿ.ತಮ್ಮಯ್ಯ ಇದೀಗ ಅದೇ ರಾಜಕೀಯ ಒಳ ಏಟುಗಳನ್ನು ಸಿ.ಟಿ.ರವಿಗೆ ಕೊಡುತ್ತಿರುವುದರಿಂದ ಬಿಜೆಪಿಗೆ ಬಿಸಿ ತುಪ್ಪವಾಗಿದೆ.

     

    ಹೆಚ್.ಡಿ.ತಮ್ಮಯ್ಯನವರ ಗೆಲುವು ಅಷ್ಟು ಸುಲಭವಿಲ್ಲ. ಪಕ್ಷಕ್ಕೆ ಸೇರಿದ ಎರಡೇ ತಿಂಗಳಲ್ಲಿ ಅರ್ಜಿ ಹಾಕದೇ ಟಿಕೆಟ್ ತಂದ ಹೆಚ್.ಡಿ.ತಮ್ಮಯ್ಯನವರ ಪರ ಮೂಲ ಕಾಂಗ್ರೆಸ್ಸಿಗರು ಮನಸ್ಸು ಬಿಟ್ಟಿದ್ದಾರೆ. ಕಾಂಗ್ರೆಸ್ ವರಿಷ್ಠರಿಗೆ ಸಿ.ಟಿ.ರವಿ ಮೇಲಿದ್ದ ಕೋಪಕ್ಕೆ ಕಾಫಿನಾಡ ಮೂಲ ಕಾಂಗ್ರೆಸ್ಸಿಗರು ಬಲಿಯಾದರು ಎಂಬ ಮಾತು ಇದೆ. ಕಾಫಿನಾಡ ಮೂಲ ಕಾಂಗ್ರೆಸ್ಸಿಗರು ಡಿಕೆಶಿ ಜೊತೆ ಅರ್ಧ ರಾತ್ರಿವರೆಗೂ ಸಭೆ ನಡೆಸಿದರೂ ಕೈ ನಾಯಕರು ತಮ್ಮಯ್ಯಗೆ ಮಣೆ ಹಾಕಿರುವುದು ಬ್ಯಾನರ್ ಕಟ್ಟಿದ ಕೈ ಕಟ್ಟಾಳುಗಳಿಗೆ ಬೇಸರ ತರಿಸಿದೆ. ಇಬ್ಬರು ಲಿಂಗಾಯುತ ಸಮುದಾಯದ ನಾಯಕರಿದ್ದರೂ ಕೂಡ ತಮ್ಮಯ್ಯಗೆ ಮಣೆ ಹಾಕಿರುವುದು ಕಾಂಗ್ರೆಸ್‌ ಅಸಮಾಧಾನಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಮೋದಿ ರೋಡ್ ಶೋ ವೇಳೆ ಹೂ ಜೊತೆ ಮೊಬೈಲ್ ಎಸೆತ

    ಸಿ.ಟಿ.ರವಿ ಅಭಿವೃದ್ಧಿಯೇ ನನ್ನ ಶ್ರೀರಕ್ಷೆ ಎಂದು ಅಖಾಡಕ್ಕಿಳಿದು ಶಿಷ್ಯನಿಗೆ ಮತ್ತೊಂದು ರಾಜಕೀಯ ಪಾಠ ಮಾಡುತ್ತಿದ್ದಾರೆ. 12, 13 ಸಾವಿರ ಜಾತಿ ಮತದ ಸಿ.ಟಿ.ರವಿ 20 ವರ್ಷ ಗೆದ್ದು ಕ್ಷೇತ್ರವನ್ನು ಹಿಡಿತದಲ್ಲಿ ಇಟ್ಟುಕೊಂಡಿದ್ದಾರೆ. ಸಿ.ಟಿ.ರವಿಯ ವರ್ಚಸ್ಸು, ರಾಜಕೀಯ ತಂತ್ರಗಾರಿಕೆ, ಮಾತಿನ ಶೈಲಿ, ಹಿಂದುತ್ವದ ಬ್ರಾಂಡ್ ಮಧ್ಯೆ ಶಿವಮೊಗ್ಗ-ಹಾಸನ-ಮೈಸೂರು-ಮಂಗಳೂರು-ಹುಬ್ಬಳ್ಳಿ-ಧಾರವಾಡಕ್ಕೆ ಸೀಮಿತವಾಗಿದ್ದ ಸಿಎಂ ಕುರ್ಚಿ ಕಾಫಿನಾಡಿಗೂ ಬರಬಹುದು ಎನ್ನುವುದು ಸಿಟಿ ರವಿ ಬೆಂಬಲಿಗರ ಅಭಿಪ್ರಾಯ.

    ಈ ಮಧ್ಯೆ ಜೆಡಿಎಸ್‌ ಪರಿಷತ್‌ ಸದಸ್ಯ ಬೋಜೇಗೌಡ ಬಹಿರಂಗವಾಗಿಯೇ ಕಾಂಗ್ರೆಸ್‌ ಅಭ್ಯರ್ಥಿಗೆ ಮತ ಹಾಕುವಂತೆ ಹೇಳಿದ್ದಾರೆ. ಈ ಎಲ್ಲ ಕಾರಣದಿಂದಾಗಿ ಚಿಕ್ಕಮಗಳೂರಿನಲ್ಲಿ ಈಗ ಕಾಂಗ್ರೆಸ್‌ ಮತ್ತು ಬಿಜೆಪಿ ಮಧ್ಯೆ ನೇರಾ ನೇರ ಸ್ಪರ್ಧೆ ನಡೆಯುತ್ತಿದೆ.


    2018ರ ಚುನಾವಣೆ ಯಾರಿಗೆ ಎಷ್ಟು ಮತ?
    ಒಟ್ಟು ಮತದಾರರು : 2,16,230
    ಚುಲಾವಣೆಯಾದ ಮತಗಳು : 1,61,387
    ನೋಟಾ : 1,224

    ಸಿ.ಟಿ.ರವಿ : ಬಿಜೆಪಿ : 70,863
    ಬಿ.ಎಲ್. ಶಂಕರ್ : ಕಾಂಗ್ರೆಸ್ : 44,549
    ಬಿ.ಹೆಚ್.ಹರೀಶ್ : ಜೆಡಿಎಸ್ : 3,8317
    ಅಂತರ – 26,314

    ಚಿಕ್ಕಮಗಳೂರು ಕ್ಷೇತ್ರದ ಜಾತಿ ವಿವರ :
    ಲಿಂಗಾಯಿತರು : 45,291
    ಒಕ್ಕಲಿಗರು : 15,629
    ಮುಸ್ಲಿಂರು : 35,902
    ಕುರುಬರು : 32.212
    ಪ.ಜಾತಿ /ಪ.ಪಂ : 48,820
    ಬ್ರಾಹ್ಮಣರು : 6,122
    ಕ್ರಿಶ್ಚಿಯನ್ : 5,100
    ತಮಿಳರು : 6,640

     

  • ತಮ್ಮಯ್ಯ ವಿರುದ್ಧ ತಣ್ಣಗಾಗದ ಆಕ್ರೋಶ – ಕಾಫಿನಾಡಲ್ಲಿ ನಿಂತಿಲ್ಲ ಬಂಡಾಯದ ಕೂಗು

    ತಮ್ಮಯ್ಯ ವಿರುದ್ಧ ತಣ್ಣಗಾಗದ ಆಕ್ರೋಶ – ಕಾಫಿನಾಡಲ್ಲಿ ನಿಂತಿಲ್ಲ ಬಂಡಾಯದ ಕೂಗು

    ಚಿಕ್ಕಮಗಳೂರು: ಬಿಜೆಪಿಯಿಂದ (BJP) ಕಾಂಗ್ರೆಸ್ (Congress) ಸೇರಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ (Ct Ravi) ಆಪ್ತ ಹೆಚ್‌ಡಿ ತಮ್ಮಯ್ಯನ (HD Thammaiah) ವಿರುದ್ಧ ಕಾಂಗ್ರೆಸ್ ಕೋಟೆಯಲ್ಲಿ ಅಸಮಾಧಾನದ ಹೊಗೆ ಮುಂದುವರಿದಿದೆ. ಹೆಚ್‌ಡಿ ತಮ್ಮಯ್ಯಗೆ ಟಿಕೆಟ್ ಬೇಡವೇ ಬೇಡ ಎಂದು ಮೂಲ ಕಾಂಗ್ರೆಸ್ಸಿಗರು ತಮ್ಮಯ್ಯ ಹಾಗೂ ಪಕ್ಷದ ವರಿಷ್ಠರ ವಿರುದ್ಧ ಕಿಡಿ ಕಾರುತ್ತಿದ್ದಾರೆ.

    ಶನಿವಾರ ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸಭೆ ಸೇರಿದ ಮೂಲ ಕಾಂಗ್ರೆಸ್ ಮುಖಂಡರು ತಮ್ಮಯ್ಯಗೆ ಟಿಕೆಟ್ ಬೇಡವೇ ಬೇಡ ಎಂದು ಆಗ್ರಹಿಸಿದ್ದರು. ಈಗಾಗಲೇ ಕಳೆದ 2-3 ದಶಕಗಳಿಂದ ಪಕ್ಷಕ್ಕಾಗಿ ದುಡಿದ 6 ಜನ ಟಿಕೆಟ್‌ಗಾಗಿ ಅರ್ಜಿ ಹಾಕಿದ್ದಾರೆ. ಅವರಲ್ಲಿ ಒಬ್ಬರಿಗೆ ಟಿಕೆಟ್ ನೀಡಬೇಕೆಂದು ಮೂಲ ಕಾಂಗ್ರೆಸ್ಸಿಗರು ನಿರ್ಣಯಕ್ಕೆ ಬಂದಿದ್ದರು. ಆದರೆ ಈ ವೇಳೆ ಕಾರ್ಯಕರ್ತರ ಮಧ್ಯೆ ಮಾತಿಗೆ ಮಾತು ಬೆಳೆದು ಕೈ ಮಿಲಾಯಿಸುವ ಹಂತಕ್ಕೂ ಹೋಗಿತ್ತು. ಕಾಂಗ್ರೆಸ್ ಕೆಪಿಸಿಸಿ ಸಂಯೋಜಕ ಪವನ್ ಮೇಲೆ ಕಾಂಗ್ರೆಸ್ ಕಾರ್ಯಕರ್ತರೇ ಹಲ್ಲೆ ಮಾಡಿದ್ದರು.

    ತಮ್ಮಯ್ಯ ವಿರುದ್ಧದ ಅಸಮಾಧಾನದ ಹೊಗೆ ಇನ್ನು ಕೂಡಾ ಮುಂದುವರಿದಿದೆ. ಭಾನುವಾರ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಸಖರಾಯಪಟ್ಟಣದಲ್ಲಿ ಬಹಿರಂಗ ಸಭೆ ಸೇರಿರುವ 6 ಜನ ಟಿಕೆಟ್ ಆಕಾಂಕ್ಷಿಗಳು ಮತ್ತೆ ತಮ್ಮಯ್ಯ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಅವರಿಗೆ ತಾಲೂಕಿನ ರಾಜಕೀಯ ಸ್ಥಿತಿಗತಿಯ ಬಗ್ಗೆ ಚರ್ಚೆ ಮಾಡಲು ತೀರ್ಮಾನಿಸಿದ್ದಾರೆ. 6 ಜನ ಆಕಾಂಕ್ಷಿಗಳು ಕೂಡಾ ತಮ್ಮಯ್ಯ ವಿರುದ್ಧ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ರೇಣುಕಾಚಾರ್ಯಗೆ ಶಾಕ್ – ನೀತಿ ಸಂಹಿತೆ ಉಲ್ಲಂಘನೆ ಕೇಸ್?

    ಇತ್ತೀಚೆಗೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಹತ್ತಾರು ಮುಖಂಡರು ನೂರಾರು ಕಾರ್ಯಕರ್ತರನ್ನು ಜೊತೆಗೆ ಕರೆತಂದು ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದಾರೆ. ಆದರೆ ಹೆಚ್‌ಡಿ ತಮ್ಮಯ್ಯ ಏಕಾಂಗಿಯಾಗಿ ಒಬ್ಬರೇ ಒಬ್ಬರು ಬಂದು ಪಕ್ಷ ಸೇರಿ, ಈಗ ಟಿಕೆಟ್ ಕೇಳುತ್ತಿದ್ದಾರೆ. ಅದರ ಅರ್ಥ ಏನೆಂದರೆ ಅವರು ಬಿಜೆಪಿಯ ಏಜೆಂಟ್. ಕಾಂಗ್ರೆಸ್ ಪಕ್ಷವನ್ನು ಸೋಲಿಸುವುದಕ್ಕೆ ಅವರು ಬಿಜೆಪಿ ಸೇರಿದ್ದಾರೆ ಎಂದು ತಮ್ಮಯ್ಯ ಅವರ ವಿರುದ್ಧ ಕಿಡಿ ಕಾರಿದ್ದಾರೆ. ಹೀಗಾಗಿ ಅರ್ಜಿ ಹಾಕಿರುವ 6 ಜನರನ್ನು ಬಿಟ್ಟು ಬೇರೆ ಯಾರಿಗೆ ಟಿಕೆಟ್ ನೀಡಿದರು ಚಿಕ್ಕಮಗಳೂರು ರಾಜಕೀಯ ಬೇರೆ ರೀತಿ ಇರುತ್ತದೆ ಎಂದು ವರಿಷ್ಠರಿಗೆ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯನವರನ್ನು ಸೋಲಿಸಲು ಯಾವ ಲೀಡರ್‌ಗಳಿಂದಲೂ ಸಾಧ್ಯವಿಲ್ಲ, ಜನರೇ ಸೋಲಿಸಬೇಕು: ಸತೀಶ್ ಜಾರಕಿಹೊಳಿ