Tag: hd kumaraswamy

  • ಸೋಶಿಯಲ್ ಮೀಡಿಯಾಗೆ ಎಚ್‍ಡಿಕೆ ಎಂಟ್ರಿ: ಏನ್ ಮಾಡ್ತಾರೆ? ಎಷ್ಟು ಜನ ಇದ್ದಾರೆ?

    ಸೋಶಿಯಲ್ ಮೀಡಿಯಾಗೆ ಎಚ್‍ಡಿಕೆ ಎಂಟ್ರಿ: ಏನ್ ಮಾಡ್ತಾರೆ? ಎಷ್ಟು ಜನ ಇದ್ದಾರೆ?

    ಬೆಂಗಳೂರು: ಮುಂದಿನ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಇಂದು ಸಾಮಾಜಿಕ ಜಾಲತಾಣಕ್ಕೆ ಎಂಟ್ರಿ ಕೊಟ್ಟಿದ್ದಾರೆ.

    `ನಮ್ಮ ಕುಮಾರಣ್ಣ’ ಅನ್ನೋ ಶೀರ್ಷಿಕೆಯಲ್ಲಿ ಅಧಿಕೃತವಾಗಿ 5 ಸಾಮಾಜಿಕ ಜಾಲತಾಣಕ್ಕೆ ಎಂಟ್ರಿ ಕೊಟ್ಟಿರುವ ಅವರು, ಇನ್ಮುಂದೆ ಫೇಸ್ ಬುಕ್, ಟ್ವೀಟರ್, ಗೂಗಲ್ ಪ್ಲಸ್, ಯೂಟ್ಯೂಬ್, ಸೌಂಡ್ ಕ್ಲೌಡ್‍ಗಳಲ್ಲಿ ಸಕ್ರಿಯನಾಗಿರುವುದಾಗಿ ತಿಳಿಸಿದ್ದಾರೆ.

    ಇಂದಿನಿಂದಲೇ ಜನರ ನಡುವೆ ಸಾಮಾಜಿಕ ಜಾಲತಾಣದ ಮೂಲಕ ಸಂಪರ್ಕ, ಸಂವಹನ ಮಾಡುತ್ತೇನೆ. ಈ ಜಾಲತಾಣದಲ್ಲಿ ಹಿಂದೆ 20 ತಿಂಗಳು ಮುಖ್ಯಮಂತ್ರಿಯಾಗಿ ಮಾಡಿದ ಕೆಲಸ ಸೇರಿದಂತೆ ಅನೇಕ ವಿಚಾರಗಳನ್ನು ಹಂಚಿಕೊಳ್ತೇನೆ. ನಾನು ಮುಖ್ಯಮಂತ್ರಿಯಾಗಿದ್ದ ವೇಳೆ ಗ್ರಾಮವಾಸ್ತವ್ಯಗಳನ್ನು ಮಾಡಿದ್ದೆ. ಈ ಬಗ್ಗೆಯೂ ಜನರ ಜತೆ ಹಂಚಿಕೊಳ್ತೇನೆ ಅಂತಾ ಹೇಳಿದ್ದಾರೆ.

    ಯುಪಿಯಂತೇ ಇಲ್ಲೂ ಪ್ರಚಾರ: ಯುಪಿ ಎಲೆಕ್ಷನ್ ನಲ್ಲಿ ಮೋದಿ ಬೆಂಬಲಿಗರು ವಾಟ್ಸಪ್ ಮೂಲಕ ಪ್ರಚಾರ ನಡೆಸಿದರು. ಅದೇ ರೀತಿ ರಾಜ್ಯದಲ್ಲೂ ನಾವು ಪ್ರಚಾರ ಮಾಡ್ತೇವೆ. ಆದ್ರೆ ಇದು ಮೋದಿ ಅನುಕರಣೆ ಅಲ್ಲ. ತಿಂಗಳಲ್ಲಿ ಒಂದು ದಿನ 3ರಿಂದ 4 ಗಂಟೆ ನಾನು ಫೇಸ್ ಬುಕ್, ಗೂಗಲ್ ಫ್ಲಸ್ ನಲ್ಲಿ ಜನ್ರ ಜೊತೆ ನಾನೇ ನೇರ ಸಂಪರ್ಕದಲ್ಲಿ ಇರುತ್ತೇನೆ. ನಾನು ಜನಪ್ರತಿನಿಧಿ ಆಗಿರೋವರೆಗೋ ನಾನು ಸೋಷಿಯಲ್ ಮೀಡಿಯಾದಲ್ಲಿ ಇರುತ್ತೇನೆ. ಸೋಷಿಯಲ್ ಮೀಡಿಯಾದ ಮಹತ್ವ ನನಗೆ ಅರ್ಥ ಆಗಿದೆ. ಈಗಾಗಲೇ ನನ್ನ ಜತೆ ಸಾಮಾಜಿಕ ಜಾಲತಾಣದ ಕಾರ್ಯನಿರ್ವಹಣೆಗೆ 35 ಮಂದಿ ಟೀಂ ಇದೆ ಅಂತಾ ನುಡಿದ್ರು.

    ಮೊದಲ ಟ್ವೀಟ್: ಎರಡು ದಾರಿಗಳು ಎದುರಾದವು, ಆ ದಟ್ಟನೆಯ ಕಾಡಿನಲ್ಲಿ ನಾನು ಆಯ್ದುಕೊಂಡೆ ಹೆಚ್ಚು ಜನರು ನಡೆಯದ ಹಾದಿಯನ್ನು ಅದೇ ಅದೇ ವ್ಯತ್ಯಾಸ ಎಲ್ಲದಕ್ಕೂ ಅಂತಾ ರಾಬರ್ಟ್ ಫ್ರಾಸ್ಟ್ ಅವರ ಕವಿತೆಯ ಉಲ್ಲೇಖೀಸಿ ಟ್ವೀಟ್‍ಗೆ ಮುಂದಡಿಯಿಟ್ಟರು.

    ಇದನ್ನೂ ಓದಿ: ಮೋದಿ ಅಶ್ವಮೇಧ ಕುದುರೆಯನ್ನು ಕಟ್ಟಿ ಹಾಕೋದೇ ಜೆಡಿಎಸ್: ಎಚ್‍ಡಿಕೆ

  • ಮಾಜಿ ಸಿಎಂ ಎಚ್‍ಡಿಕೆಗೆ ಉಸಿರಾಟ ತೊಂದರೆ – ಮೈಸೂರು ವಿಕ್ರಂನಿಂದ ಬೆಂಗಳೂರಿನ ಆಸ್ಪತ್ರೆಗೆ ಶಿಫ್ಟ್

    ಮಾಜಿ ಸಿಎಂ ಎಚ್‍ಡಿಕೆಗೆ ಉಸಿರಾಟ ತೊಂದರೆ – ಮೈಸೂರು ವಿಕ್ರಂನಿಂದ ಬೆಂಗಳೂರಿನ ಆಸ್ಪತ್ರೆಗೆ ಶಿಫ್ಟ್

    ಬೆಂಗಳೂರು: ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‍ಡಿ ಕುಮಾರಸ್ವಾಮಿ ನಗರದ ವಿಕ್ರಮ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿರೋ ಎಚ್‍ಡಿಕೆ ಶುಕ್ರವಾರ ಸಂಜೆಯೇ ಆಸ್ಪತ್ರೆಗೆ ದಾಖಲಾಗಿದ್ದಾರೆ ಅಂತಾ ಆಸ್ಪತ್ರೆ ಮೂಲಗಳು ತಿಳಿಸಿವೆ.
    ಎದೆನೋವು ಹಾಗೂ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದು, ಮೈಸೂರಿನ ವಿಕ್ರಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ರು. ಆ ಬಳಿಕ ಮೈಸೂರಿನಿಂದ ಬೆಂಗಳೂರಿನ ವಿಕ್ರಮ್ ಆಸ್ಪತ್ರೆಗೆ ಶುಕ್ರವಾರ ಸಂಜೆ ರವಾನಿಸಲಾಗಿದೆ.

    ಸದ್ಯ ಡಾ.ಸತೀಶ್ ಕುಮಾರಸ್ವಾಮಿ ಅವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಈ ಹಿಂದೆ ನಟ ಅಂಬರೀಶ್ ಅವರಿಗೂ ಇದೇ ವೈದ್ಯರು ಚಿಕಿತ್ಸೆ ನೀಡಿದ್ದರು.

  • ಯಾರು ಬೇಕಾದ್ರು ಬಿಡಬಹುದು, ಬರಬಹುದು ಜೆಡಿಎಸ್ ಮುಳುಗಲ್ಲ: ಎಚ್‍ಡಿಕೆ

    ಯಾರು ಬೇಕಾದ್ರು ಬಿಡಬಹುದು, ಬರಬಹುದು ಜೆಡಿಎಸ್ ಮುಳುಗಲ್ಲ: ಎಚ್‍ಡಿಕೆ

    ಬೆಂಗಳೂರು: ಜೆಡಿಎಸ್ ಪಕ್ಷವನ್ನು ಯಾರು ಬೇಕಾದ್ರು ಬಿಟ್ಟು ಹೋಗಬಹುದು, ಬರಬಹುದು ಯಾರಿಂದಲೂ ಪಕ್ಷ ಮುಳುಗಿ ಹೋಗುವುದಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಹೇಳಿದ್ದಾರೆ.

    ಕುಮುಟಾದ ಮಾಜಿ ಶಾಸಕ ದಿನಕರ್ ಶೆಟ್ಟಿ, ಪರಿಮಳ ನಾಗಪ್ಪ ಬಿಜೆಪಿ ಸೇರ್ಪಡೆ ವಿಚಾರವಾಗಿ ಮಾತನಾಡಿದ ಅವ್ರು ಯಾರನ್ನ ಬೇಕಾದ್ರು ಕರೆದುಕೊಂಡು ಹೋಗಬಹುದು. ಅದಕ್ಕೆ ಪರ್ಯಾಯ ವ್ಯಕ್ತಿಗಳ ಇದ್ದೇ ಇರುತ್ತಾರೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಟಿಕೆಟ್ ಕೊಡ್ತೀವಿ ಎಂದು ತಿಳಿಸಿದರು.

    ಚುನಾವಣೆ ವರ್ಷದಲ್ಲಿ ಇದೆಲ್ಲ ಸಹಜ. ಇದಕ್ಕೆಲ್ಲ ಆತಂಕ ಗಾಬರಿಯಾಗುವುದಿಲ್ಲ. ಯಾರೇ ಪಕ್ಷ ಬಿಟ್ಟು ಹೋಗೋರು ಹೋಗಬಹುದು ಇರೋರು ಇರಬಹುದು. ನನ್ನ ಗುರಿ ಇರೋದು ಜನರ ಮುಂದೆ ಹೋಗೋದು ಅಷ್ಟೆ ಎಂದು ಎಚ್‍ಡಿಕೆ ಹೇಳಿದ್ರು.

    ಕೇಂದ್ರದ ವಿರುದ್ಧ ಗರಂ: ರಾಜ್ಯದಲ್ಲಿ ಬರಗಾಲ ತಾಂಡವಾಡುತ್ತಿದ್ದು ಜನ್ರು ಸಾಯ್ತಿದ್ದಾರೆ. ಪರಿಹಾರವನ್ನು ಬಿಕಾರಿಗಳು ನೀಡಿದ ಹಾಗೆ ನೀಡಿದೆ. ಮೇಕೆದಾಟು ಡಿಪಿಆರ್(ಸಮಗ್ರ ಯೋಜನಾ ವರದಿ) ಆದ ಕೂಡಲೇ ತಮಿಳುನಾಡು ಸಿಎಂ ಪ್ರಧಾನಿಗೆ ಪತ್ರ ಬರೆದ್ರು. ತಕ್ಷಣ ಸಿಎಂಗೆ 24 ಗಂಟೆಯೊಳಗೆ ಭೇಟಿಗೆ ಪ್ರಧಾನಿಗಳು ಅವಕಾಶ ನೀಡ್ತಾರೆ. ಎರಡೂ ರಾಷ್ಟ್ರೀಯ ಪಕ್ಷಗಳ ಬಂಡವಾಳ ಇಷ್ಟೇ ಎಂದು ಕಿಡಿಕಾರಿದ್ರು.

    ಭರವಸೆ ಕೊಟ್ರೆ ದಾಖಲೆ ರಿಲೀಸ್: ಬಿಜೆಪಿ ಹೈಕಮಾಂಡ್‍ಗೆ ಚೆಕ್ ಮೂಲಕ ಬಿಎಸ್‍ವೈ ಹಣ ನೀಡಿರೋ ದಾಖಲಾತಿಗಳು ಯಾವಾಗಬೇಕಾದ್ರು ಬಿಡುಗಡೆ ಮಾಡಲು ಸಿದ್ಧ. ಅವ್ರು ಚೆಕ್ ಮೂಲಕ ಹಣ ನೀಡಿರುವ ದಾಖಲಾತಿ ನನ್ನ ಬಳಿ ಇದೆ. ಅದನ್ನ ರಿಲೀಸ್ ಮಾಡಿದ್ರೆ ಅವ್ರ ವಿರುದ್ಧ ಕ್ರಮ ತೆಗೆದುಕೊಳ್ಳುವವರು ಯಾರು? ಈ ಬಗ್ಗೆ ಯಾರಾದ್ರೂ ಭರವಸೆ ಕೊಟ್ರೆ ದಾಖಲಾತಿ ಬಿಡುಗಡೆ ಮಾಡ್ತೀನಿ ಅಂದ್ರು.

    ವಿದ್ಯುತ್ ಖರೀದಿಯಲ್ಲಿ ಅಕ್ರಮ: ಇದೇ ವಿಚಾರವಾಗಿ ಶೋಭಾ ಕರಂದ್ಲಾಜೆಗೆ ತರಾಟೆಗೆ ತೆಗೆದುಕೊಂಡ ಅವ್ರು ನನ್ನ ಜೊತೆ ಹುಡುಗಾಟ ಆಡಬೇಡಿ. ಬಾಯ ಚಪಲಕ್ಕೆ ಹೇಳಿಕೆ ಕೊಡೋನು ನಾನಲ್ಲ. ಶೋಭಾ ಕರಂದ್ಲಾಜೆ ಅವರಿಂದ ನಾನು ತಿಳುವಳಿಕೆ ಕಲಿಯೋದು ಬೇಡ. ಯಾರು ಯಾರು ರಾಜ್ಯ ಸರ್ಕಾರದಲ್ಲಿ ಕೆಲವು ಕಂಟ್ರಾಕ್ಟ್ ನ್ನ ಅವಾರ್ಡ್ ಮಾಡಿ. ವಿದ್ಯುತ್ ಶಕ್ತಿ ಖರೀದಿ ಮಾಡುವಾಗ ಅವಾರ್ಡ್ ಮಾಡಿ ಯಾರು ಯಾರು ಅಕೌಂಟ್ ಗೆ ಚೆಕ್ ಮೂಲಕ ಹಣ ಪಡೆದಿದ್ದಾರೆ. ವೈಯಕ್ತಿಕ ಅಕೌಂಟ್ ಗಳಿಗೆ ಹಣ ಪಡೆದಿದ್ದಾರೆ ಅನ್ನೋ ಮಾಹಿತಿ ಇದೆ. ಪ್ರಚಾರಕ್ಕಾಗಿ ನಾನು ಆರೋಪ ಮಾಡ್ತಿಲ್ಲ ಅಂತ ಹೇಳುವ ಮೂಲಕ ಶೋಭಾ ಕರಂದ್ಲಾಜೆ ಅವಧಿಯಲ್ಲೂ ಅಕ್ರಮ ಆಗಿದೆ ಅನ್ನೊ ಹೊಸ ಬಾಂಬ್ ಸಿಡಿಸಿದ್ರು.

    ಬಿಎಸ್‍ವೈ ರೈತರಿಗಾಗಿ ಡಿ-ನೋಟಿಫಿಕೇಷನ್ ಮಾಡಿದ್ದೇನೆ ಅಂತಾರೆ ಅದರ ಬಗ್ಗೆ ಮಾತನಾಡಲು ಹೋದ್ರೆ ವೀರಶೈವರಿಗೆ ಅನ್ಯಾಯ ಮಾಡುವುದು ಬೇಡ ಅಂತಾರೆ. ವಿಧಾನಸೌಧದಲ್ಲಿ ಕಾರಿನಲ್ಲಿ ಸಿಕ್ಕ ಹಣ ಯಾರದ್ದು? ಎಲ್ಲಿಂದ ಎಲ್ಲಿಗೆ ಹೋಗುತ್ತಿತ್ತು? ಪ್ರಕರಣ ಹಾಗೇ ಮುಚ್ಚಿ ಹಾಕಿದ್ದಾರೆ. ಈ ಬಗ್ಗೆ ಮೊದಲು ಉತ್ತರ ಕೊಡಲಿ ಅಂತ ಸವಾಲ್ ಹಾಕಿದ್ರು.

    ಡಿವಿಎಸ್‍ಗೆ ಸವಾಲ್: ಕೇಂದ್ರ ಸಚಿವ ಸದಾನಂದಗೌಡ ಚೆಕ್ ಬಿಡುಗಡೆ ಮಾಡಿದ ನಂತರ ಕ್ರಮ ತೆಗೆದುಕೊಳ್ಳುವ ಭರವಸೆ ಜನರಿಗೆ ಕೊಟ್ರೆ ಬಿಎಸ್‍ವೈ ನೀಡಿರುವ ಚೆಕ್ ಅವರಿಗೆ ಕಳಿಸಿಕೊಡಲು ಸಿದ್ಧ ಸದಾನಂದಗೌಡರು ಜನರಿಗೆ ಹೇಳಲಿ ಚೆಕ್ ರಿಲೀಸ್ ಆದ ಮೇಲೆ ನಾನು ಕ್ರಮ ತೆಗೆದುಕೊಳ್ಳವಂತೆ ನೋಡಿಕೊಳ್ತೀನಿ ಅಂತ. ಬೇಕಾದ್ರೆ ಅವ್ರ ಮನೆಗೆ ಚೆಕ್ ಕಳಿಸಲು ನಾನು ಸಿದ್ದ ಅಂತ ಡಿವಿಎಸ್ ಅವ್ರಿಗೆ ಸವಾಲ್ ಹಾಕಿದ್ರು.

    ನನ್ನ ಮೇಲೆ ದ್ವೇಷದ ರಾಜಕಾರಣ ಮಾಡಿದ್ದೋರೆ ಬಿಜೆಪಿಯವರು. ಯಡಿಯೂರಪ್ಪ ನನ್ನ ಮೇಲೆ ದ್ವೇಷ ರಾಜಕಾರಣ ಮಾಡಿದ್ರು. ಅವರೇ ಹಾಕಿಸಿದ ಮೂರು ಕೇಸ್ ಎದುರಿಸುತ್ತಿದ್ದೇನೆ.ಬಿಜೆಪಿಯವರು ದ್ವೇಷ ರಾಜಕಾರಣ ಬಗ್ಗೆ ಮಾತನಾಡೋದು ಎಷ್ಟು ಸರಿ ಅಂತ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ರು.

    ಚಾಲಕರಿಂದ ಮನವಿ: ಓಲಾ,ಉಬರ್ ಟ್ಯಾಕ್ಸಿ ಚಾಲಕರ ವಿವಾದಕ್ಕೆ ಸಂಬಂಧಿಸಿದಂತೆ ಕ್ಯಾಬ್ ಚಾಲಕರು ಇಂದು ಮಾಜಿ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಅವ್ರನ್ನ ಭೇಟಿ ಮಾಡಿ ಮನವಿ ಸಲ್ಲಿಸಿದ್ರು. ಬಳಿಕ ಮಾತಾಡಿದ ಕುಮಾರಸ್ವಾಮಿ ಸರ್ಕಾರದ ಜವಾಬ್ದಾರಿ ಮರೆತು ಅನ್ಯಾಯ ಮಾಡುತ್ತಿದೆ. ಸರ್ಕಾರ ಇವರ ಜವಾಬ್ದಾರಿ ತೆಗೆದುಕೊಳ್ಳುವ ಕಾರ್ಯ ಮಾಡಲೇಬೇಕು. ಇಂದು ಓಲಾ ಮತ್ತು ಉಬರ್ ಕಂಪನಿಗಳು ಸದೃಢವಾಗಿ ಬೆಳೆದಿದೆ. ಕಂಪನಿಗಳು ಬೆಳೆಯಲು ಕಾರಣ ಚಾಲಕರು. ಇಂದು ಅದನ್ನು ಓಲಾ ಮತ್ತು ಉಬರ್ ಕಂಪನಿಗಳು ಮರೆತಿದೆ. ನಾನು ಈಗಾಗಲೇ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಬಳಿ ದೂರವಾಣಿ ಮೂಲಕ ಮಾತನ್ನಾಡಿದ್ದೇನೆ. ಒಂದು ಲಕ್ಷ ಮಂದಿ ಚಾಲಕರು ಇಂದು ಬೀದಿಗೆ ಬಿದ್ದಿದ್ದಾರೆ. ಸರ್ಕಾರ ಓಲಾ ಮತ್ತು ಉಬರ್ ಕಂಪನಿಯ ಮಾಲೀಕರನ್ನು ಕರೆಸಿ ಮಾತನಾಡಬೇಕು ಅಂತ ಒತ್ತಾಯ ಮಾಡಿದ್ರು.

  • ಕುಮಾರಸ್ವಾಮಿ ದುರ್ಯೋಧನ ಇದ್ದಂತೆ, ರಣರಂಗದಲ್ಲೇ ತೊಡೆ ತಟ್ಟುತ್ತೇವೆ: ತೇಜಸ್ವಿನಿ ರಮೇಶ್

    ಕುಮಾರಸ್ವಾಮಿ ದುರ್ಯೋಧನ ಇದ್ದಂತೆ, ರಣರಂಗದಲ್ಲೇ ತೊಡೆ ತಟ್ಟುತ್ತೇವೆ: ತೇಜಸ್ವಿನಿ ರಮೇಶ್

    ರಾಮನಗರ: ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್‍ಡಿ ಕುಮಾರಸ್ವಾಮಿಯವರನ್ನ ದುರ್ಯೋಧನ ಎಂದು ಸಂಭೋಧಿಸಿದ್ದಲ್ಲದೇ, ಅವರಿಗೆ ಮಾತಿನಲ್ಲಿ ಉತ್ತರವನ್ನ ನೀಡುವುದಿಲ್ಲ ರಣರಂಗದಲ್ಲೇ ದುರ್ಯೋಧನನಿಗೆ ತೊಡೆ ತಟ್ಟುತ್ತೇವೆ ಎಂದು ಮಾಜಿ ಸಂಸದೆ ತೇಜಸ್ವಿನಿ ರಮೇಶ್ ತಿರುಗೇಟು ನೀಡಿದ್ದಾರೆ.

    ಇಂದು ರಾಮನಗರದ ಪರಿವೀಕ್ಷಣ ಮಂದಿರದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು ತನ್ನನ್ನು ಕ್ರ್ಯಾಕ್ ಎಂದು ಕರೆದಿದ್ದಾರೆ. ಅದಕ್ಕೆ ನಾನು ಪರ್ವರ್ಟ್ ಎಂದು ಹೇಳಬೇಕಾಗುತ್ತೆ, ಅದನ್ನ ಹೇಳುವುದಕ್ಕೆ ಇಷ್ಟವಿಲ್ಲ. ಜನ ಅದನ್ನ ಅರ್ಥ ಕೂಡಾ ಮಾಡಿಕೊಳ್ಳಲ್ಲ. ಮಾಜಿ ಸಿಎಂ ಎಂಬ ಅಹಂಕಾರ ಬಿಟ್ಟು ಸರಳ ಸಜ್ಜನ ರಾಜಕಾರಣಿಯಂತೆ ಇರಲಿ. ಅವರ ಮಾತುಗಳೇ ಅವರ ಸಂಸ್ಕøತಿಯನ್ನ ತೋರಿಸುತ್ತೆ ಅಂದ್ರು.

    ನಾನು ಇಬ್ಬರನ್ನ ಕೌರವರು ಅಂತಾ ಹೇಳಿದ್ದೆ, ಅದರಲ್ಲಿ ತಪ್ಪೇನಿದೆ? ಹೊಂದಾಣಿಕೆ ರಾಜಕಾರಣ ಮಾಡ್ತಾ ಇರೋದಕ್ಕೆ ಕೌರವರು ಅಂತಾ ಹೇಳಿದ್ದು ಅಂದ್ರು.

    ಕಾಂಗ್ರೆಸ್ ಹಾಗೂ ಜೆಡಿಎಸ್ ಕೌರವ ಪಾಳಯವಿದ್ದಂತೆ. ಹೆಚ್‍ಡಿಕೆ ಹಾಗೂ ಡಿಕೆ ಶಿವಕುಮಾರ್ ದುರ್ಯೋಧನ- ದುಶ್ಯಾಸನರಿದ್ದಂತೆ ಎಂದು ಕಳೆದ ವಾರ ತೇಜಸ್ವಿನಿ ರಮೇಶ್ ಹೇಳಿಕೆ ನೀಡಿದ್ದರು.

  • ಯಾವ ಗಣಿತದ ಲೆಕ್ಕಚಾರದಲ್ಲಿ ಹೆಚ್‍ಡಿಕೆ ಸಿಎಂ ಆಗ್ತಿನಿ ಅಂದ್ರೋ ಗೊತ್ತಿಲ್ಲ: ಚೆಲುವರಾಯಸ್ವಾಮಿ

    ಮಂಡ್ಯ: 2018ಕ್ಕೆ ಯಾರಾದ್ರೂ ಒಬ್ರು ಸಿಎಂ ಆಗ್ಲೇಬೇಕು. ಆದ್ರೆ ಯಾವ ಗಣಿತದ ಲೆಕ್ಕಚಾರದಲ್ಲಿ ಕುಮಾರಸ್ವಾಮಿಯವರು ಸಿಎಂ ಆಗ್ತೀನಿ ಅಂತಾ ಹೇಳಿದ್ರೋ ಗೊತ್ತಿಲ್ಲ. ಅವರು ಮುಖ್ಯಮಂತ್ರಿ ಆದ್ರೆ ನಾವು ಬೇಜಾರು ಮಾಡಿಕೊಳ್ಳಲ್ಲ ಅಂತಾ ಬಂಡಾಯ ಶಾಸಕ ಚೆಲುವರಾಯಸ್ವಾಮಿ ಹೇಳಿದ್ದಾರೆ.

    ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಬೆಸಗರಹಳ್ಳಿಯಲ್ಲಿ ಮಾತನಾಡಿದ ಚೆಲುವರಾಯಸ್ವಾಮಿ, ನಾವು ಯಾವುದಾದರೂ ಒಂದು ಪಕ್ಷಕ್ಕೆ ಸೇರಲೇ ಬೇಕು. ಈ ಬಗ್ಗೆ ಸಂದರ್ಭ ಬಂದಾಗ ಹೇಳುತ್ತೇವೆ. ಕಾಂಗ್ರೆಸ್‍ನವರು ನಮ್ಮ ಜೊತೆ ಮಾತನಾಡಿದ್ದಾರೆ. ಇಲ್ಲ ಅಂತಾ ಹೇಳಲ್ಲ. ನಾವು ಯಾವ ಪಕ್ಷ ಸೇರುತ್ತೇವೆ ಎಂದು ಘೋಷಣೆ ಮಾಡೋ ಅಗತ್ಯವಿಲ್ಲ. ನಾವೀಗ ಅಮಾನತ್ತಿನಲ್ಲಿದ್ದೇವೆ. ಆದಷ್ಟು ಒಂದೆಡೆ ಕುಳಿತು ಮಾತನಾಡಿ ಮುಂದಿನ ತೀರ್ಮಾನಕ್ಕೆ ಬರುತ್ತೇವೆ ಅಂದ್ರು.

    ಬಂಡಾಯ ಶಾಸಕರಲ್ಲಿ ಒಬ್ಬರು ಬಿಟ್ಟು ಹೋಗಿರೋದಕ್ಕೆ ತೊಂದರೆಯಿಲ್ಲ. ನಾವು ಎಂಟೇ ಜನ ಹೋಗಬೇಕು ಅಂದುಕೊಂಡಿರಲಿಲ್ಲ. ಅದು ಆಕಸ್ಮಿಕವಾಗಿ ಉಂಟಾಯ್ತು. ಇವತ್ತು ಏಳು ಆಗಿವೆ. ಮುಂದೆ ಇನ್ನೆರೆಡು ಜಾಸ್ತಿಯೇ ಆಗಬಹುದು. ಆದ್ರೆ ನಮಗೆ ಜಾಸ್ತಿ ಮಾಡಬೇಕು ಎಂಬ ಪೈಪೋಟಿ ಇಲ್ಲ. ಕಳೆದ ಏಳೆಂಟು ವರ್ಷದಿಂದ ನಡೆದ ಪರಿಸ್ಥಿತಿಯಿಂದ ಈ ತೀರ್ಮಾನಕ್ಕೆ ಬಂದಿದ್ದೇವೆ. ಈಗಾಗಲೇ ದೇವೇಗೌಡರು ಹಾಗೂ ಕುಮಾರಸ್ವಾಮಿ ಬಂಡಾಯ ಶಾಸಕರನ್ನ ಸೇರಿಸಲ್ಲ ಅಂತಾ ಹೇಳಿದ್ದಾರೆ. ಅದೇ ರೀತಿ ನಾವು ಸೇರಿಸಿಕೊಳ್ಳಿ ಅಂತಾ ಕೇಳಿಲ್ಲ ಅಂತ ಚೆಲುವರಾಯಸ್ವಾಮಿ ತಿಳಿಸಿದ್ರು.

  • ಅಧಿಕಾರ ಇಲ್ಲ, ಜನ ಬರ್ತಿಲ್ಲ ಅಂತ ಹತಾಶರಾಗಿ ಎಸ್‍ಎಂಕೆ ಪಕ್ಷ ತೊರೆದಿದ್ದಾರೆ: ರಾಯರೆಡ್ಡಿ

    ಕೊಪ್ಪಳ: ಅಧಿಕಾರ ಇಲ್ಲ, ಜನ ಬರುತ್ತಿಲ್ಲ ಎಂದು ಹತಾಶರಾಗಿ ಎಸ್‍ಎಂ ಕೃಷ್ಣ ಪಕ್ಷ ತೊರೆದಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಹೇಳಿಕೆ ನೀಡಿದ್ದಾರೆ.

    ಇಂದು ಕೊಪ್ಪಳದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ರಾಯರಡ್ಡಿ, ಎಸ್‍ಎಂ ಕೃಷ್ಣ ಹಿಂದೆ ಎಲ್ಲಾ ರೀತಿಯ ಅಧಿಕಾರ ಅನುಭವಿಸಿದಂತವರು. ಈಗ ವಯಸ್ಸಾಗಿದೆ, ಅಧಿಕಾರ ಇಲ್ಲ, ಜನರು ತಮ್ಮತ್ತ ಸುಳಿಯುತ್ತಿಲ್ಲ ಎಂದು ಹತಾಶರಾಗಿದ್ದಾರೆ. ವಯಸ್ಸಾದ ಮೇಲೆ ಹತಾಶರಾಗುವುದು ಸಹಜ. ಎಸ್‍ಎಂ ಕೃಷ್ಣ ಗೌರವಯುತ ರಾಜಕಾರಣಿಗಳಾಗಿದ್ದಾರೆ. ಮತ್ತೆ ನಮ್ಮ ಪಕ್ಷಕ್ಕೆ ಮರಳಿ ಬರುತ್ತಾರೆ ಎಂಬ ವಿಶ್ವಾಸವಿದೆ ಅಂತ ಹೇಳಿದ್ರು.

    ಜಾಫರ್ ಷರೀಫ್ ಮತ್ತು ಜನಾರ್ದನ ಪೂಜಾರಿ ಪಕ್ಷದ ವಿರುದ್ಧವಾಗಿ ಮಾತನಾಡುವುದು ಸರಿಯಲ್ಲ. ಜಾಫರ್ ಶರೀಫ್ ಮೊಮ್ಮಗನಿಗೆ ಟಿಕೆಟ್ ನೀಡಿ ಮುಖ್ಯ ಮಂತ್ರಿಗಳು ಎಲ್ಲ ರೀತಿಯ ಸಹಕಾರ ನೀಡಿದ್ದಾರೆ. ಆದ್ರೂ ಮುಖ್ಯ ಮಂತ್ರಿಗಳು ಕಡೆಗಣಿಸಿದ್ದಾರೆ ಎಂದು ಹೇಳುವುದು ಸರಿಯಲ್ಲ. ಅದರಂತೆ ಜನಾರ್ದನ ಪೂಜಾರಿ ಕೂಡ ಅನಾಗರಿಕ ರೀತಿಯಲ್ಲಿ ಮಾತನಾಡುವುದನ್ನು ನಿಲ್ಲಿಸಬೇಕು ಎಂದು ಹೇಳಿದ್ರು.

    ಬಸವರಾಜ ರಾಯರಡ್ಡಿ ಗೆ ಹಾಫ್ ನಾಲೇಡ್ಜ್ ಇದೆ ಎಂಬ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ರಾಯರಡ್ಡಿ, ಅವರಿಗೇನು ಫುಲ್ ನಾಲೇಡ್ಜ್ ಇದೆಯಾ? ನನ್ನ ಇಲಾಖೆಯ ಬಗ್ಗೆ ಅವರಿಗೇನು ಗೊತ್ತು? ಎಂದು ಪ್ರಶ್ನಿಸಿ ಹೆಚ್‍ಡಿಕೆ ವಿರುದ್ಧ ಕಿಡಿ ಕಾರಿದ್ರು.