Tag: hattihole

  • ಮಗಳ ಮದುವೆಗೆ ಕೂಡಿಟ್ಟಿದ್ದ ಚಿನ್ನ, ಹಣ ಕೊನೆಗೂ ಪತ್ತೆ!

    ಮಗಳ ಮದುವೆಗೆ ಕೂಡಿಟ್ಟಿದ್ದ ಚಿನ್ನ, ಹಣ ಕೊನೆಗೂ ಪತ್ತೆ!

    – ಮಣ್ಣಿನಡಿ ಸಿಲುಕಿತ್ತು ಮಾಂಗಲ್ಯ ಸರ

    ಮಡಿಕೇರಿ: ಭೂಕುಸಿತಕ್ಕೆ ಸಿಲುಕಿ ಮನೆಯೇ ಧರೆಗುರುಳಿದ ಪರಿಣಾಮ ಮಗಳ ಮದುವೆಗೆ ಕೂಡಿಟ್ಟ ಚಿನ್ನ, ಹಣ ಹಾಗೂ ಬಟ್ಟೆಗಳು ಮಣ್ಣುಪಾಲಾಗಿದ್ದು, ಕೊನೆಗೂ ಅವುಗಳು ಮನೆ ಮಾಲೀಕನ ಕೈ ಸೇರಿದೆ.

    ಭೂ ಕುಸಿತವಾದ ಪರಿಣಾಮ ಮನೆ ಸಂಪೂರ್ಣ ಕುಸಿದು ಬಿದ್ದಿತ್ತು. ಹೀಗಾಗಿ ಮಗಳ ಮದುವೆಗಾಗಿ ಇಟ್ಟಿದ್ದ ಚಿನ್ನ ಹಾಗೂ ಹಣವನ್ನು ಬುಧವಾರದಿಂದ ಅಪ್ಪ-ಅಮ್ಮ ಹುಡುಕಾಡಿದ್ದು, ಇದೀಗ ಮನೆಮಂದಿ ನಿಟ್ಟುಸಿರು ಬಿಟ್ಟಿದ್ದಾರೆ. ಇದನ್ನೂ ಓದಿ: ಮಗಳ ಮದ್ವೆಗಾಗಿ ಕೂಡಿಟ್ಟ ಹಣ, ಚಿನ್ನಕ್ಕಾಗಿ ಮನೆಯ ಅವಶೇಷದಡಿ ಹುಡುಕಾಟ!

    ಹಟ್ಟಿಹೊಳೆಯ ಉಮೇಶ್ ಶೆಟ್ಟಿ ದಂಪತಿಯ ಹಿರಿಯ ಪುತ್ರಿ ನವ್ಯಾ ಶೆಟ್ಟಿಯ ಮದುವೆ ಇದೇ ತಿಂಗಳು 30 ರಂದು ಫಿಕ್ಸ್ ಆಗಿದೆ. ಗುಡ್ಡ ಕುಸಿತದಿಂದ ಮನೆ ಕುಸಿದು ಹೋಗಿತ್ತು. ಪರಿಣಾಮ ಮಗಳ ಮದುವೆಗೆಂದು ಚಿನ್ನ, ಹಣ ಹಾಗೂ ಬಟ್ಟೆಬರೆಗಳನ್ನು ತುಂಬಿದ್ದ ಬೀರು ಮಣ್ಣಿನಡಿ ಸಿಲುಕಿತ್ತು. ಇದನ್ನು ಹೊರತೆಗೆಯಲು ಉಮೇಶ್ ಹಾಗೂ ಸ್ಥಳೀಯರು ಹರಸಾಹಸಪಟ್ಟಿದ್ದರು. ಕಡೆಗೆ ಶಾಸಕ ಅಪ್ಪಚ್ಚು ರಂಜನ್ ಜೆಸಿಬಿ ಕಳುಹಿಸಿ ಬೀರು ತೆಗಿಸಿದ್ರು. ಇದನ್ನೂ ಓದಿ: ಭಾರೀ ಶಬ್ಧದಿಂದ ಹೆದರಿ ಬಾಣಂತಿ, 2 ತಿಂಗ್ಳ ಮಗುವನ್ನು ಎತ್ತಿಕೊಂಡು ಓಡಿದ್ವಿ- ಜೋಡುಪಾಲದ ಮಹಿಳೆ ಕಣ್ಣೀರು

    ಮಗಳ ಎಲ್ಲಾ ಚಿನ್ನ ಸಿಕ್ಕಿದೆ:
    ದೇವರು ಎಲ್ಲವನ್ನು ಕಳೆದುಕೊಂಡು ಇಷ್ಟನ್ನಾದ್ರೂ ಕೊಟ್ಟಿದ್ದಾನಲ್ಲ ಅಂತ ಸ್ವಲ್ಪ ಸಮಾಧಾನವಾಯಿತು. ಮಗಳ ಮದುವೆಯಾದ್ರೂ ಚೆನ್ನಾಗಿ ಮಾಡೋಣ ಅಂತ ಇದ್ದೇವೆ. ತುಂಬಾ ಚೆನ್ನಾಗಿ ಮಾಡಕ್ಕಾಗಲ್ಲ. ಹೀಗಾಗಿ ದೇವಸ್ಥಾನದಲ್ಲಿ ಧಾರೆಯೆರೆದು ಮದುವೆ ಮಾಡಿಕೊಡುವುದಾಗಿ ನಿರ್ಧರಿಸಿದ್ದೇವೆ. ಒಡವೆ ಸಿಕ್ಕಿದೆ. ಆದ್ರೆ 15 ಸಾವಿರದಷ್ಟು ಹಣ ಸಿಗಬೇಕಷ್ಟೆ. ನನ್ನದೊಂದು ಉಂಗುರವನ್ನು ಬೇರೆಯೇ ಒಂದು ಪರ್ಸ್ ನಲ್ಲಿಟ್ಟಿದ್ದೆ. ಅದು ಕೂಡ ಈವಾಗ ಕಾಣ್ತಿಲ್ಲ. ಅದು ಈಗಾಗಲೇ ಮಣ್ಣಿನೊಳಗೆ ಹೋಗಿರಬಹುದು. ಹೀಗಾಗಿ ಆ ಉಂಗುರ ಸಿಗಲ್ಲ ಅನಿಸತ್ತೆ. ಒಟ್ಟಿನಲ್ಲಿ ಮಗಳ ಮದುವೆಗೆ ಇಟ್ಟಿರುವ ಎಲ್ಲಾ ಚಿನ್ನ ಸಿಕ್ಕಿದೆ ಅಂತ ಉಮೇಶ್ ಪತ್ನಿ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ತಿಳಿಸಿದ್ದಾರೆ.

    ಒಡವೆ, ಹಣದ ಜೊತೆಗೆ ಮಕ್ಕಳ ಶಾಲಾ ಅಂಕಪಟ್ಟಿ, ಪ್ರಮಾಣಪತ್ರಗಳು ಕೂಡ ಪತ್ತೆಯಾಗಿದೆ. ಇದನ್ನೂ ಓದಿ: ಅನ್ನಾಹಾರವಿಲ್ಲದೇ ಕುಸಿದ ಮನೆಯನ್ನೇ ಕಾವಲು ಕಾಯುತ್ತಿದೆ ಶ್ವಾನ!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಗಳ ಮದ್ವೆಗಾಗಿ ಕೂಡಿಟ್ಟ ಹಣ, ಚಿನ್ನಕ್ಕಾಗಿ ಮನೆಯ ಅವಶೇಷದಡಿ ಹುಡುಕಾಟ!

    ಮಗಳ ಮದ್ವೆಗಾಗಿ ಕೂಡಿಟ್ಟ ಹಣ, ಚಿನ್ನಕ್ಕಾಗಿ ಮನೆಯ ಅವಶೇಷದಡಿ ಹುಡುಕಾಟ!

    ಮಡಿಕೇರಿ: ಜಲಪ್ರಳಯಕ್ಕೆ ಕೊಡಗು ತತ್ತರಿಸಿಹೋಗಿದ್ದು, ಇದೀಗ ಅಲ್ಲಿ ವರುಣನ ಆರ್ಭಟ ಕೊಂಚ ಕಡಿಮೆಯಾಗಿದೆ. ಹೀಗಾಗಿ ಸದ್ಯ ಕೊಡಗಿನಲ್ಲಿ ನಡೆದ ಒಂದೊಂದು ಕರುಣಾಜನಕದ ಕಥೆ ಹೊರಗೆ ಬರುತ್ತಿದೆ. ಕೆಲವೊಂದು ದಾರುಣ ಘಟನೆಗಳು ಮನಕಲಕುವಂತಿದೆ.

    ಕೊಡಗು ಜಿಲ್ಲೆಯ ಪ್ರವಾಹ ಪೀಡತ ಪ್ರದೇಶವಾದ ಹಟ್ಟಿಹೊಳೆಯಲ್ಲಿ ಇದೇ ಆಗಸ್ಟ್ 30ರಂದು ಮದುವೆ ಕಾರ್ಯಕ್ರಮವೊಂದು ನಡೆಯುವುದಿತ್ತು. ಹೀಗಾಗಿ ಮಗಳ ಮದುವೆಗೆಂದು ಚಿನ್ನ ಹಾಗೂ ಹಣವನ್ನು ತಂದೆ ಬೀರಿನಲ್ಲಿಟ್ಟಿದ್ದರು. ಈ ಬೀರು ಇದೀಗ ನೆಲಸಮವಾಗಿದ್ದು, ಇದನ್ನು ಹೊರ ತೆಗೆಯಲು ಹರಸಾಹಸ ಪಡುತ್ತಿದ್ದಾರೆ.  ಇದನ್ನೂ ಓದಿ:  20 ದಿನದ ಹಸುಗೂಸಿಗಾಗಿ ಮಳೆಯಲ್ಲೇ ಓಡಿ, ಬದುಕಿಸಿಕೊಳ್ಳಲಾಗದೇ ನರಳಾಡುತ್ತಿರುವ ತಾಯಿ!

    ಹೌದು. ಹಟ್ಟಿಹೊಳೆ ನಿವಾಸಿ ಉಮೇಶ್ ಅವರಿಗೆ ಇಬ್ಬರು ಹೆಣ್ಣು ಮಕ್ಕಳು. ಇದರಲ್ಲಿ ಹಿರಿಯ ಮಗಳಿಗೆ ಮದುವೆ ಫಿಕ್ಸ್ ಆಗಿದೆ. ಹೀಗಾಗಿ ಆಕೆಯ ಮದುವೆಗೆಂದು ಉಮೇಶ್ ಅವರು ಚಿನ್ನ ಹಾಗೂ ಹಣವನ್ನು ಬೀರಿನಲ್ಲಿಟ್ಟಿದ್ದರು. ಈ ಬೀರು ಇದೀಗ ನೆಲಕಚ್ಚಿದೆ. ಸದ್ಯ ರಕ್ಷಣಾ ಸಿಬ್ಬಂದಿಯ ಸಹಾಯ ಪಡೆದು ಮನೆಯ ಅವಶೇಷದಡಿ ಚಿನ್ನಕ್ಕಾಗಿ ಹುಡುಕಾಟ ನಡೆಯುತ್ತಿದೆ. ಇದನ್ನೂ ಓದಿ:  ಹಸೆಮಣೆ ಏರಬೇಕಿದ್ದ ಯುವತಿಯರು ಇಂದು ನಿರಾಶ್ರಿತರ ಕೇಂದ್ರದಲ್ಲಿ!

    ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಉಮೇಶ್, ಮಡಿಕೇರಿಯ ಕೊಡವ ಸಮಾಜದಲ್ಲಿ ಮಗಳ ಮದುವೆ ನಿಗದಿಯಾಗಿತ್ತು. ಆದ್ರೆ ಇದೀಗ ಅಲ್ಲಿ ಮದುವೆ ಕಾರ್ಯಕ್ರಮ ಮಾಡಲು ಸಾಧ್ಯವಿಲ್ಲ ಅಂತ ಹೇಳುತ್ತಿದ್ದಾರೆ. ಹೀಗಾಗಿ ಮಡಿಕೇರಿ ಓಂಕಾರೇಶ್ವರ ದೇವಸ್ಥಾನದಲ್ಲಿ ಮದುವೆ ಮುಹೂರ್ತವಿಟ್ಟು ಹೋಟೆಲಿನಲ್ಲಿ ಮುಂದಿನ ಕಾರ್ಯಕ್ರಮ ಮಾಡುವುದೆಂದು ನಿರ್ಧರಿಸಿದ್ದೇವೆ ಅಂತ ಅವರು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಕೊಡಗಿನ ಸಂತ್ರಸ್ತರೇ, ಪರಿಹಾರ ವೆಬ್‍ಸೈಟಿಗೆ ಭೇಟಿ ನೀಡಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ!

    ಗುರುವಾರ ಬೆಳಗ್ಗೆ ಇಲ್ಲಿಂದ ಹೊರಟೋಗಿದ್ದೇವೆ. ಮನೆಯಲ್ಲಿ ಒಡವೆ, ಹಣ ಹಾಗೂ ಬಟ್ಟೆಗಳಿವೆ. ಒಟ್ಟಿನಲ್ಲಿ 30ರಂದು ಕಷ್ಟಪಟ್ಟಾದ್ರೂ ಮಗಳ ಮದುವೆ ಮಾಡಿಸಿಯೇ ಬಿಡುವುದು ಅಂತ ಉಮೇಶ್ ಹೇಳಿದ್ದಾರೆ. ಇದನ್ನೂ ಓದಿ: ಕೋಟ್ಯಾಧಿಪತಿಯಾಗಿದ್ದ ತಂದೆ ಒಂದು ಪ್ಯಾಂಟು ಶರ್ಟಿಗೆ ಕೈ ಚಾಚಿದ್ದನ್ನು ಕಂಡು ಕಣ್ಣೀರಿಟ್ಟ ಮಗಳು!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv