Tag: Hanuman

  • ತೆಂಗಿನಕಾಯಿ ಕಟ್ಟಿದ್ರೆ ಸಂತಾನಭಾಗ್ಯ- ಬೀದರ್ ನ ಚಳಕಾಪುರದಲ್ಲಿ ಹನುಮಂತನ ಪವಾಡ

    ತೆಂಗಿನಕಾಯಿ ಕಟ್ಟಿದ್ರೆ ಸಂತಾನಭಾಗ್ಯ- ಬೀದರ್ ನ ಚಳಕಾಪುರದಲ್ಲಿ ಹನುಮಂತನ ಪವಾಡ

    ಬೀದರ್: ಸುಮಾರು 5 ಸಾವಿರ ವರ್ಷಗಳ ಇತಿಹಾಸವಿರುವ ಹನುಮಾನ್ ದೇವಸ್ಥಾನದಲ್ಲಿ ಹಲವು ವಿಸ್ಮಯಗಳು ನಡೆಯುತ್ತಿವೆ. ಎಲ್ಲಾ ದೇವಸ್ಥಾನಗಳು ದಕ್ಷೀಣಾಮುಖಿವಾಗಿ ಇದ್ರೆ ಈ ದೇವಸ್ಥಾನ ಮಾತ್ರ ಉತ್ತರಾಭಿಮುಖಿವಾಗಿರುವುದು ಒಂದು ವಿಶೇಷವಾಗಿದೆ. ಇಲ್ಲಿಗೆ ಹನುಮಂತ ಮತ್ತು ಲಕ್ಷ್ಮಣ ಬಂದ ಪ್ರತೀತಿ ಇದೆ. ಈ ಹನುಮಾನ್ ಎಂದ್ರೆ ಈ ತೆಂಗಿನ ಕಾಯಿ ಪವಾಡ ಎಂದು ಖ್ಯಾತವಾಗಿದೆ.

    ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಚಳಕಾಪೂರ ಗ್ರಾಮದಲ್ಲಿರುವ ಈ ಉತ್ತಾರಾಭಿಮುಖಿ ಹನುಮಾನ್ ದೇವಸ್ಥಾನಕ್ಕೆ ಮಕ್ಕಳಾಗದ ಮಹಿಳೆಯರು ಬಂದು ದೇವಾಲಯದ ಗೋಡೆ ಮೇಲೆ ತೆಂಗಿನಕಾಯಿ ಕಟ್ಟಿದ್ರೆ ಮಕ್ಕಳಾಗುತ್ತವೆ ಎಂಬ ನಂಬಿಕೆಯಿದೆ. ಇದರ ಒಳಿತನ್ನು ಕಂಡವರೂ ಇದ್ದಾರೆ.

    ಇದಕ್ಕೆ ಸುಮಾರು 5 ಸಾವಿರ ವರ್ಷಗಳ ಇತಿಹಾಸವಿದೆ. ಇಲ್ಲಿಗೆ ಬರುವ ಭಕ್ತರು ಕಷ್ಟವನ್ನು ಹೇಳಿಕೊಂಡು ತೆಂಗಿನ ಕಾಯಿ ಕಟ್ಟುತ್ತಾರೆ. ಕಷ್ಟ ಪರಿಹಾರವಾದ ಮೇಲೆ ತೆಂಗಿನಕಾಯಿಯನ್ನು ಬಿಚ್ಚಿಕೊಂಡು ಹೋಗ್ತಾರೆ ಅಂತ ಭಕ್ತರಾದ ವಿಮಲಾಬಾಯಿ ಹೇಳಿದ್ದಾರೆ.

    ಈ ಗ್ರಾಮಕ್ಕೆ ಚಳಕಾಪೂರ ಎಂದು ಹೇಸರು ಬರಲೂ ಒಂದು ಕಾರಣವಿದೆ. ಈ ಹಿಂದೆ “ಚಾಳಕಾದೇವಿ” ಎಂಬ ರಾಮನ ಭಕ್ತೆ ಇಲ್ಲಿ ವಾಸವಿದ್ದಳಂತೆ. ಆಕೆಯ ಪತಿ “ಚಳಕಾಸುರ್” ಎಂಬ ರಾಕ್ಷಸನ ಅಟ್ಟಹಾಸ ಜೋರಾಗಿದ್ದಾಗ ರಾಮನಿಂದ ಆ ರಾಕ್ಷಸನ ವಧೆಯಾಗಿತ್ತಂತೆ. ಹೀಗಾಗಿ ಇದಕ್ಕೆ ಚಳಕಾಪುರ ಎಂಬ ಹೆಸ್ರು ಬಂದಿದೆ. ಇನ್ನು ಇಲ್ಲಿನ ಹನುಮಂತ ಉದ್ಭವ ಮೂರ್ತಿಯಾಗಿದ್ದು, ದೇವಸ್ಥಾನದ ಪಕ್ಕದಲೇ ಒಂದು ಗುಡ್ಡವಿದ್ದು ಅದನ್ನು ಸಂಜೀವಿನಿ ಪರ್ವತ ಎಂದು ಕರೆಯಲಾಗುತ್ತೆ ಅಂತ ಭಕ್ತರಾದ ಮೇಘಾ ಕುಲಕರ್ಣಿ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಚಿನ್ ರಾಮನಾದ್ರೆ, ಸೆಹ್ವಾಗ್ ಹನುಮಾನ್-ವೈರಲ್ ಆಗುತ್ತಿದೆ ವಿಶೇಷ ಫೋಟೋ

    ಸಚಿನ್ ರಾಮನಾದ್ರೆ, ಸೆಹ್ವಾಗ್ ಹನುಮಾನ್-ವೈರಲ್ ಆಗುತ್ತಿದೆ ವಿಶೇಷ ಫೋಟೋ

    ಮುಂಬೈ: ಟೀಂ ಇಂಡಿಯಾ ಮಾಜಿ ಆಟಗಾರ ವಿರೇಂದ್ರ ಸೆಹ್ವಾಗ್ ಅವರು ಸಚಿನ್ ತೆಂಡೂಲ್ಕರ್ ಜೊತೆಗಿನ ವಿಶೇಷ ಫೋಟೋವನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದು, ಈ ಚಿತ್ರಕ್ಕೆ ಅಭಿಮಾನಿಗಳೂ ಫಿದಾ ಆಗಿದ್ದಾರೆ.

    ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ಚಿತ್ರದಲ್ಲಿ ಸೆಹ್ವಾಗ್, ಸಚಿನ್ ಅವರ ಮುಂದೇ ಮಂಡಿಯೂರಿ ಹನುಮಂತನಂತೆ ಕುಳಿತ್ತಿದ್ದು, ಸಚಿನ್ ರಾಮನಂತೆ ನಿಂತಿದ್ದಾರೆ. ಈ ಚಿತ್ರವನ್ನು ಸ್ವತಃ ಸೆಹ್ವಾಗ್ ತಮ್ಮ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದು, ಅಭಿಮಾನಿಗಳು ಇಬ್ಬರ ನಡುವಿನ ಬಾಂಧವ್ಯ ಕಂಡು ಮೆಚ್ಚುಗೆ ಸೂಚಿಸಿದ್ದಾರೆ.

    ಖಾಸಗಿ ವಾಹಿನಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಚಿನ್, ಸೆಹ್ವಾಗ್ ಕುರಿತ ಹಲವು ವಿಷಯಗಳನ್ನು ಬಹಿರಂಗ ಪಡಿಸಿದ್ದರು. ಮುಖ್ಯವಾಗಿ ಸೆಹ್ವಾಗ್ ತಂಡಕ್ಕೆ ಆಯ್ಕೆಯಾದ ಸಂದರ್ಭದಲ್ಲಿ ತಮ್ಮೊಂದಿಗೆ ಮಾತನಾಡುತ್ತಲೇ ಇರಲಿಲ್ಲ. ಜೊತೆಯಲ್ಲೇ ಇನ್ನಿಂಗ್ ಆರಂಭಿಸಿದರು ಸಹ ಮಾತನಾಡುತ್ತಿರಲಿಲ್ಲ. ಬಳಿಕ ತಾವೇ ಮಾತನಾಡಲು ಮುಂದಾಗಿದ್ದಾಗಿ ತಿಳಿಸಿದ್ದರು.

    ಸೆಹ್ವಾಗ್ ರನ್ನು ಮಾತನಾಡಿಸಲು ಮುಂದಾದ ವೇಳೆ ಸಚಿನ್ ಪಂದ್ಯದ ಮೊದಲು ಊಟಕ್ಕೆ ಆಹ್ವಾನಿಸಿದ್ದು, ಈ ವೇಳೆ ಸೆಹ್ವಾಗ್ ತಾವು ಸಸ್ಯಾಹಾರಿ ಎಂದು ಹೇಳಿದ್ದಾಗಿ ತಿಳಿಸಿದ್ದಾರೆ. ಇದೇ ವೇಳೆ ಏಕೆ ಮಾಂಸ ಸೇವನೆ ಮಾಡುವುದಿಲ್ಲ ಎಂಬ ಮರುಪ್ರಶ್ನೆಗೆ ಉತ್ತರಿಸಿ ಮನೆಯಲ್ಲಿ ಚಿಕನ್ ಸೇವಿಸಿದರೆ ದಪ್ಪವಾಗುವುದಾಗಿ ಹೇಳಿದ್ದಾರೆ. ಅದ್ದರಿಂದ ತಾವು ಮಾಂಸ ಆಹಾರ ಸೇವಿಸುವುದಿಲ್ಲ ಎನ್ನುವ ಉತ್ತರವನ್ನು ಸೆಹ್ವಾಗ್ ನೀಡಿದ್ದರು ಎಂದು ಸಚಿನ್ ಹೇಳಿದರು.

    ಮಾಜಿ ಆಟಗಾರರಾಗಿರುವ ಸೆಹ್ವಾಗ್ ಹಾಗೂ ಸಚಿನ್ ಟೀಂ ಇಂಡಿಯಾದ ಓಪನಿಂಗ್ ಬ್ಯಾಟ್ಸ್ ಮನ್ ಗಳಾಗಿದ್ದು, ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಹೇಳಿದ ಬಳಿಕವೂ ಉತ್ತಮ ಸ್ನೇಹಿರಾಗಿ ಮುಂದುವರಿದಿದ್ದಾರೆ.

  • ಇದು ನನ್ನ ಜೀವನದ ಶ್ರೇಷ್ಠ ಸಾಧನೆ : ಮೋದಿ ಹೊಗಳಿಕೆಗೆ  ಕರಣ್ ಆಚಾರ್ಯ ಪ್ರತಿಕ್ರಿಯೆ

    ಇದು ನನ್ನ ಜೀವನದ ಶ್ರೇಷ್ಠ ಸಾಧನೆ : ಮೋದಿ ಹೊಗಳಿಕೆಗೆ ಕರಣ್ ಆಚಾರ್ಯ ಪ್ರತಿಕ್ರಿಯೆ

    ಬೆಂಗಳೂರು: ವಾಹನಗಳ ಮೇಲೆ ಹೆಚ್ಚು ರಾರಾಜಿಸುತ್ತಿರುವ ಹನುಮಾನ್ ಚಿತ್ರವನ್ನು ರಚಿಸಿರುವ ಕರಣ್ ಆಚಾರ್ಯ ಪ್ರಧಾನಿ ನರೇಂದ್ರ ಮೋದಿ ಹೊಗಳಿಕೆಗೆ ಧನ್ಯವಾದ ತಿಳಿಸಿ, ಇದು ತನ್ನ ಜೀವನದ ಶ್ರೇಷ್ಠ ಸಾಧನೆ ಎಂದು ಹೇಳಿದ್ದಾರೆ.

    ಕರ್ನಾಟಕ ಚುನಾವಣಾ ಪ್ರಚಾರದಲ್ಲಿ ತೊಡಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳೂರಿನ ಪ್ರಚಾರ ಭಾಷಣದಲ್ಲಿ ಹನುಮಾನ್ ಚಿತ್ರ ರಚಿಸಿದ್ದ ಕರಣ್ ಆಚಾರ್ಯ ಅವರ ಹೆಸರನ್ನು ಪ್ರಸ್ತಾಪಿಸಿ ಹೊಗಳಿದ್ದರು. ಮಂಗಳೂರಿನ ಯುವಕನ ಈ ಸಾಧನೆಗೆ ದೇಶದ ಹಲವು ಮಾಧ್ಯಮಗಳು ಸಂದರ್ಶನಕ್ಕಾಗಿ ಕಾದು ನಿಂತಿದ್ದರು. ಇದು ಪ್ರಶಂಸನಿಯ ಸಾಧನೆ ಎಂದು ತಿಳಿಸಿದ್ದರು. ಅಲ್ಲದೇ ಟ್ವಿಟ್ಟರ್ ನಲ್ಲಿ ಹನುಮಾನ್ ಹ್ಯಾಶ್ ಟ್ಯಾಗ್ ಬಳಸಿ ಟ್ವೀಟ್ ಮಾಡಿದ್ದರು.

    ಈ ವಿಡಿಯೋವನ್ನು ನೋಡಿದ ಕರಣ್, ಪ್ರಧಾನಿ ಮೋದಿ ಅವರು ನನ್ನ ಹೆಸರನ್ನು ಹೇಳಿ ಪ್ರಶಂಸೆ ವ್ಯಕ್ತಪಡಿಸಿರುವುದು ಸಂತಸ ಉಂಟು ಮಾಡಿದೆ ಎಂದು ಹೇಳಿದ್ದಾರೆ.

    ಮೂಲತಃ ಕಾಸಗೋಡು ಜಿಲ್ಲೆಯ ಕರಣ್ ಮಾಧ್ಯಮವೊಂದರ ಜೊತೆ ಮಾತನಾಡಿ ಹರ್ಷವ್ಯಕ್ತ ಪಡಿಸಿದ್ದಾರೆ. ನನ್ನ ಸ್ನೇಹಿತರು ಅಂದು ಪದೇ ಪದೇ ಕರೆ ಮಾಡುತ್ತಿದ್ದರು. ಈ ವೇಳೆ ತನಗೆ ವಿಷಯ ತಿಳಿದಿರಲಿಲ್ಲ. ಬಳಿಕ ವಿಡಿಯೋ ನೋಡಿ ಮೇಲೆ ತನಗೆ ಈ ಬಗ್ಗೆ ತಿಳಿಯಿತು. ಇದು ನನ್ನ ಜೀವನದ ಶ್ರೇಷ್ಠ ಸಾಧನೆ ಎಂದು ತಿಳಿಸಿದ್ದಾರೆ.

    ಅಲ್ಲದೇ ಹನುಮಾನ್ ಚಿತ್ರ ರಚನೆ ಮಾಡಿದ್ದ ಕುರಿತ ಸ್ವಾರಸ್ಯಕರ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ. ನನ್ನ ಗೆಳೆಯರು ಗಣೇಶ್ ಚರ್ತುಥಿಯ ಅಂಗವಾಗಿ ಧ್ವಜದ ಚಿತ್ರ ಬಿಡಿಸುವಂತೆ ಕೋರಿದ್ದರು. ಅದು ಇದುವರೆಗಿನ ಎಲ್ಲಾ ಧ್ವಜಗಳಿಗಿಂತ ಭಿನ್ನವಾಗಿರುವಂತೆ ರಚಿಸಲು ಒತ್ತಡ ಹಾಕಿದ್ದರು. ಎಲ್ಲರಿಗಿಂತ ಭಿನ್ನವಾದ ಚಿತ್ರ ಬಿಡಿಸಲು ನಿರ್ಧರಿಸಿದ ವೇಳೆ ನಾನು ಹನುಮಾನ್ ಚಿತ್ರ ಬಿಡಿಸಲು ಪ್ರಾರಂಭಿಸಿದೆ. ಗೂಗಲ್ ನಲ್ಲಿ ಹಲವು ಆಂಜನೇಯನ ಚಿತ್ರಗಳನನ್ನು ನೋಡಿದ ಬಳಿಕ ಹೊಸ ಚಿತ್ರದ ರಚನೆ ಮಾಡಿದೆ. ಅದ್ದರಿಂದ ತಾನು ಕೇಸರಿ ಬಣ್ಣವನ್ನು ಮಾತ್ರ ಬಳಕೆ ಮಾಡಿದೆ. ಈ ಚಿತ್ರ ಕೇವಲ ಅರ್ಧ ಗಂಟೆಯಲ್ಲೇ ರಚನೆ ಮಾಡಿದೆ ಎಂದು ವಿವರಿಸಿದರು.

    ಕೇಸರಿ ಬಣ್ಣವನ್ನು ನಾನು ದೇವರ ಸಂಕೇತವಾಗಿ ಬಳಕೆ ಮಾಡಿದ್ದೇನೆ, ಹೊರತು ಯಾವುದೇ ರಾಜಕೀಯ ಪಕ್ಷಕ್ಕೆ ಬೆಂಬಲವಾಗಿ ರಚನೆ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದರು.

    ಈ ಚಿತ್ರವನ್ನು ರಚನೆ ಮಾಡಿ ಮೂರು ವರ್ಷ ಕಳೆದಿದ್ದು ಎಲ್ಲೆಡೆ ವೈರಲ್ ಆಗಿದೆ. ಇದಕ್ಕಿಂತ ಹೆಚ್ಚಿನ ಕೊಡುಗೆ ಚಿತ್ರಕಾರನಿಗೆ ಸಿಗಲು ಸಾಧ್ಯವಿಲ್ಲ. ಯಾವುದೇ ಕಾರಿನ ಹಿಂಭಾಗ ನೋಡಿದರೂ ಈ ಚಿತ್ರ ಅತೀ ಹೆಚ್ಚು ಕಾಣಿಸಿಕೊಳ್ಳುತ್ತದೆ. ತನ್ನ ಈ ಸಾಧನೆಗೆ ಪೋಷಕರು ನೀಡಿದ ಬೆಂಬಲವೇ ಪ್ರಮುಖ ಕಾರಣ ಎಂದು ತಿಳಿಸಿದರು.  ಇದನ್ನು ಓದಿ: ಆಂಜನೇಯನ ಭಾವಚಿತ್ರ ಹಾಕಿಕೊಂಡ ಕ್ಯಾಬ್‍ನವರು ರೇಪಿಸ್ಟ್ ಗಳು, ಅವುಗಳಲ್ಲಿ ಪ್ರಯಾಣಿಸಬೇಡಿ : ರಶ್ಮಿ ನಾಯರ್

  • ಹನುಮನ ಮೇಲೆ ಮಂಗನ ಪ್ರೀತಿ- ಹಿಡಿಯಲು ಹೋದ್ರೆ ಗುರಾಯಿಸುತ್ತೆ, ತಲೆ ಮೇಲೆ ಹತ್ತಿ ಕೂತು ತುಂಟಾಟ ಮಾಡುತ್ತೆ

    ಹನುಮನ ಮೇಲೆ ಮಂಗನ ಪ್ರೀತಿ- ಹಿಡಿಯಲು ಹೋದ್ರೆ ಗುರಾಯಿಸುತ್ತೆ, ತಲೆ ಮೇಲೆ ಹತ್ತಿ ಕೂತು ತುಂಟಾಟ ಮಾಡುತ್ತೆ

    ಬೆಂಗಳೂರು: ರಾಮನ ಸನ್ನಿಧಾನದಲ್ಲಿ ಅಂಜನೇಯನ ಪ್ರತಿಷ್ಠಾಪನಾ ಸ್ಥಳದಿಂದ ಕೋತಿ ಕದಲುತ್ತಿಲ್ಲ. ಒಂದು ವಾರದಿಂದ ಕೋತಿ ಹಿಡಿಯಲು ಅರಣ್ಯ ಘಟಕ ಹರಸಾಹಸ ಪಡುತ್ತಿದ್ದು, ಬಲೆ ಹಿಡ್ಕೊಂಡು ಹೋದರೆ ಗುರಾಯಿಸ್ತಾನೆ. ಇಲ್ಲದೇ ಇದ್ದರೆ ಅರಣ್ಯಾಧಿಕಾರಿಗಳ ಜೊತೆಗೆ ಆಟ ಆಡುತ್ತಾನೆ. ಬೆಂಗಳೂರಿನ ಐತಿಹಾಸಿಕ ದೇಗುಲದ ವಿಶೇಷ ಕೋತಿ ಈಗ ಎಲ್ಲರಿಗೂ ಅಚ್ಚರಿ ಮೂಡಿಸಿದೆ.

    ಬೆಂಗಳೂರಿನ ಹೆಚ್‍ಬಿಆರ್ ಲೇಔಟ್‍ನ ಐತಿಹಾಸ ಪ್ರಸಿದ್ಧ ಕೋದಂಡರಾಮ ದೇಗುಲದಲ್ಲೀಗ ಈ ವಿಶಿಷ್ಟ ಕೋತಿಯದ್ದೇ ಕಾರುಬಾರು. ಚುರುಕು ಕಣ್ಣಿನ ಈ ಕೋತಿ ಈ ದೇಗುಲವನ್ನು ಬಿಟ್ಟು ಕದಲುತ್ತಿಲ್ಲ. ವಿಶೇಷ ಎಂದರೆ ಇನ್ನೊಂದು ತಿಂಗಳಲ್ಲಿ ಬೆಂಗಳೂರಿನ ಅತೀ ದೊಡ್ಡ ಅಂಜನೇಯನ ಮೂರ್ತಿ ಪ್ರತಿಷ್ಟಾಪನೆ ಮಾಡಬೇಕಾದ ಜಾಗದಲ್ಲಿಯೇ ಈ ಕೋತಿ ಕಳೆದೊಂದು ವಾರದಿಂದ ಇದೆ. ಈಗಾಗಲೇ ತರ್ಲೆ ಮಾಡಿರುವ ಊರಿನ ನಾಲ್ಕು ಜನರಿಗೆ ಕೋತಿ ಕಚ್ಚಿರೋದ್ರಿಂದ ಬಿಬಿಎಂಪಿ ಅರಣ್ಯ ಘಟಕದವರು ಸ್ಥಳಕ್ಕೆ ಹೋಗಿ ಕೋತಿಯನ್ನ ಹಿಡಿಯೋಣ ಎಂದುಕೊಂಡರೆ ಅಧಿಕಾರಿಗಳೇ ತಬ್ಬಿಬ್ಬು ಆಗಿದ್ದಾರೆ.

    ಅಧಿಕಾರಿಗಳನ್ನು ಕಂಡರೆ ಈ ಕೋತಿ ಅವರ ಹತ್ತಿರ ಹೋಗಿ ಕೈಯನ್ನು ಹಿಡಿದು ಅದೇನೋ ಮಾಡುತ್ತಿರುತ್ತೆ. ಅವರ ತಲೆಯ ಮೇಲೆ ಹತ್ತಿ ಕೂತು ತುಂಟಾಟ ಮಾಡೋದಕ್ಕೆ ಶುರುಮಾಡಿದೆ. ಕೆಲ ಊರಿನ ಹಿರಿಯ ಜೀವಿಗಳನ್ನು ಕಂಡರೆ ಪ್ರೀತಿಸೋ ಈ ಕೋತಿ ಅವರ ತೊಡೆಯೇರಿ ಕೂತು ಮುದ್ದು ಮಾಡಿಸಿಕೊಳ್ಳುತ್ತೆ. ಆದರೆ ಹಿಡಿಯೋಕೆ ಬಲೆ ತೆಗೆದುಕೊಂಡು ಬಂದರೆ ಗುರಾಯಿಸಿಕೊಂಡು ಹೋಗಿ ಚಕ್ ಎಂದು ನೆಗೆದು ತಪ್ಪಿಸಿಕೊಳ್ಳುತ್ತೆ.

    ಇದು ಕರ್ನಾಟಕದ ಕೋತಿ ಅಲ್ಲ ಮಹಾರಾಷ್ಟ್ರದ ಕೋತಿ. ನಾವು ಯಾವ ಕೋತಿಯನ್ನು ಹಿಡಿಯೋದಕ್ಕೂ ಈ ಪರಿ ಕಷ್ಟ ಪಟ್ಟಿಲ್ಲ ಅಂತಾರೆ ಅರಣ್ಯ ಘಟಕದವರು. ಆದರೆ ಜನ ಮಾತ್ರ ಇದು ಅಂಜನೇಯ ಸ್ವಾಮಿನೇ ಎಂದು ಖುಷಿಪಡುತ್ತಿದ್ದಾರೆ. ಜನರಿಗೆ ಕಚ್ಚಿರೋದ್ರಿಂದ ಒಂದು ವಾರದಿಂದ ಸತತವಾಗಿ ಅರಣ್ಯಾಧಿಕಾರಿಗಳು ಕೋತಿ ಹಿಡಿಯೋಕೆ ಹೋಗಿ ನಿರಾಸೆಯಿಂದ ವಾಪಸ್ಸಾಗಿದ್ದಾರೆ. ದೇಗುಲದ ಅಂಗಳದಲ್ಲಿ ಓಡಾಡೋ ಕೋತಿ ಜನರ ಪಾಲಿಗೆ ವಿಸ್ಮಯವಾಗಿ ಕಾಣುತ್ತಿದೆ.

  • ಮಗು ಏಲಿಯನ್‍ನಂತಿದೆ ಎಂದು ಹಾಲುಣಿಸಲು ನಿರಾಕರಿಸಿದ ತಾಯಿ!

    ಮಗು ಏಲಿಯನ್‍ನಂತಿದೆ ಎಂದು ಹಾಲುಣಿಸಲು ನಿರಾಕರಿಸಿದ ತಾಯಿ!

    – ಬಿಹಾರದಲ್ಲಿ ವಿರೂಪಗೊಂಡ ಮಗು ಜನನ
    – ಹನುಮಾನ್ ಅವತಾರ ಅಂತಿದ್ದಾರೆ ಸ್ಥಳೀಯರು

    ಪಾಟ್ನಾ: ಬಿಹಾರದ ಕತಿಹಾರ್‍ನಲ್ಲಿ ಮಹಿಳೆಯೊಬ್ಬರು ವಿರೂಪಗೊಂಡ ಮಗುವಿಗೆ ಜನ್ಮ ನೀಡಿದ್ದಾರೆ.

    ನಾಲ್ಕು ಮಕ್ಕಳ ತಾಯಿಯಾಗಿರೋ 35 ವರ್ಷದ ಖಾಲಿದಾ ಬೇಗಂ ಜನ್ಮ ನೀಡಿರೋ ಈ ಮಗುವಿನ ತಲೆ ಮುದುರಿ ಹೋಗಿದ್ದು, ಕಣ್ಣುಗಳು ಉಬ್ಬಿಕೊಂಡಿವೆ. ತಾನೇ ಜನ್ಮ ನೀಡಿರೋ ಮಗುವಿನ ರೂಪ ಕಂಡು ತಾಯಿ ಖಲೀದಾ ಶಾಕ್ ಆಗಿದ್ರು. ಮಗು ನೋಡಲು ಏಲಿಯನ್ ರೀತಿ ಇದೆ ಎಂದು ಹೇಳಿ ಮೊದಲಿಗೆ ಹಾಲುಣಿಸೋದಕ್ಕೂ ನಿರಾಕರಿಸಿದ್ದರು.

    ಮಗುವಿನ ಅನೇಕ ಅಂಗಾಗಗಳು ಸರಿಯಾಗಿ ಬೆಳವಣಿಗೆ ಹೊಂದಿಲ್ಲ. ಡೆಲಿವರಿ ಆದ ನಂತರ ಮೊದಲ ಬಾರಿಗೆ ನಾನು ಮಗು ನೋಡಿ ಶಾಕ್ ಆದೆ. ತುಂಬಾ ಬೇಜಾರಾಗಿ ಮಗುವನ್ನು ನನ್ನ ಕಣ್ಣಿಂದ ದೂರ ಕರೆದುಕೊಂಡು ಹೋಗಿ ಎಂದು ಹೇಳಿದೆ ಅಂತ ಖಲೀದಾ ಹೇಳಿದ್ದಾಗಿ ಪತ್ರಿಕೆಯೊಂದು ವರದಿ ಮಾಡಿದೆ.

    ಖಾಲಿದಾ ಮಗುವನ್ನ ತಿರಸ್ಕರಿಸಿದ್ರೂ, ಮಗುವಿನ ತಂದೆ ಮೊಹಮ್ಮದ್ ಇಮ್ತಿಯಾಸ್ ಸೇರಿದಂತೆ ಇಲ್ಲಿನ ಸ್ಥಳೀಯರು ಇದು ಹನುಮಾನ್ ಅವತಾರ ಎಂದು ಮಾತಾಡಿಕೊಳ್ಳುತ್ತಿದ್ದಾರೆ.

    ವೈದ್ಯರ ಪ್ರಕಾರ ನವಜಾತ ಮಗುವಿಗೆ ಹರ್ಲೆಕ್ವಿನ್ ಇಕ್ತ್ಯೋಸಿಸ್ ಎಂಬ ಅನುವಂಶಿಕ ತೊಂದರೆಯಿದ್ದು, ಈ ಸಮಸ್ಯೆ ಇರುವವರಿಗೆ ಚರ್ಮ ದಪ್ಪವಾಗಿ ಅಂಗಾಂಗಗಳು ವಿರೂಪಗೊಂಡಿರುತ್ತವೆ. ಅಲ್ಲದೆ ಈ ಮಗುವಿಗೆ ಅನಾನ್ಸೆಫಲಿ ತೊಂದರೆ ಇರಬಹುದು ಎಂದು ಕೂಡ ತಜ್ಞರು ಊಹಿಸಿದ್ದಾರೆ.