Tag: Hanuma Jayanti

  • ಅಯೋಧ್ಯೆ ರಾಮನ ಮೂರ್ತಿ ಸೃಷ್ಟಿಕರ್ತ ಅರುಣ್ ಯೋಗಿರಾಜ್ ಧಾರವಾಡಕ್ಕೆ ಭೇಟಿ

    ಅಯೋಧ್ಯೆ ರಾಮನ ಮೂರ್ತಿ ಸೃಷ್ಟಿಕರ್ತ ಅರುಣ್ ಯೋಗಿರಾಜ್ ಧಾರವಾಡಕ್ಕೆ ಭೇಟಿ

    ಧಾರವಾಡ: ಅಯೋಧ್ಯೆಯಲ್ಲಿ ಹಸನ್ಮುಖಿಯಾಗಿ ನಿಂತಿರುವ ಬಾಲಕ ಶ್ರೀರಾಮಚಂದ್ರನ ಮೂರ್ತಿಯ ಸೃಷ್ಟಿಕರ್ತ, ಶಿಲ್ಪ ಕಲಾವಿದ ಅರುಣ್ ಯೋಗಿರಾಜ್ ಅವರು ಧಾರವಾಡಕ್ಕೆ ಭೇಟಿ ನೀಡಿದ್ದರು.

    ಹನುಮ ಜಯಂತಿಯಂದೇ ಧಾರವಾಡಕ್ಕೆ ಭೇಟಿ ಕೊಟ್ಟ ಅರುಣ್ ಯೋಗಿರಾಜ್ ಅವರನ್ನು ಭೇಟಿ ಮಾಡಲು ನೂರಾರು ಜನ ಆಗಮಿಸಿದ್ದರು. ಇದನ್ನೂ ಓದಿ: ಶಿರೋಮಣಿ ಅಕಾಲಿ ದಳ ಅಧ್ಯಕ್ಷರಾಗಿ ಸುಖಬೀರ್ ಸಿಂಗ್ ಬಾದಲ್ ಮರು ಆಯ್ಕೆ

    ಅಥಣಿಗೆ ಹೊರಟಿದ್ದ ಅರುಣ್ ಯೋಗಿರಾಜ್ ಅವರು ಮಾರ್ಗ ಮಧ್ಯೆ ಧಾರವಾಡದ ಬಿಜೆಪಿ ಮುಖಂಡೆ ಸವಿತಾ ಅಮರಶೆಟ್ಟಿ ಅವರ ನಿವಾಸಕ್ಕೆ ಭೇಟಿ ನೀಡಿದರು. ಈ ವೇಳೆ ಯೋಗಿರಾಜ್ ಅವರನ್ನು ನೋಡಲು ನೂರಾರು ಜನ ಆಗಮಿಸಿದ್ದರು. ಇದನ್ನೂ ಓದಿ: Mumbai Attack| ರಾಣಾ ವಿರುದ್ಧ ಸಾಕ್ಷಿ ನುಡಿಯಲಿದ್ದಾರೆ ನಿಗೂಢ ವ್ಯಕ್ತಿಗಳು!

    ಅಖಿಲ ಭಾರತ ವಿಶ್ವಕರ್ಮ ಛಾತ್ರಾ ಯುವ ಸಂಘ, ವಿಶ್ವಕರ್ಮ ಸಮಾಜ ಹಾಗೂ ಸಾಂಸ್ಕೃತಿಕ ಸಂಘಟನೆಗಳಿಂದ ಅರುಣ್ ಯೋಗಿರಾಜ್ ಅವರಿಗೆ ಸನ್ಮಾನ ನಡೆಯಿತು.

  • ಧಾರವಾಡದಲ್ಲಿ ಗಾಳಿ ಸಹಿತ ಮಳೆ – ಆಂಜನೇಯ ದೇವಸ್ಥಾನದ ಮೇಲೆ ಬಿದ್ದ ಮರ

    ಧಾರವಾಡದಲ್ಲಿ ಗಾಳಿ ಸಹಿತ ಮಳೆ – ಆಂಜನೇಯ ದೇವಸ್ಥಾನದ ಮೇಲೆ ಬಿದ್ದ ಮರ

    ಧಾರವಾಡ: ನಗರದಲ್ಲಿ ಭಾರೀ ಗಾಳಿ ಸಹಿತ ಮಳೆಗೆ ಆಂಜನೇಯನ ದೇವಸ್ಥಾನದ (Anjaneya Temple) ಮೇಲೆ ಮರ ಬಿದ್ದ ಘಟನೆ ನಡೆದಿದೆ.

    ಧಾರವಾಡ (Dharwad) ಹೊರವಲಯದ ಹೊಯ್ಸಳನಗರದಲ್ಲಿ ಈ ಘಟನೆ ನಡೆದಿದ್ದು, ಹನುಮಜಯಂತಿ ಮುನ್ನಾ ದಿನವೇ ಆಂಜನೇಯನ ದೇವಸ್ಥಾನದ ಮೇಲೆ ಮರ ಬಿದ್ದಿದೆ. ಇದನ್ನೂ ಓದಿ: ಜಾತಿಗಣತಿ ವರದಿ ಸೀಲ್ ಓಪನ್… ಕ್ಯಾಬಿನೆಟ್‌ನಲ್ಲಿ ಮಂಡನೆ; ಮುಂದಿನ‌ ಕ್ಯಾಬಿನೆಟ್‌ಗೆ ಕ್ಲೈಮ್ಯಾಕ್ಸ್..!

    ಆಂಜನೇಯನ ದೇವಸ್ಥಾನದ ಪಕ್ಕದಲ್ಲೇ ನಿಲ್ಲಿಸಿದ ಆಟೊ ಕೂಡ ಜಖಂ ಆಗಿದೆ. ಮಳೆ, ಗಾಳಿಗೆ ಬುಡ ಸಮೇತ ಮರ ಉರುಳಿ ಬಿದ್ದಿದೆ. ಇದನ್ನೂ ಓದಿ: ಮೈಸೂರು | ಮನೆ ಹಿಂಬಾಗಿಲಿನ ಬೀಗ ಮುರಿದು 22 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ, ನಗದು ಕಳ್ಳತನ

    ನಾಳೆ (ಏ.12) ಈ ದೇವಸ್ಥಾನದಲ್ಲಿ ಹನುಮಜಯಂತಿ ಕಾರ್ಯಕ್ರಮ ನಡೆಯಬೇಕಿತ್ತು. ಹನುಮಜಯಂತಿ ಮುನ್ನಾ ದಿನವೇ ಈ ಅವಘಡ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಮರ ಬಿದ್ದಿದ್ದರಿಂದ ದೇವಸ್ಥಾನದ ಹಿಂಭಾಗ ಮಾತ್ರ ಸ್ವಲ್ಪ ಡ್ಯಾಮೇಜ್ ಆಗಿದೆ. ಸದ್ಯ ಮರ ತೆರವುಗೊಳಿಸಿ ಶನಿವಾರ ಪೂಜೆಗೆ ದೇವಸ್ಥಾನವನ್ನು ಸಿದ್ಧಗೊಳಿಸುತ್ತಿದ್ದಾರೆ. ಇದನ್ನೂ ಓದಿ: ಪ್ರಮೋದಾದೇವಿ ಒಡೆಯರ್‌ಗೆ ನಮ್ಮ ಗ್ರಾಮ ರಿಜಿಸ್ಟರ್‌ ಮಾಡಿಕೊಡಬೇಡಿ: ಡಿಸಿಗೆ ಗ್ರಾಮಸ್ಥರ ಮನವಿ

  • ಹನುಮ ಜಯಂತಿ ಡೇಟ್ ಗೊತ್ತಿಲ್ಲ ಅಂದ್ರೆ ತಪ್ಪಾ? ನಾನು ಸ್ವಲ್ಪ ಒರಟ, ಟೀಕೆ ಮಾಡ್ತಾರೆ: ಸಿದ್ದರಾಮಯ್ಯ

    ಹನುಮ ಜಯಂತಿ ಡೇಟ್ ಗೊತ್ತಿಲ್ಲ ಅಂದ್ರೆ ತಪ್ಪಾ? ನಾನು ಸ್ವಲ್ಪ ಒರಟ, ಟೀಕೆ ಮಾಡ್ತಾರೆ: ಸಿದ್ದರಾಮಯ್ಯ

    ಚಿಕ್ಕಮಗಳೂರು: ನಾನು ಸ್ವಲ್ಪ ಒರಟ, ಹಳ್ಳಿ ಭಾಷೆಯಲ್ಲಿ ಮಾತಾಡ್ತೀನಿ. ಹೀಗಾಗಿ ನನ್ನ ವಿರುದ್ಧ ಟೀಕೆ ಮಾಡಿದ್ದೇ ಮಾಡಿದ್ದು ಎಂದು ಹೇಳುವ ಮೂಲಕ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಮ್ಮ ವಿರುದ್ಧ ಟೀಕೆ ಮಾಡುವವರಿಗೆ ಟಾಂಗ್ ನೀಡಿದ್ದಾರೆ.

    ಜಿಲ್ಲೆಯ ಕಡೂರಿನಲ್ಲಿ ಮಾತನಾಡಿದ ಅವರು, ಬಿಜೆಪಿ, ಜೆಡಿಎಸ್ ಎಲ್ಲರೂ ನನ್ನ ಮೇಲೆ ಬೀಳ್ತಾರೆ. ಟೀಕೆ ಮಾಡಲು ಎಲ್ಲರಿಗೂ ನಾನೊಬ್ಬನೇ ಸಿಕ್ಕಿರುವುದು. ಬಿಜೆಪಿಯವರು ಗೋಮಾಂಸ ನಿಷೇಧ ಕಾಯ್ದೆ ತಂದಿದ್ದಾರೆ. ನಾನು ದನದ ಮಾಂಸ, ಎಮ್ಮೆ ಮಾಂಸ ತಿಂದಿಲ್ಲ, ತಿನ್ನಬೇಕು ಅನ್ನಿಸಿದರೆ ತಿಂತೀನಿ ಅಂದೆ. ನನ್ನ ಇಷ್ಟ, ನೀನು ಯಾವನ್ ಕೇಳಕ್ಕೆ ನಂಗಿಷ್ಟ ನಾನು ತಿಂತೀನಿ ಅಂದೆ. ಅಷ್ಟಕ್ಕೇ ನನ್ನ ವಿರುದ್ಧ ಏನು ವ್ಯಾಖ್ಯಾನಗಳು, ಚರ್ಚೆಗಳು ಎಂದು ಕುಟುಕಿದ್ದಾರೆ.

    ಓಟು ಹಾಕಲು ಹೋದಾಗ ನಮ್ಮ ಪಾರ್ಟಿಯವನು ಊಟಕ್ಕೆ ಕರೆದೊಯ್ದ, ಅವತ್ತು ಕೋಳಿ ಮಾಡಿದ್ರು, ಅವತ್ತೇ ಹನುಮ ಜಯಂತಿ. ನಮ್ಮ ಹುಡುಗ ಮಾಂಸ ತಿನ್ನಲ್ಲ ಹನುಮ ಜಯಂತಿ ಅಂದ, ಹನುಮ ಹುಟ್ಟಿದ್ದು ಯಾರಿಗೆ ಗೊತ್ತು, ನಮಗ್ಯಾರಿಗೂ ಗೊತ್ತಿಲ್ಲ. ಮಾಂಸ ತಿಂದರೆ ಏನು, ಹನುಮ ಜಯಂತಿ ಡೇಟ್ ಗೊತ್ತಿಲ್ಲ ಅಂದ್ರೆ ತಪ್ಪಾ? ಹನುಮ ಯಾವತ್ತು ಹುಟ್ಟಿದ್ದ ನಿಮಗೆ ಗೊತ್ತಾ? ಎಲ್ಲರಿಗೂ ನಾನೊಬ್ಬನೇ ಸಿಕ್ಕಿರುವುದು ಟೀಕೆ ಮಾಡಲು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

  • ಹನುಮ ಜಯಂತಿಗೆ ಕ್ಷಣಗಣನೆ – ಸ್ವಾಗತಕ್ಕೆ ಸಿದ್ಧರಾದ ಮುಸ್ಲಿಂ ಬಾಂಧವರು

    ಹನುಮ ಜಯಂತಿಗೆ ಕ್ಷಣಗಣನೆ – ಸ್ವಾಗತಕ್ಕೆ ಸಿದ್ಧರಾದ ಮುಸ್ಲಿಂ ಬಾಂಧವರು

    ಕೊಪ್ಪಳ: ಹನುಮ ಜನಿಸಿದ ನಾಡಿನಲ್ಲಿ ಹನುಮ ಜಯಂತಿಗೆ ಕ್ಷಣಗಣನೆ ಆರಂಭವಾಗಿದೆ. ವಿವಾದಕ್ಕೆ ಕಾರಣವಾಗಿದ್ದ ಹನುಮ ಜಯಂತಿ ಕಳೆದ ವರ್ಷ ಹಿಂದೂ-ಮುಸ್ಲಿಂ ಒಂದುಗೂಡಿ ಆಚರಿಸುವ ಮೂಲಕ ಭಾವೈಕೈತೆ ಮೆರೆದಿದ್ದರು. ಇದೀಗ ಆ ಕ್ಷಣ ಮತ್ತೆ ಹತ್ತಿರ ಬಂದಿದೆ. ಈ ಬಾರಿ ಜಿಲ್ಲಾಡಳಿತ ಒಂದು ವಿಶೇಷ ಕಾಳಜಿಯನ್ನು ತೋರುತ್ತಿದೆ.

    ಹನುಮ ಜನಿಸಿದ ನಾಡು ಅಂದರೆ ಎಲ್ಲರಿಗೂ ನೆನಪಾಗುವುದೇ ಅಂಜನಾದ್ರಿಯ ಬೆಟ್ಟ. ಇದಕ್ಕೆ ಕಿಷ್ಕಿಂದ ಅಂತಾನೂ ಕರೆಯಲಾಗುತ್ತದೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿರುವ ಅಂಜನಾದ್ರಿಗೆ ಪ್ರತಿ ವರ್ಷ ಹನುಮ ಜಯಂತಿಯಂದು ಹನುಮ ಮಾಲಾಧಾರಿಗಳು ಇಲ್ಲಿಗೆ ಬರುತ್ತಾರೆ. ಬಂದು ಹನುಮ ಮಾಲೆ ವಿಸರ್ಜನೆ ಮಾಡುತ್ತಾರೆ. ಆದರೆ 2016ರಲ್ಲಿ ಕೆಲ ಕಿಡಿಗೇಡಿಗಳು ಹನುಮ ಜಯಂತಿ ವೇಳೆ ಕ್ಷುಲ್ಲಕ ಕಾರಣಕ್ಕೆ ಹಿಂದೂ-ಮುಸ್ಲಿಂ ನಡುವೆ ವಿವಾದ ಸೃಷ್ಟಿಸಿ ರಾದ್ದಾಂತ ಮಾಡಿದ್ದರು. ಆದಾದ ನಂತರ ಪೊಲಿಸ್ ಸರ್ಪಗಾವಲಿನಲ್ಲೇ ಹನುಮ ಜಯಂತಿ ನಡೆಯುತ್ತಿದೆ.

    ಕಳೆದ ವರ್ಷ ಇವೆಲ್ಲವನ್ನೂ ಮೀರಿ ಹಿಂದೂ-ಮುಸ್ಲಿಂ ಜನರು ಒಂದೂಗೂಡಿ ಹನುಮ ಮಾಲಾಧಾರಿಗಳಿಗೆ ಹೂ, ಹಣ್ಣು ನೀಡಿ ಸ್ವಾಗತ ಕೋರಿದ್ದರು. ಅಷ್ಟೇ ಅಲ್ಲದೆ ದಾರಿಯುದ್ದಕ್ಕೂ ಮಾಲೆ ಹಾಕಿದ ಪಾದಯಾತ್ರಿಗಳಿಗೆ ಮಜ್ಜಿಗೆಯನ್ನು ನೀಡಿ ಭಾವೈಕೈತೆ ಮೆರದಿದ್ದರು. ಅದರಂತೆಯೇ ಈ ಬಾರಿಯೂ ಡಿಸೆಂಬರ್ 9ರಂದು ನಡೆಯುವ ಹನುಮ ಜಯಂತಿಗೆ ಬರುವ ಮಾಲಾಧಾರಿಗಳಿಗೆ ಮುಸ್ಲಿಂ ಭಾಂಧವರು ಹೂ, ಹಣ್ಣು ನೀಡಿ ಸ್ವಾಗತ ಕೊರಲು ಸನ್ನದ್ದರಾಗಿದ್ದಾರೆ.

    ಈ ಬಾರಿ ಕೊಪ್ಪಳ ಜಿಲ್ಲಾಡಳಿತವೂ ಹನುಮ ಜಯಂತಿಗೆ ಒಂದು ವಿಶೇಷ ಕಾಳಜಿ ವಹಿಸಿದೆ. ಸಂಪೂರ್ಣ ಪ್ಲಾಸ್ಟಿಕ್ ನಿಷೇಧ ಮಾಡಿದ್ದು, ಅಲ್ಲಿಯ ವ್ಯಾಪಾರಿಗಳಿಗೆ ಬಟ್ಟೆಯಿಂದ ತಯಾರಿಸಿದ ಬ್ಯಾಗ್ ಗಳನ್ನು ಮಾರಾಟ ಮಾಡಲು ಹೇಳಿದೆ. ಕಳೆದ ಬಾರಿ ಟ್ರಾಫಿಕ್ ನಿಂದ ಕೊಂಚ ತೊಂದರೆಯಾಗಿತ್ತು. ಈ ಬಾರಿ ಯಾವುದೇ ರೀತಿಯ ತೊಂದರೆ ಆಗದಂತೆ ಎಲ್ಲಾ ರೀತಿಯ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗಿದೆ. ಹನುಮ ಜಯಂತಿಗೆ ಪಕ್ಕದ ಗದಗ, ಬೆಳಗಾವಿ, ಬಳ್ಳಾರಿ, ರಾಯಚೂರು, ಬಿಜಾಪುರ, ಬಾಗಲಕೋಟೆ, ಕಲಬುರಗಿ, ಬೀದರ್ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಿಂದ ಮೂವತ್ತು ಸಾವಿರಕ್ಕೂ ಹೆಚ್ಚು ಹನುಮ ಮಾಲಾಧಾರಿಗಳು ಅಂಜನಾದ್ರಿಗೆ ಆಗಮಿಸುವ ನಿರೀಕ್ಷೆ ಇದೆ. ಈ ಕಾರಣಕ್ಕೆ ಕೊಪ್ಪಳ ಜಿಲ್ಲಾಡಳಿತವೂ ಸಕಲ ಸನ್ನದ್ಧವಾಗಿದೆ. ಯಾವುದೇ ಅಹಿತಕರ ಘಟನೆ ನೆಡೆಯದಂತೆ ಎಲ್ಲಾ ರೀತಿಯ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

    ಒಟ್ಟಾರೆ ಬಾರೀ ವಿವಾದಕ್ಕೀಡಾಗಿದ್ದ ಜಿಲ್ಲೆಯ ಹನುಮ ಜಯಂತಿ ಇದೀಗ ಭಾವೈಕೈತೆಗೆ ಸಾಕ್ಷಿಯಾಗ್ತಿರೋದು ಖುಷಿಯ ವಿಚಾರ. ಕೇವಲ ಹನುಮ ಜಯಂತಿ ಅಷ್ಟೇ ಅಲ್ಲದೆ ಗಂಗಾವತಿಯಲ್ಲಿ ಜರಗುವ ಎಲ್ಲಾ ಹಬ್ಬಗಳನ್ನು ಹಿಂದೂ-ಮುಸ್ಲಿಂ ಸಮುದಾಯದವರು ಒಗ್ಗೂಡಿ ಮಾಡ್ತಿರೋದು ಜಿಲ್ಲೆಯ ಜನರ ಸಂತೋಷಕ್ಕೆ ಕಾರಣವಾಗಿದೆ.

  • ವೈಶಾಖ ಮಾಸದ ಹನುಮ ಜಯಂತಿ ಆಚರಣೆ ವಿಧಾನಗಳು

    ವೈಶಾಖ ಮಾಸದ ಹನುಮ ಜಯಂತಿ ಆಚರಣೆ ವಿಧಾನಗಳು

    – ಶನಿ ದೋಷ ನಿವಾರಣೆಗಾಗಿ ಕದಳಿ ನೈವೈದ್ಯ

    ಹಳಷ್ಟು ಜನರು ಮಾರ್ಗಶಿರ ಮಾಸ ಇದು ಅಲ್ಲ. ಹಾಗಾಗಿ ಇವಾಗ ಯಾವ ಹನುಮ ಜಯಂತಿ ಬರುವುದಿಲ್ಲ ಎಂದು ತಿಳಿದುಕೊಂಡಿರುತ್ತಾರೆ. ಆದರೆ ಇದೇ ಬುಧವಾರ ಹನುಮ ಜಯಂತಿ ಬಂದಿದೆ. ಮಾರ್ಗಶಿರ ಮಾಸದಲ್ಲಿ ಬರುವುದನ್ನು ಹನುಮ ದ್ರವತ್ವ, ವೈಶಾಖದಲ್ಲಿ ಬರುವುದನ್ನು ಹನುಮ ಜಯಂತಿ ಎಂದು ಕರೆಯಲಾಗುತ್ತದೆ.

    ಕೃಷ್ಣ ಪಕ್ಷದ ವೈಶಾಖ ಮಾಸದಲ್ಲಿ ಬರುವ ಹನುಮ ಜಯಂತಿಯನ್ನು ನಿಯಮಬದ್ಧವಾಗಿ ಪಾಲಿಸುವವರು ಆಂಜನೇಯನ ಅನುಗ್ರಹಕ್ಕೆ ಪಾತ್ರರಾಗುತ್ತಾರೆ ಎನ್ನುವುದು ನಂಬಿಕೆ. ಹನುಮ ಜಯಂತಿಯನ್ನು ನಿಯಮ ಬದ್ಧವಾಗಿ ಪಾಲಿಸುವವರಿಗೆ ಜನ್ಮದಲ್ಲಿ ಬರತಕ್ಕಂತಹ ಶನಿ ದೋಷ ಮತ್ತು ಸಾಡೇ ಸಾತ್ (ಏಳರಾಟ ಶನಿ ದೋಷ) ನಿವಾರಣೆ ಆಗುತ್ತೆ ಎಂಬುವುದು ಸುಂದರ ಕಾಂಡದಲ್ಲಿ ಲಭ್ಯವಾಗುತ್ತದೆ.

    ಹನುಮ ಜಯಂತಿಯ ಆರಾಧನೆ:
    ಕದಳಿ ನೈವೈದ್ಯ: ಬಾಳೆಹಣ್ಣು ನೈವೈದ್ಯ ನೀಡುವುದನ್ನು ಕದಳಿ ನೈವೈದ್ಯ ಎಂದು ಕರೆಯಲಾಗುತ್ತದೆ. ಗ್ರಾಮೀಣ ಭಾಗಗಳಲ್ಲಿ ಬಾಳೆಹಣ್ಣು ಬಳಸಿ ರಸಾಯನ ಮಾಡಲಾಗುತ್ತದೆ. ಪಂಚಫಲಗಳಲ್ಲಿ ರಸಾಯನ ಮಾಡೋದಕ್ಕಿಂತ ಕೇವಲ ಬಾಳೆಹಣ್ಣು ಬಳಸಿ ನೈವೈದ್ಯ ಸಲ್ಲಿಸೋದು ಉತ್ತಮ ಮತ್ತು ಸರಳ. ನಿಯಮಬದ್ಧವಾಗಿ ಶೋಡಶ ಉಪಚಾರ ಮತ್ತು ಭಕ್ತರು ತಮ್ಮ ಶಕ್ತಿಯ ಅನುಗುಣವಾಗಿ ಆರಾಧನೆ ಮಾಡಬೇಕು.

    ಆರಾಧನೆಯ ಬಳಿಕ ಸಿದ್ಧಪಡಿಸಿಕೊಂಡಿರುವ ಬಾಳೆ ಹಣ್ಣಿನ ರಸಾಯನವನ್ನು ಬಂದಂತಹ ಭಕ್ತರಿಗೆ ವಿನಿಮಯ ಮಾಡಬೇಕು. ಈ ರೀತಿ ನಿಯಮಬದ್ಧವಾಗಿ ರಸಾಯನ ವಿನಿಮಯ ಮಾಡುವವರ ಶನಿ ದೋಷ ನಿವಾರಣೆ ಆಗುತ್ತದೆ ಎನ್ನುವುದು ನಂಬಿಕೆ.

    ಶನಿ ಮೂರು, ಆರನೇ ಅಥವಾ ಹನ್ನೊಂದನೇ ಮನೆಯಲ್ಲಿದ್ದರೆ ಬಲಯುಕ್ತನಾಗಿ ಲಾಭವನ್ನು ತಂದುಕೊಡುತ್ತಾನೆ. ಬುಧವಾರ ಹುನಮ ಜಯಂತಿ ದಿನದಂದು ನಿಮಗೆ ಸಮೀಪದಲ್ಲಿರುವ ಆಂಜನೇಯ ದೇವಾಲಯಕ್ಕೆ ಪ್ರಾತಃಕಾಲ ತೆರಳಿ ನಿಮ್ಮ ಶಕ್ತಿಗೆ ಅನುಸಾರವಾಗಿ ಬಾಳೆಹಣ್ಣು ನೀಡಬೇಕು. ತುಂಬಾನೇ ಕಷ್ಟವಿದ್ದರೆ ಎರಡು ಬಾಳೆಹಣ್ಣುಗಳನ್ನು ಸಹ ನೀಡಿ ಭಕ್ತಿಯಿಂದ ಆಂಜನೇಯನನ್ನು ಪ್ರಾರ್ಥನೆ ಮಾಡಬೇಕು. ಶಕ್ತಿಗನುಗುಣವಾಗಿ ಮಂತ್ರ ಹೇಳುತ್ತಾ  ಜಪವನ್ನು ಮಾಡಬೇಕು. ಆರ್ಥಿಕವಾಗಿ ಸಬಲರಾಗಿದ್ದರೆ ದೇವಾಲಯಗಳಿಗೆ ಬರುವ ಭಕ್ತರಿಗೆ ಅನ್ನದಾನ ಮಾಡಿದ್ರೆ ಹುನುಮನ ಅನುಗ್ರಹ ಪ್ರಾಪ್ತಿಯಾಗುತ್ತದೆ.

    ಪ್ರಾರ್ಥನೆ ವೇಳೆ ಹೇಳುವ ಮಂತ್ರ: ಮನೋಜವಂ ಮಾರುತತುಲ್ಯ ವೇಗಂ ಜಿತೇಂದ್ರಿಯಂ ಬುದ್ಧಿ ಮತಾಂ ವರಿಷ್ಠಂ ವಾತಾತ್ಮಜಂ ವಾನರಯೂಧ ಮುಖ್ಯಂ ಶ್ರೀ ರಾಮದೂತಂ ಶಿರಸಾ ನಮಾಮ್ಯಹಂ

  • ಹನುಮ ಜಯಂತಿಗೆ ಸಿಎಂ ಶುಭಾಶಯ – ಟಾಂಗ್ ಕೊಟ್ಟ ಬಿಜೆಪಿ

    ಹನುಮ ಜಯಂತಿಗೆ ಸಿಎಂ ಶುಭಾಶಯ – ಟಾಂಗ್ ಕೊಟ್ಟ ಬಿಜೆಪಿ

    ಬೆಂಗಳೂರು: ಇಂದು ಹನುಮ ಜಯಂತಿ ಪ್ರಯುಕ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವಿಟ್ಟರ್ ಮೂಲಕ ಸಮಸ್ತ ಜನತೆಗೆ ಶುಭಾಶಯ ಕೋರಿದ್ದಾರೆ.

    “ನಾಡಿನ ಸಮಸ್ತ ಜನತೆಗೆ ಹನುಮ ಜಯಂತಿಯ ಶುಭಾಶಯಗಳು. ಶ್ರದ್ಧೆ, ಭಕ್ತಿ ಹಾಗೂ ಧೈರ್ಯದ ಸಂಕೇತವಾದ ಹನುಮ ಜಯಂತಿಯಂದು ನಾಡಿನಲ್ಲಿ ಸದಾಕಾಲ ಸಮೃದ್ಧಿ ಹಾಗೂ ಸಂತಸ ತುಂಬಿರಲಿ, ಭಗವಂತನ ಆಶೀರ್ವಾದ ನಾಡಿನ ಎಲ್ಲ ಜನರ ಮೇಲಿರಲಿ ಎಂದು ಹಾರೈಸುತ್ತೇನೆ” ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ. ಇದನ್ನು ಓದಿ: ವಚನಗಳನ್ನು ಬಳಸಿಕೊಂಡು ಕೈ, ಕಮಲ ಟಾಂಗ್!

    ಹನುಮ ಜಯಂತಿಗೆ ಶುಭಾಶಯ ಕೋರಿದ ಸಿಎಂಗೆ ಬಿಜೆಪಿ ಕರ್ನಾಟಕ ಟ್ವೀಟ್ ಮಾಡಿ ಟಾಂಗ್ ನೀಡಿದ್ದು, “ಟ್ವಿಟ್ಟರ್ ನಲ್ಲಿ ಶುಭಾಶಯ ಕೋರುವುದು ಹಾಗಿರಲಿ ಸರ್. ಗಣೇಶ ಚತುರ್ಥಿ, ಹನುಮ ಜಯಂತಿ, ರಾಮನವಮಿ ಹೀಗೆ ಎಲ್ಲ ಹಬ್ಬಗಳ ಆಚರಣೆಗೆ ಸರ್ಕಾರದಿಂದ ನೂರು ತೊಡಕನ್ನು ತಂದು. ಈಗ ಮಾತ್ರ ಟ್ವಿಟ್ಟರ್ ನಲ್ಲಿ ಶುಭಾಶಯ ಕೋರುತ್ತಿರಲ್ಲ. ಏನು ಅನ್ನಿಸುವುದಿಲ್ಲವಾ ಎಂದು ಪ್ರಶ್ನಿಸಿ ಸಿಎಂ ಟ್ವೀಟ್ ಗೆ ರೀ ಟ್ವೀಟ್ ಮಾಡಿದೆ.

  • ಪೊಲೀಸ್ ಪಂಜರದಲ್ಲೇ ಸಿಂಹ ಘರ್ಜನೆ-ಈದ್ ಮಿಲಾದ್ ಆಚರಣೆಯೂ ಹಿಂಗೇ ಇರಬೇಕೆಂದು ಆಗ್ರಹ

    ಪೊಲೀಸ್ ಪಂಜರದಲ್ಲೇ ಸಿಂಹ ಘರ್ಜನೆ-ಈದ್ ಮಿಲಾದ್ ಆಚರಣೆಯೂ ಹಿಂಗೇ ಇರಬೇಕೆಂದು ಆಗ್ರಹ

    ಮೈಸೂರು: ಜಿಲ್ಲೆಯ ಹುಣಸೂರಿನ ಹನುಮ ಜಯಂತಿ ಮೆರವಣಿಗೆಗೆ ಜಿಲ್ಲಾಡಳಿತ ಹಾಕಿದ ನಿರ್ಬಂಧನೆಗಳನ್ನು ಈದ್ ಮಿಲಾದ್ ಮೆರವಣಿಗೆಗೂ ಹಾಕಬೇಕು, ಹಿಂದೂಗಳನ್ನು ಅದರಲ್ಲಿ ಬಳಸಿಕೊಳ್ಳಬೇಕು ಎಂದು ಸಂಸದ ಪ್ರತಾಪ್ ಸಿಂಹ ಆಗ್ರಹಿಸಿದ್ದಾರೆ.

    ಇಂದು ನಡೆದ ಹನುಮ ಜಯಂತಿ ಮೆರವಣಿಗೆ ವೇಳೆ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಹನುಮಜಯಂತಿಯಲ್ಲಿ ಸಾಮಾನ್ಯ ವ್ಯಕ್ತಿಯಾಗಿ ಭಾಗವಹಿಸಿದ್ದೇನೆ. ಜಿಲ್ಲಾಡಳಿತ ಹನುಮ ಜಯಂತಿ ಆಚರಣೆಗೆ ವಿಧಿಸಿರುವ ನಿರ್ಬಂಧನೆಗಳನ್ನು ಮುಂದಿನ ಎಲ್ಲಾ ಆಚರಣೆ ವೇಳೆ ಪಾಲನೆ ಮಾಡುಬೇಕು ಹಾಗೂ ರಾಷ್ಟ್ರೀಯ ಹಬ್ಬ ಆಚರಣಾ ಸಮಿತಿಯ ನೇತೃತ್ವದಲ್ಲೇ ಈದ್ ಮಿಲಾದ್ ಮೆರವಣಿಗೆ ನಡೆಸಬೇಕು ಎಂದು ಆಗ್ರಹಿಸಿದರು.

    ಈ ವೇಳೆ ಮಾಧ್ಯಮಗಳನ್ನು ನಿಯಂತ್ರಿಸಲು ಬಂದ ಪೊಲೀಸ್ ಅಧಿಕಾರಗಳನ್ನು ತರಾಟೆ ತೆಗೆದುಕೊಂಡ ಅವರು, ನೀವೇನು ಭಿಕ್ಷೆ ನೀಡಿ ನಮಗೆ ಮೆರವಣಿಗೆಗೆ ಅವಕಾಶ ಕೊಟ್ಟಿಲ್ಲ. ಪೊಲೀಸ್ ಅಧಿಕಾರಿಗಳು ಸೂಚಿಸಿದ ಮಾರ್ಗದಲ್ಲೇ ಮೆರವಣಿಗೆ ತೆರಳುತ್ತಿದ್ದೇವೆ. ನಮ್ಮ ಮೇಲೆ ಅನಗತ್ಯ ಒತ್ತಡ ಹಾಕಿದರೆ ನಾನು ರಸ್ತೆಯಲ್ಲೆ ಕೂರುತ್ತೇನೆ. ಮೆರವಣಿಗೆಯಲ್ಲಿ ಗಲಾಟೆ ನಡೆಯಲು ಅವಕಾಶ ಮಾಡಿಕೊಡಬೇಡಿ. ಶಾಂತಿಯಿಂದ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಬಿಡಿ. ನಾವು ಮಾಡುತ್ತಿರುವುದು ಮ್ಯಾರಥಾನ್ ಅಲ್ಲ, ಸುಮ್ಮನೆ ಓಡಿಕೊಂಡು ಹೋಗಬೇಕಾಗುತ್ತಾ ಎಂದು ಪ್ರಶ್ನಿಸಿದರು.

    ಇದಕ್ಕೂ ಮುನ್ನ ಸಂಸದ ಪ್ರತಾಪ್ ಸಿಂಹ ಹನುಮಜಯಂತಿಯ ಮೆರವಣಿಯಲ್ಲಿ ವಿಶೇಷವಾಗಿ ತಲೆಗೆ ಕೇಸರಿ ಪೇಟ ತೊಟ್ಟು ನಂದಿಕಂಬ ಹೊತ್ತು ಕುಣಿದರು. ಪ್ರಥಮ ಸಾಲಿನಲ್ಲಿ ನಂದಿಕಂಬ ಮೆರವಣಿಗೆಯನ್ನು ಹೊತ್ತು ಹನುಮ ಭಕ್ತರು ಸಾಗಿದ್ದರು.

    ಹನುಮ ಜಯಂತಿಗೆ ಜಿಲ್ಲಾಡಳಿತ ವಿಧಿಸಿದ್ದ ಷರತ್ತುಗಳೇನು?
    * ಹನುಮ ಜಯಂತಿಯಲ್ಲಿ ರಾಜಕೀಯ ವ್ಯಕ್ತಿಗಳ ವಿಶೇಷ ವಾಹನ ಇರುವಂತಿಲ್ಲ
    * ರಾಜಕೀಯ ವ್ಯಕ್ತಿಗಳು ಕೇವಲ ಹನುಮ ಭಕ್ತರಾಗಿಯೇ ಜಯಂತಿಗೆ ಬರಬೇಕು
    * ಹನುಮ ಜಯಂತಿಯಲ್ಲಿ ಎಂಪಿ/ಎಂಎಲ್‍ಎ ಯಾರು ಸಹ ಭಾಷಣ ಮಾಡುವಂತಿಲ್ಲ
    * ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಎಂಪಿ/ಎಂಎಲ್‍ಎ ಹೆಸರು ಹಾಕುವಂತಿಲ್ಲ
    * ಹನುಮ ಜಯಂತಿಗೆ ಶುಭಾಷಯ ಕೋರಿ ರಾಜಕಾರಣಿಗಳ ಫ್ಲೆಕ್ಸ್ ಹಾಕುವಂತಿಲ್ಲ
    * ಜಿಲ್ಲಾಡಳಿತದ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದಲೇ ಹನುಮಜಯಂತಿ ಆಚರಣೆ.. ಹೀಗೆ ಹಲವು ಷರತ್ತು ವಿಧಿಸಿ ಮೈಸೂರು ಜಿಲ್ಲಾಡಳಿತ ಆದೇಶ ಹೊರಡಿಸಿತ್ತು.

    https://www.youtube.com/watch?v=ds9xy0aLXCU

     

     

  • ಹನುಮಮಾಲೆ ವಿಸರ್ಜಿಸಿದ ಸಂಸದ ಪ್ರತಾಪ್ ಸಿಂಹ- ಹನುಮ ಜಯಂತಿ ಮಾಡೇ ಮಾಡ್ತೀವೆಂದು ಸವಾಲು

    ಹನುಮಮಾಲೆ ವಿಸರ್ಜಿಸಿದ ಸಂಸದ ಪ್ರತಾಪ್ ಸಿಂಹ- ಹನುಮ ಜಯಂತಿ ಮಾಡೇ ಮಾಡ್ತೀವೆಂದು ಸವಾಲು

    ಮೈಸೂರು: ಹನುಮ ಜಯಂತಿ ಪ್ರಯುಕ್ತ  ಮಾಲೆ ಧರಿಸಿದ್ದ ಸಂಸದ ಪ್ರತಾಪ್ ಸಿಂಹ ಇಂದು ಮಾಲೆಯನ್ನು ವಿಸರ್ಜಿಸಿದ್ದಾರೆ.

    ಪ್ರತಾಪ್ ಸಿಂಹ ಡಿಸೆಂಬರ್ 1 ರಂದು ಹನುಮ ಮಾಲೆಯನ್ನು ಧರಿಸಿದ್ದರು. ಇವತ್ತು ನಗರದ ಹುಣಸೂರಿನ ಲಕ್ಷೀನರಸಿಂಹ ಸ್ವಾಮಿ ದೇವಾಲಯದಲ್ಲಿ ಮಾಲೆಯನ್ನು ತೆಗೆಸಿದ್ದಾರೆ. ಹನುಮ ಜಯಂತಿ ಮೆರವಣಿಗೆ ನಂತರ ಮಾಲೆ ತೆಗೆಸಬೇಕಿತ್ತು. ಆದರೆ ಹನುಮ ಜಯಂತಿ ವೇಳೆ ಬಂಧನವಾಗಿದ್ದ ಕಾರಣ ತಡವಾಗಿ ಮಾಲೆಯನ್ನು ತೆಗೆಸಿದ್ದು, ಇವರ ಜೊತೆಗೆ ಹಲವು ಮಂದಿ ಹನುಮ ಭಕ್ತರು ದೇವಾಲಯದಲ್ಲಿ ವಿಶೇಷ ಹೋಮ ನೆರವೇರಿಸಿ ಮಾಲೆಯನ್ನು ವಿಸರ್ಜನೆ ಮಾಡಿದರು.

    ಮಾಲೆ ವಿಸರ್ಜಿಸಿದ ನಂತರ ಪ್ರತಾಪ್ ಸಿಂಹ ಮಾತನಾಡಿ, ರಾಮನ ಭಕ್ತರು ಎಷ್ಟು ಜನರಿದ್ದಾರೋ, ಅಷ್ಟೇ ಹನುಮ ಭಕ್ತರು ಇದ್ದಾರೆ. ದಸರೆಯ ಜೊತೆಗೆ ಕುಸ್ತಿ ಆರಂಭವಾಗಿದ್ದು, ಕುಸ್ತಿಯ ಪೈಲ್ವಾನ್‍ಗಳ ಭಗವಾನ್ ಹನುಮಂತ. ಅದಕ್ಕಾಗಿ ಪ್ರತಿ ಊರಿನಲ್ಲೂ ಹನುಮ ಗುಡಿಯಿದೆ. ನಮ್ಮ ನಂಬಿಕೆ ಮೇಲೆ ಪ್ರಹಾರ ಮಾಡುವ ಕೆಲಸ ಆಗಿದೆ. ಕೆಲವರು ಅಧಿಕಾರದ ದರ್ಪದಿಂದ ಯಾವ ರೀತಿ ಬೇಕಾದರೂ ವರ್ತಿಸಬಹುದು. ಆದರೆ ಕಾಯುವುದಕ್ಕೆ ದೇವಿ ಚಾಮುಂಡೇಶ್ವರಿ ಇದ್ದಾಳೆ. ಯಾರಿಗೆ ಯಾವ ಸಂದರ್ಭದಲ್ಲಿ ಅವರ ಪಾಪಕ್ಕೆ ಪ್ರತಿಫಲ ಸಿಗಬೇಕೋ ಸಿಗಲಿದೆ. ಈ ಬಗ್ಗೆ ನನಗೆ ನಂಬಿಕೆಯಿದೆ ಎಂದು ಹೇಳಿದರು.

    ನನ್ನ ಮೇಲೆ ಸಾಕಷ್ಟು ಆಕ್ರಮಣಗಳು ನಡೆದಿವೆ. ಆದರೂ ನಾನು ಇವತ್ತು ಬದುಕಿದ್ದೇನೆ. ಇದಕ್ಕೆ ಕಾರಣ ದೇವರ ಅನುಗ್ರಹ ನನ್ನ ಮೇಲೆ ಇದೆ. ದುಷ್ಟ ಶಕ್ತಿಗಳನ್ನು ಶಿಕ್ಷಿಸುವ ಕೆಲಸ ದೇವರೆ ಮಾಡುತ್ತಾನೆ. ಮುಂದಿನ ದಿನಗಳಲ್ಲಿ ಇದಕ್ಕೆಲ್ಲ ಉತ್ತರ ಸಿಗಲಿದೆ. ಆದ್ದರಿಂದ ಮೆರವಣಿಗೆ ಮಾಡಿಯೇ ಮಾಡುತ್ತೇವೆ. ಯಾವ ಸಂದರ್ಭದಲ್ಲಿ, ಯಾವ ವೇದಿಕೆಯಲ್ಲಿ ಉತ್ತರ ಕೊಡಬೇಕೋ ಕೊಡೋಣ ಎಂದರು.

    ಹುಣಸೂರಿನಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಸಂಯಮವನ್ನು ಇಟ್ಟುಕೊಳ್ಳಿ. ಯಾವ ಸಂದರ್ಭದಲ್ಲಿ ಯಾವ ಉತ್ತರ ಕೊಡಬೇಕಾಗುತ್ತೆ ಅದಕ್ಕೆ ಕಾಲ ಪರಿಪಕ್ವವಾಗಬೇಕು. ಆಗ ಅವರಿಗೆ ಉತ್ತರ ಸಿಗುತ್ತದೆ. ಮೆರವಣಿಗೆ ನಡೆಯುವ ಬಗ್ಗೆ ವಿಶ್ವಾಸವಿಡಿ, ಎಲ್ಲರೂ ಒಗ್ಗಾಟ್ಟಾಗಿರಿ ಎಂದು ಘೋಷಣೆ ಕೂಗಿ ಹೇಳಿದ್ರು.

     

  • Exclusive: ಹಿಂದೂಗಳಿಗೆ ಮೋಸ ಮಾಡಿದ್ರಾ ಸಿಎಂ ಸಿದ್ದರಾಮಯ್ಯ?

    Exclusive: ಹಿಂದೂಗಳಿಗೆ ಮೋಸ ಮಾಡಿದ್ರಾ ಸಿಎಂ ಸಿದ್ದರಾಮಯ್ಯ?

    ಸುನೀಲ್ ಜಿಎಸ್
    ಬೆಂಗಳೂರು: ಹನುಮ ಜಯಂತಿ ಆಚರಣೆ ಮಾಡುತ್ತಿದ್ದವರಿಗೆ ಲಾಠಿ ಏಟು ಕೊಟ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದಿಂದ ಹಿಂದೂಗಳಿಗೆ ಮೋಸ ಆಗುತ್ತಿದೆ ಎನ್ನುವ ಗಂಭೀರ ಆರೋಪ ಕೇಳಿ ಬಂದಿದೆ.

    ಹೌದು. ಮಾಹಿತಿ ಹಕ್ಕಿನ ಅಡಿ ಕೇಳಲಾದ ಪ್ರಶ್ನೆಗೆ ಮುಖ್ಯಮಂತ್ರಿಗಳ ಸಚಿವಾಲಯ ನೀಡಿದ ಉತ್ತರದಿಂದಾಗಿ ಆರೋಪ ಕೇಳಿ ಬಂದಿದೆ. ಆರ್ ಟಿಐ ಕಾರ್ಯಕರ್ತ ಭಾಸ್ಕರನ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಮೇಲೆ ಯಾವ ಧರ್ಮದವರಿಗೆ 2017 ಅಕ್ಟೋಬರ್ 31 ರವರೆಗೆ ಎಷ್ಟು ಬಾರಿ ಭೋಜನ/ಉಪಹಾರ ಕೂಟವನ್ನು ಆಯೋಜಿಸಿದ್ದಾರೆ ಎಂದು ಪ್ರಶ್ನೆ ಕೇಳಿದ್ದರು. ಈ ಪ್ರಶ್ನೆಗೆ ಕೇವಲ ಮುಸ್ಲಿಮರಿಗೆ ಹೊರತು ಪಡಿಸಿ ಬೇರೆ ಯಾವುದೇ ಧರ್ಮದವರಿಗೆ ಸಿದ್ದರಾಮಯ್ಯ ಭೋಜನ ಕೂಟವನ್ನು ಆಯೋಜಿಸಿಲ್ಲ ಎಂದು ಸಚಿವಾಲಯ ಉತ್ತರ ನೀಡಿದೆ.

    ಸಚಿವಾಲಯದ ಉತ್ತರ ಇಲ್ಲಿದೆ:
    ಮುಖ್ಯಮಂತ್ರಿಯಾಗಿ 2013 ಮೇ 13ರಂದು ಪ್ರಮಾಣ ವಚನ ಸ್ವೀಕರಿಸಿದ ದಿನದಿಂದ ಇಲ್ಲಿಯವರೆಗೆ ಸಿದ್ದರಾಮಯ್ಯನವರು ಪವಿತ್ರ ರಂಜನ್ ಮಾಸದ ಸಂದರ್ಭದಲ್ಲಿ ಇಫ್ತಿಯಾರ್ ಭೋಜನ ಕೂಟವನ್ನು ಅರಮನೆ ಮೈದಾನದಲ್ಲಿ ಮುಸ್ಲಿಮ್ ಬಾಂಧವರಿಗೆ ಸ್ವಂತ ಖರ್ಚಿನಲ್ಲಿ ಆಯೋಜಿಸಿದ್ದರು. ಇದನ್ನು ಹೊರತು ಪಡಿಸಿ ಮುಸ್ಲಿಮ್ ಸಮುದಾಯದ ಇತರೇ ಹಬ್ಬಗಳ ಸಂದರ್ಭದಲ್ಲಿ ಸರ್ಕಾರಿ ಅಥವಾ ಸ್ವಂತ ವೆಚ್ಚದಲ್ಲಿ ಯಾವುದೇ ಭೋಜನ ಕೂಟವನ್ನು ಆಯೋಜಿಸಿಲ್ಲ. ಅರಮನೆ ಮೈದಾನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಗಣ್ಯ ಮುಸಲ್ಮಾನ ಬಂಧುಗಳು, ರಾಜ್ಯ ಸರ್ಕಾರ ಸಚಿವರು ಹಾಗೂ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

    ಗಾಂಧಿ ಜಯಂತಿ, ಅಂಬೇಡ್ಕರ್ ಜಯಂತಿ, ಮಕ್ಕಳ ದಿನಾಚರಣೆ, ಶಿಕ್ಷಕರ ದಿನಾಚರಣೆ, ಸ್ವಾಮಿ ವಿವೇಕಾನಂದ ಜಯಂತಿ, ಬಸವ ಜಯಂತಿ ಇನ್ನಿತರ ಕಾರ್ಯಕ್ರಮಗಳನ್ನು ಸಂಬಂಧಪಟ್ಟ ಇಲಾಖೆಯವರು ಸರ್ಕಾರದ ವತಿಯಿಂದ ಮಾಡಿರುತ್ತಾರೆ. ಇಲಾಖೆಯ ಆಹ್ವಾನದ ಮೇರೆಗೆ ಈ ಕಾರ್ಯಕ್ರಮದಲ್ಲಿ ಸಿಎಂ ಭಾಗವಹಿಸಿದ್ದಾರೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಅವರು ಭೋಜನ/ ಲಘು ಉಪಹಾರವನ್ನು ಏರ್ಪಾಡು ಮಾಡಿಲ್ಲ.

    ಬೇರೆಯವರಿಗೆ ಯಾಕಿಲ್ಲ?:
    ಸಿದ್ದರಾಮಯ್ಯ ಕರ್ನಾಟಕದ ಮುಖ್ಯಮಂತ್ರಿ. ಇಲ್ಲಿ ಮುಸ್ಲಿಮರು ಮಾತ್ರವಲ್ಲದೇ ಹಿಂದೂಗಳು, ಕ್ರೈಸ್ತರು, ಜೈನರು, ಬೌದ್ಧರು ಹಲವು ಧರ್ಮದವರು ನೆಲೆಸಿದ್ದು ಎಲ್ಲರೂ ತೆರಿಗೆಯನ್ನು ಪಾವತಿಸುತ್ತಾರೆ. ಇವರಿಗೆಲ್ಲ ನೀಡದ ವಿಶೇಷ ಉಪಹಾರ ಕೇವಲ ಮುಸ್ಲಿಮರಿಗೆ ಮಾತ್ರ ನೀಡುತ್ತಿರುವುದು ಯಾಕೆ? ಸಿದ್ದರಾಮಯ್ಯ ಮುಸ್ಲಿಮರಿಗೆ ಮಾತ್ರ ಮುಖ್ಯಮಂತ್ರಿಯೇ? ಭೋಜನ ಕೂಟವನ್ನು ಆಯೋಜಿಸಿದರೆ ಯಾವ ಧರ್ಮದವರಿಗೆ ತಾರತಮ್ಯ ಮಾಡದೇ ಆಯೋಜಿಸಬೇಕು. ಹಿಂದೂಗಳು ಗಣೇಶ ಚತುರ್ಥಿ, ದೀಪಾವಳಿ ಆಚರಿಸುತ್ತಾರೆ. ಕ್ರೈಸ್ತರು ಕ್ರಿಸ್‍ಮಸ್ ಆಚರಿಸುತ್ತಾರೆ. ಆದರೆ ಈ ಸಂದರ್ಭದಲ್ಲಿ ಯಾವುದೇ ಉಪಹಾರ ಕೂಟವನ್ನು ಆಯೋಜಿಸದ ಸಿಎಂ ಸಿದ್ದರಾಮಯ್ಯ ಮುಸ್ಲಿಮರ ವೋಟ್ ಬ್ಯಾಂಕಿಗೆ ಈ ರೀತಿ ಮಾಡುವುದು ಎಷ್ಟು ಸರಿ ಎಂದು ಆರ್ ಟಿಐ ಕಾರ್ಯಕರ್ತ ಭಾಸ್ಕರನ್ ಪ್ರಶ್ನೆ ಮಾಡಿದ್ದಾರೆ.

    ಸರ್ಕಾರವೇ ಟಿಪ್ಪು ಜಯಂತಿ ಆಚರಿಸಲು ಮುಂದಾಗಿದ್ದಕ್ಕೆ ವ್ಯಾಪಕ ವಿರೋಧ ಕೇಳಿ ಬಂದಿತ್ತು. ಈಗ ಹನುಮ ಜಯಂತಿ, ದತ್ತ ಜಯಂತಿ ಕಾರ್ಯಕ್ರಮದ ಮೆರವಣಿಗೆಗೆ ಸರ್ಕಾರ ನಿರ್ಬಂಧ ಹೇರಿದ್ದು ಮತ್ತೊಮ್ಮೆ ವಿವಾದಕ್ಕೆ ಕಾರಣವಾಗಿದೆ. ಈ ನಡುವೆ ಹನುಮ ಜಯಂತಿ ವೇಳೆ ಪಾಲ್ಗೊಂಡಿದ್ದವರನ್ನು ಸರ್ಕಾರ ಕ್ಷಣ ಮಾತ್ರದಲ್ಲೇ ಬಂಧಿಸುತ್ತದೆ. ಹಿಂದೂ ಮುಖಂಡರ ಬಂಧನಕ್ಕೆ ಕ್ಷಣಾರ್ಧದಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಆದರೆ ಹುಬ್ಬಳ್ಳಿಯಲ್ಲಿ ಪಾಕಿಸ್ತಾನ ಪರ ಹೇಳಿಕೆ ನೀಡಿದ ಮೌಲ್ವಿಯನ್ನು ಕೂಡಲೇ ಬಂಧಿಸುವುದಿಲ್ಲ ಯಾಕೆ? ಮತಬ್ಯಾಂಕ್‍ಗಾಗಿ ಹಿಂದುಗಳ ಕಡೆಗಣನೆ ಮಾಡುವುದು ಎಷ್ಟು ಸರಿ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.

    https://youtu.be/HP6PMNpDDbg

  • ಪ್ರತಾಪ್ ಸಿಂಹ ಆರೋಪಕ್ಕೆ ತಿರುಗೇಟು ಕೊಟ್ಟ ಮೈಸೂರು ಎಸ್‍ಪಿ ರವಿ ಡಿ.ಚನ್ನಣ್ಣವರ್

    ಪ್ರತಾಪ್ ಸಿಂಹ ಆರೋಪಕ್ಕೆ ತಿರುಗೇಟು ಕೊಟ್ಟ ಮೈಸೂರು ಎಸ್‍ಪಿ ರವಿ ಡಿ.ಚನ್ನಣ್ಣವರ್

    ಮೈಸೂರು: ಹುಣಸೂರು ಹನುಮ ಜಯಂತಿ ಮೆರವಣಿಗೆ ಗೊಂದಲ ವಿಚಾರಕ್ಕೆ ಸಂಬಂಧಿಸಿದಂತೆ ಸಂಸದ ಪ್ರತಾಪ್ ಸಿಂಹ ಪೊಲೀಸ್ ಅಧಿಕಾರಿಗಳ ಮೇಲೆ ಮಾಡಿರುವ ಆರೋಪವನ್ನು ಎಸ್‍ಪಿ ರವಿ ಚೆನ್ನಣ್ಣನವರ್ ತಿರಸ್ಕರಿಸಿ, ನಾನು ಯಾರ ಆಳು ಅಲ್ಲ. ಕಾನೂನು ಮತ್ತು ಕರ್ತವ್ಯಕ್ಕೆ ಆಳು ಎಂದು ಹೇಳಿಕೆ ನೀಡಿದ್ದಾರೆ.

    ಈ ಬಗ್ಗೆ ಪಬ್ಲಿಕ್ ಟಿವಿಗೆ ಸ್ಪಷ್ಟನೆ ನೀಡಿರುವ ಎಸ್‍ಪಿ ರವಿ ಚೆನ್ನಣ್ಣನವರ್, ಮಾನ್ಯ ಸಂಸದರ ಬಗ್ಗೆ ಅಪಾರ ಗೌರವವಿದೆ, ಅವರ ಆರೋಪಗಳು ಸತ್ಯಕ್ಕೆ ದೂರವಾಗಿದ್ದು, ಯಾರ ಪರ ಅಥವಾ ವಿರೋಧವಾಗಿ ಕಾರ್ಯನಿರ್ವಹಿಸುತ್ತಿಲ್ಲ. ನಾವು ಸತ್ಯ ಹಾಗೂ ನ್ಯಾಯದ ಪರ ನಿಷ್ಪಕ್ಷಪಾತ ಹಾಗೂ ಪಾರದರ್ಶಕವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ತಿಳಿಸಿದರು.

    ಒಂದು ವೇಳೆ ನನ್ನ ವಿರುದ್ಧ ಅಂತಹ ಅನುಮಾನ ಶಂಕೆ ಇದ್ದರೆ ನನ್ನ ಮೇಲೆ ಒಂದು ವ್ಯವಸ್ಥೆ ಇದೆ. ಹಿರಿಯ ಅಧಿಕಾರಿಗಳು, ಜಿಲ್ಲಾಡಳಿತ ವ್ಯವಸ್ಥೆ ಇದ್ದು ಅಲ್ಲಿ ದೂರು ನೀಡಬಹುದು. ನಾನೇ ಅಂತಿಮನಲ್ಲ. ಯಾವ ಘಟನೆಯಲ್ಲಿ ಈ ರೀತಿ ಪಕ್ಷಪಾತವಾಗಿದೆ ಎಂಬುವುದನ್ನು ಸಂಸದರು ಸ್ಪಷ್ಟಪಡಿಸಬೇಕು. ಯಾರಿಗೆ ಅನ್ಯಾಯವಾಗಿದ್ದರೂ ಪರಿಹಾರ ಸಿಗುತ್ತದೆ. ಸಂಸದರ ಆರೋಪಗಳು ಅವರ ನನ್ನ ನಡುವಿನ ಸಣ್ಣ ಸಂವಹನ ಕೊರತೆಯಿಂದ ಉಂಟಾಗಿದೆ. ಈ ಕುರಿತು ಸ್ವತಃ ನಾನೇ ಕರೆಮಾಡಿ ಮಾತನಾಡುತ್ತೇನೆ ಎಂದರು.

    ಇನ್ನೂ ಭಾಷಣ ಮಾಡುವ ಕುರಿತ ಟೀಕೆಗೆ ಉತ್ತರಿಸಿದ ಅವರು, ನಾನು ಭಾಷಣ ಮಾಡುವುದು ಕಾನೂನು, ಕೋರ್ಟ್, ಅಧಿಕಾರಿಗಳು, ಪ್ರಜಾಪ್ರಭುತ್ವ, ಪೊಲೀಸ್ ಪೇದೆ ಕರ್ತವ್ಯಗಳ ಅರಿವು ಯಾರಿಗೆ ಇರುವುದಿಲ್ಲವೋ ಅವರ ತಿಳುವಳಿಕೆ ನೀಡಲು ನಾನು ಮಾತನಾಡುತ್ತೇನೆ. ಇದು ನನ್ನ ರಾಷ್ಟ್ರೀಯ ಕರ್ತವ್ಯವಾಗಿದೆ ಎಂದು ತಿಳಿಸಿದರು.

    ಇದುವರೆಗೂ ಹಿರಿಯ ಅಧಿಕಾರಿಗಳ ನಿರ್ದೇಶನ ಹಾಗೂ ಮಾರ್ಗದರ್ಶನದ ಮೂಲಕ ಕಾರ್ಯನಿರ್ವಹಿಸಿದ್ದೇವೆ, ಆದರೆ ಸಂಸದರು ಹೇಳಿರುವ ಒಂದು ಸತ್ಯವನ್ನು ನಾನು ಒಪ್ಪಿಕೊಳ್ಳುತ್ತೇನೆ. ನಾನು ಕಲಿಯುವುದು ಇನ್ನು ಇದೆ. ಅವರಿಂದಲೂ ನಾನು ಸಾಕಷ್ಟು ಕಲಿಯುವುದು ಇದೆ. ನನ್ನ ಪೊಲೀಸ್ ವೃತ್ತಿ ಜೀವನದ ಉದ್ದಕ್ಕೂ ಕಲಿಯುತ್ತೇನೆ. ನಾನು ಪರಿಪೂರ್ಣನಲ್ಲ, ಪೊಲೀಸ್ ಇಲಾಖೆಯಲ್ಲಿ 20 ರಿಂದ 30 ವರ್ಷ ಪೇದೆಯಾಗಿ, ಎಎಸ್‍ಐ ಆಗಿ ಕಾರ್ಯನಿರ್ವಹಿಸಿದ ವ್ಯಕ್ತಿಯಿಂದಲೂ ಕಲಿಯುತ್ತೇನೆ. ಗುಲ್ಬರ್ಗ, ಮೈಸೂರು, ಬೆಳಗಾವಿ, ಶಿವಮೊಗ್ಗ ಪ್ರತಿ ಸ್ಥಳದಲ್ಲಿ ಕೆಲಸ ಮಾಡುವ ವೇಳೆಯೂ ಹಲವರು ಒಳ್ಳೆ ವ್ಯಕ್ತಿಗಳಿಂದ ಉತ್ತಮ ಅಂಶಗಳನ್ನು ಕಲಿಯುತ್ತಿದ್ದೇನೆ ಎಂದು ಹೇಳಿದರು. ( ಇದನ್ನೂ ಓದಿ: ಎಸ್‍ಪಿ ರವಿ ಚೆನ್ನಣ್ಣನವರ್ ಗೆ ಸಂಸದ ಪ್ರತಾಪ್ ಸಿಂಹ ಪರೋಕ್ಷ ಟಾಂಗ್ )

    ಸಂಸದರನ್ನು ಕೂಡಲೇ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿಲ್ಲ ಯಾಕೆ ಎಂದು ಪ್ರಶ್ನಿಸಿದ್ದಕ್ಕೆ, ಪ್ರಕರಣದ ಕುರಿತು ತನಿಖೆ ನಡೆಸಲು ತನಿಖಾಧಿಕಾರಿಗಳಿದ್ದಾರೆ. ಯಾವುದೇ ವ್ಯಕ್ತಿಯನ್ನು ಬಂಧಿಸಿದ ನಂತರ ಆರೋಗ್ಯ ತಪಾಸಣೆ ಸೇರಿದಂತೆ ಹಲವು ಕಾನೂನು ಕ್ರಮಗಳಿರುತ್ತವೆ. ಅವುಗಳನ್ನು ಪೂರ್ಣಗೊಳಿಸಲು ಸಾಕಷ್ಟು ಸಮಯ ಬೇಕಾಗುತ್ತದೆ ಎಂದರು.

    ಹುಣಸೂರು ಹನುಮ ಜಯಂತಿ ಮೆರವಣಿಗೆ ಗೊಂದಲ ವಿಚಾರಕ್ಕೆ ಸಂಬಂಧಿಸಿದಂತೆ ಸಂಸದ ಎಸ್‍ಪಿ ರವಿ ಚೆನ್ನಣ್ಣನವರ್ ಗೆ ಸಂಸದ ಪ್ರತಾಪ್ ಸಿಂಹ ಟ್ವೀಟ್ ಮಾಡಿದ್ದರು. ಆಳುವವರ ಅಣತಿ ಮೀರುವ ಹಾಗಿಲ್ಲ ಅಲ್ವಾ ಸಾರ್ ಅಂತ ಟ್ವಿಟರ್‍ನಲ್ಲಿ ಎಸ್‍ಪಿ ಗೆ ಪರೋಕ್ಷವಾಗಿ ಪ್ರಶ್ನೆ ಮಾಡಿದ್ದರು. ಅಲ್ಲದೇ ಕನಿಷ್ಠ ಖಡಕ್ ಅಧಿಕಾರಿಗಳೆಂಬ ಸೋಗು ಬಿಟ್ಟು ಅಳುವ ಪಕ್ಷದ ಆಳುಗಳು ಎನ್ನುವುದನ್ನು ಒಪ್ಪಿಕೊಳ್ಳಿ. ದತ್ತ ಜಯಂತಿಗೆ ಸಕಲ ವ್ಯವಸ್ಥೆ ಮಾಡಿದ ಎಸ್.ಪಿ ಅಣ್ಣಾಮಲೈ, ಸರ್ಕಾರವನ್ನು ಎದುರು ಹಾಕಿಕೊಂಡ ಡಿಐಜಿ ರೂಪಾ, ಮೆಡಿಕಲ್ ಸೀಟ್ ಬ್ಲಾಕಿಂಗ್ ಹಗರಣ ತಡೆದ ಐಎಎಸ್ ರಶ್ಮಿ ನೋಡಿ ಕಲಿಯಿರಿ. ಭಾಷಣ ನಿಲ್ಲಿಸಿ ಅಂತ ಟ್ವೀಟ್ ಮಾಡಿದ್ದಾರೆ. ನನ್ನ ರಾಜಕೀಯ ಭವಿಷ್ಯಕ್ಕಿಂತ ನನ್ನ ಧರ್ಮ, ಸಂಪ್ರದಾಯ ರಕ್ಷಣೆ ನನಗೆ ಮುಖ್ಯ ಅಂತ ಪ್ರತಾಪ್ ಸಿಂಹ ಹೇಳಿದ್ದರು.  ( ಇದನ್ನೂ ಓದಿ: ನಾನು ಕಾನೂನು ಉಲ್ಲಂಘಿಸಿಲ್ಲ, ಜಿಲ್ಲಾಡಳಿತ, ಪೊಲೀಸರಿಂದಲೇ ತಪ್ಪಾಗಿದೆ: ಪ್ರತಾಪ್ ಸಿಂಹ )

    https://www.youtube.com/watch?v=26wWJftihNg

    https://www.youtube.com/watch?v=yzTzIO0gaXM