Tag: hanu raghavapudi

  • ನಟಿ ಮೃಣಾಲ್ ಠಾಕೂರ್ ಗೆ ಮತ್ತೊಂದು ಬಿಗ್ ಆಫರ್

    ನಟಿ ಮೃಣಾಲ್ ಠಾಕೂರ್ ಗೆ ಮತ್ತೊಂದು ಬಿಗ್ ಆಫರ್

    ಸೀತಾ ರಾಮಂ ಖ್ಯಾತಿಯ ಜೋಡಿ ಮತ್ತೆ ಒಂದಾಗಲು ಸಜ್ಜಾಗಿದೆ. ಚಿತ್ರದ ನಿರ್ದೇಶಕ ಹನು ರಾಘವಪುಡಿ ಹಾಗೂ ನಾಯಕಿ ಮೃಣಾಲ್ ಠಾಕೂರ್ ಇಬ್ಬರೂ ಒಟ್ಟಾಗಿ ಮತ್ತೊಂದು ಚಿತ್ರಕ್ಕೆ ಕೆಲಸ ಮಾಡಲಿದ್ದಾರೆ. ಈ ಚಿತ್ರಕ್ಕೆ ಪ್ರಭಾಸ್ ನಾಯಕ. ಇದೇ ಮೊದಲ ಬಾರಿಗೆ ಪ್ರಭಾಸ್ ಜೊತೆ ಮೃಣಾಲ್ ನಟಿಸುತ್ತಿರುವುದು ವಿಶೇಷ.

    ಮೃಣಾಲ್ ಠಾಕೂರ್ (Mrunal Thakur ಈ ಹಿಂದೆ ಮತ್ತೊಂದು ಬಂಪರ್ ಚಾನ್ಸ್ ಗಿಟ್ಟಿಸಿಕೊಂಡಿದ್ದರು. ‘ಹಾಯ್ ನಾನ್ನಾಚಿತ್ರದ ಸಕ್ಸಸ್ ನಂತರ ಐಕಾನ್ ಸ್ಟಾರ್ ಜೊತೆ ಮೃಣಾಲ್ ರೊಮ್ಯಾನ್ಸ್ ಮಾಡಲು ಸಜ್ಜಾಗಿದ್ದಾರೆ. ‘ಪುಷ್ಪಚಿತ್ರದ ನಂತರ ಸೂಪರ್ ಸ್ಟಾರ್ ಆಗಿ ಮಿಂಚುತ್ತಿರುವ ಅಲ್ಲು ಅರ್ಜುನ್ ಜೊತೆ ನಟಿಸಬೇಕು ಎಂಬುದು ಎಲ್ಲಾ ನಟಿಮಣಿಯರ ಕನಸಾಗಿದೆ. ಹೀಗಿರುವಾಗ ಅಲ್ಲು ಅರ್ಜುನ್ ಜೊತೆ ನಟಿಸುವ ಗೋಲ್ಡನ್ ಚಾನ್ಸ್ ಮೃಣಾಲ್ಗೆ ಸಿಕ್ಕಿದೆ. ‘ಅನಿಮಲ್‘ (Animal) ಚಿತ್ರದ ಸ್ಟಾರ್ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ (Sandeep Reddy Vanga) ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ.

    ಅರ್ಜುನ್ ರೆಡ್ಡಿ, ಕಬೀರ್ ಸಿಂಗ್, ಅನಿಮಲ್ ಸಕ್ಸಸ್ ನಂತರ ಸಂದೀಪ್ ರೆಡ್ಡಿ ವಂಗಾ ಈಗ ಪ್ರಭಾಸ್ (Prabhas) ನಟನೆಯಸ್ಪಿರಿಟ್ಚಿತ್ರಕ್ಕೆ ನಿರ್ದೇಶನ ಮಾಡಲಿದ್ದಾರೆ. ಇದರ ಜೊತೆ ಅಲ್ಲು ಅರ್ಜುನ್ (Allu Arjun) ಜೊತೆ ಹೊಸ ಸಿನಿಮಾ ಮಾಡಲು ಮಾತುಕತೆಯಾಗಿದೆ. ಚಿತ್ರಕ್ಕೆ ಮೃಣಾಲ್ ನಾಯಕಿ ಎಂದು ಸಂದೀಪ್ ಅಧಿಕೃತ ಮಾಹಿತಿ ನೀಡಿದ್ದಾರೆ.

    ಅನಿಮಲ್ ಪಾರ್ಟ್ 2′ಗೆ ಕೂಡ ತೆರೆಮರೆಯಲ್ಲಿ ಭಾರೀ ಸಿದ್ಧತೆ ನಡೆಯುತ್ತಿದೆ. ಅಲ್ಲು ಅರ್ಜುನ್ ಜೊತೆ ಸಂದೀಪ್ ಕೈಜೋಡಿಸಿರೋದ್ರಿಂದ ಸಿನಿಮಾ ಬಗ್ಗೆ ಹೆಚ್ಚಿನ ನಿರೀಕ್ಷೆಯಿದೆ. ಮೊದಲ ಬಾರಿಗೆ ಅಲ್ಲು ಅರ್ಜುನ್ ಮತ್ತು ಮೃಣಾಲ್ ಜೋಡಿಯಾಗುತ್ತಿದ್ದಾರೆ.

     

    ಸಂದೀಪ್ ನಿರ್ದೇಶನ ಮಾಡ್ತಿದ್ದಾರೆ ಅಂದರೆ ಅಲ್ಲಿ ಆ್ಯಕ್ಷನ್ ಸೀನ್ಗಳಿಗೆ ಕೊರತೆ ಇರಲ್ಲ. ಅಲ್ಲು ಅರ್ಜುನ್ ಮತ್ತು ಮೃಣಾಲ್ ಕೆಮಿಸ್ಟ್ರಿ ಮತ್ತು ಕಥೆಯನ್ನು ಯಾವ ರೀತಿ ತೆರೆಯ ಮೇಲೆ ಸಂದೀಪ್ ಪ್ರಸೆಂಟ್ ಮಾಡ್ತಾರೆ ಎಂಬುದರ ಬಗ್ಗೆ ಫ್ಯಾನ್ಸ್ಗೆ ಕೌತುಕ ಮೂಡಿಸಿದೆ.

  • `ಸೀತಾರಾಮಂ’ ನಿರ್ದೇಶಕನ ಹೊಸ ಚಿತ್ರಕ್ಕೆ ಜ್ಯೂ.ಎನ್‌ಟಿಆರ್ ಸಾಥ್

    `ಸೀತಾರಾಮಂ’ ನಿರ್ದೇಶಕನ ಹೊಸ ಚಿತ್ರಕ್ಕೆ ಜ್ಯೂ.ಎನ್‌ಟಿಆರ್ ಸಾಥ್

    ವರ್ ಸ್ಟಾರ್ ಪುನೀತ್ ರಾಜ್‌ಕುಮಾರ್‌ಗೆ(Puneeth Rajkumar) ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿಯನ್ನ ನೀಡಲಾಯಿತು. ಈ ಸಮಾರಂಭದಲ್ಲಿ ಅಪ್ಪು ಸ್ನೇಹಿತನಾಗಿ ಬೆಂಗಳೂರಿಗೆ ಬಂದು ಕಾರ್ಯಕ್ರಮಕ್ಕೆ ಸಾಥ್ ನೀಡಿದ್ದರು. ಈ ಬೆನ್ನಲ್ಲೇ ಜ್ಯೂ.ಎನ್‌ಟಿಆರ್ (Jr.Ntr) ಹೊಸ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.

    ಪುನೀತ್ ಸಾಧನೆ ಮತ್ತು ಸಮಾಜಮುಖಿ ಕಾರ್ಯವನ್ನ ನೋಡಿ, ಅಪ್ಪುಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ನೀಡಲಾಯಿತು. ಪುನೀತ್ ಮೇಲಿನ ಪ್ರೀತಿಗಾಗಿ ಟಾಲಿವುಡ್ ನಟ ಜ್ಯೂ.ಎನ್‌ಟಿಆರ್ ಬೆಂಗಳೂರಿಗೆ ಆಗಮಿಸಿ, ಈ ಸಂಭ್ರಮಕ್ಕೆ ಸಾಕ್ಷಿಯಾಗಿದ್ದರು. ಅಪ್ಪು ಮೇಲಿನ ತಾರಕ್ ಪ್ರೀತಿ, ಕನ್ನಡದ ಮೇಲಿರುವ ಅಭಿಮಾನ ಕಂಡು ಫ್ಯಾನ್ಸ್ ಕೂಡ ಫಿದಾ ಆಗಿದ್ದರು. ಬೆಂಗಳೂರಿಂದ ಹಿಂದಿರುಗಿದ ಬೆನ್ನಲ್ಲೇ `ಸೀತಾರಾಮಂ'(Seetharamam) ನಿರ್ದೇಶಕನ ಜೊತೆ ತಾರಕ್ ಕೈ ಜೋಡಿಸಿದ್ದಾರೆ.

    `ಆರ್‌ಆರ್‌ಆರ್’ ಸೂಪರ್ ಸಕ್ಸಸ್ ನಂತರ ಇದೀಗ ಮತ್ತೊಂದು ಹೊಸ ಪ್ರಾಜೆಕ್ಟ್ಗೆ ಓಕೆ ಎಂದಿದ್ದಾರೆ. ಸೀತಾರಾಮಂ ನಿರ್ದೇಶಕನ ಹನು ರಾಘವಪುಡಿ ಜೊತೆ ಹೊಸ ಚಿತ್ರ ಮಾಡಲಿದ್ದಾರೆ. ಒಂದು ಸುತ್ತಿನ ಚರ್ಚೆಯಾಗಿತ್ತು. ಸದ್ಯದಲ್ಲೇ ಚಿತ್ರದ ಕುರಿತು ಅಧಿಕೃತ ಅಪ್‌ಡೇಟ್ ನೀಡಲಿದ್ದಾರೆ. ಇದನ್ನೂ ಓದಿ:ಅನುಪಮಾ ಗೌಡ ವಿರುದ್ಧ ಸಿಡಿದೆದ್ದ ರೂಪೇಶ್‌ ರಾಜಣ್ಣ

    ಅಂದ್ಹಾಗೆ, ದುಲ್ಕರ್ ಮತ್ತು ಮೃಣಾಲ್ ನಟನೆಯ `ಸೀತಾರಾಮಂ’ ಈ ವರ್ಷದ ಸೂಪರ್ ಹಿಟ್ ಚಿತ್ರವಾಗಿದ್ದು, ಇದೀಗ ಈ ಚಿತ್ರದ ನಿರ್ದೇಶಕನ ಜೊತೆ ತಾರಕ್‌ ಸಾಥ್‌ ನೀಡಿದ್ದಾರೆ. ಹನು ರಾಘವಪುಡಿ ಡೈರೆಕ್ಷನ್‌ನಲ್ಲಿ ಯಂಗ್‌ ಟೈಗರ್‌ ತಾರಕ್‌ ನಟನೆ ಮಾಡಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]