Tag: hanpur case

  • ಆರು ದಿನ ಕಳೆದ್ರೂ ಪತ್ತೆಯಾಗದ ಅತ್ಯಾಚಾರಿ- ಸುಳಿವು ನೀಡಿದ್ರೆ ಬಹುಮಾನ

    ಆರು ದಿನ ಕಳೆದ್ರೂ ಪತ್ತೆಯಾಗದ ಅತ್ಯಾಚಾರಿ- ಸುಳಿವು ನೀಡಿದ್ರೆ ಬಹುಮಾನ

    -ಜೀವನ್ಮರಣ ಹೋರಾಟದಲ್ಲಿ 6 ವರ್ಷದ ಕಂದಮ್ಮ

    ಲಕ್ನೋ: ಉತ್ತರ ಪ್ರದೇಶದ ಹಾಪುಡ ಪ್ರಕರಣದ ಪ್ರಮುಖ ಆರೋಪಿ ಇದುವರೆಗೂ ಪೊಲೀಸರ ಕೈಗೆ ಸಿಕ್ಕಿಲ್ಲ. ಈಗಾಗಲೇ ಆರೋಪಿಯ ರೇಖಾಚಿತ್ರವನ್ನು ಪೊಲೀಸರು ಬಿಡುಗಡೆ ಮಾಡಿ, ಸಾರ್ವಜನಿಕರ ಸಹಕಾರ ಕೇಳಿದ್ದರು.

    ಆರು ದಿನ ಕಳೆದರೂ ಆರೋಪಿ ಪತ್ತೆಯಾಗದ ಹಿನ್ನೆಲೆಯಲ್ಲಿ ಕಾಮುಕನ ಸುಳಿವು ನೀಡಿದವರಿಗೆ 50 ಸಾವಿರ ರೂಪಾಯಿ ನಗದು ಬಹುಮಾನ ನೀಡಲಾಗುವುದು ಎಂದು ಪೊಲೀಸರು ಪ್ರಕಟನೆ ಹೊರಡಿಸಿದ್ದಾರೆ. ಪೊಲೀಸರು ಆರೋಪಿಯ ಬಂಧನಕ್ಕಾಗಿ ವಿಶೇಷ ಬಲೆ ಬೀಸಿದ್ದಾರೆ. ಇದನ್ನೂ ಓದಿ:  6ರ ಕಂದಮ್ಮನ ಅತ್ಯಾಚಾರಗೈದ ಕಾಮುಕರ ಸ್ಕೆಚ್ ಬಿಡುಗಡೆ

    ಆರೋಪಿಯನ್ನು ರೋಹತಾಶ್ ನಿವಾಲಿ ಎಂದು ಗುರುತಿಸಲಾಗಿದೆ. ಆರೋಪಿಯ ಸುಳಿವು ನೀಡಿದವರ ಹೆಸರನ್ನು ಗೌಪ್ಯವಾಗಿರಿಸಲಾಗುವುದು. ಘಟನೆ ನಡೆದ ಇಲಾಖೆಯ ಗಲ್ಲಿ ಗಲ್ಲಿಗಳಲ್ಲಿಯೂ ಪೊಲೀಸರು ಶೋಧ ನಡೆಸಿದ್ದಾರೆ. ಇನ್ನು ಅತ್ಯಾಚಾರಕ್ಕೊಳಗಾದ ಕಂದಮ್ಮ ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದೆ ಎಂದು ವರದಿಯಾಗಿದೆ.