Tag: HamsaLekha

  • ಗುರುಗಳ ಮೇಲಿನ ಅಭಿಮಾನದಿಂದ ಯಾರಾದ್ರೂ ಪ್ರತಿಭಟಿಸಿದ್ರೆ ಅದು ಅವರ ವೈಯಕ್ತಿಕ ವಿಚಾರ: ಪೇಜಾವರಶ್ರೀ

    ಗುರುಗಳ ಮೇಲಿನ ಅಭಿಮಾನದಿಂದ ಯಾರಾದ್ರೂ ಪ್ರತಿಭಟಿಸಿದ್ರೆ ಅದು ಅವರ ವೈಯಕ್ತಿಕ ವಿಚಾರ: ಪೇಜಾವರಶ್ರೀ

    ಉಡುಪಿ: ಗುರುಗಳ ಮೇಲಿರುವ ಅಭಿಮಾನದಿಂದ ಯಾರಾದರೂ ಪ್ರತಿಭಟಿಸಿದರೆ ಅದು ಅವರವರ ವೈಯಕ್ತಿಕ ವಿಚಾರ. ನಾವಂತೂ ಯಾವುದೇ ಪ್ರತಿಭಟನೆ ನಡೆಸುವುದಿಲ್ಲ ಎಂದು ಪೇಜಾವರ ಶ್ರೀ ಹೇಳಿದ್ದಾರೆ.

    ಹಂಸಲೇಖ ಟೀಕೆಗೆ ಉತ್ತರಿಸಿದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಪದ್ಮವಿಭೂಷಣ ಪ್ರಶಸ್ತಿ ಬಂದಿರುವುದು ನನ್ನ ಗುರುಗಳಿಗೆ. ಹಂಸಲೇಖ ಅವರು ನನ್ನ ಗುರುಗಳನ್ನೇ ಟೀಕಿಸಿರಬೇಕು. ಇಂತಹ ಮಾತು ಹಂಸಲೇಖ ಬಾಯಿಂದ ಬರಬಾರದಿತ್ತು. ಸಮಾಜ ಅವರನ್ನು ಎತ್ತರದಲ್ಲಿ ಇರಿಸಿ ಗೌರವಿಸುತ್ತದೆ ಎಂದರು.

    ಪ್ರಚಾರಕ್ಕೋಸ್ಕರ ಸಾಕಷ್ಟು ಮಂದಿ ಹೀಗೆ ಮಾಡುತ್ತಾರೆ. ಹಂಸಲೇಖ ಅವರಿಗೆ ಇದರಿಂದ ಪ್ರಚಾರ ಬೇಕಾಗಿರಲಿಲ್ಲ. ಶ್ರೀ ಕೃಷ್ಣನಿಗೆ ಅಗ್ರಪೂಜೆ ನೀಡುವಾಗ ಶಿಶುಪಾಲನೂ ಇದೇ ರೀತಿ ವಿರೋಧಿಸಿದ್ದ. ಶಿಶುಪಾಲನಿಗೆ ಕೃಷ್ಣನೇ ತಕ್ಕಶಾಸ್ತಿ ಮಾಡಿದ್ದ. ನನ್ನ ಗುರುಗಳು ಸಮಾಜದ ಎಲ್ಲರ ಹೃದಯದಲ್ಲಿ ಕೃಷ್ಣನನ್ನು ಕಂಡವರು. ಆದ್ದರಿಂದಲೇ ಅವರು ದಲಿತರ ಕೇರಿಗೂ ಹೋಗುತ್ತಿದ್ದರು ಎಂದು ಹೇಳಿದರು. ಇದನ್ನೂ ಓದಿ: ದಲಿತರು ಕೋಳಿ ಕೊಟ್ಟರೆ ತಿನ್ನುತ್ತಾರಾ?: ಕ್ಷಮೆ ಕೇಳಿದ ಹಂಸಲೇಖ

    ನೆರೆಹಾವಳಿ ಭೂಕಂಪ ಆದಾಗಲೂ ಭೇಟಿ ನೀಡುತ್ತಿದ್ದರು. ಸಮಾಜದ ಎಲ್ಲರ ಉದ್ಧಾರವನ್ನು ವಿಶ್ವೇಶತೀರ್ಥರು ಬಯಸಿದ್ದರು. ಗುರುಗಳು ಜನರ ಹೃದಯದಲ್ಲಿ ಯಾವ ಕೃಷ್ಣನನ್ನು ಕಂಡಿದ್ದರೋ ಆ ಕೃಷ್ಣನೇ ಅದಕ್ಕೆ ಬೇಕಾದ ಪ್ರತಿಕಾರ ಮಾಡುತ್ತಾನೆ. ನಮ್ಮ ಉದ್ದೇಶ ಪ್ರಾಮಾಣಿಕವಾಗಿದೆ. ಯಾರೋ ಏನೋ ಅಂದ ಮಾತ್ರಕ್ಕೆ ನಮ್ಮ ಕೆಲಸ ನಿಲ್ಲಿಸುವುದಿಲ್ಲ. ಯಾರ ಹೊಗಳಿಕೆಗೂ ನಾವು ಈ ಕೆಲಸವನ್ನು ಮಾಡಿದ್ದಲ್ಲ. ದಲಿತರ ಜೊತೆ ನಾವು ಇದ್ದೇವೆ ದಲಿತರು ನಮ್ಮಿಂದ ಹೊರತಲ್ಲ. ಈ ಐಕ್ಯ ಸಂದೇಶ ನೀಡುವ ಸಲುವಾಗಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ ಎಂದು ತಿರುಗೇಟು ನೀಡಿದರು.

  • ರಸ್ತೆ ಗುಂಡಿ ಮುಚ್ಚಿದ ಸಂಗೀತ ಮಾಂತ್ರಿಕ ಹಂಸಲೇಖ!

    ರಸ್ತೆ ಗುಂಡಿ ಮುಚ್ಚಿದ ಸಂಗೀತ ಮಾಂತ್ರಿಕ ಹಂಸಲೇಖ!

    ಬೆಂಗಳೂರು: ಲಾಕ್‍ಡೌನ್ ಸಮಯದಲ್ಲಿ ಸಂಗೀತ ಮಾಂತ್ರಿಕ ಹಂಸಲೇಖ ಅವರು ರಸ್ತೆ ಗುಂಡಿ ಮುಚ್ಚಿ ಸಾಮಾಜಿಕ ಕಾಳಜಿ ಮೆರೆದಿದ್ದಾರೆ.

    ಮಹಾಲಕ್ಷ್ಮೀ ಲೇಔಟ್‍ನಲ್ಲಿರುವ ಹಂಸಲೇಖ ಅವರ ಮನೆ ಪಕ್ಕದಲ್ಲಿರುವ ಪಾರ್ಕಿಗೆ ಬಿಬಿಎಂಪಿಯವರು ಪೈಪ್ ಲೈನ್ ಹಾಕಲು ರಸ್ತೆಯಲ್ಲಿ ಗುಂಡಿ ತೆಗೆದಿದ್ದರು. ಕಾಮಗಾರಿ ಮುಗಿದ ಬಳಿಕ ಮಣ್ಣು ಹಾಕಲಾಗಿತ್ತು. ಆದರೆ ಗುಂಡಿ ಹಾಗೆ ಉಳಿದಿದ್ದರಿಂದ ಸವಾರರಿಗೆ ಕಿರಿಕಿರಿ ಉಂಟಾಗಿತ್ತು. ಅಷ್ಟೇ ಅಲ್ಲದೆ ಅಪಾಯ ಸಂಭವಿಸುವ ಸಾಧ್ಯತೆ ಇತ್ತು.

    ರಸ್ತೆಯಲ್ಲಿ ಗುಂಡಿ ಇರುವುದನ್ನು ಗಮನಿಸಿದ ಹಂಸಲೇಖ ಅವರು ತಲೆಗೆ ವಸ್ತ್ರ ಸುತ್ತಿಕೊಂಡು, ಸ್ವತಃ ಸಲಿಕೆ, ಪುಟ್ಟಿ ಹಿಡಿದು ಜಲ್ಲಿ ತುಂಬಿ ಗುಂಡಿಗೆ ಹಾಕಿದ್ದಾರೆ. ಬಳಿಕ ಕಲ್ಲಿನ ಪುಡಿ ಹಾಕಿ, ನೀರು ಬಿಟ್ಟು ಗುಂಡಿಗಳನ್ನು ಸಂಪೂರ್ಣವಾಗಿ ಮುಚ್ಚಿದ್ದಾರೆ. ಹಂಸಲೇಖ ಅವರ ಈ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಸಿನಿಮಾ ನಟ, ನಟಿಯರು, ಸೆಲೆಬ್ರಿಟಿಗಳು, ಆಟಗಾರರು ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಹಂಸಲೇಕ ಅವರು ಕೊರೊನಾ ವೈರಸ್ ವಿಚಾರವಾಗಿ ಸಾಹಿತ್ಯ ಬರೆದು, ಸಂಗೀತ ಸಂಯೋಜನೆ ಮಾಡಿದ್ದರು. ಈ ಹಾಡಿನಲ್ಲಿ ನಾದಬ್ರಹ್ಮ ಕೊರೊನಾ ವೈರಸ್ ಅನ್ನು ತರಾಟೆ ತೆಗೆದುಕೊಂಡಿದ್ದರು.

    ‘ಮಕ್ಕಳೇ, ಭಯಪಡಬೇಡಿ ಕೊರೊನಾ ವೈರಸ್ ಒಂದು ರೋಗ, ಕ್ರಿಮಿ, ಅದೊಂದು ವೈರಸ್. ಈ ರೀತಿಯ ವೈರಸ್‍ಗಳು ಈಗಾಗಲೇ ಹಲವು ಬಂದಿವೆ. ಈ ರೀತಿಯ ವೈರಸ್‍ಗಳು ಭೂಮಿಗೆ ಎಷ್ಟೋ ಬಂದಿವೆ, ಹೋಗಿವೆ. ಹಾಗೆಯೇ ಈ ವೈರಸ್ ಕೂಡ ಹೋಗುತ್ತವೆ. ಈ ಕೊರೊನಾ ವೈರಸ್‍ಗೆ ಸೆಂಡಪ್ ಮಾಡೋಣ, ಬೈ ಬೈ ಹೇಳೋಣ’ ಎಂದು ಹಂಸಲೇಖ ಹೇಳಿದ್ದರು.

  • ಹಂಸಲೇಖ ಕಳಿಸಿದ ಮೆಸೇಜ್‍ನಿಂದ ಸ್ಫೂರ್ತಿ ಬಂತು: ಅರ್ಜುನ್ ಜನ್ಯ

    ಹಂಸಲೇಖ ಕಳಿಸಿದ ಮೆಸೇಜ್‍ನಿಂದ ಸ್ಫೂರ್ತಿ ಬಂತು: ಅರ್ಜುನ್ ಜನ್ಯ

    ಬೆಂಗಳೂರು: ಮ್ಯಾಜಿಕಲ್ ಮ್ಯೂಸಿಕ್ ಕಂಪೋಸರ್ ಅರ್ಜುನ್ ಜನ್ಯ ಗುಣಮುಖರಾಗಿ ರಿಯಾಲಿಟಿ ಶೋಗೆ ಕಂ ಬ್ಯಾಕ್ ಮಾಡಿದ್ದಾರೆ. ಅರ್ಜುನ್ ಜನ್ಯ ನೆಚ್ಚಿನ ಸಂಗೀತ ಕಾರ್ಯಕ್ರಮ ಸರಿಗಮಪ ಶೋಗೆ ಎಂಟ್ರಿ ಕೊಟ್ಟಿದ್ದಕ್ಕೆ ಸಂಭ್ರಮಾಚರಣೆಯನ್ನೇ ಮಾಡಿದ್ದಾರೆ.

    ಈ ವೇಳೆ ಅರ್ಜುನ್ ಜನ್ಯ ಆಸ್ಪತ್ರೆ ದಿನಗಳನ್ನು ನೆನೆದಿದ್ದು, ನಾನು ಆಸ್ಪತ್ರೆ ಸೇರಿದಾಗ ಎಲ್ಲರೂ ನನ್ನನ್ನು ಮಗನಂತೆ ಕಂಡಿರಿ, ನಾನು ತಂದೆ ಕಳೆದುಕೊಂಡು 25 ರಿಂದ 26 ವರ್ಷಗಳಾಯಿತು. ಆದರೆ ವಿಜಯ್ ಪ್ರಕಾಶ್ ಹಾಗೂ ರಾಜೇಶ್ ಕೃಷ್ಣನ್ ಅವರಲ್ಲಿ ನನ್ನ ತಂದೆಯನ್ನು ನೋಡಿದೆ ಎಂದರು. ಇದಕ್ಕೆ ಅನುಶ್ರೀ ಅವರು ಸ್ನೇಹಿತರಲ್ಲಿ ತಂದೆಯನ್ನು ಕಾಣುವ ನಿಮ್ಮ ಮನಸ್ಸು ನಿಜಕ್ಕೂ ದೊಡ್ಡದು ಎಂದು ಕೊಂಡಾಡಿ, ಚಪ್ಪಾಳೆ ತಟ್ಟಿದರು.

    ನೀವು ಈ ಕಾರ್ಯಕ್ರಮಕ್ಕೆ ಬಂದು, ಈ ಚೇರ್ ಮೇಲೆ ಕುಳಿತುಕೊಳ್ಳುವ ವರೆಗೂ ಅವರು ತಮ್ಮ ಚೇರ್‍ನಲ್ಲಿ ಕುಳಿತುಕೊಳ್ಳುವುದಿಲ್ಲ ಎಂದು ಮಹಾಗುರುಗಳು ಪಟ್ಟು ಹಿಡಿದಿದ್ದರು. ಅಲ್ಲದೆ ಅರ್ಜುನ್ ಹೇಳಿರುವ ಹಾಗೆ ಸಿಂಹ ಎಲ್ಲಿ ಕುಳಿತುಕೊಂಡರು ಅದು ಸಿಂಹಾಸನವೇ ಎಂಬ ಮಾತನ್ನು ಗಂಭೀರವಾಗಿ ಪರಿಗಣಿಸಿ ಅದೇ ಚೇರ್‍ನಲ್ಲಿ ಕುಳಿತುಕೊಂಡರು. ಅವರ ಚೇರ್‍ನಲ್ಲಿ ಕುಳಿತುಕೊಳ್ಳಲೇ ಇಲ್ಲ. ಇದಕ್ಕೆ ಏನು ಹೇಳುತ್ತೀರಿ ಎಂದು ನಿರೂಪಕಿ ಅನುಶ್ರೀ ಕೇಳಿದರು.

    ಇದಕ್ಕೆ ಉತ್ತರಿಸಿದ ಅರ್ಜುನ್ ಜನ್ಯ, ತುಂಬಾ ದಿನ ಲೈಫಲ್ಲಿ ಒಂದು ಸೈಲೆನ್ಸ್ ಇತ್ತು. ಆಗ ಒಳ್ಳೆಯ ವಿಷಯ ತಿಳಿದುಕೊಂಡೆ. ನನಗೆ ಆಪರೇಷನ್ ನಂತರ ಆಸ್ಪತ್ರೆಯಲ್ಲಿದ್ದಾಗ ಏನೇನೋ ನೆನಸಿಕೊಂಡು ತುಂಬಾ ಭಯವಾಗಿತ್ತು. ಭವಿಷ್ಯದ ಬಗ್ಗೆ ನನಗೆ ತುಂಬಾ ಭಯ ಉಂಟಾಗಿತ್ತು. ಬೆಳಗಿನ ಜಾವ ಸುಮಾರು 2-3 ಗಂಟೆಯಾಗಿತ್ತು. ಎಚ್ಚರವಾಗಿ ಭಯಭೀತನಾಗಿ ಕುಳಿತಿದ್ದೆ ಎಂದರು.

    ಆಸ್ಪತ್ರೆಯಲ್ಲಿದ್ದಾಗ ಫೋನ್ ಬಳಸದಂತೆ ನನ್ನ ಹೆಂಡತಿ ಮೊಬೈಲ್ ಕೊಟ್ಟಿರಲೇ ಇಲ್ಲ. ಬೆಳಗಿನ ಜಾವ 2-3 ಗಂಟೆಗೆ ಅವಳಿಗೆ ಗೊತ್ತಾಗದಂತೆ ನಾನೇ ಮೊಬೈಲ್ ತೆಗೆದುಕೊಂಡು ನೋಡಿದೆ. ಎಷ್ಟೋಂದು ಮೆಸೇಜ್‍ಗಳಿದ್ದವು ಅದರಲ್ಲಿ ಹಂಸಲೇಖ ಸರ್ ಕಳುಹಿಸಿದ ಮೆಸೇಜ್ ಸಹ ಇತ್ತು. ಒಂದು ವಾಯ್ಸ್ ನೋಟ್ ಕಳುಹಿಸಿದ್ದರು.

    ಸುಮ್ಮನೇ ಆನ್ ಮಾಡಿದೆ….ತಕ್ಷಣ, ಯು ಆರ್ ಅರ್ಜುನ್, ಐ ನೌ ವಾಟ್ ಯು ಆರ್, ಐ ನೌ ವಾಟ್ ಇಸ್ ಯುವರ್ ಹಾರ್ಟ್, ಐ ನೌ ಹೌ ಯು ಕ್ಯಾನ್ ಕಂ ಬ್ಯಾಕ್, ಕಂ ಬ್ಯಾಕ್ ಅರ್ಜುನ್, ಕಂ ಬ್ಯಾಕ್….. ಎಂದು ವಾಯ್ಸ್ ನೋಟ್ ಕಳುಹಿಸಿದ್ದರು. ಇದರಿಂದಾಗಿ ನನಗೆ ತುಂಬಾ ಸ್ಫೂರ್ತಿ ಉಕ್ಕಿತು ಎಂದು ಹೇಳಿಕೊಂಡಿದ್ದಾರೆ.

    ಈ ವಾಯ್ಸ್ ನೋಟ್ ಕೇಳಿದ ತಕ್ಷಣ ಸಿಕ್ಕಾಪಟ್ಟೆ ಅಳು ಬಂದು, ನಂತರ ಸುಮಾರು ಅರ್ಧ ಗಂಟೆಗಳ ಕಾಲ ನನ್ನಲ್ಲಿ ಒಂದು ರೀತಿಯ ಸಂಚಲನ ಸೃಷ್ಟಿಯಾಯಿತು ಎಂದು ಅರ್ಜುನ್ ಜನ್ಯ ತಿಳಿಸಿದ್ದಾರೆ. ಇವೆಲ್ಲ ನಮ್ಮ ಲೈಫ್‍ಗೆ ಟ್ರೇಲರ್, ನಾವಿಲ್ಲ ಎಂದರೆ ಯಾವ ರೀತಿಯಾಗುತ್ತದೆ ಎಂಬುದನ್ನು ದೇವರು ಟ್ರೇಲರ್ ತೋರಿಸುತ್ತಾನೆ. ಕೆಲವು ಬದಲಾವಣೆಗಳಿಂದ ಬೆಳವಣಿಗೆಯಾಗುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಕೆಲವು ಬೆಳವಣಿಗೆಗೆ ಬದಲಾವಣೆಗಳು ಬೇಕು. ಚಿಕ್ಕ ಬದಲಾವಣೆಯಾಗಿದೆ ಎಂದು ಅರ್ಜುನ್ ಜನ್ಯ ಭಾವುಕರಾದರು.

  • ಲಂಬಾಣಿ ಮಹಿಳೆಯರ ಉಡುಪಿನಲ್ಲಿ ಕನ್ನಡಿಗಳು ಯಾಕಿರುತ್ತೆ? ಹಂಸಲೇಖ ನೀಡಿದ್ರು ಉತ್ತರ

    ಲಂಬಾಣಿ ಮಹಿಳೆಯರ ಉಡುಪಿನಲ್ಲಿ ಕನ್ನಡಿಗಳು ಯಾಕಿರುತ್ತೆ? ಹಂಸಲೇಖ ನೀಡಿದ್ರು ಉತ್ತರ

    ಬೆಂಗಳೂರು: ಲಂಬಾಣಿ ಸಮುದಾಯದ ಮಹಿಳೆಯರು ಧರಿಸಿರುವ ಸಾಂಪ್ರದಾಯಿಕ ಉಡುಪಿನಲ್ಲಿ ಹೆಚ್ಚಾಗಿ ಕನ್ನಡಿಗಳನ್ನು ಯಾಕೆ ಬಳಸಲಾಗುತ್ತದೆ ಎಂಬ ಹಲವರ ಪ್ರಶ್ನೆಗೆ ನಾದಬ್ರಹ್ಮ, ಸಂಗೀತ ನಿರ್ದೇಶಕ ಹಂಸಲೇಖ ಉತ್ತರ ನೀಡಿದ್ದಾರೆ.

    ನಮ್ಮ ಸುತ್ತಮುತ್ತ ವಾಸವಾಗಿರುವ ಲಂಬಾಣಿ ಸಮುದಾಯದ ಮಹಿಳೆಯರ ಉಡುಪು ತುಂಬಾ ವಿಭಿನ್ನವಾಗಿರುತ್ತೆ. ಈ ಉಡುಪಿನಲ್ಲಿ ಮಣಿಗಳು, ನಾಣ್ಯಗಳು, ಬೆಳ್ಳಿ ಆಭರಣಗಳು ಸೇರಿದಂತೆ ಹೆಚ್ಚು ಕನ್ನಡಿಗಳನ್ನು ಬಳಕೆ ಮಾಡಲಾಗಿರುತ್ತದೆ. ಖಾಸಗಿ ವಾಹಿನಿಯ ಕಾರ್ಯಕ್ರಮದಲ್ಲಿ ಪ್ರಸಾರವಾಗುವ ರಿಯಾಲಿಟಿ ಶೋ ನಿರೂಪಕಿ ಅನುಶ್ರೀ ಲಂಬಾಣಿ ಸಮುದಾಯದ ಮಹಿಳೆಯರ ಕಲರ್ ಫುಲ್ ಡ್ರೆಸ್ ಧರಿಸಿದ್ದರು. ಈ ವೇಳೆ ಸಮುದಾಯದ ಬಗ್ಗೆ ಮಾತನಾಡುತ್ತಿದ್ದ ಕಾರ್ಯಕ್ರಮದ ತೀರ್ಪುಗಾರರಾದ ಹಂಸಲೇಖ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

    ಹಂಸಲೇಖ ಮಾತು:
    ಇದೊಂದು ಸಮಾಜದಿಂದ ಅಲಕ್ಷಿಸಲ್ಪಟ್ಟ ಸಮುದಾಯವಾಗಿದ್ದು, ಇಂದು ಕನ್ನಡದ ಮನೆ ಮಗಳಾಗಿರುವ ಅನುಶ್ರೀ ಲಂಬಾಣಿ ವೇಷಭೂಷಣಗಳನ್ನು ಧರಿಸುವ ಮೂಲಕ ಆ ಸಮುದಾಯಕ್ಕೆ ಗೌರವ ಸಲ್ಲಿಸಿದ್ದಾಳೆ. ಈ ಸಮುದಾಯದವರು ಪತ್ತೆದಾರಿ, ಗೂಢಚರ್ಯೆ ಮತ್ತು ಸುದ್ದಿಗಳನ್ನು ಒಂದು ದೇಶದಿಂದ ಇನ್ನೊಂದು ದೇಶಕ್ಕೆ ರವಾನಿಸುವ ಕೆಲಸ ಮಾಡುತ್ತಿದ್ದರು. ಈ ಸಮುದಾಯದ ಮಹಿಳೆಯರು ಸ್ಫುರದ್ರೂಪಿಗಳು. ಬೇರೆ ಹುಡುಗರು ಹತ್ತಿರಕ್ಕೆ ಬಂದು ಅವರ ಮುಖವನ್ನು ಉಡುಪಿನಲ್ಲಿರುವ ಕನ್ನಡಿಯಲ್ಲಿ ನೋಡಿ ನಾನು ಈಕೆಗೆ ಸರಿಸಾಟಿ ಇಲ್ಲ ಅಂತ ವಾಪಾಸ್ ಹೋಗು ಅಂತಾ ಕನ್ನಡಿಗಳು ಹೇಳುತ್ತವೆ. ಹಾಗಾಗಿ ಮಹಿಳೆಯರ ವೇಷ-ಭೂಷಣಗಳಲ್ಲಿ ಕನ್ನಡಿಯನ್ನು ಬಳಸಲಾಗುತ್ತದೆ. ಈ ಸಮುದಾಯದಲ್ಲಿ ಮಹಿಳೆಯರು ಹೆಚ್ಚು ಬಲಶಾಲಿಗಳು. ಎಂತಹ ಹೋರಾಟಕ್ಕೂ ಸಿದ್ಧವಾಗಿರುತ್ತಾರೆ ಎಂದು ಹಂಸಲೇಖ ಸಮುದಾಯದ ಇತಿಹಾಸವನ್ನು ಪರಿಚಯಿಸಿದರು.

    ಈ ಕಾರ್ಯಕ್ರಮದಲ್ಲಿ ಸ್ಪರ್ಧಿ ಹನುಮಂತನ ತಾಯಿ ಶೀಲವ್ವ ಅವರು ಲಂಬಾಣಿ ಸಮುದಾಯದ ಹಾಡು ಹಾಡಿದ್ದರು. ಲಂಬಾಣಿ ಹಾಡುಗಳಲ್ಲಿ ಕ್ವಾಟರ್ ನೋಟ್ಸ್ ಬಳಕೆ ಮಾಡಲಾಗುತ್ತದೆ. ಅರೇಬಿಕ್ ಹಾಡುಗಳಲ್ಲಿ ಇದೇ ರೀತಿಯ ನೋಟ್ ಗಳಿರುತ್ತವೆ ಎಂದು ಹಂಸಲೇಖ ತಿಳಿಸಿದರು. ಶೀಲವ್ವರ ಹಾಡು ಕೇಳುತ್ತಿದ್ದಂತೆ ಇನ್ನೋರ್ವ ತೀರ್ಪುಗಾರ, ಗಾಯಕ ವಿಜಯ್ ಪ್ರಕಾಶ್ ಎದ್ದು ನಿಂತು ಚಪ್ಪಾಳೆ ಹೊಡೆಯುವ ಮೂಲಕ ಮೆಚ್ಚುಗೆ ಸೂಚಿಸಿದರು.

    ಮಾತು ಉಳಿಸಿಕೊಂಡ ಶೀಲವ್ವ:
    ಈ ಹಿಂದೆ ವಾಹಿನಿಯ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಶೀಲವ್ವರನ್ನು ನೋಡಿದ್ದ ಅನುಶ್ರೀ ನನಗೂ ಇದೇ ರೀತಿ ಬಟ್ಟೆ ಮತ್ತು ಆಭರಣಗಳು ಬೇಕೆಂದು ಕೇಳಿಕೊಂಡಿದ್ದರು. ರಿಯಾಲಿಟಿ ಶೋದಲ್ಲಿಯೂ ಹನುಮಂತನಿಗೆ ನಿಮ್ಮ ತಾಯಿ ಬಟ್ಟೆ ಬೇಕು ಅಂತ ಹೇಳಿದ್ದರು. ಹೀಗಾಗಿ ರಿಯಾಲಿಟಿ ಶೋಗೆ ಆಗಮಿಸಿದ್ದ ಶೀಲವ್ವ ಅವರು ಕೊಟ್ಟ ಮಾತಿನಂತೆ ತಾವೇ ಕೈಯಿಂದ ಕಸೂತಿ ಮಾಡಿದ ಬಣ್ಣ ಬಣ್ಣದ ಉಡುಪನ್ನು ಅನುಶ್ರೀ ಅವರಿಗೆ ನೀಡಿದ್ದರು.

    ಶೀಲವ್ವರು ನೀಡಿದ ಉಡುಗೆಯನ್ನು ಧರಿಸಿದ ಅನುಶ್ರೀ ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಮೂವರೊಂದಿಗೆ ಕ್ಲಿಕ್ಕಿಸಿಕೊಂಡ ಸೆಲ್ಫಿ ಫೋಟೋ ಹಾಕಿ ಸಂತೋಷ ವ್ಯಕ್ತಪಡಿಸಿದ್ದಾರೆ.

    https://www.instagram.com/p/BsQCrpuhQN4/

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶಾಕುಂತಲೆಗಾಗಿ ಹಂಸಲೇಖಾ ಹುಡುಕಾಟ!

    ಶಾಕುಂತಲೆಗಾಗಿ ಹಂಸಲೇಖಾ ಹುಡುಕಾಟ!

    ಬೆಂಗಳೂರು: ಸಂಗೀತ ನಿರ್ದೇಶಕರಾಗಿ ಕನ್ನಡ ಚಿತ್ರರಂಗದಕ್ಕೆ ನವ ಮಾಧುರ್ಯ ತುಂಬಿದವರು ನಾದಬ್ರಹ್ಮ ಹಂಸಲೇಖಾ. ಅವರೀಗ ಶಾಕುಂತಲೆ ಎಂಬ ಚಿತ್ರವನ್ನು ನಿರ್ದೇಶನ ಮಾಡುವ ತಯಾರಿಯಲ್ಲಿದ್ದಾರೆ. ವರ್ಷದ ಹಿಂದೆಯೇ ಈ ಚಿತ್ರದ ಬಗ್ಗೆ ಸುದ್ದಿ ಶುರುವಾಗಿತ್ತಾದರೂ ಇದೀಗ ತಾನೇ ಎಲ್ಲ ಚಟುವಟಿಕೆಗಳೂ ಆರಂಭವಾಗಿವೆ.

    ಭಾರತೀಯ ಚಿತ್ರರಂಗದಲ್ಲಿಯೇ ಮೈಲಿಗಲ್ಲಾಗಿ ದಾಖಲಾಗಬಲ್ಲಂಥಾ ಕಥಾನಕವನ್ನು ಶಾಕುಂತಲೆ ಚಿತ್ರ ಹೊಂದಿದೆ ಅಂತ ಹಂಸಲೇಖ ಈ ಹಿಂದೆಯೇ ಹೇಳಿಕೊಂಡಿದ್ದಾರೆ. ಇಡೀ ಚಿತ್ರ ಶಾಕುಂತಲೆಯ ಪಾತ್ರದ ಸುತ್ತಲೇ ಸುತ್ತೋದರಿಂದ ಅದಿಲ್ಲಿ ಬಹು ಮುಖ್ಯ. ಈ ಪಾತ್ರ ನಿರ್ವಹಿಸೋದು ಕೂಡಾ ಸವಾಲಿನ ಕೆಲಸವೇ. ಇದಕ್ಕೆ ಸೂಕ್ತವಾದ ಹುಡುಗಿಯನ್ನು ಆರಂಭದಿಂದಲೂ ಹಂಸಲೇಖಾ ಹುಡುಕುತ್ತಿದ್ದರು. ಇದೀಗ ಶಾಕುಂತಲೆ ಸಿಗೋ ಸಮಯ ಹತ್ತಿರಾಗಿದೆ. ಡಿಸೆಂಬರ್ ಒಂಬತ್ತರ ಹೊತ್ತಿಗೆಲ್ಲಾ ಶಾಕುಂತಲೆ ಯಾರಾಗಲಿದ್ದಾರೆಂಬುದು ಪಕ್ಕಾ ಆಗಲಿದೆಯಂತೆ!

    ಸಂಗೀತ ಮತ್ತು ಗ್ರಾಫಿಕ್ಸ್ ಕೂಡಾ ಈ ಚಿತ್ರದ ಪ್ರಧಾನ ಅಂಶ. ಈ ಕಾರಣದಿಂದಲೇ ಚಿತ್ರ ಶುರುವಾಗೋದು ಕೊಂಚ ತಡವಾಗಿದೆಯಂತೆ. ಈ ವರ್ಷದ ಕಡೆಯ ಹೊತ್ತಿಗೆಲ್ಲ ಶಾಕುಂತಲೆಯ ಚಿತ್ರೀಕರಣ ಶುರುವಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಅನುಶ್ರೀ ಕೇಳಿದ ಪ್ರಶ್ನೆಗೆ ವೇದಿಕೆಯಲ್ಲೇ ಭಾವುಕರಾದ ಹನುಮಂತ

    ಅನುಶ್ರೀ ಕೇಳಿದ ಪ್ರಶ್ನೆಗೆ ವೇದಿಕೆಯಲ್ಲೇ ಭಾವುಕರಾದ ಹನುಮಂತ

    ಬೆಂಗಳೂರು: ತರಬೇತಿ ಪಡೆಯದೆ, ಓದದೆ ಇಂದು ಸರಿಗಮಪ ಶೋ ಮೂಲಕ ಖ್ಯಾತಿ ಪಡೆದಿರುವ ಹಾವೇರಿ ಜಿಲ್ಲೆಯ ಹನುಮಂತ ಕಾರ್ಯಕ್ರಮದಲ್ಲಿ ನಿರೂಪಕಿ ಅನುಶ್ರೀ ಕೇಳಿದ ಪ್ರಶ್ನೆಗೆ ಭಾವುಕರಾಗಿದ್ದಾರೆ.

    ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ‘ಸರಿಗಮಪ ಸೀಸನ್ 15’ ಆವೃತ್ತಿಯಲ್ಲಿ ಹಾವೇರಿ ಜಿಲ್ಲೆಯ ಕುರಿಗಾಯಿ ಹನುಮಂತ ಆಯ್ಕೆಯಾಗಿದ್ದರು. ಹನುಮಂತ ಸುಮಧುರವಾಗಿ ಹಾಡು ಹಾಡುವ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಆದರೆ ಶನಿವಾರ ಪ್ರಸಾರವಾದ ಕಾರ್ಯಕ್ರಮದಲ್ಲಿ ನಿರೂಪಕಿ ಅನುಶ್ರೀ ಅವರು ಕೇಳಿದ ಪ್ರಶ್ನೆಗೆ ಹನುಮಂತ ಕೆಲ ಹೊತ್ತು ಮಾತನಾಡದೆ ಭಾವುಕರಾಗಿದ್ದರು.

    ಶನಿವಾರ ಪ್ರಸಾರವಾದ ಮಹಾಸಂಚಿಕೆ ಕಾರ್ಯಕ್ರಮದಲ್ಲಿ ಹನುಮಂತ ‘ದುಡ್ಡು ಕೊಟ್ಟರೆ ಬೇಕಾದು ಸಿಗುತೈತೇ ಈ ಜಗದಲಿ ತಮ್ಮ’ ಎಂಬ ಹಾಡನ್ನು ಹಾಡಿದ್ದರು. ಈ ಹಾಡನ್ನು ಹಾಡಿದ ನಂತರ ಅನುಶ್ರೀ ಅವರು ವೇದಿಕೆಯ ಮೇಲೆ ಬಂದು ಈ ಹಾಡನ್ನು ಹಾಡುವ ಮೂಲಕ ನಮ್ಮ ತಾಯಿಯನ್ನು ನೆನಪಿಸಿದ್ದೀರಿ ಎಂದು ಹೇಳಿದರು. ಈ ವೇಳೆ ನಿಮಗೆ ನಿಮ್ಮ ತಾಯಿ ನೆನಪಾಗುತ್ತಿದ್ದಾರಾ ಎಂದು ಪ್ರಶ್ನೆ ಕೇಳಿದ್ದಾರೆ.

    ಅನುಶ್ರೀ ಕೇಳಿದ ಪ್ರಶ್ನೆಗೆ ಹನುಮಂತ ಕೆಲ ಸೆಕೆಂಡ್ ಮಾತನಾಡದೆ ಭಾವುಕರಾಗಿ ಅಮ್ಮನನ್ನು ನೆನಪಿಸಿಕೊಂಡಿದ್ದಾರೆ. ನಾನು ನಮ್ಮ ಅಮ್ಮ, ಅಪ್ಪ ಮತ್ತು ಕುರಿಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಇದೇ ಮೊದಲ ಬಾರಿಗೆ ನಾನು ಅಮ್ಮನಿಂದ ದೂರ ಇದ್ದೀನಿ. ತುಂಬಾ ನೆನಪಾಗುತ್ತಿದ್ದಾರೆ ಎಂದು ಅಮ್ಮನ ನೆನಪಿಸಿಕೊಂಡು ಭಾವುಕರಾಗಿದ್ದಾರೆ.

    ಈ ನಡುವೆ ಅನುಶ್ರೀ ಅವರು ಕ್ಯಾಮೆರಾ ಮುಂದೆ ನಿಮ್ಮ ತಾಯಿಗೆ ಒಂದು ಮಾತು ಹೇಳಿ ಅಂತ ಹೇಳಿದ್ದಾರೆ. ಆಗ ಹನುಮಂತ ತಮ್ಮ ಭಾಷೆಯಲ್ಲಿ ‘ಯವ್ವ ನಾನ್ ಆರಾಮಿದ್ದೀನಿ, ನೀನು ಆರಾಮಾಗಿ ಇರು’ ಎಂದು ಹೇಳಿದ್ದಾರೆ. ಹನುಮಂತ ಹಾಡನ್ನು ಕೇಳಿ ವೇದಿಕೆಯ ಮೇಲಿದ್ದ ಎಲ್ಲರು ತಮ್ಮ ತಾಯಿಯನ್ನು ನೆನಪಿಸಿಕೊಂಡಿದ್ದಾರೆ.

    ತೀರ್ಪುಗಾರರಾಗಿದ್ದ ಸಂಗೀತ ನಿರ್ದೇಶಕ ಹಂಸಲೇಖ, ವಿಜಯ್ ಪ್ರಕಾಶ್ ಮತ್ತು ರಾಜೇಶ್ ಕೃಷ್ಣ ಅವರು ಅವರವರ ತಾಯಿಯನ್ನು ನೆನಪಿಸಿಕೊಂಡು ಹನುಮಂತಗೆ ಚೆನ್ನಾಗಿ ಹಾಡಿದ್ದೀಯಾ ಎಂದು ಗೋಲ್ಡನ್ ಬಜಾರ್ ಒತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಂಜುಡೇಶ್ವರ ದರ್ಶನ ಪಡೆದ ನಾದಬ್ರಹ್ಮ ಹಂಸಲೇಖ

    ನಂಜುಡೇಶ್ವರ ದರ್ಶನ ಪಡೆದ ನಾದಬ್ರಹ್ಮ ಹಂಸಲೇಖ

    ಚಾಮರಾಜನಗರ/ಮೈಸೂರು: ಸಂಗೀತ ನಿರ್ದೇಶಕ, ನಾದಬ್ರಹ್ಮ ಹಂಸಲೇಖ ಅವರು ಮೈಸೂರು ಜಿಲ್ಲೆಯ ನಂಜನಗೂಡಿನ ನಂಜುಡೇಶ್ವರನ ದೇವಾಲಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದುಕೊಂಡಿದ್ದಾರೆ.

    ಶುಕ್ರವಾರ ಕೇತುಗ್ರಸ್ಥ ಚಂದ್ರ ಗ್ರಹಣದ ಹಿನ್ನೆಲ್ಲೆಯಲ್ಲಿ ಜಿಲ್ಲಾದ್ಯಂತ ದೇವಾಲಯಗಳಲ್ಲಿ ವಿಶೇಷ ಪೂಜೆ-ಹವನ ನಡೆಯುತ್ತಿತ್ತು. ಅದೇ ರೀತಿ ನಗರದ ನಂಜುಡೇಶ್ವರ ದೇವರಿಗೆ ವಿಶೇಷ ಪೂಜೆ ನಡೆಯುತ್ತಿತ್ತು. ಈ ವೇಳೆ ಸಂಗೀತ ನಿರ್ದೇಶಕ ಹಂಸಲೇಖ ಅವರು ದೇವಾಲಯಕ್ಕೆ ಭೇಟಿ ನೀಡಿ ನಂಜುಡೇಶ್ವರನಿಗೆ ಅರ್ಚನೆ ಮಾಡಿಸಿ ಪೂಜೆ ಸಲ್ಲಿಸಿದ್ದಾರೆ.

    ಶುಕ್ರವಾರ ಪೂರ್ಣಿಮೆ ಹಾಗೂ ಚಂದ್ರ ಗ್ರಹಣ ಹಿನ್ನೆಲೆಯಲ್ಲಿ ನಂಜಗೂಡಿನಲ್ಲಿ ನಂಜುಡೇಶ್ವರನ ರಥೋತ್ಸವ ನಡೆದಿದ್ದು, ಉತ್ಸವ ಮೂರ್ತಿಯನ್ನು ರಥದ ಮೇಲಿರಿಸಿ ರಥೋತ್ಸವ ಮಾಡಿದ್ದಾರೆ. ಭಕ್ತರಿಗೆ ಹಾಗೂ ರಾಜ್ಯದ ಜನತೆ ಒಳಿತಾಗುವಂತೆ ನಂಜುಡೇಶ್ವರನ ರಥೋತ್ಸವ ನರೆವೇರಿದೆ. ಬಳಿಕ ಗ್ರಹಣದ ಹಿನ್ನೆಲೆಯಲ್ಲಿ ರಥೋತ್ಸವದ ನಂತರ ಅರ್ಚಕರು ದೇವಸ್ಥಾನದ ಬಾಗಿಲು ಹಾಕಿದ್ದಾರೆ.

    ಎಂದಿನಂತೆ ಶುಕ್ರವಾರ ರಾತ್ರಿ 8.30ಕ್ಕೆ ದೇವಸ್ಥಾನದ ಬಾಗಿಲು ಬಂದ್ ಆಗಿದ್ದು, ಎಂದಿನಂತೆ ಇಂದು ಬೆಳಗ್ಗೆ 6.00 ಗಂಟೆಗೆ ಅರ್ಚಕರು ದೇವಸ್ಥಾನದ ಬಾಗಿಲು ತೆರೆದಿದ್ದಾರೆ. ದೇವಾಲಯದ ಬಾಗಿಲು ತೆರದ ನಂತರ ಕಪಿಲ ನದಿ ನೀರಿನಿಂದ ದೇವಸ್ಥಾನದ ಶುದ್ಧಿ ಕಾರ್ಯ ಮಾಡಿದ್ದಾರೆ. ಬಳಿಕ ನಂಜುಡೇಶ್ವರನಿಗೆ ವಿವಿಧ ಅಭಿಷೇಕಗಳ ನಂತರ ಮಹಾಮಂಗಳಾರತಿ ನಡೆಯಲಿದೆ.

  • ಹಂಸಲೇಖಾರಿಂದ ರೇವಾ ವಿವಿ ಮಾಧ್ಯಮ ಕೇಂದ್ರ ಉದ್ಘಾಟನೆ

    ಹಂಸಲೇಖಾರಿಂದ ರೇವಾ ವಿವಿ ಮಾಧ್ಯಮ ಕೇಂದ್ರ ಉದ್ಘಾಟನೆ

    ಬೆಂಗಳೂರು: ರೇವಾ ವಿಶ್ವವಿದ್ಯಾಲಯ ಹಚ್ಚ ಹಸಿರಿನ ನಿತ್ಯ ತೋರಣದ ವಿದ್ಯಾ ದೇವಾಲಯ ಎಂದು ನಾದಬ್ರಹ್ಮರೆಂದು ಪ್ರಖ್ಯಾತಿ ಹೊಂದಿರುವ ಸಂಗೀತ ನಿರ್ದೇಶಕ ಹಂಸಲೇಖ ಅವರು ಬಣ್ಣಿಸಿದ್ದಾರೆ.

    ರೇವಾ ವಿಶ್ವವಿದ್ಯಾಲಯದಲ್ಲಿ ನೂತನವಾಗಿ ನಿರ್ಮಿಸಿರುವ ಮಾಧ್ಯಮಕೇಂದ್ರ(ಮೀಡಿಯಾ ಸೆಂಟರ್)ವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದ ಅವರು, ಬೆಂಗಳೂರು ನಗರ ಒತ್ತಡದ ಮತ್ತು ಸಂಚಾರ ದಟ್ಟಣೆಯ ಕಿಷ್ಕಿಂದೆ ಎಂದು ಹೆಸರಾಗುತ್ತಿದೆ. ಅಂತಹ ಆಲೋಚನೆಗಳಿಂದ ಹೊರ ಬರಲು ಬೆಂಗಳೂರಿನಿಂದ ಕೊಂಚ ಹೊರವಲಯದಲ್ಲಿ ರೇವಾ ವಿದ್ಯಾದೇವಾಲಯವಿದೆ. ಇದರ ಮಾಧ್ಯಮಕೇಂದ್ರದ ಉದ್ಘಾಟನೆಗೆ ನನ್ನನು ಮುಖ್ಯ ಅತಿಥಿಯಾಗಿ ಆಹ್ವಾನಿಸಿದ್ದಾರೆ. ಇದು ನನ್ನ ಪುಣ್ಯ. ಈ ವಿಶ್ವವಿದ್ಯಾಲಯದ ಬಗ್ಗೆ ಕೇಳಿದ್ದೆ ಆದರೆ ಇವತ್ತು ನೋಡುವಂತಹ ಭಾಗ್ಯ ಲಭಿಸಿದೆ. ಒಳಗೆ ಬಂದು ನೋಡಿದಾಗ ಇದೊಂದು ಹಚ್ಚ ಹಸಿರಿನ ನಿತ್ಯ ತೋರಣವೆಂದು ಭಾಸವಾಯಿತು ಎಂದರು.

    ಈ ರೇವಾ ವಿಶ್ವವಿದ್ಯಾಲಯದಲ್ಲಿ ಮಾಧ್ಯಮಕೇಂದ್ರವನ್ನು ವೃತ್ತಿಪರವಾಗಿ ನಿರ್ಮಾಣ ಮಾಡಲಾಗಿದೆ. ಈ ಕೇಂದ್ರ ಉದ್ಘಾಟನೆಗೊಳ್ಳುವ ಮೂಲಕ ರೇವಾ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಡಾ. ಪಿ. ಶ್ಯಾಮರಾಜು ಅವರ ಕನಸು ನನಸಾಗಿದೆ.

    ವಿದ್ಯಾರ್ಥಿಗಳು ಕೊಡುಗೆ ನೀಡಲಿ
    ಇವತ್ತು ಸುದ್ದಿಯಿಂದ ಜೀವನ. ಆದರೆ ಶಿಕ್ಷಕರಾದ ನಾವು ಸುದ್ದಿ ಒಳಗಿನ ವೈಬ್ರೆಂಟ್‍ನಿಂದ ಜೀವನ ಎನ್ನುತ್ತೇವೆ. ಪ್ರತಿಯೊಂದು ವೈಬ್ರೆಷನ್ ಒಂದು ಮೆಸೇಜ್ ಇದ್ದಂತೆ. ಇವತ್ತಿನಿಂದ ಮೀಡಿಯಾ ಸೆಂಟರ್ ನಲ್ಲಿ ಪಾಸಿಟಿವ್ ವೈಬ್ರೆಷನ್ ಪ್ರಾರಂಭವಾಗಿದೆ. ಈ ವಿಶ್ವವಿದ್ಯಾಲಯದಲ್ಲಿ ಪ್ರತಿವರ್ಷ ಐದು ಸಾವಿರ ವಿದ್ಯಾರ್ಥಿಗಳು ತೇರ್ಗಡೆಯಾಗಿ ಹೊರ ಹೋಗುತ್ತಿದ್ದಾರೆ. ಅವರೆಲ್ಲ ಈ ನಾಡಿಗೆ ಕೊಡುಗೆಯನ್ನು ನೀಡಲಿ ಎಂದು ಹಾರೈಸಿದರು.

    ಈ ಸ್ಟುಡಿಯೋದಲ್ಲಿ ಪ್ರದರ್ಶನ ಕಲೆಗೆ ಒಂದು ಪ್ರತ್ಯೇಕ ವಿಭಾಗ ತೆರೆಯಲಾಗಿದೆ. ಜೊತೆಗೆ ಇದಕ್ಕೆ ಪ್ರತಿಭಾನ್ವಿತ ಸಿಬ್ಬಂಧಿಯನ್ನು ನೇಮಕ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಜಾನಪದಕ್ಕೆ ಸಂಬಂಧಿಸಿದಂತೆ ಕೆಲಸ ಮಾಡುವಾಗ ನಾನು ಇವರ ಜೊತೆ ಕೈಜೋಡಿಸುತ್ತೇನೆ ಎಂದರು.

    ರೇವಾ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ. ಪಿ. ಶ್ಯಾಮರಾಜುರವರು ಮಾತನಾಡಿ, ನಮ್ಮ ವಿಶ್ವವಿದ್ಯಾಲಯದಲ್ಲಿ 15 ಸಾವಿರ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇವತ್ತು ಉದ್ಘಾಟನೆಗೊಂಡಿರುವ ಸ್ಟುಡಿಯೋದಿಂದ ಪತ್ರಿಕೋದ್ಯಮ ಮತ್ತು ಇತರೆ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ತರಗತಿಯಲ್ಲಿ ಒತ್ತಡದಲ್ಲಿರುವ ವಿದ್ಯಾರ್ಥಿಗಳು ಪತ್ರಿಕೋದ್ಯಮಕ್ಕೆ ಸಂಬಂಧಿಸಿದ ಕಲೆ ಮತ್ತು ತಂತ್ರಜ್ಞಾನದ ಬಗ್ಗೆ ತಿಳಿದುಕೊಂಡು ತಮ್ಮ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ. ವಿದ್ಯಾರ್ಥಿಗಳು ಪದವಿಯ ಜತೆಗೆ ತಂತ್ರಜ್ಞಾನಗಳ ಬಗ್ಗೆಯೂ ತಿಳಿದು ಹೊರಜಗತ್ತಿಗೆ ಕಾಲಿಡಲಿ ಎಂಬ ಉದ್ದೇಶದಿಂದ ಈ ಮಾಧ್ಯಮ ಕೇಂದ್ರವನ್ನು ತೆರೆಯಲಾಗಿದೆ ಎಂದು ತಿಳಿಸಿದರು.

    1 ಕೋಟಿ ವೆಚ್ಚದಲ್ಲಿ ಮಾಧ್ಯಮ ಕೇಂದ್ರ:
    ಮಲ್ಟಿ ಮೀಡಿಯಾ, ಮೀಡಿಯಾ ಎಡಿಟಿಂಗ್, ಅನಿಮೇಶನ್ ತಂತ್ರಜ್ಞಾನ, ಕಂಪ್ಯೂಟರ್ ಗ್ರಾಫಿಕ್ಸ್, ಆನ್‍ಲೈನ್ ವಿಡಿಯೋ ಎಡಿಟಿಂಗ್, ಕ್ಯಾಂಪಸ್ ಟಿ.ವಿ., ಕ್ಯಾಂಪಸ್ ರೇಡಿಯೋ, ವೆಬ್ ರೇಡಿಯೋ ಹಾಗೂ ವಾರ್ತಾ ನಿರೂಪಣೆ, ಚರ್ಚೆಗೆ ಸಂಬಂಧಿಸಿದ ಸ್ಟುಡಿಯೋಗಳು ಮಾಧ್ಯಮ ಕೇಂದ್ರದಲ್ಲಿದ್ದು, ಒಂದು ಕೋಟಿ ವೆಚ್ಚದಲ್ಲಿ ಈ ಕೇಂದ್ರವನ್ನು ನಿರ್ಮಿಸಲಾಗಿದೆ.

    ಕಾರ್ಯಕ್ರಮದಲ್ಲಿ ಉಪಕುಲಪತಿಗಳಾದ ಡಾ. ಎಸ್. ವೈ ಕುಲಕರ್ಣಿ, ಕುಲಸಚಿವರಾದ ಡಾ. ಧನಂಜಯ್, ವಿಭಾಗದ ಮುಖ್ಯಸ್ಥರಾದ ಡಾ. ಬೀನಾ ಜಿ., ಡಾ. ಪಾಯಲ್ ದತ್ತ ಚೌದರಿ ಮತ್ತು ಮಂಜುನಾಥ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

  • ನಾದಬ್ರಹ್ಮ ಹಂಸಲೇಖಗೆ ಎದೆನೋವು, ಆಸ್ಪತ್ರೆಗೆ ದಾಖಲು

    ನಾದಬ್ರಹ್ಮ ಹಂಸಲೇಖಗೆ ಎದೆನೋವು, ಆಸ್ಪತ್ರೆಗೆ ದಾಖಲು

    ಬೆಂಗಳೂರು: ನಾದಬ್ರಹ್ಮ ಹಂಸಲೇಖ ಅವರಿಗೆ ಎದೆನೋವು ಕಾಣಿಸಿಕೊಂಡಿದ್ದು, ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಖಾಸಗಿ ಚಾನೆಲ್‍ನ ಕಾರ್ಯಕ್ರಮದ ವೇಳೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕನ್ನಿಂಗ್‍ಹ್ಯಾಂ ರಸ್ತೆಯಲ್ಲಿರುವ ಫೋರ್ಟಿಸ್ ಆಸ್ಪತ್ರೆಗೆ ಹಂಸಲೇಖ ಅವರನ್ನು ದಾಖಲಿಸಲಾಗಿದೆ.

    ಹಂಸಲೇಖಾ ಅವರಿಗೆ ಲಘು ಹೃದಯಾಘಾತವಾಗಿಲ್ಲ. ಗ್ಯಾಸ್ಟಿಕ್‍ನಿಂದ ಎದೆನೋವು ಕಾಣಿಸಿಕೊಂಡಿದೆ. ಅಭಿಮಾನಿಗಳು ಹೆದರುವ ಅಗತ್ಯವಿಲ್ಲ ಎಂದು ಸರಿಗಮಪ ಕಾರ್ಯಕ್ರಮ ನಿರ್ಮಾಪಕರು ಸ್ಪಷ್ಟನೆ ನೀಡಿದ್ದಾರೆ.

  • ಸರಿಗಮಪ ರಿಯಾಲಿಟಿ ಶೋಗೆ ಮಹಾಗುರು ಎಂಟ್ರಿನಲ್ಲಿಯೇ ಸಂಚಲನ ಮೂಡಿಸುತ್ತಿದೆ ನ್ಯೂ ವರ್ಷನ್ ಸಾಂಗ್

    ಸರಿಗಮಪ ರಿಯಾಲಿಟಿ ಶೋಗೆ ಮಹಾಗುರು ಎಂಟ್ರಿನಲ್ಲಿಯೇ ಸಂಚಲನ ಮೂಡಿಸುತ್ತಿದೆ ನ್ಯೂ ವರ್ಷನ್ ಸಾಂಗ್

    ಬೆಂಗಳೂರು: ಸಂಗೀತ ಪ್ರತಿಭೆಯನ್ನು ಗುರುತಿಸುವ ಜೀ ಕನ್ನಡ ವಾಹಿನಿಯ ಜೂನಿಯರ್. ಸರಿಗಮಪ ರಿಯಾಲಿಟಿ ಶೋ ಇಂದಿನಿಂದ ಪ್ರಾರಂಭವಾಗಲಿದೆ. ಈ ಬಾರಿ  ನಾದ ಬ್ರಹ್ಮ ಹಂಸಲೇಖ ಮಹಾಗುರುಗಳಾಗಿ ನವ ಪ್ರತಿಭೆಗಳಿಗೆ ಸಂಗೀತ ಪಾಠವನ್ನು ಹೇಳಲಿದ್ದಾರೆ.

    ಇಂದು ಜೀ ವಾಹಿನಿ ತನ್ನ ಫೇಸ್ ಬುಕ್ ನಲ್ಲಿ ಹಳೆಯ ಎವರ್ ಗ್ರೀನ್ ಹಾಡುಗಳಿಗೆ ನ್ಯೂ ವರ್ಷನ್ ಹಾಡಿರುವ ವಿಡಿಯೋವನ್ನು ಅಪ್ಲೋಡ್ ಮಡಿಕೊಂಡಿದೆ. ವಿಶೇಷವೆಂದರೆ ಸರಿಗಮಪ ರಿಯಾಲಿಟಿ ಶೋನ ಹಳೆಯ ಆವೃತ್ತಿಯ ಜೂನಿಯರ್ ಮತ್ತು ಸೀನಿಯರ್ ಸ್ಪರ್ಧಿಗಳ ಸುಮಧುರ ಕಂಠದಲ್ಲಿ ಹಾಡು ಮೂಡಿದೆ. ವಿಡಿಯೋದಲ್ಲಿ ಇಂಪನಾ, ಅರವಿಂದ್, ಸಾನ್ವಿ ಶೆಟ್ಟಿ ಸೇರಿದಂತೆ ಹಲವರ ಕಂಠದಲ್ಲಿ ಹಾಡನ್ನು ಕೇಳಬಹುದು.

    ಈಗಾಗಲೇ ಜೀ ವಾಹಿನಿಗೆ ಹಂಸಲೇಖ ಎಂಟ್ರಿ ಆಗುತ್ತಿರುವ ವಿಷಯವನ್ನು ಅಭಿಮಾನಿಗಳಿಗೆ ವಿಶೇಷ ಪ್ರೋಮೋಗಳ ಮೂಲಕ ತಿಳಿಸಿದೆ. ಈ ಆವೃತ್ತಿಯಲ್ಲಿ ರಾಜೇಶ್ ಕೃಷ್ಣಣ್ ವೈಯಕ್ತಿಕ ಕಾರಣಗಳಿಂದ ತೀರ್ಪುಗಾರರ ಸ್ಥಾನದಿಂದ ಹೊರ ಬಂದಿದ್ದು, ಅವರ ಗುರು ಹಂಸಲೇಖ ಮಹಾಗುರುಗಳಾಗಿ ಬಂದಿದ್ದಾರೆ. ಎಂದಿನಂತೆ ವಿಜಯ್ ಪ್ರಕಾಶ್ ಮತ್ತು ಅರ್ಜುನ್ಯ ಜನ್ಯ ತೀರ್ಪುಗಾರರಾಗಿ ಹಂಸಲೇಖ ಅವರಿಗೆ ಸಾಥ್ ನೀಡಲಿದ್ದಾರೆ. ಮಾತಿನ ಚಿನುಕುರುಳಿ ಅನುಶ್ರೀ ಕಾರ್ಯಕ್ರಮದ ನಿರೂಪಣೆ ಮಾಡಲಿದ್ದಾರೆ.