Tag: hai bengaluru

  • ಶನಿ ಮುಖಿ ಕೊಲೆಗೆ ಸುಪಾರಿ ಒಂದು ಕೇಡು – ನೋಟ್ಸ್ ಫ್ರಮ್ ಸೆಂಟ್ರಲ್ ಜೈಲ್

    ಶನಿ ಮುಖಿ ಕೊಲೆಗೆ ಸುಪಾರಿ ಒಂದು ಕೇಡು – ನೋಟ್ಸ್ ಫ್ರಮ್ ಸೆಂಟ್ರಲ್ ಜೈಲ್

    ಬೆಂಗಳೂರು: ರವಿ ಬೆಳಗೆರೆ ಪರಪ್ಪನ ಅಗ್ರಹಾರಲ್ಲಿ ಕುಳಿತುಕೊಂಡು ಸುನಿಲ್ ಹೆಗ್ಗರವಳ್ಳಿ ವಿರುದ್ಧ ಕಿಡಿಕಾರಿದ ಬರಹ ಈ ವಾರದ ಹಾಯ್ ಬೆಂಗಳೂರಿನಲ್ಲಿ ಪ್ರಕಟವಾಗಿದೆ.

    “ಶನಿ ಮುಖಿ ಕೊಲೆಗೆ ಸುಪಾರಿ ಒಂದು ಕೇಡು!” ಎನ್ನುವ ಹೆಡ್‍ಲೈನ್ ಹಾಕಿ “ನೋಟ್ಸ್ ಫ್ರಮ್ ಸೆಂಟ್ರಲ್ ಜೈಲ್” ಎಂದು ಟ್ಯಾಗ್ ಲೈನ್ ಕೊಟ್ಟು ರವಿ ಬೆಳಗೆರೆ ಮುಖಪುಟದಲ್ಲೇ ಹೆಗ್ಗರವಳ್ಳಿ ವಿರುದ್ಧ ಬರಹ ಸಮರ ಆರಂಭಿಸಿದ್ದಾರೆ.

    ಸಾಫ್ಟ್ ಕಾರ್ನರ್ ಮತ್ತು ಖಾಸ್ ಬಾತ್‍ನಲ್ಲಿ ಹೆಗ್ಗರವಳ್ಳಿ ವಿರುದ್ಧ ಆಕ್ರೋಶದ ಬರಹ ಬರೆದಿರುವ ಬೆಳಗೆರೆ, ಮುದ್ರಣಕ್ಕೆ ಕೊಂಚ ತಡವಾಗಿದೆ. ವಿವರವಾಗಿ ಮುಂದೆ ಬರೆಯುತ್ತೇನೆ ಎಂದು ಹೇಳಿದ್ದಾರೆ. ( ಇದನ್ನೂ ಓದಿ:  ರವಿ ಬೆಳಗೆರೆ ಹತ್ಯೆಗೂ ನಡೆದಿತ್ತಂತೆ ಸಂಚು – ಗನ್ ಹಿಂದಿನ ರಿಯಲ್ ಕಹಾನಿ )

    ಸಾಫ್ಟ್ ಕಾರ್ನರ್ ನಲ್ಲಿ ಹೇಳಿದ್ದು ಏನು?
    ಹಾಯ್ ಮೈ ರೀಡರ್ಸ್!
    ಈಗ ತುಸು ಹೊತ್ತಿಗೆ ಬಂಧಮುಕ್ತನಾಗಿದ್ದೇನೆ. Nothing can stop me! ಇದು ಶುರುವಾದದ್ದು ಹೇಗೆ ಅಂತ ಹೇಳ್ತೀನಿ. ಒಬ್ಬ ಸುಪಾರಿ ಹಂತಕ. ಒಬ್ಬ ಪೊಲೀಸ್ ಅಧಿಕಾರಿ. ಹೀಗೆ ನಾಲ್ಕೈದು ಜನ ಸೇರಿ ನೇಯ್ದ ಅತ್ಯಂತ ಬಲಹೀನ ಜಾಲವಿದು. ಆಫೀಸಿನಲ್ಲಿ ಆಗಷ್ಟೇ ಬರೆದು ನಿದ್ರೆಯಲ್ಲಿದೆ. ಪೊಲೀಸ್ ಅಧಿಕಾರಿಯೊಬ್ಬರು ಬಂದು ನಿಮ್ಮನ್ನ arrest ಮಾಡ್ತಿದೀನಿ ಅಂದರು. Fine, ಹಲ್ಲುಜ್ಜಿಕೊಂಡು ಬರ್ತೀನಿ. ನೀವು ಅಲ್ಲೀ ತನಕ ಕೂತಿರಿ ಅಂದೆ. ಒಂದು ಮೂಲೆ ಬಿಡದೆ search ಮಾಡಿದರು. ಸಿಗರೇಟಿನ ತುಂಡು ಬಿಟ್ಟು ಇನ್ನೇನು ಸಿಕ್ಕೀತು?

    ಅಷ್ಟರಲ್ಲಿ ಸುನೀಲ್‍ನ chapter ಬಂತು. ಅವನು ಹದಿನೈದು ವರ್ಷದ ನಂತರ ಕೆಲಸ ಬಿಟ್ಟು ಅಲ್ಲಲ್ಲಿ ಪರದಾಡಿ ಮೊನ್ನೆಯಷ್ಟೆ ಮತ್ತೆ ಕೆಲಸಕ್ಕೆ ಬಂದಿದ್ದ. Cool. He was working. ಹದಿನೈದು ವರ್ಷದ ಜೊತೆಗಾರ. ( ಇದನ್ನೂ ಓದಿ: ನೀವು ಯಾರು..? ನಾನು ಯಾಕೆ ಇಲ್ಲಿದ್ದೇನೆ..? ಜೈಲು ಸಿಬ್ಬಂದಿಗೆ ರವಿ ಬೆಳಗೆರೆ ಪ್ರಶ್ನೆ )

    But Shashi ಹೇಳಿದ್ದು? ಸುನೀಲ್ ಹತ್ಯೆಗೆ ನಾನು 30 ಲಕ್ಷ ರೂ. ಸುಪಾರಿ ಕೊಟ್ಟೆನಂತೆ. ಹದಿನೈದು ಸಾವಿರ advance ಕೊಟ್ಟೆನಂತೆ! what a stupid talk. “ರವಿ ಬೆಳಗೆರೆ ನನ್ನ ಕೊಲ್ಲಿಸ್ತಾರೆ. ಜೀವ ಭಯ ಇದೆ” ಅಂದನಂತೆ. ಇದಕ್ಕೆ ಎಲ್ಲಿಂದ ನಗಬೇಕು? ಹದಿನೈದು ವರ್ಷ ಜೊತೆಗೆ ದುಡಿದೋನ್ನ ಸುಪಾರಿ ಕೊಟ್ಟು ಕೊಲ್ಲಿಸಲಾ? ಆಯ್ತು, ಕಟಕಟೆ, ಆಸ್ಪತ್ರೆ, ಜೈಲು-ಈಗ ಮೇಲು!I am safe and cheerful. ನಿಮ್ಮ ಆಶೀಸ್ಸುಗಳೇ ಧೈರ್ಯ. ಕೊಂಚ ತಡವಾಗಿದೆ ಪ್ರಿಂಟಿಗೆ. ವಿವರ ಬರೀತೇನೆ; ಬರೆಯಲೇ ಬೇಕು ಕೂಡ. ಉಸಿರುಗಟ್ಟಿಸುವಷ್ಟು. I love you.

    ಖಾಸ್ ಬಾತ್‍ನಲ್ಲಿ ಹೇಳಿದ್ದು ಏನು?
    ನಾನು ಕ್ರೈಂ ಬರೆದಿದ್ದೇನೆ, ಟಿವಿಯಲ್ಲಿ ತೋರಿಸಿದ್ದೇನೆ. ವೈಯಕ್ತಿಕವಾಗಿ ಪಾತಕಿಗಳನ್ನು ನೋಡಿದ್ದೇನೆ. ಎಲ್ಲವೂ ತಿಳಿಸುವ ಕಾನೂನು ಅರಿತ್ತಿದ್ದೇನೆ. ಇಷ್ಟೆಲ್ಲ ಇರುವವನು ಹದಿನಾಲ್ಕು- ಹದಿನೈದು ವರ್ಷಗಳಿಂದ ನನ್ನೊಂದಿಗೆ ಕೆಲಸ ಮಾಡಿದ ಹುಡುಗನನ್ನು ಕೊಂದು ಹಾಕಲು ಸುಪಾರಿ ಕೊಡುತ್ತೇನಾ? Am I a killer? ಸಿಟ್ಟು ಬಂದರೆ ಈ ಹುಡುಗರ ಮೇಲೆ ರೇಗುತ್ತೇನೆ. ತೀರ ನಿರುಪಯೋಗಿಗಳು, ಕೆಲಸಗಳ್ಳರು ಅಥವಾ ವಸೂಲಿ ವೀರರು ಅಂತ ಗೊತ್ತಾದರೆ ತಕ್ಷಣ ತಿರುಪತಿ ತಿಮ್ಮನಿಗೆ ಸಮರ್ಪಿಸಿ ಕೈ ತೊಳೆದುಕೊಂಡು ಬಿಡುತ್ತೇನೆ. ಇದು my type of functioning.

    ಇರಲಿ, ನಾನು ಹೇಗೆ ಅಂತ ಎಲ್ಲರೂ ತಿಳಿದು ಕೊಂಡಿರಬೇಕು ಎಂಬ ಭ್ರಾಂತು ನನಗಿಲ್ಲ. ಮೊನ್ನೆ ಅರೆಸ್ಟ್ ಮಾಡಿದ ಸಿಸಿಬಿಯ ಅಧಿಕಾರಿ ಎಸಿಪಿ ಸುಬ್ರಮಣ್ಯರವರು ಅನೇಕ ವರ್ಷಗಳ ಹಿಂದೆ ತುಂಬಾ ನಟೋರಿಯಸ್ ಆದ ನಂದಗುಡಿ station ನಲ್ಲಿದ್ದರು. very honest and bold, `ನಂದ ಗುಡಿ’ ಅಂದ್ರೇನೆ ಅಪಾಯಕಾರಿ, ಅಲ್ಲಿ ಪಾತಕಿಗಳ ಸದ್ದಡಗಿಸಿದವರು. ಇಂತಹ ಅಧಿಕಾರಿ ಅನಾರೋಗ್ಯಗೊಂಡಿದ್ದ ನನ್ನನ್ನು ಅದ್ಹೇಂಗೆ handle ಮಾಡಿದರೋ? ಯಾಕೆಂದರೆ ನಾನು ವಿಪರೀತ ಸಿಗರೇಟಿನ ದಾಸ. ಬೇಕಾದರೆ ಒಂದ್ಹೊತ್ತು ಊಟವನ್ನಾದರೂ ಬಿಟ್ಟೇನು; ಸಿಗರೇಟು ಬಿಡಲಾರೆ. ನನಗೆ ಸಿಗರೇಟು ಕೊಟ್ಟು ಪಾಪ ಯಾರ್ಯಾರು ಬೈಸಿಕೊಂಡರೋ? ನಿನ್ನೆ ಮೈ ಅಲುಗಿಸಿ ಎಬ್ಬಿಸಿದಾಗ ಇದೆಲ್ಲ ನೆನಪಾದವು, ನಿಮ್ಮೊಂದಿಗೆ ಹಂಚಿಕೊಂಡೆ. I am bold, honest and upright.

  • ನಾನು ಯಾರಿಗೂ ಸುಪಾರಿ ನೀಡಿಲ್ಲ, ನಿಮ್ಮ ಟೈಮೂ ವೇಸ್ಟ್, ನನಗೂ ತೊಂದ್ರೆ – ಸಿಸಿಬಿ ಪೊಲೀಸರ ಬೆವರಿಳಿಸಿದ ಬೆಳಗೆರೆ

    ನಾನು ಯಾರಿಗೂ ಸುಪಾರಿ ನೀಡಿಲ್ಲ, ನಿಮ್ಮ ಟೈಮೂ ವೇಸ್ಟ್, ನನಗೂ ತೊಂದ್ರೆ – ಸಿಸಿಬಿ ಪೊಲೀಸರ ಬೆವರಿಳಿಸಿದ ಬೆಳಗೆರೆ

    ಬೆಂಗಳೂರು: ಪತ್ರಕರ್ತ ಹಾಗೂ ಸಹೋದ್ಯೋಗಿ ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರವಿ ಬೆಳಗೆರೆ ವಿಚಾರಣೆ ಬಹುತೇಕ ಪೂರ್ಣಗೊಂಡಿದೆ.

    ವಿಚಾರಣೆಯ ವೇಳೆ ಯಾವುದೇ ಹೇಳಿಕೆ ನೀಡದಿರುವ ರವಿ ಬೆಳಗೆರೆ, ಯಾವ ಸುಪಾರಿಯೂ ನಾನು ನೀಡೇ ಇಲ್ಲ. ಕುಡಿದ ಮತ್ತಿನಲ್ಲಿ ಏನೋ ಹೇಳಿರಬಹುದು. ಅದನ್ನಾ ಪರಿಗಣಿಸೋಕೆ ಸಾಧ್ಯನಾ? ಎಂದು ಹೇಳಿದ್ದಾರೆ.

    ಕುಡಿದ ಮತ್ತಿನಲ್ಲಿ ಹೇಳಿರಬಹುದು ಅದನ್ನೇ ನೀವು ಸುಪಾರಿ ಅಂತ ಇದ್ದೀರಿ. ನಾನೇನಾದರೂ ಹೊಸಬನ ಭೇಟಿ ಮಾಡಿ, ಮಾತನಾಡಿದ್ರೆ ನಿಮ್ಮ ಅನುಮಾನ ಸರಿಯಾಗಿ ಇರ್ತಿತ್ತು. ಆದ್ರೆ ನಾನು ನನ್ನ ಮಾಜಿ ಡ್ರೈವರ್ ಭೇಟಿಯಾಗಿದ್ದೆ. ಪರಿಸ್ಥಿತಿ ಒತ್ತಡಕ್ಕೆ ಸಿಕ್ಕಿ ಕೊಲೆಗಾರ ಆದ. ಕೊಲೆಗಾರನನ್ನು ಭೇಟಿ ಮಾಡಿದ್ರೆ ನಾನು ಕೊಲೆಗಾರನ ಕೊಲೆ ಮಾಡಿಸ್ತೀನಾ?. ಸುಮ್ಮನೆ ನಿಮಗೂ ಕಾಲಹರಣ ನನಗೂ ಹಿಂಸೆನ್ರಪ್ಪ ಅಂತ ಸಿಸಿಬಿ ಅಧಿಕಾರಿಗಳಿಗೆಯೇ ರವಿ ಬೆಳಗೆರೆ ಟಾಂಗ್ ನೀಡಿದ್ದಾರೆ.

    ರವಿ ಬೆಳಗೆರೆ ಪೊಲೀಸ್ ಕಸ್ಟಡಿ ನಾಳೆಗೆ ಅಂತ್ಯವಾಗಲಿದೆ. ಈಗಾಗಲೇ ಪೊಲೀಸರು ಸಿಸಿಟಿವಿ, ಫೋನ್ ಕರೆಯನ್ನೇ ಆಧರಿಸಿ ತನಿಖೆ ಮುಂದುವರೆಸಿದ್ದಾರೆ. ಅಲ್ಲದೇ ಈಗಾಗಲೇ ಸುನಿಲ್ ಹೆಗ್ಗರವಳ್ಳಿ ಹೇಳಿಕೆ ಕೂಡ ಪೊಲೀಸರು ಸಂಗ್ರಹಿಸಿದ್ದಾರೆ ಎಂದು ಪಬ್ಲಿಕ್ ಟಿವಿಗೆ ಸಿಸಿಬಿ ಮೂಲಗಳ ಮಾಹಿತಿ ನೀಡಿವೆ.

    ಎಫ್‍ಐಆರ್ ದಾಖಲು: ರವಿಬೆಳಗೆರೆ ಬಂಧನ ಪ್ರಕರಣದ ಬಳಿಕ ಹಾಯ್ ಬೆಂಗಳೂರು ಕಚೇರಿಯಲ್ಲಿ ಜಿಂಕೆ ಚರ್ಮ, ಆಮೆ ಚಿಪ್ಪು ಪತ್ತೆ ಹಿನ್ನೆಲೆಯಲ್ಲಿ ಸಿಸಿಬಿ ಅಧಿಕಾರಿಗಳು ಅರಣ್ಯ ಇಲಾಖೆಗೆ ಪತ್ರ ಬರೆದಿದ್ದರು. ಹೀಗಾಗಿ ಶನಿವಾರ ಅರಣ್ಯಾಧಿಕಾರಿಗಳು ಸಿಸಿಬಿ ಕಚೇರಿಗೆ ಆಗಮಿಸಿ ಜಿಂಕೆ ಚರ್ಮ ಮತ್ತು ಆಮೆ ಚಿಪ್ಪು ವಶಕ್ಕೆ ಪಡೆದಿದ್ದರು. ಸದ್ಯ ಈ ಹಿನ್ನೆಲೆಯಲ್ಲಿ ಅರಣ್ಯ ಅಧಿಕಾರಿಗಳಿಂದ ರವಿಬೆಳಗೆರೆ ವಿರುದ್ಧ ಎಫ್ ಐ ಆರ್ ದಾಖಲು ಮಾಡಲಾಗಿದೆ.

    ಆರೋಗ್ಯದಲ್ಲಿ ಏರುಪೇರು: ರವಿಬೆಳಗೆರೆಯವರಿಗೆ ಮತ್ತೆ ಲೋ ಶುಗರ್, ಲೋ ಬಿಪಿಯಾಗಿ ಆರೋಗ್ಯದಲ್ಲಿ ಏರಪೇರಾಗಿದೆ. ಹೀಗಾಗಿ ವೈದಕೀಯ ತಪಾಸಣೆಗೆ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ರವಿಬೆಳಗೆರೆ ಹೈಡ್ರಾಮ ಮಾಡಿದ್ದು, ಸಿಗರೇಟ್ ಬೇಕಾಂತ ಹಠ ಹಿಡಿದಿದ್ದರು. ಅಲ್ಲದೇ ಕಾರಿಗೆ ಕಾಲು ಅಡ್ಡ ಇಟ್ಟಿಕೊಂಡು ಸಿಗರೇಟ್ ಕೊಡದೆ ಇದ್ರೆ ಕಾಲು ತೆಗೆಯಲ್ಲ ಅಂತಾ ಹಠ ಮಾಡಿದ್ದಾರೆ.

    ಸಿಗರೇಟು ಕೊಡದೇ ಇದ್ದಿದ್ದಕ್ಕೆ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕಾನೂನಿನಲ್ಲಿಯೇ ಅವಕಾಶ ಇದೆ, ಕೊಡೊದಕ್ಕೆ ನಿಮಗೇನು ಅಂತ ಬೈಯ್ದಿದ್ದಾರೆ. ಮನವೊಲಿಸಲು ಹೋದ ಮಗ ಕರ್ಣನ ಮೇಲೂ ಕಿಡಿಕಾರಿದ್ದಾರೆ. ಕೊನೆಗೆ ಸಿಸಿಬಿ ಪೊಲೀಸರು ಸಿಗರೇಟು ಕೊಟ್ಟು ಸೇದಿಸಿ ಬಳಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಇದೇ ವೇಳೆ ಕಾಲಿಗೆ ಗಾಯ ಆಗಿದೆ ನಿಮಗೆ ಮನುಷ್ಯತ್ವ ಇಲ್ವಾ ಅಂತ ಪೊಲೀಸರಿಗೆ ಬೆಳಗೆರೆ ತರಾಟೆ ತೆಗೆದುಕೊಂಡಿದ್ದಾರೆ.

    ಇದೇ ಸಂದರ್ಭದಲ್ಲಿ ಮಾಧ್ಯಮದವರನ್ನು ಹತ್ತಿರ ಕರೆದು ಎಷ್ಟು ದಿನ ಅಂತ ನನ್ನನ್ನೇ ಕಾಯ್ತಿರೋ ಬೇಜರಾಗೊಲ್ವಾ..? ಮತ್ತೆ ಸಿಕ್ತೀನಿ ಬಿಡ್ರೋ ಅಂತ ಹೇಳಿದ್ದಾರೆ.

    https://www.youtube.com/watch?v=Gw8qDp91QbA

    https://www.youtube.com/watch?v=7FMDBk4SZIs

    https://www.youtube.com/watch?v=BSYzOrn_xUM

  • ಪತ್ರಕರ್ತ ರವಿ ಬೆಳಗೆರೆ ಸುಪಾರಿ ಕೇಸಲ್ಲಿ ಹೊಸ ಟ್ವಿಸ್ಟ್!

    ಪತ್ರಕರ್ತ ರವಿ ಬೆಳಗೆರೆ ಸುಪಾರಿ ಕೇಸಲ್ಲಿ ಹೊಸ ಟ್ವಿಸ್ಟ್!

    ಬೆಂಗಳೂರು: ಸುಮಾರು 14 ವರ್ಷ ಜೊತೆಗಿದ್ದ ಸಹೋದ್ಯೋಗಿ ಹಾಗೂ ತನ್ನ ಎರಡನೇ ಮಗ ಎಂದೇ ಕರೆದಿದ್ದ ಪತ್ರಕರ್ತ ಸುನಿಲ್ ಹೆಗ್ಗರವಳ್ಳಿ ಹತ್ಯೆಗೆ ಹಾಯ್ ಬೆಂಗಳೂರು ಪತ್ರಿಕೆಯ ಸಂಪಾದಕ ರವಿ ಬೆಳಗೆರೆ ನೀಡಿರುವ ಸುಪಾರಿ ಕೇಸ್ ಮತ್ತೊಂದು ತಿರುವು ಪಡೆದಿದೆ.

    ಸುನಿಲ್ ಹೆಗ್ಗರವಳ್ಳಿ ಹತ್ಯೆಗೆ ರೂಪಿಸಿದ ಮೊದಲ ಸಂಚು ವಿಫಲವಾದ ಕೂಡಲೇ ಹಂತಕರಿಗೆ ತಲೆಮರೆಸಿಕೊಳ್ಳುವಂತೆ ರವಿ ಬೆಳಗೆರೆ ಸೂಚಿಸಿದ್ದರು. ಆಗಸ್ಟ್ 28ರ ಮೊದಲ ಪ್ಲಾನ್ ವಿಫಲವಾದ ಬಳಿಕ ಅಂದರೆ, ತಿಂಗಳು ಕಳೆದ ಬಳಿಕ ಮತ್ತೊಮ್ಮೆ ಸುನಿಲ್ ಹೆಗ್ಗರವಳ್ಳಿ ಹತ್ಯೆಗೆ ಸ್ಕೆಚ್ ಹಾಕಿದ್ದರು. ಆದ್ರೆ ಅಂದು ಕೂಡ ಸುನಿಲ್ ಹೆಗ್ಗರವಳ್ಳಿ ಸ್ವಲ್ಪದ್ರಲ್ಲೇ ಪಾರಾಗಿದ್ದರು. ಇದನ್ನೂ ಓದಿ: ನನ್ನ ಕೊಲೆಗೆ ರವಿ ಬೆಳಗೆರೆ ಸುಪಾರಿ ಕೊಟ್ಟಿದ್ದರೆಂದು ಕೇಳಿ ಶಾಕ್ ಆಗಿದೆ: ಸುನೀಲ್ ಹೆಗ್ಗರವಳ್ಳಿ

    ಸುನಿಲ್ ಮನೆಯಲ್ಲಿ ಸಿಸಿಟಿವಿ ಇದ್ದಿದ್ದರಿಂದ ಮೊದಲ ಪ್ಲಾನ್ ವಿಫಲವಾದ ಬಳಿಕ, 2ನೇ ಬಾರಿ ಬೇರೆ ಕಡೆ ಹತ್ಯೆಗೆ ಸಂಚು ರೂಪಿಸಿದ್ದರು. ಕರೆ ಮಾಡಿ ಬೇರೆ ಕಡೆಗೆ ಕರೆಸಿಕೊಂಡು ಹತ್ಯೆಗೆ ಪ್ಲಾನ್ ಮಾಡಿದ್ದರು. ತನ್ನ ಆಪ್ತನ ಮೊಬೈಲ್‍ನಿಂದ 20ಕ್ಕೂ ಹೆಚ್ಚು ಬಾರಿ ಕರೆ ಮಾಡಿದ್ದರು. ಆದ್ರೆ ಈ ಬಾರಿ ಸುನಿಲ್ ಹೆಗ್ಗರವಳ್ಳಿ ಧರ್ಮಸ್ಥಳದಲ್ಲಿ ಇದ್ದಿದ್ರಿಂದ ಪಾರಾಗಿದ್ದರು. ಇದರಿಂದ ಬೇಸತ್ತು ಶಶಿಧರ್ ಮುಂಡೇವಾಡಗೆ ರವಿಬೆಳಗೆರೆ ಬೈದು ಕಳುಹಿಸಿದ್ದರು ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭಿಸಿದೆ. ಇದನ್ನೂ ಓದಿ: Exclusive: ರವಿಬೆಳಗೆರೆ ರಾಕ್ಷಸ, ನನ್ನ ವಿರುದ್ಧ ಸುಪಾರಿ ನೀಡಿರುವುದು ಅತ್ಯಂತ ಕೆಟ್ಟ ಕೆಲಸ: ಸುನೀಲ್ ಹೆಗ್ಗರವಳ್ಳಿ

    ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಯ ವೇಳೆ ವಿಶೇಷ ತನಿಖಾ ತಂಡ ಬೆಂಗಳೂರಿನಲ್ಲಿ ಸುಪಾರಿ ಕಿಲ್ಲರ್ ವಿಜಯಪುರದ ಚಡಚಣದ ಶಾರ್ಪ್ ಶೂಟರ್ ಶಶಿ ಮುಂಡೇವಾಡಗಿಯನ್ನು ಶುಕ್ರವಾರ ಬಂಧಿಸಿತ್ತು. ಆತನ ವಿಚಾರಣೆ ವೇಳೆ ರವಿ ಬೆಳೆಗೆರೆಯವರು ಸಹೋದ್ಯೋಗಿ ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿರುವ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಪತ್ರಕರ್ತ ರವಿ ಬೆಳಗೆರೆಯನ್ನು ಬಂಧಿಸಲಾಗಿತ್ತು. ಇದನ್ನೂ ಓದಿ: Exclusive: ಮದ್ವೆ ಮನೆಯಲ್ಲಿ ಊಟ ಮಾಡಿ ಸಿಎಂ ಕೊಟ್ಟ ಆದೇಶದಿಂದ ಬೆಳಗೆರೆ ಅರೆಸ್ಟ್!

    ರವಿ ಬೆಳಗೆರೆ ಎರಡನೇ ಪತ್ನಿ ಜತೆ ಹಾಯ್ ಬೆಂಗಳೂರು ಪತ್ರಿಕೆ ವರದಿಗಾರ ಸನೀಲ್ ಹೆಗ್ಗರವಳ್ಳಿ ಅಕ್ರಮ ಸಂಬಂಧದ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಸುನೀಲ್ ಹತ್ಯೆ ಮಾಡಲು ನಿರ್ಧರಿಸಿದ್ದ ಬೆಳಗೆರೆ ಶಾರ್ಪ್ ಶೂಟರ್ ಶಶಿ ಮುಂಡೇವಾಡಗಿಗೆ 30 ಲಕ್ಷ ರುಪಾಯಿ ಸುಪಾರಿ ಕೊಟ್ಟಿದ್ದರು ಎಂಬುದಾಗಿ ತಿಳಿದುಬಂದಿತ್ತು. ಸದ್ಯ ರವಿಬೆಳಗೆರೆ ಸಿಸಿಬಿ ವಶದಲ್ಲಿದ್ದಾರೆ. ಇದನ್ನೂ ಓದಿ: ರವಿ ಬೆಳಗೆರೆ ಹೆಸರನ್ನ ಸುಪಾರಿ ಹಂತಕ ಬಾಯ್ಬಿಟ್ಟಿದ್ದು ಹೇಗೆ? ಬೆಳಗೆರೆ ಕಚೇರಿಯಲ್ಲಿ ಏನು ಸಿಕ್ಕಿದೆ?

    https://www.youtube.com/watch?v=X0xApCHxdCQ

    https://www.youtube.com/watch?v=x86o3NINFFM

    https://www.youtube.com/watch?v=J4W3Dqe2jrY

    https://www.youtube.com/watch?v=NVU9MGtsE60

  • ರವಿ ಬೆಳಗೆರೆಯನ್ನು ಯಾಕೆ ಬಂಧಿಸಿದ್ದಾರೆ?- ವರದಿಗಾರರಿಗೆ ಸಿಎಂ ಪ್ರಶ್ನೆ

    ರವಿ ಬೆಳಗೆರೆಯನ್ನು ಯಾಕೆ ಬಂಧಿಸಿದ್ದಾರೆ?- ವರದಿಗಾರರಿಗೆ ಸಿಎಂ ಪ್ರಶ್ನೆ

    ಮೈಸೂರು: ಹಾಯ್ ಬೆಂಗಳೂರು ಸಂಪಾದಕ ರವಿ ಬೆಳೆಗೆರೆ ಬಂಧನ ಕುರಿತಂತೆ ಪ್ರತಿಕ್ರಿಯೆ ನೀಡಲು ಕೇಳಿದಾಗ ಸಿಎಂ ಸಿದ್ದರಾಮಯ್ಯ, ಯಾವ ಕಾರಣಕ್ಕೆ ಬಂಧನ ಮಾಡಿದ್ದಾರೆ? ಅಂತ ಪ್ರಶ್ನಿಸಿದ್ದಾರೆ.

    ನಗರದಲ್ಲಿ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸರು ಕಾನೂನು ಪ್ರಕಾರ ತನಿಖೆ ಮಾಡ್ತಾರೆ. ನಮಗೂ ಅದಕ್ಕೂ ಸಂಬಂಧ ಇಲ್ಲ. ಅವರ ಬಳಿ ಸಾಕ್ಷಿ ಇದೆಯೋ ಏನೋ ಗೊತ್ತಿಲ್ಲ. ಮಾತಾಡಬೇಕು. ಪೊಲೀಸರು ನನ್ನೊಂದಿಗೆ ಮಾತಾಡಿಲ್ಲ ಅಂದ್ರು. ಇದನ್ನೂ ಓದಿ: Exclusive: ಮದ್ವೆ ಮನೆಯಲ್ಲಿ ಊಟ ಮಾಡಿ ಸಿಎಂ ಕೊಟ್ಟ ಆದೇಶದಿಂದ ಬೆಳಗೆರೆ ಅರೆಸ್ಟ್!

    ರವಿ ಬೆಳಗರೆ ಕರ್ನಾಟಕದ ಖ್ಯಾತ ಪತ್ರಕರ್ತರಾದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸುವುದು ಹೇಗೆ ಎಂದು ಪೊಲೀಸರು ಚಿಂತೆಯಲ್ಲಿದ್ದಾಗ ಸಿಎಂ ಸಿದ್ದರಾಮಯ್ಯ ಪೊಲೀಸರಿಗೆ ಸಂಪೂರ್ಣ ಬೆಂಬಲ ನೀಡಿದ್ದರು. ಸಿಎಂ ಬೆನ್ನಿಗೆ ನಿಲ್ಲದೇ ಇದ್ದಲ್ಲಿ ಬಂಧನ ಕಷ್ಟವಾಗುತಿತ್ತು ಎಂದು ಬೆಳಗೆರೆ ಬಂಧನವಾದ ಬಳಿಕ ಪೊಲೀಸ್ ಮೂಲಗಳು ಮಾಹಿತಿ ನೀಡಿದ್ದವು.  ಇದನ್ನೂ ಓದಿ: Exclusive: ರವಿಬೆಳಗೆರೆ ರಾಕ್ಷಸ, ನನ್ನ ವಿರುದ್ಧ ಸುಪಾರಿ ನೀಡಿರುವುದು ಅತ್ಯಂತ ಕೆಟ್ಟ ಕೆಲಸ: ಸುನೀಲ್ ಹೆಗ್ಗರವಳ್ಳಿ

    ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ಆರಂಭದಲ್ಲಿ ನಾಡ ಪಿಸ್ತೂಲ್ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ತಾಹೀರ್ ಹುಸೇನ್ ಅನೂಪ್ ಗೌಡನನ್ನು ವಶಕ್ಕೆ ಪಡೆದಿದ್ದರು. ಯಲಹಂಕದಲ್ಲರುವ ಆತನ ಮನೆಯನ್ನು ಪರಿಶೀಲನೆ ನಡೆಸುತ್ತಿದ್ದಾಗ ಒನಿಡಾ ಟಿವಿಯ ಹಿಂದುಗಡೆ ಮೂರು ಪಿಸ್ತೂಲ್ ಇರುವುದನ್ನು ನೋಡಿ ಪೊಲೀಸರು ಒಮ್ಮೆ ಬೆಚ್ಚಿ ಬಿದ್ದಿದ್ದರು. ಬಳಿಕ ಆತನನ್ನು ವಿಚಾರಣೆ ನಡೆಸಿದಾಗ ಪತ್ರಕರ್ತ ಸುನಿಲ್ ಹೆಗ್ಗರವಳ್ಳಿಯವರನ್ನು ಹತ್ಯೆ ಮಾಡಲು ರವಿ ಬೆಳೆಗೆರೆ 30 ಲಕ್ಷ ಸುಪಾರಿ ನಿಡಿರುವ ಬಗ್ಗೆ ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ರವಿಬೆಳೆಗೆರೆಯನ್ನು ಪೊಲಿಸರು ಬಂಧಿಸಿದ್ದರು. ಇದನ್ನೂ ಓದಿ: ರವಿ ಬೆಳಗೆರೆ ಸುಪಾರಿ ಪ್ರಕರಣ: ಮಗಳು ಭಾವನಾ, ಮಗ ಕರ್ಣ ಹೀಗಂದ್ರು

    https://www.youtube.com/watch?v=gpHJrcsZuBM

    https://www.youtube.com/watch?v=kJ5uYUEgVeM

    https://www.youtube.com/watch?v=lgEoaxQ1l44

    https://www.youtube.com/watch?v=tvAkOpM6ZZo

    https://www.youtube.com/watch?v=p0Orve2DpiM

    https://www.youtube.com/watch?v=ucQolRekyhU

     

  • Exclusive: ಮದ್ವೆ ಮನೆಯಲ್ಲಿ ಊಟ ಮಾಡಿ ಸಿಎಂ ಕೊಟ್ಟ ಆದೇಶದಿಂದ ಬೆಳಗೆರೆ ಅರೆಸ್ಟ್!

    Exclusive: ಮದ್ವೆ ಮನೆಯಲ್ಲಿ ಊಟ ಮಾಡಿ ಸಿಎಂ ಕೊಟ್ಟ ಆದೇಶದಿಂದ ಬೆಳಗೆರೆ ಅರೆಸ್ಟ್!

    ಬೆಂಗಳೂರು: ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ಕೊಟ್ಟ ಪ್ರಕರಣದಲ್ಲಿ ರವಿ ಬೆಳಗೆರೆ ಬಂಧನವಾಗಿದೆ. ಆದರೆ ರವಿ ಬೆಳಗೆರೆ ಬಂಧನಕ್ಕೆ ಏನೆಲ್ಲ ಕಸರತ್ತು ನಡೆದಿದೆ ಎನ್ನುವ ಮಾಹಿತಿ ಮೂಲಗಳಿಂದ ಪಬ್ಲಿಕ್ ಟಿವಿಗೆ ಸಿಕ್ಕಿದೆ.

    ಹೌದು, ರವಿ ಬೆಳಗರೆ ಕರ್ನಾಟಕದ ಖ್ಯಾತ ಪತ್ರಕರ್ತರಾದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸುವುದು ಹೇಗೆ ಎಂದು ಪೊಲೀಸರು ಚಿಂತೆಯಲ್ಲಿದ್ದಾಗ ಸಿಎಂ ಸಿದ್ದರಾಮಯ್ಯ ಪೊಲೀಸರಿಗೆ ಸಂಪೂರ್ಣ ಬೆಂಬಲ ನೀಡಿದ್ದರು. ಸಿಎಂ ಬೆನ್ನಿಗೆ ನಿಲ್ಲದೇ ಇದ್ದಲ್ಲಿ ಬಂಧನ ಕಷ್ಟವಾಗುತಿತ್ತು ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.

    ಗೌರಿ ಲಂಕೇಶ್ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ಆರಂಭದಲ್ಲಿ ನಾಡ ಪಿಸ್ತೂಲ್ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ತಾಹೀರ್ ಹುಸೇನ್ ಅನೂಪ್ ಗೌಡನನ್ನು ವಶಕ್ಕೆ ಪಡೆದಿದ್ದರು. ಯಲಹಂಕದಲ್ಲರುವ ಆತನ ಮನೆಯನ್ನು ಪರಿಶೀಲನೆ ನಡೆಸುತ್ತಿದ್ದಾಗ ಒನಿಡಾ ಟಿವಿಯ ಹಿಂದುಗಡೆ ಮೂರು ಪಿಸ್ತೂಲ್ ಇರುವುದನ್ನು ನೋಡಿ ಪೊಲೀಸರು ಒಮ್ಮೆ ಬೆಚ್ಚಿ ಬಿದ್ದಿದ್ದರು.

    ಪಿಸ್ತೂಲ್ ಸಿಕ್ಕಿದ ಹಿನ್ನೆಲೆಯಲ್ಲಿ ಗೌರಿ ಹತ್ಯೆಯ ಬಗ್ಗೆ ಪೊಲೀಸರು ಪ್ರಶ್ನಿಸಿದ್ದಾರೆ. ಈ ವೇಳೆ ಆತ ಗೌರಿ ಹತ್ಯೆಯ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಆದರೆ ಪತ್ರಕರ್ತ ರವಿ ಬೆಳಗೆರೆ ಬಗ್ಗೆ ನನಗೆ ಗೊತ್ತಿದೆ ಎಂದಿದ್ದಾನೆ. ಪಿಸ್ತೂಲ್ ಸಿಕ್ಕಿದ ಹಿನ್ನೆಲೆಯಲ್ಲಿ ಮತ್ತಷ್ಟು ವಿಚಾರಗಳನ್ನು ಕೆದಕಿದಾಗ ಆತ ನಾನು ಪಿಸ್ತೂಲ್ ಮಾರಾಟ ಮಾಡುತ್ತಿದ್ದು, ವಿಜಯಪುರ ಜಿಲ್ಲೆಯ ಶಶಿಧರ್ ರಾಮಚಂದ್ರ ಮುಂಡೆವಾಡಿಗೆ ನಾಡ ಪಿಸ್ತೂಲ್ ಮತ್ತು 02 ಜೀವಂತ ಗುಂಡುಗಳನ್ನು ನೀಡಿದ್ದೆ ಎಂದು ತಿಳಿಸಿದ್ದಾನೆ.

    ಈ ಮಾಹಿತಿ ಆಧಾರದಲ್ಲಿ ಶಶಿಧರ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಇವರಿಬ್ಬರು ಸುನೀಲ್ ಹತ್ಯೆಗೆ ಬೆಳಗೆರೆ ಸುಪಾರಿ ನೀಡಿದ್ದಾರೆ ಎನ್ನುವುದನ್ನು ಬಾಯಿ ಬಿಟ್ಟಿದ್ದಾರೆ. 2017ರ ಆಗಸ್ಟ್ 26ಕ್ಕೆ ಸುನೀಲ್ ಹೆಗ್ಗರವಳ್ಳಿ ಹತ್ಯೆ ನಡೆಯಬೇಕಿತ್ತು. ಆದರೆ ಸುನೀಲ್ ಮನೆಯಲ್ಲಿ ಇಲ್ಲದ ಕಾರಣ ಹತ್ಯೆ ನಡೆಸಲು ಸಾಧ್ಯವಾಗಲಿಲ್ಲ. ಅಷ್ಟೇ ಅಲ್ಲದೇ ಸುನೀಲ್ ಮನೆ ಮುಂದೆ ಸಿಸಿಟಿವಿ ಇದೆ ಎಂದು ಬೆಳಗೆರೆಗೆ ತಿಳಿಸಿದ್ದೆವು. ಈ ವಿಚಾರ ತಿಳಿದು ರವಿ ಬೆಳಗೆರೆ ಕೆಂಡಾಮಂಡಲಗೊಂಡು ಇನ್ನು ಒಂದು ತಿಂಗಳು ಈ ಕಡೆ ಬರುವುದೇ ಬೇಡ, ಒಂದು ತಿಂಗಳ ಕಾಲ ಡಿವಿಆರ್ ನಲ್ಲಿ ಡೇಟಾ ಸೇವ್ ಆಗಿರುತ್ತದೆ. ಹೀಗಾಗಿ ಈ ಕಡೆ ತಲೆಹಾಕಬೇಡಿ. ಒಂದು ತಿಂಗಳು ಬಿಟ್ಟು ಆತನನ್ನು ಮುಗಿಸಿ ಎಂದಿದ್ದರು ಎಂದು ಇವರಿಬ್ಬರು ತಿಳಿಸಿದ್ದಾರೆ.

    ರವಿ ಬೆಳಗೆರೆ ಸಾರಥ್ಯದಲ್ಲಿ ಹತ್ಯೆಗೆ ಸುಪಾರಿ ನೀಡಲಾಗಿದೆ ಎಂದು ತಿಳಿಯುತ್ತಿದ್ದಂತೆ ಖಾಕಿಗಳು ಒಮ್ಮೆ ಶಾಕ್ ಆಗಿದ್ದಾರೆ. ಪ್ರಭಾವಿ ಪತ್ರಕರ್ತನಾಗಿರುವ ಬೆಳಗೆರೆಯನ್ನು ಮುಟ್ಟುವುದು ಅಷ್ಟು ಸುಲಭವಲ್ಲ ಎನ್ನುವುದು ಗೊತ್ತಾಗಿ ಡಿಜಿಪಿ ನೀಲಮಣಿ ರಾಜು ಅವರನ್ನು ಭೇಟಿ ಮಾಡಿ ಸ್ಫೋಟಕ ಸುದ್ದಿಯನ್ನು ತನಿಖಾ ಅಧಿಕಾರಿಗಳು ನೀಡಿದ್ದಾರೆ. ಬೆಳಗೆರೆ ಹೆಸರನ್ನು ಕೇಳಿ ನೀಲಮಣಿ ರಾಜು ಅವರು ಕ್ಷಣ ಬೆಚ್ಚಿ ಬಿದ್ದು ಬಂಧನ ನಿರ್ಧಾರ ಕೈಗೊಳ್ಳುವುದರ ಬಗ್ಗೆ ಗೃಹ ಇಲಾಖೆಯ ಸಲಹೆಗಾರ ಕೆಂಪಯ್ಯಗೆ ಮಾಹಿತಿಯನ್ನು ರವಾನಿಸುತ್ತಾರೆ. ಇದನ್ನೂ ಓದಿ: ಗಂಡ ರಣಭೂಮಿಯಲ್ಲಿ ಇರುವಾಗ ಶತ್ರುವಿನ ತೊಡೆ ಮೇಲೆ ಕುಳಿತರೆ ಅದು ಪಾತಿವ್ರತ್ಯೆಯೇ: ಬೆಳಗೆರೆ ಪೋಸ್ಟ್ ಸುತ್ತ ಅನುಮಾನದ ಹುತ್ತ

    ಕೆಂಪಯ್ಯ ಈ ವಿಚಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ತಿಳಿಸಲು ಮುಂದಾಗುತ್ತಾರೆ. ಈ ವೇಳೆ ಸಿಎಂ ತಮ್ಮನ ಮಗನ ಮದುವೆಗಾಗಿ ಮೈಸೂರಿಗೆ ತೆರಳಿದ್ದರು. ಪ್ರಕರಣ ಗಂಭೀರವಾಗಿರುವ ಇರುವ ಕಾರಣ ಕೆಂಪಯ್ಯ ಈ ವಿಚಾರವನ್ನು ಫೋನಿನಲ್ಲಿ ಹೇಳಲು ಇಚ್ಚಿಸದೇ ನೇರವಾಗಿ ಸಿಎಂ ಭೇಟಿಯಾಗಲು ನವೆಂಬರ್ 28 ರಂದು ಮೈಸೂರಿಗೆ ತೆರಳುತ್ತಾರೆ.

    ಕೆಂಪಯ್ಯ ಮೈಸೂರಿಗೆ ಭೇಟಿ ನೀಡಿದಾಗ ಸಹೋದರನ ಮದುವೆಯಲ್ಲಿ ಊಟ ಮಾಡುತ್ತಾ ಸಿಎಂ ಕುಳಿದ್ದರು. ಊಟದ ಬಳಿಕ ಕೆಂಪಯ್ಯ ಬೆಳಗೆರೆ ಸುಪಾರಿ ನೀಡಿರುವ ವಿಚಾರವನ್ನು ತಿಳಿಸುತ್ತಾರೆ. “ಹೌದಾ. ಇದು ನಿಜವೇ ಏನು ಹೇಳುತ್ತಿದ್ದೀರಿ?” ಎಂದು ಸಿಎಂ ಕೆಂಪಯ್ಯ ಅವರನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಮುಂದೆ ಏನು ಮಾಡುವುದು ಎಂದು ಕೆಂಪಯ್ಯ ಸಿಎಂ ಅವರಲ್ಲಿ ಕೇಳಿದ್ದಾರೆ. ಕೆಲ ನಿಮಿಷ ಯೋಚಿಸಿ ಸಿಎಂ, ಮುಂದೆ ಹೋಗಿ ಪೊಲೀಸರು ಕರ್ತವ್ಯ ನಿರ್ವಹಿಸಲಿ ಎಂದು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಎಲ್ಲ ಸಾಕ್ಷ್ಯಗಳನ್ನು ಸಂಗ್ರಹಿಸಿ ನಂತರ ಬಂಧಿಸಿ ಎಂದು ಸೂಚನೆ ಕೊಟ್ಟಿದ್ದಾರೆ.

    ಸಿಎಂ ಗ್ರೀನ್ ಸಿಗ್ನಲ್ ಕೊಟ್ಟ ಬಳಿಕ ಚುರುಕೊಂಡ ಪೊಲೀಸರು ಎಲ್ಲ ಸಾಕ್ಷ್ಯಗಳನ್ನು ಸಂಗ್ರಹಿಸಿ ಗುರುವಾರ ಶಶಿಧರ್ ರಾಮಚಂದ್ರ ಮುಂಡೆವಾಡಿಯನ್ನು ಬಂಧಿಸಿ ಶುಕ್ರವಾರ ರವಿ ಬೆಳಗೆರೆಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಯಾಕ್ ನೀವ್ ರಿಸ್ಕ್ ತೆಗೆದುಕೊಳ್ತೀರಿ: ಪೊಲೀಸರಿಗೆ ರವಿ ಬೆಳಗೆರೆ ಬುದ್ಧಿವಾದ

    ಒಟ್ಟಿನಲ್ಲಿ ಗೌರಿ ಹತ್ಯೆಯ ತನಿಖೆಯ ವೇಳೆ ಮತ್ತೊಂದು ಹತ್ಯೆಗೆ ಸುಪಾರಿ ನೀಡಿರುವ ವಿಚಾರ ಬೆಳಕಿಗೆ ಬಂದಿದೆ. ರವಿ ಬೆಳಗೆರೆ ಕ್ರೈಂ ಪತ್ರಕರ್ತರಾಗಿರುವ ಕಾರಣ ಅವರಿಗೆ ಮತ್ತಷ್ಟು ಸುಪಾರಿ ಕಿಲ್ಲರ್ಸ್ ಗಳ ಬಗ್ಗೆ ಮಾಹಿತಿ ಇರಬಹುದು ಎನ್ನುವ ಅನುಮಾನ ಈಗ ಪೊಲೀಸರದ್ದು. ಹೀಗಾಗಿ ಅವರನ್ನು ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸಲು ಪೊಲೀಸರು ಮುಂದಾಗಿದ್ದಾರೆ.

     

  • ಹಾಯ್ ಬೆಂಗಳೂರು ಸಂಪಾದಕ ರವಿ ಬೆಳಗೆರೆ ಅರೆಸ್ಟ್

    ಹಾಯ್ ಬೆಂಗಳೂರು ಸಂಪಾದಕ ರವಿ ಬೆಳಗೆರೆ ಅರೆಸ್ಟ್

    ಬೆಂಗಳೂರು: ಗೌರಿ ಹತ್ಯೆಯ ತನಿಖೆ ವೇಳೆ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು, ಪತ್ರಕರ್ತರೊಬ್ಬರ ಹತ್ಯೆಗೆ ಸುಪಾರಿ ನೀಡಿದ ಆರೋಪದಡಿ ಹಾಯ್ ಬೆಂಗಳೂರು ಸಂಪಾದಕ ರವಿ ಬೆಳಗೆರೆಯನ್ನು ಪೊಲೀಸರು ಬಂಧಿಸಿದ್ದಾರೆ.

    ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿದ ಆರೋಪದಲ್ಲಿ ರವಿ ಬೆಳಗೆರೆ ಅವರನ್ನು ಬಂಧಿಸಲಾಗಿದೆ ಎಂದು ಪಬ್ಲಿಕ್ ಟಿವಿಗೆ ಸಿಸಿಬಿ ಮುಖ್ಯಸ್ಥ ಸತೀಶ್ ಕುಮಾರ್ ತಿಳಿಸಿದ್ದಾರೆ. ಶಶಿಧರ್ಮುಂಡೇವಾಡಗಿ  ಸ್ನೇಹಿತರಿಗೆ ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ನೀಡಿದ ಆರೋಪದಲ್ಲಿ ರವಿ ಬೆಳಗೆರೆ ಅವರನ್ನು ಬಂಧಿಸಲಾಗಿದೆ.

    ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಯ ವೇಳೆ ವಿಶೇಷ ತನಿಖಾ ತಂಡ ಬೆಂಗಳೂರಿನಲ್ಲಿ ಸುಪಾರಿ ಕಿಲ್ಲರ್ ವಿಜಯಪುರದ ಚಡಚಣದ ಶಾರ್ಪ್ ಶೂಟರ್ ಶಶಿ ಮುಂಡೇವಾಡಗಿ ಬಂಧಿಸಿತ್ತು. ಆತ ವಿಚಾರಣೆ ವೇಳೆ ನೀಡಿದ ಮಾಹಿತಿ ಮೇರೆಗೆ ಈ ಪ್ರಕರಣ ಬೆಳಕಿಗೆ ಬಂದಿದೆ.

    ರವಿ ಬೆಳಗೆರೆ ಎರಡನೇ ಪತ್ನಿ ಜತೆ ಹಾಯ್ ಬೆಂಗಳೂರು ಪತ್ರಿಕೆ ವರದಿಗಾರ ಸನೀಲ್ ಹೆಗ್ಗರವಳ್ಳಿ ಅಕ್ರಮ ಸಂಬಂಧದ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಸುನೀಲ್ ಹತ್ಯೆ ಮಾಡಲು ನಿರ್ಧರಿಸಿದ್ದ ಬೆಳಗೆರೆ ಶಾರ್ಪ್ ಶೂಟರ್ ಶಶಿ ಮುಂಡೇವಾಡಗಿಗೆ 30 ಲಕ್ಷ ರುಪಾಯಿ ಸುಪಾರಿ ಕೊಟ್ಟಿದ್ದರು ಎನ್ನಲಾಗಿದೆ.

    ವಿಜಯಪುರದ ಜೈಲಿನಲ್ಲಿದ್ದ ಕೈದಿ ನೀಡಿದ್ದ ಸುಳಿವು ಆಧರಿಸಿ ಸುಪಾರಿ ಕಿಲ್ಲರ್ ನನ್ನು ಬಂಧಿಸಿದ್ದ ಪೊಲೀಸರು, ಯಲಹಂಕ ಮನೆಯಲ್ಲಿ ಮೂರು ರಿವಾಲ್ವರ್ ವಶಪಡಿಸಿಕೊಂಡಿದ್ದರು. ಆರಂಭದಲ್ಲಿ ಈತ ನನಗೆ ಈ ಪ್ರಕರಣದ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದನಾದರೂ ಎಸ್‍ಐಟಿ ಈ ಮನೆಯಲ್ಲಿ ತೀವ್ರ ಪರಿಶೋಧನೆ ನಡೆಸಿತ್ತು. ಈ ವೇಳೆ ಮನೆಯಲ್ಲಿದ್ದ ಖಾಲಿ ಟಿವಿಯ ಒಳಗಡೆ 3 ರಿವಾಲ್ವರ್ ಸಿಕ್ಕಿದೆ ಎಂದು ಪಬ್ಲಿಕ್ ಟಿವಿಗೆ ಪೊಲೀಸ್ ಇಲಾಖೆಯ ಉನ್ನತ ಮೂಲಗಳಿಂದ ಮಾಹಿತಿ ಸಿಕ್ಕಿತ್ತು.

    ಸದ್ಯ ಸುಪಾರಿ ಕಿಲ್ಲರ್ ನನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸುತ್ತಿದ್ದಾರೆ. ಜೊತೆಗೆ ಆತನಿಂದ ವಶಕ್ಕೆ ಪಡೆದ ರಿವಾಲ್ವರ್ ತಪಾಸಣೆ ಮಾಡ್ತಿದ್ದಾರೆ. ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಂಟ್ರಿ ಮೇಡ್ ರಿವಾಲ್ವರ್ ರವಾನೆ ಮಾಡಲಾಗಿದೆ. ಸುಪಾರಿ ಕಿಲ್ಲರ್ ವಶಕ್ಕೆ ಪಡೆದು ಪೊಲೀಸರು ನಡೆಸಿದ ವಿಚಾರಣೆ ಇನ್ನಷ್ಟು ಮಹತ್ವದ ವಿಚಾರಗಳನ್ನು ಬಾಯ್ಬಿಟ್ಟಿದ್ದಾನೆ. ಈ ಪ್ರಕರಣದ ಹಿಂದೆ ಪ್ರಭಾವಿಗಳಿದ್ದಾರೆ ಎಂಬ ಮಾಹಿತಿಯನ್ನೂ ಈತ ನೀಡಿದ್ದಾನೆ ಎಂಬ ಮಾಹಿತಿಯೂ ಸಿಕ್ಕಿದೆ.

    ಸುಪಾರಿ ಕಿಲ್ಲರ್ ವಶಕ್ಕೆ ಪಡೆದ ಸುದ್ದಿಯನ್ನು ಪಬ್ಲಿಕ್ ಟಿವಿ ಶನಿವಾರ ಮೊದಲು ಬ್ರೇಕ್ ಮಾಡಿತ್ತು. ಆದರೆ ಕೆಲ ಮಾಧ್ಯಮಗಳು ಈ ವರದಿಯನ್ನು ಅಲ್ಲಗೆಳೆದಿತ್ತು.