Tag: H.P.Manjunath

  • ನನ್ನ ಗೆಲುವು ನಿಶ್ಚಿತ, ಸಂಭ್ರಮಾಚರಣೆ ಮಾಡಿ ಕೇಸ್ ಹಾಕಿಸಿಕೊಳ್ಳಬೇಡಿ: ಕಾಂಗ್ರೆಸ್ ಅಭ್ಯರ್ಥಿ

    ನನ್ನ ಗೆಲುವು ನಿಶ್ಚಿತ, ಸಂಭ್ರಮಾಚರಣೆ ಮಾಡಿ ಕೇಸ್ ಹಾಕಿಸಿಕೊಳ್ಳಬೇಡಿ: ಕಾಂಗ್ರೆಸ್ ಅಭ್ಯರ್ಥಿ

    ಮೈಸೂರು: ನನ್ನ ಗೆಲುವು ನಿಶ್ಚಿತ ಎಂದು ಹುಣಸೂರು ಕಾಂಗ್ರೆಸ್ ಅಭ್ಯರ್ಥಿ ಹೆಚ್.ಪಿ ಮಂಜುನಾಥ್ ಹೇಳಿಕೆ ನೀಡಿದ್ದಾರೆ.

    ಉಪಚುನಾವಣೆ ಫಲಿತಾಂಶ ಪ್ರಕಟವಾಗುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಪಿ ಮಂಜುನಾಥ್ ಸಾಯಿ ಬಾಬಾ ದರ್ಶನ ಪಡೆದರು. ಮಂಜುನಾಥ್ ಅವರು ತಮ್ಮ ಕುಟುಂಬ ಸಮೇತ ಸಾಯಿ ಬಾಬಾ ದೇವಸ್ಥಾನಕ್ಕೆ ಆಗಮಿಸಿ ಬೆಳ್ಳಿ ಪಾದವನ್ನು ಕಾಣಿಕೆಯಾಗಿ ನೀಡಿದ್ದಾರೆ. ವಿಶೇಷ ಪೂಜೆಯಲ್ಲಿ ಭಾಗಿಯಾಗಿ ಅರ್ಚನೆ, ಹಾಲಿನ ಅಭಿಷೇಕ ಮಾಡಿಸಿದ್ದಾರೆ.

    ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಮಂಜುನಾಥ್, ನನ್ನ ಗೆಲುವು ನಿಶ್ಚಿತ ಎಂದು ಹೇಳಿದ್ದಾರೆ. ಅಲ್ಲದೆ ಕ್ಲುಲ್ಲಕ ಕಾರಣಕ್ಕೆ ಜಗಳವಾಡಬೇಡಿ ಎಂದು ತಮ್ಮ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

    ನಾನು ಗೆದ್ದ ಬಳಿಕ ಸಂಭ್ರಮಾಚರಣೆ ಮಾಡಿ ಕೇಸ್ ಹಾಕಿಸಿಕೊಳ್ಳಬೇಡಿ. ಭಾನುವಾರ ಕೂಡ ಮೂರು ಜನ ಹೊಡೆದಾಡಿ ಆಸ್ಪತ್ರೆ ಸೇರಿದ್ದಾರೆ. ಎಲ್ಲರೂ ಕೂಡ ಸಮಯೋಚಿತದಿಂದ ವರ್ತಿಸಿ ಎಂದು ತಮ್ಮ ಕಾರ್ಯಕರ್ತರ ಬಳಿ ಮನವಿ ಮಾಡಿಕೊಂಡರು.

    ಇದೇ ವೇಳೆ ಸರ್ಕಾರ ಇದೆ ಎಂದು ದೌರ್ಜನ್ಯ ನಡೆಸುವುದು ಸರಿಯಲ್ಲ ಎಂದು ಮಂಜುನಾಥ್ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.

  • ಪ್ರತಾಪ್ ಸಿಂಹ ಅಲ್ಲ, ತಿಮ್ಮ ಎಂದ ಕೈ ನಾಯಕ

    ಪ್ರತಾಪ್ ಸಿಂಹ ಅಲ್ಲ, ತಿಮ್ಮ ಎಂದ ಕೈ ನಾಯಕ

    ಮೈಸೂರು: ಹುಣಸೂರಿನ ಮೈತ್ರಿ ಕಾರ್ಯಕರ್ತರ ಸಭೆಯಲ್ಲಿ ಸಂಸದ ಪ್ರತಾಪ್ ಸಿಂಹ ಹೆಸರನ್ನೇ ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಮುಖಂಡ ಎಚ್.ಪಿ.ಮಂಜುನಾಥ್ ಟೀಕಿಸಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಎಲ್ಲರೂ ಸೇರಿ ಪ್ರತಾಪ್ ಅವರನ್ನು ಸಿಂಹ ಮಾಡಿಬಿಟ್ಟಿದ್ದಾರೆ. ಆದ್ರೆ ಅವರು ಪೇಪರ್‍ನ ಸಿಂಹ. ಅವರ ನಡವಳಿಕೆ ಜನರ ಮನಸಲ್ಲಿ ವಿಷತುಂಬಿಸುವ ಕೆಲಸ ಮಾಡುತ್ತೆ. ಆದ್ದರಿಂದ ಅವರು ಪ್ರತಾಪ್ ತಿಮ್ಮ. ಎಲ್ಲರು ಜನರಲ್ಲಿ ಪ್ರೀತಿ ವಿಶ್ವಾಸ ಮೂಡಿಸಬೇಕು. ಐದು ವರ್ಷಗಳ ಹಿಂದೆ ಪ್ರತಾಪ್ ಸಿಂಹ ಸಂಸದರಾಗಿ ಬಂದರು. ಆಗಿನಿಂದ ಕ್ಷೇತ್ರದಲ್ಲಿ ಏನೂ ಅಭಿವೃದ್ಧಿ ಮಾಡಿಲ್ಲ ಎಂದು ಕಿಡಿಕಾರಿದರು.

    ಪ್ರತಾಪ್ ಸಿಂಹ ಅವರ ಈ ಅವಧಿಯಲ್ಲಿ ಅವರ ಸಾಧನೆ ಏನು? ಶಾಂತಿಯುತವಾಗಿದ್ದ ಹುಣಸೂರನ್ನು ಮತ್ತೊಂದು ಮಂಗಳೂರು ಮಾಡಿದ್ದಾರೆ. ನೆಮ್ಮದಿಯಾಗಿ ಬದುಕುವ ವಾತಾವರಣ ಹಾಳು ಮಾಡಿದ್ದಾರೆ. ಈಗ ಚುನಾವಣೆ ಬಂದಿದೆ. ಸಿ.ಎಚ್.ವಿಜಯ ಶಂಕರ್ ಪುಣ್ಯ ಅನ್ನಿಸುತ್ತೆ ಜೆಡಿಎಸ್- ಕಾಂಗ್ರೆಸ್ ನಾಯಕರು ಒಟ್ಟಾಗಿದ್ದಾರೆ. ಕಿತ್ತಾಡುತ್ತಿದ್ದ ಸಿದ್ದರಾಮಯ್ಯ- ಜಿ.ಟಿ.ದೇವೇಗೌಡ ಅವರೇ ಒಂದಾಗಿದ್ದಾರೆ. ಇನ್ನು ನಾವು, ನೀವು ಒಂದಾಗುವುದರಲ್ಲಿ ಏನಿದೆ? ಜೆಡಿಎಸ್- ಕಾಂಗ್ರೆಸ್ ಕಾರ್ಯಕರ್ತರು ಪ್ರಚಾರಕ್ಕೆ ಇಳಿಯುವುದರಲ್ಲಿ ಹಿಂದೆ ಇದ್ದಾರೆ. ಅದೊಂದು ಬಿಟ್ಟರೆ ಉಳಿದೆಲ್ಲ ವಿಚಾರಗಳಲ್ಲೂ ನಾವು ಮುಂದೆ ಇದ್ದೇವೆ ಎಂದು ತಿಳಿಸಿದರು.

  • ನಾನು ಕೊಟ್ಟ ಹಣವನ್ನು ಮತದಾರರಿಗೆ ಹಂಚದೇ, ಬೆಟ್ಟಿಂಗ್ ಆಡಿ ಸೋತ್ರು: ಕೈ ನಾಯಕ ಎಚ್.ಪಿ.ಮಂಜುನಾಥ್

    ನಾನು ಕೊಟ್ಟ ಹಣವನ್ನು ಮತದಾರರಿಗೆ ಹಂಚದೇ, ಬೆಟ್ಟಿಂಗ್ ಆಡಿ ಸೋತ್ರು: ಕೈ ನಾಯಕ ಎಚ್.ಪಿ.ಮಂಜುನಾಥ್

    ಮೈಸೂರು: ನಾನು ಮತದಾರರಿಗೆ ಹಂಚಲು ಕೊಟ್ಟಿದ್ದ ಹಣವನ್ನು ಕಾರ್ಯಕರ್ತರು ಬೆಟ್ಟಿಂಗ್ ಆಡಿ ಸೋತಿದ್ದಾರೆ ಎಂದು ಹುಣಸೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಚ್.ಪಿ.ಮಂಜುನಾಥ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಕಾಂಗ್ರೆಸ್ ಆತ್ಮಾವಲೋಕನ ಸಭೆಯಲ್ಲಿ ಮಾತನಾಡಿದ ಅವರು, ಚುನಾವಣೆ ವೇಳೆ ಮತದಾರರಿಗೆ ಹಂಚಲು ಕೊಟ್ಟಿದ್ದ ಹಣವನ್ನು ಕಾರ್ಯಕರ್ತರು ಬೆಟ್ಟಿಂಗ್ ಆಡಿ ಸೋತಿದ್ದಾರೆ. ಹಣವನ್ನು ತಾವೇ ಉಳಿಸಿಕೊಂಡಿದ್ದರೆ ಸಂತೋಷವಿತ್ತು. ಆದರೆ ಅವರು ದುಡ್ಡು ಹಾಳು ಮಾಡಿಕೊಂಡಿದ್ದಾರೆ. ಹಣವನ್ನು ದುಪ್ಪಟ್ಟು ಮಾಡಲು ಹೋಗಿ ಸೋತಿದ್ದಾರೆ. ನನ್ನ ಬಳಿ ಕೆಟ್ಟ ಹುಡುಗರಿದ್ದಾರೆ. ಯಾರಾದರು ಅವರ ಬೆನ್ನುತಟ್ಟಿ ನನ್ನ ವಿರುದ್ಧ ನಿಲ್ಲವಂತೆ ಹೇಳಿದರೂ ಅವರು ಹಾಗೇ ಮಾಡುವುದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

    ಹೈಕಮಾಂಡ್ ಹಾಗೂ ಪಕ್ಷದ ನಿಧಾರವನ್ನು ಪಾಲಿಸುತ್ತೇನೆ. ನಮ್ಮ ಪಕ್ಷ ಏನು ತೀರ್ಮಾನ ಕೈಗೊಂಡಿದೆಯೋ ಅದಕ್ಕೆ ನಮ್ಮ ಸಹಮತವಿದೆ. ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಬೇಕು. ಅವರಿಗೆ ಸಿದ್ದರಾಮಯ್ಯ ಅವರ ಆಶೀರ್ವಾವಿದೆ ಎಂದು ಎಚ್.ಪಿ.ಮಂಜುನಾಥ್ ಮೂರು ಬಾರಿ ಹೇಳಿದರು.