Tag: Gyanvapi Mosque Survey

  • ಜ್ಞಾನವಾಪಿ ಮಸೀದಿ ಇರುವ ಜಾಗದಲ್ಲಿ ಕನ್ನಡ ಶಾಸನ ಪತ್ತೆ – ASI ವರದಿಯಲ್ಲಿದೆ ಕನ್ನಡ ಬರಹದ ಪ್ರೂಫ್‌

    ಜ್ಞಾನವಾಪಿ ಮಸೀದಿ ಇರುವ ಜಾಗದಲ್ಲಿ ಕನ್ನಡ ಶಾಸನ ಪತ್ತೆ – ASI ವರದಿಯಲ್ಲಿದೆ ಕನ್ನಡ ಬರಹದ ಪ್ರೂಫ್‌

    ಪವಿತ್ರ ಕಡ್ತಲ

    – ಕನ್ನಡ ಬರಹದ ಬಗ್ಗೆ ಇತಿಹಾಸಕಾರರು ಹೇಳೋದೇನು?
    – ಕನ್ನಡ ಶಾಸನ ಸಿಕ್ಕಿರುವುದು ಕನ್ನಡಿಗರಾದ ನಾವು ಹೆಮ್ಮೆ ಪಡಬೇಕಾದ ವಿಚಾರ ಎಂದ ಇತಿಹಾಸತಜ್ಞ

    ಬೆಂಗಳೂರು: ಜ್ಞಾನವಾಪಿ ಮಸೀದಿ (Gyanvapi Mosque) ಇರುವ ಜಾಗದಲ್ಲಿ ಪ್ರಾಚೀನ ಕಾಲದ ಶಾಸನಗಳು (Kannada Inscription ) ಪತ್ತೆಯಾಗಿವೆ. ಅದರಲ್ಲಿ ಕನ್ನಡದ ಶಾಸನವೂ ಇದೆ ಎಂಬ ವಿಚಾರ ಎಎಸ್‌ಐ (ASI) ವರದಿಯಿಂದ ಬಹಿರಂಗವಾಗಿದೆ. ಕನ್ನಡ ಬರಹವಿರುವ ಪ್ರೂಫ್‌ ಕೂಡ ಎಎಸ್‌ಐ ವರದಿಯಲ್ಲಿದೆ.

    ಜ್ಞಾನವಾಪಿ ಮಸೀದಿ ಸಮೀಕ್ಷೆಗೆ ಸಂಬಂಧಿಸಿದಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ವರದಿ ಈಚೆಗೆ ಬಹಿರಂಗವಾಗಿದೆ. ಮಸೀದಿ ಇರುವ ಜಾಗದಲ್ಲಿ ಸಿಕ್ಕ ಪ್ರಾಚೀನ ಶಾಸನದಲ್ಲಿ ‘ದೊಡ್ಡರಸಯ್ಯನ ನರಸಂಣನಭಿಂನಹ’ (ದೊಡ್ಡರಸಯ್ಯನ ನರಸಿಂಹನ ಭಿನ್ನಹ) ಎಂದು ಕನ್ನಡದಲ್ಲಿ ಬರಹವಿರುವ ಸಾಕ್ಷಿ ಕೂಡ ವರದಿಯಲ್ಲಿದೆ. ಇದನ್ನೂ ಓದಿ: ಜ್ಞಾನವಾಪಿ ಮಸೀದಿ ಜಾಗದಲ್ಲೇ ಹಿಂದೂ ದೇವಾಲಯವಿತ್ತು – ಪುರಾತತ್ವ ಇಲಾಖೆ ವರದಿ ಬಹಿರಂಗ

    ಇತಿಹಾಸಕಾರರು ಹೇಳೋದೇನು?
    ಇದು ವಿಜಯನಗರದ ಪಾಳಯಗಾರರ ಅಥವಾ ಅಧಿಕಾರಿಗಳ ಕಾಲದಲ್ಲಿ ನೀಡಿರುವ ಸೇವಾರ್ಥ ಇರಬಹುದು. ಸುಮಾರು 16ನೇ ಶತಮಾನದ್ದು. ಸಾಮಾನ್ಯವಾಗಿ ದೇವರಿಗೆ ಸೇವಾರ್ಥವನ್ನು ನೀಡುವ ಸಮಯದಲ್ಲಿ ಈ ರೀತಿ ಕಲ್ಲಿನಲ್ಲಿ ಸೇವಾರ್ಥಿಯ ಹೆಸರನ್ನು ಹಾಕಿರುತ್ತಾರೆ.

    ಕಾಶಿ ವಿಶ್ವನಾಥನಿಗೆ ಪ್ರತಿ ವರ್ಷವೂ ದತ್ತಿಯನ್ನು ನೀಡೋದು ಸಂಪ್ರದಾಯ. ದತ್ತಿ ಅಂದ್ರೆ ಒಂದೆರಡು ಹಳ್ಳಿ ಅಥವಾ ಗ್ರಾಮವನ್ನು ಸಂಪೂರ್ಣವಾಗಿ ದೇವರಿಗಾಗಿಯೇ ಮೀಸಲಿಟ್ಟು ಅಲ್ಲಿ ಬೆಳೆ ಬೆಳೆದು, ಬರುವ ದುಡ್ಡನ್ನು ವಾರ್ಷಿಕವಾಗಿ ಗ್ರಾಮದ ಬ್ರಾಹ್ಮಣರ ಮುಖಾಂತರ ಆಯಾಯ ಪಾಳೆಯಗಾರರು/ಅಧಿಕಾರಿಗಳ ಹೆಸರಿನಲ್ಲಿ ಕಾಶಿ ವಿಶ್ವನಾಥನ ಸನ್ನಿಧಾನದಲ್ಲಿ ಪೂಜೆ ಮಾಡಿಸುತ್ತಾರೆ. ಇದನ್ನೂ ಓದಿ: ಜ್ಞಾನವಾಪಿ ಮಸೀದಿಯೊಳಗಿರುವ ವಜುಖಾನಾದ ಸಂಪೂರ್ಣ ಸ್ವಚ್ಛತೆಗೆ ಸುಪ್ರೀಂ ಗ್ರೀನ್‌ ಸಿಗ್ನಲ್‌

    ಸಾಮಾನ್ಯವಾಗಿ ಈ ದುಡ್ಡನ್ನು ದೇವಸ್ಥಾನಕ್ಕೆ ಬಳಸಿ ತದನಂತರ ಅಲ್ಲಿ ಕಟ್ಟಡಕ್ಕೆ ಬಳಸುತ್ತಾರೆ. ಈ ವೇಳೆ ಸೇವಾರ್ಥಿಗಳ ಹೆಸರನ್ನು ಹಾಕಲಾಗಿದೆ. ಕೋಲಾರ ಮೂಲದ ಪಾಳೆಯಗಾರರು ಅಥವಾ ಅಧಿಕಾರಿಗಳು ಇರಬಹುದು. ದಕ್ಷಿಣದ ರಾಜರಿಗೆ ಕಾಶಿ ವಿಶ್ವನಾಥನ ಮೇಲೆ ಅಪಾರ ನಂಬಿಕೆ. ಕೆಂಪೇಗೌಡರು ಕೂಡ ಕಾಶಿ ವಿಶ್ವನಾಥ ದೇವರ ಹೆಸರಿನಲ್ಲಿ ದತ್ತಿಯನ್ನು ನೀಡುತ್ತಿದ್ದರು. ಇದರಿಂದ ಒಳ್ಳೆಯದಾಗುತ್ತೆ ಎನ್ನುವ ನಂಬಿಕೆ ಎಂದು ಕನ್ನಡದ ಶಾಸಕನದ ಕುರಿತು ಇತಿಹಾಸಕಾರರು ಮಾಹಿತಿ ನೀಡಿದ್ದಾರೆ.

    ‘ಪಬ್ಲಿಕ್ ಟಿವಿ’ ಜೊತೆ ಇತಿಹಾಸ ತಜ್ಞ ತಲಕಾಡು ಚಿಕ್ಕರಂಗೇಗೌಡ ಮಾತನಾಡಿ, ಕನ್ನಡ ಶಾಸನ ಸಿಕ್ಕಿರೋ ಬಗ್ಗೆ ಕನ್ನಡಿಗರಾದ ನಾವು ಹೆಮ್ಮೆ ಪಡಬೇಕಾದ ವಿಚಾರ. 16ನೇ ಶತಮಾನದ ಶಾಸನ ಇದು. ಈ ಹಿಂದೆ ಕನ್ನಡದ ರಾಜರು ಉತ್ತರದ ಪ್ರಸಿದ್ಧ ದೇವಾಲಯಗಳಿಗೆ ದತ್ತಿ ಕೊಡುತ್ತಿದ್ದರು. ಆ ರೀತಿ ದತ್ತಿ ಕೊಟ್ಟಿರುವವರೇ ದೊಡ್ಡರಸಯ್ಯ ಮತ್ತು ನರಸಿಂಹ. ಇವರು ಕರ್ನಾಟಕದ ಯಾವುದಾದರೂ ಜಿಲ್ಲೆಯ ಪ್ರಸಿದ್ಧ ವ್ಯಕ್ತಿಗಳೇ ಆಗಿರುತ್ತಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಜ್ಞಾನವಾಪಿ ಮಸೀದಿ ಕೇಸ್‌- ಪೂಜಾ ಸ್ಥಳಗಳ ಕಾಯ್ದೆಯ ವ್ಯಾಪ್ತಿಗೆ ಒಳಪಡಲ್ಲ, ಮುಸ್ಲಿಮರು ಸಲ್ಲಿಸಿದ್ದ 5 ಅರ್ಜಿ ವಜಾ

    ಹಿಂದೆ ಅವರು ದತ್ತಿಕೊಟ್ಟ ಕಾರಣಕ್ಕೆ ಅವರ ಹೆಸರನ್ನ ಹಾಕಿದ್ದಾರೆ. ಈ ಶಾಸನ ಸರ್ವೇಗೆ ಪೂರಕವಾಗಲಿದೆ. ಮತ್ತಷ್ಟು ಕನ್ನಡದ ಶಾಸನಗಳು ಪತ್ತೆಯಾದರು ಅಚ್ಚರಿ ಇಲ್ಲ ಎಂದು ಹೇಳಿದ್ದಾರೆ.

    839 ಪುಟಗಳ ಸರ್ವೆ ವರದಿ
    ವಾರಣಾಸಿಯ ಕಾಶಿ ವಿಶ್ವನಾಥ ದೇವಸ್ಥಾನದ ಸಮುಚ್ಛಯದಲ್ಲಿರುವ ಜ್ಞಾನವಾಪಿ ಮಸೀದಿಯಲ್ಲಿ ನಡೆಸಲಾಗಿದ್ದ ಸರ್ವೆ ವರದಿಯನ್ನು ಜ.25 ರಂದು ಬಹಿರಂಗಗೊಳಿಸಲಾಗಿದೆ. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಸರ್ವೆ ನಡೆಸಿತ್ತು. 839 ಪುಟಗಳ ಸರ್ವೆ ವರದಿ ಈಗ ಬಹಿರಂಗವಾಗಿದೆ. ಇದನ್ನೂ ಓದಿ: ವಾರಣಾಸಿ ಜಿಲ್ಲಾ ನ್ಯಾಯಾಲಯಕ್ಕೆ ಜ್ಞಾನವಾಪಿ ಮಸೀದಿಯ ಸಮೀಕ್ಷಾ ವರದಿ ಸಲ್ಲಿಕೆ

    ಎಎಸ್‌ಐ ವರದಿಯಲ್ಲಿ, ಮಸೀದಿ ನಿರ್ಮಾಣಕ್ಕೂ ಮೊದಲು ವಿವಾದಿತ ಸ್ಥಳದಲ್ಲಿ ಬೃಹತ್‌ ರೂಪದ ಭವ್ಯ ಮಂದಿರ ಇತ್ತು. ದೇಗುಲ ಕೆಡವಿ ಅದರ ಅವಶೇಷಗಳ ಮೇಲೆ ಮಸೀದಿ ನಿರ್ಮಿಸಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಕೋರ್ಟ್‌ ಆದೇಶದಂತೆ ಎಎಸ್‌ಐ ಮಸೀದಿ ಆವರಣದಲ್ಲಿ ವೈಜ್ಞಾನಿಕ ಸರ್ವೆ ನಡೆಸಿತ್ತು. ಮಸೀದಿಯನ್ನು ಹಿಂದೆ ಇದ್ದ ದೇಗುಲದ ಕಂಬಗಳನ್ನು ಬಳಸಿಕೊಂಡು ನಿರ್ಮಿಸಲಾಗಿದೆ ಎಂಬ ಅಂಶವನ್ನು ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.

  • ಜ್ಞಾನವಾಪಿ ಮಸೀದಿ ಜಾಗದಲ್ಲೇ ಹಿಂದೂ ದೇವಾಲಯವಿತ್ತು – ಪುರಾತತ್ವ ಇಲಾಖೆ ವರದಿ ಬಹಿರಂಗ

    ಜ್ಞಾನವಾಪಿ ಮಸೀದಿ ಜಾಗದಲ್ಲೇ ಹಿಂದೂ ದೇವಾಲಯವಿತ್ತು – ಪುರಾತತ್ವ ಇಲಾಖೆ ವರದಿ ಬಹಿರಂಗ

    ಲಕ್ನೋ: ಅಲಹಾಬಾದ್ ಕೋರ್ಟ್ (Allahabad Court) ನಿರ್ದೇಶನದ ಮೇರೆಗೆ ಕಾಶಿ ವಿಶ್ವನಾಥ ಮಂದಿರದ ಪಕ್ಕದಲ್ಲೇ ಇರುವ ಜ್ಞಾನವಾಪಿ ಮಸೀದಿಯಲ್ಲಿ (Gyanvapi Mosque) ಭಾರತೀಯ ಪುರಾತತ್ವ ಇಲಾಖೆಯಿಂದ ನಡೆಸಲಾಗಿದ್ದ ವೈಜ್ಞಾನಿಕ ಸಮೀಕ್ಷಾ ವರದಿ ಬಹಿರಂಗಗೊಂಡಿದೆ.

    ಜ್ಞಾನವಾಪಿ ಮಸೀದಿ ಜಾಗದಲ್ಲಿ ಮೊದಲು ಹಿಂದೂ ದೇವಾಲಯ (Hindu Temple) ಇತ್ತು ಅಂತಾ ಪುರಾತತ್ವ ಸರ್ವೇಕ್ಷಣಾ ವರದಿ ಹೇಳಿದೆ ಎಂದು ಹಿಂದೂ ಪರ ವಕೀಲ ವಿಷ್ಣು ಶಂಕರ್ ಜೈನ್ ಹೇಳಿದ್ದಾರೆ. ಕೋರ್ಟ್ ಆದೇಶದನ್ವಯ ವರದಿ ಪಡೆದಿರುವ ಅವರು ಸುದ್ದಿಗೋಷ್ಠಿ ನಡೆಸಿ ವರದಿಯಲ್ಲಿರುವ ಪ್ರಮುಖ ಅಂಶಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

    Gyanvapi mosque, 

    ಮಸೀದಿಗಿಂತ ಮುಂಚೆ ದೊಡ್ಡ ಹಿಂದೂ ದೇವಾಲಯದ ರಚನೆಯನ್ನು ಸರ್ವೆ ವರದಿ ಎತ್ತಿ ತೋರಿಸಿದೆ ಎಂದು ಹೇಳಿದ್ದಾರೆ. ಜನಾರ್ದನ, ರುದ್ರ ಮತ್ತು ಉಮೇಶ್ವರ ಮುಂತಾದ ಮೂರು ದೇವತೆಗಳ ಹೆಸರುಗಳು ಮಸೀದಿಯಲ್ಲಿ ಲಭ್ಯವಾದ ಶಾಸನಗಳಲ್ಲಿ ಕಂಡುಬರುತ್ತವೆ. ಮಸೀದಿ ಪಶ್ಚಿಮ ಗೋಡೆ ಹಿಂದೆ ನಿರ್ಮಾಣ ಮಾಡಿದ್ದ ಹಿಂದೂ ದೇವಾಲಯದ್ದಾಗಿದೆ. 17ನೇ ಶತಮಾನದಲ್ಲಿ ಈ ಮಂದಿರವನ್ನು ನಾಶ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: Padma Awards 2024: ಕರ್ನಾಟಕದ 9 ಮಂದಿ ಸೇರಿ 132 ಜನರಿಗೆ ‘ಪದ್ಮ’ ಪ್ರಶಸ್ತಿ – ಸಂಪೂರ್ಣ ಪಟ್ಟಿ ಇಲ್ಲಿದೆ..

    ವರದಿಯಲ್ಲಿ ಏನಿದೆ?
    ಜ್ಞಾನವಾಪಿ ಮಸೀದಿಗೂ ಮುನ್ನ ದೇವಸ್ಥಾನ ಇತ್ತು. ಮಸೀದಿಯನ್ನು ನಿರ್ಮಿಸಲು ದೇವಾಲಯವನ್ನು ನಾಶಪಡಿಸಲಾಗಿದೆ. ಸರ್ವೆ ವೇಳೆ ಕಟ್ಟಡದ ರಚನೆಗೆ ಯಾವುದೇ ಹಾನಿ ಉಂಟಾಗಿಲ್ಲ, ಶೋಧಿಸಿದ ಎಲ್ಲಾ ವಸ್ತುಗಳನ್ನು ದಾಖಲಿಸಲಾಗಿದೆ. ವೈಜ್ಞಾನಿಕ ಅಧ್ಯಯನದ ಆಧಾರದ ಮೇಲೆ, ಅಸ್ತಿತ್ವದಲ್ಲಿರುವ ರಚನೆಯಲ್ಲಿ ಹಿಂದಿನ ರಚನೆಯ ಕಂಬಗಳ ಬಳಕೆಯಾಗಿದೆ. ಸ್ತಂಭಗಳನ್ನು ವ್ಯವಸ್ಥಿತವಾಗಿ ಅಧ್ಯಯನ ಮಾಡಲಾಗಿದೆ. ಇದನ್ನೂ ಓದಿ: ಕನ್ನಡಿಗ ಯೋಧ ಹುತಾತ್ಮ ಕ್ಯಾಪ್ಟನ್ ಪ್ರಾಂಜಲ್‌ಗೆ ‘ಶೌರ್ಯ ಚಕ್ರ’ ಪ್ರಶಸ್ತಿ ಘೋಷಣೆ

    ಹೊಸ ರಚನೆಯ ನಿರ್ಮಾಣದಲ್ಲಿ ಮೊದಲೇ ಅಸ್ತಿತ್ವದಲ್ಲಿರುವ ದೇವಾಲಯದ ಭಾಗಗಳನ್ನು ಮರುಬಳಕೆ ಮಾಡಲಾಗಿದೆ. ದೇವಾಲಯವು ದೊಡ್ಡ ಕೇಂದ್ರವನ್ನು ಮಸೀದಿಯ ಸಭಾಂಗಣವಾಗಿ ಬಳಸಲಾಗುತ್ತಿದೆ. ಈಗಿರುವ ಮಸೀದಿಯಲ್ಲಿ ಹಿಂದಿನ ರಚನೆಯ 34 ಶಾಸನಗಳನ್ನು ಬಳಸಲಾಗಿದೆ. ಮರು ಬಳಕೆ ವೇಳೆ ಕುರುಹು ನಾಶ ಮಾಡಲಾಗಿದೆ. ಈ ಮಸೀದಿಯನ್ನು ನಿರ್ಮಿಸಲು ದೇವಾಲಯವನ್ನು ನಾಶಪಡಿಸಲಾಗಿದೆ. 17ನೇ ಶತಮಾನದಲ್ಲಿ ಈ ಮಂದಿರವನ್ನು ನಾಶ ಮಾಡಲಾಗಿದೆ ಎಂದು ಸಮೀಕ್ಷೆ ವರದಿಯಲ್ಲಿ ಉಲ್ಲೇಖಿಸಲಾಗಿದೆ.