Tag: Gurugrama

  • ಕೆಲಸದಿಂದ ತೆಗೆದಿದ್ದಕ್ಕೆ ಯುವತಿಯಿಂದ ಆತ್ಮಹತ್ಯೆ ಬೆದರಿಕೆ

    ಕೆಲಸದಿಂದ ತೆಗೆದಿದ್ದಕ್ಕೆ ಯುವತಿಯಿಂದ ಆತ್ಮಹತ್ಯೆ ಬೆದರಿಕೆ

    ಗುರುಗ್ರಾಮ: ಕೆಲಸದಿಂದ ತೆಗೆದಿದ್ದಕ್ಕೆ ಯುವತಿಯೊಬ್ಬಳು ಕಚೇರಿಯ ಟೆರೇಸ್‍ಗೆ ತಲುಪಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿದ ಮಾಡಿದ ಘಟನೆ ಹರ್ಯಾಣದ ಗುರುಗ್ರಾಮದಲ್ಲಿ ನಡೆದಿದೆ.

    ಯುವತಿ ಗುರುಗ್ರಾಮ ಸೆಕ್ಟರ್ 18ನಲ್ಲಿರುವ ಪ್ರೈವೇಟ್ ಕನ್ಸಲ್ಟೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದಳು. ಯಾವುದೋ ಕಾರಣಕ್ಕಾಗಿ ಯುವತಿಯನ್ನು ಕೆಲಸದಿಂದ ತೆಗೆಯಲಾಗಿತ್ತು. ಇದರಿಂದ ಆಘಾತಗೊಂಡ ಯುವತಿ ಕಟ್ಟಡದ ಮೇಲೆ ಹೋಗಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿದ್ದಾಳೆ.

    ಯುವತಿ ಟೆರೇಸ್‍ಗೆ ಹೋಗಿ ಕಟ್ಟಡದ ಅಂಚಿನಲ್ಲಿ ನಿಂತು ಇಲ್ಲಿಂದ ಹಾರುವುದಾಗಿ ಕಿರುಚುತ್ತಿದ್ದಳು. ಇದನ್ನು ಕೇಳಿದ ಆಕೆಯ ಸಹದ್ಯೋಗಿಗಳು ಹಾಗೂ ಕೌನ್ಸಲರ್‍ಗಳು ಯುವತಿಯನ್ನು ತಡೆಯಲು ಮುಂದಾದರು. ಆದರೆ ಯುವತಿ ಇವರ ಯಾರ ಮಾತನ್ನು ಒಪ್ಪಲಿಲ್ಲ.

    ಯುವತಿಯ ವರ್ತನೆ ನೋಡಿದ ಆಕೆಯ ಸಹದ್ಯೋಗಿಗಳು ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ಆಗಮಿಸಿದ್ದರು. ಈ ವೇಳೆ ಯುವತಿ ಪೊಲೀಸರನ್ನು ನೋಡಿ ಕೋಪಗೊಂಡು ಜಿಗಿಯುವುದಾಗಿ ಬೆದರಿಕೆ ಹಾಕಿದ್ದಳು.

    ಯುವತಿಯ ವರ್ತನೆಗೆ ಬೇಸೆತ್ತ ಕಂಪನಿಯ ಆಡಳಿತ ಮಂಡಳಿ ಕೆಲಸದಿಂದ ತೆಗೆಯುವುದಿಲ್ಲ ಎಂದು ಮಾತು ನೀಡಿದ್ದರು. ಆಗ ಯುವತಿ ಕಟ್ಟಡದಿಂದ ಕೆಳಗೆ ಇಳಿದಿದ್ದು, ಸಹದ್ಯೋಗಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

  • ಆಪರೇಷನ್ ಕಮಲದ ರಹಸ್ಯ ಬಿಚ್ಚಿಟ್ಟ ಯಡಿಯೂರಪ್ಪ

    ಆಪರೇಷನ್ ಕಮಲದ ರಹಸ್ಯ ಬಿಚ್ಚಿಟ್ಟ ಯಡಿಯೂರಪ್ಪ

    ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರು ಆಪರೇಷನ್ ಕಮಲದ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.

    ಸಿದ್ದಗಂಗಾ ಶ್ರೀಗಳ ಅನಾರೋಗ್ಯದ ಹಿನ್ನೆಲೆಯಲ್ಲಿ ಬಿಎಸ್‍ವೈ ತಡರಾತ್ರಿ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ್ದಾರೆ. ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ನೆಡೆದಾಡುವ ದೇವರು ಸಿದ್ದಗಂಗಾ ಶ್ರೀಗಳ ಆರೋಗ್ಯ ಚೆನ್ನಾಗಿಲ್ಲ. ಇಂದು ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸುತ್ತೇನೆ ಎಂದು ಹೇಳಿದರು.

    ಕಾಂಗ್ರೆಸ್ ನವರು ನಾವು ಆಪರೇಷನ್ ಮಾಡುತ್ತಿದ್ದೇವೆ ಅಂತಾ ಹೇಳುತ್ತಿದ್ದಾರೆ. ನಾವು ಸರ್ಕಾರ ಬೀಳಿಸುವ ಯಾವುದೇ ಪ್ರಯತ್ನ ಮಾಡಿಲ್ಲ. ಬಿಜೆಪಿ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆಂದು ಕಾಂಗ್ರೆಸ್‍ನವರೇ ಹೇಳುತ್ತಿದ್ದಾರೆ. ಸಿಎಂ ಕುಮಾರಸ್ವಾಮಿ ಅವರು ನಮ್ಮ ಓರ್ವ ಶಾಸಕನಿಗೆ ಮಂತ್ರಿ ಮಾಡ್ತೀನಿ, ಹಣ ನೀಡ್ತಿನಿ ಎಂದು ಹೇಳುತ್ತಿದ್ದಾರೆ. ನಮ್ಮ ಶಾಸಕರನ್ನು ಸೆಳೆಯಲು ಕಾಂಗ್ರಸ್ ಹಾಗೂ ಜೆಡಿಎಸ್ ಪ್ರಯತ್ನ ಮಾಡುತ್ತಿದೆ. ನಾವು ಯಾವುದೇ ಆಪರೇಷನ್ ಮಾಡುತ್ತಿಲ್ಲ. ನಾವೆಲ್ಲ ಒಟ್ಟಾಗಿದ್ದು ಮುಂದಿನ ಲೋಕಸಭೆ ಚುನಾವಣೆಯ ಸಿದ್ಧತೆ ಮಾಡುತ್ತಿದ್ದೇವೆ. ಇವೆಲ್ಲಾ ಗಾಳಿ ಸುದ್ದಿಗಳು. ಇದಕ್ಕೆಲ್ಲ ಅರ್ಥವಿಲ್ಲ ಎಂದು ಯಡಿಯೂರಪ್ಪ ಗುಡುಗಿದರು.

    ಅಲ್ಲದೇ ಲೋಕಸಭೆ ಚುನಾವಣೆ ಬಗ್ಗೆ ಮಾತನಾಡಿದ ಅವರು, “ನಮ್ಮ ಶಾಸಕರೆಲ್ಲ ಒಟ್ಟಾಗಿ ಒಂದು ಕಡೆ ಸೇರಿದ್ದೇವೆ. ಕಳೆದ ಎರಡು ದಿನಗಳಿಂದ ಲೋಕಸಭೆ ಚುನಾವಣೆಗೆ ಸಂಬಂಧಿಸಿದ ರೂಪುರೇಷಗಳನ್ನು ಸಿದ್ಧಪಡಿಸುತ್ತಿದ್ದೇವೆ. ಸಂಭವನೀಯ ಅಭ್ಯರ್ಥಿಗಳು ಯಾರು? ಯಾವ ರೀತಿ ಕೆಲಸ ಮಾಡಬೇಕು? ಎನ್ನುವದರ ಬಗ್ಗೆ ಚರ್ಚೆ ಮಾಡಿದ್ದೇವೆ. ನಮ್ಮ ಗುರಿ ಹೇಗಾದರೂ ಮಾಡಿ 20 ಲೋಕಸಭೆ ಸೀಟುಗಳನ್ನು ಗೆಲ್ಲಬೇಕು. ಆ ಕಡೆ ವಿಶೇಷ ಗಮನ ಕೊಡಲು ನಿರ್ಧಾರ ಮಾಡಿದ್ದೇವೆ. ನಾಳೆ ನಮ್ಮ ಶಾಸಕರು ಬರುತ್ತಾರೆ, ಮುಂದೆ ಬರಗಾಲ ಹಾಗು ಚುನಾವಣಾ ಸಿದ್ಧತೆಯ ಬಗ್ಗೆ ಗಮನ ಹರಿಸುತ್ತಾರೆ” ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬ್ರಹ್ಮಾಸ್ತ್ರ ಪ್ರಯೋಗಿಸಿದ ಸಿದ್ದರಾಮಯ್ಯ!

    ಬ್ರಹ್ಮಾಸ್ತ್ರ ಪ್ರಯೋಗಿಸಿದ ಸಿದ್ದರಾಮಯ್ಯ!

    -ಬ್ರಹ್ಮಾಸ್ತ್ರ ಪ್ರಯೋಗದ ಬೆನ್ನಲ್ಲೆ ಚಿಗುರೊಡೆದ ಬಿಜೆಪಿಯ ಆಸೆ?

    ಬೆಂಗಳೂರು: ಆಪರೇಷನ್ ಕಮಲದಿಂದ ಬೇಸತ್ತಿರುವ ಕಾಂಗ್ರೆಸ್ ಶಾಸಕಾಂಗ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಬ್ರಹ್ಮಾಸ್ತ್ರವನ್ನೇ ಪ್ರಯೋಗಿಸಿದ್ದಾರೆ. ಇತ್ತ ಸಿದ್ದರಾಮಯ್ಯ ಬ್ರಹ್ಮಾಸ್ತ್ರ ಪ್ರಯೋಗಿಸುತ್ತಿದ್ದಂತೆ ಬಿಜೆಪಿಯ ಸರ್ಕಾರ ರಚಿಸುವ ಆಸೆಗೆ ಮತ್ತೆ ಜೀವ ಬಂದಂತಾಗಿದೆ.

    ಇದೇ ಜನವರಿ 18 ಅಂದ್ರೆ ಶುಕ್ರವಾರ ಸಿದ್ದರಾಮಯ್ಯನವರು ಕಾಂಗ್ರೆಸ್ ಶಾಸಕಾಂಗ ಪಕ್ಷದ ವಿಶೇಷ ಸಭೆಯನ್ನು ಕರೆದಿದ್ದಾರೆ. ಈ ಸಭೆಗೆ ಕೈ ಪಾಳಯದ ಎಲ್ಲ ಶಾಸಕರು ಕಡ್ಡಾಯವಾಗಿ ಹಾಜರು ಆಗಲೇಬೇಕು. ಒಂದು ವೇಳೆ ಶಾಸಕರು ಸಭೆಗೆ ಗೈರಾದ್ರೆ ಅನರ್ಹಗೊಳ್ಳುವ ಸಾಧ್ಯತೆಗಳಿವೆ. ಮುಂಬೈನಿಂದ ಬಂದಿರುವ ಅತೃಪ್ತ ಶಾಸಕರು ಸಭೆಗೆ ಕಡ್ಡಾಯವಾಗಿ ಹಾಜರು ಆಗಬೇಕಿದೆ.

    ಆಪರೇಷನ್ ಕಮಲ ಮೂಲಕ ಕುಮಾರಸ್ವಾಮಿ ಸರ್ಕಾರ ಬೀಳಿಸುವ ಯತ್ನ ವಿಫಲವಾದ್ರೂ ಆಸೆ ಇನ್ನೂ ಹೋಗಿಲ್ಲ. ಜನವರಿ 18ರಂದು ನಿಗದಿ ಆಗಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ವಿಶೇಷ ಸಭೆಯನ್ನೇ ನಂಬ್ಕೊಂಡು ಕೂತಿದೆ ಕೇಸರಿ ಪಾಳಯ. ಅವತ್ತಿನ ಸಭೆಗೆ ಬಾರದೇ ಹೋದ್ರೆ ಅನರ್ಹಗೊಳಿಸುವ ಎಚ್ಚರಿಕೆ ನೋಟಿಸ್ ಕೊಟ್ಟಿದ್ದಾರೆ ಮಾಜಿ ಸಿಎಂ ಸಿದ್ದರಾಮಯ್ಯ. ಈ ಹಿನ್ನೆಲೆಯಲ್ಲಿ ಅವತ್ತಿನ ಸಭೆಗೆ ಯಾರೆಲ್ಲಾ ಗೈರಾಗ್ತಾರೆ ಅವ್ರನ್ನ ಅನರ್ಹಗೊಳಿಸೋ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಇದೇ ಅನರ್ಹತೆಯನ್ನ ಲಾಭ ಮಾಡಿಕೊಳ್ಳಲು ಯಡಿಯೂರಪ್ಪನವರು ಪ್ಲಾನ್ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಆಪರೇಷನ್ ಕಮಲ ಫೇಲಾಗಿದ್ದರ ಹಿಂದಿದೆ ಬಿಎಸ್‍ವೈ ಮಿಸ್ಟೇಕ್ಸ್!

    ಆಪರೇಷನ್ ಕಮಲ ಫೇಲಾಗಿದ್ದರ ಹಿಂದಿದೆ ಬಿಎಸ್‍ವೈ ಮಿಸ್ಟೇಕ್ಸ್!

    -ಧರ್ಮ & ರಾಜಕಾರಣದ ನಡುವೆ ಸಿಲುಕಿದ್ರಾ ಯಡಿಯೂರಪ್ಪ!

    ಬೆಂಗಳೂರು: ರಾಜ್ಯದಲ್ಲಿ ಸರ್ಕಾರ ರಚಿಸುವ ಬಿಜೆಪಿಯ ಮಾಹಾಕ್ರಾಂತಿ ಎಂದೇ ಬಿಂಬಿಸಲಾಗಿದ್ದ ಆಪರೇಷನ್ ಕಮಲ ಕೈ ಕೊಟ್ಟಿದೆ. ದಂಡನಾಯಕನಾಗಿ ವಿರೋಧಿ ಬಣದ ಸೇನಾನಿಗಳನ್ನೇ ತನ್ನತ್ತ ಸೆಳೆದು ಕಾಂಗ್ರೆಸ್-ಜೆಡಿಎಸ್ ಕೋಟೆಯನ್ನೇ ಧ್ವಂಸಿಸಿ ಮತ್ತೆ ಸಿಂಹಾಸನ ಏರುವ ಛಲದೊಂದಿಗೆ ಚಕ್ರವ್ಯೂಹ ಹೂಡಿದ್ದರು ಕೇಸರಿ ಸಾರಥಿ ಯಡಿಯೂರಪ್ಪ. ಆದ್ರೆ ಯುದ್ಧ ಘೋಷಿಸಿದ ಸಮಯ ಸಂದರ್ಭ ತಂತ್ರ ಫಲಿಸಲು ವಿರುದ್ಧವಾಗಿತ್ತು. ಧರ್ಮ ಮತ್ತು ರಾಜಕಾರಣ ಹೀಗೆ ಆ ಕಡೆಯೋ ಈ ಕಡೆಯೋ ಎಂದು ನಿರ್ಧಾರ ಮಾಡುವುದೇ ಬಿಎಸ್‍ವೈ ಸವಾಲಾಯ್ತು.

    ಯಡಿಯೂರಪ್ಪ ಮಾಡಿದ ತಪ್ಪುಗಳು:
    ಒಂದು ಕಡೆ ಆಪರೇಷನ್ ಕಮಲದ ಚಿಂತೆ, ಮತ್ತೊಂದೆಡೆ ಸಿದ್ದಗಂಗಾ ಶ್ರೀಗಳ ಅನಾರೋಗ್ಯದ ಸುದ್ದಿ ಎಲ್ಲರನ್ನು ಗೊಂದಲಕ್ಕೀಡು ಮಾಡಿತು. ಅಪರೇಷನ್ ಕಮಲಕ್ಕೆ ಇದು ಸೂಕ್ತ ಸಮಯವಲ್ಲ ಎಂಬ ಚರ್ಚೆಗಳು ಬಿಜೆಪಿ ನಾಯಕರಲ್ಲಿ ಆರಂಭವಾದವಂತೆ. ನಡೆದಾಡುವ ದೇವರ ಅನಾರೋಗ್ಯದ ಹೊತ್ತಲ್ಲಿ ಪ್ರಶ್ನೆಯಾಗಿ ಕಾಡಿದ ‘ಗುರುಗ್ರಾಮದ ರೆಸಾರ್ಟ್ ರಾಜಕಾರಣ’ ಬೇಕಿತ್ತಾ ಎಂಬುವುದು ಬಿಜೆಪಿಯ ಕೆಲ ಶಾಸಕರ ವಾದವಾಗಿತ್ತು ಎಂಬ ಮಾಹಿತಿಗಳು ಲಭ್ಯವಾಗಿವೆ.

    ರೆಸಾರ್ಟ್ ನಲ್ಲೇ ಉಳಿಯಬೇಕೇ..? ತಾನೊಬ್ಬನ್ನೇ ಬರಬೇಕೇ, ಶಾಸಕರನ್ನೂ ವಾಪಸ್ ಕರೆದುಕೊಂಡು ಬರಬೇಕೆ..? ಅಷ್ಟೊತ್ತಿಗಾಗಲೇ ಬಿಜೆಪಿ ತನ್ನದೇ ಶಾಸಕರನ್ನ ಕೂಡಿಟ್ಟ ತಂತ್ರಗಾರಿಕೆ ದೊಡ್ಡ ಮಟ್ಟದಲ್ಲಿ ಸುದ್ದಿ ಆಯ್ತು. ಆದ್ರೆ ಲಿಂಗಾಯತ ಸಮುದಾಯದ ಹಿರಿಯ ನಾಯಕನಾಗಿ ಶ್ರೀಗಳ ಆರೋಗ್ಯ ವಿಚಾರಿಸಲು ಬರದೇ ಇದ್ದರೆ ಹೇಗೆ..? ಎಂಬ ಪ್ರಶ್ನೆ ಯಡಿಯೂರಪ್ಪರನ್ನು ಕಾಡಿದೆ. ಕೊನೆಗೆ ಎಲ್ಲರನ್ನು ಗುರುಗ್ರಾಮದಲ್ಲಿರುವಂತೆ ಸೂಚಿಸಿ ಯಡಿಯೂರಪ್ಪನವರು ರಾಜ್ಯಕ್ಕೆ ಆಗಮಿಸಿದ್ದಾರೆ.

    ಮಾಜಿ ಪ್ರಧಾನಿ ದೇವೇಗೌಡರು, ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ರಾಜ್ಯದ ಎಲ್ಲ ನಾಯಕರು ಶ್ರೀಗಳನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದರು. ಲಿಂಗಾಯತ ಮುಖಂಡನಾದ ನಾನು ಶ್ರೀಗಳ ಆರೋಗ್ಯ ವಿಚಾರಿಸದೇ ಇದ್ರೆ ಲೋಕಸಭಾ ಚುನಾವಣೆಯಲ್ಲಿ ವಿರೋಧಿಗಳು ಇದನ್ನೇ ಅಸ್ತ್ರವಾಗಿ ಬಳಸಿಕೊಳ್ಳಬಹುದು ಆತಂಕ ಯಡಿಯೂರಪ್ಪರಲ್ಲಿ ಮನೆ ಮಾಡಿತು. ಒಂದು ವಿಷಯದ ಮೇಲೆ ಕೇಂದ್ರಿಕೃತವಾಗಲು ಯಡಿಯೂರಪ್ಪರಿಂದ ಅಸಾಧ್ಯವಾಗಿದ್ದರಿಂದ ಅಪರೇಷನ್ ಕಮಲ ವಿಫಲವಾಯ್ತು ಎಂಬ ವಾದಗಳಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv