Tag: Gurudesh Pande

  • ಜಂಟಲ್ ಮ್ಯಾನ್’ಗೆ ಸಿಕ್ಕಾಪಟ್ಟೆ ಡಿಮ್ಯಾಂಡ್!

    ಜಂಟಲ್ ಮ್ಯಾನ್’ಗೆ ಸಿಕ್ಕಾಪಟ್ಟೆ ಡಿಮ್ಯಾಂಡ್!

    ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅಭಿನಯದ ಸಿನಿಮಾ ಜಂಟಲ್ ಮ್ಯಾನ್ ಸಾಕಷ್ಟು ಸದ್ದು ಮಾಡುತ್ತಿದೆ. ಜನವರಿ 31ರಂದು ಸಿನಿಮಾ ಬಿಡುಗಡೆಯಾಗುತ್ತಿದೆ. ಈಗಾಗಲೇ ಸಿನಿಮಾಗೆ ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಯಿಂದ ರಿಮೇಕ್ ಆಫರ್ ಗಳು ಬರುವುದಕ್ಕೆ ಶುರು ಮಾಡಿವೆ. ರಿಲೀಸ್ ಗೂ ಮುನ್ನವೇ ‘ಜಂಟಲ್ ಮ್ಯಾನ್’ ಕ್ರಿಯೇಟ್ ಮಾಡಿಕೊಂಡಿರುವ ಡಿಮ್ಯಾಂಡ್ ನಿಂದ ಚಿತ್ರತಂಡ ಸಖತ್ ಖುಷಿಯಲ್ಲಿದೆ.

    ಕಳೆದ ವಾರ ಬಿಡುಗಡೆಯಾದ ಟ್ರೈಲರ್ ಸಾಕಷ್ಟು ಸದ್ದು ಮಾಡಿತ್ತು. ಸಿನಿಮಾದ ವಿಶಿಷ್ಟ ಕಥಾಹಂದರವನ್ನು ಗಮನಿಸಿದ ಬೇರೆ ಭಾಷೆಯವರು ‘ಜಂಟಲ್ ಮ್ಯಾನ್’ ಸಿನಿಮಾ ನಿರ್ಮಾಪಕ ಗುರುದೇಶ ಪಾಂಡೆ ಅವರನ್ನು ಸಂಪರ್ಕಿಸಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ‘ಜಂಟಲ್ ಮ್ಯಾನ್’ ಬೇರೆ ಭಾಷೆಗಳಲ್ಲೂ ಬರುವ ನಿರೀಕ್ಷೆ ಇದೆ.

     

    ತೆಲುಗಿನ ಸಾಯ್ ಕುಮಾರ್ ಅವರು ಗುರುದೇಶ ಪಾಂಡೆ ಬಳಿ ಈ ಬಗ್ಗೆ ಮಾತುಕತೆ ನಡೆಸಿದ್ದು, ತೆಲುಗಿನಲ್ಲಿ ಸಿನಿಮಾ ಮಾಡಲು ಆಸಕ್ತಿ ತೋರಿಸಿದ್ದಾರೆ. ಇನ್ನು ತಮಿಳು ನಟ ಸಿಂಬು ಅವರ ಮ್ಯಾನೇಜರ್ ಕೂಡ ರಿಮೇಕ್ ಹಕ್ಕು ಬಗ್ಗೆ ವಿಚಾರಿಸಿದ್ದಾರೆ. ಮಲಯಾಳಂನ ತಿರಸೂರು ಸುನೀಲ್ ಅವರು ಕೂಡ ಚಿತ್ರದ ಬಗ್ಗೆ ವಿಚಾರಿಸಿದ್ದಾರೆ. ಟ್ರೈಲರ್ ಔಟ್ ಆದ ಮೂರೇ ದಿನದಲ್ಲಿ ಈ ಬೆಳವಣಿಗೆ ನಡೆದಿದೆ. ಈ ಎಲ್ಲಾ ಬೆಳವಣಿಗೆಗಳನ್ನು ನೋಡ್ತಾ ಇದ್ರೆ ‘ಜಂಟಲ್ ಮ್ಯಾನ್’ ಚಿತ್ರದ ಬಗ್ಗೆ ಕನ್ನಡ ಪ್ರೇಕ್ಷಕರು ಕಾತುರರಾಗಿದ್ದಾರೆ.

    ಚಿತ್ರದ ಕಥೆ ಎಲ್ಲರಿಗೂ ಇಷ್ಟವಾಗಿದ್ದು, ಹಕ್ಕುಗಳ ಬಗ್ಗೆ ಮಾತುಕಥೆ ನಡೆಸಿದ್ದಾರೆ. ಎಲ್ಲ ವಿಚಾರಗಳ ಬಗ್ಗೆ ಕೂತು ಮಾತನಾಡಿ ನಂತರ ತೀರ್ಮಾನ ತೆಗೆದುಕೊಳ್ಳುವುದಾಗಿ ಚಿತ್ರ ನಿರ್ಮಾಪಕ ಗುರುದೇಶಪಾಂಡೆ ಹೇಳಿದ್ದಾರೆ.

    ರಿಲೀಸ್ ಗೆ ರೆಡಿಯಾಗಿರುವ ‘ಜಂಟಲ್ ಮ್ಯಾನ್’ ಚಿತ್ರವನ್ನು ಜಿ. ಸಿನಿಮಾಸ್ ಬ್ಯಾನರ್ ನಲ್ಲಿ ಗುರುದೇಶ ಪಾಂಡೆ ನಿರ್ಮಾಣ ಮಾಡಿದ್ದಾರೆ. ಜಡೇಶ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ಪ್ರಜ್ವಲ್ ಗೆ ನಾಯಕಿಯಾಗಿ ನಿಶ್ವಿಕಾ ನಾಯ್ಡು ಅಭಿನಯಿಸಿದ್ದಾರೆ. ತಬಲ ನಾಣಿ, ಅರುಣಾ ಬಾಲರಾಜ್, ಸಾಧು ಕೋಕಿಲಾ ಸೇರಿದಂತೆ ಬಹುತೇಕರು ನಟಿಸಿದ್ದಾರೆ.

  • ಕೃಷ್ಣಾವತಾರಿ ಅಜೇಯ್ ರಾವ್ ಪೊಲೀಸ್‍ಗಿರಿ! – 27ನೇ ಚಿತ್ರದ ಫಸ್ಟ್ ಲುಕ್ ಪೋಸ್ಟರ್!

    ಕೃಷ್ಣಾವತಾರಿ ಅಜೇಯ್ ರಾವ್ ಪೊಲೀಸ್‍ಗಿರಿ! – 27ನೇ ಚಿತ್ರದ ಫಸ್ಟ್ ಲುಕ್ ಪೋಸ್ಟರ್!

    ಬೆಂಗಳೂರು: ಇಂದು ಕೃಷ್ಣ ಅಜೇಯ್ ರಾವ್ ಜನ್ಮ ದಿನ. ತಾಯಿಗೆ ತಕ್ಕ ಮಗ ಚಿತ್ರದ ಯಶಸ್ಸಿನ ಅಲೆಯಲ್ಲಿರುವ ಅವರ ಮುಂದಿನ ಚಿತ್ರದ ಬಗೆಗಿನ ವಿವರಗಳೂ ಈ ಸಂದರ್ಭದಲ್ಲಿಯೇ ಜಾಹೀರಾಗಿವೆ. ಗುರುದೇಶಪಾಂಡೆ ನಿರ್ಮಾಣದಲ್ಲಿ ಮೂಡಿ ಬರಲಿರೋ ಅಜೇಯ್ ರಾವ್ ಇಪ್ಪತ್ತೇಳನೇ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ.

    ಈಗ ಬಿಡುಗಡೆಯಾಗಿರೋ ಫಸ್ಟ್ ಲುಕ್ ಪೋಸ್ಟರ್ ನಿಜಕ್ಕೂ ಆಕರ್ಷಕವಾಗಿದೆ. ಅಜೇಯ್ ರಾವ್ ಅರ್ಧ ಖಾಕಿ ಮತ್ತು ಮತ್ತರ್ಧ ಕೃಷ್ಣಾವತಾರದ ಗೆಟಪ್ಪಿನಲ್ಲಿರೋ ಈ ಪೋಸ್ಟರ್ ಅಭಿಮಾನಿಗಳನ್ನೂ ಖುಷಿಗೊಳಿಸಿದೆ. ಆದರೆ ಇದರ ಟೈಟಲ್ ಇನ್ನೂ ಬಿಡುಗಡೆಯಾಗಿಲ್ಲ.

    ಇದು ಗುರುದೇಶಪಾಂಡೆ ಪ್ರೊಡಕ್ಷನ್ಸ್ ಬ್ಯಾನರಿನ ಎರಡನೇ ಚಿತ್ರ. ಇದನ್ನು ರಾಜ್ ವರ್ಧನ್ ಶಂಕರ್ ನಿರ್ದೇಶನ ಮಾಡಲಿದ್ದಾರೆ. ಜಡೇಶ್ ಕುಮಾರ್ ಜೊತೆ ಸೇರಿ ಗುರುದೇಶಪಾಂಡೆಯವರೇ ಕಥೆ ಚಿತ್ರಕಥೆಯನ್ನೂ ರಚಿಸಿದ್ದಾರೆ. ಆರೂರು ಸುಧಾಕರ್ ಛಾಯಾಗ್ರಾಹಕರಾಗಿಯೂ ಆಯ್ಕೆಯಾಗಿದ್ದಾರೆ. ಉಳಿಕೆ ತಾರಾಗಣ, ತಾಂತ್ರಿಕ ವರ್ಗದ ಮಾಹಿತಿ ಟೈಟಲ್ ಲಾಂಚ್ ವೇಳೆಗೆ ಜಾಹೀರಾಗಲಿದೆ.

    ಆದಷ್ಟು ಬೇಗನೆ ಟೈಟಲ್ ಲಾಂಚ್ ಮಾಡಿ ಅದೇ ಸಂದರ್ಭದಲ್ಲಿ ಚಿತ್ರದ ಬಗೆಗಿನ ಉಳಿಕೆ ಮಾಹಿತಿ ಕೊಡುವ ಆಲೋಚನೆ ಗುರುದೇಶಪಾಂಡೆ ಅವರದ್ದು. ಅಂತೂ ಬೇಗನೆ ಈ ಚಿತ್ರದ ಚಿತ್ರೀಕರಣ ಚಾಲೂ ಆಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಚಿಕ್ಕಣ್ಣ ಹೇರ್ ಸ್ಟೈಲ್ ಬದಲಾಯಿಸಿಕೊಂಡಿದ್ದಕ್ಕೆ ಕಾರಣ ಏನು?

    ಚಿಕ್ಕಣ್ಣ ಹೇರ್ ಸ್ಟೈಲ್ ಬದಲಾಯಿಸಿಕೊಂಡಿದ್ದಕ್ಕೆ ಕಾರಣ ಏನು?

    ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಸದ್ಯಕ್ಕೆ ಭಾರೀ ಬ್ಯುಸಿಯಾಗಿರೋ ಹಾಸ್ಯ ನಟ ಚಿಕ್ಕಣ್ಣ. ಆರಂಭದಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸುತ್ತಾ ಬಂದಿದ್ದ ಚಿಕ್ಕಣ್ಣ ಇದೀಗ ಏಕಕಾಲಕ್ಕೇ ಹಲವಾರು ಚಿತ್ರಗಳನ್ನು ಒಪ್ಪಿಕೊಳ್ಳುವ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ. ಹೀಗೆ ಕೈತುಂಬಾ ಚಿತ್ರಗಳನ್ನು ಹೊಂದಿರುವ ಚಿಕ್ಕಣ್ಣ ಇದೀಗ ಸದ್ದು ಮಾಡುತ್ತಿರೋದು ತಮ್ಮ ಹೇರ್ ಸ್ಟೈಲು ಬದಲಾಗಿರುವ ಕಾರಣಕ್ಕೆ!

    ಗಿಡ್ಡ ಕೂದಲನ್ನೇ ಒಂದಷ್ಟು ವಿನ್ಯಾಸಗಳಿಗೆ ಒಗ್ಗಿಸಿಕೊಳ್ಳುತ್ತಾ ಚಿತ್ರದಿಂದ ಚಿತ್ರಕ್ಕೆ ಬದಲಾವಣೆ ಮಾಡಿಕೊಂಡು ಬಂದಿದ್ದವರು ಚಿಕ್ಕಣ್ಣ. ಆದರೀಗ ಅವರ ಹೇರ್ ಸ್ಟೈಲು ಏಕಾಏಕಿ ಸಂಪೂರ್ಣವಾಗಿ ಬದಲಾಗಿದೆ, ಕರ್ಲಿ ಹೇರನ್ನು ಸ್ಟ್ರೈಟ್ ಮಾಡಿ ಅದಕ್ಕೆ ಕಲರಿಂಗ್ ಮಾಡಿಸಿಕೊಂಡಿದ್ದಾರೆ. ಈ ಗೆಟಪ್ಪಿನಲ್ಲಿ ಕಾಣಿಸಿಕೊಂಡೇಟಿಗೆ ಪ್ರೇಕ್ಷಕರೆಲ್ಲರಲ್ಲಿ ಚಿಕ್ಕಣ್ಣ ಹೀರೋ ಆಗಲು ರೆಡಿಯಾಗುತ್ತಿದ್ದಾರಾ ಎಂಬ ಪ್ರಶ್ನೆ ಮೂಡಿಕೊಂಡಿದ್ದು ಸುಳ್ಳಲ್ಲ.

    ಆದರೆ, ಚಿಕ್ಕಣ್ಣ ಏಕಾಏಕಿ ಹೊಸಾ ಅವತಾರದಲ್ಲಿ ಕಾಣಿಸಿಕೊಂಡಿದ್ದರ ಹಿಂದೆ ಬೇರೊಂದು ವಿಚಾರವಿದೆ. ಇದಕ್ಕೆ ಕಾರಣ ಕೆ ಮಂಜು ಪುತ್ರ ಶ್ರೇಯಸ್ ನಟನೆಯ ಪಡ್ಡೆಹುಲಿ ಚಿತ್ರ. ಗುರುದೇಶಪಾಂಡೆ ನಿರ್ದೇಶನದ ಈ ಚಿತ್ರದಲ್ಲಿ ಚಿಕ್ಕಣ್ಣ ಮಜವಾದೊಂದು ಪಾತ್ರ ಮಾಡಿದ್ದಾರೆ. ಅದಕ್ಕೆಂದೇ ಶ್ರಮ ವಹಿಸಿ ಹೊಸಾ ಥರದ ಹೇರ್ ಸ್ಟೈಲಿಗೆ ಕೂದಲನ್ನು ಪಳಗಿಸಿಕೊಂಡಿದ್ದಾರೆ!

    ಇದೆಲ್ಲ ಏನೇ ಇದ್ದರೂ ಈ ಹೊಸಾ ಅವತಾರ ಚಿಕ್ಕಣ್ಣನ ಅಭಿಮಾನಿಗಳಿಗೆಲ್ಲ ಇಷ್ಟವಾಗಿದೆಯಂತೆ!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಂಹಾರ ಸಿನಿಮಾ ನೋಡಿ ಧ್ರುವ ಸರ್ಜಾ ಫುಲ್ ಖುಷ್

    ಸಂಹಾರ ಸಿನಿಮಾ ನೋಡಿ ಧ್ರುವ ಸರ್ಜಾ ಫುಲ್ ಖುಷ್

    ಬೆಂಗಳೂರು: ಚಿರಂಜೀವಿ ಸರ್ಜಾ, ಗುರುದೇಶ್ ಪಾಂಡೆ ಕಾಂಬಿನೇಷನ್‍ನ ಸಂಹಾರ ಸಿನಿಮಾವನ್ನು ತ್ರಿವೇಣಿ ಚಿತ್ರಮಂದಿರದಲ್ಲಿ ನಟ ಧ್ರುವ ಸರ್ಜಾ ವೀಕ್ಷಿಸಿದ್ದಾರೆ.

    ಅಭಿಮಾನಿಗಳ ಜೊತೆ ಕೂತು ಸಂಹಾರ ಸಿನಿಮಾ ನೋಡಿದ ಆ್ಯಕ್ಷನ್ ಪ್ರೀನ್ಸ್ ಸಖತ್ ಖುಷಿಪಟ್ಟರು. ತಮ್ಮ ನೆಚ್ಚಿನ ಹೀರೋ ನೋಡಲು ಮುಗಿಬಿದ್ದ ಅಭಿಮಾನಿಗಳು ಫೋಟೋ ಕ್ಲಿಕ್ಕಿಸಿಕೊಂಡು ಸಂತೋಷ ಪಟ್ಟರು.

    ಸಂಹಾರ ಸಿನಿಮಾ ನೋಡಿದ ಧ್ರುವ, ತ್ರಿವೇಣಿ ಚಿತ್ರಮಂದಿರದಲ್ಲಿ ಈ ಸಿನಿಮಾ ನೋಡಿದ್ದು ತುಂಬಾ ಖುಷಿಯಾಯಿತು. ಸಂಹಾರ ಚಿತ್ರ ನಿಜವಾಗಿಯೂ ಸಖತ್ ಆಗಿದೆ. ಗುರುದೇಶ್ ಪಾಂಡೆ ಸರ್ ತುಂಬಾ ಚೆನ್ನಾಗಿ ಕೆಲಸ ಮಾಡಿದ್ದಾರೆ. ಚಿಕ್ಕಣ್ಣ ಅವರ ನಟನೆ ನೋಡುಗರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ನಮ್ಮ ಅಣ್ಣನ ಬಗ್ಗೆ ಏನೂ ಹೇಳುವ ಹಾಗಿಲ್ಲ ಎಂದು ಧ್ರುವ ಸರ್ಜಾ ಹೊಗಳಿದರು.

    ಅಷ್ಟೇ ಅಲ್ಲದೇ ಹರಿಪ್ರಿಯಾರ ಅಮೋಘ ನಟನೆಯನ್ನು ಚಿತ್ರದಲ್ಲಿ ನೋಡಬಹುದಾಗಿದೆ. ಈ ಬಾರಿ ಹರಿಪ್ರಿಯಾ ವಿಭಿನ್ನ ಶೇಡ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ತುಂಬಾನೇ ಎಂಟರ್‍ಟೈನ್‍ಮೆಂಟ್ ಜೊತೆ ಕಾಮಿಡಿಯನ್ನು ಹೊಂದಿದೆ. ಸಂಹಾರ ಇಡೀ ಕುಟುಂಬ ನೋಡುವಂತಹ ಸಿನಿಮಾವಾಗಿದ್ದು, ಮತ್ತೊಮ್ಮೆ ನೋಡಬೇಕು ಎಂಬ ಆಸೆ ಆಗುತ್ತದೆ. ದಯವಿಟ್ಟು ಈ ಸಿನಿಮಾ ನೋಡಿ. ಇದೊಂದು ಫ್ಯಾಮಿಲಿ ಜೊತೆ ನೋಡುವಂತಹ ಸಿನಿಮಾ. ಸಸ್ಪೆನ್ಸ್, ಥ್ರಿಲ್ಲರ್ ಹಾಗೂ ವಿಭಿನ್ನ ರೀತಿಯಲ್ಲಿ ಈ ಸಿನಿಮಾ ಮೂಡಿ ಬಂದಿದೆ ಎಂದು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ತಿಳಿಸಿದರು.