Tag: groom

  • ಮದುವೆಯುದ್ದಕ್ಕೂ ಗಳಗಳನೆ ಕಣ್ಣೀರು ಹಾಕಿದ ವರ!

    ಮದುವೆಯುದ್ದಕ್ಕೂ ಗಳಗಳನೆ ಕಣ್ಣೀರು ಹಾಕಿದ ವರ!

    ಪಾಟ್ನಾ: ಮದುವೆ ಅಂದ್ರೆ ವಧು ವರರಿಗೆ ಸಂತೋಷದ ದಿನವಾಗಿರುತ್ತೆ. ತಾಳಿ ಕಟ್ಟುವ ಸಂದರ್ಭದಲ್ಲಿ ವಧು ಭಾವುಕಳಾಗಿ ಅಳೋದನ್ನ ನೋಡಿರ್ತೀರ. ಆದ್ರೆ ಇಲ್ಲೊಬ್ಬ ವರ ಮದುವೆಯಾಗುವಾಗ ಗಳಗಳನೆ ಅತ್ತಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ.

    ಬಿಹಾರದಲ್ಲಿ ಈ ಘಟನೆ ನಡೆದಿದ್ದು, ವರನನ್ನು ಕಿಡ್ನಾಪ್ ಮಾಡಿ ಬಲವಂತವಾಗಿ ಮದುವೆ ಮಾಡಿಸಲಾಗಿದೆ. ಈ ರೀತಿ ಬಲವಂತವಾಗಿ ಮದುವೆ ಮಾಡಿಸುವುದು ಬಿಹಾರದಲ್ಲಿ ಕಾಮನ್. ಇತ್ತೀಚೆಗೆ ಇದರ ಬಲಿಪಶುವಾಗಿದ್ದು ವಿನೋದ್ ಯಾದವ್.

    ವಿನೋದ್ ಬೊಕಾರೋ ಸ್ಟೀಲ್ ಪ್ಲಾಂಟ್‍ನಲ್ಲಿ ಕಿರಿಯ ಎಂಜಿನಿಯರ್ ಆಗಿ ಕೆಲಸ ಮಾಡ್ತಿದ್ದಾರೆ. ವಿನೋದ್‍ಗೆ ಎಲ್ಲಿ ಬೇಕೋ ಅಲ್ಲಿಗೆ ವರ್ಗಾವಣೆ ಮಾಡಿಸುವ ವ್ಯವಸ್ಥೆ ಮಾಡಲು ಸಚಿವರೊಬ್ಬರನ್ನು ಭೇಟಿ ಮಾಡಿಸುವುದಾಗಿ ಹೇಳಿ ಮೊಕಾಮಾಗೆ ಕರೆದುಕೊಂಡು ಹೋಗಲಾಗಿತ್ತು. ನಂತರ ಅಲ್ಲಿಂದ ವಿನೋದ್‍ರನ್ನು ಕಿಡ್ನಾಪ್ ಮಾಡಿದ್ದಾರೆ.

    ಕಿಡ್ನಾಪರ್‍ಗಳು ಶಸ್ತ್ರಾಸ್ತ್ರಗಳನ್ನ ಹೊಂದಿದ್ದು, ವಿನೋದ್‍ಗೆ ಹೊಡೆದಿದ್ದಾರೆ. ಇದಕ್ಕೆ ವಿನೋದ್ ವಿರೋಧ ವ್ಯಕ್ತಪಡಿಸಿದಾಗ, ನಿನಗೆ ಮದುವೆ ಮಾಡಿಸ್ತಿದ್ದೀವಿ ಅಷ್ಟೇ, ನೇಣು ಹಾಕ್ತಿಲ್ಲ ಎಂದು ಹೇಳಿದ್ದಾರೆ. ಈ ಹಿಂದೆಯೂ ಸಾಕಷ್ಟು ಜನ ಇದೇ ರೀತಿ ಮದುವೆ ಆಗಿದ್ದಾರೆ. ಇದೇನು ಹೊಸದಲ್ಲ ಎಂದು ಹೇಳಿದ್ದಾರೆ.

     

    ಮದುವೆಗೆ ಎಲ್ಲಾ ಸಿದ್ಧತೆಗಳನ್ನ ಮಾಡಿ ವಿನೋದ್‍ರನ್ನ ಅಲ್ಲಿಗೆ ಕರೆದೊಯ್ದು ಬಲವಂತವಾಗಿ ಮದುವೆ ಮಾಡಿಸಿದ್ದಾರೆ. ಜೊತೆಗೆ ಬಲವಂತದ ಮದುವೆಯ ವಿಡಿಯೋವನ್ನೂ ಮಾಡಿದ್ದಾರೆ. ವಿನೋದ್ ತನ್ನನ್ನು ಬಿಟ್ಟುಬಿಡುವಂತೆ ಗೋಗರೆಯುತ್ತಿದ್ದು, ಅಳುತ್ತಿರೋದನ್ನ ವಿಡಿಯೋದಲ್ಲಿ ಕಾಣಬಹುದು. ಇಷ್ಟಾದರೂ ಪ್ರತ್ಯಕ್ಷದರ್ಶಿಗಳು ಮಾತ್ರ ವಿನೋದ್ ಸ್ಥಿತಿಯ ಬಗ್ಗೆ ಕ್ಯಾರೇ ಅಂದಿಲ್ಲ. ಅಲ್ಲೇ ಇದ್ದವರೊಬ್ಬರು ವಿನೋದ್ ಧರಿಸಿದ್ದ ಶಲ್ಯವನ್ನೇ ತೆಗೆದುಕೊಂಡು ಅವರ ಕಣ್ಣೀರು ಒರೆಸಿದ್ದಾರೆ.

     

  • ಕಲ್ಯಾಣ ಮಂಟಪದಲ್ಲೇ ಬೆಂಗ್ಳೂರು ವರನಿಗೆ ಗೆಟ್ ಔಟ್ ಎಂದ ವಧು!

    ಕಲ್ಯಾಣ ಮಂಟಪದಲ್ಲೇ ಬೆಂಗ್ಳೂರು ವರನಿಗೆ ಗೆಟ್ ಔಟ್ ಎಂದ ವಧು!

    ಛತ್ತೀಸ್‍ಗಢ: ಮದುವೆ ಮುನ್ನ ಕಲ್ಯಾಣ ಮಂಟಪದಲ್ಲಿ ವರದಕ್ಷಿಣೆಗಾಗಿ ಬೇಡಿಕೆ ಇಟ್ಟಿದ್ದ ವರನ ಜೊತೆ ವಧು ಮದುವೆ ನಿರಾಕರಿಸಿರುವ ಘಟನೆ ಛತ್ತೀಸ್‍ಗಢದ ಮುರಾದಾಬಾದ್ ಜಿಲ್ಲೆಯ ಪಾರ್ಕ್ ಸ್ಕ್ವೈರ್ ಹೋಟೆಲ್ ನಲ್ಲಿ ನಡೆದಿದೆ.

    ಜ್ಯೋತಿ ಎಂಬವರೇ ಕಲ್ಯಾಣ ಮಂಟಪದಿಂದ ವರನ ಕುಟುಂಬ ಹೊರ ನಡೆಯಲು ಸೂಚಿಸಿದ ವಧುವಾಗಿದ್ದಾರೆ. ಜ್ಯೋತಿಯವರ ಪೋಷಕರು ತಮ್ಮ ಮಗಳ ಮದುವೆ ಮಾಡಲು ವೆಬ್ ಸೈಟ್‍ಯೊಂದರಲ್ಲಿ ವಿವರಗಳನ್ನು ದಾಖಲಿಸಿದ್ದರು. ಇದರಂತೆ ಬೆಂಗಳೂರು ಮೂಲದ ಇಂಟೀರಿಯರ್ ಡಿಸೈನರ್ ಅಶೀಶ್ ಎಂಬವರ ಜೊತೆ ಡಿಸೆಂಬರ್ 14 ರಂದು ಮದುವೆ ನಿರ್ಣಯಿಸಲಾಗಿತ್ತು.

    ಆದರೆ ಮದುವೆ ಮುನ್ನ ದಿನ ಆರತಕ್ಷತೆ ಸಮಾರಂಭದ ವೇಳೆ ಅಶೀಶ್ ತಂದೆ, ಜ್ಯೋತಿ ತಂದೆಯವರ ಜೊತೆ ವರದಕ್ಷಿಣೆಯಾಗಿ ಸೆಡನ್ ಕಾರು ಹಾಗೂ 15 ಲಕ್ಷ ರೂ. ಹಣ ಬೇಡಿಕೆ ಇಟ್ಟಿದ್ದಾರೆ. ಈ ವೇಳೆ ಜ್ಯೋತಿ ಆಶೀಶ್ ನೊಂದಿಗೆ ಮಾತನಾಡಿ ಇಬ್ಬರು ವಿದ್ಯಾವಂತರಾಗಿದ್ದು, ಉತ್ತಮ ಕೆಲಸದಲ್ಲಿ ಇದ್ದೇವೆ, ಮದುವೆ ನಂತರ ಹಣ ಸಂಪಾದನೆ ಮಾಡಲು ಸಾಧ್ಯವಿಲ್ಲವೇ ಎಂದು ತಿಳಿಹೇಳಲು ಪ್ರಯತ್ನಿಸಿದ್ದಾರೆ. ಆದರೆ ಇವರು ಮಾತನ್ನು ಕೇಳದ ಆಶೀಶ್ ಕುಟುಂಬದವರು ವರದಕ್ಷಿಣೆ ನೀಡಿದರೆ ಮಾತ್ರ ಮದುವೆ ನಡೆಯುತ್ತದೆ ಎಂದು ತಿಳಿಸಿದ್ದಾರೆ.

    ಈ ವೇಳೆ ಇತರರ ಮುಂದೆ ತನ್ನ ತಂದೆ ಅವಮಾನಪಡುವುದನ್ನು ಸಹಿಸಲಾರದೇ ವಧು ಜ್ಯೋತಿ ಮದುವೆ ನಿರಾಕರಿಸಿ ಆಶೀಶ್ ಹಾಗೂ ಅವರ ಕುಟುಂಬವನ್ನು ಕಲ್ಯಾಣ ಮಂಟಪದಿಂದ ಹೊರ ನಡೆಯುವಂತೆ ಸೂಚಿಸಿದ್ದಾರೆ.

    ಈ ಕುರಿತು ಮಾತನಾಡಿರುವ ಜ್ಯೋತಿ, ಅಶೀಶ್ ಹಾಗೂ ಆತನ ತಂದೆ ನರೇಶ್ ಸೇರಿದಂತೆ ಮೂವರ ವಿರುದ್ಧ ಮಝೋಲಾ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಪ್ರಕರಣ ದಾಖಲಿಸಿರುವುದಾಗಿ ತಿಳಿಸಿದ್ದಾರೆ.

    ವರನ ತಂದೆ ಮದುವೆ ಸಂದರ್ಭದಲ್ಲಿ ನನ್ನ ಸಾಮರ್ಥ್ಯಕ್ಕಿಂತ ಹೆಚ್ಚಿನ ವರದಕ್ಷಿಣೆಗಾಗಿ ಬೇಡಿಕೆ ಇಟ್ಟರು, ನಾನು ಅವರಿಗೆ ತಿಳಿಹೇಳಲು ಪ್ರಯತ್ನಿಸಿದೆ, ಆದರೆ ನನ್ನ ಮಗಳೇ ಮದುವೆಯನ್ನು ನಿರಾಕರಿಸಿದಳು. ನನ್ನ ಮಗಳ ನಿರ್ಣಯಕ್ಕೆ ನಾನು ಹಾಗೂ ನನ್ನ ಕುಟುಂಬ ಬೆಂಬಲ ಸೂಚಿಸಿದ್ದೇವೆ ಎಂದು ಜ್ಯೋತಿ ಅವರ ತಂದೆ ಕಮಲ್ ಸಿಂಗ್ ಹೇಳಿದ್ದಾರೆ.

    ಜ್ಯೋತಿ ಅವರ ಹೇಳಿಕೆ ಪಡೆದಿರುವ ಪೊಲೀಸರು ವರನ ಕುಟುಂಬದ ವಿರುದ್ಧ ವರದಕ್ಷಿಣೆ ಪ್ರಕರಣ ದಾಖಲಿಸಿದ್ದು, ಶೀಘ್ರವೇ ಆರೋಪಿಗಳನ್ನು ಬಂಧಿಸುವುದಾಗಿ ತಿಳಿಸಿದ್ದಾರೆ. ಅಂದಹಾಗೇ ಜ್ಯೋತಿ ಅವರು ಛತ್ತೀಸ್‍ಗಢ ಸರ್ಕಾರಿ ಕಾಲೇಜಿನಲ್ಲಿ ಬಂಗಾರ ಪದಕದೊಂದಿಗೆ ಎಂ. ಟೆಕ್ ಪದವಿಯನ್ನು ಪಡೆದಿದ್ದಾರೆ.

  • ಮದುವೆಯಾದ ಮರುರಾತ್ರಿ ಲಾಕಪ್‍ನಲ್ಲಿ ಕಾಲ ಕಳೆದ ವರ

    ಮದುವೆಯಾದ ಮರುರಾತ್ರಿ ಲಾಕಪ್‍ನಲ್ಲಿ ಕಾಲ ಕಳೆದ ವರ

    ಕೌಲಾಲಂಪುರ್: ಮದುವೆ ಆದ ಕೆಲವೇ ಗಂಟೆಗಳಲ್ಲಿ ವರನೊಬ್ಬ ಲಾಕಪ್‍ನಲ್ಲಿ ಕಂಬಿ ಎಣಿಸಿದ ಘಟನೆ ಮಲೇಷ್ಯಾದಲ್ಲಿ ನಡೆದಿದೆ.

    ಮದುವೆಗೆ ಬಂದಿದ್ದ ಅತಿಥಿಯನ್ನ ಪೊಲೀಸರು ಅರೆಸ್ಟ್ ಮಾಡಲು ಬಂದಾಗ ಅವರೊಂದಿಗೆ ಜಗಳವಾಡಿದ ಕಾರಣ ಪೊಲೀಸರು ವರನನ್ನೇ ಕರೆದೊಯ್ದಿದ್ದಾರೆ.

    ಇಲ್ಲಿನ ಅಲೋರ್ ಸೆಟಾರ್‍ನ ನಾರ್ಥನ್ ಸಿಟಿಯಲ್ಲಿ ಮದುವೆ ನಡೆಯುತ್ತಿತ್ತು. ಹಲವಾರು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ವ್ಯಕ್ತಿಯನ್ನು ಬಂಧಿಸಲು ಭಾನುವಾರ ಸಂಜೆ ಮದುವೆ ಸಮಾರಂಭ ನಡೆಯುತ್ತಿದ್ದ ಹೋಟೆಲ್‍ಗೆ ಪೊಲೀಸರು ಬಂದಿದ್ದರು. ಆದ್ರೆ 35 ವರ್ಷದ ವರ ಸೇರಿದಂತೆ ಸುಮಾರು 40 ಜನ ಶಂಕಿತನನ್ನು ಪೊಲೀಸರು ಬಂಧಿಸದಂತೆ ತಡೆದಿದ್ದಾರೆ.

    ಈ ವೇಳೆ ಜಗಳವಾಗಿದ್ದು, ವರ ನಮ್ಮವರ ಮೇಲೆ ಗ್ಲಾಸ್ ಎಸೆದ. ಇದರಿಂದ ಅಧಿಕಾರಿಯೊಬ್ಬರ ಎಡಗೈಗೆ ಗಾಯವಾಯಿತು ಅಂತ ಸ್ಥಳೀಯ ಪೊಲೀಸ್ ಅಧಿಕಾರಿ ಮೊಹಮ್ಮದ್ ರೋಜಿ ಹೇಳಿದ್ದಾರೆ.

    ಇತ್ತ ಇವರೆಲ್ಲಾ ಪೊಲೀಸರೊಂದಿಗೆ ಜಗಳವಾಡ್ತಿದ್ರೆ 38 ವರ್ಷದ ಆರೋಪಿ ಹಿಂದಿನ ಬಾಗಿಲಿನಿಂದ ಪರಾರಿಯಾಗಿದ್ದಾನೆ. ಮರುದಿನ ಪೊಲೀಸ್ ಅಧಿಕಾರಿಗಳು ವರನ ಮನೆಗೆ ಹೋಗಿ ಆತನನ್ನು ವಶಕ್ಕೆ ಪಡೆದಿದ್ದಾರೆ. ಈ ವೇಳೆಯೂ ಜಗಳ ನಡೆದಿದೆ ಎಂದು ವರದಿಯಾಗಿದೆ.

  • ಮದುವೆ ಮಂಟಪಕ್ಕೆ ಹೆಲಿಕಾಪ್ಟರ್ ಏರಿ ಬಂದ ಮದುಮಗ!

    ಮದುವೆ ಮಂಟಪಕ್ಕೆ ಹೆಲಿಕಾಪ್ಟರ್ ಏರಿ ಬಂದ ಮದುಮಗ!

    ಲಕ್ನೋ: ಮದುವೆಯಾಗುವ ವೇಳೆ ವರ ಕುದುರೆ, ಬೈಕ್ ಅಥವಾ ಐಶಾರಾಮಿ ಕಾರುಗಳಲ್ಲಿ ಬರುವುನ್ನು ನೋಡಿರುತ್ತಿರಿ ಆದರೆ ಇಲ್ಲೊಬ್ಬ ವರ ತನ್ನ ಮದುವೆ ನಡೆಯುವ ಕಲ್ಯಾಣ ಮಂಟಪಕ್ಕೆ ಹೆಲಿಕಾಪ್ಟರ್ ಏರಿ ಬಂದಿದ್ದಾರೆ.

    ಮೂಲತಃ ರಾಜಸ್ಥಾನದ ಜೈಪುರದ ನಿವಾಸಿಯಾಗಿರುವ ಶಾರೂಖ್ ಖಾನ್ ಎಂಬ ಮದುಮಗನನೇ ತನ್ನ ಮದುವೆಗೆ ಹೆಲಿಪಾಪ್ಟರ್ ಏರಿ ಬಂದಿದ್ದು, ಉತ್ತರಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದ.

    ಇದನ್ನೂ ಓದಿ: ಮದುವೆ ದಿನ ಲೆಹೆಂಗಾ ಬದಲು ಶಾರ್ಟ್ಸ್ ತೊಟ್ಟ ವಧು- ಫೋಟೋ ವೈರಲ್

    ಈ ಕುರಿತು ಮಾತನಾಡಿರುವ ಶಾರುಕ್ ಖಾನ್ ತನಗೇ ಚಿಕ್ಕವನಿಂದಾಗಿನಿಂದಲೂ ಮದುವೆಯಾಗುವಾಗ ಹೆಲಿಕಾಪ್ಟರ್‍ನಲ್ಲಿ ಬರಬೇಕು ಎಂದು ಕನಸು ಕಂಡಿದ್ದೆ. ಆದರಂತೆ ಇಂದು ಹೆಲಿಪಾಪ್ಟರ್‍ನಲ್ಲಿ ಬಂದಿದ್ದೇನೆ, ನನ್ನ ಕನಸು ನನಸಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ವರ ಶಾರುಕ್ ಖಾನ್ ಹಿರಿಯ ಸಹೋದರನ ಮದುವೆ ಸಮಾರಂಭದಲ್ಲಿ ಇದೇ ರೀತಿ ಬರಲು ಪ್ಲಾನ್ ಮಾಡಿದರಂತೆ, ಆದರೆ ಅಧಿಕಾರಿಗಳಿಂದ ಅನುಮತಿ ಪಡೆಯಲು ಸಾಧ್ಯವಾಗದೆ ಅದನ್ನು ಕೈಬಿಟ್ಟಿದ್ದೇವು ಎಂದು ಹೇಳಿದ್ದಾರೆ.

    ಭಾವಿ ಪತಿ ಕನಸು ಕುರಿತು ಮಾತನಾಡಿದ ವಧು, ಗಂಡನ ಕನಸು ನನಸಾಗಿದ್ದು, ತುಂಬಾ ಖುಷಿಯಾಗುತ್ತಿದೆ ಎಂದು ಹೇಳಿದ್ದಾರೆ.

     

    https://www.youtube.com/watch?v=E6REmaOxs30

  • ಪೊಲೀಸರನ್ನು ನೋಡಿ ಮದುವೆ ಮಂಟಪದಿಂದ ಕಾಲ್ಕಿತ್ತ ವರ

    ಪೊಲೀಸರನ್ನು ನೋಡಿ ಮದುವೆ ಮಂಟಪದಿಂದ ಕಾಲ್ಕಿತ್ತ ವರ

    ಪಾಟ್ನಾ: ಮದುವೆಗೆ ಆಗಮಿಸಿದ ಪೊಲೀಸರನ್ನು ಕಂಡ ಕೂಡಲೇ ವರನೊಬ್ಬ ಪರಾರಿಯಾಗಿರುವ ಘಟನೆ ಬಿಹಾರ ರಾಜ್ಯದ ಪ್ರವಾಹ ಉಪವಿಭಾಗದ ಅನುಮಂಡಲ ಎಂಬಲ್ಲಿ ನಡೆದಿದೆ.

    ಸೋಮವಾರ ಗ್ರಾಮದ ಉಮಾನಾಥ ದೇವಸ್ಥಾನದಲ್ಲಿ ಚಿನ್ನೈ ಗ್ರಾಮದ ಯುವಕ ಮತ್ತು ಮೊಕಾಮ್ ಗ್ರಾಮದ ಯುವತಿಯ ಮದುವೆ ಕಾರ್ಯಕ್ರಮ ನಡೆಯುತ್ತಿತ್ತು. ಮದುವೆ ಮಂಟಪದಲ್ಲಿ ಅರಿಶಿಣ ಶಾಸ್ತ್ರ ನಡೆಯುವಾಗ ದೇವಸ್ಥಾನಕ್ಕೆ ಪೊಲೀಸರು ಆಗಮಿಸಿದ್ದಾರೆ. ಪೊಲೀಸರನ್ನು ಕಂಡ ಕೂಡಲೇ ಕೂತಿದ್ದ ಸ್ಥಳದಿಂದ ಎದ್ದು ನಿಂತ ವರ ಕೆಲವೇ ಕ್ಷಣಗಳಲ್ಲಿ ಪರಾರಿಯಾಗಿದ್ದಾನೆ.

    ಇದನ್ನೂ ಓದಿ: ಕಾಫಿನಾಡಿನಲ್ಲೊಂದು ವಿಶೇಷ ಮದುವೆ- 3 ಅಡಿ ವರ, 3 ಅಡಿ ವಧು..!

    ಮದುವೆ ಬಿಟ್ಟು ವರ ಪರಾರಿಯಾಗಿದ್ದನ್ನು ಕಂಡ ವಧುವಿನ ಕುಟುಂಬಸ್ಥರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇತ್ತ ವಧುವಿನ ಪೋಷಕರು ದೂರು ದಾಖಲಿಸುತ್ತಿದ್ದಂತೆ ಠಾಣೆಗೆ ಬಂದ ವರನೂ ಸಹ ದೂರು ದಾಖಲಿಸಿದ್ದಾನೆ.

    ಮದುವೆ ಮಂಟಪದಲ್ಲಿ ನನ್ನ ಬಳಗದವರು ಯಾರು ಇರಲಿಲ್ಲ. ಬಲವಂತವಾಗಿ ನನಗೆ ಈ ಮದುವೆ ಮಾಡಲಾಗುತ್ತಿತ್ತು. ಹಾಗಾಗಿ ನಾನು ಮದುವೆ ಮಂಟಪದಿಂದ ಹೊರ ಬಂದಿದ್ದೇನೆ ಎಂದು ಹೇಳಿದ್ದಾನೆ.

    ಇದನ್ನೂ ಓದಿ: ಆರತಕ್ಷತೆಯಲ್ಲಿದ್ದ ವಧು ರಾತ್ರೋರಾತ್ರಿ ನಾಪತ್ತೆ..!

    ಪೊಲೀಸರು ವರ ಮತ್ತು ವಧುವಿನ ಕಡೆಯವರ ದೂರು ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಆದರೆ ಈ ಮದುವೆ ಬಗ್ಗೆ ಗ್ರಾಮದ ತುಂಬೆಲ್ಲಾ ಗುಸು ಗುಸು ಮಾತುಗಳು ಕೇಳಿ ಬರುತ್ತಿವೆ.

    ಇದನ್ನೂ ಓದಿ:  ಎಂಜಿನಿಯರ್ ಜೊತೆ ಎಂಗೇಜ್ಮೆಂಟ್ ಮಾಡ್ಕೊಂಡ ಲೇಡಿ ಡಾಕ್ಟರ್ ಬಸ್ ಕಂಡಕ್ಟರನ್ನ ಮದುವೆಯಾದ್ಳು!

    ಇದನ್ನೂ ಓದಿ: ಮೊಗ್ಗಿನ ಜಡೆ ವಿಚಾರಕ್ಕೆ ಮುರಿದು ಬಿತ್ತು ಮದುವೆ!

     

  • ಆರತಕ್ಷತೆಯಲ್ಲಿ ನಗ್ತಿದ್ದ ವಧು ಧಾರೆಗೆ ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

    ಆರತಕ್ಷತೆಯಲ್ಲಿ ನಗ್ತಿದ್ದ ವಧು ಧಾರೆಗೆ ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

    ತುಮಕೂರು: ಮದುವೆ ಮಂಟಪದಿಂದಲೇ ವಧು ಓಡಿಹೋದ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಪ್ರಿಯಕರನ ಟಿಟಿ ವಾಹನದಲ್ಲಿ ಬಂದಿದ್ದ ವಧು ಅದೇ ಟಿಟಿಯ ಡ್ರೈವರ್ ರಮೇಶ್ ಜೊತೆ ಓಡಿ ಹೋಗಿದ್ದಾಳೆ.

    ಮಧ್ಯರಾತ್ರಿಯೇ ತಾವು ಬಂದಿದ್ದ ಟಿಟಿಯಲ್ಲೇ ಇಬ್ಬರೂ ಎಸ್ಕೇಪ್ ಆಗಿದ್ದಾರೆ. ಭಾನುವಾರ ರಾತ್ರಿ ಆರತಕ್ಷತೆಯಲ್ಲಿ  ನಗುನಗುತ್ತಾ ಇದ್ದ ವಧು  ಬೆಳಗ್ಗೆ ನೋಡಿದ್ರೆ ನಾಪತ್ತೆಯಾಗಿದ್ದಾಳೆ.

    ಇಂದು ಬೆಳಗ್ಗೆ 9.30ಕ್ಕೆ ಹಸೆಮಣೆ ಏರಬೇಕಿದ್ದ ಯುವತಿ ನಾಪತ್ತೆಯಾಗಿರೋದನ್ನು ನೋಡಿ ವರನ ಕಡೆಯವರು ಫುಲ್ ಶಾಕ್ ಆಗಿದ್ದರು. ತುಮಕೂರು ಜಿಲ್ಲೆಯ ಯಡಿಯೂರು ದೇವಸ್ಥಾನದಲ್ಲಿ ಮದುವೆ ನಿಗದಿಯಾಗಿತ್ತು. ಬೆಂಗಳೂರಿನ ಕಾಮಾಕ್ಷಿಪಾಳ್ಯದ ಯುವತಿಗೆ ಯಡಿಯೂರಿನ ಆಟೋ ಡ್ರೈವರ್ ರಾಮಕೃಷ್ಣನನ್ನು ಇಂದು ಮದುವೆ ಆಗಬೇಕಿತ್ತು. ಹೀಗಾಗಿ ನಿನ್ನೆ ರಾತ್ರಿ ಆರತಕ್ಷತೆ ಕಾರ್ಯಕ್ರಮ ನಡೆದಿತ್ತು.

    ಯುವತಿ ಓಡಿಹೋಗಿರೋ ಕಾರಣ ಇದೀಗ ಮದುವೆ ನಿಂತಿದೆ. ಆಕೆ ಯಾಕೆ ಗಾಯಬ್ ಆದ್ಲು ಅಂತಾ ಗೊತ್ತಿಲ್ಲ. ಯುವತಿ ಕಡೆಯವರು ಮದುವೆ ಹೆಸರಲ್ಲಿ ದುಡ್ಡು ತಗೊಂಡು ಮೋಸ ಮಾಡೋದೇ ದಂಧೆ ಮಾಡ್ಕೊಂಡಿದ್ದಾರೆ ಅಂತಾ ವರನ ಕಡೆಯವರು ಆರೋಪಿಸಿದ್ದಾರೆ.

     

     

     

     

  • ಬ್ಯಾಚುಲರ್ ಪಾರ್ಟಿಯಲ್ಲಿ ವರನ ಮರ್ಮಾಂಗಕ್ಕೆ ಗೆಳೆಯನಿಂದ್ಲೇ ಬಿತ್ತು ಗುಂಡೇಟು!

    ಬ್ಯಾಚುಲರ್ ಪಾರ್ಟಿಯಲ್ಲಿ ವರನ ಮರ್ಮಾಂಗಕ್ಕೆ ಗೆಳೆಯನಿಂದ್ಲೇ ಬಿತ್ತು ಗುಂಡೇಟು!

    ಕೈರೋ: ಮದುವೆ ಹಿಂದಿನ ದಿನ ವರನ ಜೊತೆ ಸ್ನೇಹಿತರು ಸಂಭ್ರಮಾಚರಣೆ ಮಾಡೋ ಸಂದರ್ಭದಲ್ಲಿ ಅತೀ ಉತ್ಸಾಹದಲ್ಲಿ ಸ್ನೇಹಿತನೊಬ್ಬ ವರನ ಮರ್ಮಾಂಗಕ್ಕೆ ಗುಂಡೇಟು ಹೊಡೆದಿರುವ ಘಟನೆ ಈಜಿಪ್ಟ್‍ನಲ್ಲಿ ನಡೆದಿದೆ.

    28 ವರ್ಷದ ವರ ಓಮರ್ ಅಲ್ ಅಲ್‍ಸೈದ್ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ.

    ಓಮರ್ ಮದುವೆಗೂ ಮುನ್ನ ಬ್ಯಾಚುಲರ್ ಪಾರ್ಟಿಯ ಸಂಭ್ರಮದಲ್ಲಿದ್ದ. ಈ ವೇಳೆ ಸ್ನೇಹಿತರಲ್ಲೊಬ್ಬ ಸಂಭ್ರಮಾಚರಣೆಗೆ ಗುಂಡು ಹಾರಿಸಿದ್ದ. ಉತ್ಸಾಹದಲ್ಲಿ ಗುಂಡು ಹಾರಿಸಿದ ಸ್ನೇಹಿತನಿಗೆ ಗನ್ ಮೇಲಕ್ಕೆ ಗುರಿಯಿಡಬೇಕು ಅನ್ನೋದು ಮರೆತುಹೋಗಿತ್ತು. ಪರಿಣಾಮ ಗುಂಡು ವರನ ಮರ್ಮಾಂಗಕ್ಕೆ ತಗುಲಿದೆ.

    ಘಟನೆಯಿಂದ ಓಮರ್‍ನ ಮರ್ಮಾಂಗ, ತೊಡೆ ಹಾಗೂ ಕೈಗೆ ಗಂಭೀರ ಗಾಯಗಳಾಗಿವೆ. ತಾನು ಮಾಡಿದ ಎಡವಟ್ಟಿನಿಂದ ಸ್ನೇಹಿತ ಕೂಡಲೇ ಸ್ಥಳದಿಂದ ಪರಾರಿಯಾಗಿದ್ದು, ನಂತರ ಪೊಲೀಸರು ಆತನನ್ನು ಬಂಧಿಸಿದ್ದಾರೆ.

    ಅತ್ತ ಗಾಯಗೊಂಡ ಓಮರ್ ಇನ್ನೂ ಬ್ಯಾಚುಲರ್ ಆಗಿದ್ದಾನೆ ಎಂದು ವರದಿಯಾಗಿದೆ. ಗಾಯಗೊಂಡಿರುವ ಓಮರ್‍ನ ಭಾವಿ ಪತ್ನಿಗೆ ಮುಂದೆ ಆತನನ್ನು ಮದುವೆಯಾಗೋ ಯೋಚನೆ ಇದೆಯಾ ಎಂಬುದು ಸ್ಪಷ್ಟವಾಗಿಲ್ಲ. ಸದ್ಯ ಈಜಿಪ್ಟ್‍ನ ಸಾಮಾಜಿಕ ಜಾಲತಾಣಗಳಲ್ಲಿ ಈ ಸುದ್ದಿ ವೈರಲ್ ಆಗಿದೆ. ಗನ್ ಸರಿಯಾಗಿ ಹಿಡಿಯಲು ಬಾರದ ವರನ ಸ್ನೇಹಿತನ ಬಗ್ಗೆ ಜನ ಟೀಕಿಸಿದ್ದಾರೆ.

    ಈಜಿಪ್ಟ್ ನಲ್ಲಿ ಮದುವೆ ಸಂಭ್ರಮದಲ್ಲಿ ಗುಂಡು ಹಾರಿಸಿ ಅನಾಹುತವಾಗಿರೋದು ಇದೇ ಮೊದಲೇನಲ್ಲ. ಅಕ್ಟೋಬರ್‍ನಲ್ಲಿ ಇಲ್ಲಿನ ಮದುವೆ ಸಮಾರಂಭವೊಂದಲ್ಲಿ ಅತಿಥಿಗೆ ಗುಂಡೇಟು ತಗುಲಿ ಸರ್ಜರಿಗೆ ಒಳಪಡಬೇಕಾಯ್ತು. ಈಜಿಪ್ಟ್ ನ ಬಾನಿ ಸ್ವೆಫ್‍ನಲ್ಲಿ 30 ವರ್ಷದ ವ್ಯಕ್ತಿ ಮುದವೆಗೆ ಬಂದಿದ್ದಾಗ ಅವರ ತೊಡೆಗೆ ಗುಂಡೇಟು ತಗುಲಿತ್ತು. ಅವರಿಗೆ ಸರ್ಜರಿ ಮಾಡಿಸಬೇಕಾಯ್ತು.

  • ಬೀಚ್‍ ನಲ್ಲಿ ಫೋಟೋಶೂಟ್ ಮಾಡುವಾಗ ಕೊಚ್ಚಿಹೋದ ವಧು

    ಬೀಚ್‍ ನಲ್ಲಿ ಫೋಟೋಶೂಟ್ ಮಾಡುವಾಗ ಕೊಚ್ಚಿಹೋದ ವಧು

    ಬೀಜಿಂಗ್: ಮದುವೆ ಫೋಟೋ ತುಂಬಾ ಚೆನ್ನಾಗಿ ಇರಬೇಕು ಅಂತ ಎಲ್ಲಾ ಜೋಡಿಗಳೂ ಆಸೆ ಪಡ್ತಾರೆ. ಹಾಗೇ ಇತ್ತೀಚೆಗೆ ವೆಡ್ಡಿಂಗ್ ಫೋಟೋಗ್ರಫಿ ಕೂಡ ತುಂಬಾ ಕಾಮನ್ ಆಗಿದೆ. ಕಣ್ಮನ ಸೆಳೆಯೋ ಸ್ಥಳಗಳಲ್ಲಿ ವಧು ವರ ಫೋಟೋ ತೆಗೆದಿಕೊಳ್ಳಬಯಸುತ್ತಾರೆ. ಆದ್ರೆ ಇಲ್ಲೊಂದು ಜೋಡಿಗೆ ರೊಮ್ಯಾಂಟಿಕ್ ಫೋಟೋಶೂಟ್ ದುಸ್ವಪ್ನದಂತಾಗಿತ್ತು. ಇವರ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಚೀನಾದಲ್ಲಿ ಹೊಸದಾಗಿ ಮದುವೆಯಾಗಿದ್ದ ವಧು ವರರಿಬ್ಬರೂ ಸಮುದ್ರ ಕಿನಾರೆಯಲ್ಲಿ ಫೋಟೋ ಶೂಟ್ ಮಡಿಸುತ್ತಿದ್ರು. ಸಮುದ್ರದ ಬಂಡೆಗಳ ಮೇಲೆ ನಿಂತು ವಿವಿಧ ಭಂಗಿಯಲ್ಲಿ ಪೋಸ್ ಕೊಡ್ತಿದ್ರು. ಈ ವೇಳೆ ಅವರು ಮುಂದೇನಾಗುತ್ತೆ ಅಂತ ನಿರೀಕ್ಷಿಸಿರಲಿಲ್ಲ. ಬಂಡೆ ಮೇಲೆ ನಿಂತ ಇಬ್ಬರೂ ಚುಂಬಿಸುತ್ತಾ ಪೋಸ್ ಕೊಡುತ್ತಿದ್ದಂತೆ ಅಲೆ ಬಂದು ಬಡಿದು ವಧು ಜಾರಿಬಿದ್ದಿದ್ದಾಳೆ. ಅಲೆಗಳ ರಭಸಕ್ಕೆ ಒಂದಿಷ್ಟು ದೂರ ಕೊಚ್ಚಿಹೋಗಿದ್ದಾಳೆ.

    ಆಕೆ ಬಿದ್ದ ಪರಿಣಾಮ ವರ ಕೂಡ ಕೆಳಗೆ ಬಿದ್ದಿದ್ದು, ಹೆಂಡ್ತಿಯನ್ನ ಹಿಡಿದುಕೊಂಡಿದ್ದಾನೆ. ಹೀಗಾಗಿ ಅದೃಷ್ಟವಶಾತ್ ಆಕೆಯ ಪ್ರಾಣಕ್ಕೆ ಯಾವುದೇ ಅಪಾಯವಾಗಿಲ್ಲ. ಆದ್ರೆ ಈ ವಿಡಿಯೋಗೆ ಮಾತ್ರ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

    ಕೆಲವರು ವಧು-ವರನ ಸ್ಥಿತಿ ನೋಡಿ ಅಯ್ಯೋ ಪಾಪ ಅಂದಿದ್ರೆ ಇನ್ನೂ ಕೆಲವರು ತಮಾಷೆ ಮಾಡಿದ್ದಾರೆ.

     

  • ವಧುವಿನ ಅಕ್ರಮ ಸಂಬಂಧದ ವಿಡಿಯೋವನ್ನ ಮದುವೆ ಅತಿಥಿಗಳ ಮುಂದೆ ಪ್ಲೇ ಮಾಡಿದ ವರ

    ವಧುವಿನ ಅಕ್ರಮ ಸಂಬಂಧದ ವಿಡಿಯೋವನ್ನ ಮದುವೆ ಅತಿಥಿಗಳ ಮುಂದೆ ಪ್ಲೇ ಮಾಡಿದ ವರ

    ಸಿಂಗಪೂರ: ವರನೊಬ್ಬ ತಾನು ಮದುವೆ ಆಗಬೇಕಿದ್ದ ಹುಡುಗಿಯ ಅಕ್ರಮ ಸಂಬಂಧದ ವಿಡಿಯೋವನ್ನ ಮದುವೆಗೆ ಬಂದಿದ್ದ ಅತಿಥಿಗಳ ಮುಂದೆ ಪ್ಲೇ ಮಾಡಿ ಸೇಡು ತೀರಿಸಿಕೊಂಡಿದ್ದಾನೆ.

    ಹೌದು. ಸಿಂಗಪೂರ್‍ನಲ್ಲಿ ಇಂತಹದ್ದೊಂದು ಘಟನೆ ನಡೆದಿದೆ. ಬೇರೊಬ್ಬ ವ್ಯಕ್ತಿಯ ಜೊತೆ ವಧು ಖಾಸಗಿ ಸಮಯವನ್ನು ಕಳೆಯುತ್ತಿದ್ದ ದೃಶ್ಯಗಳನ್ನ ನೋಡಿ ಅತಿಥಿಗಳು ದಂಗಾಗಿದ್ರು. ಮೊದಲಿಗೆ ವಧು ಹಾಗೂ ವರನ ಈವರೆಗಿನ ರಿಲೇಷನ್‍ಶಿಪ್ ಬಗ್ಗೆ ವಿಡಿಯೋ ಪ್ಲೇ ಆಗುತ್ತಿತ್ತು. ಇದ್ದಕ್ಕಿದ್ದಂತೆ ಆ ದೃಶ್ಯಗಳು ನಿಂತು, ಮಹಿಳೆ ತನ್ನ ಬೇರೊಬ್ಬ ಲವರ್ ಜೊತೆ ಹೋಟೆಲ್ ರೂಮಿಗೆ ಹೋಗುವ ದೃಶ್ಯ ಪ್ಲೇ ಆಗಿದೆ. ನಂತರ ಆ ಇಬ್ಬರೂ ಸಲಿಗೆಯಿಂದ ಸಮಯ ಕಳೆದಿದ್ದಾರೆ ಎಂದು ಇಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

    ಈ ವಿಡಿಯೋ ಮದುವೆ ಸಮಾರಂಭದ ವೇಳೆ ಪ್ಲೇ ಆಗುತ್ತಿದ್ದಂತೆ ಅವಮಾನದಿಂದ ವಧು ರೂಮಿನಿಂದ ಪರಾರಿಯಾಗಿದ್ದಾಳೆ ಎಂದು ವರದಿಯಾಗಿದೆ.

    ಶ್ರೀಮಂತ ಉದ್ಯಮಿಯಾಗಿದ್ದ ವರ ತಾನು ಮದುವೆಯಾಗೋ ಯುವತಿ ಬಗ್ಗೆ ತಿಳಿದುಕೊಳ್ಳಲು ಖಾಸಗಿ ಡಿಟೆಕ್ಟೀವ್‍ವೊಬ್ಬರನ್ನ ನೇಮಿಸಿಕೊಂಡಿದ್ದ. ಯಾಕಂದ್ರೆ ಆಕೆ ತನಗೆ ಮೋಸ ಮಾಡುತ್ತಿದ್ದಾಳೆ ಎಂದು ಆತ ಅನುಮಾನಗೊಂಡಿದ್ದ.

    ಅಜಾಕ್ಸ್ ಇನ್ವೆಸ್ಟಿಗೇಷನ್ ಅಂಡ್ ಸೆಕ್ಯೂರಿಟಿ ಸರ್ವೀಸಸ್‍ನ ಡೆಟೆಕ್ಟೀವ್ ಝುವೋ ಈ ಬಗ್ಗೆ ಮಾತನಾಡಿ, ಆ ಯುವತಿ ಬೇರೊಬ್ಬ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ ಹೊಂದಿರಬಹುದು ಎಂಬ ಬಗ್ಗೆ ನಾನು ನೀಡಿದ ಮಾಹಿತಿಯನ್ನ ಗ್ರಾಹಕ ಮದುವೆ ಕ್ಯಾನ್ಸಲ್ ಮಾಡಲು ಬಳಸಿಕೊಳ್ತಾರೆ ಎಂದುಕೊಂಡಿದ್ದೆ. ಆದ್ರೆ ನನಗೆ ಮದುವೆಗೆ ಆಹ್ವಾನ ನೀಡಿದಾಗ ಶಾಕ್ ಆಗಿತ್ತು ಎಂದಿದ್ದಾರೆ.

    ನಾನು 6 ವಾರಗಳವರೆಗೆ ಯುವತಿಯ ಮೇಲೆ ಕಣ್ಣಿಟ್ಟು ನಂತರ ಈ ವಿಷಯವನ್ನ ಗ್ರಾಹಕನಿಗೆ ತಿಳಿಸಿದ್ದೆ. ಮದುವೆ ಸಮಾರಂಭದಲ್ಲಿ ವಿಡಿಯೋ ನೋಡಿದಾಗ ವರನ ಉದ್ದೇಶದ ಬಗ್ಗೆ ಗೊತ್ತಾಯ್ತು. ಸಾಕಷ್ಟು ಅತಿಥಿಗಳ ಎದುರಲ್ಲಿ ವಿಡಿಯೋ ಪ್ಲೇ ಮಾಡಲಾಯ್ತು ಎಂದು ಝುವೋ ಹೇಳಿದ್ದಾರೆ.

  • ತಾಳಿ ಕಟ್ಟೋ ಸಮಯಕ್ಕೆ ವರನ ಅರಚಾಟ, ಚೀರಾಟಕ್ಕೆ ಮದುವೆಯೇ ಕ್ಯಾನ್ಸಲ್ ಆಯ್ತು!

    ತಾಳಿ ಕಟ್ಟೋ ಸಮಯಕ್ಕೆ ವರನ ಅರಚಾಟ, ಚೀರಾಟಕ್ಕೆ ಮದುವೆಯೇ ಕ್ಯಾನ್ಸಲ್ ಆಯ್ತು!

    ತಿರುವನಂತಪುರ: ತಾಳಿ ಕಟ್ಟೋ ವೇಳೆ ಕಲ್ಯಾಣ ಮಂಟಪದಲ್ಲಿ ವರನ ಚೀರಾಟ, ಅರಚಾಟದಿಂದಾಗಿ ಮದುವೆ ಮುರಿದು ಬಿದ್ದ ಘಟನೆ ಕೇರಳದ ವಿತುರ ಎಂಬಲ್ಲಿ ನಡೆದಿದೆ.

    ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ ಈ ಯುವಕ ನಿನ್ನೆ ಹಿರಿಯರು ನಿಶ್ಚಯಿಸಿದ್ದ ಹುಡುಗಿಗೆ ತಾಳಿ ಕಟ್ಟಬೇಕಿತ್ತು. ಆದರೆ ವಧುವನ್ನು ಮದುವೆ ಮಾಡಿಸಿಕೊಡಲು ಹುಡುಗಿ ಕಡೆಯವರು ಬಂದ ವೇಳೆ ವರ ವಿಚಿತ್ರವಾಗಿ ವರ್ತಿಸಿದ್ದಾನೆ.

    ವಧುವನ್ನು ನೋಡುತ್ತಿದ್ದಂತೆ ಆತ ಹೂಗಳನ್ನು ಮಂಟಪ ತುಂಬಾ ಚೆಲ್ಲಿದ್ದಾನೆ. ಜೊತೆಗೆ ವಿಚಿತ್ರವಾಗಿ ಅರಚಾಡುತ್ತಾ ಅಟ್ಟಹಾಸಗೈದಿದ್ದಾನೆ. ಇದನ್ನೆಲ್ಲಾ ನೋಡಿ ಮದುವೆಗೆ ಬಂದವರು ಮೂಕವಿಸ್ಮಿತರಾಗಿದ್ದಾರೆ. ಈ ಘಟನೆ ನಡೆಯುತ್ತಿದ್ದಂತೆ ವಧುವಿನ ಮನೆಯವರು ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ಮದುವೆಯಲ್ಲಿ ಭಾಗಿಯಾಗಲು ಬಂದವರು ಹೇಳಿದ್ದಾರೆ.

    ಎಸ್.ಐ ನೇತೃತ್ವದಲ್ಲಿ ಬಂದ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ನಡೆದ ಘಟನೆಯ ವಿವರ ಸಂಗ್ರಹಿಸಿದ್ದಾರೆ. ಬಳಿಕ ವಧು ಹಾಗೂ ವರನ ಕಡೆಯವರನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಮಾತುಕತೆ ಯಾವುದೇ ಸಫಲತೆ ಕಾಣಲಿಲ್ಲ. ವಧುವಿನ ಮನೆಯವರು ನಾವು ಯಾವುದೇ ಕಾರಣಕ್ಕೂ ಹುಡುಗಿಯನ್ನು ಆತನ ಜೊತೆ ಮದುವೆ ಮಾಡಿಸಲ್ಲ ಎಂದು ಹೇಳಿದ್ದಾರೆ. ನಾವು ವಧುವಿನ ಮನೆಯವರ ನಿರ್ಧಾರವನ್ನು ಬೆಂಬಲಿಸಿದ್ದೇವೆ ಎಂದು ವಿತುರ ಎಸ್.ಐ. ಎಸ್.ಎಲ್.ಪ್ರೇಮ್ ಲಾಲ್ ಹೇಳಿದ್ದಾರೆ.