Tag: groom

  • ವರ ವಧುವಿಗೆ ಹಾರ ಹಾಕ್ತಿದ್ದಂತೆ, ಓಡೋಡಿ ಬಂದು ಸಿಂಧೂರವಿಟ್ಟ ಪ್ರಿಯತಮ

    ವರ ವಧುವಿಗೆ ಹಾರ ಹಾಕ್ತಿದ್ದಂತೆ, ಓಡೋಡಿ ಬಂದು ಸಿಂಧೂರವಿಟ್ಟ ಪ್ರಿಯತಮ

    ಪಾಟ್ನಾ: ಮದುವೆಯಲ್ಲಿ ವಧುವಿಗೆ ವರ ಹಾರ ಹಾಕಿದ ಬೆನ್ನೆಲ್ಲೆ ಪ್ರಿಯಕರ ಸಿಂಧೂರ ಹಚ್ಚಿದ (ಬೈತಲೆಗೆ ಕುಂಕುಮ) ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ.

    ವೇದಿಕೆ ಮೇಲೆ ವಧು ಹಾಗೂ ವರ ಹಾರ ಬದಲಾಯಿಸಿಕೊಳ್ಳಲು ನಿಂತಿದ್ದರು. ಆಗ ತಕ್ಷಣ ವಧುವಿನ ಪ್ರಿಯಕರ ತನ್ನ ನಾಲ್ಕೈದು ಸ್ನೇಹಿತರ ಜೊತೆ ವೇದಿಕೆ ಹತ್ತಿ ಸಿಂಧೂರ ಹಾಕಿದ್ದಾನೆ. ಇದನ್ನು ನೋಡಿದ ಅಲ್ಲಿದ್ದ ಜನರು ಒಂದು ಕ್ಷಣ ದಂಗಾದರು.

    ಪ್ರಿಯಕರ ವಧುವಿನ ಹಣೆಗೆ ಸಿಂಧೂರ ಹಾಕಿದ ನಂತರ ಮದುವೆ ಮನೆಯಲ್ಲಿ ದೊಡ್ಡ ಗಲಾಟೆ ನಡೆದಿತ್ತು. ನಂತರ ಗ್ರಾಮದ ಹಿರಿಯರು ಬಂದು ವಿಚಾರಿಸಿದಾಗ ಇಬ್ಬರೂ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದರು ಎಂಬುದು ತಿಳಿದು ಬಂದಿದೆ. ನಂತರ ವಧುವನ್ನು ತನ್ನ ಪ್ರಿಯಕರನ ಜೊತೆ ಗ್ರಾಮಸ್ಥರು ಕಳುಹಿಸಿಕೊಟ್ಟಿದ್ದಾರೆ ಅಂತಾ ವರದಿಯಾಗಿದೆ.

    ವಧುವಿನ ಕುಟುಂಬದವರು ಮದುವೆಯನ್ನು ಬೇರೆ ಕಡೆ ನಿಶ್ಚಯ ಮಾಡಿದ್ದು, ಮದುವೆಯ ಶಾಸ್ತ್ರ ಸಂಪ್ರದಾಯಗಳೆಲ್ಲ ನೆರವೇರಿತ್ತು. ವರ ಮೆರವಣಿಗೆಯಿಂದ ನೇರವಾಗಿ ಹಾರ ಬದಲಾಯಿಸಿಕೊಳ್ಳಲು ವೇದಿಕೆ ಮೇಲೆ ಬಂದರು. ವರ ವಧುವಿಗೆ ಹಾರ ಹಾಕುವ ಸಮಯದಲ್ಲೇ ಆಕೆಯ ಪ್ರಿಯಕರ ವೇದಿಕೆ ಮೇಲೆ ಹತ್ತಿ ಯುವತಿಗೆ ಸಿಂಧೂರ ಹಚ್ಚಿದ್ದಾನೆ.

    ಈ ಘಟನೆ ನಡೆದ ನಂತರ ಮದುವೆ ಮನೆ ಗಲಾಟೆಗಳು ಆರಂಭವಾಗಿದೆ. ವಧುವಿನ ಕುಟುಂಬಸ್ಥರು ಎಲ್ಲರೂ ಸೇರಿ ಪ್ರಿಯಕರ ಹಾಗೂ ಆತನ ಸ್ನೇಹಿತರಿಗೆ ಥಳಿಸಿದ್ದಾರೆ. ಘಟನೆಯಲ್ಲಿ ಪ್ರಿಯಕರ ಹಾಗೂ ಆತನ ಸ್ನೇಹಿತರು ಗಂಭೀರವಾಗಿ ಗಾಯಗೊಂಡರು. ಇದನ್ನು ನೋಡಿದ ವಧು ತನ್ನ ಪ್ರಿಯಕರನನ್ನು ಬಿಟ್ಟುಬಿಡಿ ಎಂದು ಜೋರಾಗಿ ಕಿರುಚಲು ಶುರು ಮಾಡಿದ್ದಳು ಎಂದು ಸ್ಥಳೀಯರು ತಿಳಿಸಿದ್ದಾರೆ.

    ವಧು ಹಾಗೂ ಆಕೆಯ ಪ್ರಿಯಕರನ ಬಗ್ಗೆ ವಿಚಾರಿಸಿದ್ದಾಗ ನಾವು ಮೂರು ವರ್ಷದಿಂದ ಪ್ರೀತಿಸುತ್ತಿದ್ದೇವೆ. ಈ ವಿಚಾರ ನನ್ನ ತಂದೆ- ತಾಯಿಗೂ ಗೊತ್ತಿತ್ತು. ಆದರೆ ಅವರು ಬಲವಂತವಾಗಿ ನನ್ನ ಮದುವೆಯನ್ನು ಮಾಡಲು ನಿರ್ಧರಿಸಿದ್ದರು. ನಂತರ ನನಗೆ ಹೆದರಿಸಿ ನನ್ನ ಮದುವೆಯನ್ನು ಬೇರೊಬ್ಬ ಜೊತೆ ನಿಶ್ಚಯಿಸಿದ್ದರು ಎಂದು ವಧು ಗ್ರಾಮಸ್ಥರ ಮುಂದೆ ಹೇಳಿಕೆ ನೀಡಿದ್ದಾಳೆ.

    ವಧು ಹಾಗೂ ಆಕೆಯ ಪ್ರಿಯಕರ ಫೋಟೋವನ್ನು ನೋಡಿದ ವರ ಮತ್ತೊಮ್ಮೆ ವಧುವಿನ ನಿರ್ಧಾರವನ್ನು ಕೇಳಿದ್ದನು. ಆಗ ವಧು ತನ್ನ ಪ್ರಿಯಕರನ ಜೊತೆ ಹೋಗುವುದಾಗಿ ಹಠ ಮಾಡುತ್ತಿದ್ದಳು. ಆಗ ವರ ಮೆರವಣಿಗೆ ಮೂಲಕ ಹಿಂದಿರುಗಲು ನಿರ್ಧರಿಸಿದ್ದರು. ನಂತರ ಗ್ರಾಮಸ್ಥರು ಹಾಗೂ ಪೋಷಕರು ವಧುವನ್ನು ತನ್ನ ಪ್ರಿಯಕರನ ಜೊತೆ ಮದುವೆ ಮಾಡಿ ಕಳುಹಿಸಿಕೊಟ್ಟರು ಎಂದು ವರದಿಯಾಗಿದೆ.

  • ಮದುವೆಯ ಸಂಭ್ರಮದಲ್ಲಿದ್ದ ವರನ ಎದೆಗೆ ಬಿತ್ತು ಗುಂಡು!

    ಮದುವೆಯ ಸಂಭ್ರಮದಲ್ಲಿದ್ದ ವರನ ಎದೆಗೆ ಬಿತ್ತು ಗುಂಡು!

    ಲಕ್ನೋ: ಮದುವೆಯ ಪೂಜಾ ಕಾರ್ಯದಲ್ಲಿ ತೊಡಗಿದ್ದ ವರನ ಎದೆಗೆ ಗುಂಡು ಹಾರಿಸಿರುವ ಘಟನೆಯೊಂದು ಉತ್ತರ ಪ್ರದೇಶ ರಾಜ್ಯದ ಲಖಿಂಪುರ ಕೆರಿ ಜಿಲ್ಲೆಯ ರಾಮಪುರ ಗ್ರಾಮದಲ್ಲಿ ಸೋಮವಾರ ನಡೆದಿದೆ.

    ಸುನಿಲ್ ವರ್ಮ ಮೃತಪಟ್ಟ ವರ. ವರ ಸುನಿಲ್ ಅರ್ಚಕರು ಹೇಳಿದಂತೆ ಪೂಜಾಕೈಂಕರ್ಯದಲ್ಲಿ ತೊಡಗಿಕೊಂಡಿದ್ದರು. ವರನ ಸುತ್ತಲೂ ಸಂಬಂಧಿಕರು, ಗೆಳೆಯರು ನೆರೆದು ಮದುವೆ ಶಾಸ್ತ್ರವನ್ನು ನೋಡ್ತಿದ್ದರು. ಸಂಬಂಧಿಕರ ಮಧ್ಯೆದಲ್ಲಿಯೇ ನಿಂತಿದ್ದ ರಾಮಚಂದ್ರ ಎಂಬಾತ ಪ್ಯಾಂಟ್ ಜೇಬಿನಿಂದ ಪಿಸ್ತೂಲ್ ಹೊರ ತೆಗೆದು ನೇರವಾಗಿ ವರನ ಎದೆಗೆ ಗುಂಡು ಹಾರಿಸಿದ್ದಾನೆ.

    ಗುಂಡು ತಗುಲಿದ ಕೂಡಲೇ ಜ್ಞಾನ ತಪ್ಪಿದ ವರನನ್ನು ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಸುನಿಲ್ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಪ್ರಕರಣದ ಬಳಿಕ ಆರೋಪಿ ರಾಮಚಂದ್ರ ಪರಾರಿಯಾಗಿದ್ದಾನೆ. ವರನ ಎದೆಗೆ ಗುಂಡು ಹಾರಿಸುವ ಎಲ್ಲ ದೃಶ್ಯಗಳು ಮದುವೆ ವಿಡಿಯೋಗ್ರಾಫರ್ ಕ್ಯಾಮೆರಾದಲ್ಲಿ ಸೆರೆಯಾಗಿವೆ.

    ಘಟನೆ ಸಂಬಂಧ ಆರೋಪಿ ರಾಮಚಂದ್ರ ವಿರುದ್ಧ ಐಪಿಸಿ ಸೆಕ್ಷನ್ 302ರ ಪ್ರಕಾರ ದಾಖಲಾಗಿದೆ. ಆರೋಪಿ ರಾಮಚಂದ್ರ ಸಂಭ್ರಮಾಚರಣೆಗಾಗಿ ಗುಂಡು ಹಾರಿಸುವಾಗ ಆಕಸ್ಮಿಕವಾಗಿ ವರನಿಗೆ ತಗುಲಿದೆಯಾ ಅಥವಾ ಉದ್ದೇಶಪೂರ್ವಕವಾಗಿ ಕೊಲ್ಲಲಾಗಿದೆ ಎಂಬುದು ತನಿಖೆಯಲ್ಲಿ ತಿಳಿಯಬೇಕಿದೆ. ಸಂಭ್ರಮಾಚರಣೆಯಲ್ಲಿ ಗುಂಡು ಹಾರಿಸುವುದಕ್ಕೆ ನಿಷೇಧವಿದ್ದು, ಆದ್ರೂ ಕೆಲವರು ಫೈರಿಂಗ್ ಮಾಡ್ತಾರೆ. ತಪ್ಪಿಸ್ಥತರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಅಂತಾ ಎಎಸ್‍ಪಿ ಘನಶ್ಯಾಮ್ ಚೌರಾಶಿ ಹೇಳಿದ್ದಾರೆ.

    ಈ ಸಂಬಂಧ ನೀಮ್‍ಗಾಂವ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    https://www.youtube.com/watch?v=cHB_GIcqeNg&feature=youtu.be

     

     

     

  • ಮದ್ವೆಯಾದ ಮೂರನೇ ದಿನವೇ ಆತ್ಮಹತ್ಯೆಗೆ ಶರಣಾದ ವರ!

    ಮದ್ವೆಯಾದ ಮೂರನೇ ದಿನವೇ ಆತ್ಮಹತ್ಯೆಗೆ ಶರಣಾದ ವರ!

    ನವದೆಹಲಿ: ಮದುವೆಯಾದ ಮೂರನೇ ದಿನದಲ್ಲಿ ವರ ರೈಲಿನ ಮುಂದೆ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಷ್ಟ್ರರಾಜಧಾನಿ ನವದೆಹಲಿಯಲ್ಲಿ ನಡೆದಿದೆ.

    ಆಕಾಶ್ (22) ಆತ್ಮಹತ್ಯೆಗೆ ಶರಣಾದ ವರ. ಪ್ರೇಮ್ ಸಿಂಗ್ ಅವರ ಪುತ್ರ ಆಕಾಶ್ ಮದುವೆ ಏ. 20ರಂದು ರಾಕೇಶ್ ಕುಮಾರ್ ಅವರ ಪುತ್ರಿ ಅನು ಜೊತೆ ನಡೆದಿತ್ತು. ಮದುವೆಯಾಗಿ ಮೂರೇ ದಿನಕ್ಕೆ ವಧುವಿನ ಪೋಷಕರು ಆಕೆಯನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಲು ಬಂದಿದ್ದರು. ಈ ವೇಳೆ ಆಕಾಶ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಮದುವೆ ನಡೆದ ನಂತರ ಕೆಲವು ಶಾಸ್ತ್ರಗಳು ನಡೆದಿರಲಿಲ್ಲ. ಹಾಗಾಗಿ ವಧುವಿನ ಮನೆಯವರ ಊಟದ ವ್ಯವಸ್ಥೆ ಹಾಗೂ ಅವರಿಗೆ ಎಲ್ಲ ಸೌಲಭ್ಯಗಳನ್ನು ಒದಗಿಸಬೇಕೆಂದು ಆಕಾಶ್ ಗೆ ಹೇಳಲಾಗಿತ್ತು. ಅಲ್ಲದೇ ತನ್ನ ಹಣದಲೇ ಅವರಿಗೆ ಬೇಕಾದ ಎಲ್ಲ ವಸ್ತುವನ್ನು ಖರೀದಿಸಬೇಕೆಂದು ಹಿರಿಯರು ಆತನಿಗೆ ಹೇಳಿದ್ದರು. ಆಕಾಶ್ ಹತ್ತಿರ ಹಣವಿಲ್ಲದ ಕಾರಣ ಆತ ಬೇರೆಯವರ ಹತ್ತಿರ ಸಾಲ ಪಡೆಯಲು ಹೋಗಿದ್ದ. ಆದರೆ ಶಾಸ್ತ್ರ ಪೂರ್ಣಗೊಳಿಸಲು ಸಾಲ ಸಿಗದ ಕಾರಣ ಆಕಾಶ್ ಒತ್ತಡಕ್ಕೆ ಸಿಲುಕಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ವರದಿಯಾಗಿದೆ.

    ಸೋಮವಾರ ಬೆಳಗ್ಗೆ ವಧುವಿನ ಮನೆಯವರಿಗೆ ಬೇಕಾದ ವಸ್ತು ಹಾಗೂ ಸಾಮಾಗ್ರಿಗಳನ್ನು ತರಲು ಹೋಗುತ್ತಿದ್ದೇನೆ ಎಂದು ಆಕಾಶ್ ಮನೆಯವರಿಗೆ ಹೇಳಿ ದಾದ್ರಿಗೆ ಹೋಗಿದ್ದನು. ಮೂಲಗಳ ಪ್ರಕಾರ ಆಕಾಶ್ ಹಣ ಪಡೆಯಲು ದಾದ್ರಿಗೆ ಹೋಗಿದ್ದನು ಎನ್ನಲಾಗಿದೆ. ನಂತರ ಆತನಿಗೆ ಹಣ ಸಿಗದಿದ್ದಾಗ ಆಕಾಶ್ ದಾದ್ರಿಯ ರೈಲ್ವೆ ನಿಲ್ದಾಣದಲ್ಲಿ ರೈಲಿನ ಮುಂದೆ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ.

    ಆಕಾಶ್ ಜಿಗಿಯುತ್ತಿದ್ದಂತೆ ಅಲ್ಲಿದ್ದ ಜನರು ಜೋರಾಗಿ ಕಿರುಚಿದ್ದಾರೆ. ಕಿರುಚಾಟದ ಸದ್ದು ಕೇಳಿ ಜಿಆರ್ ಪಿ ಹಾಗೂ ಆರ್ ಪಿಎಫ್ ಸ್ಥಳಕ್ಕೆ ಬಂದರು. ನಂತರ ಪೊಲೀಸರು ಬಂದು ಆಕಾಶ್ ಮೃತದೇಹವನ್ನು ವಶಕ್ಕೆ ಪಡೆದರು. ನಂತರ ಆತನ ಮೊಬೈಲ್ ಪರಿಶೀಲಿಸಿ, ಆತನ ಪೋಷಕರಿಗೆ ಮಾಹಿತಿ ತಿಳಿಸಿದ್ದರು. ಮಾಹಿತಿ ತಿಳಿದು ಆಕಾಶ್ ಪೋಷಕರು ದಾದ್ರಿ ರೈಲ್ವೇ ಸ್ಟೇಷನ್ ತಲುಪಿದರು ಎಂದು ವರದಿಯಾಗಿದೆ.

    ಆಕಾಶ್ ನೊಯ್ಡಾದ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದನು. ಆತ ಗೂಡ್ಸ್ ರೈಲ್ ಮುಂದೆ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಆತ ಆತ್ಮಹತ್ಯೆ ಮಾಡಿಕೊಳ್ಳವ ವೇಳೆ ಅಲ್ಲಿದ್ದ ಜನರು ಕಿರುಚಿ ಆತನನ್ನು ತಡೆಯಲು ಪ್ರಯತ್ನಿಸಿದ್ದರು. ಆತ ಯಾರ ಮಾತು ಕೇಳದೇ ಆತ್ಮಹತ್ಯೆಗೆ ಶರಣಾಗಿದ್ದಾನೆ.

  • ಮದುವೆಯಲ್ಲಿ ವರನನ್ನೇ ಅರೆಸ್ಟ್ ಮಾಡಿಸಿದ ವಧು!

    ಮದುವೆಯಲ್ಲಿ ವರನನ್ನೇ ಅರೆಸ್ಟ್ ಮಾಡಿಸಿದ ವಧು!

    ಕೋಲ್ಕತ್ತಾ: ಮದುವೆ ಮನೆಯಲ್ಲಿ ವರನೊಬ್ಬ ಕುಡಿದು ಬಂದು ಅಸಭ್ಯವಾಗಿ ವರ್ತಿಸಿದ್ದಕ್ಕೆ ವಧು ಮದುವೆ ನಿಲ್ಲಿಸಿ ಆತನನ್ನು ಅರೆಸ್ಟ್ ಮಾಡಿಸಿದ ಘಟನೆ ಪಶ್ಚಿಮ ಬಂಗಾಳದ ಬಂಹುರಾ ಜಿಲ್ಲೆಯಲ್ಲಿ ನಡೆದಿದೆ.

    ಬುದ್ಹಾರ್ ಸಹೀಶ್ ಶಾಲೆಯಲ್ಲಿ ಶಿಕ್ಷಕನಾಗಿದ್ದು ಆತನ ಮದುವೆ ಏಪ್ರಿಲ್ 20ರಂದು ನಿಗದಿಯಾಗಿತ್ತು. ತನ್ನ ಮದುವೆಯ ದಿನವೇ ಸಹೀಶ್ ತನ್ನ ಸಂಬಂಧಿಕರ ಜೊತೆ ಕುಡಿದು ಮದುವೆ ಮನೆಗೆ ಬಂದಿದ್ದನು. ಭಯಂಕರ ನಶೆಯಲ್ಲಿದ ಸಹೀಶ್ ಸರಿಯಾಗಿ ನಡೆದಾಡಲು ಸಾಧ್ಯವಾಗುತ್ತಿರಲಿಲ್ಲ.

    ಸಹೀಶ್ ನನ್ನು ಈ ರೀತಿ ನೋಡಿದ ಆತನ ಪೋಷಕರು ದಂಗಾಗಿದ್ದಾರೆ. ಅಷ್ಟೇ ಅಲ್ಲದೇ ಮದುವೆ ಮಂಟಪದಲ್ಲಿ ವರ ಹಾಗೂ ವಧು ಕುಳಿತುಕೊಳ್ಳಲು ಇಟ್ಟಿದ್ದ ಸ್ಟೂಲ್‍ನನ್ನು ಕಾಲಿನಿಂದ ಒದ್ದಿದ್ದಾನೆ. ನಂತರ ಕಾರ್ಯಕ್ರಮಕ್ಕೆ ಆಗಮಿಸಿದ್ದ ಪುರೋಹಿತರನ್ನು ಕೆಟ್ಟ ಪದಗಳಲ್ಲಿ ನಿಂದಿಸಿ ಜೋರಾಗಿ ಕಿರುಚಾಡಿದ್ದಾನೆ ಎಂದು ವರದಿಯಾಗಿದೆ.

    ಈ ಶಾಸ್ತ್ರ-ಸಂಪ್ರದಾಯಗಳಲ್ಲಿ ನನಗೆ ನಂಬಿಕೆಯಿಲ್ಲ. ನನ್ನ ವಧುವನ್ನು ನನ್ನ ಜೊತೆ ಕರೆದುಕೊಂಡು ಹೋಗಲು ಬಿಡು ಎಂದು ಕಿರುಚಾಡಿದ್ದಾನೆ. ಈ ವರ್ತನೆ ಕಂಡು ಶಾಕ್ ಆದ ವಧು ಸಹೀಶ್ ಜೊತೆಗಿನ ತನ್ನ ಮದುವೆಯನ್ನು ಮುರಿದಿದ್ದಾಳೆ. ನಂತರ ವಧುವಿನ ತಂದೆ ಪೊಲೀಸರಿಗೆ ಕರೆ ಮಾಡಿ ವಿಷಯವನ್ನು ತಿಳಿಸಿದ್ದಾರೆ.

    ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ವರ ಹಾಗೂ ಆತನ ಸಹೋದರನನ್ನು ವಶಕ್ಕೆ ಪಡೆದರು. ಕುಡಿದ ನಶೆಯಲ್ಲಿದ್ದ ಇಬ್ಬರೂ ದೂರು ದಾಖಲಾಗುವರೆಗೂ ಪೊಲೀಸರ ವಶದಲ್ಲೇ ಇದ್ದರು ಎಂದು ವರದಿಯಾಗಿದೆ.

    ಮದುವೆಗೆ ಬಂದಿದ್ದ ಅತಿಥಿಗಳು ವಧುವಿನ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಸಹೀಶ್‍ನ ಕುಟುಂಬದವರು ವರದಕ್ಷಿಣೆ ಆಗಿ ಪಡೆದ ಬೈಕ್, ಹಾಸಿಗೆ, ಡ್ರೆಸಿಂಗ್ ಟೇಬಲ್, ತಿಜೋರಿ ಹಾಗೂ ಉಳಿದ ವಸ್ತುಗಳನ್ನು ವಧುವಿನ ಕುಟುಂಬಕ್ಕೆ ಹಿಂತಿರುಗಿಸಿದ್ದರು.

  • ವರನ 11 ವರ್ಷದ ಸೋದರಿಯನ್ನು ರೇಪ್ ಮಾಡಿ, ಕೊಲೆಗೈದ!

    ವರನ 11 ವರ್ಷದ ಸೋದರಿಯನ್ನು ರೇಪ್ ಮಾಡಿ, ಕೊಲೆಗೈದ!

    ರಾಯ್‍ಪುರ: ವರನ ಸೋದರಿಯನ್ನು ಅತ್ಯಾಚಾರಗೈದು ಕೊಲೆ ಮಾಡಿರುವ ಹೃದಯವಿದ್ರಾವಕ ಘಟನೆ ಬುಧವಾರ ಛತ್ತೀಸಘಡ ರಾಜ್ಯದ ಪೋಧಿ ಗ್ರಾಮದಲ್ಲಿ ನಡೆದಿದೆ.

    ಘಟನೆ ಸಂಬಂಧ ವರನ ಸ್ನೇಹಿತನನ್ನು ಪೊಲೀಸರು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಮದುವೆಯಲ್ಲಿ ವರನ ಸ್ನೇಹಿತ ಬಾಲಕಿಗೆ ತಂಪು ಪಾನೀಯದಲ್ಲಿ ಮತ್ತು ಬರುವ ಔಷಧಿ ಸೇರಿಸಿ ಕುಡಿಸಿದ್ದಾನೆ. ಎಚ್ಚರ ತಪ್ಪಿದ ಬಾಲಕಿಯನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾನೆ.

    ಕೊಲೆಯ ಬಳಿಕ ಬಂದು ಎಲ್ಲರೊಂದಿಗೆ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾನೆ. ಕೆಲವು ಸಮಯದ ಬಳಿಕ ಬಾಲಕಿ ಕಾಣೆಯಾಗಿರುವುದು ಪೋಷಕರ ಗಮನಕ್ಕೆ ಬಂದಿದೆ. ಈ ವೇಳೆ ಅಲ್ಲಿಯೇ ಇದ್ದ ಆರೋಪಿ ತನಗೆ ಏನು ಗೊತ್ತಿಲ್ಲ ಎಂಬಂತೆ ನಟಿಸಿತ್ತಾ ನಿಂತಿದ್ದ ಅಂತಾ ತನಿಖಾಧಿಕಾರಿಗಳು ತಿಳಿಸಿದ್ದಾರೆ.

    ಮದುವೆಗೆ ಬಂದ ಎಲ್ಲರೂ ಹೊರಡುವ ತಯಾರಿಯಲ್ಲಿದ್ರು. ಈ ವೇಳೆ ವರನ ಗೆಳೆಯ ಬಾಲಕಿಗೆ ತಂಪು ಪಾನೀಯ ನೀಡಿ ಕರೆದುಕೊಂಡು ಹೋಗಿರುವುದನ್ನು ಕೆಲವರು ನೋಡಿದ್ದಾರೆ. ಮಂಟಪದಿಂದ 1.5 ಕಿ.ಮೀ ದೂರದ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ, ಅತ್ಯಾಚಾರವೆಸಗಿದ ಬಳಿಕ ಸಿಮೆಂಟ್ ಇಟ್ಟಿಗೆಗಳಿಂದ ಬಾಲಕಿಯ ಕೊಲೆ ಮಾಡಿದ್ದಾನೆ. ಕೊಲೆಯ ಬಳಿಕ ನಗ್ನ ಸ್ಥಿತಿಯಲ್ಲಿದ್ದ ಬಾಲಕಿಯ ಮೃತದೇಹವನ್ನು ಅಲ್ಲಿಯೇ ಬಿಟ್ಟು ಮದುವೆ ಮನೆ ಸೇರಿಕೊಂಡಿದ್ದಾನೆ.

    ಬಾಲಕಿ ಕಾಣೆಯಾದ ಬಳಿಕ ಪೋಷಕರು ಹುಡುಕಾಟ ಆರಂಭಿಸಿದಾಗ ಕೊನೆಯದಾಗಿ ವರನ ಗೆಳೆಯನೊಂದಿಗೆ ಹೊರ ಹೋಗಿದ್ದು ತಿಳಿದು ಬಂದಿದೆ. ವರನ ಗೆಳೆಯನನ್ನು ಕರೆದು ಪ್ರಶ್ನಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

  • ಚಿನ್ನದ ಬೂಟು, ಟೈ ಹಾಕ್ಕೊಂಡು ವಿಶೇಷವಾಗಿ ಮದ್ವೆಯಾದ ವರ

    ಚಿನ್ನದ ಬೂಟು, ಟೈ ಹಾಕ್ಕೊಂಡು ವಿಶೇಷವಾಗಿ ಮದ್ವೆಯಾದ ವರ

    ಇಸ್ಲಾಮಬಾದ್: ಮದುವೆಗೆ ವಧು ವರರಿಗೆ ಚಿನ್ನದ ಸರ, ಬಳೆ, ಉಂಗುರ, ಓಲೆ ತೊಡಿಸೋದನ್ನು ಕೇಳಿದ್ದೇವೆ, ನೋಡಿದ್ದೇವೆ. ಆದರೆ ಪಾಕಿಸ್ತಾನದಲ್ಲಿ ನಡೆದ ಮದುವೆಯಲ್ಲಿ ವರ ಚಿನ್ನದ ಟೈ ಮತ್ತು ಚಿನ್ನದ ಶೂ ತೊಟ್ಟು ಮಿಂಚಿದ್ದಾರೆ.

    ಪಾಕಿಸ್ತಾನದ ಲಾಹೋರ್ ನಿವಾಸಿಯಾದ ಹಫಿಜ್ ಸಲ್ಮಾನ್ ಶಾಹಿದ್ ಎಂಬ ವರ ಚಿನ್ನದ ಟೈ ಹಾಗೂ ಶೂ ತೊಟ್ಟಿದ್ದಾರೆ. ದಕ್ಷಿಣ ಏಷ್ಯಾದ ದೇಶಗಳಲ್ಲಿ ಮದುವೆಯ ದಿನದಂದು ವಧುವಿಗೆ ವಿವಿಧ ರೀತಿಯಲ್ಲಿ ಅಲಂಕಾರ ಮಾಡಲು ಬಂಗಾರವನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ.

    ಹಫಿಜ್ ಸಲ್ಮಾನ್ ಶಾಹಿದ್ ಅವರು ಸುಮಾರು 2.5 ಮಿಲಿಯನ್(16,30,14,000 ರೂ.) ಮೌಲ್ಯದ ಚಿನ್ನವನ್ನು ಧರಿಸಿ ಮದುವೆಯಾಗಿದ್ದಾರೆ. ಸಲ್ಮಾನ್ ಸುಮಾರು 2.5 ಮಿಲಿಯನ್ ಮೌಲ್ಯದ ಚಿನ್ನವನ್ನು ತನ್ನ ವಿವಾಹದ ದಿನದಂದು ಧರಿಸಿದ್ದು, ಚಿನ್ನದ ಬೂಟುಗಳ ಬೆಲೆ ಸುಮಾರು 1.7 ಮಿಲಿಯನ್(11,08,49,520) ಮೌಲ್ಯದ್ದಾಗಿದೆ. ಸುಮಾರು 32 ತೊಲ ಬಂಗಾರವಾಗಿತ್ತು. ಅವರು ಧರಿಸಿರುವ ಸೂಟ್ ಬರೋಬ್ಬರಿ 63,000 ರೂ. ಮೌಲ್ಯದ್ದಾಗಿದೆ. ಜೊತೆಗೆ ಅದರ ಮೇಲೆ 10 ತೊಲದ ಟೈ ಇದನ್ನು ಸ್ಫಟಿಕಗಳು ಮತ್ತು ಆಭರಣಗಳಿಂದ ಅಲಂಕೃತ ಮಾಡಲಾಗಿತ್ತು. ಇದರ ಮೌಲ್ಯ 5 ಲಕ್ಷವಾಗಿದೆ ಎಂದು ವರದಿಯಾಗಿದೆ.

    ಅಷ್ಟೇ ಅಲ್ಲದೇ ಸಲ್ಮಾನ್ ಅವರಿಗೆ ಭದ್ರತಾ ಸಿಬ್ಬಂದಿಯನ್ನು ಕೂಡ ಒದಗಿಸಲಾಗಿತ್ತು. ನನ್ನ ಮದುವೆ ದಿನದಂದು ಏನನ್ನಾದರೂ ವಿಶೇಷವಾಗಿ ಧರಿಸಬೇಕೆಂದು ಬಯಸಿದ್ದೆ ಎಂದು ಅವರು ಹೇಳಿದ್ದಾರೆ.

    ಸಲ್ಮಾನ್ ಓರ್ವ ಮಗನಾಗಿದ್ದು, 7 ಮಂದಿ ಸಹೋದರಿಯರಿದ್ದಾರೆ. ಹೀಗಾಗಿ ಅಲ್ಮಾನ್ ಪೋಷಕರು ಆತನ ಇಚ್ಛೆಯನ್ನು ಪೂರ್ಣಗೊಳಿಸಬೇಕೆಂದು ಬಯಸಿದ್ದರು ಎಂದು ವರದಿ ತಿಳಿಸಿದೆ.

    https://www.instagram.com/p/BhZb10PghvB/?taken-by=divamagazinepakistan

  • ವಧುವಿನ ಮುಖ ನೋಡುತ್ತಿದ್ದಂತೆ ಬಿಕ್ಕಿ ಬಿಕ್ಕಿ ಅತ್ತ ವರ-ವಿಡಿಯೋ ನೋಡಿ

    ವಧುವಿನ ಮುಖ ನೋಡುತ್ತಿದ್ದಂತೆ ಬಿಕ್ಕಿ ಬಿಕ್ಕಿ ಅತ್ತ ವರ-ವಿಡಿಯೋ ನೋಡಿ

    ಸಾಮನ್ಯವಾಗಿ ಮದುವೆ ಮನೆಯಲ್ಲಿ ಮದುಮಗಳು ಅಳೋದನ್ನು ನಾವು ನೋಡಿರುತ್ತೇವೆ. ತವರು ಮನೆಯಿಂದ ಪತಿಯ ಮನೆಗೆ ಹೊರಡುವ ವಧು ದುಃಖದಿಂದ ಅಳುತ್ತಾರೆ. ವಧುವಿನ ಪೋಷಕರು ಸಹ ಮಗಳನ್ನು ಕಳುಹಿಸಿಕೊಡುವಾಗ ಅಳುತ್ತಾರೆ. ಆದ್ರೆ ವರನೊಬ್ಬ ವಧುವನ್ನು ನೋಡುತ್ತಿದ್ದಂತೆ ಬಿಕ್ಕಿ ಬಿಕ್ಕಿ ಅಳುತ್ತಿರುವ ಹಳೆಯ ವಿಡಿಯೋ ಮತ್ತೆ ವೈರಲ್ ಆಗಿದೆ.

    ವಧುವನ್ನು ವೇದಿಕೆಯ ಮೇಲ್ಗಡೆ ಕರೆತರಲಾಗುತ್ತಿತ್ತು. ವಧುವಿಗಿಂತ ಮುಂಚೆಯೇ ಸ್ಟೇಜ್ ಮೇಲೆ ನಿಂತಿದ್ದ ವರ ತನ್ನ ಪತ್ನಿಯನ್ನು ನೋಡುತ್ತಿದ್ದಂತೆ ಖುಷಿಯಲ್ಲಿ ಕಣ್ಣೀರು ಹಾಕಿದ್ದಾನೆ. ವರ ದಿಡೀರ್ ಅಂತಾ ಅಳುತ್ತಿರೋದನ್ನ ಗಮನಿಸದ ಜನರು ಒಂದು ಕ್ಷಣ ಶಾಕ್ ಆಗಿರುವದಂತೂ ಸತ್ಯ.

    ಈ ವಿಡಿಯೋವನು ಕೋಡಿ ಎಲಸ್ವಿಕ್ ಎಂಬವರು ಜೂನ್ 01, 2015ರಂದು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿಕೊಂಡಿದ್ರು. ಈ ವಿಡಿಯೋ ಇದೂವರೆಗೂ 4.5 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆಯಾಗಿದೆ. ಕೆಲವು ದಿನಗಳಿಂದ ಮತ್ತೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

  • ಮದ್ವೆಗೆ ಕುದುರೆ ಏರಿ ಮೆರವಣಿಗೆಯೊಂದಿಗೆ ಬರುತ್ತಿದ್ದ ವರ ಅರೆಸ್ಟ್!

    ಮದ್ವೆಗೆ ಕುದುರೆ ಏರಿ ಮೆರವಣಿಗೆಯೊಂದಿಗೆ ಬರುತ್ತಿದ್ದ ವರ ಅರೆಸ್ಟ್!

    ಭೋಪಾಲ್: ಕುದುರೆ ಏರಿ ತನ್ನ ಮರವಣಿಗೆಯೊಂದಿಗೆ ಮದುವೆ ಬರುತ್ತಿದ್ದ ವರನನ್ನು ಪೊಲೀಸರು ಬಂಧಿಸಿದ ಘಟನೆ ಮಧ್ಯ ಪ್ರದೇಶದ ಬಾಲಾಘಾಟ್‍ನ ವಾರಾಸಿವಾನಿಯ ಸಿಕಂದರ್ ಗ್ರಾಮದಲ್ಲಿ ನಡೆದಿದೆ.

    ದಿನೇಶ್ ಬಂಧಿತ ಆರೋಪಿ. ಮದುವೆ ಮೆರವಣಿಗೆಯಲ್ಲಿ ಬರುತ್ತಿದ್ದ ವರನನ್ನು ಯುವತಿಯ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂಬ ಆರೋಪದ ಮೇಲೆ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ಪ್ರಕಾರ ದಿನೇಶ್ ತನ್ನದೇ ಗ್ರಾಮದ ಯುವತಿಯನ್ನು ಎರಡೂ ವರ್ಷದಿಂದ ಪ್ರೀತಿಸುತ್ತಿದ್ದನು. ಅಷ್ಟೇ ಅಲ್ಲದೇ ಮದುವೆಯಾಗುವುದ್ದಾಗಿ ನಂಬಿಸಿ ಆಕೆಯ ಜೊತೆ ದೈಹಿಕ ಸಂಪರ್ಕ ಹೊಂದಿದ್ದನು ಎಂದು ತಿಳಿಸಿದ್ದಾರೆ.

    ಈ ನಡುವೆ ದಿನೇಶ್ ಪೋಷಕರು ಆತನ ಮದುವೆಯನ್ನು ಬೇರೆ ಯುವತಿ ಜೊತೆ ನಿಶ್ಚಯಿಸಿದ್ದರು. ಇನ್ನೊಂದು ಆಶ್ಚರ್ಯಕರ ವಿಷಯವೆನೆಂದರೆ ಯುವತಿಗೆ ತನ್ನ ಪ್ರಿಯಕರ ದಿನೇಶ್ ಮದುವೆಯ ವಿಷಯದ ಬಗ್ಗೆ ಗೊತ್ತಿರಲಿಲ್ಲ. ಅಷ್ಟೇ ಅಲ್ಲದೇ ದಿನೇಶ್ ಮದುವೆಯ ಎರಡು ದಿನಗಳ ಹಿಂದೆ ಯುವತಿ ಆತನನ್ನು ಭೇಟಿ ಮಾಡಿದ್ದಳು. ಆಗ ದಿನೇಶ್ ಮತ್ತೆ ಆಕೆಯ ಜೊತೆ ದೈಹಿಕ ಸಂಪರ್ಕವನ್ನು ಬೆಳೆಸಿದ್ದ ಎಂದು ಪತ್ರಿಕೆಯೊಂದು ವರದಿ ಮಾಡಿದೆ.

    ಮದುವೆಯ ದಿನವೇ ಯುವತಿಗೆ ವಿಷಯ ಗೊತ್ತಾಗಿದ್ದು, ಆಕೆ ದಿನೇಶ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ದಿನೇಶ್ ಮದುವೆ ಮಾರ್ಚ್ 31ರಂದು ನೆರವೇರಬೇಕಿತ್ತು. ದಿನೇಶ್ ಕುಟುಂಬದವರು ಹಾಗೂ ಸಂಬಂಧಿಕರು ಆತನ ಮದುವೆಯ ಮೆರವಣಿಗೆಗೆ ಹೊರಟ್ಟಿದ್ದರು. ಆದರೆ ಕಲ್ಯಾಣ ಮಂಟಪಕ್ಕೆ ತಲುಪುವ ಮೊದಲೇ ದಾರಿ ಮಧ್ಯದಲ್ಲಿ ಪೊಲೀಸರು ದಿನೇಶ್‍ನನ್ನು ಅತ್ಯಾಚಾರದ ಆರೋಪದ ಮೇಲೆ ಬಂಧಿಸಿದ್ದಾರೆ.

    ಪೊಲೀಸರು ದೂರನ್ನು ಪರಿಗಣಿಸಿ ದಿನೇಶ್ ಮೊಬೈಲ್ ಕರೆಗಳನ್ನು ಪರಿಶೀಲಿಸಿದಾಗ ಯುವತಿ ಮೇಲಿನ ಆರೋಪಗಳು ಸಾಬೀತಾಗಿದೆ. ದಿನೇಶ್ ಹಾಗೂ ಯುವತಿ 2016 ರಿಂದ ಪ್ರೀತಿಸುತ್ತಿದ್ದರು. ದಿನೇಶ್‍ನನ್ನು ಬಂಧಿಸುತ್ತಿರುವುದ್ದನ್ನು ನೋಡಿ ಸಂಬಂಧಿಕರು ಪ್ರಶ್ನಿಸಿದ್ದಾರೆ. ಆಗ ಪೊಲೀಸರು ನಡೆದ ಘಟನೆ ಬಗ್ಗೆ ವಿವರಿಸಿದ ಮೇಲೆ ಎಲ್ಲರೂ ತಮ್ಮ ಮನೆಗೆ ಹಿಂತಿರುಗಿದ್ದಾರೆ.

  • ವಧುಗೆ ಹಾರ ಹಾಕುವ ಬದ್ಲು ಆಕೆಯ ಸ್ನೇಹಿತೆಗೆ ಹಾರ ಹಾಕಿದ ವರ!: ವಿಡಿಯೋ ವೈರಲ್

    ವಧುಗೆ ಹಾರ ಹಾಕುವ ಬದ್ಲು ಆಕೆಯ ಸ್ನೇಹಿತೆಗೆ ಹಾರ ಹಾಕಿದ ವರ!: ವಿಡಿಯೋ ವೈರಲ್

    ನವದೆಹಲಿ: ವರನೊಬ್ಬ ತನ್ನ ಮದುವೆಯಲ್ಲಿ ವಧುವಿಗೆ ಹಾರ ಹಾಕುವ ಬದಲು ಆಕೆಯ ಸ್ನೇಹಿತೆಗೆ ಹಾರ ಹಾಕಿ ಎಡವಟ್ಟು ಮಾಡಿಕೊಂಡಿದ್ದು, ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

    ಈ ಘಟನೆ ಎಲ್ಲಿ ನಡೆದಿದೆ ಎಂಬುದರ ಬಗ್ಗೆ ವರದಿಯಾಗಿಲ್ಲ. ಆದ್ರೆ ಸಂಪ್ರದಾಯವನ್ನು ಗಮನಿಸಿದ್ರೆ ಭಾರತೀಯ ಮದುವೆಯಲ್ಲಿ ಈ ಎಡವಟ್ಟಾಗಿದೆ ಎಂಬುದಾಗಿ ವರದಿಯಾಗಿದೆ.

    ವಿಡಿಯೋದಲ್ಲೇನಿದೆ?: ವಿಡಿಯೋದಲ್ಲಿ ವಧು ಮೊದಲು ವರನಿಗೆ ಹಾರ ಹಾಕುತ್ತಾಳೆ. ನಂತರ ವರ ತನ್ನ ಕೈಯಲಿದ್ದ ಹಾರವನ್ನು ವಧುವಿನ ಪಕ್ಕದಲ್ಲೇ ನಿಂತಿದ್ದ ಆಕೆಯ ಸ್ನೇಹಿತೆಗೆ ಕೊರಳಿಗೆ ಹಾಕಿದ್ದಾನೆ. ವರನ ಈ ಎಡವಟ್ಟು ಕಂಡ ಮದುವೆಗೆ ಬಂದವರು ದಂಗಾಗಿ ಹೋಗಿದ್ದಾರೆ.

    ವರ ಹಾಗೂ ವಧು ತಮ್ಮ ಮದುವೆಗೆ ಹಾರ ಬದಲಾಯಿಸಿಕೊಳ್ಳಲು ಸ್ಟೇಜ್ ಮೇಲೆ ಬಂದರು. ಆಗ ವಧು ಪಕ್ಕದಲ್ಲಿ ಆಕೆಯ ಸ್ನೇಹಿತೆ ನಿಂತಿದ್ದು, ಆಕೆಯ ಮೇಲೆ ವರನಿಗೆ ಪ್ರೀತಿಯಾಗಿದೆ. ಹೀಗಾಗಿ ಆತ ಮಧುವಿನ ಕೊರಳಿಗೆ ಹಾರ ಹಾಕುವ ಬದಲು ಆಕೆಯ ಸ್ನೇಹಿತೆಯ ಕೊರಳಿಗೆ ಹಾಕಿದ್ದಾನೆ ಅಂತ ನೆರೆದವರು ಮಾತನಾಡಿಕೊಂಡಿದ್ದಾರೆ ಎನ್ನಲಾಗಿದೆ.

    ಈ ಘಟನೆಯಿಂದ ಅಲ್ಲಿದ್ದ ವಧು ಹಾಗೂ ಜನರು ದಂಗಾಗಿ ಹೋದ್ರೂ, ವರ ಮಾತ್ರ ತನಗೂ ಇದಕ್ಕೂ ಯಾವುದೇ ಸಂಬಂಧವಿಲ್ಲದಂತೆ ನಗುತ್ತ ನಿಂತಿದ್ದನು ಎಂದು ರಾಷ್ಟ್ರೀಯ ಪತ್ರಿಕೆಯೊಂದರಲ್ಲಿ ವರದಿಯಾಗಿದೆ.

    ಮಾರ್ಚ್ 26, 2018ರಂದು `ಬೇಟೋ ಸೇ ಪ್ಯಾರಿ ಬೇಟಿ ಹೋತೆಯೇ’ ಎಂಬ ಫೇಸ್‍ಬುಕ್ ಪೇಜ್ ನಲ್ಲಿ ಈ ವಿಡಿಯೋವನ್ನು ಶೇರ್ ಮಾಡಲಾಗಿದೆ. ಸದ್ಯ ಈ ವಿಡಿಯೋವನ್ನು 3,000ಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ ಎಂದು ಹೇಳಲಾಗಿದೆ.

  • ಮರಕ್ಕೆ ಡಿಕ್ಕಿ ಹೊಡೆದ ಕಾರು – ವರ ಸೇರಿ ಐವರ ದುರ್ಮರಣ

    ಮರಕ್ಕೆ ಡಿಕ್ಕಿ ಹೊಡೆದ ಕಾರು – ವರ ಸೇರಿ ಐವರ ದುರ್ಮರಣ

    ಹೈದರಾಬಾದ್: ಮರಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ವರ ಸೇರಿ ಐವರು ಮೃತಪಟ್ಟಿರುವ ಘಟನೆ ಆಂಧ್ರ ಪ್ರದೇಶದ ಖಮ್ಮಂ ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ಪಲ್ಲಿಪಾಡು ಬಳಿ ಇಂದು ಬೆಳಗ್ಗೆ ಈ ಘಟನೆ ನಡೆದಿದ್ದು, ಅಪಘಾತದಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ವರನ ಕುಟುಂಬುದವರು ವರಾಂಗಲ್ ಜಿಲ್ಲೆಯ ತಮ್ಮ ಮನೆಯಿಂದ ಆಂಧ್ರ ಪ್ರದೇಶದ ತಡೆಪಲ್ಲಿಗುಡೆಮ್ ನ ವಧುವಿನ ನಿವಾಸಕ್ಕೆ ಕಾರಿನಲ್ಲಿ ಹೋಗುತ್ತಿದ್ದರು. ಕಾರು ಪಲ್ಲಿಪಾಡುಗೆ ತಲುಪಿದೆ. ಈ ಸಂದರ್ಭದಲ್ಲಿ ಚಾಲಕನಿಗೆ ಕಾರಿನ ಸ್ಟೇರಿಂಗ್ ಮೇಲೆ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದ್ದಾನೆ.

    ಮರಕ್ಕೆ ಹೊಡೆದ ರಭಸಕ್ಕೆ ವರ ಸೇರಿ ಐವರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.