Tag: grenade

  • ರೈಲ್ವೆ ಸ್ಟೇಷನ್‍ನಲ್ಲಿ ಸಿಕ್ಕ ಗ್ರನೇಡ್‍ಗೆ ಬಿಗ್ ಟ್ವಿಸ್ಟ್

    ರೈಲ್ವೆ ಸ್ಟೇಷನ್‍ನಲ್ಲಿ ಸಿಕ್ಕ ಗ್ರನೇಡ್‍ಗೆ ಬಿಗ್ ಟ್ವಿಸ್ಟ್

    ಬೆಂಗಳೂರು: ಮೆಜೆಸ್ಟಿಕ್ ರೈಲ್ವೆ ಪ್ಲಾಟ್ ಫಾರ್ಮ್‌ನಲ್ಲಿ ಸಿಕ್ಕ ಅನುಮಾನಾಸ್ಪದ ವಸ್ತು ಪ್ರಕರಣಕ್ಕೆ ಸ್ಫೋಟಕ ತಿರುವ ಸಿಕ್ಕಿದೆ. ಒಬ್ಬ ಮಹಿಳಾ ಅಧಿಕಾರಿಯನ್ನ ಕಟ್ಟಿ ಹಾಕಲು ನಡೆದಿರುವ ಸಂಚು ಎಂದು ಹೇಳಲಾಗುತ್ತಿದೆ.

    ರೈಲ್ವೆ ಇಲಾಖೆಯ ಬೆಂಗಳೂರು ಡಿವಿಷನ್‍ಗೆ ಇತ್ತೀಚಿಗಷ್ಟೇ ಬಂದಿರುವ ಮಹಿಳಾ ಅಧಿಕಾರಿಯನ್ನ ಕಟ್ಟಿ ಹಾಕಲು ಅಲ್ಲಿಯ ಸಿಬ್ಬಂದಿಯೇ ಮಸಲತ್ತು ಮಾಡಿದ್ದಾರೆ ಅನ್ನೋ ಮಾತುಗಳು ರೈಲ್ವೆ ಇಲಾಖೆಯಲ್ಲಿ ಹರಿದಾಡುತ್ತಿದೆ.

    ಆರ್‌ಪಿಎಫ್ ಗೆ ಡಿವಿಷನ್ ಸೆಕ್ಯೂರಿಟಿ ಕಮಿಷನರ್ ಆಗಿ ಕಳೆದ ಮೂರು ತಿಂಗಳ ಹಿಂದೆ ದೇವಾ ಸ್ಮಿತಾ ಚಟೋಪಾದ್ಯಾಯ ಅಧಿಕಾರ ವಹಿಸಿಕೊಂಡಿದ್ದಾರೆ. ಉತ್ತರ ಭಾರತದ ಕಡೆ ಕೆಲಸ ಮಾಡಿ ಬೆಂಗಳೂರಿಗೆ ಬಂದಿರುವ ದೇವಾ ಸ್ಮಿತಾ ಆರ್‌ಪಿಎಫ್ ಸಿಬ್ಬಂದಿಗಳಿಗೆ ಫುಲ್ ಆಕ್ಟಿವ್ ಮಾಡಿದ್ದಾರೆ. ಜಡ್ಡು ಹಿಡಿದಿದ್ದ ಆರ್‌ಪಿಎಫ್ ಸಿಬ್ಬಂದಿಗಳಿಗೆ ಆರ್‌ಪಿಎಫ್ ಗೆ ಡಿವಿಷನ್ ಸೆಕ್ಯೂರಿಟಿ ಕಮಿಷನರ್ ದೇವಾ ಸ್ಮಿತಾ ಚಟೋಪಾದ್ಯಾಯ ಬಿಸಿಮುಟ್ಟಿಸಿದ್ದಾರೆ.

    ದೇವಾ ಸ್ಮಿತಾ ಚಟೋಪಾದ್ಯಾಯ ಆರ್‌ಪಿಎಫ್ ಸಿಬ್ಬಂದಿಗಳಿಗೆ ಹಿಡಿತದಲ್ಲಿ ಇಟ್ಟುಕೊಳ್ಳಲು ಪ್ರಯತ್ನಿಸಿದ್ದೆ ಈ ಘಟನೆಗೆ ಕಾರಣವಾಯ್ತಾ ಅನ್ನೋ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಡಿವಿಷನ್ ಸೆಕ್ಯೂರಿಟಿ ಕಮಿಷನರ್ ದೇವಾ ಸ್ಮಿತಾ ಖಡಕ್ ನಿರ್ಧಾರದಿಂದ ಕಂಗೆಟ್ಟಿದ್ದ ಆರ್‌ಪಿಎಫ್ ಸಿಬ್ಬಂದಿಗಳೇ ದೇವಾ ಸ್ಮಿತಾರಿಗೆ ಕಪ್ಪು ಚುಕ್ಕೆ ತರಲು ಪ್ಲಾಟ್‍ ಫಾರ್ಮ್‌ನಲ್ಲಿ ಡಮ್ಮಿ ಗ್ರಾನೈಡ್ ತಂದಿಟ್ಟು ಪ್ಯಾನಿಕ್ ಮಾಡಿದ್ದಾರೆಂದು ಹೇಳಲಾಗುತ್ತಿದೆ.

    ಇನ್ನು ಇಷ್ಟೆಲ್ಲಾ ಪ್ಲಾನ್ ಮಾಡಿದವರು ಉದ್ದೇಶ ಪೂರಕವಾಗಿಯೇ ಸಿಸಿಟಿವಿ ಆಫ್ ಮಾಡಿದ್ರಾ? ಅಥವಾ ಅದೊಂದು ಕಾಕತಾಳಿಯ ಘಟನೆಯಾ ಅನ್ನೋ ಅನುಮಾಗಳು ಕೇಳಿ ಬರುತ್ತಿವೆ. ವಿಧಿ ವಿಜ್ಞಾನ ಪ್ರಯೋಗಾಲಯ ಪ್ಲಾಟ್ ಫಾರ್ಮ್‌ನಲ್ಲಿ ಸಿಕ್ಕಿರುವ ಗ್ರಾನೈಟ್ ಸಂಪೂರ್ಣ ಡಮ್ಮಿ ಎಂದು ವರದಿ ಕೊಟ್ಟಿದೆ. ಇತ್ತ ಆರ್‌ಪಿಎಫ್ ನ ಡಿವಿಷನ್ ಸೆಕ್ಯೂರಿಟಿ ಕಮಿಷನರ್ ದೇವಾ ಸ್ಮಿತಾಗೆ ಕಟ್ಟಿ ಹಾಕಲು ಡಮ್ಮಿ ಗ್ರನೇಡ್ ರೂಪದ ವಸ್ತು ಇಟ್ಟಿದ್ದಾರೆ ಎಂದು ಕೇಳಿ ಬರುತ್ತಿರುವ ಮಾತಿಗೆ ಹೊಂದಾಣಿಕೆ ಆಗುತ್ತಿರುವುದಕ್ಕೆ ಮತ್ತಷ್ಟು ಅನುಮಾನಗಳಿಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

    ಉದ್ದೇಶ ಪೂರಕವಾಗಿಯೇ ಈ ಘಟನೆ ಮಾಡಿದರೆ ಡಮ್ಮಿ ಗ್ರನೇಡ್ ಸಿಕ್ಕಿದ್ದಾದರೂ ಎಲ್ಲಿ? ಇಟ್ಟವರು ಯಾರು? ಅನ್ನೋ ಪ್ರಶ್ನೆಗಳಿಗೆ ಪೊಲೀಸರೇ ಉತ್ತರ ನೀಡಬೇಕಾಗುತ್ತದೆ.

  • ಮೆಜೆಸ್ಟಿಕ್‍ನಲ್ಲಿ ಪತ್ತೆಯಾಗಿದ್ದು ಕೊಲ್ಕತ್ತಾದಲ್ಲಿ ತಯಾರಾದ ಗ್ರೆನೇಡ್

    ಮೆಜೆಸ್ಟಿಕ್‍ನಲ್ಲಿ ಪತ್ತೆಯಾಗಿದ್ದು ಕೊಲ್ಕತ್ತಾದಲ್ಲಿ ತಯಾರಾದ ಗ್ರೆನೇಡ್

    ಬೆಂಗಳೂರು: ಮೆಜೆಸ್ಟಿಕ್‍ ರೈಲ್ವೇ ನಿಲ್ದಾಣದಲ್ಲಿ ಪತ್ತೆಯಾದ ಗ್ರೆನೇಡ್ ಕೋಲ್ಕತ್ತಾದಲ್ಲಿ ತಯಾರಾಗಿದ್ದು, ಗ್ರೆನೇಡ್‍ನ ಮೇಲೆ ಯಾವುದೇ ಮಾರ್ಕ್ ಇಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

    ಪಶ್ಚಿಮ ಬಂಗಾಳದ ಸ್ಥಳೀಯ ಫ್ಯಾಕ್ಟರಿಯಲ್ಲಿ ಈ ಗ್ರೆನೇಡ್ ತಯಾರು ಮಾಡಲಾಗಿದೆ ಎನ್ನುವ ನಿರ್ಧಾರಕ್ಕೆ ಪೊಲೀಸರು ಬಂದಿದ್ದು, ದೂರದ ಪಶ್ಚಿಮ ಬಂಗಾಳದಲ್ಲಿ ತಯಾರಾದ ಗ್ರೆನೇಡ್ ಅನ್ನು ಬೆಂಗಳೂರಿಗೆ ತಂದವರು ಯಾರು? ಮೆಜೆಸ್ಟಿಕ್ ರೈಲ್ವೇ ನಿಲ್ದಾಣದಲ್ಲಿ ಇಟ್ಟವರು ಯಾರು? ಎಂಬ ಬಗ್ಗೆ ಸ್ಥಳದ ಸುತ್ತಮುತ್ತಲಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಇದನ್ನೂ ಓದಿ:ಮೆಜೆಸ್ಟಿಕ್ ರೈಲ್ವೇ ನಿಲ್ದಾಣದಲ್ಲಿ ಅನುಮಾನಾಸ್ಪದ ವಸ್ತು ಪತ್ತೆ!

    ಗ್ರೆನೇಡ್‍ ಪತ್ತೆಯಾದ ಸ್ಥಳದಲ್ಲಿ ಯಾವುದೇ ಸಿಸಿಟಿವಿ ಇಲ್ಲ ಎನ್ನುವ ವಿಚಾರ ತಿಳಿದು ಬಂದಿದೆ. ಬೆದರಿಕೆ ಕರೆ ಹಾಗೂ ಗ್ರೆನೇಡ್ ಪತ್ತೆಯಾದ ಬಳಿಕ ಮೆಜೆಸ್ಟಿಕ್ ಸುತ್ತಮುತ್ತ ರೈಲ್ವೇ ಅಧಿಕಾರಿಗಳು ಭದ್ರತೆಯನ್ನು ಹೆಚ್ಚಿಸಿದ್ದಾರೆ. ರೈಲ್ವೇ ಎಸ್‍ಪಿ ಗುಳೇದ್ ನೇತೃತ್ವದಲ್ಲಿ ರೈಲ್ವೇ ನಿಲ್ದಾಣಕ್ಕೆ ಭದ್ರತೆ ಒದಗಿಸಲಾಗುತ್ತಿದೆ. ಹಾಗೆಯೇ ಮೆಜೆಸ್ಟಿಕ್‍ನಲ್ಲಿರುವ ಹತ್ತು ಪ್ಲಾಟ್ ಫಾರ್ಮ್‍ಗಳನ್ನು ಕೂಡ ಪರಿಶೀಲನೆ ಮಾಡಲಾಗುತ್ತಿದೆ. ಜೊತೆಗೆ ಮೆಜೆಸ್ಟಿಕ್‍ನಿಂದ ಹೊರಡುವ ಎಲ್ಲಾ ರೈಲುಗಳನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ನಿಲ್ದಾಣದಲ್ಲಿ ಗ್ರೆನೇಡ್ ಪತ್ತೆಯಾಗುತ್ತಿದಂತೆ ಸಮೀಪದಲ್ಲಿದ್ದ ಕೆಲವು ಸ್ಟಾಲ್‍ಗಳನ್ನು ಮುಚ್ಚಿಸಿದ್ದಾರೆ.

    ಪುಲ್ವಾಮ ದಾಳಿ ನಂತರ ಇಡೀ ರೈಲ್ವೇ ನಿಲ್ದಾಣ ತಪಾಸಣೆ ಮಾಡಲಾಗಿತ್ತು. ಈ ವೇಳೆ ನಿಲ್ದಾಣದ ಸಾಕಷ್ಟು ಕಡೆಗಳಲ್ಲಿ ಸಿಸಿಟಿವಿ ಕೆಲಸ ಮಾಡದಿರುವುದು ಪತ್ತೆಯಾಗಿತ್ತು. ಆಗ ಎಲ್ಲಾ ಕಡೆಯಲ್ಲಿ ಸಿಸಿಟಿವಿ ಅಳವಡಿಸುವಂತೆ ರೈಲ್ವೇ ಪೊಲೀಸರಿಗೆ ಸೂಚನೆ ನೀಡಲಾಗಿತ್ತು. ಈಗ ಗ್ರೆನೇಡ್ ಸಿಕ್ಕಿರುವ ಜಾಗಕ್ಕೆ ಐದಾರು ಕಡೆಗಳಿಂದ ಒಳಬರಲು ದಾರಿ ಇದೆ. ಹೀಗಾಗಿಯೂ ಈ ಬಗ್ಗೆ ರೈಲ್ವೇ ಪೋಲೀಸರು ಯಾವುದೇ ಮುಂಜಾಗ್ರತೆ ಕ್ರಮ ವಹಿಸಿಲ್ಲ ಎನ್ನಲಾಗಿದೆ.

    ಈ ಬಗ್ಗೆ ಗೃಹ ಸಚಿವ ಎಂ.ಬಿ ಪಾಟೀಲ್ ಮಾಧ್ಯಮಗಳ ಜೊತೆ ಮಾತನಾಡಿ, ಪ್ರಾಥಮಿಕ ವರದಿ ಪ್ರಕಾರ ಅದು ಡಮ್ಮಿ ವಸ್ತು. ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ನಿಲ್ದಾಣದಲ್ಲಿ ಹಿರಿಯ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿಯನ್ನು ನಾವು ಅಧಿಕಾರಿಗಳಿಂದ ಪಡೆಯುತ್ತೇವೆ. ಅದು ಯಾವ ವಸ್ತು, ಎಲ್ಲಿಂದ ಬಂತು ಅನ್ನೊ ಸಂಪೂರ್ಣ ಮಾಹಿತಿ ಪಡೆದು ಪ್ರತಿಕ್ರಿಯೆ ನೀಡುತ್ತೇನೆ ಎಂದರು.

  • ಕೆರೆಯಲ್ಲಿ ಮೀನು ಹಿಡಿಯಲು ಸೇನೆಯ ಗ್ರೆನೇಡ್!- ಸೈನಿಕ ಅರೆಸ್ಟ್

    ಕೆರೆಯಲ್ಲಿ ಮೀನು ಹಿಡಿಯಲು ಸೇನೆಯ ಗ್ರೆನೇಡ್!- ಸೈನಿಕ ಅರೆಸ್ಟ್

    ಶ್ರೀನಗರ: ಬ್ಯಾಗ್‍ ನಲ್ಲಿ 2 ಗ್ರೆನೇಡ್ ಪತ್ತೆಯಾದ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ಶ್ರೀನಗರ ವಿಮಾನ ನಿಲ್ದಾಣದಲ್ಲಿ ಯೋಧರೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

    17 ಜಮ್ಮು ಕಾಶ್ಮೀರ ರೈಫಲ್ಸ್ ನ ಗೋಪಾಲ್ ಮುಖಿಯಾ ಬಂಧಿತ ಯೋಧ. ಇವರು ಜಮ್ಮು ಕಶ್ಮೀರದ ಗಡಿ ನಿಯಂತ್ರಣಾ ರೇಖೆ ಬಳಿ ಉರಿ ಸೆಕ್ಟರ್‍ನಲ್ಲಿ ಕಾರ್ಯ ನಿರ್ವಸುತ್ತಿದ್ದಾರೆಂದು ತಿಳಿದುಬಂದಿದೆ. ಗೋಪಾಲ್ ಇಂದು ಬೆಳಿಗ್ಗೆ ದೆಹಲಿಗೆ ಹೊರಟಿದ್ದರು. ಈ ವೇಳೆ ವಿಮಾನ ನಿಲ್ದಾಣದಲ್ಲಿ ಅವರ ಲಗೇಜ್ ತಪಾಸಣೆ ಮಾಡಿದಾಗ ಗ್ರೆನೇಡ್ ಇರುವುದು ಪತ್ತೆಯಾಗಿದೆ.

    ಯೋಧ ಗೋಪಾಲ್ ದೆಹಲಿಗೆ ಹೋಗಬೇಕಿತ್ತು. ಅವರನ್ನು ವಶಕ್ಕೆ ಪಡೆದು ವಿಚಾರಣೆಗೆಂದು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಇರಿಸಲಾಗಿದೆ ಎಂದು ಪೊಲೀಸರೊಬ್ಬರು ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.

    ಯೋಧ ಡಾರ್ಜಿಲಿಂಗ್ ಮೂಲದವರಾಗಿದ್ದು, ಗ್ರೆನೇಡ್ ತಗೆದುಕೊಂಡು ಹೋರಟಿದ್ದ ವಿಚಾರವನ್ನು ಒಪ್ಪಿಕೊಂಡಿದ್ದಾರೆ. ಕೆರೆಯಲ್ಲಿ ಸ್ಫೋಟಿಸಿ ಮೀನು ಹಿಡಿಯುವ ಸಲುವಾಗಿ ಗ್ರೆನೇಡ್ ತೆಗೆದುಕೊಂಡು ಹೋಗುತ್ತಿದ್ದುದಾಗಿ ಯೋಧ ಹೇಳಿದ್ದಾರೆಂದು ಸೇನಾ ಮೂಲಗಳಿಂದ ತಿಳಿದುಬಂದಿರುವುದಾಗಿ ಸುದ್ದಿ ಸಂಸ್ಥೆ ವರದಿ ಮಾಡಿದೆ.