Tag: graveyard

  • Mandya | 60 ವರ್ಷದ ಹಿಂದೂ ಸ್ಮಶಾನ ಈಗ ಮುಸ್ಲಿಂ ಮಕಾನ್

    Mandya | 60 ವರ್ಷದ ಹಿಂದೂ ಸ್ಮಶಾನ ಈಗ ಮುಸ್ಲಿಂ ಮಕಾನ್

    – ಗ್ರಾಮಸ್ಥರಿಂದ ಪ್ರತಿಭಟನೆ

    ಮಂಡ್ಯ: 60 ವರ್ಷಗಳಿಂದ ಸರ್ಕಾರಿ ಸ್ಮಶಾನವಾಗಿದ್ದ (Graveyard) ಜಾಗವನ್ನು ಮುಸ್ಲಿಂ ಮಕಾನ್ ಮಾಡಿದ ಹಿನ್ನೆಲೆ ಗ್ರಾಮಸ್ಥರು ಬೀದಿಗಿಳಿದು ಪ್ರತಿಭಟನೆ ನಡೆಸಿರುವ ಘಟನೆ ಮಂಡ್ಯದ (Mandya) ಹೊಸಬೂದನೂರು (Hosabudanur) ಗ್ರಾಮದಲ್ಲಿ ನಡೆದಿದೆ.

    ಮಂಡ್ಯದ ಹೊಸಬೂದನೂರು ಗ್ರಾಮದಲ್ಲಿ ಕಳೆದ 1963ರಿಂದ 2017ರವರೆಗೆ ಸರ್ವೇ ನಂಬರ್ 313ರಲ್ಲಿ 1 ಎಕರೆ 13 ಗುಂಟೆ ಜಾಗದಲ್ಲಿ ಹಿಂದೂಗಳಿಗಾಗಿ ಸ್ಮಶಾನ ಇತ್ತು. ಆದರೆ 2017ರ ಬಳಿಕ ವಕ್ಫ್ ಬೋರ್ಡ್ ಆಸ್ತಿ ಇದಾಗಿದ್ದು, ಈ ಜಾಗ ಇದೀಗ ಮುಸ್ಲಿಂ ಸಮುದಾಯದ ಮಕಾನ್ (ಸ್ಮಶಾನ) ಆಗಿದೆ. ಇದನ್ನೂ ಓದಿ: ಕೊಪ್ಪಳ | KPCC ಕಾರ್ಮಿಕ ವಿಭಾಗದ ಕಾರ್ಯದರ್ಶಿ ಮೇಲೆ ಹಲ್ಲೆ – ಪಿಎಸ್‌ಐ ಸಸ್ಪೆಂಡ್

    ವಿಶೇಷ ಅಂದ್ರೆ ಈ ಊರಿನಲ್ಲಿ ಒಂದೇ ಒಂದು ಮುಸ್ಲಿಂ ಸಮುದಾಯದವರ ಮನೆ ಇಲ್ಲ. ಹೀಗಿರುವಾಗ ಮುಸ್ಲಿಂ ಸಮುದಾಯಕ್ಕೆ ಹಿಂದೂ ಸ್ಮಶಾನವನ್ನು ಬಿಟ್ಟುಕೊಡಲಾಗಿದೆ. ಇದೀಗ ಈ ಊರಿನಲ್ಲಿ ಹಿಂದೂಗಳು ಸಾವನ್ನಪ್ಪಿದರೆ ಹೂಳಲು ಸ್ಮಶಾನ ಇಲ್ಲದಂತೆ ಆಗಿದೆ. ಈ ಬಗ್ಗೆ ಸಚಿವರಿಗೆ, ಜಿಲ್ಲಾಡಳಿತಕ್ಕೆ, ಶಾಸಕರಿಗೆ ಹೇಳಿದ ವೇಳೆ ಇರುವ ಜಾಗದಲ್ಲಿ 24 ಗುಂಟೆ ಜಾಗವನ್ನು ಹಿಂದೂಗಳ ಸ್ಮಶಾನಕ್ಕಾಗಿ ಬಿಟ್ಟುಕೊಡಲಾಗಿತ್ತು. ಇದನ್ನೂ ಓದಿ: ಅಮೆರಿಕದ ರಹಸ್ಯ ದಾಖಲೆಗಳ ಸಂಗ್ರಹ ಆರೋಪ – ಭಾರತ ಮೂಲದ ವಿದೇಶಾಂಗ ನೀತಿ ತಜ್ಞ ಆಶ್ಲೇ ಟೆಲ್ಲಿಸ್ ಅರೆಸ್ಟ್‌

    ಇದೀಗ ಮತ್ತೆ ಆ ಜಾಗದಲ್ಲಿ ಅಂತ್ಯ ಸಂಸ್ಕಾರಕ್ಕೆ ತಡೆ ಹಿಡಿಯಲಾಗಿದೆ. ಜೊತೆಗೆ ಗ್ರಾಮ ಪಂಚಾಯ್ತಿಯಿಂದ ಸ್ಮಶಾನ ಅಭಿವೃದ್ಧಿಗೆ ತಹಶೀಲ್ದಾರ್ ತಡೆ ನೀಡಿದ್ದಾರೆ. ಹೀಗಾಗಿ ಇದೀಗ ಹೊಸಬೂದನೂರು ಗ್ರಾಮಸ್ಥರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಈಗ ಮುಸ್ಲಿಂ ಮಕಾನ್ ಮಾಡಿರುವ ಹಿಂದೂ ಸ್ಮಶಾನವನ್ನು ವಾಪಸ್ ಹಿಂದೂಗಳಿಗೆ ನೀಡಬೇಕೆಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಚಿತ್ರದುರ್ಗ ಡಿಡಿಪಿಐ ಕಚೇರಿಯಲ್ಲೇ ಸಿಬ್ಬಂದಿಯಿಂದ ಎಣ್ಣೆ ಪಾರ್ಟಿ – ವೀಡಿಯೋ ವೈರಲ್

  • ಸೌದೆ ತಗೊಂಡ್ರೇ ಮಾತ್ರ ಹೆಣ ಸುಡಲು ಸ್ಲಾಟ್ – ಬೆಂಗಳೂರಿನ ಸ್ಮಶಾನದಲ್ಲೂ ಬ್ರೋಕರ್‌ಗಳ ಹಾವಳಿ!

    ಸೌದೆ ತಗೊಂಡ್ರೇ ಮಾತ್ರ ಹೆಣ ಸುಡಲು ಸ್ಲಾಟ್ – ಬೆಂಗಳೂರಿನ ಸ್ಮಶಾನದಲ್ಲೂ ಬ್ರೋಕರ್‌ಗಳ ಹಾವಳಿ!

    – 100 ರೂ. ಜಾಗದಲ್ಲಿ 6 ಸಾವಿರ ಕೊಡಬೇಕು
    – ಸೌದೆ ಬೇಡ ಅಂದ್ರೆ ರೋಡಲ್ಲಿ ಸುಡಬೇಕು!

    ಬೆಂಗಳೂರು: ಸ್ಮಶಾನಗಳನ್ನು ಚಿರಶಾಂತಿ ಸ್ಥಳ ಎನ್ನುತ್ತಾರೆ. ಇಂತಹ ಜಾಗಗಳಲ್ಲೂ ಬ್ರೋಕರ್‌ಗಳ ಹಾವಳಿ ಹೆಚ್ಚಾಗಿದೆ. ಸ್ಮಶಾನದಲ್ಲಿ ಹೆಣ ಸುಡಬೇಕು ಅಂದರೆ ಸೌದೆಗೆ ಆರು ಸಾವಿರ ರೂ. ಕೊಡಬೇಕು.

    ಹೌದು. ನಗರದ ಚಾಮರಾಜಪೇಟೆಯ ಟಿ ಆರ್ ಮಿಲ್ ಚಿತಾಗಾರದಲ್ಲಿ ಈಗಲೂ ಸೌದೆ ಬಳಸಿ  ಹೆಣಗಳನ್ನು ಸುಡಲಾಗುತ್ತದೆ. ಈ ರುದ್ರಭೂಮಿಯಲ್ಲಿ ವಿದ್ಯುತ್ ಚಿತಾಗಾರ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸಲು ತಿರ್ಮಾನಿಸಲಾಗಿದೆ. ಸದ್ಯ ಸೌದೆಗಳ ಮೂಲಕವೇ ಹೆಣ ಸುಡಲಾಗುತ್ತಿದೆ. ಈ ಸ್ಮಶಾನದಲ್ಲಿ ಹೆಣ ಸುಡಬೇಕಾದರೆ ಸೌದೆಗಾಗಿ 6 ಸಾವಿರ ರೂ. ಕೊಡಬೇಕು.

    ಸೌದೆ ತೆಗೆದುಕೊಂಡರೆ ಮಾತ್ರ ಮೃತದೇಹ ಸುಡಲು ಸ್ಲಾಟ್ ಕೊಡುತ್ತಾರೆ. ಸೌದೆ ಬ್ರೋಕರ್‌ಗಳ ಕಾರುಬಾರು ವಿಪರೀತ ಹೆಚ್ಚಾಗಿದ್ದು ಇರುವ ಸ್ಲಾಟ್‌ಗಳನ್ನು ಮೂವರು ಸೌದೆ ಮಂಡಿಯವರು ಹಂಚಿಕೊಂಡಿದ್ದಾರೆ. ಇವರ ಬಳಿಸೌದೆ ಖರೀದಿಸಿದರೆ ಮಾತ್ರ ಜನರಿಗೆ ಸ್ಲಾಟ್ ಸಿಗುತ್ತದೆ. ಸೌದೆ ಬೇಡ ಅಂದರೆ ಇಲ್ಲಿ ಸುಡಲು ಅವಕಾಶವಿಲ್ಲ. ಬ್ರೋಕರ್‌ಗಳೇ ಈ ಶಾಕಿಂಗ್‌ ವಿಚಾರವನ್ನು ತಿಳಿಸಿದ್ದು, ಸೌದೆ ಬೇಡ ಅಂದರೆ ನೆಲದ ಮೇಲೆ ಸುಡಿ, ಇಲ್ಲದೇ ಇದ್ರೆ ರೋಡಲ್ಲಿ ಸುಡಿ ಎನ್ನುತ್ತಾರೆ. ಮಂಡಿಯವರ ಹಾವಳಿ ಪಬ್ಲಿಕ್‌ ಟಿವಿಯ ಕಾರ್ಯಾಚರಣೆಯಲ್ಲಿ ಬಯಲಾಗಿದೆ. ಇದನ್ನೂ ಓದಿ: ಡೀಸೆಲ್ ಬೆಲೆ ಏರಿಕೆ – ಖಾಸಗಿ ಬಸ್ ಪ್ರಯಾಣ ದರ ದುಬಾರಿ!

    ಪಬ್ಲಿಕ್‌ ಟಿವಿ ಪ್ರತಿನಿಧಿ ಮತ್ತು ಸೌದೆ ಮಂಡಿಯವರ ನಡುವಿನ ಸಂಭಾಷಣೆಯನ್ನು ಇಲ್ಲಿ ನೀಡಲಾಗಿದೆ.

    ಪ್ರತಿನಿಧಿ- ಟೆಂಡರ್ ತಗೊಂಡಿದ್ದೀರಾ?
    ಸೌದೆ ಮಂಡಿಯವರು- ಇಲ್ಲ..ನಾವು ಮೂರು ಮಂಡಿಯವರು ಕಟ್ಟಿಗೆ ಹಾಕ್ತೀವಿ.
    ಪ್ರತಿನಿಧಿ- ಎಷ್ಟಾಗುತ್ತೆ?
    ಸೌದೆ ಮಂಡಿಯವರು- 5,600+300 ಆಗುತ್ತೆ
    ಪ್ರತಿನಿಧಿ- ಸೌದೆ ಬಿಟ್ಟು ಬಾಕ್ಸ್ ಬುಕ್ ಮಾಡೋಕ್ ಆಗಲ್ವಾ?
    ಸೌದೆ ಮಂಡಿಯವರು- ಸೌದೆ ನೀವು ತರೋಹಂಗಿಲ್ಲ?
    ಪ್ರತಿನಿಧಿ- ಬಿಬಿಎಂಪಿ ಚಾರ್ಜ್ ಇರುತ್ತಾ?
    ಸೌದೆ ಮಂಡಿಯವರು- 300 ಬರೆದು ಕೋಡೋಕೆ.
    ಪ್ರತಿನಿಧಿ- 6 ಸಾವಿರ ಜಾಸ್ತಿ ಅಲ್ವಾ.
    ಸೌದೆ ಮಂಡಿಯವರು- ಹಾಗಾದ್ರೇ ಅಲ್ಲೆ ಎಲ್ಲಾದ್ರೂ ಊರು ಕಡೆ ಮಾಡ್ಕೊಳ್ರಿ.
    ಪ್ರತಿನಿಧಿ- ಊರಿಂದ ಜನ ಸೌದೆ ತರ್ತಾರೆ.
    ಸೌದೆ ಮಂಡಿಯವರು- ಸೌದೆ ತಂದ್ರೇ ರೋಡಲ್ಲಿ ಇಟ್ಕೊಂಡ್ ಮಾಡಿ.
    ಪ್ರತಿನಿಧಿ- ಬಿಬಿಎಂಪಿದಲ್ವಾ ಒಂದೆರಡು ಸಾವಿರದಲ್ಲಿ ಆಗಲ್ವಾ?
    ಸೌದೆ ಮಂಡಿಯವರು- ಸೌದೆ ತರ್ತೀವಿ ಜಾಗ ಕೊಡಿ ಅಂದ್ರೇ ಯಾವೋನ್ ಕೊಡ್ತಾನೆ. ಇದನ್ನೂ ಓದಿ: Exclusive | ಕ್ಯಾಬಿನೆಟ್ ಕ್ಲೈಮ್ಯಾಕ್ಸ್, ಜಾತಿ ಗಣತಿ ಮಂಡನೆಗೆ ಪ್ಲ್ಯಾನ್‌ – ಮಾಸ್ಟರ್‌ಸ್ಟ್ರೋಕ್‌ ಕೊಡ್ತಾರಾ ಸಿಎಂ?

    ಪ್ರತಿನಿಧಿ- ಸೌದೆ ಇಲ್ಲದೆ ಬುಕ್ ಮಾಡ್ಕೊಳ್ಳಲ್ವಾ?
    ಸೌದೆ ಮಂಡಿಯವರು- ಊರಿಂದ ಸೌದೆ ತಂದ್ರೇ ಬಾಕ್ಸ್ ಕೊಡಲ್ಲ. ನೆಲದಲ್ಲೇ ಮಾಡ್ಕೋಬೇಕು.
    ಸೌದೆ ಮಂಡಿಯವರು- ಸಾವಿನ ಮನೆಯವರು ದುಡ್ಡಿನ ಬಗ್ಗೆ ಇಷ್ಟೋಂದು ಯೋಚನೆ ಮಾಡಲ್ಲ.
    ಪ್ರತಿನಿಧಿ- ಟೆಂಡರ್ ಹಾ ಇದು. ಬಿಬಿಎಂಪಿ ದಾ ಇದು.
    ಸೌದೆ ಮಂಡಿಯವರು- ಸ್ಲಾಟ್ ಬುಕ್ಕಿಂಗ್ ಬಿಬಿಎಂಪಿಯದ್ದು. ಸೌದೆ ಮಂಡಿಯವರದ್ದು.
    ಪ್ರತಿನಿಧಿ- ಬಿಬಿಸಂಪಿಯಿಂದ ದುಡ್ಡಿರಲ್ಲ ಹಾಗಿದ್ರೆ.
    ಸೌದೆ ಮಂಡಿಯವರು- ಬಿಬಿಎಂಪಿಯಿಂದ ಒಂದು ರೂಪಾಯಿ ಸಹ ಇರಲ್ಲ.
    ಸೌದೆ ಮಂಡಿಯವರು- ಬುಕ್ಕಿಂಗ್ ಮಾಡಿದ್ರಷ್ಟೇ ಸ್ಲಾಟ್ ಸಿಗೋದು.
    ಪ್ರತಿನಿಧಿ- ಡಿಪೋದವರು ಕಡಿಮೆಗೆ ಹೇಳಿದ್ರು.
    ಸೌದೆ ಮಂಡಿಯವರು- ಹಾಗಾದ್ರೇ ಅಲ್ಲೆ ಮಾಡ್ಕೊಳ್ಳಿ.

    ಬಿಬಿಎಂಪಿ ಶುಲ್ಕ 100- 300 ರೂ. ಇದ್ದರೆ ಸೌದೆ ಅಂತ ಇವರು 6 ಸಾವಿರ ರೂ. ಪಡೆಯುತ್ತಾರೆ. ಈಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ ಬಡ ಜನರ ಮೇಲೆ ಹೊರೆಯಾಗದಂತೆ ನೋಡಿಕೊಳ್ಳಬೇಕಿದೆ.

  • ಮಂಡ್ಯದಲ್ಲಿ ಹಿಂದೂಗಳ ಸ್ಮಶಾನ ಈಗ ವಕ್ಫ್ ಆಸ್ತಿ

    ಮಂಡ್ಯದಲ್ಲಿ ಹಿಂದೂಗಳ ಸ್ಮಶಾನ ಈಗ ವಕ್ಫ್ ಆಸ್ತಿ

    ಮಂಡ್ಯ: ಸಕ್ಕರೆ ನಾಡು ಮಂಡ್ಯ (Mandya) ಜಿಲ್ಲೆಯಲ್ಲಿ ದೇವಸ್ಥಾನ, ಸರ್ಕಾರಿ ಶಾಲೆ ಬಳಿಕ ಇದೀಗ ಹಿಂದೂಗಳಿಗೆ ಸೇರಿದ ಸ್ಮಶಾನವನ್ಮು ವಕ್ಫ್ (Waqf) ಆಸ್ತಿ ಎಂದು ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.

    ಮಂಡ್ಯ ಜಿಲ್ಲೆಯ ಮದ್ದೂರು (Maddur) ತಾಲೂಕಿನ ಕೊಪ್ಪ ಗ್ರಾಮದ ಸರ್ವೆ ನಂಬರ್ 438ರಲ್ಲಿ ಇರುವ 1.37 ಗುಂಟೆ ಸ್ಮಶಾನ ಜಮೀನನ್ನು ವಕ್ಫ್ ಆಸ್ತಿ ಮಾಡಿಕೊಳ್ಳಲಾಗಿದೆ. 2019ರ ವರೆಗೆ ಈ 1.37 ಗುಂಟೆ ಜಮೀನು ಸರ್ಕಾರಿ ಸ್ಮಶಾನ ಎಂದು ಆರ್‌ಟಿಸಿಯಲ್ಲಿ ಉಲ್ಲೇಖವಾಗುತ್ತಿತ್ತು. ಆದರೆ 2019ರ ನಂತರ ಆರ್‌ಟಿಸಿಯಲ್ಲಿ ವಕ್ಫ್ ಆಸ್ತಿ ಎಂದು ಉಲ್ಲೇಖವಾಗಿದೆ. ಇದನ್ನೂ ಓದಿ: ಕೇಂದ್ರ ಸಚಿವ ಹೆಚ್‌ಡಿಕೆ, ಪುತ್ರ ನಿಖಿಲ್‌ ವಿರುದ್ಧ ಎಫ್‌ಐಆರ್‌ ದಾಖಲು

    ರಾಜ್ಯದಲ್ಲಿ ವಕ್ಫ್ ವಿವಾದ ಹೆಚ್ಚಾದ ಹಿನ್ನೆಲೆ ಕೊಪ್ಪ ಗ್ರಾಮಸ್ಥರು ಪರಿಶೀಲನೆ ಮಾಡಿದ ವೇಳೆ ವಿಚಾರ ಬೆಳಕಿಗೆ ಬಂದಿದೆ. ಕೂಡಲೇ ಆಗಿರುವ ತಪ್ಪನ್ನು ಸರಿಪಡಿಸಬೇಕು ಹಾಗೂ ಈ ಲೋಪ ಮಾಡಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ. ಇದನ್ನೂ ಓದಿ: ಇನ್ಮುಂದೆ ಮಕ್ಕಳನ್ನು ಬೈಕ್‌ಗಳಲ್ಲಿ ಕರೆದೊಯ್ಯುವಾಗ ಸೇಫ್ಟಿ ಬೆಲ್ಟ್ ಕಡ್ಡಾಯ

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್; ಸ್ಮಶಾನದಲ್ಲಿ ನಿರ್ಮಾಣವಾಗುತ್ತಿದ್ದ ಇಂದಿರಾ ಕ್ಯಾಂಟೀನ್ ಸ್ಥಳಾಂತರ

    ಪಬ್ಲಿಕ್ ಟಿವಿ ಇಂಪ್ಯಾಕ್ಟ್; ಸ್ಮಶಾನದಲ್ಲಿ ನಿರ್ಮಾಣವಾಗುತ್ತಿದ್ದ ಇಂದಿರಾ ಕ್ಯಾಂಟೀನ್ ಸ್ಥಳಾಂತರ

    ಹುಬ್ಬಳ್ಳಿ: ‘ಪಬ್ಲಿಕ್ ಟಿವಿ’ ಸತತ ವರದಿಗೆ ಹುಬ್ಬಳ್ಳಿ ಧಾರವಾಡ (Dharwad) ಮಹಾನಗರ ಪಾಲಿಕೆ ಕೊನೆಗೂ ಎಚ್ಚೆತ್ತುಕೊಂಡಿದೆ. ಸ್ಮಶಾನದಲ್ಲಿ ನಿರ್ಮಾಣವಾಗುತ್ತಿದ್ದ ಇಂದಿರಾ ಕ್ಯಾಂಟೀನ್‌ಗೆ (Indira Canteen) ಬ್ರೇಕ್ ಬಿದ್ದಿದು, ಹುಬ್ಬಳ್ಳಿ (Hubballi) ಮಂಟೂರು ರಸ್ತೆಯಲ್ಲಿನ ಸ್ಮಶಾನದಿಂದ ಮತ್ತೊಂದು ಸ್ಥಳಕ್ಕೆ ಇಂದಿರಾ ಕ್ಯಾಂಟೀನ್ ಸ್ಥಳಾಂತರಗೊಂಡಿದೆ.

    ಸ್ಮಶಾನದಲ್ಲಿ ಸಾರ್ವಜನಿಕರ ವಿರೋಧದ ನಡುವೆಯೂ ರಾತ್ರೋರಾತ್ರಿ ಕಾಂಪೌಂಡ್ ಹೊಡೆದು ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡಲಾಗುತ್ತಿತ್ತು. ಈ ಕುರಿತು ಸೆ.17 ರಂದು ‘ಪಬ್ಲಿಕ್ ಟಿವಿ’ ವರದಿ ಪ್ರಸಾರ ಮಾಡಿತ್ತು. ಅಲ್ಲದೆ ಹಿಂದೂಪರ ಸಂಘಟನೆಗಳ ಆಕ್ರೋಶಕ್ಕೂ ಇಂದಿರಾ ಕ್ಯಾಂಟೀನ್ ಕಾರಣವಾಗಿತ್ತು. ಹೀಗಾಗಿ ಇದೇ ತಿಂಗಳ 26ರಂದು ಶ್ರೀರಾಮಸೇನೆ ಮತ್ತು ಸತ್ಯಹರಿಶ್ಚಂದ್ರ ರುದ್ರಭೂಮಿ ಅಭಿವೃದ್ಧಿ ಮತ್ತು ಹೋರಾಟ ಸಮಿತಿಯಿಂದ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗಿತ್ತು. ಇದನ್ನೂ ಓದಿ: ಭೂಮಿಯನ್ನು 2 ತಿಂಗಳ ಕಾಲ ಸುತ್ತಲಿರುವ ಮಿನಿ ಮೂನ್‌! – ಏನಿದರ ವಿಶೇಷ? 

    ಸಾರ್ವಜನಿಕರ ಸತತ ವಿರೋಧ ಹಿನ್ನೆಲೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಸೂಚನೆ ಮೇರೆಗೆ, ಇಂದಿರಾ ಕ್ಯಾಂಟೀನ್ ಸ್ಥಳಾಂತರಕ್ಕೆ ಪಾಲಿಕೆ ಮುಂದಾಗಿದೆ. ಈ ಕುರಿತು ಪಾಲಿಕೆ ಆಯುಕ್ತ ಈಶ್ವರ್ ಉಳ್ಳಾಗಡ್ಡಿ ಅಧಿಕೃತ ಪ್ರಕಟಣೆ ಹೊರಡಿಸಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿ ಆಸ್ಪತ್ರೆಯಲ್ಲಿ ಗಣೇಶ ಪ್ರತಿಷ್ಠಾಪಿಸಿದ ಸಿಬ್ಬಂದಿಗೆ ನೋಟಿಸ್ – ಅಧೀಕ್ಷಕರ ವಿರುದ್ಧ ಹಿಂದೂ ಸಂಘಟನೆಗಳು ಕಿಡಿ

  • ಸಮಾಧಿ ಪಕ್ಕ ಮನೆಯ ಮಾಡಿ, ದೆವ್ವಕ್ಕೆ ಹೆದರಿದ ನಟಿ ನರ್ಗೀಸ್

    ಸಮಾಧಿ ಪಕ್ಕ ಮನೆಯ ಮಾಡಿ, ದೆವ್ವಕ್ಕೆ ಹೆದರಿದ ನಟಿ ನರ್ಗೀಸ್

    ಬಾಲಿವುಡ್ (Bollywood)ನ ಖ್ಯಾತ ತಾರೆ ನರ್ಗೀಸ್ ಫಾಖ್ರಿ (Nargis Fakhri) ತಮ್ಮ ಜೀವನದಲ್ಲಿ ನಡೆದ ಭಯಂಕರ ಘಟನೆಯನ್ನು ಹಂಚಿಕೊಂಡಿದ್ದಾರೆ. ಸದ್ಯ ಅವರ ನಟನೆಯ ಟಟ್ಲುಬಾಜ್ ಎಂಬ ಹಾರರ್ ಸರಣಿಯು ಬಿಡುಗಡೆ ಆಗುತ್ತಿದ್ದು, ಈ ಸಂದರ್ಭದಲ್ಲಿ ಅವರು ತಮ್ಮ ಜೀವನದಲ್ಲಿ ನಡೆದ ಹಾರರ್ ಘಟನೆಯನ್ನು ಹೇಳಿಕೊಂಡಿದ್ದಾರೆ.

    ಅಮೆರಿಕಾ ಮೂಲದ ನರ್ಗೀಸ್ ಬಾಲಿವುಡ್ ಅಂಗಳಕ್ಕೆ ಬಂದಿದ್ದು ರಾಕ್ ಸ್ಟರ್ ಸಿನಿಮಾ ಮೂಲಕ. ಈ ವೇಳೆಯಲ್ಲಿ ಮುಂಬೈಗೆ (Mumbai) ಬಂದಾಗ ಅವರ ಸ್ಮಶಾನದ ಹತ್ತಿರವೇ ಇದ್ದಅಪಾರ್ಟ್ ಮೆಂಟ್ ಒಂದರಲ್ಲಿ ವಾಸವಿದ್ದರಂತೆ. ಈ ಸಮಯದಲ್ಲಿ ಬೆಳಗಿನ ಜಾವ ಸರಿಯಾಗಿ ಮೂರು ಗಂಟೆಯ ಹೊತ್ತಿಗೆ ಎಚ್ಚರವಾಗುತ್ತಿತ್ತಂತೆ. ಹಾಗೂ ಕೆಟ್ಟ ಕನಸಿನೊಂದಿಗೆ ಅವರು ಕಣ್ಣು ತೆರೆಯುತ್ತಿದ್ದರಂತೆ. ಇದನ್ನೂ ಓದಿ:ರಿಸೆಪ್ಷನ್ ಸಂಭ್ರಮದಲ್ಲಿ ‘ಕಾಮಿಡಿ ಕಿಲಾಡಿಗಳು’ ಸಂಜು ಬಸಯ್ಯ- ಪಲ್ಲವಿ ಜೋಡಿ

    ಒಂದು ದಿನ ಆಳೆತ್ತರದ ವ್ಯಕ್ತಿಯೊಬ್ಬ ನರ್ಗೀಸ್ ನನ್ನು ಎಳೆದುಕೊಂಡು ಸ್ಮಶಾನಕ್ಕೆ (Graveyard)ಹೋಗಿ ಬಿಟ್ಟನಂತೆ. ಅಲ್ಲಿದ್ದ ಸಮಾಧಿಯನ್ನು ತೆರೆದು ಮಾಂಸ, ಎಲುಬು ತಿನ್ನುತ್ತಿದ್ದನಂತೆ. ತನಗೂ ತಿನ್ನಲು ಹೇಳುತ್ತಿದ್ದನಂತೆ. ಇಂಥದ್ದೊಂದು ಕನಸು ಬಿದ್ದ ತಕ್ಷಣವೇ ಅವರು ಮನೆಯನ್ನೇ ಖಾಲಿ ಮಾಡಿಬಿಟ್ಟರಂತೆ.

     

    ಸದ್ಯ ಅವರು ಹಾರರ್ ವೆಬ್ ಸರಣಿಯು ಬಿಡುಗಡೆಗೆ ಸಿದ್ಧವಾಗಿದೆ. ನರ್ಗೀಸ್ ಆ ಸೀರಿಸ್ ನ ಪ್ರಚಾರದಲ್ಲಿ ತೊಡಗಿದ್ದಾರೆ. ಜೊತೆಗೆ ಪವನ್ ಕಲ್ಯಾಣ್ ನಟನೆಯ ಸಿನಿಮಾದಲ್ಲಿ ಇವರು ಪ್ರಮುಖ ಪಾತ್ರವೊಂದನ್ನು ನಿಭಾಯಿಸುತ್ತಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಮಾಧಿ ಅಗೆದು ಅಪ್ರಾಪ್ತೆಯ ಶವದ ಅತ್ಯಾಚಾರ- ಶಾಕ್ ಆದ ಕುಟುಂಬಸ್ಥರಿಂದ ದೂರು

    ಸಮಾಧಿ ಅಗೆದು ಅಪ್ರಾಪ್ತೆಯ ಶವದ ಅತ್ಯಾಚಾರ- ಶಾಕ್ ಆದ ಕುಟುಂಬಸ್ಥರಿಂದ ದೂರು

    ಇಸ್ಲಾಮಾಬಾದ್: ಸಮಾಧಿ ಅಗೆದು ಅಪ್ರಾಪ್ತೆ ಶವದೊಂದಿಗೆ ನೀಚ ಕಾಮುಕರು ಅತ್ಯಾಚಾರ ಮಾಡಿದ ವಿಲಕ್ಷಣ ಘಟನೆಯೊಂದು ಪಾಕಿಸ್ತಾನದಲ್ಲಿ ನಡೆದಿದೆ.

    ಈ ಘಟನೆ ಮೇ 5 ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಪಾಕಿಸ್ತಾನದ ಗುಜರಾತ್‍ನಲ್ಲಿ ಕ್ರೂರಿಗಳು ಸಮಾಧಿಯನ್ನು ಅಗೆದು ಬಾಲಕಿಯ ಶವವನ್ನು ಹೊರತೆಗೆದು ಅತ್ಯಾಚಾರ ಎಸಗಿದ್ದಾರೆ. ಈ ಮೂಲಕ ತಮ್ಮ ಕಾಮತೃಷೆಯನ್ನು ತೀರಿಸಿಕೊಂಡಿದ್ದಾರೆ.

    ಈ ಸಂಬಂಧ ಪಾಕಿಸ್ತಾನ್ ಮುಸ್ಲಿಂ ಲೀಗ್ (ಪಿಎಂಎಲ್‍ಎನ್) ಉಪಪ್ರಧಾನ ಕಾರ್ಯದರ್ಶಿ ಅತಾವುಲ್ಲಾ ತರಾರ್ ಅವರು ಮೇ 6ರಂದು ಟ್ವಿಟ್ಟರ್‍ನಲ್ಲಿ ಸಮಾಧಿ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೆ ಪ್ರಕರಣ ಸಂಬಂಧ ಈಗಾಗಲೇ 17 ಮಂದಿ ಶಂಕಿತರನ್ನು ವಿಚಾರಣೆ ನಡೆಸಲಾಗುತ್ತಿದೆ. ವೈಜ್ಞಾನಿಕ ವಿಧಾನಗಳ ಮೂಲಕ ತನಿಖೆಗೆ ಒಳಪಡಿಸಲಾಗಿದೆ. ಈ ಬಗ್ಗೆ ಸಿಎಂ ಕೂಡ ವರದಿ ಕೇಳಿದ್ದಾರೆ ಎಂದು ಬರೆದುಕೊಂಡಿದ್ದಾರೆ.

    ಮೃತ ಬಾಲಕಿಯನ್ನು ಸ್ಮಶಾನದಲ್ಲಿ ಹೂತು ಮರುದಿನ ಸಂಬಂಧಿಕರು ತಮ್ಮ ಧಾರ್ಮಿಕ ಸಂಪ್ರದಾಯಗಳನ್ನು ನೆರವೇರಿಸಲು ಸಮಾಧಿ ಬಳಿ ಹೋದಾಗ ಈ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಸಮಾಧಿ ಅಗೆದು ಮೃತದೇಹವನ್ನು ಹೊರಗೆ ತೆಗೆಯಲಾಗಿತ್ತು. ಬಾಲಕಿಯ ದೇಹದಲ್ಲಿ ಯಾವುದೇ ಬಟ್ಟೆ ಇರಲಿಲ್ಲ. ಅಲ್ಲದೆ ದೇಹದ ಮೇಲೆ ರೇಪ್ ಮಾಡಿರುವ ಕುರುಹುಗಳು ಪತ್ತೆಯಾಗಿತ್ತು. ಇದನ್ನು ಕಂಡ ಬಾಲಕಿಯ ಚಿಕ್ಕಪ್ಪ ಕುಡಲೇ ಸ್ಥಳೀಯ ಪೊಲಿಸ್ ಠಾಣೆಗೆ ತೆರಳಿ ಎಫ್‍ಐಆರ್ ದಾಖಲಿಸಿದ್ದಾರೆ. ದೂರು ಸ್ವೀಕರಿಸಿರುವ ಪೊಲೀಸರು ತನಿಖೆ ಆರಂಭಿಸಿದ್ದು, ಕೃತ್ಯದಲ್ಲಿ ಎಷ್ಟು ಮಂದಿ ಭಾಗಿಯಾಗಿದ್ದಾರೆ ಎಂಬುದರ ಕುರಿತು ತನಿಖೆ ನಡೆಸುತ್ತಿದ್ದಾರೆ.

    ಬಾಲಕಿ ವಿಕಲಚೇತನಳಾಗಿದ್ದು ಮೇ 4 ರಂದು ಮೃತಪಟ್ಟಿದ್ದಳು. ಹೀಗಾಗಿ ಸಂಬಂಧಿಕರು ಧಾರ್ಮಿಕ ಸಂಪ್ರದಾಯದಂತೆ ಸಂಜೆ 6 ಗಂಟೆ ಸುಮಾರಿಗೆ ಆಕೆಯನ್ನು ಸ್ಮಶಾನದಲ್ಲಿ ಸಮಾಧಿ ಮಾಡಿ ಮನೆಗೆ ಮರಳಿದರು. ಮರುದಿನ ಅವರು ಕೆಲ ಆಚರಣೆಗಳನ್ನು ಮಾಡಲು ಸ್ಮಶಾನಕ್ಕೆ ಹಿಂದಿರುಗಿದ್ದಾರೆ. ಆಗ ಸಮಾಧಿಯನ್ನು ಅಗೆದಿರುವುದು ಬೆಳಕಿಗೆ ಬಂದಿದೆ. ಅಲ್ಲದೆ ಬಾಲಕಿಯ ಶವ ಕೂಡ ಅಲ್ಲಿ ಇರಲಿಲ್ಲ. ಕೂಡಲೇ ಸಂಬಮಧಿಕರೆಲ್ಲರೂ ಅಕ್ಕಪಕ್ಕ ಹುಡುಕಾಟ ಆರಂಭಿಸಿದ್ದಾರೆ. ಈ ವೇಳೆ ಶವ ಹೂತ ಸುಮಾರು 200 ಚದರ ಅಡಿ ದೂರದಲ್ಲಿ ಮೃತದೇಹ ಪತ್ತೆಯಾಗಿದೆ ಎಂದು ಅಲ್ಲಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

  • ಸ್ಮಶಾನದಿಂದ 16 ಕೆಜಿ ಚಿನ್ನ ತೆಗೆದ ಪೊಲೀಸರು

    ಸ್ಮಶಾನದಿಂದ 16 ಕೆಜಿ ಚಿನ್ನ ತೆಗೆದ ಪೊಲೀಸರು

    ಚೆನ್ನೈ: ಸ್ಮಶಾನದಲ್ಲಿ ಹೂತಿಟ್ಟಿದ್ದ 16 ಕೆಜಿ ಚಿನ್ನವನ್ನು ತಮಿಳಿನಾಡಿನ ವೆಲ್ಲೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ವೆಲ್ಲೂರು ನಗರದ ಜ್ಯುವೆಲ್ಲರಿ ಶೋರೂಂನಿಂದ ಕಳವಾಗಿದ್ದ 16 ಕೆಜಿ ಚಿನ್ನವನ್ನು ಸೋಮವಾರ ಸ್ಮಶಾನದಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಗುಜರಾತ್‍ನ 8 ಪ್ರಮುಖ ನಗರದಲ್ಲಿ ಡಿಸೆಂಬರ್ 31 ರವೆಗೆ ನೈಟ್ ಕರ್ಫ್ಯೂ

    ಡಿಸೆಂಬರ್ 15 ರಂದು ಮುಸುಕುಧಾರಿಯೊಬ್ಬ ಅಂಗಡಿಗೆ ನುಗ್ಗಿ 16 ಕೆಜಿ ಚಿನ್ನಾಭರಣದೊಂದಿಗೆ ಪರಾರಿಯಾಗಿದ್ದ. ಈ ಪ್ರಕರಣವನ್ನು ಬೇಧಿಸಲು ನಿಯೋಜನೆಗೊಂಡಿದ್ದ ವಿಶೇಷ ತಂಡ ಸಿಸಿಟಿವಿಯ ಆರೋಪಿಯನ್ನು ಅನೈಕಟ್‌ನಲ್ಲಿ ಬಂಧಿಸಲಾಗಿತ್ತು. ಇದನ್ನೂ ಓದಿ: ನಂದಿನಿ ಹೆಸರಿನಲ್ಲಿ ನಕಲಿ ತುಪ್ಪ ತಯಾರಿಸಿದವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಎಸ್‍ಟಿಎಸ್ ಸೂಚನೆ

    ವಿಚಾರಣೆಯ ವೇಳೆ ಆತ ನಗರದಿಂದ 40 ಕಿ.ಮೀ ದೂರದಲ್ಲಿರುವ ಓದುಕತ್ತೂರಿನ ಸ್ಮಶಾನದಲ್ಲಿ ಚಿನ್ನವನ್ನು ಹೂತಿಟ್ಟಿರುವುದಾಗಿ ತಿಳಿಸಿದ್ದ. ಈ ಮಾಹಿತಿ ಆಧಾರದ ಪೊಲೀಸರು ಜಾಗಕ್ಕೆ ತೆರಳಿ ಚಿನ್ನವನ್ನು ಮೇಲಕ್ಕೆ ಎತ್ತಿದ್ದಾರೆ. ಬಂಧಿತ ವ್ಯಕ್ತಿ ಕುರಿತಂತೆ ಪೊಲೀಸರು ಹೆಚ್ಚಿನ ಮಾಹಿತಿ ನೀಡಿಲ್ಲ.

  • ಕಲಾವಿದರ ಬದುಕು ಹೇಗೆ ಅಂತ ಹೇಳೋಕಾಗಲ್ಲ ದುಡಿಯುವಾಗ ಸೇವಿಂಗ್ಸ್ ಮಾಡು ಅಂತಿದ್ರು: ಚಿಕ್ಕಣ್ಣ

    ಕಲಾವಿದರ ಬದುಕು ಹೇಗೆ ಅಂತ ಹೇಳೋಕಾಗಲ್ಲ ದುಡಿಯುವಾಗ ಸೇವಿಂಗ್ಸ್ ಮಾಡು ಅಂತಿದ್ರು: ಚಿಕ್ಕಣ್ಣ

    ಬೆಂಗಳೂರು: ಕಲಾವಿದರ ಬದುಕು ಹೇಗೆ ಅಂತ ಹೇಳೋಕೆ ಆಗಲ್ಲ. ಹೀಗಾಗಿ ದುಡಿಯುವಾಗ ಸೇವಿಂಗ್ಸ್ ಮಾಡು ಅಂತ ಪುನೀತ್ ರಾಜ್ ಕುಮಾರ್ ಅವರು ಹೇಳುತ್ತಿದ್ದರು ಎಂದು ನಟ ಚಿಕ್ಕಣ್ಣ ಗದ್ಗದಿತರಾದರು.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಅಪ್ಪು ನೆನೆದು ಭಾವುಕರಾದರು. 5 ಸಿನಿಮಾಗಳಲ್ಲಿ ಒಟ್ಟಿಗೆ ಸ್ಕ್ರೀನ್ ಶೇರ್ ಮಾಡಿದ್ದೆ ಎಂದು ಹೇಳುತ್ತಾ ಸೈಮಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭೇಟಿಯಾದ ಮೊದಲ ಪರಿಚಯದ ದಿನಗಳನ್ನ ನೆನಪಿಸಿಕೊಳ್ಳುತ್ತಾ ಕಣ್ಣೀರು ಹಾಕಿದರು.

    ಜೇಮ್ಸ್ ಸಿನಿಮಾದ ಶೂಟಿಂಗ್ ನಲ್ಲಿ ಹಲವು ದಿನಗಳು ಜೊತೆಯಾಗಿ ಕೆಲಸ ಮಾಡಿದ್ದೆವು. ಸದಾಶಿವನಗರದ ಸುತ್ತಮುತ್ತ ಶೂಟಿಂಗ್ ಮಾಡಿದ ಮನೆಗೆ ಊಟಕ್ಕೆ ಕರೆದುಕೊಂಡು ಹೋಗುತ್ತಿದ್ದರು. ವರ್ಷ 4 ಸಿನಿಮಾ ನಿರ್ಮಾಣ ಮಾಡಬೇಕು ಅಂತ ಪ್ಲಾನ್ ಮಾಡಿದ್ದರು ಎಂದು ಚಿಕ್ಕಣ್ಣ ಹೇಳಿದರು. ಇದನ್ನೂ ಓದಿ: ಜಿಮ್ ಮಾಡೋವ್ರಿಗೆ ಅಪ್ಪು ಸಾವು ಬಿಗ್ ಶಾಕ್ – ಜಿಮ್‍ಗೆ ಹೋಗದಂತೆ ಮಕ್ಕಳಿಗೆ ಪೋಷಕರ ಆಕ್ಷೇಪ

    ನನಗೆ ಒಂದು ಸಿನಿಮಾ ಮಾಡ್ತೀನಿ ಅಂತ ಹೇಳಿದ್ದರು. ಮೂರು ದಿನ ಕಥೆ ಬಗ್ಗೆ ಕೂಡ ಮಾತಾಡಿದ್ದೆವು. ಕಲಾವಿದರ ಬದುಕು ಹೇಗೆ ಅಂತ ಹೇಳಕ್ಕೆ ಆಗಲ್ಲ ದುಡಿಯುವಾಗ ಸೇವಿಂಗ್ಸ್ ಮಾಡು ಅಂತ ಪ್ರತಿ ಬಾರಿಯೂ ಹೇಳುತ್ತಿದ್ದರು ಎಂದು ಹಳೆಯ ದಿನಗಳನ್ನು ಮೆಲುಕು ಹಾಕಿಕೊಂಡು ಬೇಸರ ವ್ಯಕ್ತಪಡಿಸಿದರು.

    ಫಿಟ್ ನೆಸ್ ಬಗ್ಗೆ ಅಪ್ಪು ಬಹಳ ಚರ್ಚೆ ಮಾಡುತ್ತಿದ್ದರು. ಈಗ ಅವರಿಲ್ಲ ಅನ್ನೋದನ್ನ ಊಹೆ ಕೂಡ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಚಿಕ್ಕಣ್ಣ ಅತ್ತುಬಿಟ್ಟರು. ಇದನ್ನೂ ಓದಿ: ನವೆಂಬರ್ 16ರಂದು ಪವರ್ ಸ್ಟಾರ್‌ಗೆ ಸ್ಯಾಂಡಲ್‍ವುಡ್ ನುಡಿನಮನ

    ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನೆಲ್ಲ ಅಗಲಿ ಇಂದಿಗೆ 10 ದಿನಗಳೇ ಕಳೆದಿವೆ. ಆದರೂ ಇಂದಿಗೂ ಅವರ ಸಮಾಧಿ ದರ್ಶನ ಪಡೆಯಲು ಅಭಿಮಾನಿಗಳ ಸಾಗರವೇ ಹರಿದಬರುತ್ತಿದೆ. ಈ ಮಧ್ಯೆ ಇಂದು ರಾಜ್ಯದ ಎಲ್ಲಾ ಥಿಯೇಟರ್ ಗಳಲ್ಲಿಯೂ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ನಾಳೆ 11 ದಿನದ ಕಾರ್ಯಕ್ರಮವನ್ನು ಕುಟುಂಬಸ್ಥರು ನೆರವೇರಿಸಲಿದ್ದಾರೆ.

  • ಸ್ಮಶಾನಕ್ಕೆ ಸ್ಥಳ ನೀಡಲು ಆಗ್ರಹ-ರಾಯಚೂರಿನಲ್ಲಿ ಶವವಿಟ್ಟು ಪ್ರತಿಭಟನೆ

    ಸ್ಮಶಾನಕ್ಕೆ ಸ್ಥಳ ನೀಡಲು ಆಗ್ರಹ-ರಾಯಚೂರಿನಲ್ಲಿ ಶವವಿಟ್ಟು ಪ್ರತಿಭಟನೆ

    ರಾಯಚೂರು: ಶವ ಹೂಳಲು ಸ್ಥಳ ಇಲ್ಲದ ಕಾರಣ ಶವವನ್ನಿಟ್ಟು ಪ್ರತಿಭಟನೆ ನಡೆಸಿದ ಘಟನೆ ರಾಯಚೂರಿನ ಮಾನ್ವಿ ತಾಲೂಕಿನ ಮಿಟ್ಟೆ ಕ್ಯಾಂಪ್ ಬಳಿ ನಡೆದಿದೆ. ಇಲ್ಲಿನ ಗ್ರಾಮ ಪಂಚಾಯತಿ ಕಚೇರಿ ಮುಂದೆ ಶವ ಇಟ್ಟು ಗ್ರಾಮಸ್ಥರು ಪ್ರತಿಭಟನೆ ಮಾಡಿದ್ದಾರೆ.

    ಗ್ರಾಮದ ಹನುಮೇಶ್ ಎಂಬವರು ಗ್ರಾಮದಲ್ಲಿ ಸಾವನ್ನಪ್ಪಿದ್ದು ಶವ ಸಂಸ್ಕಾರಕ್ಕೆ ಸ್ಥಳವಿಲ್ಲದ ಕಾರಣ, ಶವ ಹೂಳದೆ ಗ್ರಾಮಸ್ಥರು ಹೋರಾಟಕ್ಕೆ ಮುಂದಾಗಿದ್ದಾರೆ. ಸರ್ಕಾರದಿಂದ ಸ್ಮಶಾನ ಜಾಗಕ್ಕೆ ಜಮೀನು ಮಂಜೂರಾದರು ಅಧಿಕಾರಿಗಳು ಸ್ಥಳ ಇದುವರೆಗೂ ಗುರುತಿಸಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಗ್ರಾಮದಲ್ಲಿ ಶವ ಸಂಸ್ಕಾರಕ್ಕೆ ತೊಂದರೆಯಾಗುತ್ತಿದೆ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಶವ ಸಂಸ್ಕಾರಕ್ಕೆ ಸ್ಥಳ ಗುರುತಿಸಿಕೊಡುವವರೆಗೂ ಶವವಿಟ್ಟುಕೊಂಡೆ ಹೋರಾಟ ಮುಂದುವರಿಸುವುದಾಗಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ಅಧಿಕಾರಿಗಳು ಗ್ರಾಮಸ್ಥರ ಮನವೊಲಿಕೆಗೆ ಮುಂದಾಗಿದ್ದು ಸ್ಮಶಾನಕ್ಕೆ ಜಾಗದ ಭರವಸೆ ನೀಡಿದ್ದಾರೆ.

  • ಗ್ರಾಮದಲ್ಲಿ ಸ್ಮಶಾನ ಇಲ್ಲದ ಹಿನ್ನೆಲೆ ಗ್ರಾಮಸ್ಥರಿಂದ ದೇಹದಾನ

    ಗ್ರಾಮದಲ್ಲಿ ಸ್ಮಶಾನ ಇಲ್ಲದ ಹಿನ್ನೆಲೆ ಗ್ರಾಮಸ್ಥರಿಂದ ದೇಹದಾನ

    ಕಲಬುರಗಿ: ಶವ ಹೂಳಲು ಸ್ಥಳವಿಲ್ಲದ ಕಾರಣ ಮೃತ ವೃದ್ಧೆಯ ದೇಹವನ್ನು ದೇಹದಾನ ಮಾಡಿರುವಂತಹ ಘಟನೆ ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ಭಂಕೂರ ಗ್ರಾಮದಲ್ಲಿ ನಡೆದಿದೆ.

    75 ವರ್ಷದ ಸುಭದ್ರಮ್ಮ ಗುರುವಾರ ರಾತ್ರಿ ಸಾವನಪ್ಪಿದ್ದಾರೆ. ಆದರೆ ಮೃತರ ಶವ ಸಂಸ್ಕಾರ ಮಾಡಲು ಗ್ರಾಮದಲ್ಲಿ ಜಮೀನಿಲ್ಲ. ಹೀಗಾಗಿ ಕಲಬುರಗಿ ಎಂಆರ್‍ಎಂಸಿ ಮೆಡಿಕಲ್ ಕಾಲೇಜಿಗೆ ಸುಭದ್ರಮ್ಮ ದೇಹವನ್ನು ದಾನ ಮಾಡಿದ್ದಾರೆ.

    ಮೂರು ಸಾವಿರ ಜನಸಂಖ್ಯೆಯಿರುವ ಈ ಗ್ರಾಮದಲ್ಲಿ ಶವ ಹೂಳಲು ಕೇವಲ 20 ಗುಂಟೆ ಜಮೀನಿದೆ. ಹೀಗಾಗಿ ಯಾರಾದಾದರೂ ಶವ ಹೂಳಬೇಕು ಎಂದರೆ ಬೇರೆಯವರ ಶವ ತೆಗೆದೆ ಹೂಳುವ ಪರಿಸ್ಥಿತಿಯಿದೆ. ಇದನ್ನು ಅರಿತ ಆ ಗ್ರಾಮದ 40ಕ್ಕೂ ಹೆಚ್ಚು ಜನ ಈಗಾಗಲೇ ದೇಹದಾನ ಮಾಡಿದ್ದಾರೆ.

    ಇನ್ನು ದುರಂತ ಎಂದರೆ ಸಮಾಜಕಲ್ಯಾಣ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ತವರು ಕ್ಷೇತ್ರದ ಜನರಿಗೆ ಈ ಪರಿಸ್ಥಿತಿ ಬಂದಿದೆ. ಈ ಹಿಂದೆ ಪಬ್ಲಿಕ್ ಟಿವಿಯಲ್ಲಿ ಈ ಕುರಿತು ವರದಿ ಪ್ರಸಾರ ಮಾಡಿದ್ದಾಗ ಜಮೀನು ಖರೀದಿಗೆ ಹಣ ಬಿಡುಗಡೆಯಾಗಿದೆ.

    ಆದರೆ ಇಲ್ಲಿನ ಜನಪ್ರತಿನಿಧಿ ಹಾಗು ಅಧಿಕಾರಿಗಳ ನಿರ್ಲಕ್ಷ್ಯದಿಂದ ಇಲ್ಲಿಯವರಗೆ ಸ್ಮಶಾನಕ್ಕಾಗಿ ಜಮೀನು ಖರೀದಿ ಮಾಡಿಲ್ಲ. ಪರಿಣಾಮ ಜಮೀನು ಹೊಂದಿದವರು ಅವರ ಜಮೀನಿನಲ್ಲಿ ಅಂತ್ಯಸಂಸ್ಕಾರ ಮಾಡುತ್ತಾರೆ. ಜಮೀನು ಇಲ್ಲದವರು ಹೀಗೆ ದೇಹದಾನ ಮಾಡಲು ಮುಂದಾಗಿದ್ದಾರೆ.