Tag: GramaPanchayat

  • ಗ್ರಾಮ ಸಮರದಲ್ಲಿ ಬಿಜೆಪಿ ಬೆಂಬಲಿತರು ಮೇಲುಗೈ

    ಗ್ರಾಮ ಸಮರದಲ್ಲಿ ಬಿಜೆಪಿ ಬೆಂಬಲಿತರು ಮೇಲುಗೈ

    – ಹಳ್ಳಿ ಮಟ್ಟದಲ್ಲೂ ಆಪರೇಷನ್ ಕಮಲ?

    ಬೆಂಗಳೂರು: ಹಳ್ಳಿ ಫೈಟ್‍ನಲ್ಲಿ ನಿರೀಕ್ಷೆಯಂತೆಯೇ ಆಡಳಿತಾರೂಢ ಬಿಜೆಪಿ ಬೆಂಬಲಿಗ ಅಭ್ಯರ್ಥಿಗಳು ಮೇಲುಗೈ ಸಾಧಿಸಿದ್ದಾರೆ. ಸದ್ಯದ ಟ್ರೆಂಡ್ ಗಮನಿಸಿದರೆ ಅರ್ಧಕ್ಕಿಂತ ಹೆಚ್ಚು ಗ್ರಾಮಪಂಚಾಯ್ತಿಗಳಲ್ಲಿ ಅಧಿಕಾರಕ್ಕೆ ಏರುವುದು ಖಚಿತವಾಗಿದೆ.

    ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಮತ್ತು ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಕೂಡ ಹಲವೆಡೆ ಗೆದ್ದು ಬೀಗಿದ್ದಾರೆ. ಬ್ಯಾಲೆಟ್ ಪೇಪರ್ ಕಾರಣ ಮತ ಎಣಿಕೆ ಕಾರ್ಯದಲ್ಲಿ ವಿಳಂಬ ಆಗಿದ್ದು,  ಇನ್ನೂ ಬಹುತೇಕ ಕಡೆ ಮತ ಎಣಿಕೆ ಕಾರ್ಯ ನಡೆಯುತ್ತಿದೆ.

    ಪಕ್ಷದ ಸಾಧನೆ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಸಂತಸ ವ್ಯಕ್ತಪಡಿಸಿದ್ದಾರೆ. ಸಚಿವ ಅಶೋಕ್ ಎಲ್ಲಾ ಕಡೆ ಬಿಜೆಪಿ ಶಕ್ತಿ ಎದ್ದು ಕಾಣ್ತಿದೆ ಎಂದಿದ್ದಾರೆ. ಸಿದ್ದರಾಮಯ್ಯ ಮಾತ್ರ ಮತದಾರರ ವಿಶ್ವಾಸ ಗೆಲ್ಲಲಾಗದ ಬಿಜೆಪಿ ಹಲವೆಡೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನು ಸೆಳೆಯುತ್ತಿದೆ ಎಂದು ಆರೋಪಿಸಿದ್ದಾರೆ.

    ಮತ ಎಣಿಕೆ ಕೇಂದ್ರಗಳ ಬಳಿ ಕೋವಿಡ್ ನಿಯಮಗಳ ಉಲ್ಲಂಘನೆ ರಾಜಾರೋಷವಾಗಿ ನಡೆಯಿತು. ನಂಜನಗೂಡು ಮತ ಎಣಿಕೆ ಕೇಂದ್ರದಲ್ಲಿ ಜನರನ್ನು ನಿಯಂತ್ರಿಸಲಾಗದೇ ಪೊಲೀಸರು ಪರದಾಡಿದರು. ಬಳ್ಳಾರಿಯ ಹೊಸಪೇಟೆಯಲ್ಲಿ ಮತ ಎಣಿಕೆ ಕೇಂದ್ರದ ಮುಂದೆ ಬ್ಯಾರಿಕೇಡ್ ದಾಟಿ ಬಂದಿದ್ದ ವ್ಯಕ್ತಿಗೆ ಹೊಸಪೇಟೆಯ ಡಿವೈಎಸ್‍ಪಿ ರಘುಕುಮಾರ್ ಕಪಾಳಮೋಕ್ಷ ಮಾಡಿದ್ದಾರೆ.

    ಮಂಡ್ಯದ ಜಕ್ಕನಹಳ್ಳಿಯಲ್ಲಿ ಚುನಾಣೋತ್ತರ ಘರ್ಷಣೆ ಸಂಭವಿಸಿದೆ. ಮಾಜಿ ಸಚಿವ ಪುಟ್ಟರಾಜು ಬೆಂಬಲಿಗರು ಮತ್ತು ರೈತ ಸಂಘದ ಕಾರ್ಯಕರ್ತರು ದೊಣ್ಣೆ ಹಿಡಿದು ಬಡಿದಾಡಿಕೊಂಡಿದ್ದಾರೆ. ಘರ್ಷಣೆಯಲ್ಲಿ ಎರಡೂ ಕಡೆಯವರಗೂ ಗಾಯಗಳಾಗಿವೆ.

    ಗ್ರಾಮ ಸಮರ ಫಲಿತಾಂಶ
    * ಒಟ್ಟು ಗ್ರಾಮ ಪಂಚಾಯತ್‌ – 5,728
    * ಒಟ್ಟು ಗ್ರಾ.ಪಂ ಸ್ಥಾನಗಳು – 82,616
    * ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು – 13,107 ಗೆಲುವು
    * ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು – 9,998 ಗೆಲುವು
    * ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು – 4,458 ಗೆಲುವು
    * ಇತರರು – 3,836

  • ಮಂಗಳಮುಖಿಯರ ಮೇಲೆ ಹಣ ಎಸೆದ ಪಂಚಾಯ್ತಿ ಉಪಾಧ್ಯಕ್ಷ

    ಮಂಗಳಮುಖಿಯರ ಮೇಲೆ ಹಣ ಎಸೆದ ಪಂಚಾಯ್ತಿ ಉಪಾಧ್ಯಕ್ಷ

    ನೆಲಮಂಗಲ: ಗ್ರಾಮ ಪಂಚಾಯ್ತಿ ಉಪಾಧ್ಯಕ್ಷನೋರ್ವ ಮಂಗಳ ಮುಖಿಯರ ಮೇಲೆ ಹಣ ಎಸೆದು ಉದ್ಧಟತನ ಮೆರೆದಿದ್ದಾನೆ.

    ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಕುಲವನಹಳ್ಳಿ ಬಳಿ ಈ ಘಟನೆ ನಡೆದಿದೆ. ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಬೈಲಪ್ಪ ಕಾಂಚಾಣ ದರ್ಬಾರಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

    ಗ್ರಾಮ ಮಟ್ಟದಲ್ಲಿ ಯಶಸ್ವಿಯಾಗಿ ಸ್ಥಳೀಯ ಆಡಳಿತ ನೀಡಬೇಕಾಗಿದ್ದ ಉಪಾಧ್ಯಕ್ಷ ಜನಸಾಮಾನ್ಯರಿಗೆ ಮಾದರಿಯಾಗಬೇಕಿದ್ದರು. ಆದರೆ ಪಂಚಾಯ್ತಿ ವ್ಯಾಪ್ತಿಯ ಜನ ಬೈಲಪ್ಪ ವಿರುದ್ಧ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

    ಕಾರ್ಯಕ್ರಮದಲ್ಲಿ ಹಣ ಎಸೆದು ಅಂಧ ದರ್ಬಾರ್ ಮಾಡಿದ ದೃಶ್ಯ ನೋಡಿದ ಸ್ಥಳೀಯ ಕುಲವನಹಳ್ಳಿ ಮತ್ತು ಲಕ್ಕೇನಹಳ್ಳಿ ಗ್ರಾಮಸ್ಥರು ಸಹ ಉಪಾಧ್ಯಕ್ಷ ಬೈಲಪ್ಪನ ವರ್ತನೆಗೆ ಖಂಡನೆ ವ್ಯಕ್ತಪಡಿಸುತ್ತಿದ್ದಾರೆ.

  • ಶಾಸಕರ ಮನೆ ಎದುರೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ

    ಶಾಸಕರ ಮನೆ ಎದುರೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ

    ಬಾಗಲಕೋಟೆ: ಶಾಸಕರ ಮನೆ ಎದುರೇ ಮಹಿಳೆಯೊಬ್ಬರು ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಬಾದಾಮಿ ಪಟ್ಟಣದಲ್ಲಿ ನಡೆದಿದೆ.

    ಬಾದಾಮಿ ತಾಲೂಕು ಯರಗೊಪ್ಪ ಗ್ರಾಮದ ನಿವಾಸಿಶಾಂತವ್ವ ವಾಲಿಕಾರ (46) ಎಂಬುವರೇ ವಿಷ ಸೇವಿಸಿ ಮೃತಪಟ್ಟ ಮಹಿಳೆ. ಶಾಂತವ್ವರ ಸಾವಿಗೆ ಶಾಸಕ ಚಿಮ್ಮನಕಟ್ಟಿಯವರೇ ಕಾರಣ ಎಂದು ಆರೋಪಿಸುವ ಕುಟುಂಬಸ್ಥರು ಶಾಸಕರ ಮನೆಯ ಎದುರು ಧರಣಿ ನಡೆಸಿದ್ದಾರೆ.

    ಈ ವೇಳೆ ಪ್ರತಿಭಟನಾ ನಿರತರು ಶಾಸಕ ಚಿಮ್ಮನಕಟ್ಟಿ ಭಾವಚಿತ್ರವಿರುವ ಫ್ಲೆಕ್ಸ್ ಕಿತ್ತು ಹಾಕಲು ಮುಂದಾಗಿದ್ದು, ಇದರಿಂದ ಶಾಸಕರ ಬೆಂಬಲಿಗರು ಹಾಗೂ ಪ್ರತಿಭಟನಾಕಾರ ನಡುವೆ ವಾಗ್ದಾದಕ್ಕೆ ಕಾರಣವಾಯಿತು. ಪ್ರತಿಭಟನಾಕಾರರು ಶಾಸಕರ ಬೆಂಬಲಿಗನ ಮೇಲೆ ಹಲ್ಲೆ ನಡೆಸಿದ ಘಟನೆಯೂ ನಡೆಯಿತು.

    ಏನಿದು ಘಟನೆ: ಮೂರು ವರ್ಷದ ಹಿಂದೆ ಮೃತ ಶಾಂತವ್ವ ಅವರ ಪತಿ ಗೋವಿಂದಪ್ಪ ವಾಲಿಕಾರ ನಿಧನರಾಗಿದ್ದರು. ಗೋವಿಂದಪ್ಪ ಅವರು ಮುತ್ತಲಗೇರಿ ಗ್ರಾಮ ಪಂಚಾಯತಿಯಲ್ಲಿ ಗ್ರಾಮಸೇವಕ ಕೆಲಸ ನಿರ್ವಹಿಸುತ್ತಿದ್ದರು. ಪತಿಯ ಮರಣದ ನಂತರ ಅನುಕಂಪಕದ ಆಧಾರದ ಮೇಲೆ ಆ ಕೆಲಸವನ್ನು ತಮ್ಮ ಮಗನಿಗೆ ನೀಡಿ ಎಂದು ಶಾಸಕ ಬಿ.ಬಿ.ಚಿಮ್ಮನಕಟ್ಟಿ ಸೇರಿದಂತೆ ಅಧಿಕಾರಿಗಳ ಬಳಿ ಶಾಂತವ್ವ ಮನವಿ ಮಾಡಿಕೊಂಡಿದ್ದರು.

    ಶಾಸಕರ ಹೇಳಿಕೆ ಮೇರೆಗೆ ಸ್ವಜಾತಿಯವರಿಗೆ ಗ್ರಾಮಸೇವಕ ಕೆಲಸ ನೀಡಲಾಗಿದೆ ಎನ್ನುವ ಆರೋಪ ಕೇಳಿಬಂದಿದ್ದು, ಈ ಹಿನ್ನೆಲೆ ಮನನೊಂದ ಶಾಂತವ್ವ ಶಾಸಕರ ಮನೆಯ ಎದುರೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಘಟನಾ ಸ್ಥಳಕ್ಕೆ ಬಾಗಲಕೋಟೆ ಉಪವಿಭಾಗಾಧಿಕಾರಿ ಜಯಾ ಭೇಟಿ ನೀಡಿ ಧರಣಿ ನಿರತರ ಅಹವಾಲು ಸ್ವೀಕರಿಸಿದರು. ಘಟನೆಯಿಂದ ನಗರದಾದ್ಯಂತ ರಸ್ತೆ ಸಂಚಾರ ಸಂಪೂರ್ಣ ಬಂದ್ ಮಾಡಲಾಗಿತ್ತು.

    https://www.youtube.com/watch?v=7jMD7P6juBM