Tag: gram panchayats

  • ಹರಿಯಾಣದಲ್ಲಿ ಕೋಮು ಸಂಘರ್ಷ: 3 ಜಿಲ್ಲೆಯ 14 ಹಳ್ಳಿಗಳಲ್ಲಿ ಮುಸ್ಲಿಮರಿಗೆ ಬಹಿಷ್ಕಾರ – ಜಿಲ್ಲಾಡಳಿತಕ್ಕೆ ಬಹಿರಂಗ ಪತ್ರ

    ಹರಿಯಾಣದಲ್ಲಿ ಕೋಮು ಸಂಘರ್ಷ: 3 ಜಿಲ್ಲೆಯ 14 ಹಳ್ಳಿಗಳಲ್ಲಿ ಮುಸ್ಲಿಮರಿಗೆ ಬಹಿಷ್ಕಾರ – ಜಿಲ್ಲಾಡಳಿತಕ್ಕೆ ಬಹಿರಂಗ ಪತ್ರ

    ಚಂಡೀಗಢ: ಹರಿಯಾಣದಲ್ಲಿ ಕೋಮು ಸಂಘರ್ಷ (Haryana Communal Violence) ದಿನದಿಂದ ದಿನಕ್ಕೆ ಉದ್ವಿಗ್ನಗೊಳ್ಳುತ್ತಿದೆ. ಈ ನಡುವೆ ಇಲ್ಲಿನ ಮೂರು ಜಿಲ್ಲೆಗಳ 14 ಹಳ್ಳಿಗಳಿಗೆ ಮುಸ್ಲಿಮರನ್ನ ಬಹಿಷ್ಕರಿಸಲು (Boycott Muslims) ನಿರ್ಧರಿಸಿರುವುದಾಗಿ 14 ಗ್ರಾಮ ಪಂಚಾಯಿತಿಗಳು ಪೊಲೀಸ್‌ ಇಲಾಖೆ ಮತ್ತು ಜಿಲ್ಲಾಡಳಿತಕ್ಕೆ ಬಹಿರಂಗ ಪತ್ರ ಬರೆದಿವೆ.

    ಕಳೆದ ಜುಲೈ 31 ರಂದು ಆರಂಭವಾದ ಕೋಮು ಘರ್ಷಣೆಯಿಂದ ಮಹೇಂದ್ರಗಢ, ಜಜ್ಜರ್‌ ಮತ್ತು ರೇವಾರಿ ಜಿಲ್ಲೆಗಳಲ್ಲೂ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ 14 ಗ್ರಾಮ ಪಂಚಾಯಿತಿಗಳು ಮುಸ್ಲಿಮರನ್ನು ಬಹಿಷ್ಕರಿಸುವ ನಿರ್ಧಾರ ತೆಗೆದುಕೊಂಡಿವೆ. ಕೋಮು ಘರ್ಷಣೆ ನಂತರ ಮುಸ್ಲಿಮರಿಗೆ ಮನೆ ಮತ್ತು ಅಂಗಡಿಗಳನ್ನ ಬಾಡಿಗೆಗೆ ನೀಡದಂತೆ ನಿರ್ಧಾರ ತೆಗೆದುಕೊಂಡಿದ್ದು ಪೊಲೀಸ್‌ ಇಲಾಖೆ (Police Department) ಹಾಗೂ ಜಿಲ್ಲಾಡಳಿತಕ್ಕೆ ಪತ್ರದ ಮೂಲಕ ತಿಳಿಸಲಾಗಿದೆ. ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಕಾರು ಅಪಘಾತ – ಇಬ್ಬರು ಮಕ್ಕಳು ಸೇರಿ 6 ಮಂದಿ ನೇಪಾಳಿ ಪ್ರಜೆಗಳು ದುರ್ಮರಣ

    ನುಹ್‌ ಜಿಲ್ಲೆಯಲ್ಲಿ ಸಂಭವಿಸಿದ ಕೋಮು ಸಂಘರ್ಷ ಸಂಭವಿಸಿದ ಕೆಲವೇ ಗಂಟೆಗಳಲ್ಲಿ ಗುರುಗ್ರಾಮ್‌, ಸೋನಿಪತ್‌ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಿಗೂ ವ್ಯಾಪಿಸಿತ್ತು. ಗಲಭೆಕೋರರ ಗುಂಪು ವಿವಿಧ ಪ್ರದೇಶಗಳಿಗೆ ನುಗ್ಗಿ ಹಾನಿಯುಂಟುಮಾಡಿತ್ತು. ಈವರೆಗೆ 50ಕ್ಕೂ ಹೆಚ್ಚು ಕೇಸ್‌ಗಳು ದಾಖಲಾಗಿದ್ದು 200ಕ್ಕೂ ಹೆಚ್ಚು ಜನರನ್ನ ಬಂಧಿಸಲಾಗಿದೆ. ಇದರೊಂದಿಗೆ ಹಿಂಸಾಚಾರಕ್ಕೆ ಕಡಿವಾಣ ಹಾಕಲಾಗುತ್ತಿದೆ ಎಂದು ಹರಿಯಾಣ ಪೊಲೀಸರು ತಿಳಿಸಿದ್ದಾರೆ.

    ಪತ್ರದಲ್ಲಿ ಏನಿದೆ?
    14 ಹಳ್ಳಿಗಳ ಹಿಂದೂ ಮುಖಂಡರು ಬರೆದಿರುವ ಪತ್ರದಲ್ಲಿ ಮುಸ್ಲಿಂ ಸಮುದಾಯದ ಜನರಿಗೆ ಬಾಡಿಗೆ ಮನೆ, ಅಂಗಡಿಗಳನ್ನು ಬಾಡಿಗೆ ನೀಡುವುದಿಲ್ಲ. ಇಲ್ಲಿನ ಸಂಸ್ಥೆಗಳಲ್ಲೂ ಕೆಲಸ ನೀಡುವುದನ್ನ ನಿರಾಕರಿಸುವಂತೆ ಮನವಿ ಮಾಡಿದ್ದೇವೆ. ಬೀದಿ ಬದಿ ವ್ಯಾಪಾರಿಗಳ ಗುರುತಿನ ಚೀಟಿಗಳನ್ನು ಪರಿಶೀಲಿಸಲಾಗುತ್ತದೆ. ಹಿಂದೆಯೂ ಈ ರೀತಿ ಘೋಷಣೆ ಮಾಡಲಾಗಿತ್ತು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನಮ್ಮ ಸಿಂಹ ರಾಹುಲ್‌ ಗಾಂಧಿ ಗೆದ್ದಿದ್ದಾರೆ – ಸಂಸತ್‌ ಸದಸ್ಯತ್ವ ಅನರ್ಹತೆ ವಾಪಸ್‌ ಬೆನ್ನಲ್ಲೇ ಸಿಹಿ ಹಂಚಿ INDIA ಒಕ್ಕೂಟ ಸಂಭ್ರಮ

    ಈ ನಡುವೆ ಗುರುಗ್ರಾಮ್‌ ನಗರ ಪಾಲಿಕೆ ಕೌನ್ಸಿಲರ್‌ ಬ್ರಹ್ಮ್ ಯಾದವ್, ಜನರು ತಮ್ಮ ಆಸ್ತಿಯನ್ನು ಇತರರಿಗೆ ಬಾಡಿಗೆ ಅಥವಾ ಮಾರಾಟ ಮಾಡುವ ಮುನ್ನ ಗುರುತಿನ ಸಾಕ್ಷಿಗಳನ್ನ ಪರಿಶೀಲಿಸಬೇಕು. ಜಿಲ್ಲೆಯ ವಾಲ್ಮೀಕಿ ಜನಾಂಗದವರೇ ಮಾಂಸದ ಅಂಗಡಿಗಳನ್ನ ನಡೆಸಬೇಕು. ಮುಸ್ಲಿಮರು ನಡೆಸುತ್ತಿರುವ ಅಂಗಡಿಗಳನ್ನು ಬಹಿಷ್ಕರಿಸಬೇಕು ಎಂದು ಕರೆ ನೀಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದೇಶದ ಟಾಪ್ ಹಳ್ಳಿಗಳಲ್ಲಿ ರಾಜ್ಯದ 46 ಗ್ರಾಮಗಳಿಗೆ ಸ್ಥಾನ: ನಿಮ್ಮ ಗ್ರಾಮ ಇದ್ಯಾ? ಇಲ್ಲಿ ಚೆಕ್ ಮಾಡಿ

    ದೇಶದ ಟಾಪ್ ಹಳ್ಳಿಗಳಲ್ಲಿ ರಾಜ್ಯದ 46 ಗ್ರಾಮಗಳಿಗೆ ಸ್ಥಾನ: ನಿಮ್ಮ ಗ್ರಾಮ ಇದ್ಯಾ? ಇಲ್ಲಿ ಚೆಕ್ ಮಾಡಿ

    ನವದೆಹಲಿ: ದೇಶದ ಟಾಪ್ 10 ಗ್ರಾಮಗಳ ಪಟ್ಟಿಯಲ್ಲಿ ರಾಜ್ಯದ ಐದು ಗ್ರಾಮಗಳು, ಟಾಪ್ 11-20ರ ಪಟ್ಟಿಯಲ್ಲಿ 41 ಗ್ರಾಮಗಳು ಸ್ಥಾನ ಪಡೆದಿವೆ.

    ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆ ದೇಶದ ಅತ್ಯುತ್ತಮ ಗ್ರಾಮಗಳ ಪಟ್ಟಿ ಬಿಡುಗಡೆ ಮಾಡಿದ್ದು, 100ರಲ್ಲಿ 87 ಅಂಕ ಪಡೆದ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಕೌಜಲಗಿ ದೇಶದಲ್ಲೇ ಐದನೇ ಸ್ಥಾನ ಪಡೆದಿದೆ.

    ಗ್ರಾಮೀಣಾಭಿವೃದ್ಧಿ ಇಲಾಖೆಯ ಅಂತ್ಯೋದಯ ಯೋಜನೆಯಡಿ ವಿವಿಧ ಮಾನದಂಡಗಳನ್ನು ಪರಿಗಣಿಸಿ ಒಟ್ಟು 41,617 ಗ್ರಾ.ಪಂ.ಗಳ ಮಾಹಿತಿಯನ್ನು ಕ್ರೋಢೀಕರಿಸಿ ಈ ಶ್ರೇಯಾಂಕ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. 92 ಅಂಕ ಪಡೆದ ತೆಲಂಗಾಣದ ತೆಲ್ಲಾಪುರ ದೇಶದಲ್ಲೇ ಪ್ರಥಮ ಸ್ಥಾನ ಪಡೆದುಕೊಂಡಿದ್ದರೆ, ಆಂಧ್ರದ ಚಿತ್ತೂರು ಜಿಲ್ಲೆಯ ಕಲಿಕಿರಿ ಜಿಲ್ಲೆಯ ಪರಪಟ್ಲಕ್ಕೆ ಎರಡನೇ ಸ್ಥಾನ ಸಿಕ್ಕಿದೆ.

    100 ಅಂಕ ಹೇಗೆ?
    ಪ್ರಾಥಮಿಕ ಅಂಶ 4, ಮೂಲ ಸೌಕರ್ಯ 64, ಆರ್ಥಿಕ ಅಭಿವೃದ್ಧಿ 4, ಆರೋಗ್ಯ 18, ಮಹಿಳಾ ಸಬಲೀಕರಣ 7, ಆರ್ಥಿಕ ಒಳಗೊಳ್ಳುವಿಕೆ 3 ಅಂಕ ನಿಗದಿ ಪಡಿಸಲಾಗಿತ್ತು.

    ಪಟ್ಟಿಯಲ್ಲಿರುವ ರಾಜ್ಯದ ಗ್ರಾಮಗಳು:
    ಟಾಪ್ -10 ಪಟ್ಟಿ
    ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಕೌಜಲಗಿ 87 ಅಂಕಗಳೊಂದಿಗೆ 5ನೇ ಸ್ಥಾನ, ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಗುಜ್ಜಾಡಿ 85 ಅಂಕಗಳೊಂದಿಗೆ 7ನೇ ಸ್ಥಾನ, ಮಂಡ್ಯದ ಮಳವಳ್ಳಿ ತಾಲೂಕಿನ ಕಿರುಗಾವಲು 84 ಅಂಕಗಳೊಂದಿಗೆ 8ನೇ ಸ್ಥಾನ, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ನೆಲ್ಯಾಡಿ ಮತ್ತು ಮಂಡ್ಯದ ಕೆರಗೋಡು 83 ಅಂಕಗಳೊಂದಿಗೆ 9ನೇ ಸ್ಥಾನ ಪಡೆದುಕೊಂಡಿವೆ.

     

     

    ಕರ್ನಾಟಕದ ಟಾಪ್ 20 ಗ್ರಾಮಗಳು
    ಅಗ್ರ 20ರೊಳಗೆ ರಾಜ್ಯದ 41 ಗ್ರಾಮಗಳಿದ್ದು ದಕ್ಷಿಣ ಕನ್ನಡದ 14, ಉಡುಪಿಯ 10 ಮತ್ತು ಮಂಡ್ಯದ 6 ಗ್ರಾಮಗಳು ಸ್ಥಾನ ಪಡೆದುಕೊಂಡಿವೆ. ಬಾಗಲಕೋಟೆಯ ಕಲದಗಿ 80 ಅಂಕಗಳೊಂದಿಗೆ 12ನೇ ಸ್ಥಾನ ಸಿಕ್ಕಿದರೆ, ಉಡುಪಿಯ ಕೆಮ್ಮಣ್ಣು, ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಮಲವೂರು 79 ಅಂಕಗಳೊಂದಿಗೆ 13ನೇ ಸ್ಥಾನ ಪಡೆದಿದೆ.

    ಮಂಡ್ಯದ ಮಳವಳ್ಳಿಯ ಹಲಗೂರು 78 ಅಂಕಗಳೊಂದಿಗೆ 14ನೇ ಶ್ರೇಯಾಂಕ, ಉಡುಪಿಯ ಚೆರ್ಕಾಡಿ, ಮೈಸೂರಿನ ನಂಜನಗೂಡು ತಾಲೂಕಿನ ಹದಿನಾರು, ಗದಗದ ಹುಲ್ಕೋಟಿ, ದಕ್ಷಿಣ ಕನ್ನಡದ ಬಂಟ್ವಾಳದ ಕೋಳ್ನಾಡು, ಮಂಗಳೂರು ತಾಲೂಕಿನ ಪಾವೂರು 15ನೇ ಸ್ಥಾನ ಪಡೆದಿವೆ.

    16ನೇ ಸ್ಥಾನ:
    ಮಂಡ್ಯದ ಶ್ರೀರಂಗಪಟ್ಟಣದ ಬೆಳಗೊಳ, ದಕ್ಷಿಣ ಕನ್ನಡದ ಸುಳ್ಯ ತಾಲೂಕಿನ ಬೆಳ್ಳಾರೆ, ದಕ್ಷಿಣ ಕನ್ನಡ ಬೆಳ್ತಂಗಡಿ ತಾಲೂಕಿನ ಉಜಿರೆ, ಚಿಕ್ಕಮಗಳೂರಿನ ಕೊಪ್ಪ ತಾಲೂಕಿನ ಹರಿಹರಪುರ, ಬೆಂಗಳೂರಿನ ಎಚ್. ಗೊಲ್ಲಹಳ್ಳಿ, ಬೆಳಗಾವಿಯ ಅಥಣಿ ತಾಲೂಕಿನ ಶಿರಗುಪ್ಪಿ 16 ಅಂಕಗಳೊಂದಿಗೆ 16ನೇ ಶ್ರೇಯಾಂಕ ಸಿಕ್ಕಿದೆ.

    17ನೇ ಸ್ಥಾನ:
    ಉಡುಪಿಯ ಬೆಳಪು, ಹಾಸನದ ಬೇಲೂರು ತಾಲೂಕಿನ ಘಟ್ಟದಹಳ್ಳಿ, ಚಾಮರಾಜನಗರದ ಯಳಂದೂರು ವಿಭಾಗದ ಹೊನ್ನೂರು, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಕಬಕ, ಮಂಡ್ಯದ ಕೀಲಾರ, ದಕ್ಷಿಣ ಕನ್ನಡದ ಬಂಟ್ವಾಳದ ಕುರ್ನಾಡು, ಉಡುಪಿಯ ಮುದರಂಗಡಿ 75 ಅಂಕಗಳೊಂದಿಗೆ 17ನೇ ಸ್ಥಾನವನ್ನು ಪಡೆದುಕೊಂಡಿದೆ.

    18ನೇ ಸ್ಥಾನ:
    ಉಡುಪಿಯ ಕುಂದಾಪುರ ತಾಲೂಕಿನ ಅಂಪಾರು, ಬೆಂಗಳೂರಿನ ಆನೇಕಲ್‍ನ ದೊಮ್ಮಸಂದ್ರ, ಬೀದರ್‍ನ ಬಸವಕಲ್ಯಾಣದ ಗೊರ್ತ ಬಿ, ಧಾರವಾಡದ ಹೆಬ್ಬಳ್ಳಿ, ಮೈಸೂರು ಜಿಲ್ಲೆಯ ಟಿ.ನರಸೀಪುರದ ಹೊಳೆಸಾಲು, ಉಡುಪಿಯ ಪಡುಬಿದ್ರಿ ಮತ್ತು ಪೆರ್ಡೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಎಡಪದವು 74 ಅಂಕಗಳೊಂದಿಗೆ 18ನೇ ಶ್ರೇಯಾಂಕ ಪಡೆದಿದೆ.

    19ನೇ ಸ್ಥಾನ:
    ದಕ್ಷಿಣ ಕನ್ನಡದ ಮಂಗಳೂರಿನ ಅಂಬ್ಲಾ ಮೊಗ್ರು, ಸುಳ್ಯ ತಾಲೂಕಿನ ಸಂಪಾಜೆ, ಗದಗದ ಮುಂಡರ್ಗಿಯ ದಂಬಾಲ್, ಕಲಬುರಗಿ ಜಿಲ್ಲೆಯ ಅಫ್ಜಲಪುರ ತಾಲೂಕಿನ ಮಷಾಲ್, ಉಡುಪಿಯ ಉದ್ಯಾವರ 73 ಅಂಕಗಳನ್ನು ಪಡೆದು 19ನೇ ಶ್ರೇಯಾಂಕ ಪಡೆದಿದೆ.

    20ನೇ ಸ್ಥಾನ
    ಮಂಡ್ಯದ ಮದ್ದೂರಿನ ಬೆಸಗರಹಳ್ಳಿ, ಉಡುಪಿಯ ಉದ್ಯಾವರ ಮತ್ತು ಕುರ್ಕಾಲು, ಕುಂದಾಪುರದ ವಂಡ್ಸೆ , ದ.ಕ ದ ಬಂಟ್ವಾಳದ ಪುದು ಮತ್ತು ರಾಯಿ, ಮಂಗಳೂರಿನ ಪೆರ್ಮುದೆ ಗ್ರಾಮಗಳು 72 ಅಂಕ ಪಡೆದು ಪಟ್ಟಿಯಲ್ಲಿ 20ನೇ ಸ್ಥಾನ ಸಿಕ್ಕಿದೆ.