Tag: government

  • ಈ ಸರ್ಕಾರದ ಅಂತ್ಯ ಕಾಲ ಬರುತ್ತಿದೆ: ಡಿಕೆಶಿ

    ಈ ಸರ್ಕಾರದ ಅಂತ್ಯ ಕಾಲ ಬರುತ್ತಿದೆ: ಡಿಕೆಶಿ

    – ಕೆಂಪೇಗೌಡ ಕಟ್ಟಿದ ಆಸ್ತಿ ರಾಜ್ಯದ ಜನರ ಆಸ್ತಿ

    ಚಿಕ್ಕಮಗಳೂರು: ಬೆಂಗಳೂರು ನಗರಕ್ಕೆ ನಮ್ಮ ರೈತರನ್ನ ಬಿಟ್ಟಿಲ್ಲ. ರೈತರ ಕೋಪ-ತಾಪ-ಶಾಪ ಎಲ್ಲಾ ಈ ಸರ್ಕಾರಕ್ಕೆ ತಟ್ಟುತ್ತದೆ. ಈ ಸರ್ಕಾರಕ್ಕೆ ಅಂತ್ಯದ ದಿನ ಬರುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಮಗಳ ಮದುವೆಗೆ ಆಹ್ವಾನ ನೀಡಲು ಜಿಲ್ಲೆಗೆ ಬಂದಿದ್ದ ಡಿಕೆಶಿ, ಶೃಂಗೇರಿ ಶಾರದಾಂಬೆ ಹಾಗೂ ಗುರುಗಳು, ರಂಭಾಪುರಿ ಪೀಠದ ಗುರುಗಳು ಹಾಗೂ ಗೌರಿಗದ್ದೆ ಆಶ್ರಮದ ಗುರುಗಳ ಆಶೀರ್ವಾದ ಪಡೆದರು. ಇದೇ ವೇಳೆ ಕೊಪ್ಪ ತಾಲೂಕಿನ ಹರಿಹರಪುರ ಸಮೀಪದ ಗೌರಿಗದ್ದೆ ಆಶ್ರಮದಲ್ಲಿ ವಿನಯ್ ಗುರೂಜಿ ಆಶೀರ್ವಾದ ಪಡೆದು ಮಾತನಾಡಿದ ಅವರು, ರೈತರ ಮೇಲೆ ಲಾಠಿ ಚಾರ್ಜ್ ಮಾಡಿದ್ದಾರೆ. ಇದು ಖಂಡನೀಯ. ಅವರು ರ್ಯಾಲಿ ಮಾಡಿಕೊಂಡು ಪ್ರತಿಭಟನೆ ಮಾಡ್ತಿದ್ರು. ಅವರ್ಯಾರು ಕಾನೂನು ಭಂಗ ಮಾಡಿರಲಿಲ್ಲ. ರೈತ ವಿರೋಧಿ ಸರ್ಕಾರ ಅನ್ನೋದಕ್ಕೆ ನಮ್ಮ ಸಂವಿಧಾನದ ಪ್ರಥಮ ದಿನ ಗಣರಾಜ್ಯೋತ್ಸವದಂದು ಇದಕ್ಕೆ ಸಾಕ್ಷಿ ನುಡಿಯನ್ನ ಮಾಡಿದ್ದಾರೆ ಎಂದರು.

    ರಾಜ್ಯದಲ್ಲೂ ಕೂಡ ಇದೆ ಆಗಿದೆ. ದೆಹಲಿಯಲ್ಲೇ ಬಿಟ್ಟಿರುವಾಗ ಇವರಿಗೇನು ಬಂತು. ಯಾಕೆ ಒಳಗೆ ಬರಬಾರದು. ಅವರೆಲ್ಲಾ ಇಲ್ಲ ಅಂದ್ರೆ ಬೆಂಗಳೂರಲ್ಲಿ ಇವರು ಊಟ ಮಾಡುತ್ತಿದ್ರಾ ಎಂದು ಪ್ರಶ್ನಿಸಿದ್ದಾರೆ. ಇವರೆಲ್ಲಾ ರೈತರ ಮಕ್ಕಳಲ್ವಾ. ನಾನು ರೈತರ ಮಗ ಹಸಿರು ಶಾಲು ಹಾಕಿಕೊಂಡು ಸರ್ಕಾರ ಮಾಡುತ್ತೇನೆ ಎಂದು ಹೇಳಿ ರೈತ್ರು ಬೆಂಗಳೂರು ಬರಲು ಯಾಕೆ ಬಿಡಲ್ಲ. ಬರೀ ಮರ್ಸಿಡೀನ್ ಬೆಂಜ್, ದೊಡ್ಡ ಕಾರು, ಸಾಹುಕಾರರ ಕಾರೇ ಓಡಾಡಬೇಕಾ. ಬೆಂಗಳೂರಲ್ಲಿ ರೈತರ ಟ್ರ್ಯಾಕ್ಟರ್ ಓಡಾಡಲಿ. ರೈತರು ಬೆಂಗಳೂರಲ್ಲಿ ಪ್ರತಿಭಟನೆ ಮಾಡಲಿ. ಏನು ತಪ್ಪಿದೆ. ರೈತರ ಮಕ್ಕಳು ಬೆಂಗಳೂರು ಆಸ್ತಿ. ಕೆಂಪೇಗೌಡ ಕಟ್ಟಿದೆ ಬೆಂಗಳೂರು ರಾಜ್ಯದ ಜನತೆ ಆಸ್ತಿ. ಬೆಂಗಳೂರು ಬರೀ ಸರ್ಕಾರ ನಡೆಸೋರ ಆಸ್ತಿಯಲ್ಲ ಎಂದು ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.

    ಸಿ.ಟಿ ರವಿಗೆ ಏನೋ ಸಮಸ್ಯೆ ಇದ್ದಂತೆ ಕಾಣುತ್ತೆ. ಓಲೈಕೆ ಮಾಡಿಕೊಳ್ಳಬೇಕು ಏನೋ ಭಾಷಣ ಮಾಡುತ್ತಿದ್ದಾರೆ ಅಷ್ಟೆ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಪ್ರತಿ ದಿನ ಈ ಸರ್ಕಾರದ ವೈಫಲ್ಯವನ್ನ ಜನತೆ ಮುಂದಿಡುವ ಕೆಲಸವನ್ನ ವಿರೋಧ ಪಕ್ಷಗಳು, ಸಂಘಟನೆಗಳು ಮಾಡುತ್ತವೆ ಅದರಲ್ಲಿ ತಪ್ಪೇನಿದೆ. ಇವರು ಮಾಡಿಲ್ವ. ಇವರು ಮಾಡಿದಂತೆ ಎಲ್ಲರೂ ಮಾಡೋದು ಎಂದರು.

  • ಶಿವಮೊಗ್ಗ ದುರಂತದ ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ: ಬಿಎಸ್‍ವೈ

    ಶಿವಮೊಗ್ಗ ದುರಂತದ ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ: ಬಿಎಸ್‍ವೈ

    – ಹೆಚ್‍ಡಿಕೆ, ಪ್ರಹ್ಲಾದ್ ಜೋಷಿ ಸಂತಾಪ

    ಬೆಂಗಳೂರು: ಶಿವಮೊಗ್ಗ ಜಿಲ್ಲೆಯ ಹುಣಸೋಡು ಬಳಿ ನಿನ್ನೆ ರಾತ್ರಿ ಸಂಭವಿಸಿದ ಭಾರೀ ಅನಾಹುತದಲ್ಲಿ ಅನೇಕ ಮಂದಿ ಸಾವನ್ನಪ್ಪಿದ ಕುರಿತಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.

    ಮೃತರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತಾ, ಅವರ ಕುಟುಂಬದವರಲ್ಲಿ ತೀವ್ರ ಸಂತಾಪಗಳನ್ನು ವ್ಯಕ್ತಪಡಿಸುತ್ತೇನೆ. ಗಾಯಗೊಂಡವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಅವರೆಲ್ಲರೂ ಶೀಘ್ರದಲ್ಲೇ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ. ಈ ದುರ್ಘಟನೆಯ ಕುರಿತಾಗಿ ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ನಿಶ್ಚಿತ ಎಂದು ಸಿಎಂ ಬಿಎಸ್‍ವೈ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.

    ಶಿವಮೊಗ್ಗದ ಅಬ್ಬಲಗೆರೆಯ ಹುಣಸೋಡು ಗ್ರಾಮದ ಕಲ್ಲುಕ್ವಾರಿಯಲ್ಲಿ ಜಿಲಿಟಿನ್ ಕಡ್ಡಿಗಳ ಸ್ಫೋಟದಿಂದ ಅನೇಕ ಕಾರ್ಮಿಕರು ಸಾವು ಕಂಡಿರುವುದು ಅತ್ಯಂತ ನೋವಿನ ಸಂಗತಿ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ. ಈ ಸ್ಫೋಟ ದುರಂತದ ಬಗ್ಗೆ ರಾಜ್ಯ ಸರ್ಕಾರ ತನಿಖೆ ನಡೆಸಬೇಕು. ಬಡ ಕಾರ್ಮಿಕರ ಜೀವ ಹರಣಕ್ಕೆ, ಈ ದುರ್ಘಟನೆಗೆ ಕಾರಣರಾದವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಇಂತಹ ಅವಘಡಗಳು ಮರುಕಳಿಸದಂತೆ ಎಚ್ಚರವಹಿಸಬೇಕು ಎಂದು ಆಗ್ರಹಿಸಿ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

    ಶಿವಮೊಗ್ಗ ತಾಲೂಕಿನ ಹುಣಸೋಡು ಗ್ರಾಮದಲ್ಲಿ ಡೈನಾಮೈಟ್ ಲಾರಿ ಸ್ಫೋಟಗೊಂಡು 6ಕ್ಕೂ ಹೆಚ್ಚು ಕಾರ್ಮಿಕರು ಸಾವನ್ನಪ್ಪಿದ್ದು ದುರದೃಷ್ಟಕರ. ಮೃತರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತೇನೆ ಹಾಗೂ ಅವರ ಕುಟಂಬದವರಿಗೆ ನನ್ನ ಸಂತಾಪಗಳನ್ನು ಸೂಚಿಸುತ್ತೇನೆ. ಈ ದುರ್ಘಟನೆಯಲ್ಲಿ ಗಾಯಗೊಂಡವರು ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟ್ವೀಟ್ ಮಾಡಿದ್ದಾರೆ.

  • ಗರ್ಭಿಣಿಯನ್ನ 7 ಕಿ.ಮೀ ಜೋಳಿಗೆಯಲ್ಲಿ ಹೊತ್ತು ಸಾಗಿದ ಸ್ವಯಂ ಸೇವಕರು

    ಗರ್ಭಿಣಿಯನ್ನ 7 ಕಿ.ಮೀ ಜೋಳಿಗೆಯಲ್ಲಿ ಹೊತ್ತು ಸಾಗಿದ ಸ್ವಯಂ ಸೇವಕರು

    ಹೈದರಾಬಾದ್: ಹೆರಿಗೆ ನೋವಿನಿಂದ ಬಳಲುತ್ತಿರುವ ಗರ್ಭಿಣಿಯನ್ನು 7 ಕಿಲೋ ಮೀಟರ್ ವೆರೆಗೆ ಸ್ವಯಂ ಸೇವಕರು ಹೊತ್ತುಕೊಂಡು ಹೋಗಿ, ಅಂಬುಲೆನ್ಸ್ ಗೆ ತಲುಪಿಸಿರುವ ಘಟನೆ ಆಂಧ್ರ ಪ್ರದೇಶದ ವಿಜಯನಗರಂ ಜಿಲ್ಲೆಯ ಬೊಂಡಪಲ್ಲಿ ಪ್ರದೇಶದಲ್ಲಿ ನಡೆದಿದೆ.

    ಬುಡಕಟ್ಟು ಸಮುದಾಯದ ತುಂಬು ಗರ್ಭಿಣಿಯೊಬ್ಬರಿಗೆ ನಿನ್ನೆ ಸಂಜೆ ಸುಮಾರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಕೂಡಲೇ ಮಹಿಳೆಯ ಪತಿ ಕಾಮೇಶ್ 108 ಗೆ ಕರೆಮಾಡಿದ್ದಾರೆ. ಆದರೆ ಇವರು ಇರುವಲ್ಲಿಗೆ ಅಂಬುಲೆನ್ಸ್ ಬರಲು ಸರಿಯಾದ ಮಾರ್ಗ ಇರಲಿಲ್ಲ. ನಂತರ ಪಂಚಾಯತ್ ಕಾರ್ಯದರ್ಶಿ ಗಾಂಧವಪುರ ಕೃಷ್ಣ ಎಂಬವರು ತಕ್ಷಣವೇ ದ್ವಿಚಕ್ರವಾಹನವನ್ನು ಗ್ರಾಮಕ್ಕೆ ಕಳುಹಿಸಿದ್ದಾರೆ. ಆದರೆ ಮಹಿಳೆಗೆ ಕುಳಿತುಕೊಳ್ಳಲು ಸಾಧ್ಯವಾಗಿಲ್ಲ.

    ಗೊಲ್ಲಪಲೆಂ ಗ್ರಾಮದಲ್ಲಿರುವ ಸ್ವಯಂ ಸೇವಕರಾದ ಶ್ರೀಹರ್ಷ ಮತ್ತು ಬಾಲಾಜಿ ಜೋಳಿಗೆಯಲ್ಲಿ ಮಹಿಳೆಯನ್ನು ಕರೆದುಕೊಂಡು ಹೋಗಲು ಸಹಾಯ ಮಾಡಿದ್ದಾರೆ. ಈ ಇಬ್ಬರು ಸ್ವಯಂ ಸೇವಕರು ಮಹಿಳೆಯನ್ನು ಹೊತ್ತುಕೊಂಡು ಅಂಬುಲೆನ್ಸ್ ಇರುವಲ್ಲಿಗೆ ಸಾಗಿಸಿದ್ದಾರೆ. ಅಲ್ಲಿಂದ 108 ವಾಹನದಲ್ಲಿ ಕರೆದುಕೊಂಡು ಹೋಗಿ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

  • ಹೊಸ ರೂಪದಲ್ಲಿ ಮತ್ತೆ ವಿದ್ಯಾಗಮ ಜಾರಿ – ಜಿಲ್ಲಾ ಪಂಚಾಯತ್ ಸಿಇಒಗೆ ಮೇಲುಸ್ತುವಾರಿ

    ಹೊಸ ರೂಪದಲ್ಲಿ ಮತ್ತೆ ವಿದ್ಯಾಗಮ ಜಾರಿ – ಜಿಲ್ಲಾ ಪಂಚಾಯತ್ ಸಿಇಒಗೆ ಮೇಲುಸ್ತುವಾರಿ

    – ಮಕ್ಕಳಿಗೆ ದಿನ ಬಿಟ್ಟು ದಿನ ತರಗತಿ

    ಬೆಂಗಳೂರು: ಮೂರು ತಿಂಗಳ ಬಳಿಕ ವಿದ್ಯಾಗಮ ತರಗತಿಗಳು ಮತ್ತೆ ಆರಂಭವಾಗುತ್ತದೆ. ಪರಿಷ್ಕೃತ ರೂಪದಲ್ಲಿ ವಿದ್ಯಾಗಮ ಜಾರಿಗೆ ತರಲು ಸರ್ಕಾರ ಆದೇಶ ನೀಡಿದೆ. ಹೀಗಾಗಿ ಹೊಸ ಮಾರ್ಗಸೂಚಿ, ನಿಯಮದಲ್ಲಿ ವಿದ್ಯಾಗಮ ಶುರುವಾಗುತ್ತದೆ. ಹಾಗಿದ್ರೆ ಪರಿಷ್ಕೃತ ವಿದ್ಯಾಗಮ ಕ್ಲಾಸ್‍ಗಳಿಗೆ ಮಾರ್ಗಸೂಚಿ ಏನು..?, ಹೇಗಿದೆ ಪರಿಷ್ಕೃತ ವಿದ್ಯಾಗಮ…? ಎಂಬುದರ ಕಂಪ್ಲೀಟ್ ವರದಿ ಇಲ್ಲಿದೆ.

    ವಿದ್ಯಾಗಮ ಮಾರ್ಗಸೂಚಿಗಳೇನು..?
    ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳ ಆವರಣದಲ್ಲಿ ವಿದ್ಯಾಗಮ ನಡೆಯುತ್ತದೆ. ಆನ್‍ಲೈನ್, ಡಿಡಿ ವಾಹಿನಿಯ ಪಾಠಗಳನ್ನು ಮುಂದುವರಿಸಬೇಕು. ಆನ್‍ಲೈನ್ ಕ್ಲಾಸ್ ಹಾಜರಾಗಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಅರ್ಧ ದಿನ ಪಾಠ ಮಾಡಬೇಕು.

    ಪೋಷಕರ ಲಿಖಿತ ಒಪ್ಪಿಗೆಯೊಂದಿಗೆ ಮಕ್ಕಳು ವಿದ್ಯಾಗಮಕ್ಕೆ ಹಾಜರಾಗಬೇಕು. ಪ್ರತಿ ಶಾಲೆಯಲ್ಲಿ ಮಕ್ಕಳಿಗೆ ಥರ್ಮಲ್ ಸ್ಕ್ಯಾನರ್ ಮೂಲಕ ಪರೀಕ್ಷೆ ನಡೆಸಬೇಕು. ಜ್ವರ, ಕೆಮ್ಮು, ನೆಗಡಿ, ಕೊರೊನಾ ಲಕ್ಷಣಗಳಿರುವ ವಿದ್ಯಾರ್ಥಿಗಳು ಹಾಜರಾಗುವಂತಿಲ್ಲ. ಪ್ರತಿ ವಿದ್ಯಾರ್ಥಿ ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು.

    ಶಾಲೆಗಳಲ್ಲಿ ಸ್ಯಾನಿಟೈಸರ್, ಸೋಪ್, ಇತರೆ ನೈರ್ಮಲೀಕರಣ ವ್ಯವಸ್ಥೆ ಮಾಡಬೇಕು. ಗ್ರಾಪಂ, ನಗರಸಭೆ, ಪುರಸಭೆಗಳು ಈ ವ್ಯವಸ್ಥೆ ಮಾಡಬೇಕು. ವಿದ್ಯಾರ್ಥಿಗಳು ಬೇರೆ ಕಡೆ ಇದ್ದಲ್ಲಿ, ಸನಿಹದ ಶಾಲೆಗೆ ತೆರಳಿ ವಿದ್ಯಾಗಮದಲ್ಲಿ ಪಾಲ್ಗೊಳ್ಳಬಹುದು. ಶಿಕ್ಷಕರು, ಕೊಠಡಿಗಳ ಸಂಖ್ಯೆಗೆ ಅನುಗುಣವಾಗಿ ಮಕ್ಕಳನ್ನು ಗುಂಪುಗಳಾಗಿ ವಿಂಗಡಣೆ ಮಾಡಬೇಕು.

    ಪ್ರತಿ ಗುಂಪಿನಲ್ಲಿ ಗರಿಷ್ಠ 15-20 ವಿದ್ಯಾರ್ಥಿಗಳು ಇರಬಹುದು, 7ರಿಂದ 8 ಗುಂಪು ಇರಬೇಕು. ಕೊಠಡಿ ಲಭ್ಯ ಇಲ್ಲದೇ ಇದ್ದಲ್ಲಿ ವಾಚನಾಲಯ, ಪ್ರಯೋಗಾಲಯ, ವರಂಡಾಗಳಲ್ಲಿ ವಿದ್ಯಾಗಮ ನಡೆಸಬೇಕು. ಪಾಳಿ ಪದ್ದತಿಯಲ್ಲಿ ವಿದ್ಯಾಗಮ, ಪ್ರತಿ ತರಗತಿಯ ಅವಧಿ 45 ನಿಮಿಷ ಇರಬೇಕು. ಬೆಳಗಿನ ಪಾಳಿಯಲ್ಲಿ 3 ತರಗತಿ, ಮಧ್ಯಾಹ್ನದ ಪಾಳಿಯಲ್ಲಿ 3 ತರಗತಿ ನಡೆಸಬೇಕು.

    ವಿದ್ಯಾರ್ಥಿಗಳು ಮನೆಯಿಂದಲೇ ಕುಡಿಯುವ ನೀರು ತರಲು ಸೂಚಿಸಬೇಕು. ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರು, ಶೌಚಾಲಯಗಳ ನೈರ್ಮಲ್ಯ ವ್ಯವಸ್ಥೆ ಕಲ್ಪಿಸಬೇಕು. ವಿದ್ಯಾರ್ಥಿಗಳಿಗೆ ಸೋಂಕು ಲಕ್ಷಣ ಕಂಡು ಬಂದಲ್ಲಿ ತುರ್ತು ಚಿಕಿತ್ಸೆಗೆ ವ್ಯವಸ್ಥೆ ಮಾಡಬೇಕು. ಹಾಗೂ ಜಿಲ್ಲಾ ಪಂಚಾಯತ್ ಸಿಇಓಗೆ ಮೇಲ್ವೀಚಾರಣೆ, ಉಸ್ತುವಾರಿ ಹೊಣೆ ವಹಿಸಬೇಕು.

    ವಿದ್ಯಾಗಮ ಯಾವ್ಯಾವ ತರಗತಿಗೆ ನಡೆಯುತ್ತೆ?
    10ನೇ ತರಗತಿ: ಪ್ರತಿದಿನವೂ ವಿದ್ಯಾಗಮ ಕ್ಲಾಸ್ ನಡೆಯುತ್ತೆ. 8 ತಂಡಗಳಿಂದ ವಿದ್ಯಾರ್ಥಿಗಳಿಗೆ ಬೋಧನೆ ನೀಡಲಾಗುತ್ತದೆ. ಎಸ್‍ಎಸ್‍ಎಲ್‍ಸಿ ಪರೀಕ್ಷೆ ಹಿನ್ನೆಲೆ ಪ್ರತಿದಿನ ತರಗತಿ ನಡೆಸಲಾಗುತ್ತದೆ.

    9ನೇ ತರಗತಿ: ದಿನ ಬಿಟ್ಟು ದಿನ ಅಂದರೆ ಸೋಮವಾರ, ಬುಧವಾರ, ಶುಕ್ರವಾರ ವಿದ್ಯಾಗಮ ಕ್ಲಾಸ್ ನಡೆಯಲಿದ್ದು, ವಾರದಲ್ಲಿ 3 ದಿನ ಅಷ್ಟೇ ವಿದ್ಯಾಗಮ ತರಗತಿ ನಡೆಯುತ್ತದೆ.

    8ನೇ ತರಗತಿ: ಮಂಗಳವಾರ, ಗುರುವಾರ ಪಾಠ ಬೋಧನೆ ಮಾಡಲಾಗುತ್ತದೆ. ವಾರದಲ್ಲಿ 2 ದಿನ ಮಾತ್ರ ವಿದ್ಯಾಗಮ ತರಗತಿ ನಡೆಯುತ್ತದೆ.

    1-5 ನೇ ತರಗತಿ: ದಿನ ಬಿಟ್ಟು ದಿನ ತರಗತಿ ನಡೆಸಲಾಗುತ್ತದೆ. 1- 3ರವರೆಗೆ ಸೋಮವಾರ, ಬುಧವಾರ, ಶುಕ್ರವಾರ ತರಗತಿಗಖಳು ನಡೆದರೆ, 4-5 ನೇ ತರಗತಿ- ಮಂಗಳವಾರ, ಗುರುವಾರ, ಶನಿವಾರ ಕ್ಲಾಸ್ ಇರುತ್ತದೆ. 1-8ನೇ ಕ್ಲಾಸ್ ಹೊಂದಿರೋ ಶಾಲೆಯಲ್ಲಿಯೂ ದಿನ ಬಿಟ್ಟು ದಿನ ತರಗತಿ ನಡೆಯುತ್ತದೆ. 1-5ನೇ ತರಗತಿವರೆಗೆ ಸೋಮವಾರ, ಬುಧವಾರ, ಶುಕ್ರವಾರ ಕ್ಲಾಸ್ ಇದ್ದರೆ, 6-8ನೇ ತರಗತಿವರೆಗೆ ಮಂಗಳವಾರ, ಗುರುವಾರ, ಶನಿವಾರ ತರಗತಿ ಇರುತ್ತದೆ.

    ಪುನರಾರಂಭಿಸಲು ಕಾರಣಗಳೇನು..?
    ಶಾಲೆ ಆರಂಭದವರೆಗೆ ಶಿಕ್ಷಣ ತಲುಪಿಸುವ ಉದ್ದೇಶವಾಗಿದೆ. ಖಾಸಗಿ ಶಾಲೆ ಮಕ್ಕಳಿಗೆ ಆನ್‍ಲೈನ್ ಕ್ಲಾಸ್, ಸರ್ಕಾರಿ ಶಾಲಾ ಮಕ್ಕಳಿಗೆ ವಿದ್ಯಾಗಮ ಮೂಲಕ ಮಕ್ಕಳ ಕಲಿಕೆ ಮೇಲೆ ಪರಿಣಾಮ ಬೀಳದಂತೆ ತಡೆಯೋದು. ಬಾಲ್ಯವಿವಾಹ ಹೆಚ್ಚಳ ತಡೆಗೆ ವಿದ್ಯಾಗಮ ಮರು ಜಾರಿ ಮಾಡಲಾಗುತ್ತಿದೆ.

    ಗ್ರಾಮೀಣ ಭಾಗದಲ್ಲಿ ಬಾಲ ಕಾರ್ಮಿಕ ಪದ್ಧತಿ ತಡೆಯಲು ಮರುಜಾರಿ. ಗ್ರಾಮೀಣ ಭಾಗದಲ್ಲಿ ಆನ್‍ಲೈನ್ ಶಿಕ್ಷಣ, ದೂರದರ್ಶನ ಕಲಿಕೆಯಿಂದ ವಂಚಿತ, ವಿದ್ಯಾಗಮದಿಂದ ಮಕ್ಕಳಿಗೆ ನಿತ್ಯ ಶಿಕ್ಷಣ, ಕಲಿಕಾ ಸಾಮರ್ಥ್ಯ ಸಮಚಿತ್ತದಲ್ಲಿಡಲು ವಿದ್ಯಾಗಮ ಮರುಜಾರಿ ಮಾಡಲಾಗುತ್ತಿದೆ.

  • 4 ದಿನಗಳ ಬಸ್ ಮುಷ್ಕರದಿಂದ ಬರೋಬ್ಬರಿ 53 ಕೋಟಿ ರೂ. ನಷ್ಟ..!

    4 ದಿನಗಳ ಬಸ್ ಮುಷ್ಕರದಿಂದ ಬರೋಬ್ಬರಿ 53 ಕೋಟಿ ರೂ. ನಷ್ಟ..!

    ಬೆಂಗಳೂರು: ಸಾರಿಗೆ ನೌಕರರನ್ನಾಗಿ ಮಾಡುವಂತೆ ಒತ್ತಾಯಿಸಿ ನಡೆಸಿದ ಮುಷ್ಕರದಿಂದಾಗಿ 4 ಸಾರಿಗೆ ನಿಗಮಗಳಿಗೆ ಬರೋಬ್ಬರಿ 53 ಕೋಟಿ ರೂ. ನಷ್ಟವಾಗಿದೆ.

    ಬಿಎಂಟಿಸಿಗೆ 4 ದಿನದಲ್ಲಿ 8.4 ಕೋಟಿ ಹಾಗೂ ಕೆಎಸ್‌ಆರ್‌ಟಿಸಿಗೆ 8 ಕೋಟಿ ಲಾಸ್ ಆಗಿದೆ. ಮೊದಲೇ ನಷ್ಟದಲ್ಲಿರೋ ಸಾರಿಗೆ ನಿಗಮಗಳು ಇದೀಗ ನೌಕರರ ಮುಷ್ಕರದಿಂದಾಗಿ ಮತ್ತಷ್ಟು ಲಾಸ್ ಉಂಟಾಗಿದೆ.

    ನಾಲ್ಕು ನಿಗಮದಲ್ಲಿ 1 ಲಕ್ಷದ 30 ಸಾವಿರ ನೌಕರರಿದ್ದಾರೆ. ಪ್ರತಿದಿನ 6 ಸಾವಿರ ಕೆಎಸ್‌ಆರ್‌ಟಿಸಿ ಬಸ್ಸುಗಳು ಸಂಚಾರ ಮಾಡುತ್ತವೆ. ಪ್ರತಿದಿನ ಸುಮಾರು 7 ಕೋಟಿ ರೂಪಾಯಿ ಆದಾಯ ಬರುತ್ತಿತ್ತು. ಆದರೆ ನಾಲ್ಕು ದಿನದ ಸಾರಿಗೆ ನೌಕರರ ಮುಷ್ಕರದ ಸಮಯದಲ್ಲಿ ಸಾಕಷ್ಟು ಬಸ್ಸುಗಳು ಸಂಚಾರ ಮಾಡಿದನ್ನು ಹೊರತುಪಡಿಸಿ ಅಂದಾಜು 20 ಕೋಟಿ ನಷ್ಟವಾಗಿದೆ.

    4900 ರಿಂದ 5000 ಬಿಎಂಟಿಸಿ ಬಸ್ಸುಗಳು ಪ್ರತಿದನ ಕಾರ್ಯಾಚರಿಸುತ್ತಿದ್ದು, 2 ಕೋಟಿ 10 ಲಕ್ಷ ರೂಪಾಯಿ ಪ್ರತಿದಿನ ಕಲೆಕ್ಷನ್ ಆಗುತ್ತಿತ್ತು. ಇದೀಗ ನಾಲ್ಕು ದಿನದ ಮುಷ್ಕರದಿಂದಾಗಿ ಅಂದಾಜು ನಷ್ಟ 7 ಕೋಟಿ ಲಾಸ್ ಆಗಿದೆ. ಇದನ್ನೂ ಓದಿ:  4 ದಿನದಲ್ಲಿ ವಾಯುವ್ಯ ಸಾರಿಗೆ ಸಂಸ್ಥೆಗೆ 14 ಕೋಟಿ ನಷ್ಟ!

    3,775 ಎನ್‍ಇಕೆಆರ್‌ಟಿಸಿ ಬಸ್ಸುಗಳು ಓಡಾಡುತ್ತವೆ. ಸುಮಾರು 4 ಕೋಟಿ ಪ್ರತಿ ದಿನ ಕಲೆಕ್ಟ್ ಆಗುತ್ತಿತ್ತು. ನಾಲ್ಕು ದಿನದ ಮುಷ್ಕರದಿಂದ ಆದ ಅಂದಾಜು ನಷ್ಟ 12 ಕೋಟಿ ನಷ್ಟವಾಗಿದೆ. ಇನ್ನು 3,402 ಎನ್‍ಡಬ್ಲೂಆರ್‌ಟಿಸಿ ಬಸ್ಸುಗಳು ಸಂಚರಿಸುತ್ತಿದ್ದು, ಪ್ರತಿ ದಿನ 4 ಕೋಟಿ 20 ಲಕ್ಷ ರೂಪಾಯಿ ಆದಾಯ ಬರುತ್ತಿತ್ತು. ನೌಕರರ ಮುಷ್ಕರದಿಂದ ಅಂದಾಜು 14 ಕೋಟಿ 50 ಲಕ್ಷ ರೂಪಾಯಿ ನಷ್ಟವಾಗಿದೆ.

    ಶುಕ್ರವಾರ, ಶನಿವಾರ ಹಾಗೂ ಭಾನುವಾರ ನಾಲ್ಕು ನಿಗಮಗಳಿಂದ ನೂರಾರು ಬಸ್ಸುಗಳು ಮಾತ್ರ ಸಂಚಾರ ಮಾಡಿದವು. ನಿನ್ನೆ ಸಂಜೆಯ ನಂತರ ನಾಲ್ಕು ನಿಗಮದಿಂದ ಸುಮಾರು ಶೇ.40 ರಷ್ಟು ಬಸ್ಸುಗಳು ಸಂಚಾರ ಆರಂಭ ಮಾಡಿದೆ.

  • ಮುಷ್ಕರವನ್ನ ಹಿಂಪಡೆಯುವ ಆಲೋಚನೆ ಮಾಡಿದ್ದೀವಿ: ಕೋಡಿಹಳ್ಳಿ

    ಮುಷ್ಕರವನ್ನ ಹಿಂಪಡೆಯುವ ಆಲೋಚನೆ ಮಾಡಿದ್ದೀವಿ: ಕೋಡಿಹಳ್ಳಿ

    ಬೆಂಗಳೂರು: ಸಾರಿಗೆ ನೌಕರರ ಪ್ರತಿಭಟನೆ ಇಂದು ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಈ ಮಧ್ಯೆ ಮುಷ್ಕರವನ್ನ ಹಿಂಪಡೆಯುವ ಆಲೋಚನೆ ಮಾಡಿರುವುದಾಗಿ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.

    ವೈಯಾಲಿಕಾವಲ್ ನಿವಾಸದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಉಪವಾಸ ಕಾರ್ಯಕ್ರಮದಲ್ಲಿ ಇಂದು ತೀರ್ಮಾನ ಮಾಡುತ್ತೀವಿ. ಸಾರಿಗೆ ಇಲಾಖೆಯ ಪ್ರಮುಖರ ಜೊತೆ ಇಂದು ಮಾತನಾಡಿ ತೀರ್ಮಾನ ಕೈಗೊಳ್ಳುತ್ತೇವೆ. ಸಾರಿಗೆ ಅವ್ಯವಸ್ಥೆ ಜನರಿಗೆ ಸಮಸ್ಯೆ ಆಗಿದೆ. ರಾತ್ರಿ ಆದಂತಹ ಅನೇಕ ಅನುಮಾನಗಳ ಹಿನ್ನೆಲೆಯಲ್ಲಿ ಮುಷ್ಕರ ಮುಂದುವರಿಸಲಾಗಿತ್ತು ಎಂದರು.

    ಸರ್ಕಾರದ ನಿಲುವು ಏನೇ ಇದ್ದರೂ ಬಹುತೇಕ ಇಂದು ಮುಷ್ಕರ ಅಂತಿಮ ಘಟ್ಟಕ್ಕೆ ಬರಲಿದೆ. ಸರ್ಕಾರದ ಗೊಂದಲದ ನಿಲುವಿನಿಂದ ಮುಷ್ಕರ ಮುಂದುವರಿಸಬೇಕಾಯಿತು. ಈಗ ವೇದಿಕೆಯಲ್ಲಿ ಎಲ್ಲ ಸ್ಪಷ್ಟಪಡಿಸಲಾಗುತ್ತದೆ. ನೌಕರರೇ ಮುಖ್ಯವಾಗಿದ್ದು, ನಮ್ಮ ತೀರ್ಮಾನ ಇಂದೇ ಘೋಷಣೆ ಮಾಡುತ್ತೇವೆ ಎಂದು ತಿಳಿಸಿದರು.

    ಸರ್ಕಾರ ಏನೇ ಮಾಡಲಿ, ಸರ್ಕಾರದ ಹಿತ ಮುಖ್ಯ. ನನ್ನ ಪ್ರತಿಷ್ಠೆ ಪ್ರಶ್ನೆ ಬೇಡ. ಸರ್ಕಾರವೇ ಗೆಲ್ಲಲಿ. ನೌಕರರ ಹಿತ ಕಾಯಿರಿ. ನೌಕರರಿಗೆ ಮುಷ್ಕರದ ಅವಶ್ಯಕತೆ ಇತ್ತು. ಸರ್ಕಾರದ ಗಮನಕ್ಕೆ ಬೇಡಿಕೆಗಳ ತರಲಾಗಿದೆ. ಸರ್ಕಾರಕ್ಕೆ ಸದ್ಯ ಎಲ್ಲ ಬೇಡಿಕೆ ಗಮನಕ್ಕೆ ಬಂದಿದೆ. ಸರ್ಕಾರದ ನಿಲುವಿಗೆ ನೌಕರರಿಗೆ ಖುಷಿ ಇಲ್ಲ ಎಂದು ಹೇಳಿದರು.

    9 ಬೇಡಿಕೆ ಇತ್ಯಾದಿ ಬಗ್ಗೆ ತೀರ್ಮಾನ ವಿಚಾರಗಳಲ್ಲೂ ನ್ಯೂನತೆ ಇದೆ. ಈಗ ವೇದಿಕೆಯಲ್ಲಿ ತೀರ್ಮಾನ ಮಾಡುತ್ತೇವೆ. ಸರ್ಕಾರ ಲಿಖಿತವಾಗಿ ಎಲ್ಲ ಹೇಳಲಿ ಆಮೇಲೆ ತೀರ್ಮಾನ ಮಾಡುತ್ತೇವೆ. ನೆನ್ನೆಯಷ್ಟು ಬೆಂಬಲ ಇವತ್ತು ನೌಕರರಿಂದ ನಿರೀಕ್ಷೆ ಕಡಿಮೆ ಇದೆ. ಉಪವಾಸ ಸತ್ಯಾಗ್ರಹ ಮಾತ್ರ ಮುಂದುವರಿಯಲಿದೆ ಎಂದರು.

     

  • ಸರ್ಕಾರಿ ನೌಕರರೆಂದು ಪರಿಗಣಿಸಲ್ಲ – ಸರ್ಕಾರದ ಮುಂದಿರುವ ಆಯ್ಕೆಗಳು ಏನು?

    ಸರ್ಕಾರಿ ನೌಕರರೆಂದು ಪರಿಗಣಿಸಲ್ಲ – ಸರ್ಕಾರದ ಮುಂದಿರುವ ಆಯ್ಕೆಗಳು ಏನು?

    – ಖಾಸಗಿ ಬಸ್‌, ವ್ಯಾನ್‌ಗಳನ್ನು ಓಡಿಸಲು ಚಿಂತನೆ
    – ತಾರಕಕ್ಕೆ ಏರಿದ ಸಂಘರ್ಷ
    – ಉಪವಾಸ ಸತ್ಯಗ್ರಹ ಆರಂಭಿಸಲು ಮುಂದಾದ ನೌಕರರು

    ಬೆಂಗಳೂರು: ರಾಜ್ಯದಲ್ಲಿ ಸಾರಿಗೆ ನೌಕರರು ಮುಷ್ಕರ ಶುರು ಮಾಡಿ ಮೂರು ದಿನ ಕಳೆದಿದೆ. ಆದರೆ ಸಮಸ್ಯೆ ಬಗೆಹರಿಯುವ ಯಾವುದೇ ಲಕ್ಷಣಗಳು ಕಾಣ್ತಿಲ್ಲ. ಬದಲಾಗಿ ಇನ್ನಷ್ಟು ಕಗ್ಗಂಟಾಗಿದ್ದು, ಸಂಘರ್ಷ ತಾರಕಕ್ಕೇರಿದೆ. ಬಸ್ ಬಂದ್‍ಗೆ ಜಗ್ಗದ ಸರ್ಕಾರ ಮುಷ್ಕರ ನಿರತ ಸಾರಿಗೆ ನೌಕರರಿಗೆ ಸೆಡ್ಡು ಹೊಡೆದಿದೆ.

    ಸೋಮವಾರದಿಂದ ಖಾಸಗಿ ಬಸ್‍ಗಳನ್ನು, ಜೀಪ್‌ ಸರ್ಕಾರಿ ದರದಲ್ಲಿ ಓಡಿಸಲು ತೀರ್ಮಾನಿಸಲಾಗಿದೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಘೋಷಿಸಿದ್ದಾರೆ. ಸಾರ್ವಜನಿಕರಿಗೆ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಳ್ಳಲಾಗ್ತಿದೆ. ಈಗಲೂ ಕಾಲ ಮಿಂಚಿಲ್ಲ. ಪ್ರತಿಭಟನೆ ಕೈಬಿಟ್ಟು, ಮಾತುಕತೆ ಬನ್ನಿ ನಾವು ಸಿದ್ಧ ಇದ್ದೇವೆ ಎಂದು ಮುಷ್ಕರ ನಿರತ ನೌಕರರಿಗೆ ಸವದಿ ಆಹ್ವಾನ ನೀಡಿದ್ದಾರೆ. ಆದರೆ ಕೋಡಿಹಳ್ಳಿ ಚಂದ್ರಶೇಖರ್‌ ಅವರನ್ನು ಮಾತುಕತೆಗೆ ಕರೆಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕೋಡಿಹಳ್ಳಿಗೂ ಸಾರಿಗೆ ಸಂಸ್ಥೆಗೂ ಏನು ಸಂಬಂಧ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಸಾರಿಗೆ ನೌಕರರನ್ನು ಸರ್ಕಾರಿ ನೌಕರನ್ನಾಗಿ ಸರ್ಕಾರ ಘೋಷಿಸುತ್ತಿಲ್ಲ ಯಾಕೆ? 

     

    ಈ ಬೆನ್ನಲ್ಲೇ ನಾಳೆಯಿಂದ ಪ್ರತಿಭಟನೆ ಜೊತೆಗೆ ಉಪವಾಸ ಸತ್ಯಾಗ್ರಹ ನಡೆಸೋದಾಗಿ ಕೋಡಿಹಳ್ಳಿ ಘೋಷಿಸಿದ್ದಾರೆ. ಅನಿರ್ದಿಷ್ಟಾವಧಿ ಬಂದ್ ಮುಂದುವರೆಯುತ್ತೆ ಎಂದು ಪ್ರಕಟಿಸಿದ್ದಾರೆ. ಸಭೆಗೆ ನಾನು ಬರಬಾರದು ಎಂಬ ಷರತ್ತು ಯಾಕೆ ? ನಾನೇನು ಉಗ್ರಗಾಮಿನಾ? ನನ್ನ ಕಂಡರೆ ಭಯ ಯಾಕೆ ಎಂದು ಸರ್ಕಾರವನ್ನು ಕೋಡಿಹಳ್ಳಿ ಪ್ರಶ್ನಿಸಿದ್ದಾರೆ.

    ಕೆಎಸ್‍ಆರ್‌ಟಿಸಿ ಕ್ರಿಯಾ ಸಮಿತಿ ಅಧ್ಯಕ್ಷ ಚನ್ನೇಗೌಡ ಮಾತನಾಡಿ, ಸರ್ಕಾರ ಅಸಹಕಾರ ತೋರುತ್ತಿದೆ ಎಂದು ಆಪಾದಿಸಿದ್ದಾರೆ. ಕೋಡಿಹಳ್ಳಿ ಮೂಲಕವೇ ನಮ್ಮ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದ್ದಾರೆ. ಈ ಮಧ್ಯೆ ಖಾಸಗಿ ಬಸ್ ಒಕ್ಕೂಟ ಸರ್ಕಾರದ ಪರವಾಗಿ ನಿಲ್ಲದಿರಲು ತೀರ್ಮಾನಿಸಿದೆ. ನಾವು ಖಾಸಗಿ ಬಸ್ ಓಡಿಸಲ್ಲ ಎಂದಿರುವ ಖಾಸಗಿ ಬಸ್ ಒಕ್ಕೂಟದ ನಟರಾಜ್ ಮುಷ್ಕರನಿರತದ ಜೊತೆ ಯಾಕೆ ಮಾತಾಡುತ್ತಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.

    ಕೆಎಸ್‍ಬಿಓಎಫ್ ಉಪಾಧ್ಯಕ್ಷ ಬಾಲಕೃಷ್ಣ, ನಮ್ಮ ಬೇಡಿಕೆಗಳನ್ನು ಈಡೇರಿಸಿದರೆ ಮಾತ್ರ ಸರ್ಕಾರದ ಜೊತೆ ನಿಲ್ಲಲು ಸಿದ್ಧ ಎಂದು ಘೋಷಿಸಿದ್ದಾರೆ. ಖಾಸಗಿಯವರಿಗೆ ಮೂರು ತಿಂಗಳ ವೇತನ ನೀಡುವ ಆಫರ್ ನೀಡಲು ಸರ್ಕಾರ ಚಿಂತನೆ ನಡೆಸಿದೆ. ನಾಳೆ ಬೆಳಗ್ಗೆ ಸಂಘಗಳ ಮುಖಂಡರ ಜೊತೆ ಸಭೆ ನಡೆಸಲು ಸವದಿ ತೀರ್ಮಾನಿಸಿದ್ದಾರೆ.

    ಈ ಮಧ್ಯೆ ಗೃಹವ ಸಚಿವ ಬಸವರಾಜ ಬೊಮ್ಮಾಯಿ ಜೊತೆ ಸಿಎಂ ತುರ್ತು ಸಭೆ ನಡೆಸಿದರು. ನಂತರ ಮಾತನಾಡಿದ ಬೊಮ್ಮಾಯಿ ಅವರು, ಸರ್ಕಾರಿ ನೌಕರರೆಂದು ಪರಿಗಣಿಸಬೇಕೆಂಬ ಸಾರಿಗೆ ಸಿಬ್ಬಂದಿಯ ಬೇಡಿಕೆಯನ್ನು ಈ ಸಂದರ್ಭದಲ್ಲಿ ಈಡೇರಿಸುವುದು ಕಷ್ಟ ಎಂದು ಸ್ಪಷ್ಟಪಡಿಸಿದ್ದಾರೆ. ಮೊದಲು ಮುಷ್ಕರ ಕೈಬಿಟ್ಟು ಮಾತುಕತೆಗೆ ಬನ್ನಿ ಅಂತಾ ಕರೆ ನೀಡಿದ್ದಾರೆ. ಜೊತೆಗೆ ಎಸ್ಮಾ ಜಾರಿಯ ಪರಿಸ್ಥಿತಿ ಇನ್ನೂ ಬಂದಿಲ್ಲ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

    ಬಿಎಂಟಿಸಿ ಎಂಡಿ ಶಿಖಾ ಮಾತ್ರ, ಪ್ರತಿಭಟನೆ ಮುಂದುವರೆದರೆ ಎಸ್ಮಾ ಜಾರಿ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಎಸ್ಮಾ ಜಾರಿ ಮಾಡಿದವರು ಭಸ್ಮ ಆಗ್ತಾರೆ ಅಂತಾ ಸಾರಿಗೆ ನೌಕರರು ಎಚ್ಚರಿಕೆ ನೀಡಿದ್ದಾರೆ.

    ಸರ್ಕಾರದ ಮುಂದಿರುವ ಆಯ್ಕೆಗಳು ಏನು?
    ಆಯ್ಕೆ 01- ಸಂಧಾನ ಪ್ರಯತ್ನ ಮಾಡಿ ಒಂದು ದಿನ ಡೆಡ್‍ಲೈನ್
    ಆಯ್ಕೆ 02- ಸಂಧಾನ ಸಫಲ ಆಗದಿದ್ದರೆ ಕಾನೂನು ಕ್ರಮ
    ಆಯ್ಕೆ 03- ಮುಷ್ಕರ ನಿರತರ ಮೇಲೆ ದಂಡ ಪ್ರಯೋಗ
    ಆಯ್ಕೆ 04- ಹಂತ ಹಂತವಾಗಿ ಎಸ್ಮಾ ಜಾರಿ
    ಆಯ್ಕೆ 05- ಪರ್ಯಾಯ ಸಾರಿಗೆಯಾಗಿ ಖಾಸಗಿ ಬಸ್

  • 2021ನೇ ಸಾಲಿನ ಸರ್ಕಾರಿ ರಜಾ ದಿನಗಳ ಪಟ್ಟಿ ಪ್ರಕಟ – ಯಾವ ದಿನ ಯಾವ ರಜೆ?

    2021ನೇ ಸಾಲಿನ ಸರ್ಕಾರಿ ರಜಾ ದಿನಗಳ ಪಟ್ಟಿ ಪ್ರಕಟ – ಯಾವ ದಿನ ಯಾವ ರಜೆ?

    ಬೆಂಗಳೂರು: 2021ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಭಾನುವಾರ, ಎರಡು ಮತ್ತು ನಾಲ್ಕನೇ ಶನಿವಾರ ಅಲ್ಲದೇ ಒಟ್ಟು 20 ದಿನಗಳ ರಜೆಯನ್ನು ಘೋಷಿಸಲಾಗಿದೆ.

    ಏಪ್ರಿಲ್‌ 25 ರಂದು ಮಹಾವೀರ ಜಯಂತಿ ಹಾಗೂ ಆಗಸ್ಟ್‌ 15ರ ಸ್ವಾತಂತ್ರ್ಯ ದಿನಾಚರಣೆ ಭಾನುವಾರ ಬರಲಿದೆ. ಡಿಸೆಂಬರ್‌ 25 ರಂದು ಕ್ರಿಸ್‌ಮಸ್‌ ನಾಲ್ಕನೇ ಶನಿವಾರದಂದು ಬರಲಿದೆ. ಹೀಗಾಗಿ ಈ ದಿನಗಳಂದು ಸಾರ್ವತ್ರಿಕ ರಜೆ ಇಲ್ಲ.

    ಸೆಪ್ಟೆಂಬರ್‌ 9 ಶುಕ್ರವಾರದಂದು ಕೈಲ್‌ ಮುಹೂರ್ತಕ್ಕೆ, ಅಕ್ಟೋಬರ್‌ 18ರ ಸೋಮವಾರದಂದು ತುಲಾ ಸಂಕ್ರಮಣಕ್ಕೆ ಮತ್ತು ನವೆಂಬರ್‌ 20ರ ಶನಿವಾರದಂದು ಹುತ್ತರಿ ಹಬ್ಬಕ್ಕೆ ಕೊಡಗು ಜಿಲ್ಲೆಗೆ ಮಾತ್ರ ಅನ್ವಯವಾಗುವಂತೆ ಸ್ಥಳೀಯ ಸಾರ್ವತ್ರಿಕ ರಜೆಯನ್ನು ಪ್ರಕಟಿಸಲಾಗಿದೆ.

    ಮುಸ್ಲಿಂ ಸಮುದಾಯದ ಹಬ್ಬಗಳು ಘೋಷಿತ ದಿನಾಂಕದ ಬದಲು ಬೇರೆ ದಿನ ಬಂದರೆ, ನಿಗದಿತ ದಿನಾಂಕದಂದು ರಜೆ ನೀಡದೆ ಹಬ್ಬದ ದಿನ ಆ ಸಮುದಾಯದ ಸರ್ಕಾರಿ ನೌಕರರಿಗೆ ರಜೆ ನೀಡಬಹುದು ಎಂದು ತಿಳಿಸಿದೆ.

    ಇಂದು ಪ್ರಕಟಗೊಂಡ ರಜೆಗಳಲ್ಲಿ ಶಿಕ್ಷಣ ಇಲಾಖೆಯ ರಜೆಗಳು ಒಳಗೊಂಡಿಲ್ಲ. ಈ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರತ್ಯೇಕ ರಜೆ ಪಟ್ಟಿ ಬಿಡುಗಡೆ ಮಾಡಲಿದೆ.

    2021ರಲ್ಲಿ ರಾಜ್ಯ ಸರಕಾರಿ ನೌಕರರಿಗೆ 19 ದಿನಗಳ ಪರಿಮಿತ ರಜೆಗಳೂ ಇವೆ. ಅವುಗಳ ಪಟ್ಟಿಯನ್ನೂ ರಾಜ್ಯ ಸರಕಾರ ಬಿಡುಗಡೆಗೊಳಿಸಿದೆ. ಏಪ್ರಿಲ್‌ 1 ರಂದು ಬ್ಯಾಂಕ್‌ಗಳ ವಾರ್ಷಿಕ ಲೆಕ್ಕಪತ್ರ ಮುಕ್ತಾಯದ ದಿನವಾಗಿದ್ದು, ಅಂದು ವಾಣಿಜ್ಯ ಮತ್ತು ಸರ್ಕಾರಿ ಬ್ಯಾಂಕ್‌ಗಳಿಗೆ ರಜೆ ಇರಲಿದೆ.

    ಯಾವ ದಿನ ರಜೆ?
    ಜನವರಿ 14 – ಗುರುವಾರ – ಉತ್ತರಾಯಣ ಪುಣ್ಯ ಕಾಲ, ಮಕರ ಸಂಕ್ರಾಂತಿ
    ಜನವರಿ 26 – ಮಂಗಳವಾರ – ಗಣರಾಜ್ಯೋತ್ಸವ
    ಮಾರ್ಚ್‌ 11 – ಗುರುವಾರ – ಮಹಾ ಶಿವರಾತ್ರಿ
    ಏಪ್ರಿಲ್‌ 2 – ಶುಕ್ರವಾರ – ಗುಡ್‌ ಫ್ರೈಡೇ
    ಏಪ್ರಿಲ್‌ 13 – ಮಂಗಳವಾರ – ಯುಗಾದಿ
    ಏಪ್ರಿಲ್‌ 14 – ಬುಧವಾರ – ಡಾ. ಬಿ.ಆರ್‌. ಅಂಬೇಡ್ಕರ್‌ ಜಯಂತಿ
    ಮೇ 1 – ಶನಿವಾರ – ಕಾರ್ಮಿಕ ದಿನಾಚರಣೆ
    ಮೇ 14 – ಶುಕ್ರವಾರ – ಬಸವ ಜಯಂತಿ/ಅಕ್ಷಯ ತೃತೀಯ/ ಖುತುಬ್‌ ಎ ರಂಜಾನ್
    ಜುಲೈ 21 – ಬುಧವಾರ – ಬಕ್ರೀದ್


    ಆಗಸ್ಟ್‌ 20 – ಶುಕ್ರವಾರ – ಮೊಹರಂ ಕಡೇ ದಿನ
    ಸೆಪ್ಟೆಂಬರ್‌ 10 – ಶುಕ್ರವಾರ – ವರ ಸಿದ್ಧಿವಿನಾಯಕ ವ್ರತ
    ಅಕ್ಟೋಬರ್‌ 2 – ಶನಿವಾರ – ಗಾಂಧಿ ಜಯಂತಿ
    ಅಕ್ಟೋಬರ್ ‌6 – ಬುಧವಾರ – ಮಹಾಲಯ ಅಮವಾಸ್ಯೆ
    ಅಕ್ಟೋಬರ್‌ 14 – ಗುರುವಾರ – ಮಹಾ ನವಮಿ, ಆಯುಧ ಪೂಜೆ
    ಅಕ್ಟೋಬರ್‌ 15 – ಶುಕ್ರವಾರ – ವಿಜಯ ದಶಮಿ
    ಅಕ್ಟೋಬರ್‌ 20 – ಬುಧವಾರ – ಮಹರ್ಷಿ ವಾಲ್ಮೀಕಿ ಜಯಂತಿ, ಈದ್‌ ಮಿಲಾದ್‌
    ನವೆಂಬರ್‌ 1 – ಸೋಮವಾರ – ಕನ್ನಡ ರಾಜ್ಯೋತ್ಸವ
    ನವೆಂಬರ್‌ 3 – ಬುಧವಾರ – ನರಕ ಚತುರ್ದಶಿ
    ನವೆಂಬರ್‌ 5 – ಶುಕ್ರವಾರ – ಬಲಿ ಪಾಡ್ಯಮಿ, ದೀಪಾವಳಿ
    ನವೆಂಬರ್‌ 22 – ಸೋಮವಾರ – ಕನಕದಾಸ ಜಯಂತಿ

  • ಕ್ರೈಸ್ತ ಅಭಿವೃದ್ಧಿ ಪ್ರಾಧಿಕಾರ ರಚಿಸಿ – ಸಿಎಂಗೆ ಐವಾನ್ ಡಿಸೋಜಾ ಒತ್ತಾಯ

    ಕ್ರೈಸ್ತ ಅಭಿವೃದ್ಧಿ ಪ್ರಾಧಿಕಾರ ರಚಿಸಿ – ಸಿಎಂಗೆ ಐವಾನ್ ಡಿಸೋಜಾ ಒತ್ತಾಯ

    ಮಂಗಳೂರು: ರಾಜ್ಯದಲ್ಲಿರುವ ಕ್ರೈಸ್ತರಲ್ಲೂ ಬಹಳಷ್ಟು ಮಂದಿ ಬಡವರಿದ್ದಾರೆ. ಹೀಗಾಗಿ ಕ್ರೈಸ್ತ ಅಭಿವೃದ್ಧಿ ಪ್ರಾಧಿಕಾರವನ್ನು ತಕ್ಷಣ ರಚನೆ ಮಾಡಬೇಕು ಎಂದು ಮಾಜಿ ಎಂಎಲ್‌ಸಿ, ಕೆಪಿಸಿಸಿ ವಕ್ತಾರ ಐವಾನ್ ಡಿಸೋಜಾ ಆಗ್ರಹಿಸಿದ್ದಾರೆ.

    ಮಂಗಳೂರಿನಲ್ಲಿ ಮಾತನಾಡಿದ ಅವರು ಬಸವಕಲ್ಯಾಣ ಕ್ಷೇತ್ರದ ಉಪ ಚುನಾವಣೆಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿಎಸ್‍ವೈ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಮುಂದಾಗಿದ್ದಾರೆ. ಅವರಲ್ಲಿರುವ ಬಡವರಿಗೆ ಸಹಕಾರಿಯಾಗುತ್ತೆ ಎಂದಿದ್ದಾರೆ. ನಮ್ಮ ಕ್ರೈಸ್ತರಲ್ಲೂ ಬಡವರಿದ್ದಾರೆ. ಹೀಗಾಗಿ ಪ್ರಾಧಿಕಾರ ರಚಿಸಿ ಎಂದು ಹೇಳಿದ್ದಾರೆ.

    ಈ ಹಿಂದೆಯೇ ಪ್ರಾಧಿಕಾರ ರಚನೆಗೆ ನಮ್ಮ ಒತ್ತಾಯವಿತ್ತು. ಆದರೆ ಸರ್ಕಾರ ನಮ್ಮ ಮನವಿಗೆ ಸ್ಪಂದಿಸಿಲ್ಲ. ಕ್ರೈಸ್ತ ಸಮುದಾಯದ ಮೌನ, ವೀಕ್ನೇಸ್ ಅಲ್ಲ. ಕ್ರೈಸ್ತರು ಮಂಗಗಳು ಎಂದು ಸಿಎಂ ಭಾವಿಸಿಕೊಂಡಿದ್ದಾರೆ. ಈ ಹಿಂದೆ ಇದ್ದ ಕ್ರೈಸ್ತ ಪ್ರಾಧಿಕಾರಕ್ಕೆ ಅನುಮೋದನೆ ನೀಡುತ್ತೇನೆ. 55 ಕೋಟಿ ಮೀಸಲಿಟ್ಟಿದ್ದೇನೆ ಎಂದಿದ್ದ ಸಿಎಂ ಬಳಿಕ ಯಾಕೆ ಮೌನವಾಗಿದ್ದಾರೆ ಎಂದು ತಕ್ಷಣವೇ ಉತ್ತರ ಕೊಡಬೇಕೆಂದು ಒತ್ತಾಯ ಮಾಡಿದ್ದಾರೆ.

    ಸರ್ಕಾರ ನಮ್ಮ ಮನವಿಗೆ ಸರಿಯಾಗಿ ಸ್ಪಂದಿಸದೇ ಇದ್ದಲ್ಲಿ ರಾಜ್ಯದ ಕ್ರೈಸ್ತರು ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ. ಜನ ಬೀದಿಗೆ ಬಂದು ಹೋರಾಟ ಮಾಡಿದರೆ ಅದಕ್ಕೆ ಸರ್ಕಾರವೇ ನೇರ ಹೊಣೆ, ನಮ್ಮ ತಾಳ್ಮೆಯನ್ನು ಪರೀಕ್ಷಿಸಬೇಡಿ ಎಂದು ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

  • ಸ್ವತಂತ್ರ ಲಿಂಗಾಯತ ಧರ್ಮದ ಘೋಷಣೆಯಾಗಬೇಕು: ಖಾಸಾಮಠದ ಶ್ರೀ

    ಸ್ವತಂತ್ರ ಲಿಂಗಾಯತ ಧರ್ಮದ ಘೋಷಣೆಯಾಗಬೇಕು: ಖಾಸಾಮಠದ ಶ್ರೀ

    ಯಾದಗಿರಿ: ಮುಖ್ಯಮಂತ್ರಿ ಯಡಿಯೂರಪ್ಪನವರು ಕೇವಲ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ರಚನೆ ಮಾಡಿ ಕೈತೊಳೆದುಕೊಂಡರೆ ಸರಿಯಲ್ಲ, ಸ್ವತಂತ್ರ ಲಿಂಗಾಯತ ಧರ್ಮದ ಘೋಷಣೆ ಮಾಡಬೇಕು ಎಂದು ಯಾದಗಿರಿ ಜಿಲ್ಲೆಯ ಗುರುಮಿಠಕಲ್ ಖಾಸಾಮಠದ ಪೀಠಾಧಿಪತಿ ಶಾಂತವೀರ ಮುರುಘರಾಜೇಂದ್ರ ಸ್ವಾಮಿ ಒತ್ತಡ ಹಾಕಿದ್ದಾರೆ.

    ಯಾದಗಿರಿ ನಗರದಲ್ಲಿ ಮಾತನಾಡಿದ ಅವರು, ರಾಜ್ಯದ ಲಿಂಗಾಯತರು ಅಲ್ಪಸಂಖ್ಯಾತರ ಮಾನ್ಯತೆಗೆ ಒಳಪಟ್ಟಿದ್ದಾರೆ. ಹೀಗಾಗಿ ಲಿಂಗಾಯತ ಧರ್ಮವನ್ನು ಸ್ವತಂತ್ರ ಧರ್ಮವೆಂದು, ರಾಜ್ಯ ಮತ್ತು ಕೇಂದ್ರ ಸರ್ಕಾರ ಘೋಷಣೆ ಮಾಡಬೇಕು ಎಂದರು.

    ರಾಜ್ಯ ಸರ್ಕಾರದಿಂದ ವೀರಶೈವ ಲಿಂಗಾಯತ ನಿಗಮ ರಚನೆ ಹಿನ್ನೆಲೆ ಮತ್ತೆ ಲಿಂಗಾಯತ ಧರ್ಮದ ಕೂಗು ಕೇಳುತ್ತಿದೆ. ಲಿಂಗಾಯತ ಸ್ವತಂತ್ರ ಧರ್ಮಕ್ಕೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಗಟ್ಟಿಯಾಗಿ ಶಿಫಾರಸು ಮಾಡಬೇಕು. ಹಿಂದುಳಿದ ಸಮುದಾಯವನ್ನು ಗುರುತಿಸಿ ಅವರಿಗೆ ಅಲ್ಪಸಂಖ್ಯಾತರ ಅಡಿಯಲ್ಲಿ ಮೀಸಲಾತಿ ನೀಡುವ ಮೂಲಕ, ಸಮಾಜವನ್ನು ಅಭಿವೃದ್ಧಿ ಮಾಡಬೇಕು ಎಂದು ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.