Tag: Government IB

  • ಕಿಡಿಗೇಡಿಗಳಿಂದ ಎಣ್ಣೆ ಬಾಟಲ್ ಇಟ್ಟು ವಿಡಿಯೋ: ಅಧಿಕಾರಿಗಳ ಪರ ರೇವಣ್ಣ ಬ್ಯಾಟಿಂಗ್

    ಕಿಡಿಗೇಡಿಗಳಿಂದ ಎಣ್ಣೆ ಬಾಟಲ್ ಇಟ್ಟು ವಿಡಿಯೋ: ಅಧಿಕಾರಿಗಳ ಪರ ರೇವಣ್ಣ ಬ್ಯಾಟಿಂಗ್

    ಹಾಸನ: ಸರ್ಕಾರಿ ಪ್ರವಾಸಿ ಮಂದಿರ (ಐಬಿ)ಯಲ್ಲಿ ಎಣ್ಣೆ ಪಾರ್ಟಿ ಮಾಡಿದ್ದ ಹೊಳೇನರಸೀಪುರ ತಹಶೀಲ್ದಾರ್ ಪರ ಮಾಜಿ ಸಚಿವ ಎಚ್.ಡಿ.ರೇವಣ್ಣ ಬ್ಯಾಟ್ ಬೀಸಿದ್ದಾರೆ.

    ಐಬಿಯಲ್ಲಿ ಅಧಿಕಾರಿಗಳ ಎಣ್ಣೆ ಪಾರ್ಟಿ ಕುರಿತು ಪ್ರತಿಕ್ರಿಯೆ ನೀಡಿದ ಮಾಜಿ ಸಚಿವರು, ಹೊಳೇನರಸೀಪುರ ತಹಶೀಲ್ದಾರ್ ಶ್ರೀನಿವಾಸ್ ಪ್ರಾಮಾಣಿಕ ವ್ಯಕ್ತಿ. ಅವರು ಮದ್ಯ ಸೇವನೆ ಮಾಡುವುದಿಲ್ಲ. ಅಧಿಕಾರಿಗಳು ಒಟ್ಟಿಗೆ ಕುಳಿತು ಊಟ ಮಾಡುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಸರ್ಕಾರಿ ಐಬಿಯಲ್ಲಿ ಹಾಸನ ತಹಶೀಲ್ದಾರ್​ಗಳ ಗುಂಡು ತುಂಡು ಪಾರ್ಟಿ

    ಸಂಸದರು ಅಧಿಕಾರಿಗಳ ಸಭೆ ಕರೆದಿದ್ದರು. ಸಭೆಯ ಬಳಿಕ ಊಟದ ವ್ಯವಸ್ಥೆ ಮಾಡಲಾಗಿತ್ತು. ಆದರೆ ಯಾರೋ ಇಬ್ಬರು ಮದ್ಯ ಸೇವಿಸಿ ಐಬಿಗೆ ನುಗ್ಗಿದ್ದರು. ಅಷ್ಟೇ ಅಲ್ಲದೆ ತಹಶೀಲ್ದಾರ್ ಮೇಲೆ ಹಲ್ಲೆಗೆ ಯತ್ನಿಸಿದ್ದರು. ಈ ಸಂಬಂಧ ತಹಶೀಲ್ದಾರ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ದುರುದ್ದೇಶದಿಂದ ಯಾರೋ ಹೀಗೆ ಮಾಡಿದ್ದಾರೆ ಎಂದು ದೂರಿದರು.

    ಮರಳು ಅಕ್ರಮ ಸಾಗಾಣಿಕೆ ಶ್ರೀನಿವಾಸ್ ಅವರು ಅವಕಾಶ ನೀಡಲ್ಲ. ತಾಲೂಕಿನಲ್ಲಿ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅದಕ್ಕಾಗಿ ಬ್ಲಾಕ್‍ಮೇಲ್ ಮಾಡಲು ಕೆಲವು ಎಣ್ಣೆ ಬಾಟಲಿ ಇಟ್ಟು ವಿಡಿಯೋ ಮಾಡಿದ್ದಾರೆ. ಈ ಸಂಬಂಧ ತನಿಖೆ ಆಗಬೇಕಿದೆ ಎಂದು ಹೊಸ ಬಾಂಬ್ ಸಿಡಿಸಿದರು.

  • ಸರ್ಕಾರಿ ಐಬಿಯಲ್ಲಿ ಹಾಸನ ತಹಶೀಲ್ದಾರ್​ಗಳ ಗುಂಡು ತುಂಡು ಪಾರ್ಟಿ

    ಸರ್ಕಾರಿ ಐಬಿಯಲ್ಲಿ ಹಾಸನ ತಹಶೀಲ್ದಾರ್​ಗಳ ಗುಂಡು ತುಂಡು ಪಾರ್ಟಿ

    ಹಾಸನ: ಹಾಸನದ ಜಿಲ್ಲೆಯ ಎಲ್ಲಾ ತಹಶೀಲ್ದಾರ್ ಗಳು ಸೇರಿ ಹೊಳೆನರಸೀಪುರದ ಸರ್ಕಾರಿ ಐಬಿಯಲ್ಲಿ ಗುಂಡು ತುಂಡು ಪಾರ್ಟಿ ಮಾಡಿದ್ದಾರೆ.

    ಇತ್ತೀಚೆಗೆ ತಮಕೂರಿನ ಕುಣಿಗಲ್‍ನಲ್ಲಿ ಇದೇ ರೀತಿ ಪಿಡಬ್ಲ್ಯೂಡಿ ಅಧಿಕಾರಿಗಳು ಸರ್ಕಾರಿ ಐಬಿಯಲ್ಲಿ ಪಾರ್ಟಿ ಮಾಡಿದ್ದರು. ಈಗ ಇದೇ ರೀತಿಯ ಘಟನೆ ಹಾಸನದಲ್ಲಿ ನಡೆದಿದ್ದು, ಮಹಿಳಾ ತಹಶೀಲ್ದಾರ್ ಗಳು ಸೇರಿದಂತೆ ಹೊಳೆನರಸೀಪುರ, ಹಾಸನ, ಸಕಲೇಶಪುರ, ಅರಸೀಕೆರೆ, ಚನ್ನರಾಯಪಟ್ಟಣ ಮತ್ತು ಅರಕಲಗೂಡು ತಹಶೀಲ್ದಾರ್ ಸೇರಿ ಐಬಿಯಲ್ಲಿ ಪಾರ್ಟಿ ಮಾಡಿದ್ದಾರೆ.

    ಶುಕ್ರವಾರ ತಡರಾತ್ರಿ ಈ ಪಾರ್ಟಿ ನಡೆದಿದ್ದು, ಜಿಲ್ಲೆಯ ಆರು ತಾಲೂಕಿನ ತಹಶೀಲ್ದಾರ್ ಗಳು ಇದರಲ್ಲಿ ಭಾಗಿಯಾಗಿದ್ದಾರೆ. ಹೊಳೆನರಸೀಪುರ ತಾಲೂಕಿನ ತಹಶೀಲ್ದಾರ್ ಶ್ರೀನಿವಾಸ್, ಸಕಲೇಶಪುರ ತಹಶೀಲ್ದಾರ್ ರಕ್ಷಿತ್, ಹಾಸನ ತಹಶೀಲ್ದಾರ್ ಮೇನಕಾಗಾಂಧಿ ಸೇರಿ ಒಟ್ಟು ಏಳು ಜನ ತಹಶೀಲ್ದಾರ್ ಗಳು ಸೇರಿಕೊಂಡು ಐಬಿಯಲ್ಲಿ ಗುಂಡು ತುಂಡು ಪಾರ್ಟಿ ಮಾಡಿದ್ದಾರೆ.

    ಇದನ್ನು ಬಿಜೆಪಿ ಕಾರ್ಯಕರ್ತ ನಾಗೇಶ್ ವಿಡಿಯೋ ಮಾಡಿದ್ದಾರೆ. ವಿಡಿಯೋ ಮಾಡುತ್ತಿರುವುದನ್ನು ಕಂಡ ತಹಶೀಲ್ದಾರ್ ಗಳು ಅಲ್ಲಿಂದ ಓಡಿ ಹೋಗಿದ್ದಾರೆ. ಈ ವೇಳೆ ವಿಡಿಯೋ ಮಾಡಿದ ನಾಗೇಶ್ ಮೇಲೆ ಪೊಲೀಸರು ಹಲ್ಲೆ ಮಾಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ. ವಿಡಿಯೋ ಚಿತ್ರೀಕರಣ ಹಿನ್ನೆಲೆಯಲ್ಲಿ ನಾಗೇಶ್ ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂಬ ಮಾಹಿತಿಗಳು ಲಭ್ಯವಾಗಿವೆ.

  • ಸರ್ಕಾರಿ ಪ್ರವಾಸಿ ಮಂದಿರದಲ್ಲಿ ಪಿಡಬ್ಲ್ಯೂಡಿ ಅಧಿಕಾರಿಗಳ ಎಣ್ಣೆ ಪಾರ್ಟಿ

    ಸರ್ಕಾರಿ ಪ್ರವಾಸಿ ಮಂದಿರದಲ್ಲಿ ಪಿಡಬ್ಲ್ಯೂಡಿ ಅಧಿಕಾರಿಗಳ ಎಣ್ಣೆ ಪಾರ್ಟಿ

    -ಗುತ್ತಿಗೆದಾರರಿಂದ 10 ಲಕ್ಷ ಪಡೆದು ಮಸ್ತಿ!

    ತುಮಕೂರು: ಜಿಲ್ಲೆಯ ಕುಣಿಗಲ್ ತಾಲೂಕಿನ ಮಾರ್ಕೋನಹಳ್ಳಿಯ ಸರ್ಕಾರಿ ಪ್ರವಾಸಿ ಮಂದಿರದಲ್ಲಿ ಮದ್ಯ ನಿಷೇಧಿಸಲಾಗಿದೆ. ಆದರೂ ಕೂಡ ಅಧಿಕಾರಿಗಳು ಭರ್ಜರಿ ಎಣ್ಣೆ ಪಾರ್ಟಿ ಮಾಡಿದ್ದಾರೆ.

    ಸರ್ಕಾರಿ ಐಬಿಯಲ್ಲಿ ಮದ್ಯಪಾನ ನಿಷೇಧ ಇದ್ದರೂ ತಡ ರಾತ್ರಿಯವರೆಗೂ ಮದ್ಯ-ಮಾಂಸ ತಿಂದು ಅಧಿಕಾರಿಗಳು ಮೋಜು ಮಸ್ತಿ ಮಾಡಿದ್ದಾರೆ. ಕುಣಿಗಲ್ ಪಿಡಬ್ಲ್ಯೂಡಿ ಎಂಜಿನಿಯರ್ ದಿವಾಕರ್ ವರ್ಗಾವಣೆ ಆಗಿದ್ದಕ್ಕೆ ಐಬಿಯಲ್ಲಿ ಅವರಿಗೆ ಸೆಂಡ್ ಆಫ್ ಪಾರ್ಟಿ ಏರ್ಪಡಿಸಲಾಗಿತ್ತು. ದಿವಾಕರ್ ಅವರು ವರ್ಗಾವಣೆಗೊಳ್ಳುವ ಆತುರದಲ್ಲಿ ಗುತ್ತಿಗೆದಾರರಿಗೆ ಬಾಕಿ ಇದ್ದ ಸುಮಾರು 28 ಕೋಟಿ ರೂ. ಬಿಲ್ ಪಾಸ್ ಮಾಡಿದ್ದಾರೆ. ಈ ಕೆಲಸ ಮಾಡಿಕೊಡಲು ಗುತ್ತಿಗೆದಾರರಿಂದ ಸುಮಾರು 10 ಲಕ್ಷ ರೂ. ವಸೂಲಿ ಮಾಡಲಾಗಿತ್ತು. ಈ ಹಣದಲ್ಲಿಯೇ ಅಧಿಕಾರಿಗಳು ಗುಂಡು-ತುಂಡು ತಿಂದು ಸಖತ್ ಎಂಜಾಯ್ ಮಾಡಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.

    ಈ ಪಾರ್ಟಿಯಲ್ಲಿ ಗುತ್ತಿಗೆದಾರರೂ ಸೇರಿದಂತೆ ಪೊಲೀಸ್ ಅಧಿಕಾರಿಗಳು, ವಿವಿಧ ಇಲಾಖಾ ಅಧಿಕಾರಿಗಳು, ರಾಜಕೀಯ ಮುಖಂಡರು ಕೂಡ ಬಾಡೂಟದಲ್ಲಿ ಭಾಗಿಯಾಗಿ ಎಂಜಾಯ್ ಮಾಡಿದ್ದಾರೆ. ತಡರಾತ್ರಿ 3 ಗಂಟೆವರೆಗೂ ಅಧಿಕಾರಿಗಳು-ಗುತ್ತಿಗೆದಾರರು ಮದ್ಯಾರಾಧನೆ ಮಾಡಿ ಸರ್ಕಾರಿ ಬಂಗಲೆಯನ್ನ ರಾಜಾರೋಷವಾಗಿ ದುರುಪಯೋಗ ಮಾಡಿಕೊಂಡಿದ್ದಾರೆ.