Tag: Gopalaswamy

  • ಸಣ್ಣ ರಾಜಕೀಯ ಮಾಡಿಲ್ಲ – ವೇದಿಕೆ ಮೇಲೆ ಬಾಲಣ್ಣ, ಗೋಪಾಲಸ್ವಾಮಿ ವಾಕ್ಸಮರ

    ಸಣ್ಣ ರಾಜಕೀಯ ಮಾಡಿಲ್ಲ – ವೇದಿಕೆ ಮೇಲೆ ಬಾಲಣ್ಣ, ಗೋಪಾಲಸ್ವಾಮಿ ವಾಕ್ಸಮರ

    – 21 ಕೋಟಿ ವೆಚ್ಚದ ವಿವಿಧ ಕಾಮಗಾರಿ ಶಂಕುಸ್ಥಾಪನೆ

    ಹಾಸನ: ಅಧಿಕಾರಿಗಳು ಎಂಎಲ್‍ಎ ಮಾತು ಕೇಳಿ ಆಹ್ವಾನ ಪತ್ರಿಕೆಯನ್ನು ಮನೆಗೆ ತಂದು ಎಸೆದು ಹೋಗುತ್ತಾರೆ ಎಂದು ವೇದಿಕೆ ಮೇಲೆಯೇ ಕಾಂಗ್ರೆಸ್ ಎಂಎಲ್‍ಸಿ ಗೋಪಾಲಸ್ವಾಮಿ ಆರೋಪ ಮಾಡಿದ್ದು, ಅಲ್ಲೇ ಇದ್ದ ಜೆಡಿಎಸ್ ಪಕ್ಷದ ಶಾಸಕ ಬಾಲಕೃಷ್ಣ ನಾನು ಆ ರೀತಿ ನಡೆದುಕೊಂಡಿಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ.

    ಇಂದು ಹಾಸನ ಜಿಲ್ಲೆಯ ಶ್ರವಣಬೆಳಗೂಳ ಕ್ಷೇತ್ರದಲ್ಲಿ ಸುಮಾರು 21 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಉಸ್ತುವಾರಿ ಸಚಿವ ಗೋಪಾಲಯ್ಯ ಪಾಲ್ಗೊಂಡಿದ್ದರು. ಈ ವೇಳೆ ವೇದಿಕೆ ಮೇಲೆ ಮಾತನಾಡುವಾಗ ತಾಲೂಕಿನ ಅಭಿವೃದ್ಧಿಗೆ ತಾವು ಮಾಡಿರುವ ಹೋರಾಟದ ಬಗ್ಗೆ ಪ್ರಸ್ತಾಪಿಸಿದ ಎಂಎಲ್‍ಸಿ ಗೋಪಾಲಸ್ವಾಮಿ, ಅಧಿಕಾರಿಗಳು ಸಚಿವರ ಕಾರ್ಯಕ್ರಮಕ್ಕೆ ತಮ್ಮನ್ನು ಸರಿಯಾಗಿ ಕರೆದಿಲ್ಲ ಎಂದು ಬಹಿರಂಗವಾಗಿ ಅಸಮಾಧಾನ ಹೊರಹಾಕಿದರು.

    ಈ ವೇಳೆ ಅಧಿಕಾರಿಗಳಿಗೆ ಬಹಿರಂಗ ಎಚ್ಚರಿಕೆ ನೀಡಿದ ಗೋಪಾಲಸ್ವಾಮಿ, ನಾನು ಕೂಡ ಒಬ್ಬ ವಿಧಾನಪರಿಷತ್ ಸದಸ್ಯ ಎಂಬ ಗೌರವ ಇರಲಿ. ನನಗೆ ಟಿಪಿ ನೋಡಿದ ನಂತರ ಉಸ್ತುವಾರಿ ಸಚಿವರು ಬರುತ್ತಿರುವುದು ಗೊತ್ತಾಯಿತು. ಇದು ಸಚಿವರೆದುರು ಅಧಿಕಾರಿಗಳಿಗೆ ಕೊನೆ ಎಚ್ಚರಿಕೆ. ಎಂಎಲ್‍ಎಯವರು ಹೇಳಿದರು ಎಂದು ಆಹ್ವಾನ ಪತ್ರಿಕೆಯನ್ನು ಎಸೆದು ಹೋಗುವ ಪರಿಸ್ಥಿತಿ ನಿರ್ಮಾಣ ಆಗಬಾರದು ಎಂದು ಬೇಸರ ಹೊರಹಾಕಿದರು.

    ನಂತರ ಮಾತನಾಡಿದ ಶಾಸಕ ಬಾಲಕೃಷ್ಣ ಇಂದಿನ ಕಾರ್ಯಕ್ರಮ ನಡೆಯಲು ತಾವು ಪಟ್ಟ ಶ್ರಮದ ಬಗ್ಗೆ ಸಾರ್ವಜನಿಕರಿಗೆ ತಿಳಿಸಿದರು. ನಂತರ ಗೋಪಾಲಸ್ವಾಮಿ ಅವರ ಆರೋಪಕ್ಕೆ ವೇದಿಕೆ ಮೇಲೆ ಸಮಜಾಯಿಷಿ ನೀಡಿದ ಅವರು, ಎಂಎಲ್‍ಸಿ ಹೇಳಿದ ರೀತಿ ನಾನು ಸಣ್ಣ ರಾಜಕಾರಣ ಮಾಡಿಲ್ಲ. ಮಂತ್ರಿಗಳು ಬರುತ್ತಿದ್ದಾರೆ ಎಂದು ನಾನೇ ನಿಮಗೆ ಹೇಳಿದ್ದೆ. ಆದರೆ ನಿಮಗೆ ಆಹ್ವಾನ ಪತ್ರಿಕೆಯನ್ನು ತಡವಾಗಿ ನೀಡಿ ಎಂದು ನಾನು ಹೇಳಿಲ್ಲ. ಈ ಬಗ್ಗೆ ದಯಮಾಡಿ ತಪ್ಪಾಗಿ ತಿಳಿಯಬೇಡಿ ಎಂದು ಮನವಿ ಮಾಡಿದರು.

  • ಒಂದು ಲಕ್ಷ ಮಾಸ್ಕ್ ವಿತರಣೆಗೆ ಎಂಎಲ್‍ಸಿ ಗೋಪಾಲಸ್ವಾಮಿ ವ್ಯವಸ್ಥೆ

    ಒಂದು ಲಕ್ಷ ಮಾಸ್ಕ್ ವಿತರಣೆಗೆ ಎಂಎಲ್‍ಸಿ ಗೋಪಾಲಸ್ವಾಮಿ ವ್ಯವಸ್ಥೆ

    ಹಾಸನ: ಹಗಲು ರಾತ್ರಿ ಕೊರೊನಾ ಕರ್ಫ್ಯೂಗಾಗಿ ಕೆಲಸ ಮಾಡುತ್ತಿರುವ ಪೊಲೀಸರಿಗೆ ಗೌರವ ಸಲ್ಲಿಸುವ ಸಲುವಾಗಿ ಎಂಎಲ್‍ಸಿ ಗೋಪಾಲಸ್ವಾಮಿ ಪೊಲೀಸ್ ಠಾಣೆಗೆ ತೆರಳಿ ಪೊಲೀಸರಿಗೆ ಮಾಸ್ಕ್ ಮತ್ತು ಸ್ಯಾನಿಟೈಜರ್ ನೀಡಿ ಗೌರವ ಸಲ್ಲಿಸಿದ್ದಾರೆ.

    ಸರ್ಕಾರ ಈಗಾಗಲೇ ಎಲ್ಲರೂ ಮಾಸ್ಕ್ ಧರಿಸಿಯೇ ಹೊರಗಡೆ ಬರಬೇಕು ಎಂದು ಖಡಕ್ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ, ಇಂದು ಎಂಎಲ್‍ಸಿ ಗೋಪಾಲಸ್ವಾಮಿ ಸುಮಾರು ಒಂದು ಲಕ್ಷ ಮಾಸ್ಕ್ ಅನ್ನು ಚನ್ನರಾಯಪಟ್ಟಣ ತಾಲೂಕಿನ ಜನರಿಗೆ ವಿತರಿಸುವ ವ್ಯವಸ್ಥೆ ಮಾಡಿದರು. ತಾಲೂಕಿನಲ್ಲಿ ಸುಮಾರು 75 ಸಾವಿರ ಪಡಿತರದಾರರಿದ್ದು ನ್ಯಾಯಬೆಲೆ ಅಂಗಡಿ ಮೂಲಕ ಪ್ರತಿಯೊಬ್ಬರಿಗೂ ಮಾಸ್ಕ್ ಸಿಗುವಂತೆ ತಾವೇ ಸ್ವತಃ ನ್ಯಾಯಬೆಲೆ ಅಂಗಡಿಗೆ ತೆರಳಿ ಮಾಸ್ಕ್ ಬಾಕ್ಸ್ ವಿತರಿಸಿದರು.

    ಅಷ್ಟೇ ಅಲ್ಲದೆ ಆಶಾ ಕಾರ್ಯಕರ್ತೆಯರು, ಪೊಲೀಸರು ಮತ್ತು ಕೊರೊನಾ ವಿರುದ್ಧ ಹೋರಾಡುತ್ತಿರುವವರಿಗೆ ಪ್ರತಿಯೊಬ್ಬರಿಗೂ ತಲುಪುವಂತೆ ಸೂಚಿಸಿ ಅಧಿಕಾರಿಗಳಿಗೆ ಮಾಸ್ಕ್ ಬಾಕ್ಸ್ ಮತ್ತು ಸ್ಯಾನಿಟೈಸರ್ ವಿತರಣೆ ಮಾಡಿದರು.

  • ಹಾಸನ ಡಿಸಿ ರೋಹಿಣಿ ಸಿಂಧೂರಿ ವಿರುದ್ಧ ಸಭಾಪತಿಗೆ ದೂರು

    ಹಾಸನ ಡಿಸಿ ರೋಹಿಣಿ ಸಿಂಧೂರಿ ವಿರುದ್ಧ ಸಭಾಪತಿಗೆ ದೂರು

    ಹಾಸನ: ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ವಿಧಾನ ಪರಿಷತ್ ಸದಸ್ಯ ಗೋಪಾಲಸ್ವಾಮಿಯವರು ಸಭಾಪತಿ ಶಂಕರಮೂರ್ತಿ ಅವರಿಗೆ ದೂರು ನೀಡಿದ್ದಾರೆ.

    ಹಾಸನಾಂಬ ಜಾತ್ರೆ ಪೂರ್ವಭಾವಿ ಸಭೆಯಲ್ಲಿ ರೋಹಿಣಿ ಸಿಂಧೂರಿ ಅವರು ನನ್ನನ್ನು ಆಹ್ವಾನಿಸದೆ, ಶಿಷ್ಟಾಚಾರ ಉಲ್ಲಂಘಿಸಿದ್ದಾರೆ ಎಂದು ಗೋಪಾಲಸ್ವಾಮಿಯವರು ದೂರಿನಲ್ಲಿ ಆರೋಪಿಸಿದ್ದಾರೆ.

    ಸೆಪ್ಟೆಂಬರ್ 27 ಡಿಸಿ ಕಚೇರಿಯಲ್ಲಿ ಹಾಸನಾಂಬ ಜಾತ್ರೆ ಪೂರ್ವಭಾವಿ ಸಭೆಗೆ ಇತರೆ ಜನಪ್ರತಿನಿಧಿಗಳನ್ನು ಆಹ್ವಾನಿಸಿದ್ದಾರೆ. ಆದರೆ ನನ್ನನ್ನು ಉದ್ದೇಶಪೂರ್ವಕವಾಗಿ ಆಹ್ವಾನ ನೀಡದೇ ಶಿಷ್ಟಾಚಾರ ಉಲ್ಲಂಘಿಸಿದ್ದಾರೆ. ಹೀಗಾಗಿ ರೋಹಿಣಿ ಸಿಂಧೂರಿ ಅವರ ವಿರುದ್ಧ ಶಿಸ್ತುಕ್ರಮವನ್ನು ಕೈಗೊಳ್ಳಬೇಕೆಂದು ಸಭಾಪತಿ ಅವರಲ್ಲಿ ಮನವಿ ಮಾಡಿಕೊಂಡು ಲಿಖಿತ ದೂರು ನೀಡಿದ್ದಾರೆ.