Tag: Gopal shetty

  • ಇದು ಇನ್ನೂ ಅರಂಭ, ನಾನು ರಾಜಕೀಯ ಬಿಡಲ್ಲ – ಊರ್ಮಿಳಾ ಮಾತೋಂಡ್ಕರ್

    ಇದು ಇನ್ನೂ ಅರಂಭ, ನಾನು ರಾಜಕೀಯ ಬಿಡಲ್ಲ – ಊರ್ಮಿಳಾ ಮಾತೋಂಡ್ಕರ್

    ಮುಂಬೈ: ಇದು ಇನ್ನೂ ಅರಂಭ, ಆದರೆ ನಾನು ರಾಜಕೀಯವನ್ನು ಬಿಡುವುದಿಲ್ಲ ಎಂದು ಬಾಲಿವುಡ್ ತಾರೆ ಮತ್ತು ಮುಂಬೈ ಉತ್ತರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಊರ್ಮಿಳಾ ಮಾತೋಂಡ್ಕರ್ ಹೇಳಿದ್ದಾರೆ.

    ಊರ್ಮಿಳಾ ಮಾತೋಂಡ್ಕರ್ ಈ ಬಾರಿ ಮುಂಬೈ ಉತ್ತರ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯ ಅಭ್ಯರ್ಥಿ ಗೋಪಾಲ್ ಶೆಟ್ಟಿ ವಿರುದ್ಧ ಸ್ಪರ್ಧಿಸಿ, 4,52,226 ಲಕ್ಷ ಮತಗಳ ಅಂತರದಲ್ಲಿ ಸೋತಿದ್ದಾರೆ.

    ಈ ಸೋಲಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ಊರ್ಮಿಳಾ “ನನಗೆ ಈ ಚುನಾವಣೆ ಬಹಳ ಮಹತ್ವವದದ್ದು ಎಂದು ಮೊದಲಿನಿಂದಲೂ ಹೇಳಿಕೊಂಡು ಬಂದಿದ್ದೇನೆ. ನಾನು ರಾಜಕೀಯದಲ್ಲಿ ಇನ್ನೂ ಮುಂದುವರೆಯುತ್ತೇನೆ. ನಾನು ನಿಮ್ಮ ಮುಂದೆ ಸೋತ ವ್ಯಕ್ತಿಯಂತೆ ನಿಂತಿಲ್ಲ. ಒಬ್ಬ ವ್ಯಕ್ತಿಗೆ ಅತ್ಮಸಾಕ್ಷಿ ಎಂಬುವುದು ಬಹಳ ಮುಖ್ಯ. ನಾನು ಈ ಚುನಾವಣೆಯಲ್ಲಿ ಘನತೆಯಿಂದ ಮತ್ತು ಸಮಗ್ರತೆಯಿಂದ ಕೆಲಸ ಮಾಡಿದ್ದೇನೆ ಅದು ನನಗೆ ಖುಷಿಯಿದೆ” ಎಂದು ತಿಳಿಸಿದರು.

    ಈ ಚುನಾವಣೆ ನನಗೆ ಅದ್ಭುತ ಅನುಭವವನ್ನು ನೀಡಿದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನಾನು ಮಾಡಿದ ಕೆಲಸಗಳ ಮೇಲೆ ನನಗೆ ಹೆಮ್ಮೆ ಇದೆ. ಇದು ಇನ್ನೂ ಅರಂಭ ಇನ್ನೂ ಮಾಡುವ ಕೆಲಸ ತುಂಬ ಇದೆ ಅದಕ್ಕಾಗಿ ನಾನು ಸಿದ್ಧವಾಗುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಎಲೆಕ್ಟ್ರಾನಿಕ್ ಮತದಾನ ಯಂತ್ರ (ಇವಿಎಂ) ನಲ್ಲಿ ಹಾಕಿರುವ ಸಹಿಗಳು ಹೊಂದಾಣಿಕೆ ಬರುತ್ತಿಲ್ಲ ಎಂದು ಊರ್ಮಿಳಾ ಆರೋಪ ಮಾಡಿದ್ದರು. ಈ ವಿಚಾರದ ಬಗ್ಗೆ ಕೇಳಿದಾಗ. ನಾನು ಗೋಪಾಲ್ ಶೆಟ್ಟಿ ಅವರ ಗೆಲುವಿಗೆ ಅಭಿನಂದನೆ ಹೇಳುತ್ತೇನೆ. ಆದರೆ ನಮಗೆ ಇವಿಎಂನಲ್ಲಿ ಕೆಲವು ಭಿನ್ನತೆಗಳು ಕಂಡುಬಂದಿವೆ. ಇದರ ಬಗ್ಗೆ ತನಿಖೆ ಮಾಡುವಂತೆ ಚುನಾವಣಾ ಅಯೋಗಕ್ಕೆ ದೂರು ನೀಡಿದ್ದೇವೆ ಎಂದು ಹೇಳಿದರು.

  • ಮತ್ತೆ ಮೋದಿ ಪ್ರಧಾನಿ – ಸಂಭ್ರಮಕ್ಕೆ ಸಿದ್ಧವಾಗುತ್ತಿದೆ 2 ಸಾವಿರ ಕೆಜಿ ಸ್ವೀಟ್

    ಮತ್ತೆ ಮೋದಿ ಪ್ರಧಾನಿ – ಸಂಭ್ರಮಕ್ಕೆ ಸಿದ್ಧವಾಗುತ್ತಿದೆ 2 ಸಾವಿರ ಕೆಜಿ ಸ್ವೀಟ್

    ಮುಂಬೈ: ಲೋಕಸಭಾ ಚುನಾವಣಾ ಫಲಿತಾಂಶ ಮೇ 23ರಂದು ಹೊರ ಬೀಳಲಿದ್ದು, ಗೆಲುವಿನ ಸಂಭ್ರಮ ಆಚರಿಸಿಕೊಳ್ಳಲು ಬಿಜೆಪಿ ಸಕಲ ಸಿದ್ಧತೆ ನಡೆಸಿದೆ. ಇತ್ತ ಮುಂಬೈನ ಬೊರಿವಲಿ ಪ್ರದೇಶದ ಸ್ವೀಟ್‍ಮಾರ್ಟ್ ನಲ್ಲಿ ಸಿಬ್ಬಂದಿ ಮೋದಿ ಮುಖವಾಡ ಧರಿಸಿ ವಿವಿಧ ಬಗೆಯ ಸಿಹಿ ಖಾದ್ಯ ತಯಾರಿಸುತ್ತಿದ್ದಾರೆ.

    ಮುಂಬೈ ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋಪಾಲ್ ಶೆಟ್ಟಿ ಅವರು 1500-2000 ಕೆ.ಜಿ. ಸಿಹಿ ಖಾದ್ಯಗಳ ಬೇಡಿಕೆ ಇಟ್ಟಿದ್ದಾರೆ. ಹೀಗಾಗಿ ಸಿಬ್ಬಂದಿ ಪ್ರಧಾನಿ ನರೇಂದ್ರ ಮೋದಿಯವರ ಮುಖವಾಡ ಧರಿಸಿ ಉತ್ಸುಕತೆಯಿಂದ ಕೆಲಸ ಮಾಡುತ್ತಿದ್ದಾರೆ ಎಂದು ಸ್ವೀಟ್‍ಮಾರ್ಟ್ ಮಾಲೀಕ ತಿಳಿಸಿದ್ದಾರೆ.

    ಲೋಕಸಭಾ ಚುನಾವಣೆಗೆ ಮೇ 19 ರಂದು ನಡೆದ ಕೊನೆಯ ಹಂತದ ಮತದಾನ ನಡೆಯಿತು. ಅಂದು ಸಂಜೆ ಬಿಡುಗಡೆಯಾದ ಬಹುಪಾಲು ಎಕ್ಸಿಟ್ ಪೋಲ್‍ಗಳು ಮತ್ತೊಮ್ಮೆ ಕೇಂದ್ರದಲ್ಲಿ ಮೋದಿ ಸರ್ಕಾರ ರಚನೆಗೆ ಮುಂದಾಗಿದೆ ಎಂದು ತಿಳಿಸಿದ್ದವು. ಇದರಿಂದಾಗಿ ಎನ್‍ಡಿಎ ಮೈತ್ರಿ ಕೂಟದಲ್ಲಿ ಸಂತೋಷದ ಅಲೆ ಎದ್ದಿದ್ದು, ವಿರೋಧ ಪಕ್ಷಗಳು ನಿರಾಶೆಯಲ್ಲಿ ಮುಳುಗಿವೆ. ಈ ಮೂಲಕ ಬಿಜೆಪಿ ನಾಯಕರು ಮತ ಎಣಿಕೆಗೂ ಎರಡು ದಿನಗಳ ಮೊದಲೇ ಸಿಹಿತಿಂಡಿಗಳಿಗೆ ಬೇಡಿಕೆ ಇಟ್ಟಿದ್ದಾರೆ.

    ಮುಂಬೈ ಉತ್ತರ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯ ಗೋಪಾಲ್ ಶೆಟ್ಟಿ ವಿರುದ್ಧ ಚಿತ್ರದ ನಟಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ಉರ್ಮಿಳಾ ಮಾತೋಂಡ್ಕರ್ ಕಣಕ್ಕೆ ಇಳಿದಿದ್ದಾರೆ. ಸಮೀಕ್ಷೆಗಳ ಪ್ರಕಾರ ತಮ್ಮ ಗೆಲುವು ಖಚಿತ ಹಾಗೂ ಕೇಂದ್ರದಲ್ಲಿ ಮತ್ತೆ ಎನ್‍ಡಿಎ ಸರ್ಕಾರ ರಚನೆಯಾಗುತ್ತದೆ ಎಂಬ ಡಬಲ್ ಸಂಭ್ರಮದಲ್ಲಿರುವ ಗೋಪಾಲ್ ಶೆಟ್ಟಿ ಅವರು 2 ಸಾವಿರ ಕೆಜಿ ಸ್ವೀಟ್‍ಗೆ ಬೇಡಿಕೆ ಇಟ್ಟಿದ್ದಾರೆ.