Tag: Good News

  • ತಿಂಗಳಿಗೊಂದು ಸಿಹಿ ಸುದ್ದಿ ಕೊಡ್ತೀನಿ ಅಂತ ಹೇಳಿ ಸಿಎಂ ಎಡವಟ್ ಮಾಡ್ಕೊಂಡ್ರಾ?

    ತಿಂಗಳಿಗೊಂದು ಸಿಹಿ ಸುದ್ದಿ ಕೊಡ್ತೀನಿ ಅಂತ ಹೇಳಿ ಸಿಎಂ ಎಡವಟ್ ಮಾಡ್ಕೊಂಡ್ರಾ?

    ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ದೀಪಾವಳಿ ಹಬ್ಬಕ್ಕೆ ಮಾತ್ರವಲ್ಲದೇ ಇನ್ನು ಮುಂದೆ ಪ್ರತಿ ತಿಂಗಳು ಒಂದೊಂದು ಸಿಹಿ ಸುದ್ದಿ ಕೊಡುತ್ತೇನೆ ಎಂದು ಹೇಳಿದ್ದಾರೆ.

    ಚುನಾವಣೆ ಬಳಿಕ ಮುಂದಿನ ತಿಂಗಳು ರೈತರ ಬೃಹತ್ ಸಮಾವೇಶ ಆಯೋಜಿಸಿ ಋಣ ಪತ್ರ ಹಂಚಿಕೆ ಮಾಡುತ್ತೇನೆ. ಅದಕ್ಕೆ ಪೂರಕವಾದ ಸಾಕಷ್ಟು ಯೋಜನೆಗಳನ್ನು ಸಿದ್ಧಪಡಿಸಿಕೊಂಡಿದ್ದೇನೆ. ಇದರಿಂದ ದೀಪಾವಳಿ ಮಾತ್ರವಲ್ಲದೇ ಪ್ರತಿ ತಿಂಗಳು ಸಿಹಿ ಸುದ್ದಿ ನೀಡುತ್ತೇನೆ ಎಂದು ನಗರದಲ್ಲಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

    ರೈತರ ಸಾಲ ಮನ್ನಾ ನಿರ್ಧಾರದಿಂದ ಯಾವುದೇ ಕಾರಣಕ್ಕೂ ಹಿಂದೆ ಸರಿಯುವ ಮಾತೇ ಇಲ್ಲ ಅಂತ ಸಿಎಂ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ರೈತರ ಸಾಲ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದೇನೆ. ಸಂಪೂರ್ಣ ಮಾಹಿತಿ ಇಲ್ಲದೆ ಫಜೀತಿಯಾಗಬಾರದು. ಬಜೆಟ್ ನಲ್ಲಿ ಇದಕ್ಕೆ ಅಂತಾನೇ ಹಣವನ್ನ ಮೀಸಲಿಟ್ಟಿದ್ದೇನೆ. 43 ಸಾವಿರ ಕೋಟಿ ಸಣ್ಣ ಮೊತ್ತ ಅಲ್ಲ. ಮಾಹಿತಿ ಕೊಟ್ಟಿರುವ ರೈತರ ವಿವರವನ್ನ ಉಸ್ತುವಾರಿ ಸಮಿತಿಗೆ ಕಳುಹಿಸಲಾಗಿದೆ. ಇನ್ನು ಬೆಂಗಳೂರಿನಲ್ಲಿ 10 ಲಕ್ಷ ರೈತರನ್ನೊಳಗೊಂಡ ಬೃಹತ್ ಸಮಾವೇಶ ಮಾಡುತ್ತೇನೆ. ಸಮಾವೇಶ ಮಾಡಿ ರೈತರಿಗೆ ಸಾಲಮನ್ನಾ ಋಣಮುಕ್ತ ಪತ್ರ ನೀಡುತ್ತೇನೆ ಅಂತ ಸಿಎಂ ತಿಳಿಸಿದ್ದಾರೆ.

    ನೀತಿ ಸಂಹಿತೆ ಉಲ್ಲಂಘನೆ: ಐದು ಕ್ಷೇತ್ರದಲ್ಲಿ ಉಪಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿದೆ. ಆದರೆ ಈ ವೇಳೆ ರಾಜ್ಯದ ಜನರಿಗೆ ಪ್ರತಿ ತಿಂಗಳ ಒಂದೊಂದು ಸಿಹಿ ಸುದ್ದಿ ನೀಡುತ್ತೇನೆ ಎಂದು ಬಹಿರಂಗವಾಗಿ ಸಿಎಂ ಕುಮಾರಸ್ವಾಮಿ ಅವರು ಹೇಳಿದ್ದಾರೆ. ಈ ಹೇಳಿಕೆಯಿಂದ ನೀತಿ ಸಂಹಿತೆ ಉಲ್ಲಂಘನೆ ಆಗಿದ್ಯಾ? ಇಲ್ಲವೋ ಎನ್ನುವ ಗೊಂದಲ ಈಗ ಎದ್ದಿದೆ. ಹೀಗಾಗಿ ಚುನಾವಣೆ ಆಯೋಗ ಮುಂದೆ ಯಾವ ಕ್ರಮ ತೆಗೆದುಕೊಳ್ಳುತ್ತದೆ ಎನ್ನುವ ಕುತೂಹಲ ಹೆಚ್ಚಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್

    ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್

    ಬೆಂಗಳೂರು: ನಗರದಲ್ಲಿ ಪ್ರಯಾಣಿಸಲು ಮೆಟ್ರೋ ಸೇವೆಯನ್ನೇ ನೆಚ್ಚಿಕೊಂಡಿರುವ ಮಂದಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಇದುವರೆಗೂ 3 ನಿಮಿಷಕ್ಕೊಂದರಂತೆ ಓಡಾಟ ನಡೆಸುತ್ತಿದ್ದ ಟ್ರೈನ್ ಅವಧಿಯನ್ನು ಬದಲಾಯಿಸಿ ಮೆಟ್ರೋ 2 ನಿಮಿಷಕ್ಕೆ ಇಳಿಕೆ ಮಾಡಲಾಗಿದೆ.

    ಇಂದು ನಡೆದ ಮೆಟ್ರೊ ಅಧಿಕಾರಿಗಳ ಸಭೆಯಲ್ಲಿ ಈ ನಿರ್ಣಯವನ್ನು ಕೈಗೊಳ್ಳಲಾಗಿದ್ದು, ಉಪ ಮುಖ್ಯಮಂತ್ರಿ ಪರಮೇಶ್ವರ್ ಅವರು ಮೆಟ್ರೋ ಸಂಚಾರ ನಡುವಿನ ಈಗಿನ ಅವಧಿಯನ್ನು 2 ನಿಮಿಷಕ್ಕೆ ಇಳಿಕೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

    ಬಿಎಂಆರ್ ಸಿಎಲ್ ಎಂಡಿ ಅಜಯ್ ಸೇಠ್ ನಮ್ಮ ಮೆಟ್ರೋ ಉಸ್ತುವಾರಿ ತೆಗೆದುಕೊಂಡ ಬಳಿಕ ಮೊದಲ ಸಭೆ ನಡೆಸಲಾಗಿದ್ದು, ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು. ಡಿಸಿಎಂ ಪರಮೇಶ್ವರ್ ಅವರಿಗೆ ಮೆಟ್ರೋದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ ಅಧಿಕಾರಿಗಳು, ಮೆಟ್ರೋದ ಪ್ರಗತಿಯಲ್ಲಿರುವ ಕಾಮಗಾರಿ, ಆದಾಯ, ಹೊಸ ಮಾರ್ಗಗಳು ಸೇರಿದಂತೆ ಪ್ರಗತಿ ಕಾರ್ಯಗಳ ಕುರಿತು ಮಾಹಿತಿ ನೀಡಿದ್ದಾರೆ.

    ಸಭೆಯಲ್ಲಿ ಮೆಟ್ರೋ ವೆಚ್ಚಕ್ಕೆ ಕಡಿವಾಣ ಹಾಕುವ ಕುರಿತು ಕೂಡ ಚರ್ಚೆ ನಡೆಸಲಾಗಿದ್ದು, ಆದಾಯಕ್ಕಿಂತ ಖರ್ಚು ಹೆಚ್ಚಾಗುತ್ತಿರುವ ಹಿನ್ನಲೆ ಖರ್ಚು ಕಡಿಮೆ ಮಾಡುವಂತೆ ಅಧಿಕಾರಿಗಳಿಗೆ ಸುಚನೆ ನೀಡಿದ್ದಾರೆ. ಸದ್ಯ ನಮ್ಮ ಮೆಟ್ರೋ ಆದಾಯ ಪ್ರತಿ ತಿಂಗಳು ಸರಾಸರಿ 30 ಕೋಟಿ ಬರುತ್ತಿದ್ದು, ಖರ್ಚು 35 ಕೋಟಿ ರೂ. ಆಗುತ್ತಿದೆ ಎಂಬ ಮಾಹಿತಿ ಲಭಿಸಿದೆ. ಅಲ್ಲದೇ ಪ್ರತಿ ತಿಂಗಳು 10 ಕೋಟಿ ಉಳಿತಾಯ ಮಾಡುವತ್ತ ಹೆಚ್ಚಿನ ಒತ್ತು ನೀಡಲು ಸಭೆಯಲ್ಲಿ ಸೂಚನೆ ನೀಡಲಾಗಿದೆ.

    ಪ್ರಸ್ತುತ ಬೆಳಗ್ಗೆ 8 ರಿಂದ 11 ಗಂಟೆಯವರೆಗೆ ಸಂಜೆ 5 ರಿಂದ ರಾತ್ರಿ 8 ಗಂಟೆಯವರೆಗೆ ಪ್ರತಿ ಮೂರು ನಿಮಿಷಕ್ಕೆ ಒಂದರಂತೆ ರೈಲು ಸಂಚರಿಸುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದೇಶದಲ್ಲೇ ಫಸ್ಟ್.. ಮಹಾರಾಷ್ಟ್ರದ ಮದ್ಯ ಪ್ರಿಯರಿಗೆ ಗುಡ್ ನ್ಯೂಸ್!

    ದೇಶದಲ್ಲೇ ಫಸ್ಟ್.. ಮಹಾರಾಷ್ಟ್ರದ ಮದ್ಯ ಪ್ರಿಯರಿಗೆ ಗುಡ್ ನ್ಯೂಸ್!

    ಮುಂಬೈ: ಮದ್ಯಪ್ರಿಯರಿಗೆ ಮಹಾರಾಷ್ಟ್ರ ಸರ್ಕಾರದಿಂದ ಗುಡ್ ನ್ಯೂಸ್ ಸಿಕ್ಕಿದೆ. ಸರ್ಕಾರ ಮದ್ಯವನ್ನ ಮನೆ ಬಾಗಿಲಿಗೇ ತಲುಪಿಸಲು ಹೊಸ ನೀತಿ ತರಲು ಮುಂದಾಗಿದೆ.

    ಮಾಧ್ಯಮಗಳೊಂದಿಗೆ ಮಾತನಾಡಿದ ಮಹಾರಾಷ್ಟ್ರ ಅಬಕಾರಿ ಸಚಿವ ಚಂದ್ರಶೇಕರ್ ಬಾವಾಂಕುಲೆ, ಮದ್ಯ ಮಾರಾಟಗಾರರಿಗೆ ಇದು ಶಾಕ್ ಕೊಡುವ ಸಂಗತಿ. ಇಡೀ ದೇಶದಲ್ಲೇ ಮೊದಲ ಬಾರಿಗೆ ಮಹಾರಾಷ್ಟ್ರ ಸರ್ಕಾರ ಮದ್ಯವನ್ನ ಮನೆ ಬಾಗಿಲಿಗೆ ತಲುಪಿಸುವ ಹೊಸ ನೀತಿಯನ್ನ ಜಾರಿಗೊಳಿಸಲಿದೆ ಎಂದು ಹೇಳಿದ್ದಾರೆ.

    ಕುಡಿದ ಮತ್ತಿನಲ್ಲಿ ವಾಹನ ಚಾಲನೆಯಿಂದ ಆಗುವ ಅಪಘಾತಗಳು ಹೆಚ್ಚಾಗುತ್ತಿದ್ದು, ಇದರಿಂದ ಸಾಕಷ್ಟು ಸಾವು-ನೋವುಗಳು ಸಂಭವಿಸಿದೆ. ಇದನ್ನ ತಡೆಯಲು ಸರ್ಕಾರವು ಸಾರ್ವಜನಿಕರು ಆನ್‍ಲೈನ್ ನಲ್ಲಿ ಹೇಗೆ ಹಣ್ಣು-ತರಕಾರಿಗಳನ್ನ ಖರೀದಿ ಮಾಡುತ್ತಾರೋ ಅದೇ ರೀತಿಯಾಗಿ ಇ- ಪೋರ್ಟಲ್ ಮೂಲಕ ಈ ಸೇವೆಯನ್ನ ಪಡೆಯಬಹುದು ಎಂದು ಬಾವಾಂಕುಲೆ ಹೇಳಿದ್ದಾರೆ. ಇದನ್ನು ಓದಿ:  ಖಾವಿ ಧರಿಸಿ ಮದ್ಯ ಕುಡಿಯಲು ಬಂದ ವ್ಯಕ್ತಿಗೆ ಬಾರಿನಲ್ಲೇ ಹಲ್ಲೆ

    ಆನ್‍ಲೈನ್ ನಲ್ಲಿ ಖರೀದಿ ಮಾಡುವ ವ್ಯಕ್ತಿಯ ವಯಸ್ಸನ್ನು ತಿಳಿದುಕೊಳ್ಳಲು, ಗ್ರಾಹಕರ ಆಧಾರ್ ನಂಬರ್ ಅನ್ನು ಪಡೆದುಕೊಳ್ಳಲಾಗುವುದು. ಅಕ್ರಮ ಮದ್ಯ ಸಾಗಾಣಿಕೆಯನ್ನ ತಡೆಯಲು ಸರ್ಕಾರವೂ ಎಲ್ಲಾ ಮದ್ಯ ಬಾಟಲಿಗಳ ಮೇಲೆ ಟ್ಯಾಗ್ ಗಳನ್ನ ಅಳವಡಿಸಲಾಗುತ್ತದೆ. ಈ ಟ್ಯಾಗ್‍ನ ಸಹಾಯದಿಂದ ಉತ್ಪದನೆಯ ದಿನಾಂಕ, ಸ್ಥಳ ಮತ್ತು ಮಾರಾಟದ ಮಾಹಿತಿಯನ್ನ ಪತ್ತೆಹಚ್ಚಲಾಗುವುದು ಎಂದು ಹೇಳಿದ್ದಾರೆ. ಇದನ್ನು ಓದಿ: ಕುಡುಕರ ಜೇಬಿಗೆ ಕತ್ತರಿ- ಸಿಎಲ್ ಬಾರ್ ಗಳಲ್ಲಿ ದುಪ್ಪಟ್ಟು ಹಣ ವಸೂಲಿ

    ಸರ್ಕಾರದ ಈ ನಡೆಯನ್ನ ಮೆಚ್ಚಿದ ಹೈಕೋರ್ಟ್ ವಕೀಲರಾದ ಶ್ರೀರಾರ್, “ಸರ್ಕಾರದ ಈ ಕಾನೂನಿಂದ ಅಪಘಾತ ತಡೆ, ಜನರ ಸಮಯವನ್ನ ಉಳಿಸಿದಲ್ಲದೇ ಸಾಕಷ್ಟು ಯುವ ಜನತೆಗೆ ಉದ್ಯೋಗ ಅವಕಾಶ ಸೃಷ್ಟಿಯಾಗುತ್ತದೆ. ಇದರಿಂದ ಗ್ರಾಹಕರಿಗೆ ಮತ್ತಷ್ಟು ಅನುಕೂಲವಾಗುತ್ತದೆ” ಎಂದು ಹೇಳಿದ್ದಾರೆ.

    ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯುರೋ(ಎನ್‍ಸಿಆರ್‍ಬಿ) ಪ್ರಕಾರ 2015 ರಲ್ಲಿ ಒಟ್ಟು ದಾಖಲಾದ 4.64 ಲಕ್ಷ ಅಪಘಾತಗಳಲ್ಲಿ ಪೈಕಿ 1.5% ಅಪಘಾತಗಳಿಗೆ ಮದ್ಯಸೇವನೆಯೇ ಕಾರಣವಾಗಿದೆ. ಒಟ್ಟು 6,295 ಮಂದಿ ಗಾಯಗೊಂಡಿದ್ದರೆ 2,958 ಮಂದಿ ಮೃತಪಟ್ಟಿದ್ದರು. ಇದನ್ನು ಓದಿ: ಗೋವಾದಲ್ಲಿ ಸಾರ್ವಜನಿಕವಾಗಿ ಮದ್ಯಸೇವನೆ ಮಾಡಿದ್ರೆ 2,500 ರೂ. ದಂಡ: ಪರಿಕ್ಕರ್

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅಪಘಾತದ ನಂತ್ರ ದರ್ಶನ್ ಅಭಿಮಾನಿಗಳಿಗೆ ಗುಡ್ ನ್ಯೂಸ್

    ಅಪಘಾತದ ನಂತ್ರ ದರ್ಶನ್ ಅಭಿಮಾನಿಗಳಿಗೆ ಗುಡ್ ನ್ಯೂಸ್

    ಬೆಂಗಳೂರು: ಕಾರ್ ಅಪಘಾತಕ್ಕೀಡಾಗಿ ಕೈ ಮೂಳೆ ಮುರಿದು ವಿಶ್ರಾಂತಿ ಪಡೆಯುತ್ತಿರೋ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಇದೀಗ ಗ್ರಾವೆಲ್ ಫೆಸ್ಟ್ 2018 ಕಾರ್ ರೇಸ್‍ನಲ್ಲಿ ಭಾಗವಹಿಸಲು ಲೈಸನ್ಸ್ ಪಡೆದುಕೊಂಡಿದ್ದಾರೆ.

    ದಸರಾ ಮಹೋತ್ಸವ ಪ್ರಯುಕ್ತ ಅಕ್ಟೋಬರ್ 6 ಹಾಗೂ 7 ರಂದು ಲಲಿತ್ ಮಹಲ್‍ನ ಹೆಲಿಪ್ಯಾಡ್ ಮೈದಾನದಲ್ಲಿ ಕಾರ್ ರೇಸ್ ನಡೆಯಲಿದೆ. ಈ ರೇಸ್‍ನಲ್ಲಿ ಭಾಗವಹಿಸಲು ದರ್ಶನ್ ಎಲ್ಲ ತಯಾರಿ ನಡೆಸಿಕೊಂಡಿದ್ದರು. ಆದರೆ ಈ ಮಧ್ಯೆ ದರ್ಶನ್ ಅವರಿಗೆ ಅಪಘಾತವಾಯಿತು.

    ದರ್ಶನ್ ಅವರ ಕಾರ್ ರೇಸ್ ಲೈಸನ್ಸ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಾರು ಅಪಘಾತಕ್ಕೀಡಾದ ನಂತರ ವೈದ್ಯರು ಅವರಿಗೆ ವಿಶ್ರಾಂತಿ ಪಡೆಯಲು ಹೇಳಿದ್ದರು. ಆದರೆ ಈಗ ದರ್ಶನ್ ಅವರಿಗೆ ಕಾರ್ ರೇಸ್ ಲೈಸನ್ಸ್ ಸಿಕ್ಕಿರುವುದು ಅಭಿಮಾನಿಗಳಿಗೆ ಕುತೂಹಲ ಮೂಡಿಸಿದೆ. ಕಾರ್ ಅಪಘಾತದಲ್ಲಿ ಬಲಗೈ ಪೆಟ್ಟು ಮಾಡಿಕೊಂಡಿರುವ ದರ್ಶನ್ ಅವರು ಈ ಕಾರ್ ರೇಸ್‍ನಲ್ಲಿ ಭಾಗವಹಿಸುತ್ತಾರಾ ಎಂಬುದು ಅಧಿಕೃತವಾಗಿ ತಿಳಿದುಬಂದಿಲ್ಲ.

    ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಡಿಸ್ಚಾರ್ಜ್ ಆಗುತ್ತಿದ್ದಂತೆಯೇ ದರ್ಶನ್ ಅವರು ನೇರವಾಗಿ ಚಾಮುಂಡಿ ಬೆಟ್ಟಕ್ಕೆ ತೆರಳಿ ತಾಯಿಗೆ ಪೂಜೆ ಸಲ್ಲಿಸಿದ್ದರು. ಇದೀಗ ಮತ್ತೆ ಮಂಗಳವಾರ ತಮ್ಮ ಪತ್ನಿ ವಿಜಯಲಕ್ಷ್ಮೀ ಅವರೊಂದಿಗೆ ಜೊತೆ ದೇವಸ್ಥಾನಕ್ಕೆ ತೆರಳಿ ದೇವಿಯ ಆಶೀರ್ವಾದ ಪಡೆದಿದ್ದಾರೆ.

    ಚಾಮುಂಡಿ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ ದರ್ಶನ್ ದಂಪತಿ ಬಳಿಕ ಚಾಮುಂಡಿ ಬೆಟ್ಟದ ಪ್ರಧಾನ ಅರ್ಚಕರಾದ ಶಶಿಶೇಖರ್ ದೀಕ್ಷಿತ್ ಅವರ ನಿವಾಸಕ್ಕೆ ಭೇಟಿ ನೀಡಿದ್ದರು. ಈ ವೇಳೆ ಕುಟುಂಬಸ್ಥರ ಜೊತೆ ಕುಶಲೋಪರಿ ವಿಚಾರಿಸಿದರು. ಕೆಲ ಸ್ನೇಹಿತರು ಕೂಡ ದರ್ಶನ್ ಗೆ ಸಾಥ್ ನೀಡಿದ್ದರು.

    ಶನಿವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದ ದರ್ಶನ್ ಅವರ ಬಲಗೈ ಮೂಳೆ ಮುರಿದಿದ್ದು, ಪ್ಲೇಟ್ ಅಳವಡಿಸಲಾಗಿದೆ. ಆಸ್ಪತ್ರೆಯಿಂದ ಹೊರ ಬಂದ ಬಳಿಕ ಮಾತನಾಡಿದ್ದ ದರ್ಶನ್ ಆಸ್ಪತ್ರೆಯಲ್ಲಿ ವೈದ್ಯರು ಉತ್ತಮ ಚಿಕಿತ್ಸೆ ನೀಡಿದ್ದಾರೆ. ನಾನು ಚೇತರಿಸಿಕೊಳ್ಳಲು ಹೆಚ್ಚಿನ ಸಮಯ ಬೇಕಾಗಿಲ್ಲ. ಒಂದು ತಿಂಗಳ ವಿಶ್ರಾಂತಿ ಬಳಿಕ ಮತ್ತೆ ಜಿಮ್ ಮಾಡುತ್ತೇನೆ ಎಂದು ತಿಳಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕನ್ನಡ ಪ್ರೇಕ್ಷಕರಿಗೆ ಪುಟ್ಟಗೌರಿ ಕಡೆಯಿಂದ ಗುಡ್ ನ್ಯೂಸ್

    ಕನ್ನಡ ಪ್ರೇಕ್ಷಕರಿಗೆ ಪುಟ್ಟಗೌರಿ ಕಡೆಯಿಂದ ಗುಡ್ ನ್ಯೂಸ್

    ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಹಲವು ವರ್ಷಗಳಿಂದ ಪ್ರಸಾರವಾಗುತ್ತಿದ್ದ ‘ಪುಟ್ಟಗೌರಿ ಮದುವೆ’ ಧಾರಾವಾಹಿ ಕೊನೆಗೂ ಮುಕ್ತಾಯವಾಗುತ್ತಿದೆ.

    ಎಲ್ಲರ ಪ್ರೀತಿ- ಆಶೀರ್ವಾದದಿಂದ ಪುಟ್ಟಗೌರಿ 1800 ಎಪಿಸೋಡ್ ಮುಗಿಸಿ ಯಶಸ್ವಿ ಪ್ರದರ್ಶನವಾಗ್ತಿದೆ. ಆದರೆ ಪುಟ್ಟಗೌರಿ ತಂಡಕ್ಕೆ ಸೀರಿಯಲ್ ಸ್ಟಾಪ್ ಮಾಡುವ ಯೋಚನೆ ಬಂದಿದೆ. ಹಾಗಾಗಿ ಭರದಿಂದ ಚಿತ್ರೀಕರಣ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

    ಈ ಸುದ್ದಿ ಕೇಳಿ ಕೆಲವರ ಮನಸ್ಸಿಗೆ ಖುಷಿಯಾಗಿದೆ. ಆದರೆ ಮಹಿಳೆಯರಿಗೆ ಇದು ಒಂದು ದುಃಖದ ವಿಷಯ ಎಂದು ಹೇಳಬಹುದು. ಧಾರಾವಾಹಿ ನಿರ್ದೇಶಕರು ಹಾಗೂ ನಿರ್ಮಾಪಕರ ಆದೇಶದಂತೆ ಪುಟ್ಟಗೌರಿಗೆ ಶೀಘ್ರದಲ್ಲೇ ಶುಭಂ ಕಾರ್ಡ್ ಬೀಳಲಿದೆ. ಮತ್ತೊಂದು ಖುಷಿಯ ವಿಚಾರ ಏನೆಂದರೆ ಪುಟ್ಟಗೌರಿ ಬದಲಿಗೆ ಮಂಗಳಗೌರಿ ಸೀರಿಯಲ್ ಶುರು ಮಾಡಲಾಗುತ್ತಿದೆ. ಸದ್ಯಕ್ಕೆ ಮಂಗಳಗೌರಿಯ ಸುದ್ದಿ ಇನ್ನೂ ಅಧಿಕೃತವಾಗಿಲ್ಲ.

    ಪುಟ್ಟಗೌರಿ ಮದುವೆ ಧಾರಾವಾಹಿಯಲ್ಲಿ ಗೌರಿ ಪಾತ್ರಧಾರಿ ರಂಜಿತಾ ಸಾಕಷ್ಟು ಟ್ರೋಲ್ ಆಗಿದ್ದರು. ಬೆಟ್ಟದ ಮೇಲಿಂದ ಬಿದ್ದರೂ ಗೌರಿ ಸಾಯಲ್ಲ. ಬುಸ್‍ಬುಸ್ ನಾಗಪ್ಪ ಗೌರಿ ಮುಂದೆ ಫುಲ್ ಸೈಲೆಂಟ್. ಇನ್ನೂ ಅಬ್ಬರಿಸಿ ಬೊಬ್ಬಿರಿಯುವ ಹುಲಿ ಕೂಡ ಗೌರಮ್ಮನ ಮುಂದೆ ಕಮಕ್-ಕಿಮಕ್ ಅನ್ನಲ್ಲ. ನರಭಕ್ಷಕರು ಕೈಗೆ ಸಿಲುಕಿಕೊಳ್ಳುವ ಗೌರಿ ಕೊನೆಗೆ ರಾಕ್ಷಸರಿಂದ ದೈವಶಕ್ತಿಯಿಂದ ಪಾರಾಗುತ್ತಾಳೆ. ಅಷ್ಟೇ ಅಲ್ಲದೇ ಗೌರಿಯ ಸಾಹಸಕ್ಕೆ ಟಾಲಿವುಡ್ ಲೆಜೆಂಡ್ ಬಾಲಯ್ಯ ಈಕೆಗೆ ಶಹಬ್ಬಾಸ್ ಹೇಳಿರುವ ರೀತಿಯಲ್ಲಿ ಜನರು ಮೀಮ್ಸ್ ಜೊತೆ ಜೋಡಿಸಿ ಗೌರಿಯನ್ನು ಟ್ರೋಲ್ ಮಾಡಿದ್ದರು.

    ಖಾಸಗಿ ಚಾನೆಲ್‍ನಿಂದ ಪುಟ್ಟಗೌರಿ ಮದುವೆ ಹಾಗೂ ಸೋಶಿಯಲ್ ಮೀಡಿಯಾದಿಂದ ಪುಟ್ಟಗೌರಿಗೆ ಸಾಕಷ್ಟು ಹೆಸರು ಬಂತು. ಪುಟ್ಟಗೌರಿ ಎನಿಸಿಕೊಳ್ಳುತ್ತಿದ್ದ ಗೌರಿಗೆ ಜಂಗಲ್‍ಗೌರಿ ಎನ್ನುವ ಹೆಸರು ಕೂಡ ಬಂತು. ಇದೆಲ್ಲದರ ನಡುವೆ ಪುಟ್ಟಗೌರಿ ಮುಗಿದರೆ ಸಾಕು, ರಬ್ಬರ್ ತರಹ ಕಥೇನಾ ಎಳಿತಿದ್ದಾರೆ ಎಂದು ಹೇಳುತ್ತಿದ್ದವರಿಗೆ ಈಗ ಸಂತೋಷದ ಸುದ್ದಿ ಸಿಕ್ಕಿದೆ. ಸದ್ಯ ಕೊನೆಗೂ ಪುಟ್ಟಗೌರಿ ಮದುವೆ ಧಾರಾವಾಹಿಗೆ ಶುಭಂ ಹೇಳುವಂತಹ ಟೈಮ್ ಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ಪ್ರಿಯಾಮಣಿ!

    ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ಪ್ರಿಯಾಮಣಿ!

    ಬೆಂಗಳೂರು: ಬಹುಭಾಷಾ ನಟಿ ಪ್ರಿಯಾಮಣಿ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಪ್ರಿಯಾಮಣಿ ಇತ್ತೀಚಿಗೆ ಒಂದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ನೋಡಿದ ಅಭಿಮಾನಿಗಳು ಪ್ರಿಯಾಮಣಿ ತಾಯಿ ಆಗುತ್ತಿದ್ದಾರೆ ಎಂದು ಅವರಿಗೆ ಶುಭ ಕೋರುತ್ತಿದ್ದಾರೆ.

    “ನಾನು ಮತ್ತು ನನ್ನ ಪತಿ ಮುಸ್ತಾಫ್ ರಾಜ್ ಕಡೆಯಿಂದ ಸಮ್‍ಥಿಂಗ್ ಇಂಟ್ರೆಸ್ಟಿಂಗ್ ಹಾಗೂ ಫನ್ ಸಂಗತಿಯೊಂದು ನಿಮ್ಮ ಮುಂದೆ ಬರಲಿದೆ. ವೇಟ್ ಆಂಡ್ ವಾಚ್” ಎಂದು ಪ್ರಿಯಾಮಣಿ ತಮ್ಮ ಪತಿ ಜೊತೆಯಿರುವ ಫೋಟೋವನ್ನು ಹಾಕಿ ಟ್ವೀಟ್ ಮಾಡಿದ್ದಾರೆ.

    ಪ್ರಿಯಾಮಣಿ ಅವರ ಟ್ವೀಟ್ ನೋಡಿ ಅವರು ತಾಯಿ ಆಗುತ್ತಿದ್ದಾರಾ ಎಂಬ ಪ್ರಶ್ನೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅಭಿಮಾನಿಗಳು ಕೂಡ ಅವರ ಟ್ವೀಟ್ ನೋಡಿ ಪ್ರಿಯಾಮಣಿ ಅಮ್ಮ ಆಗುತ್ತಿದ್ದಾರೆ ಎಂದು ತಿಳಿದು ಅವರಿಗೆ ಶುಭ ಕೋರುತ್ತಿದ್ದಾರೆ.

    https://twitter.com/priyamani6/status/1023587440018243590

    ಪ್ರಿಯಾಮಣಿ 2017 ಅಗಸ್ಟ್ 23ರಂದು ಮುಸ್ತಾಫ್ ರಾಜ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈಗ ಈ ಟ್ವೀಟ್ ನೋಡಿ ಅಭಿಮಾನಿಗಳು ಪ್ರಿಯಾಮಣಿಗೆ ರೀ-ಟ್ವೀಟ್ ಮಾಡುವ ಮೂಲಕ ಜೂನಿಯರ್ ಪ್ರಿಯಾಮಣಿ ಬರುತ್ತಿರಬಹುದು ಎಂದು ಒಬ್ಬರು ಟ್ವೀಟ್ ಮಾಡಿದ್ದರೆ, ಮತ್ತೊಬ್ಬರು ಚೋಟಾ ಪ್ರಿಯಾಮಣಿ ಎಂದು ಟ್ವೀಟ್ ಮಾಡಿದ್ದಾರೆ.

    ಇತ್ತ ಪ್ರಿಯಾಮಣಿ ಟ್ವೀಟ್‍ಗೆ ನಟಿ ಪರೂಲ್ ಯಾದವ್ ಸಹ ಮಗು ಐಸ್ ಕ್ರೀಂ ತಿನ್ನುವ ಜಿಫ್ ಹಾಕುವ ಮೂಲಕ ಶುಭಾಶಯ ಕೋರಿದ್ದಾರೆ. ಪರೂಲ್ ಟ್ವೀಟ್‍ಗೆ ಪ್ರತಿಕ್ರಿಯಿಸಿರುವ ಪ್ರಿಯಾಮಣಿ ಲವ್ ಸೂಚಕದ ಎಮೋಜಿ ಹಾಕಿ ಉತ್ತರಿಸಿದ್ದಾರೆ. ಸದ್ಯ ಪ್ರಿಯಾಮಣಿ ಈ ವಿಷಯದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಆದರೆ ಆ ಟ್ವೀಟ್ ನೋಡಿದ ಅಭಿಮಾನಿಗಳು ಪ್ರಿಯಾಮಣಿ ತಾಯಿ ಆಗುತ್ತಿದ್ದಾರೆ ಎಂದು ತಿಳಿದು ಶುಭಾಶಯಗಳ ಮಹಾಪೂರ ಹರಿಸುತ್ತಿದ್ದಾರೆ. ಸದ್ಯ ಪ್ರಿಯಾಮಣಿ ಅವರ ಸ್ಪೆಷಲ್ ಸುದ್ದಿ ಏನು ಎಂಬುದು ಕಾದು ನೋಡಬೇಕಿದೆ.

  • ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್

    ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್

    ಬೆಂಗಳೂರು: ಮೆಟ್ರೋ ಪ್ರಯಾಣಿಕರಿಗೆ ಕೆಲವೇ ದಿನಗಳಲ್ಲಿ ಸಿಹಿ ಸುದ್ದಿ ನೀಡಲು ನಮ್ಮ ಮೆಟ್ರೋ ಕಾತುರದಿಂದ ಕಾಯುತ್ತಿದೆ. ಇಷ್ಟು ದಿನ ಮೆಟ್ರೋದಲ್ಲೂ ಜಾಗ ಸಿಗದೆ ತಿಕ್ಕಾಟದ ನಡುವೆ ಆಫೀಸ್ ಗೆ ಹೋಗುತ್ತಿದ್ದ ಜನಕ್ಕೆ ರಿಲೀಫ್ ಸಿಗಲಿದೆ.

    ಹೌದು, ಇನ್ನು ಮುಂದೆ ಮೆಟ್ರೋ ಟ್ರೈನ್ ನಲ್ಲಿ ಹೋಗೋರು ಆರಾಮಾಗಿ ಕುಳಿತುಕೊಂಡು ಯಾವುದೇ ತಳ್ಳಾಟ ನೂಕಾಟ ಇಲ್ಲದೆ ಪ್ರಯಾಣಿಸಬಹುದು. ಇಷ್ಟು ದಿನ 3 ಬೋಗಿಗಳಲ್ಲಿ ಓಡಾಡುತ್ತಿದ್ದ ನಮ್ಮ ಮೆಟ್ರೋ ಟ್ರೈನ್ ಇನ್ನು ಮುಂದೆ 6 ಬೋಗಿಗಳೊಂದಿಗೆ ಸಂಚಾರ ಮಾಡಲಿದೆ. ಈಗಾಗಲೇ ಯಶಸ್ವಿಯಾಗಿ ಪ್ರಾಯೋಗಿಕ ಸಂಚಾರ ಮುಗಿಸಿರುವ ನಮ್ಮ ಮೆಟ್ರೋ ಜೂನ್ ಅಂತ್ಯದ ವೇಳೆಗೆ ಪ್ರಯಾಣಿಕರ ಸಂಚಾರಕ್ಕೆ ಅನುವು ಮಾಡಿಕೊಡಲಿದೆ.

    6 ಬೋಗಿಗಳ ಮೆಟ್ರೋ ಟ್ರೈನ್ ನಲ್ಲಿ ಒಂದು ಬಾರಿ 1800 ಪ್ರಯಾಣಿಕರು ಪ್ರಯಾಣ ಮಾಡಬಹುದಾಗಿದ್ದು, ಇಷ್ಟು ದಿನ ಬೆಳಗ್ಗೆ ಮತ್ತು ಸಂಜೆ ಕಾಡುತ್ತಿದ್ದ ಜಾಗದ ಸಮಸ್ಯೆಗೆ ಪರಿಹಾರ ಸಿಕ್ಕಂತಾಗಿದೆ. ಅಷ್ಟೇ ಅಲ್ಲದೆ ಇನ್ನು ಮುಂದೆ ಪೀಕ್ ಸಮಯದಲ್ಲಿ ಪ್ರತಿ 4 ನಿಮಿಷಕ್ಕೆ ಒಂದರಂತೆ ಮೆಟ್ರೋ ಟ್ರೈನ್ ಓಡಿಸಲು ಸಹ ಅಧಿಕಾರಿಗಳು ತೀರ್ಮಾನಿಸಿದ್ದಾರೆ. 6 ಬೋಗಿಗಳ ಟ್ರೈನ್ ನಲ್ಲಿ ಮಹಿಳೆಯರಿಗೆ ಅಂತಾನೆ 2 ಬೋಗಿಗಳನ್ನು ಮೀಸಲಿಟ್ಟದ್ದರೆ ಒಳ್ಳೆಯದು ಎಂದು ವಕೀಲ ಉಮೇಶ್ ಹೇಳಿದ್ದಾರೆ.

    ಸಿಲಿಕಾನ್ ಸಿಟಿಯ ಮೆಟ್ರೋ ಪ್ರಯಾಣಿಕರ ಬಹುದಿನದ ಕನಸು ನನಸಾಗುವ ಸಮಯ ಬಂದಿದೆ. 2 ಹಂತದ ಮೆಟ್ರೋ ಕಾಮಗಾರಿಯನ್ನ ಆದಷ್ಟು ಬೇಗ ಮುಗಿಸಿದರೆ ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಇನ್ನಷ್ಟು ಮುಕ್ತಿ ಸಿಗುತ್ತದೆ.