Tag: golmal

  • ನರೇಗಾ ಗೋಲ್ಮಾಲ್- ಮಿನಿಸ್ಟರ್ ಬಂದಾಗ ಕೆಲಸ ಕೊಟ್ರು, ಹೋದ್ಮೇಲೆ ಜೆಸಿಬಿ ತರಿಸಿದ್ರು

    ನರೇಗಾ ಗೋಲ್ಮಾಲ್- ಮಿನಿಸ್ಟರ್ ಬಂದಾಗ ಕೆಲಸ ಕೊಟ್ರು, ಹೋದ್ಮೇಲೆ ಜೆಸಿಬಿ ತರಿಸಿದ್ರು

    ಬಾಗಲಕೋಟೆ: ಸಚಿವರು ಬಂದಾಗ ಕೆಲಸ ಕೊಡ್ಸಿ, ಸಚಿವರು ಹೋದ ಬಳಿಕ ಮನೆಗೆ ಕಳುಹಿಸಿದ ಘಟನೆ ಬಾಗಲಕೋಟೆಯ ಬೀಳಗಿಯ ಗಿರಿಸಾಗರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನಡೆದಿದೆ.

    ಹೌದು. ಸಚಿವರು ಬಂದಾಗ ಜನರನ್ನು ಗುಡ್ಡೆ ಹಾಕಿ ಕೆಲಸ ಕೊಟ್ರು. ಸಚಿವರು ಹೋದ ಬಳಿಕ ಕೆಲಸ ಇಲ್ಲ ಹೋಗಿ ಅಂದ್ರು. ರಾತ್ರೋ ರಾತ್ರಿ ನರೇಗಾ ಕೆಲಸವನ್ನ ಜೆಸಿಬಿಯಲ್ಲಿ ಕಾಮಗಾರಿ ಮಾಡಿಸಿದ್ರು.

    ಇದ್ರಿಂದ ರೊಚ್ಚಿಗೆದ್ದ ಕಾರ್ಮಿಕರು ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ. ಬರ ನಿರ್ವಹಣೆ ವೀಕ್ಷಣೆಗೆ ಸಂಪುಟ ಉಪ ಸಮಿತಿಯ ಸಚಿವ ದೇಶಪಾಂಡೆ ಅವ್ರು ಮೇ 12 ರಂದು ಭೇಟಿ ನೀಡಿದ್ರು. ಈ ವೇಳೆ 280 ಕಾರ್ಮಿಕರು ಕೆಲಸ ಮಾಡುತ್ತಿದ್ದು ಕಂಡು ಭೇಷ್ ಅಂದಿದ್ರು. ಆದ್ರೆ, ಅವ್ರು ಹೋದ ಮೇಲೆ ಈಗ ಕೆಲಸ ಇಲ್ಲ ಅಂತ ಹೇಳಿ ಜನರನ್ನ ವಾಪಸ್ ಕಳಿಸಲಾಗಿದೆ.

    ಎನ್‍ಆರ್‍ಇಜಿ ಅಡಿ ಕೆಲಸ ಬಂದ್ ಮಾಡಿ ಜೆಸಿಬಿ ಮೂಲಕ ರಾತ್ರೋ ರಾತ್ರಿ ಕಾಮಗಾರಿ ಮಾಡಿಸಿದ್ದಾರೆ ಎಂದು ಕಾರ್ಮಿಕರು ಆರೋಪಿಸಿದ್ದಾರೆ.

  • ಸರ್ಕಾರಿ ಜಮೀನನ್ನು ಸೇಲ್ ಮಾಡಿದ ಉಡುಪಿಯ ಭೂಪ!

    ಸರ್ಕಾರಿ ಜಮೀನನ್ನು ಸೇಲ್ ಮಾಡಿದ ಉಡುಪಿಯ ಭೂಪ!

    ಉಡುಪಿ: ಮೋಸ ಮಾಡೋಕೆ ಖದೀಮರು ಸಾವಿರ ದಾರಿಗಳನ್ನು ಹುಡುಕಿಕೊಳ್ತಾರೆ. ಒಂದೇ ದಾರಿಯಲ್ಲಿ ಹೋದ್ರೆ ಜನ ಎಚ್ಚೆತ್ತುಕೊಳ್ತಾರೆ ಅಂತ ಗೋಲ್ ಮಾಲ್ ಗಿರಾಕಿಗಳಿಗೆ ಗೊತ್ತಾಗಿದೆ.

    ಹೌದು. ಉಡುಪಿಯ ಹಿರಿಯಡ್ಕದ ಪುತ್ತಿಗೆ ನಿವಾಸಿ ಸುಧಾಕರ ಶೆಟ್ಟಿ ಕಾಸು ಮಾಡುವ ಗೋಜಿನಲ್ಲಿ ಸರ್ಕಾರಿ ಜಮೀನನ್ನು ಮಾರಾಟ ಮಾಡಿದ್ದಾರೆ. ತನ್ನ ಮನೆ ಪಕ್ಕದಲ್ಲಿದ್ದ ಸರ್ಕಾರಿ ಜಮೀನನ್ನು ಸೈಟ್ ಮಾಡಿ ಸೇಲ್ ಮಾಡಿದ್ದಾರೆ. 8 ಮಂದಿ ಸುಮಾರು ಒಂದು ಎಕ್ರೆಯಷ್ಟು ಜಮೀನನ್ನು ಖರೀದಿ ಮಾಡಿದ್ದಾರೆ. ಒಂದೊಂದು ಸೆಂಟ್ಸ್ ಜಮೀನಿಗೆ 10 ರಿಂದ 15 ಸಾವಿರ ರೂಪಾಯಿ ಕೊಟ್ಟು 8 ಜನ ಖರೀದಿ ಮಾಡಿದ್ದಾರೆ.

    ಎರಡು ಕುಟುಂಬ ಮನೆಕಟ್ಟಿ ಕುಳಿತಿದೆ. ಆದ್ರೆ ಸ್ಥಳೀಯ ಹಿರಿಯಡ್ಕ ಪಂಚಾಯತ್ ಅಧಿಕಾರಿಗಳು ಬಂದು ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿದ್ದು ಯಾಕೆ ಎಂದು ಪ್ರಶ್ನಿಸಿ ಮನೆಗಳನ್ನು ಭಾಗಶಃ ಕೆಡವಿದ್ದಾರೆ. ಸರ್ಕಾರಿ ಜಮೀನು ಸೇಲ್ ಮಾಡಿದ ಭೂಪ ಸುಧಾಕರ ಶೆಟ್ಟಿ ವಿರುದ್ಧ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಕೇಸ್ ಆಗಿದೆ. ಜಾಗ ಖಾಲಿ ಮಾಡಿ ಅಂತ ಸುಧಾಕರ ಶಟ್ಟಿ ಕಿರುಕುಳ ನೀಡುತ್ತಿದ್ದಾನೆ. ಎರಡು ಕುಟುಂಬಗಳು ಕೂಲಿ ಕೆಲಸ ಮಾಡಿ ಜೀವನ ಮಾಡುತ್ತಿದ್ದು, ನಾಲ್ಕು ಮಕ್ಕಳನ್ನು ಕಂಡರೆ ಕರುಳು ಚುರ್ ಅನ್ನುತ್ತಿದೆ. ನಾವು ಕೊಟ್ಟ ಹಣ ವಾಪಾಸ್ ಕೊಡಲಿ, ಜಮೀನಿಲ್ಲದ ನಮಗೆ ಸರ್ಕಾರ ಜಮೀನು ಮಂಜೂರು ಮಾಡಲಿ ಅಂತ ಒತ್ತಾಯಿಸುತ್ತಿದ್ದಾರೆ.

    ಎರಡು ಮಕ್ಕಳು ಶಾಲೆಗೆ ಹೋಗ್ತಾರೆ. ನಾಲ್ಕು ವರ್ಷ ಕರೆಂಟ್ ಇಲ್ಲದೆ ನಾವು ಜೀವನ ಮಾಡಿದೆವು. ಈಗ ಜಾಗ ಖಾಲಿ ಮಾಡಬೇಕು ಎಂದು ಒತ್ತಾಯ ಮಾಡುತಿದ್ದಾರೆ. ಗಂಡ ಗೇರುಬೀಜದ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸಾಲ ಮಾಡಿ ಜಾಗಕ್ಕೆ ಹಣ ಕೊಟ್ಟಿದ್ದೇವೆ. ನಮಗೆ ರಕ್ಷಣೆ ಬೇಕು ಎಂದು ಸಮಸ್ಯೆಗೊಳಗಾದ ಗೃಹಿಣಿ ವಿಜಯ ಪಬ್ಲಿಕ್ ಟಿವಿ ಮುಂದೆ ಕಣ್ಣೀರಿಟ್ಟಿದ್ದಾರೆ.

    ಸುಧಾಕರ ಶೆಟ್ಟಿ ಊರಿನವರಿಗೆ ಮಾತ್ರ ಸಮಸ್ಯೆ ಕೊಟ್ಟಿದ್ದಲ್ಲ. ತನ್ನ ಒಡಹುಟ್ಟಿದ ಅಕ್ಕ ಸರೋಜಿನಿಗೂ ಮೋಸ ಮಾಡಿದ್ದಾರೆ. ಸರ್ಕಾರಿ ಜಮೀನಿನಲ್ಲಿ ಚಿಕ್ಕ ಮನೆಕಟ್ಟುತ್ತಿದ್ದಾಗಿನಿಂದ ಈ ಕ್ಷಣದವರೆಗೆ ಕಿರುಕುಳ ಕೊಡುತ್ತಿದ್ದಾರೆ. ನನಗೆ ಹೀಗಾದ್ರೆ ಮುಂದೆ ಬೇದರೆಯವರಿಗೆ ಎಷ್ಟು ಸಮಸ್ಯೆಯಾಗಲಿಕ್ಕಿಲ್ಲ ಅಂತ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.