Tag: gold

  • ಗಂಡನ ಬಳಿಯೇ 1 ಕೆಜಿ ಚಿನ್ನಾಭರಣ ಕದ್ದ ಖತರ್ನಾಕ್ ಹೆಂಡತಿ ಅರೆಸ್ಟ್

    ಗಂಡನ ಬಳಿಯೇ 1 ಕೆಜಿ ಚಿನ್ನಾಭರಣ ಕದ್ದ ಖತರ್ನಾಕ್ ಹೆಂಡತಿ ಅರೆಸ್ಟ್

    ಬೆಂಗಳೂರು: ಗಂಡನ ಬಳಿಯೇ 1 ಕೆ.ಜಿ ಚಿನ್ನಾಭರಣ ಕದ್ದ ಖತರ್ನಾಕ್ ಹೆಂಡತಿಯನ್ನ ಬಂಧಿಸುವಲ್ಲಿ ಎಸ್‍ಜೆ ಪಾರ್ಕ್ ಪೊಲೀಸರು ಯಶಸ್ವಿಯಾಗಿದ್ದಾರೆ.

    ತಮಿಳುನಾಡಿನ ಹೊಸೂರು ಮೂಲದ ನಾಗಲಕ್ಷ್ಮಿ ಬಂಧಿತ ಮಹಿಳೆ. ಈಕೆ ಬೆಂಗಳೂರಿನಿಂದ ತಮಿಳುನಾಡಿನ ಸೇಲಂಗೆ ಬಸ್‍ನಲ್ಲಿ ಹೋಗುವಾಗ ತನ್ನ ಗಂಡನ ಬಳಿಯೇ ಚಿನ್ನಾಭರಣ ಕದ್ದಿದ್ದಳು. ಆದ್ರೆ ತಮಿಳುನಾಡಿನ ಸೇಲಂನಲ್ಲಿ ಚಿನ್ನ ಮಾರಾಟದ ವೇಳೆ ನಾಗಲಕ್ಷ್ಮಿ ಪೆÇಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾಳೆ. ಬಂಧಿತ ಮಹಿಳೆಯಿಂದ ಪೊಲೀಸರು ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.

    ಏನಿದು ಘಟನೆ?: ಬೆಂಗಳೂರಿನ ಚೆಮ್ಮನೂರು ಜ್ಯೂವೆಲರ್ಸ್‍ನಲ್ಲಿ ಕೆಲಸ ಮಾಡುತ್ತಿದ್ದ ಮುನಿಯಪ್ಪನ್ ಫೆಬ್ರವರಿ 21 ರಂದು ಬೆಂಗಳೂರಿನಿಂದ ಸೇಲಂಗೆ 1 ಕೆಜಿ ಚಿನ್ನ ತೆಗೆದುಕೊಂಡು ಹೋಗ್ತಿದ್ರು. ಈ ವೇಳೆ ಜೊತೆಯಲ್ಲೇ ಬಂದ ಹೆಂಡತಿ ನಾಗಲಕ್ಷ್ಮಿ ಗಂಡನಿಗೆ ಜ್ಯೂಸ್‍ನಲ್ಲಿ ನಿದ್ದೆ ಮಾತ್ರೆ ಹಾಕಿ ದರೋಡೆ ಮಾಡಿದ್ದಳು. ನಂತರ ಬಸ್‍ನಲ್ಲಿ ಚಿನ್ನಾಭರಣ ಕಳ್ಳತನವಾಗಿದೆ ಅಂತಾ ಡ್ರಾಮಾ ಮಾಡಿದ್ದಳು. ಈ ಬಗ್ಗೆ ಎಸ್.ಜೆ.ಪಾರ್ಕ್ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

    ಇದೀಗ ನಾಗಲಕ್ಷ್ಮಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

  • 6 ಜೊತೆ ಬೆಳ್ಳಿ ಕಾಲುಂಗುರ ಕದ್ರು ಕಳ್ಳಿಯರು

    6 ಜೊತೆ ಬೆಳ್ಳಿ ಕಾಲುಂಗುರ ಕದ್ರು ಕಳ್ಳಿಯರು

    ಚಿಕ್ಕಬಳ್ಳಾಪುರ: ನಗರದ ಚಿನ್ನದಂಗಡಿಗಳ ಮೇಲೆ ಕಳ್ಳರ ಕಣ್ಣು ಬಿದ್ದಿದೆ. ನಿನ್ನೆಯಷ್ಟೇ ಚೆಮ್ಮನೂರ್ ಜ್ಯುವೆಲ್ಲರ್ಸ್ ದರೋಡೆ ಮಾಡಿದ್ರೆ ರವಿವಾರ ನಗರದ ತಿರುಮಲ ಜ್ಯುವೆಲ್ಲರ್ಸ್‍ನಲ್ಲಿ ಕಳ್ಳಿಯರು ತಮ್ಮ ಕೈಚಳಕ ತೋರಿದ್ದಾರೆ.

    ಹೌದು ಚಿಕ್ಕಬಳ್ಳಾಪುರ ನಗರದ ಗಂಗಮ್ಮ ಗುಡಿ ಬಜಾರ್‍ನಲ್ಲಿರುವ ತಿರುಮಲ ಜ್ಯುವೆಲ್ಲರ್ಸ್‍ಗೆ ಬಂದ ನಾಲ್ವರು ಕಳ್ಳಿಯರು 6 ಜೊತೆ ಬೆಳ್ಳಿ ಕಾಲುಂಗರಗಳನ್ನ ಕಳ್ಳತನ ಮಾಡಿದ್ದಾರೆ.

    ನಾಲ್ವರು ಮಹಿಳೆಯರಲ್ಲಿ ಇಬ್ಬರು ಮಹಿಳೆಯರು ವ್ಯಾಪಾರದಲ್ಲಿ ತೊಡಗಿಕೊಂಡಿದ್ದಾರೆ. ಉಳಿದ ಇಬ್ಬರು ಮಹಿಳೆಯರು ಕುಳಿತುಕೊಂಡಿದ್ದಾರೆ. ಈ ವೇಳೆ ಮಾಲೀಕನ ಗಮನ ಬೇರೆಡೆ ಸೆಳೆದಿದ್ದರಿಂದ ಇಬ್ಬರು ವ್ಯಾಪಾರದ ತರ ಮಾತು ಆಡುತ್ತಲೇ ಬೆಳ್ಳಿ ಕಾಲು ಚೈನುಗಳನ್ನ ಕೆಳಗೆ ಬಿಸಾಡಿದ್ದು, ಅವುಗಳನ್ನು ಅಂಗಡಿಯಲ್ಲಿ ಕೂತಿದ್ದ ಇಬ್ಬರು ಮಹಿಳೆಯರು ಎತ್ತಿಕೊಂಡು ಕಳವು ಮಾಡಿದ್ದಾರೆ.

    ಇನ್ನೂ ಕಳವು ಮಾಡಿದ ಬೆಳ್ಳಿ ಕಾಲು ಚೈನುಗಳನ್ನ ಎತ್ತಕೊಂಡು ಇಬ್ಬರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಆದ್ರೆ ಕಾಲು ಚೈನುಗಳು ಕಡಿಮೆ ಇದ್ದ ಕಾರಣ ಅನುಮಾಮಗೊಂಡ ಮಾಲೀಕ ಅಂಗಡಿಯಲ್ಲೇ ಉಳಿದ ಇಬ್ಬರನ್ನ ಪ್ರಶ್ನೆ ಮಾಡಿದಾಗ ಕಳ್ಳತನ ಮಾಡಿದ ಪ್ರಕರಣ ಬಯಲಾಗಿದೆ.

    ಹೀಗಾಗಿ ಇಬ್ಬರು ಕಳ್ಳಿಯರನ್ನ ಚಿಕ್ಕಬಳ್ಳಾಪುರ ನಗರ ಪೊಲೀಸರ ವಶಕ್ಕೆ ನೀಡಿದ್ದಾರೆ. ಇನ್ನಿಬ್ಬರನ್ನ ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸಿದ್ದು ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದಾರೆ.

    ಅಂದ ಹಾಗೆ ಪೊಲೀಸರ ಬಳಿ ತಾವು ಗೌನಿಪಲ್ಲಿ ಮೂಲದವರು ತಮ್ಮ ಹೆಸರು ಶ್ವೇತಾ ಹಾಗೂ ಲಕ್ಷ್ಮೀದೇವಮ್ಮ ಅಂತ ತಿಳಿಸಿದ್ದು, ಪರಾರಿಯಾದ ಮತ್ತೊಬ್ಬರು ನಿರ್ಮಲಮ್ಮ ಹಾಗೂ ಶಾರದ ಅಂತ ತಿಳಿಸಿದ್ದಾರೆ. ಇನ್ನೂ ಈ ಕಳ್ಳಿಯರ ಕೈ ಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    https://youtu.be/WM-UpC-IpOE

  • ಚಿನ್ನದಂಗಡಿ ದೋಚಲು ಬಾಡಿಗೆ ಮನೆಯಲ್ಲಿ ವಾಸ- ಮನೆಯಿಂದಲೇ ಸುರಂಗ ಕೊರೆದು ಲೂಟಿ

    ಚಿನ್ನದಂಗಡಿ ದೋಚಲು ಬಾಡಿಗೆ ಮನೆಯಲ್ಲಿ ವಾಸ- ಮನೆಯಿಂದಲೇ ಸುರಂಗ ಕೊರೆದು ಲೂಟಿ

    ಬೆಂಗಳೂರು: ಚಿನ್ನದಂಗಡಿಯ ಪಕ್ಕದ ಮನೆಯನ್ನು ಬಾಡಿಗೆ ಪಡೆದ ಯುವಕರು ಚಿನ್ನದ ಅಂಗಡಿಗೆ ಸುರಂಗ ಕೊರೆದು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಲೂಟಿ ಮಾಡಿರುವ ಘಟನೆ ಬೆಂಗಳೂರಿನ ಬೊಮ್ಮನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಬೊಮ್ಮನಹಳ್ಳಿಯ ಹೊಂಗಸಂದ್ರದಲ್ಲಿನ ಪವನ್ ಜ್ಯುವೆಲ್ಲರ್ಸ್ ನಲ್ಲಿ ಈ ಘಟನೆ ನಡೆದಿದ್ದು, ಅಂಗಡಿಯ ಪಕ್ಕದ ಮನೆಯಿಂದ ಸುರಂಗ ಕೊರೆದು ಲೂಟಿ ಮಾಡಿದ್ದಾರೆ. ಹದಿನೈದು ದಿನಗಳ ಹಿಂದೆ ಬಾಡಿಗೆ ಪಡೆದಿದ್ದ ಉತ್ತರ ಪ್ರದೇಶ ಮೂಲದ ಆರೋಪಿಗಳು ಈ ಕೃತ್ಯ ನಡೆಸಿದ್ದಾರೆ.

    ಹದಿನೈದು ದಿನದಿಂದ ಸುರಂಗ ಕೊರೆದು ಗುರುವಾರ ರಾತ್ರಿ ಚಿನ್ನದಂಗಡಿಯಲ್ಲಿನ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಲೂಟಿ ಮಾಡಿ ಪರಾರಿಯಾಗಿದ್ದಾರೆ. ಇಂದು ಬೆಳಗ್ಗೆ ಅಂಗಡಿ ಮಾಲೀಕ ಅಂಗಡಿ ಬಾಗಿಲು ತೆರೆದಾಗ ಪ್ರಕರಣ ಬೆಳಕಿಗೆ ಬಂದಿದೆ.

    ವಿಷಯ ತಿಳಿದು ಬೊಮ್ಮನಹಳ್ಳಿ ಪೊಲೀಸರು, ಶ್ವಾನ ದಳ, ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    https://www.youtube.com/watch?v=O5k_wbWqmko

  • ಜಿಎಸ್‍ಟಿ ಎಫೆಕ್ಟ್, ಚಿನ್ನದ ಅಂಗಡಿಗಳಿಗೆ ಮುಗಿಬಿದ್ದ ಮಹಿಳಾ ಮಣಿಗಳು

    ಜಿಎಸ್‍ಟಿ ಎಫೆಕ್ಟ್, ಚಿನ್ನದ ಅಂಗಡಿಗಳಿಗೆ ಮುಗಿಬಿದ್ದ ಮಹಿಳಾ ಮಣಿಗಳು

    ಬೆಂಗಳೂರು: ಜುಲೈ 1ರಿಂದ ಸರಕು ಮತ್ತು ಸೇವ ತೆರಿಗೆ ಜಾರಿಯಾಗುವ ಹಿನ್ನೆಲೆಯಲ್ಲಿ ಮಹಿಳಾ ಮಣಿಗಳು ಚಿನ್ನದ ಅಂಗಡಿಗಳಿಗೆ ಲಗ್ಗೆ ಇಟ್ಟಿದ್ದಾರೆ.

    ಜಿಎಸ್‍ಟಿ ಜಾರಿಯಾದರೆ ಈಗಿರುವ ದರದಲ್ಲಿ ಒಂದು ಗ್ರಾಂಗೆ 60 ರೂಪಾಯಿ ಏರಿಕೆಯಾಗುವುದರಿಂದ ಚಿನ್ನದ ಅಂಗಡಿ ಗಳು ಗ್ರಾಹಕರಿಂದ ತುಂಬಿ ತುಳುಕುತ್ತಿದೆ.

    ಚಿನ್ನದ ಅಂಗಡಿಗಳು ಸಾಮಾನ್ಯವಾಗಿ 8.30ಕ್ಕೆ ಮುಚ್ಚುತ್ತವೆ. ಆದರೆ ಜಿಎಸ್‍ಟಿ ಎಫೆಕ್ಟ್ ನಿಂದಾಗಿ ಮಾಲೀಕರು ಒಂದು ಗಂಟೆ ವಿಸ್ತರಣೆ ಮಾಡಿದ್ದಾರೆ. ಗುರುವಾರ ಮತ್ತು ಶುಕ್ರವಾರ ಬೆಳಗ್ಗೆ ಒಂದು ಗಂಟೆ ಮುಂಚಿತವಾಗಿ ತೆರೆಯಲು ಮುಂದಾಗಿದ್ದೇವೆ ಎಂದು ಆರ್ ಆರ್ ಗೋಲ್ಡ್ ಪ್ಯಾಲೇಸ್ ಮಾಲೀಕ ರಮೇಶ್ ಹೇಳಿದ್ದಾರೆ.

    ಚಿನ್ನದ ದರ ಏರಿಕೆಯಾಗಲಿರುವ ಹಿನ್ನೆಲೆಯಲ್ಲಿ ಖರೀದಿಗೆ ಬಂದಿದ್ದೇವೆ. ಆಷಾಢದಲ್ಲಿ ಖರೀದಿ ಮಾಡಬಾರದು ಎಂಬ ನಂಬಿಕೆ ಇದ್ದರೂ ಖರೀದಿ ಅನಿವಾರ್ಯವಾಗಿದೆ. ಜುಲೈ ನಿಂದ ಎಷ್ಟು ಏರಿಕೆಯಾಗುತ್ತದೋ ಗೊತ್ತಾಗಲ್ಲ. ಅದಕ್ಕೆ ಇವತ್ತೆ ಬಂದಿದ್ದೇವೆ ಎಂದು ಮಹಿಳೆಯರು ಹೇಳುತ್ತಿದ್ದಾರೆ.

    ಎಷ್ಟು ಏರಿಕೆಯಾಗುತ್ತೆ?
    ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ) ಮಂಡಳಿಯು ಚಿನ್ನ ಮತ್ತು ಬೆಳ್ಳಿಗೆ ಶೇ.3, ಬಿಸ್ಕತ್‍ಗೆ ಶೇ.18ರಷ್ಟು ತೆರಿಗೆ ದರಗಳನ್ನು ನಿಗದಿ ಮಾಡಿದೆ. ಸದ್ಯ ಇರುವ ತೆರಿಗೆ ವ್ಯವಸ್ಥೆಯಲ್ಲಿ, ಚಿನ್ನಕ್ಕೆ ಶೇ.10 ರಷ್ಟು ಆಮದು ಸುಂಕ ಇದ್ದು ಒಟ್ಟು ಶೇ. 12ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಜಿಎಸ್‍ಟಿಯಲ್ಲಿ ಚಿನ್ನಕ್ಕೆ ಶೇ.3 ರಷ್ಟು ತೆರಿಗೆ ನಿಗದಿಮಾಡಲಾಗಿದ್ದು, ಇದಕ್ಕೆ ಶೇ.10 ರಷ್ಟು ಆಮದು ಸುಂಕ ಸೇರಿಸಿದರೆ ಒಟ್ಟು ತೆರಿಗೆ ಶೇ.13 ಆಗುತ್ತದೆ. ಅಂದರೆ ಶೇ.1 ರಷ್ಟು ಹೆಚ್ಚಾಗಲಿದೆ.

     

     

  • ಚಿಕ್ಕಬಳ್ಳಾಪುರದಲ್ಲಿ ರೆಡಿಯಾಗಿದೆ ಗೋಲ್ಡ್ ಬ್ಲೌಸ್! ಬೆಲೆ ಎಷ್ಟು ಗೊತ್ತಾ?

    ಚಿಕ್ಕಬಳ್ಳಾಪುರದಲ್ಲಿ ರೆಡಿಯಾಗಿದೆ ಗೋಲ್ಡ್ ಬ್ಲೌಸ್! ಬೆಲೆ ಎಷ್ಟು ಗೊತ್ತಾ?

    ಚಿಕ್ಕಬಳ್ಳಾಪುರ: ಚಿನ್ನ ಅಂದ್ರೆ ಯಾರಿಗೆ ಇಷ್ಟ ಇರಲ್ಲ ಹೇಳಿ.. ಅದರಲ್ಲೂ ಹುಡುಗಿಯರು ಚಿನ್ನ ಅಂದ್ರೆ ಪ್ರಾಣನೇ ಬಿಡ್ತಾರೆ. ಇಷ್ಟು ದಿನ ಬರೀ ಚಿನ್ನದ ಒಡವೆಗಳಿಗಷ್ಟೇ ಆಸೆ ಪಡ್ತಿದ್ದ ಹೆಣ್ಮಕ್ಕಳು ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಚಿನ್ನದ ಬ್ಲೌಸ್ ಮೇಲೂ ಕಣ್ಣು ಹಾಕಿದ್ದಾರೆ.

    ಹೌದು. ಚಿಕ್ಕಬಳ್ಳಾಪುರ ನಗರದ ಲೇಡಿಸ್ ಟೈಲರ್ ಟೆಂಕರ್ಸ್ ಶಾಪ್‍ನ ಮಾಲೀಕ ಮುರಳಿ ಮಹಿಳೆಯರಿಗಾಗಿಯೇ ವಜ್ರ, ಚಿನ್ನ, ಬೆಳ್ಳಿ ಆಭರಣಗಳನ್ನ ಬಳಸಿ ಚೆಂದದ ರವಿಕೆಗಳನ್ನ ಸಿದ್ಧಪಡಿಸಿದ್ದಾರೆ.

    ಒಟ್ಟು 42.7 ಸೆಂಟ್ಸ್ ವಜ್ರ, 42 ಗ್ರಾಂ ಚಿನ್ನಾಭರಣ, 200 ಗ್ರಾಂ ಬೆಳ್ಳಿ ಬಳಸಿ ಎರಡೂವರೆ ಲಕ್ಷ ರೂಪಾಯಿ ವೆಚ್ಚದಲ್ಲಿ ಮೊದಲ ರವಿಕೆ ಸಿದ್ದಪಡಿಸಿದ್ದಾರೆ. ಇನ್ನೂ ಅಂಗಡಿಗೆ ಬರುವ ಮಹಿಳೆಯರನ್ನ ಆಕರ್ಷಿಸಲೆಂದೇ ಒಂದು ಪ್ರತ್ಯೇಕ ಬ್ಲೌಸ್ ರೆಡಿಮಾಡಿದ್ದಾರೆ.

  • ಮೋರಿ ಒಳಗೆ ಸುರಂಗ ಕೊರೆದು ಜ್ಯುವೆಲ್ಲರಿ ಅಂಗಡಿಗೆ ಕನ್ನ

    ಮೋರಿ ಒಳಗೆ ಸುರಂಗ ಕೊರೆದು ಜ್ಯುವೆಲ್ಲರಿ ಅಂಗಡಿಗೆ ಕನ್ನ

    – 40 ಲಕ್ಷ ರೂ. ಮೌಲ್ಯದ ಆಭರಣ ಕಳ್ಳತನ

    ಬೆಂಗಳೂರು: ಕಳ್ಳರ ಗುಂಪೊಂದು ಮೋರಿಯ ಒಳಗಿನಿಂದ ಚಿನ್ನದ ಅಂಗಡಿಗೆ ಕನ್ನ ಹಾಕಿ ಚಿನ್ನಾಭರಣವನ್ನು ಕದ್ದಿರುವ ಘಟನೆ ಬೆಂಗಳೂರಿನ ಕೆಆರ್‍ಪುರಂನಲ್ಲಿ ನಡೆದಿದೆ.

    ದೇವಸಂದ್ರ ಮುಖ್ಯರಸ್ತೆಯ ಬಾಲಾಜಿ ಜ್ಯುವೆಲ್ಲರಿ ಅಂಗಡಿಗೆ ಕಳ್ಳರು ಕನ್ನ ಹಾಕಿದ್ದು, ಗುರುವಾರ ಬೆಳಗ್ಗೆ ಮಾಲೀಕ ಮೋಹನ್ ಲಾಲ್ ಅವರು ಬಾಗಿಲು ತೆರೆದಾಗ ಕೃತ್ಯ ಬೆಳಕಿಗೆ ಬಂದಿದೆ.

    ಮೋರಿಯಿಂದ 6 ಅಡಿ ಉದ್ದದ ಸುರಂಗವನ್ನು ಕೊರೆದು ಮಧ್ಯಭಾಗವನ್ನು ಪ್ರವೇಶಿಸಿ ಚಿನ್ನ ಮತ್ತು ಬೆಳ್ಳಿಯನ್ನು ಕದ್ದಿದ್ದಾರೆ. ಈ ಕೃತ್ಯ ಬೆಳಕಿಗೆ ಬಂದ ಮೇಲೆ ಮಾಲೀಕ ಕೆಆರ್‍ಪುರಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

    ಬೆಳ್ಳಿ ಸೇರಿದಂತೆ ಚಿನ್ನಾಭರಣ ಕದ್ದು ಪರಾರಿಯಾಗಿದ್ದಾರೆ. ವಿಷಯ ತಿಳಿದ ಕೆ.ಆರ್.ಪುರಂ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದು, ಕಳ್ಳರ ಪತ್ತೆಗಾಗಿ ಹುಡುಕಾಟ ನಡೆಸಿದ್ದಾರೆ.

    ಬೆಳ್ಳಿ ಪತ್ತೆ: ಪೊಲೀಸರು ಸ್ಥಳಕ್ಕೆ ಆಗಮಿಸಿ ಸುರಂಗದ ಒಳಗಡೆ ನುಗ್ಗಿ ಪರಿಶೀಲಿಸಿದ್ದಾರೆ. ಈ ವೇಳೆ ಸುಮಾರು 40 ಕೆಜಿಯಷ್ಟು ಬೆಳ್ಳಿಯನ್ನು ಅಲ್ಲೆ ಬಿಟ್ಟು ಕಳ್ಳರು ಪರಾರಿಯಾಗಿದ್ದಾರೆ. ಅಂದಾಜು ಒಟ್ಟು 40 ಲಕ್ಷ ರೂ. ಮೌಲ್ಯದ ಆಭರಣಗಳು ಕಳ್ಳತನವಾಗಿದೆ ಎಂದು ಮಾಲೀಕ ತಿಳಿಸಿದ್ದಾರೆ.

    ಮೋರಿ ಮೇಲೆ ಕಲ್ಲಿನ ಸ್ಲ್ಯಾಬ್ ಹಾಕಲಾಗಿತ್ತು. ಸ್ಲ್ಯಾಬ್ ಇದ್ದ ಕಾರಣ ಸುರಂಗ ಕೊರೆದಿದ್ದ ವಿಚಾರ ಪತ್ತೆಯಾಗಿರಲಿಲ್ಲ. ಡಿಸಿಪಿ ಬೋರಲಿಂಗಯ್ಯ ಸ್ಥಳಕ್ಕೆ ಭೇಟಿ ನೀಡಿದ್ದು, ತನಿಖೆ ಮುಂದುವರಿಯುತ್ತಿದೆ.

    ಪೊಲೀಸರು ಈಗ ಜ್ಯುವೆಲ್ಲರಿ ಒಳಗಡೆ ಇದ್ದ ಸಿಸಿಟಿವಿ ದೃಶ್ಯಗಳನ್ನು ವಶಪಡಿಸಿಕೊಂಡಿದ್ದಾರೆ. ಎಷ್ಟು ಜನ ಕಳ್ಳರು ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎನ್ನುವ ಮಾಹಿತಿ ಸಿಕ್ಕಿಲ್ಲ. ಎರಡು ಅಥವಾ ಮೂರು ಮಂದಿ ಈ ಕಳ್ಳತನದಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.

     

  • 2.5 ಲಕ್ಷದ ಚಿನ್ನದ ಸರ ಕದ್ದು ಮತ್ತೊಂದು ಅಂಗಡಿಯಲ್ಲಿ ಬಟ್ಟೆ ಎಗರಿಸಿದ್ರು: ಕಾರ್ಕಳ ಕಳ್ಳಿಯರ ಕೈ ಚಳಕ ವಿಡಿಯೋ ನೋಡಿ

    2.5 ಲಕ್ಷದ ಚಿನ್ನದ ಸರ ಕದ್ದು ಮತ್ತೊಂದು ಅಂಗಡಿಯಲ್ಲಿ ಬಟ್ಟೆ ಎಗರಿಸಿದ್ರು: ಕಾರ್ಕಳ ಕಳ್ಳಿಯರ ಕೈ ಚಳಕ ವಿಡಿಯೋ ನೋಡಿ

    ಉಡುಪಿ: ಚಿನ್ನ ಖರೀದಿಸುವ ಗ್ರಾಹಕರ ಸೋಗಿನಲ್ಲಿ ಬಂದು ಎರಡೂವರೆ ಲಕ್ಷ ರೂಪಾಯಿ ಮೌಲ್ಯದ ಮಾಂಗಲ್ಯ ಸರ ಕಳ್ಳತನ ಮಾಡಿರುವ ಘಟನೆ ಜಿಲ್ಲೆಯ ಕಾರ್ಕಳದಲ್ಲಿ ನಡೆದಿದೆ. ಇದೇ ತಂಡ ನಗರದ ಬಟ್ಟೆ ಅಂಗಡಿಯೊಂದರಲ್ಲಿಯೂ ಸಾವಿರಾರು ರೂಪಾಯಿ ಮೌಲ್ಯದ ಬಟ್ಟೆಗಳನ್ನು ಕದ್ದಿರುವ ವಿಚಾರ ಬೆಳಕಿಗೆ ಬಂದಿದೆ.

    ಕಾರ್ಕಳ ನಗರದ ಆಭರಣ ಜ್ಯುವೆಲ್ಲರ್ಸ್‍ಗೆ ಬಂದ ಮೂವರು ನಮಗೆ ಮಾಂಗಲ್ಯ ಸರ ತೋರಿಸಿ ಎಂದು ಕೇಳಿದ್ದಾರೆ. ಡಿಸೈನ್ ನೋಡುವ ವೇಳೆ ಇದೆಲ್ಲಾ ಹಳೆಯ ವಿನ್ಯಾಸ ಎಂದು ಹೇಳಿ ಬೇರೆ ವಿನ್ಯಾಸದ ಸರವನ್ನು ತೋರಿಸುವಂತೆ ಹೇಳಿದ್ದಾರೆ. ಅಂಗಡಿಯ ಸಿಬ್ಬಂದಿ ಬೇರೆ ಡಿಸೈನ್ ತೆಗೆಯುವಷ್ಟರಲ್ಲಿ ಮಾಂಗಲ್ಯ ಸರ ಎಗರಿಸಿದ್ದಾರೆ.

    ಎರಡು ಮಾಂಗಲ್ಯ ಸರ ಕದ್ದ ಮಹಿಳೆ ಕೆಲವೇ ನಿಮಿಷದಲ್ಲಿ ಡಿಸೈನ್ ಇಷ್ಟಾಗಿಲ್ಲ. ಬೇರೆ ಕಡೆ ಹೋಗ್ತೇವೆ ಅಂತ ಅಲ್ಲಿಂದ ಎಲ್ಲರೂ ತೆರಳುತ್ತಾರೆ. ಜ್ಯುವೆಲ್ಲರಿಯಿಂದ ತೆರಳುವ ಮೊದಲು ಈ ಮೂವರು 32 ಗ್ರಾಂ ಮತ್ತು 40 ಗ್ರಾಂ ತೂಕದ ಎರಡು ಮಾಂಗಲ್ಯ ಸರವನ್ನು ಎಗರಿಸಿದ್ದರು.

    ಬಟ್ಟೆ ಕಳ್ಳತನ: ಕಾರ್ಕಳ ನಗರದ ಬಂಡೀಮಠದ ರಿಜ್ವಾನ್ ಎಂಬುವವರ ಬಟ್ಟೆ ಅಂಗಡಿಗೆ ಇದೇ ತಂಡ ಆಗಮಿಸಿದೆ. ಇಲ್ಲೂ ಮೂರು ಜನರ ಟೀಂ. ಆದ್ರೆ ಗಂಡಸು ಮಾತ್ರ ಬೇರೆ. ಇಬ್ಬರು ಮಹಿಳೆಯರು ಅವರೇ, ಬಟ್ಟೆ ಅಂಗಡಿಗೆ ಬಂದು ನಮಗೆ ಬ್ರ್ಯಾಂಡೆಡ್ ಬಟ್ಟೆ ಬೇಕು ಅಂತ ಕೇಳ್ತಾರೆ. ಮೂರು ಜನ ಮೂರು ದಿಕ್ಕಿನಲ್ಲಿ ಬಟ್ಟೆಗಳ ಸೆಲೆಕ್ಷನ್‍ನಲ್ಲಿ ತೊಡಗುತ್ತಾರೆ. ಅಲ್ಲಿ ಚಿನ್ನ ಎಗರಿಸಿದ ಕಳ್ಳಿ ಇಲ್ಲೂ ತನ್ನ ಕೈಚಳಕ ತೋರಿಸಿದ್ದಾಳೆ.

    ಈ ಸಂಬಂಧ ಜ್ಯುವಲ್ಲರಿ ಶಾಪ್ ಮಾಲೀಕ ಕಾರ್ಕಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಕಳ್ಳರ ಪತ್ತೆಗಾಗಿ ಜಾಲ ಬೀಸಿದ್ದಾರೆ.

    https://youtu.be/tjbidsqO6Js

  • ಚೆನ್ನೈ ಸಿಲ್ಕ್ಸ್ ಅಗ್ನಿ ಅವಘಡ: 400 ಕೆಜಿ ಚಿನ್ನ, 20 ಕೋಟಿ ರೂ. ವಜ್ರಕ್ಕಾಗಿ ಹುಡುಕಾಟ

    ಚೆನ್ನೈ ಸಿಲ್ಕ್ಸ್ ಅಗ್ನಿ ಅವಘಡ: 400 ಕೆಜಿ ಚಿನ್ನ, 20 ಕೋಟಿ ರೂ. ವಜ್ರಕ್ಕಾಗಿ ಹುಡುಕಾಟ

    ಚೆನ್ನೈ: ಬುಧವಾರದಂದು ಚೆನ್ನೈನ ಟಿ.ನಗರದಲ್ಲಿರುವ ಚೆನ್ನೈ ಸಿಲ್ಕ್ಸ್ ಶೋರೂಮಿನಲ್ಲಿ ಅಗ್ನಿ ಅವಘಡ ಸಂಭವಿಸಿ ಇಡೀ ಕಟ್ಟಡ ಬೆಂಕಿಗಾಹುತಿಯಾಗಿದೆ. ಆದ್ರೆ ಶೋರೂಮ್ ಒಳಗಿದ್ದ ಸೇಫ್ಟಿ ಲಾಕರ್ ‘ಸೇಫ್’ ಆಗಿರಬಹುದು ಎಂಬ ವಿಶ್ವಾಸದಲ್ಲಿ ಮಾಲೀಕರಿದ್ದಾರೆ.

    ಯಾಕಂದ್ರೆ ಈ ಲಾಕರ್‍ನಲ್ಲಿರೋದು ಬರೋಬ್ಬರಿ 400 ಕೆಜಿಯಷ್ಟು ಚಿನ್ನ ಹಾಗೂ 20 ಕೋಟಿ ರೂ. ಮೌಲ್ಯದ ವಜ್ರ. ಇದೀಗ ಕಟ್ಟಡದ ಅವಶೇಷಗಳಡಿ ಸಿಲುಕಿರೋ ಚಿನ್ನ ಹಾಗೂ ವಜ್ರಾಭರಣಗಳಿಗಾಗಿ ಅಧಿಕಾರಿಗಳು ಹುಡುಕಾಡುತ್ತಿದ್ದಾರೆಂದು ಪತ್ರಿಕೆಯೊಂದು ವರದಿ ಮಾಡಿದೆ.

    ಕಟ್ಟಡದ ಕೆಳಮಹಡಿಯಲ್ಲಿದ್ದ ಆಭರಣಗಳ ಅಂಗಡಿಯಲ್ಲಿ ಸೇಫ್ಟಿ ಲಾಕರ್ ಇತ್ತು. ಈ ಲಾಕರ್ ಎಂತಹ ಅಗ್ನಿ ಅವಘಡವಾದ್ರೂ ತಡೆದುಕೊಳ್ಳಬಹುದಾಗಿದೆ ಎಂಬ ನಂಬಿಕೆಯಲ್ಲಿ ಮಾಲೀಕರಿದ್ದಾರೆ.

    ಬುಧವಾರದಂದು ಸಂಭವಿಸಿದ ಅಗ್ನಿ ದುರಂತದ ಪರಿಣಾಮ ಅಂಗಡಿಯಲ್ಲಿದ್ದ ಸುಮಾರು 80 ಕೋಟಿ ರೂ. ಮೌಲ್ಯದ ಜವಳಿ ಸುಟ್ಟು ಭಸ್ಮವಾಗಿದೆ. ಆದ್ರೆ ಇನ್ಶೂರೆನ್ಸ್ ಇರುವ ಕಾರಣ ಮಾಲೀಕರು ಸ್ವಲ್ಪ ನಿಟ್ಟುಸಿರು ಬಿಡುವಂತಾಗಿದೆ.

     

  • 30 ಸಾವಿರ ರೂ. ಮೌಲ್ಯದ ಚಿನ್ನ, 3 ಸಾವಿರ ರೂ. ಹಣ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ವ್ಯಾಪಾರಿ

    30 ಸಾವಿರ ರೂ. ಮೌಲ್ಯದ ಚಿನ್ನ, 3 ಸಾವಿರ ರೂ. ಹಣ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ವ್ಯಾಪಾರಿ

    ಕಾರವಾರ: ವ್ಯಕ್ತಿಯೊಬ್ಬರು ದಾರಿಯಲ್ಲಿ ಬಿದ್ದಿದ್ದ ಮೂವತ್ತು ಸಾವಿರ ರೂ. ಮೌಲ್ಯದ ಬಂಗಾರ ಹಾಗೂ ಮೂರು ಸಾವಿರ ರೂ. ಹಣವನ್ನ ಕಳೆದುಕೊಂಡವರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದ ಘಟನೆ ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದಿದೆ.

    ನಗರದ ಕೋನೆವಾಡಾದ ಬೆಲ್ಟ್ ವ್ಯಾಪಾರಿ ಅಯುಬ್ ಮೊಹ್ಮದ್ ಶೇಖ್ ಎನ್ನುವವರೇ ಕಳೆದುಕೊಂಡವರಿಗೆ ವಸ್ತುಗಳನ್ನ ಮರಳಿಸಿದ ವ್ಯಕ್ತಿ. 45 ಗ್ರಾಂನ ಮಾಂಗಲ್ಯ, 20 ಗ್ರಾಂನ ಚಿನ್ನದ ಸರ, ಕರಿಮಣಿ ಸರ ಹಾಗೂ ಮೂರು ಸಾವಿರ ರೂಪಾಯಿಗಳಿದ್ದ ಪರ್ಸ್ ಹಿಂದಿರುಗಿಸಿ ಅಯುಬ್ ಪ್ರಾಮಾಣಿಕತೆ ಮೆರೆದಿದ್ದಾರೆ.

    ಎರಡು ದಿನಗಳ ಹಿಂದೆ ಸದಾಶಿವಗಡ ಮೂಲದ ಉದಯ ನಾಯ್ಕ ಎನ್ನುವವರು ಬಂಗಾರದ ಸರವಿದ್ದ ಪರ್ಸ್ ಕಳೆದುಕೊಂಡಿದ್ರು. ಈ ವಿಷಯ ತಿಳಿದು ಅಯುಬ್ ತಾವೇ ಸ್ವತಃ ಪೊಲೀಸರ ಸಮಕ್ಷಮದಲ್ಲಿ ಕಳೆದುಕೊಂಡವರಿಗೆ ಪರ್ಸ್ ಮರಳಿ ನೀಡಿದ್ದಾರೆ.

  • ನಕಲಿ ನೋಟು ಕೊಟ್ಟು 1 ಕೆಜಿ ಚಿನ್ನ ಖರೀದಿಸಿದ ಖದೀಮರು

    ನಕಲಿ ನೋಟು ಕೊಟ್ಟು 1 ಕೆಜಿ ಚಿನ್ನ ಖರೀದಿಸಿದ ಖದೀಮರು

    ಬೆಂಗಳೂರು: ಮಗಳ ಮದುವೆಗೆ ಎಂದು ಹೇಳಿ ನಕಲಿ ನೋಟುಗಳನ್ನ ನೀಡಿ 1 ಕೆಜಿಯಷ್ಟು ಚಿನ್ನ ಖರೀದಿ ಮಾಡಿದ್ದ ಮೂವರು ಆರೋಪಿಗಳನ್ನ ಹಲಸೂರು ಗೇಟ್  ಪೊಲೀಸರು ಬಂಧಿಸಿದ್ದಾರೆ.

    ವಿನೋದ್, ಹೇಮಂತ್ ಹಾಗೂ ಹರೀಶ್ ಕುಮಾರ್ ಬಂಧಿತ ಆರೋಪಿಗಳು. ಈ ಮೂವರು 32 ಲಕ್ಷ ರೂ. ನಕಲಿ ನೋಟು ನೀಡಿ ಚಿನ್ನದ ಅಂಗಡಿಯಲ್ಲಿ ಚಿನ್ನ ಖರೀದಿಸಿದ್ದರು.

    ಆರೋಪಿಯೊಬ್ಬ ತಾನು ಚಿಕ್ಕಮಗಳೂರು ಮೂಲದ ಜುಂಗರಾಜ್ ಎಂದು ಪರಿಚಯ ಮಾಡಿಕೊಂಡಿದ್ದ. ಹಲಸೂರು ಗೇಟ್ ಠಾಣಾ ವ್ಯಾಪ್ತಿಯಲ್ಲಿ ಚಿನ್ನದಂಗಡಿ ಇಟ್ಟುಕೊಂಡಿದ್ದ ದಿನೇಶ್ ಕುಮಾರ್ ಅವರೊಂದಿಗೆ ಚಿನ್ನ ಕೊಟ್ಟು ಹಣ ಪಡೆಯುವಂತೆ ಫೋನ್ ಮೂಲಕವೇ ವ್ಯವಹಾರ ನಡೆಸಿದ್ದ.

    ಕಾರಿನಲ್ಲಿ ಬಂದು 2 ಸಾವಿರ ರೂ. ಮುಖಬೆಲೆಯ 32 ಲಕ್ಷ ರೂ. ಖೋಟಾ ನೋಟು ನೀಡಿ ಆರೋಪಿಗಳು ಚಿನ್ನದ ಗಟ್ಟಿ ಖರೀದಿಸಿದ್ದಾರೆ. ಅಲ್ಲದೆ ಕೋಟಕ್ ಮಹಿಂದ್ರ ಬ್ಯಾಂಕ್ ಸೀಲನ್ನು ದುರ್ಬಳಕೆ ಮಾಡಿದ್ದಾರೆ.

    https://www.facebook.com/publictv/videos/1682564341761311/