Tag: gold

  • ವಿಜಯ್ ಮಲ್ಯ ಅರಮನೆಯಲ್ಲಿದೆ ಚಿನ್ನದ ಟಾಯ್ಲೆಟ್!

    ವಿಜಯ್ ಮಲ್ಯ ಅರಮನೆಯಲ್ಲಿದೆ ಚಿನ್ನದ ಟಾಯ್ಲೆಟ್!

    ನವದೆಹಲಿ: ಭಾರತೀಯ ಬ್ಯಾಂಕ್‍ಗಳಲ್ಲಿ ಸಾವಿರಾರು ಕೋಟಿ ರೂ. ಸಾಲ ಉಳಿಸಿಕೊಂಡು ಲಂಡನ್‍ಗೆ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಅರಮನೆಯಲ್ಲಿ ಚಿನ್ನದ ಟಾಯ್ಲೆಟ್ ಇರುವುದಾಗಿ ಲೇಖಕರೊಬ್ಬರು ಹೇಳಿದ್ದಾರೆ.

    ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಲೇಖಕ ಜೇಮ್ಸ್ ಕ್ರ್ಯಾಬ್ ಟ್ರೀ ಎಂಬವರು ಕುತೂಹಲಕರ ಸಂಗತಿಯನ್ನು ಹಂಚಿಕೊಂಡಿದ್ದು, ಒಮ್ಮೆ ವಿಜಯ್ ಮಲ್ಯರ ಲಂಡನ್ ಅರಮನೆಗೆ ತೆರಳಿದ್ದ ವೇಳೆ ಟಾಯ್ಲೆಟ್ ನಲ್ಲಿ ಚಿನ್ನಡ ಕಾಮೋಡ್ ಬಳಕೆ ಮಾಡಿದ್ದರ ಅನುಭವವನ್ನು ಹೇಳಿದ್ದಾರೆ.

    ಲಂಡನ್ ನಲ್ಲಿರುವ ವಿಜಯ್ ಮಲ್ಯ ನಿವಾಸಕ್ಕೆ ಭೇಟಿ ನೀಡಿದ್ದ ವೇ¼ ನಾಲ್ಕು ಗಂಟೆ ಅವರ ಜೊತೆಗಿದ್ದೆ. ನಾನು ಅಂದು ಮೊನಾಕೋಗೆ ತೆರಳಬೇಕಿತ್ತು. ಆದರೆ ಅದು ಸಾಧ್ಯವಾದೆ ಅರಮನೆಗೆ ಹೋಗಿದ್ದೆ. ಅಲ್ಲಿ ಎಲ್ಲರಂತೆ ಟಿವಿಯಲ್ಲಿ ನೋಡಬೇಕು ಎಂದು ನನ್ನ ಬೇಸರವಾಗಿತ್ತು. ಈ ವೇಳೆ ನಾನು ಮಲ್ಯ ಬಳಿ ಅಲ್ಲಿನ ಟಾಯ್ಲೆಟ್ ಬಳಸಬಹುದೇ ಎಂದು ಕೇಳಿದ್ದೆ. ಅದರಂತೆ ನಾನು ಒಳಗೆ ತೆರಳಿದಾಗ ಚಿನ್ನದ ರಿಮ್ ಮತ್ತು ಟಾಪ್ ಹೊಂದಿರುವ ಕಮೋಡ್ ನೋಡಿದ್ದೆ ಎಂದು ಹೇಳಿದ್ದಾರೆ.

    ಇದೇ ವೇಳೆ ಮಲ್ಯ ಅವರ ಟಾಯ್ಲೆಟ್ ನಲ್ಲಿ ಚಿನ್ನದ ಕಮೋಡ್ ಮಾತ್ರವಿತ್ತು, ಆದರೆ ಚಿನ್ನದ ಟಾಯ್ಲೆಟ್ ಪೇಪರ್ ಇರಲಿಲ್ಲ. ಆ ಜಾಗದಲ್ಲಿ ಬಿಳಿ ಟವೆಲ್ ಇತ್ತು. ಆ ಬಳಿಕ ಶೌಚಾಲಯವನ್ನು ಹೇಗೆ ನಿರ್ವಹಿಸುತ್ತಾರೆ ಎಂಬುವುದು ನನಗೆ ತಿಳಿಯಿತು ಎಂದು ಹೇಳಿದ್ದಾರೆ.  ಇದನ್ನೂ ಓದಿ: ಮಲ್ಯ ಹಸ್ತಾಂತರಿಸಲು ಭಾರತದ ಜೈಲುಗಳ ಸ್ಥಿತಿ-ಗತಿಗಳ ಬಗ್ಗೆ ವಿಡಿಯೋ ಕಳಿಸಿ: ಲಂಡನ್ ಕೋರ್ಟ್ 

    ಅಂದಹಾಗೇ ಜೇಮ್ಸ್ ಕ್ರ್ಯಾಬ್ ಟ್ರೀ ಪ್ರಸಿದ್ಧ ಲೇಖಕರಾಗಿದ್ದು, ದಿ ಬಿಲಿಯನೇರ್ ರಾಜ್ ಪುಸ್ತಕವನ್ನು ಬರೆದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

  • ಒಳ ಉಡುಪಿನಲ್ಲಿ ಚಿನ್ನ ಸಾಗಾಟ ಮಾಡುತ್ತಿದ್ದ ಮಹಿಳೆಯರಿಬ್ಬರ ಬಂಧನ

    ಒಳ ಉಡುಪಿನಲ್ಲಿ ಚಿನ್ನ ಸಾಗಾಟ ಮಾಡುತ್ತಿದ್ದ ಮಹಿಳೆಯರಿಬ್ಬರ ಬಂಧನ

    ಬೆಂಗಳೂರು: ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ಮಹಿಳೆಯರಿಬ್ಬರನ್ನ ಕಸ್ಟಮ್ಸ್ ಅಧಿಕಾರಿಗಳು ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ.

    ಮುಂಬೈ ಮೂಲದ ಷಹೀದಾ ಬಾನು ಮತ್ತು ಶಕೀನಾ ಶೇಖ್ ಬಂಧಿತ ಆರೋಪಿಗಳು. ಬಂಧಿತ ಆರೋಪಿಗಳಿಂದ ಸುಮಾರು 58 ಲಕ್ಷ ಮೌಲ್ಯದ ಒಂದು ಕೆ.ಜಿ 649 ಗ್ರಾಂ ಚಿನ್ನದ ಪುಡಿಯನ್ನ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

    ಈ ಇಬ್ಬರು ಆರೋಪಿಗಳು ಚಿನ್ನವನ್ನು ತಮ್ಮ ಒಳ ಉಡುಪಿನಲ್ಲಿ ಇಟ್ಟುಕೊಂಡು ಸಾಗಾಟ ಮಾಡುತ್ತಿದ್ದರು. ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಅಧಿಕಾರಿ ಪರಿಶೀಲನೆ ಮಾಡುವಾಗ ಆರೋಪಿಗಳಿಬ್ಬರು ಸಿಕ್ಕಿಬಿದ್ದಿದ್ದಾರೆ. ಸದ್ಯಕ್ಕೆ ಅಧಿಕಾರಿಗಳು ಈ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.

    ಆರೋಪಿಗಳನ್ನ ವಶಕ್ಕೆ ಪಡೆದಿರುವ ಕಸ್ಟಮ್ಸ್ ಅಧಿಕಾರಿಗಳು ಮಹಿಳೆಯರಿಂದ ಚಿನ್ನದ ಸಾಗಾಟ ಮಾಡಿಸುತ್ತಿರುವುದರ ಹಿಂದೆ ಸ್ಮಗ್ಲಿಂಗ್ ಮಾಫಿಯಾದ ಕೈವಾಡ ಇರುವ ಶಂಕೆಯನ್ನು ವ್ಯಕ್ತಪಡಿಸಿದ್ದಾರೆ.

  • ಪತಿಯನ್ನ ಕೂಡಿ ಹಾಕಿ, ಗರ್ಭಿಣಿ ಮೇಲೆ 8 ಮಂದಿ ಕಾಮುಕರಿಂದ ಗ್ಯಾಂಗ್‍ರೇಪ್!

    ಪತಿಯನ್ನ ಕೂಡಿ ಹಾಕಿ, ಗರ್ಭಿಣಿ ಮೇಲೆ 8 ಮಂದಿ ಕಾಮುಕರಿಂದ ಗ್ಯಾಂಗ್‍ರೇಪ್!

    ಮುಂಬೈ: ಎಂಟು ತಿಂಗಳ ಗರ್ಭಿಣಿ ಮೇಲೆ ಎಂಟು ಮಂದಿ ಕಾಮುಕರು ಸಾಮೂಹಿಕವಾಗಿ ಅತ್ಯಾಚಾರ ಎಸಗಿರುವ ಅಮಾನವೀಯ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

    ಸಂತ್ರಸ್ತೆ ಮೂಲತಃ ಸತಾರದವರಾಗಿದ್ದು, ತನ್ನ ಪತಿ ಜೊತೆಗೆ ತಾಸ್ಗಾವ್ ಟುರ್ಚಿ ಫಾಟಾಗೆ ವ್ಯವಹಾರವೊಂದರ ಮೀಟಿಂಗ್ ಗಾಗಿ ಹೋಗಿದ್ದಾಗ ಕಾಮುಕರು ಈ ಕೃತ್ಯ ಎಸಗಿದ್ದಾರೆ ಎಂದು ತಾಸ್ಗಾವ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಘಟನೆಯ ವಿವರ:
    ಸಂತ್ರಸ್ತೆಯ ಪತಿ ಹೋಟೆಲ್ ಉದ್ಯಮಿಯಾಗಿದ್ದರು. ಈ ದಂಪತಿ ಹೋಟೆಲಿನಲ್ಲಿ ಕೆಲಸ ಮಾಡಲು ದಂಪತಿಯನ್ನು ಹುಡುಕುತ್ತಿದ್ದರು. ಆಗ ಆರೋಪಿಗಳಲ್ಲಿ ಒಬ್ಬನಾದ ಮುಕುಂದ್ ಮಾನೆ ಇವರಿಗೆ ಕರೆ ಮಾಡಿ ಹೋಟೆಲಿನಲ್ಲಿ ಕೆಲಸ ಮಾಡಲು ದಂಪತಿ ಸಿದ್ಧರಿದ್ದಾರೆ. ಆದರೆ ಮುಂಗಡವಾಗಿ ರೂ. 20 ಸಾವಿರ ರೂ. ಅವರಿಗೆ ಕೊಡಬೇಕು. ಆದ್ದರಿಂದ ಹಣ ತೆಗೆದುಕೊಂಡು ಟುರ್ಚಿ ಫಾಟಾಗೆ ಬನ್ನಿ ಎಂದು ಹೇಳಿದ್ದಾನೆ.

    ಅದರಂತೆಯೇ ದಂಪತಿ ಹಣ ತೆಗೆದುಕೊಂಡು ಆರೋಪಿ ಹೇಳಿದ ಸ್ಥಳಕ್ಕೆ ಹೋಗಿದ್ದಾರೆ. ಆದರೆ ಅಲ್ಲಿ ಆರೋಪಿ ಮಾನೆ ಮತ್ತು ಆತನ ಜನರು ಪೈಪ್ಸ್ ಮತ್ತು ದೊಣ್ಣೆಗಳನ್ನು ತಂದು ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಬಳಿಕ ಅವರ ಬಳಿ ಇದ್ದ ಹಣ, ಚಿನ್ನದ ಆಭರಣಗನ್ನು ದೋಚಿದ್ದಾರೆ. ನಂತರ ಪತಿಯನ್ನು ಆತನ ವಾಹನದಲ್ಲಿ ಬಂಧಿಸಿ ಮಹಿಳೆ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಆರೋಪಿಗಳು ಈ ವಿಷಯವನ್ನು ಪೊಲೀಸರಿಗೆ ಹೇಳಬಾರದು ಎಂದು ಬೆದರಿಕೆ ಒಡ್ಡಿದ್ದಾರೆ. ಆರೋಪಿಗಳು ಸ್ಥಳೀಯವಾಗಿ ಪ್ರಭಾವಿಶಾಲಿಗಳಾಗಿದ್ದರಿಂದ ಅವರನ್ನು ಯಾರು ಕೇಳುತ್ತಿರಲಿಲ್ಲ. ನಂತರ ದಂಪತಿ ತಾಸ್ಗಾವ್ ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ್ದಾರೆ.  ಸಂತ್ರಸ್ತೆ ಎಂಟು ಆರೋಪಿಗಳಲ್ಲಿ ಮುಕುಂದ್ ಮಾನೆ, ಸಾಗರ್, ಜಾವೇದ್ ಖಾನ್ ಮತ್ತು ವಿನೋದ್ ಎಂದು ಗುರುತಿಸಿದ್ದಾರೆ

    ಈ ಘಟನೆ ನಡೆದು ಸುಮಾರು 48 ಗಂಟೆಗಳಾದರೂ ಪೊಲೀಸರು ಇನ್ನೂ ಆರೋಪಿಗಳನ್ನು ಬಂಧಿಸಿಲ್ಲ. ಹೀಗಾಗಿ ಪ್ರಕರಣದ ಬಗ್ಗೆ ಮಹಾರಾಷ್ಟ್ರ ರಾಜ್ಯ ಮಹಿಳಾ ಅಧ್ಯಕ್ಷೆ ವಿಜಯ ರಹಾಟ್ಕರ್ ಅವರು ಸಾಂಗ್ಲಿ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಈ ಬಗ್ಗೆ ತನಿಖೆ ಮಾಡಿ ವರದಿ ನೀಡುವಂತೆ ಸೂಚಿಸಿದ್ದಾರೆ.

  • ಫಸ್ಟ್ ನೈಟಿನಲ್ಲೇ ವರ, ಕುಟುಂಬಕ್ಕೆ ಶಾಕ್ ಕೊಟ್ಟ ವಧು!

    ಫಸ್ಟ್ ನೈಟಿನಲ್ಲೇ ವರ, ಕುಟುಂಬಕ್ಕೆ ಶಾಕ್ ಕೊಟ್ಟ ವಧು!

    ಪಾಟ್ನಾ: ಮೊದಲ ರಾತ್ರಿಯಂದೇ ನವವಿವಾಹಿತೆ ಪರಾರಿಯಾಗಿ ಕುಟುಂಬದವರಿಗೆ ಶಾಕ್ ಕೊಟ್ಟಿರುವ ಘಟನೆ ಬಿಹಾರದಲ್ಲಿ ನಡೆದಿದೆ.

    ಈ ಘಟನೆಯು ಬಿಹಾರದ ಭಬುವಾದಲ್ಲಿ ಕೆಲವು ದಿನಗಳ ಹಿಂದೆ ನಡೆದಿದ್ದು, ಶುಕ್ರವಾರ ಬೆಳಕಿಗೆ ಬಂದಿದೆ. ಸಂಗೀತಾ ಕುಮಾರಿ ಪರಾರಿಯಾಗಿರುವ ನವವಿವಾಹಿತೆ. ಈಕೆ ಮದುವೆಯಾಗಿ ಮೊದಲ ರಾತ್ರಿಯಂದೇ ಆಭರಣಗಳು ಸೇರಿದಂತೆ 20 ಸಾವಿರ ರೂ. ನಗದು ಮತ್ತು ಬೆಲೆ ಬಾಳುವ ವಸ್ತುಗಳನ್ನು ತೆಗೆದುಕೊಂಡು ಪರಾರಿಯಾಗಿದ್ದಾಳೆ.

    ಇತ್ತ ನಾಪತ್ತೆಯಾದ ವಧುನಿಂದ ಆಘಾತಗೊಂಡ ವರ ಮತ್ತು ವರನ ತಾಯಿ, ಹುಡುಗಿ ಮತ್ತು ಹುಡುಗಿಯ ಕುಟುಂಬದವರು ನಮಗೆ ಮೋಸ ಮಾಡಿ ಮದುವೆ ಮಾಡಿಕೊಟ್ಟಿದ್ದಾರೆ. ಅವರು ನಮಗೆ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಈಗ ನಮಗೆ ನ್ಯಾಯ ಬೇಕು ಎಂದು ಪೊಲೀಸ್ ಮೆಟ್ಟಿಲೀರಿದ್ದಾರೆ.

    ಘಟನೆಯ ವಿವರ?:
    ವರ ತಾಯಿ ತನ್ನ ಮಗ ಪಂಕಜ್ ಕುಮಾರ್ ಗೆ ಹುಡುಗಿಯನ್ನು ಹುಡುಕುತ್ತಿದ್ದರು. ಅದೇ ರೀತಿ ಸಂಗೀತಾ ಕುಮಾರಿಗೂ ಹುಡುಗನನ್ನು ಹುಡುಕುತ್ತಿದ್ದರು. ಬಳಿಕ ಅವರ ಸಂಬಂಧಿಕರು ಸಂಗೀತಾ ಸಂಬಂಧವನ್ನು ತಂದಿದ್ದಾರೆ. ಬಳಿಕ ಎರಡು ಕುಟುಂಬದವರು ಒಪ್ಪಿ ಸೋಮವಾರ ಭಬುವಾ ಹೊರವಲಯದಲ್ಲಿರುವ ಒಂದು ದೇವಾಲಯದಲ್ಲಿ ಇಬ್ಬರಿಗೂ ಸರಳವಾಗಿ ಮದುವೆ ಮಾಡಿದ್ದಾರೆ.

    ಸೋಮವಾರ ರಾತ್ರಿಯೇ ಕುಟುಂಬದವರು ಮೊದಲ ರಾತ್ರಿಗೆ ಸಿದ್ಧಪಡಿಸಿದ್ದಾರೆ. ಆಗ ಸಂಗೀತಾ ತನಗೆ ಮುಟ್ಟಾಗಿದೆ ಅಂತ ಕಾರ್ಯಕ್ರಮವನ್ನು ರದ್ದು ಮಾಡಿಸಿದ್ದಾಳೆ. ಬಳಿಕ ತನಗೆ ಬೇರೆ ರೂಮ್ ಬೇಕೆಂದು ಕೇಳಿ ಒಬ್ಬಳೇ ಕೊಠಡಿಯಲ್ಲಿ ಮಲಗಿದ್ದಾಳೆ. ರಾತ್ರಿ ಎಲ್ಲರೂ ಮಲಗಿಕೊಳ್ಳುವರೆಗೂ ಕಾದು ಬಳಿ ಆಭರಣ, ಹಣ, ಮೌಲ್ಯ ವಸ್ತುಗಳನ್ನು ಕದ್ದು ಪರಾರಿಯಾಗಿದ್ದಾಳೆ.

    ಮಂಗಳವಾರ ಬೆಳಗ್ಗೆ ಸಂಗೀತಾಳನ್ನು ಎಲ್ಲಾ ಕಡೆ ಹುಡುಕಾಡಿದ್ದಾರೆ. ಆದರೆ ಎಲ್ಲೂ ಪತ್ತೆಯಾಗಿಲ್ಲ. ಇತ್ತ ಹಣ, ಚಿನ್ನ ಮತ್ತು ವಸ್ತುಗಳು ಕಾಣಲಿಲ್ಲ. ಕೊನೆಗೆ ಎಲ್ಲವನ್ನು ಕದ್ದು ಪರಾರಿಯಾಗಿದ್ದಾಳೆ ಎಂದು ತಿಳಿದು ಪಂಕಜ್ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ.

    ವರ ಪಂಕಜ್ ಮತ್ತು ತಾಯಿ ನೀಡಿದ ದೂರಿನ ಆಧಾರದ ಮೇಲೆ ನಾವು ದೂರು ಸ್ವೀಕರಿಸಿ ಪ್ರಕರಣವನ್ನು ದಾಖಲಿಸಿಕೊಂಡಿದ್ದೇವೆ. ವರನ ಕುಟುಂಬದವರು ವಧು ಸೇರಿದಂತೆ ಹುಡುಗಿಯನ್ನು ತೋರಿಸಿದ ಸಂಬಂಧಿಕರ ಮೇಲೆ ದೂರು ನೀಡಿದ್ದಾರೆ. ಸದ್ಯಕ್ಕೆ ಪರಾರಿಯಾಗಿರುವ ಹುಡುಗಿಯನ್ನು ಹುಡುಕುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿ ಸತ್ಯೇಂದ್ರ ರಾಮ್ ತಿಳಿಸಿದ್ದಾರೆ.

  • ಗ್ರಹಣ ಲಾಭ ಪಡೆದ ಖದೀಮರು- ಮಂಡ್ಯದಲ್ಲಿ ಲಕ್ಷ್ಮಿ ದೇಗುಲಕ್ಕೆ ಕನ್ನ, ಮೈಸೂರಿನಲ್ಲಿ 8 ಅಂಗಡಿ ದೋಚಿದ ಚೋರರು

    ಗ್ರಹಣ ಲಾಭ ಪಡೆದ ಖದೀಮರು- ಮಂಡ್ಯದಲ್ಲಿ ಲಕ್ಷ್ಮಿ ದೇಗುಲಕ್ಕೆ ಕನ್ನ, ಮೈಸೂರಿನಲ್ಲಿ 8 ಅಂಗಡಿ ದೋಚಿದ ಚೋರರು

    ಮಂಡ್ಯ/ಮೈಸೂರು: ಚಂದ್ರ ಗ್ರಹಣದ ಲಾಭ ಪಡೆದ ಖದೀಮರು ಮಂಡ್ಯದಲ್ಲಿ ಲಕ್ಷ್ಮಿ ದೇವಾಯಲಕ್ಕೆ ಕನ್ನ ಹಾಕಿದ್ದು, ಮೈಸೂರಿನಲ್ಲಿ ಎಂಟು ಅಂಗಡಿಗಳಲ್ಲಿ ಕಳ್ಳತನ ಮಾಡಿದ್ದಾರೆ.

    ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕೆ.ಬೆಟ್ಟಹಳ್ಳಿ ಗ್ರಾಮದ ಲಕ್ಷ್ಮಿದೇವಿ ದೇವಾಲಯದಲ್ಲಿ ಕಳ್ಳತನ ಮಾಡಿದ್ದಾರೆ. ಕಳ್ಳರು ಚಂದ್ರಗ್ರಹಣ ಹಿನ್ನೆಲೆಯಲ್ಲಿ ಯಾರೂ ಮನೆಯಿಂದ ಹೊರಬರುವುದಿಲ್ಲ ಎಂದು ದೇವಾಲಯದ ಬಾಗಿಲು ಮುರಿದು ಒಳ ನುಗ್ಗಿದ್ದಾರೆ. ಬಳಿಕ ಚಿನ್ನಾಭರಣ ಮತ್ತು ಹುಂಡಿಯ ಹಣವನ್ನು ದೋಚಿ ಪರಾರಿಯಾಗಿದ್ದಾರೆ.

    ಲಕ್ಷ್ಮಿದೇವಿ ವಿಗ್ರಹದ ಬೆಳ್ಳಿ ಕಣ್ಣು, ಮೂರು ಚಿನ್ನದ ತಾಳಿ ಮತ್ತು 2 ಹುಂಡಿಯಲ್ಲಿದ್ದ ಹಣವನ್ನು ದೋಚಿ ಪರಾರಿಯಾಗಿದ್ದಾರೆ. ಈ ಘಟನೆ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಮೈಸೂರಿನ ಕನಕದಾಸ ನಗರದ ನೇತಾಜಿ ವೃತ್ತದ ಬಳಿ ಇರುವ 8 ಅಂಗಡಿಗಳಲ್ಲಿ ಕಳ್ಳರು ದೋಚಿದ್ದಾರೆ. ಮೆಡಿಕಲ್ ಸ್ಟೋರ್, ಸ್ಟೇಷನರಿ, ಪ್ರಾವಿಷನ್ ಸ್ಟೋರ್ ಗಳ ರೋಲಿಂಗ್ ಶಟರ್ ಗಳನ್ನು ಮೀಟಿ ಲಕ್ಷಾಂತರ ರೂಪಾಯಿ ದೋಚಿ ಪರಾರಿಯಾಗಿದ್ದಾರೆ. ಕಳ್ಳತನ ನಡೆದ ಸ್ಥಳಕ್ಕೆ ಕುವೆಂಪು ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಗ್ರಹಣ ದಿನದ ಪೂಜೆ ಮಾಡಿಸಲು ಹೋದವರ ಮನೆಯಲ್ಲಿ ಕಳ್ಳತನ!

    ಗ್ರಹಣ ದಿನದ ಪೂಜೆ ಮಾಡಿಸಲು ಹೋದವರ ಮನೆಯಲ್ಲಿ ಕಳ್ಳತನ!

    ಶಿವಮೊಗ್ಗ: ಗ್ರಹಣ ದಿನದಂದು ಪೂಜೆ ಮಾಡಿಸಿದರೆ ಶುಭವಾಗಲಿದೆ ಎಂದು ದೇವಾಲಯಕ್ಕೆ ಹೋಗಿ ಬರುವಷ್ಟರಲ್ಲಿಯೇ ನಗರದ ಎರಡು ಮನೆಗಳಲ್ಲಿ ಕಳ್ಳತನ ನಡೆದಿದೆ.

    ನಗರದ ಎಂಆರ್‌ಎಸ್‌ ಸಮೀಪದ ಮೆಸ್ಕಾಂ ಕ್ವಾಟ್ರಸ್‍ನ ಮೆಸ್ಕಾಂ ಎಂಜಿನಿಯರ್ ಶಿವಸ್ವಾಮಿ ಹಾಗೂ ಜೆಇ ಮಂಜು ಅವರ ಮನೆಗಳಲ್ಲಿ ಹಾಡಹಗಲೇ ಕಳ್ಳರು ತಮ್ಮ ಕೈ ಚಳಕ ತೋರಿಸಿದ್ದಾರೆ. ಕಳ್ಳತನ ಮಾಡಿದ್ದಷ್ಟೇ ಅಲ್ಲದೆ ಶಿವಸ್ವಾಮಿ ಅವರ ಮನೆಯಲ್ಲಿದ್ದ ಬೆಡ್, ಸೋಫಾ ಬೀರುಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ.

    ಗ್ರಹಣ ನಿಮಿತ್ತ ಇಂದು ಬೆಳಗ್ಗೆ 11 ಗಂಟೆಗೆ ನಗರದಲ್ಲಿರುವ ದೇವಸ್ಥಾನಗಳಿಗೆ ಶಿವಸ್ವಾಮಿ ಹಾಗೂ ಮಂಜು ಕುಟುಂಬ ಒಟ್ಟಿಗೆ ಪೂಜೆ ಮಾಡಿಸಲು ಕಾರಿನಲ್ಲಿ ಹೋಗಿದ್ದರು. ಮನೆಯಲ್ಲಿ ಯಾರು ಇಲ್ಲದಿರುವುದು ಗೊತ್ತಾಗುತ್ತಿದ್ದಂತೆ ಕಳ್ಳರು ಮನೆಯ ಹಿಂದಿನ ಬಾಗಿಲು ಮುರಿದು ಒಳ ಬಂದಿದ್ದರು. ಮನೆಯಲ್ಲಿ ಚಿನ್ನಾಭರಣ ಹಾಗೂ ನಗದು ಹಣವನ್ನು ತೆಗೆದುಕೊಂಡು ಕಾಲುಕಿತ್ತಿದ್ದಾರೆ.

    ಪೂಜೆ ಮುಗಿಸಿ ಮನೆಗೆ ಬರುತ್ತಿದ್ದಂತೆ ಪ್ರಕರಣ ಬೆಳಕಿಗೆ ಬಂದಿದ್ದು, ಶಿವಸ್ವಾಮಿ ಅವರ ಮನೆಯಲ್ಲಿದ್ದ 7 ಗ್ರಾಂ ಬಂಗಾರ, 250 ಗ್ರಾಂ ಬೆಳ್ಳಿ ಹಾಗೂ ಮಂಜು ಅವರ ಮನೆಯಲ್ಲಿದ್ದ 58 ಗ್ರಾಂ ಚಿನ್ನ, 300 ಗ್ರಾಂ ಬೆಳ್ಳಿ, 35 ಸಾವಿರ ನಗದನ್ನು ಕಳುವಾಗಿದೆ. ಈ ಕುರಿತು ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪ್ರೇಯಸಿಗೆ ಗಿಫ್ಟ್ ಕೊಡಿಸಲು ಚಿನ್ನದಂಗಡಿಗೆ ಕನ್ನ – ಖದೀಮ ಪ್ರೇಮಿ ಬಂಧನ

    ಪ್ರೇಯಸಿಗೆ ಗಿಫ್ಟ್ ಕೊಡಿಸಲು ಚಿನ್ನದಂಗಡಿಗೆ ಕನ್ನ – ಖದೀಮ ಪ್ರೇಮಿ ಬಂಧನ

    ಬೆಂಗಳೂರು: ಪ್ರೇಯಸಿಗೆ ಗಿಫ್ಟ್ ಕೊಡಿಸುವುದಕ್ಕೆ ಹೋಗಿ ಜ್ಯುವೆಲ್ಲರಿ ಶಾಪ್ ನಲ್ಲಿ ಚಿನ್ನದ ಸರ ಎಗರಿಸಿದ್ದ ಪ್ರಿಯತಮ ಈಗ ಪೊಲೀಸರ ಅತಿಥಿಯಾಗಿದ್ದಾನೆ.

    ಬೆಂಗಳೂರಿನ ಪರಪ್ಪನ ಅಗ್ರಹಾರ ನಿವಾಸಿ ಅಬ್ದುಲ್ ಮುಬಾರಕ್ ಬಂಧಿತ ಆರೋಪಿ. ಈತ ತೆಲಂಗಾಣದಲ್ಲಿ ಎಕ್ಸೈಸ್ ಸೂಪರಿಂಟೆಂಡೆಂಟ್ ಅಂತ ಹೇಳಿ ಯುವತಿಗೆ ಮೋಸ ಮಾಡಿದ್ದಾನೆ. ಈಗ ಈತನ ವಿರುದ್ಧ ಬಸವನಗುಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.

    ಘಟನೆ ವಿವರ:
    ಮುಬಾರಕ್ ನಾನು ದೊಡ್ಡ ಕಂಪೆನಿಯಲ್ಲಿ ಕೆಲಸ ಮಾಡುತ್ತೇನೆ ಯುವತಿಗೆ ಹೇಳಿದ್ದ. ಈತನ ಮಾತನ್ನು ನಂಬಿದ ಯುವತಿ ಈತನೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದಳು. ಬಳಿಕ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಮುಬಾರಕ್ ಮದುವೆ ಆಗೋಣ ಅಂತ ಯುವತಿಗೆ ನಂಬಿಸಿದ್ದಾನೆ. ಅದರಂತೆಯೇ ಮದುವೆಗೆ ಆಭರಣ ಖರೀದಿ ಮಾಡಲು ಇಬ್ಬರು ಬಸವನಗುಡಿಯ ನಾಕೋಡಾ ಜ್ಯುವೆಲ್ಲರಿ ಶಾಪಿಗೆ ಹೋಗಿದ್ದಾರೆ. ಈ ವೇಳೆ ಮುಬಾರಕ್ ಟ್ರಯಲ್ ನೋಡುತ್ತೇನೆ ಎಂದು ಚಿನ್ನದ ಸರವನ್ನು ಕತ್ತಿಗೆ ಹಾಕಿಕೊಂಡಿದ್ದಾನೆ. ನಂತರ ತನ್ನ ಸ್ನೇಹಿತರಿಗೆ ಕರೆ ಮಾಡುತ್ತೇನೆ ಎಂದು ಪ್ರೇಯಸಿಯ ಬಳಿ ಐಫೋನ್ ತೆಗೆದು ಕೊಂಡಿದ್ದಾನೆ.

    ಪ್ರೇಯಸಿಯ ಐಫೋನ್ ತೆಗೆದುಕೊಂಡು ಜ್ಯುವೆಲ್ಲರಿ ಅಂಗಡಿಯಿಂದ ಹೊರ ಬಂದು ಆತ ಚಿನ್ನದ ಸರ ಮತ್ತು ಫೋನಿನೊಂದಿಗೆ ಪರಾರಿಯಾಗಿದ್ದಾನೆ. ಇತ್ತ ಆರೋಪಿ ಮುಬಾರಕ್ ಪರಾರಿಯಾದ ತಕ್ಷಣ ನಿಮ್ಮ ಗಂಡ ಚಿನ್ನದ ಸರ ತೆಗೆದುಕೊಂಡು ಹೋಗಿದ್ದಾನೆ ಎಂದು ಜ್ಯುವೆಲ್ಲರಿ ಸಿಬ್ಬಂದಿ ಯುವತಿಯನ್ನು ಸೆರೆ ಹಿಡಿದಿದ್ದಾರೆ. ಈ ವೇಳೆ ಅವನು ಗಂಡ ಅಲ್ಲ, ಮದುವೆಯಾಗುತ್ತೀನಿ ಎಂದು ನಂಬಿಸಿ ಆಭರಣ ತೆಗೆದುಕೊಳ್ಳಲು ಅಂಗಡಿಗೆ ಕರೆದುಕೊಂಡು ಬಂದಿದ್ದ. ಈ ವೇಳೆ ಈ ಕೃತ್ಯವನ್ನು ಎಸಗಿದ್ದಾನೆ ಎಂದು ಯವತಿ ತಿಳಿಸಿದ್ದಾಳೆ.

    ಜ್ಯವೆಲ್ಲರಿ ಸಿಬ್ಬಂದಿ ಈ ಬಗ್ಗೆ ಬಸವನಗುಡಿ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದು ವಿಚಾರಣೆ ಮಾಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಹಿಡಿದು ಬಂಧಿಸಿದ್ದಾರೆ.

  • ಶಿರೂರು ಶ್ರೀ ಧರಿಸಿದ್ದ 1ಕೋಟಿ ರೂ. ಮೌಲ್ಯದ ಚಿನ್ನ ಸೇಫ್- ಎಲ್ಲಿದೆ ಆ ಚಿನ್ನಾಭರಣಗಳು?

    ಶಿರೂರು ಶ್ರೀ ಧರಿಸಿದ್ದ 1ಕೋಟಿ ರೂ. ಮೌಲ್ಯದ ಚಿನ್ನ ಸೇಫ್- ಎಲ್ಲಿದೆ ಆ ಚಿನ್ನಾಭರಣಗಳು?

    ಉಡುಪಿ: ಶಿರೂರು ಸ್ವಾಮೀಜಿಯವರು ಧರಿಸುತ್ತಿದ್ದ 1 ಕೋಟಿ ರೂ. ಮೌಲ್ಯದ ಚಿನ್ನ ಭದ್ರವಾಗಿದೆ. ಈ ಚಿನ್ನಾಭರಣಗಳನ್ನು ಶೀರೂರು ಶ್ರೀಗಳ ಪೂರ್ವಶ್ರಮಕ್ಕೆ ಸಲ್ಲಿಕೆ ಮಾಡಲಾಗಿದೆ ಅಂತ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    ಶಿರೂರು ಶ್ರೀಗಳು ಧರಿಸುತ್ತಿದ್ದ ಚಿನ್ನಾಭರಣ ಸೇಫಾಗಿದೆ. ರಮ್ಯಾ ಶೆಟ್ಟಿ ಚಿನ್ನಾಭರಣ ಕದ್ದಿಲ್ಲ. ಸ್ವಾಮೀಜಿ ಆಪ್ತರೂ ಚಿನ್ನಾಭರಣ ಎಗರಿಸಿಲ್ಲ. ಕೆಲ ಮಾಧ್ಯಮಗಳಲ್ಲಿ ಚಿನ್ನಾಭರಣ ಕಾಣೆ ಎಂಬ ವದಂತಿ ಹಬ್ಬಿಸಲಾಗಿತ್ತು. ಆದ್ರೆ ಇದೀಗ ಚಿನ್ನಾಭರಣಗಳನ್ನು ಆಸ್ಪತ್ರೆಯ ವೈದ್ಯರು ಸ್ವಾಮೀಜಿ ಕುಟುಂಬಕ್ಕೆ ನೀಡಿದ್ದಾರೆ ಅಂತ ಅವರು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

    ಶನಿವಾರ ಮರಣೋತ್ತರ ವರದಿ?;
    ಜುಲೈ 19 ರಂದು ಶೀರೂರು ಶ್ರೀ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದರು. ಶ್ರೀಗಳ ಸಾವಿನ ಕುರಿತು ಇನ್ನೆರಡು ದಿನದಲ್ಲಿ ಮರಣೋತ್ತರ ಪರೀಕ್ಷೆ ವರದಿ ಬರಲಿದೆ. ಶನಿವಾರ ಮರಣೋತ್ತರ ಪರೀಕ್ಷೆಯ ವರದಿ ಸಿಗುವ ಸಾಧ್ಯತೆಗಳಿದ್ದು, 6 ವಾರದ ನಂತರ ವಿಧಿ ವಿಜ್ಞಾನ ಪ್ರಯೋಗಾಲಯದ(ಎಫ್‍ಎಸ್‍ಎಲ್) ವರದಿ ಕೈ ಸೇರುವ ಸಾಧ್ಯತೆಯಿದೆ. ಈ ಎರಡೂ ವರದಿ ಬಂದ ಬಳಿಕ ಸಾವಿನ ತನಿಖೆ ಮಹತ್ವ ಪಡೆಯಲಿದೆ.

    ಜುಲೈ 31ರಂದು ಆರಾಧನೆ:
    ಲಕ್ಷ್ಮೀವರತೀರ್ಥ ಸ್ವಾಮೀಜಿ ವೃಂದಾವನಸ್ಥ ಹಿನ್ನೆಲೆಯಲ್ಲಿ ಜುಲೈ 31 ರಂದು ಶಿರೂರು ಸ್ವಾಮೀಜಿ ಆರಾಧನೆ ಕಾರ್ಯಕ್ರಮವಿದೆ. ಶ್ರೀಗಳು ನಿಧನ ಹೊಂದಿದ ಹದಿಮೂರನೇ ದಿನ ಸೋದೆಮಠದ ನೇತೃತ್ವದಲ್ಲಿ ಈ ಆರಾಧನೆ ಕಾರ್ಯಕ್ರಮವನ್ನು ಮಾಡಲಾಗುತ್ತಿದೆ. ಹಿರಿಯಡ್ಕ ಸಮೀಪದ ಮೂಲಮಠ ಶೀರೂರಿನಲ್ಲಿ ಆರಾಧನಾ ಪ್ರಕ್ರಿಯೆ ನಡೆಯಲಿದೆ.

    ಅನಗತ್ಯ ಮಾನಹಾನಿ:
    ಸ್ವಾಮೀಜಿಯ ಚಿನ್ನವನ್ನು ಸ್ವಾಮೀಜಿ ಆಪ್ತ ಬುಲೆಟ್ ಗಣೇಶ್ ಎಂಬವರು ಕದ್ದಿದ್ದಾರೆಂದು ಆರೋಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಗಣೇಶ್, ನಾನು ಆರೋಪಿಯಲ್ಲ. ನಾನು ಚಿನ್ನ ಕದ್ದಿಲ್ಲ. ನನ್ನನ್ನು ಯಾರೂ ಈವರೆಗೆ ವಿಚಾರಣೆ ಮಾಡಿಲ್ಲ. ಅನಗತ್ಯವಾಗಿ ನನ್ನ ಮಾನಹಾನಿ ಮಾಡಲಾಗುತ್ತಿದೆ ಅಂತ ಕಿಡಿಕಾರಿದ್ದಾರೆ.

    ಸ್ವಾಮೀಜಿ ಚಿನ್ನಕ್ಕೂ ನನಗೂ ಸಂಬಂಧವಿಲ್ಲ. ಸ್ವಾಮೀಜಿ ಜೊತೆ ಯಾವುದೇ ಆರ್ಥಿಕ ವ್ಯವಹಾರ ಇಲ್ಲ. ನಾನು ಸ್ವಾಮೀಜಿ ಪಾರ್ಟ್‍ನರ್ ಅಲ್ಲ. ನಾನು ಶಿರೂರು ಸ್ವಾಮೀಜಿಯ ಭಕ್ತನಾಗಿದ್ದು, ಅನುಮಾನಾಸ್ಪದ ಸಾವಿನ ತನಿಖೆಯಾಗಬೇಕು ಅಂತ ಅವರು ಆಗ್ರಹಿಸಿದ್ದಾರೆ.

  • ಶಿರೂರು ಸ್ವಾಮೀಜಿ ಬಳಿಯಿದ್ದ 1 ಕೋಟಿ ರೂ. ಮೌಲ್ಯದ ಚಿನ್ನಾಭರಣ ನಾಪತ್ತೆ!

    ಶಿರೂರು ಸ್ವಾಮೀಜಿ ಬಳಿಯಿದ್ದ 1 ಕೋಟಿ ರೂ. ಮೌಲ್ಯದ ಚಿನ್ನಾಭರಣ ನಾಪತ್ತೆ!

    ಉಡುಪಿ: ಶಿರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಶ್ರೀ ಶಂಕಾಸ್ಪದ ಸಾವು ಹಿನ್ನೆಲೆಯಲ್ಲಿ ಅವರ ಚಿನ್ನ ಕದ್ದವರ್ಯಾರು ಅನ್ನುವ ಸಂಶಯ ಶುರುವಾಗಿದೆ.

    ಸ್ವಾಮೀಜಿ ಬಳಿಯಿದ್ದ ಒಂದು ಕೋಟಿ ಮೌಲ್ಯದ ಚಿನ್ನಾಭರಣ ನಾಪತ್ತೆಯಾಗಿದೆ. ಸ್ವಾಮೀಜಿ ಬಳಿ ಸುಮಾರು 4 ಕೆ.ಜಿ ಚಿನ್ನಾಭರಣವಿದ್ದು, ಚಿನ್ನದ ಮೇಲೆ ಅವರಿಗೆ ಅತಿಯಾದ ವ್ಯಾಮೋಹವಿತ್ತು. ಶಿರೂರು ಶ್ರೀ 5 ಕಡಗಗಳು, ಚಿನ್ನದ ಮಾಲೆಗಳು, ತುಳಸಿ ಮಾಲೆ ಧರಿಸುತ್ತಿದ್ದರು. ನಾಲ್ಕೈದು ಉಂಗುರಗಳನ್ನು ತೊಡುತ್ತಿದ್ದರು. ಇದೀಗ ಸ್ವಾಮೀಜಿ ಆಸ್ಪತ್ರೆ ಸೇರಿದಾಗ ಬಂಗಾರ ಕಳ್ಳತನವಾಗಿರುವ ಶಂಕೆಯಿದೆ.

    ಚಿನ್ನ ಎಗರಿಸಿದ್ದು ರಮ್ಯಾ ಶೆಟ್ಟಿಯಾ ಎನ್ನುವ ಸಂಶಯವಿದೆ. ಯಾಕಂದ್ರೆ ರಮ್ಯಾ ಶ್ರೀಗಳ ಚಿನ್ನದ ಮೇಲೆ ವ್ಯಾಮೋಹಿತಳಾಗಿದ್ದಳು. ಫೋಟೋ ತೆಗೆಸಿಕೊಂಡಿದ್ದಳು. ಮಠದ, ಶ್ರೀಗಳ ಆಪ್ತರ ಮೇಲೂ ಸಂಶಯವಿದೆ. ಶಿರೂರು ಸ್ವಾಮೀಜಿ ನಡೆದುಕೊಂಡು ಹೋಗುವಾಗ ಬಂಗಾರದ ಭಾರಕ್ಕೆ ಅವರು ಕುಸಿದು ಹೋಗುತ್ತಾರಾ ಅನ್ನುವಷ್ಟು ಚಿನ್ನ ಅವರ ಕೊರಳಲ್ಲಿ ಇತ್ತು.

    ಮಠದಲ್ಲೇ ಆಭರಣ ಬಿಟ್ಟಿದ್ದ ಸ್ವಾಮೀಜಿ:
    ಸಾವಿಗೂ ಕೆಲ ದಿನಗಳ ಹಿಂದೆ ಸ್ವಾಮೀಜಿಯವರು ತನ್ನ ಬಳಿ 3 ಕೆ.ಜಿ ಚಿನ್ನ ಇದೆ ಅಂತ ಮಾಧ್ಯಮಗಳಿಗೆ ತಿಳಿಸಿದ್ದರು. 3 ಕೆ.ಜಿ ಚಿನ್ನವಾದರೆ ಈವಾಗಿನ ಮಾರುಕಟ್ಟೆಯಲ್ಲಿ ಸರಿಸುಮಾರು 75 ಲಕ್ಷ ರೂ. ಗೂ ಅಧಿಕವಾಗುತ್ತದೆ. ಸ್ವಾಮೀಜಿ ಅವರು ತಮ್ಮ ಕುತ್ತಿಗೆ ಮತ್ತು ಕೈಗಳಲ್ಲಿ ಸುಮಾರು 1 ಕೆ.ಜಿಯಷ್ಟು ಚಿನ್ನಭಾರಣಗಳನ್ನು ಧರಿಸುತ್ತಿದ್ದರು. ಅಂದ್ರೆ ಸರಿ ಸುಮಾರು 10ರಿಂದ 20 ಲಕ್ಷ ರೂ. ಮೌಲ್ಯದಷ್ಟು ಚಿನ್ನಾಭರಣಗಳನ್ನು ಪ್ರತೀ ದಿನ ತೊಡುತ್ತಿದ್ದರು. ಈ ಆಭರಣಗಳು ಪುರಾತನ ಕಾಲದ್ದಾಗಿದೆ. ಆದ್ದರಿಂದ ಅವುಗಳಿಗೆ ಮಾರುಕಟ್ಟೆ ಬೆಲೆಗಿಂತಲೂ ಅಧಿಕ ಕೋಟ್ಯಂತರ ಬೆಲೆ ಇದೆ ಅಂತ ಚಿನ್ನಾಭರಣ ತಜ್ಞರೊಬ್ಬರು ತಿಳಿಸಿದ್ದಾರೆ.

    ಒಟ್ಟಿನಲ್ಲಿ ಸ್ವಾಮೀಜಿ ಮಣಿಪಾಲದ ಆಸ್ಪತ್ರೆಗೆ ಸೇರುವಾಗ ಅವರ ಮೈಮೇಲೆ ಚಿನ್ನಾಭರಣಗಳು ಇರಲಿಲ್ಲ. ಎಲ್ಲವನ್ನೂ ಮೂಲ ಮಠದಲ್ಲೇ ತೆಗೆದಿಟ್ಟು ಹೋಗಿದ್ದರು. ಆದ್ರೆ ಇದೀಗ ಅವುಗಳು ಏನಾಗಿದೆ? ಯಾರ ಕೈಯಲ್ಲಿವೆ ಅನ್ನೋದೇ ನಿಗೂಢವಾಗಿದ್ದು, ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.

    ಮಹಿಳೆ ಲೂಟಿ ಆರೋಪ:
    ಸುಮಾರು 2 ವರ್ಷಗಳ ಹಿಂದಿನಿಂದ ಸ್ವಾಮೀಜಿಯವರಿಗೆ ಈ ಚಿನ್ನಾಭರಣಗಳನ್ನು ಧರಿಸಿಕೊಳ್ಳುವ ಖಯಾಲಿ ಆರಂಭವಾಗಿದೆ. ಅಂದ್ರೆ ಅವರ ಆಪ್ತ ಮಹಿಳೆಯೊಬ್ಬರು ಮಠಕ್ಕೆ ಸೇರಿಕೊಂಡ ಬಳಿಕ ಸ್ವಾಮೀಜಿ ಆಭರಣ ಧರಿಸಲು ಆರಂಭಿಸಿದ್ದಾರೆ. ಮೂಲತಃ ಸುಳ್ಯದವಳಾಗಿದ್ದರೂ ಆಕೆ ಮದುವೆಯಾಗಿ ಮುಂಬೈನಲ್ಲಿದ್ದವಳಾಗಿದ್ದಳು. ಹೀಗಾಗಿ ಆಕೆ ಚಿನ್ನದ ವ್ಯಾಪಾರಿಗಳನ್ನು ಮಠಕ್ಕೆ ಕರೆಸುತ್ತಿದ್ದು, ಅವರು 3-4 ತಿಂಗಳಿಗೊಮ್ಮೆ ತಮ್ಮೊಂದಿಗೆ ವೈವಿಧ್ಯಮಯ ಆ್ಯಂಟಿಕ್ ಆಭರಣಗಳನ್ನು ತರುತ್ತಿದ್ದರು. ಈ ವೇಳೆ ಆಕೆ ಆಭರಣಗಳನ್ನು ಆಯ್ಕೆ ಮಾಡುತ್ತಿದ್ದಳು, ಇನ್ನ ಸ್ವಾಮೀಜಿ ಹಣ ನೀಡುತ್ತಿದ್ದರು. ಈ ಆಭರಣಗಳನ್ನು ಆಕೆ ಮತ್ತು ಸ್ವಾಮೀಜಿ ಇಬ್ಬರೂ ಧರಿಸುತ್ತಿದ್ದರು. ಈ ಮೂಲಕ ಆಕೆ ಸ್ವಾಮೀಜಿ ಕೈಯಿಂದ ಲೂಟಿ ಮಾಡುತ್ತಿದ್ದಳು ಅಂತ ಮಠದ ಹಿಂದಿನ ಉಸ್ತುವಾರಿ ಸುನಿಲ್ ಕುಮಾರ್ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.

    ಡಿವಿಆರ್ ಗಾಗಿ ನದಿಯಲ್ಲಿ ಶೋಧ:
    ಶಿರೂರು ಮೂಲಮಠದ ಎದುರುಗಡೆ ಸಿಸಿಟಿವಿ ಇತ್ತು. ಸ್ವಾಮೀಜಿ ಅವರ ನಿಧನದ ಬಳಿಕ ಈ ಸಿಸಿಟಿವಿಯ ಡಿವಿಆರ್ ನಾಪತ್ತೆಯಾಗಿತ್ತು. ಹೀಗಾಗಿ ಎರಡು ದಿನದಿಂದ ಡಿವಿಆರ್ ಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದರು. ಸದ್ಯ ಡಿವಿಆರ್ ಗಾಗಿ ಇಂದು ಹಿರಿಯಡ್ಕ ಸಮೀಪ ಸ್ವರ್ಣಾ ನದಿಯಲ್ಲಿ ಹುಡುಕಾಟ ನಡೆಸಲಾಗಿತ್ತು.

    ಶೀರೂರು ಮೂಲ ಮಠದ ಪಕ್ಕದಲ್ಲಿ ಸ್ವರ್ಣಾ ನದಿ ಇದೆ. ದೋಣಿ, ತೆಪ್ಪ ಬಳಸಿ ಡಿವಿಆರ್ ಗಾಗಿ ಹುಡುಕಾಟ ನಡಸಲಾಗಿದೆ. ಅಲ್ಲದೇ ಮುಳುಗು ತಜ್ಞರಿಂದ ಆಯಸ್ಕಾಂತ ಮುಳುಗಿಸಿ ಕಬ್ಬಿಣದ ಡಿವಿಆರ್ ಮೇಲಕ್ಕೆಳೆಯಲು ಪ್ರಯತ್ನ ಮಾಡಲಾಗಿದೆ. ಆದ್ರೆ ಡಿವಿಆರ್ ನೀರಿಗೆಸೆದವರು ಯಾರು ಎಂಬ ಪ್ರಶ್ನೆ ಕಾಡುತ್ತಿದೆ.

  • ಬೌರಿಂಗ್ ಕ್ಲಬ್‍ನಲ್ಲಿ ಕೋಟಿ ಕೋಟಿ ಹಣ ಪತ್ತೆ ಪ್ರಕರಣಕ್ಕೆ ರೋಚಕ ತಿರುವು

    ಬೌರಿಂಗ್ ಕ್ಲಬ್‍ನಲ್ಲಿ ಕೋಟಿ ಕೋಟಿ ಹಣ ಪತ್ತೆ ಪ್ರಕರಣಕ್ಕೆ ರೋಚಕ ತಿರುವು

    ಬೆಂಗಳೂರು: ನಗರದ ಬೌರಿಂಗ್ ಇನ್‍ಸ್ಟಿಟ್ಯೂಟ್ ನಲ್ಲಿ ಪತ್ತೆಯಾದ ಕೋಟಿ ಕೋಟಿ ಹಣ ಹಿಂದಿರುಗಿಸುವಂತೆ ವ್ಯಕ್ತಿಯೊಬ್ಬರು 5 ಕೋಟಿ ರೂ, ಅಮಿಷ ನೀಡಿದ್ದರು ಎಂದು ಇನ್‍ಸ್ಟಿಟ್ಯೂಟ್ ಕಾರ್ಯದರ್ಶಿ ಹೆಚ್ ಎಸ್ ಶ್ರೀಕಾಂತ್ ಹೇಳಿದ್ದಾರೆ.

    ಲಾಕರ್ಸ್ ಗಳಲ್ಲಿ ಪತ್ತೆಯಾದ ಆಪಾರ ಹಣದ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಕ್ರೀಡಾ ಪರಿಕರಗಳನ್ನು ಇಡಲು ಬೌರಿಂಗ್ ಇನ್‍ಸ್ಟಿಟ್ಯೂಟ್ ಅನ್ನು ನಿರ್ಮಾಣ ಮಾಡಲಾಗಿತ್ತು. 38 ವರ್ಷಗಳಿಂದ ನಾನು ಸಂಸ್ಥೆಯ ಸದಸ್ಯನಾಗಿ, 2010 ರಿಂದ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದು, 5000 ಕ್ಕೂ ಹಚ್ಚಿನ ಮೆಂಬರ್ಸ್ ಇದ್ದಾರೆ. ಇಲ್ಲಿ 670 ಲಾಕರ್ಸ್ ವ್ಯವಸ್ಥೆ ಮಾಡಲಾಗಿದೆ ಎಂದರು.

    ಸಂಸ್ಥೆಯ ಫ್ಲಾಟ್‍ನಲ್ಲಿ ಕೆಲ ನವೀಕರಣ ಕಾರ್ಯಗಳು ನಡೆಯಬೇಕಾಗಿದ್ದರಿಂದ ಫೆಬ್ರವರಿಯಲ್ಲಿ ಸದಸ್ಯರಿಗೆ ನೊಟೀಸ್ ನೀಡಲಾಗಿತ್ತು. ಆದರೆ ಈ ನೋಟಿಸ್ ಯಾವುದೇ ಪ್ರತಿಕ್ರಿಯೆಬಾರದ ಕಾರಣ ನಮ್ಮ ಸಿಬ್ಬಂದಿಯೊಂದಿಗೆ ನಾವೇ ಲಾಕರ್ಸ್ ತೆರೆದು ನೋಡಿದಾಗ ಕಪ್ಪು ಬ್ಯಾಗ್ ಗಳು ಪತ್ತೆಯಾಗಿವೆ. ಈ ಕುರಿತು ಪೊಲೀಸ್ ಡಿಜಿಪಿ ಚಂದ್ರಹಾಸ್ ಗುಪ್ತ ಅವರಿಗೆ ಮಾಹಿತಿ ನೀಡಿ, ಬ್ಯಾಗ್ ಗಳನ್ನು ತೆಗೆದ ಎಲ್ಲಾ ದೃಶ್ಯಗಳನ್ನು ವಿಡಿಯೋ ಮಾಡಿ ಸೀಲ್ ಮಾಡಲಾಗಿದೆ. ಬಳಿಕ ಐಟಿ ಅಧಿಕಾರಿಗಳಿಗೆ ಮಾಹಿತಿ ನೀಡಿ ಪರಿಶೀಲನೆ ನಡೆಸಲಾಗಿದೆ ಎಂದರು.

    ಪ್ರಮುಖವಾಗಿ ಟೆನಿಸ್ ಕೋರ್ಟ್ ನಲ್ಲಿನ ಲಾಕರ್ ರೂಮ್‍ನ 79, 62 ಎಂಬ ಲಾಕರ್ ಗಳಲ್ಲಿ 6 ಬ್ಯಾಗ್ ಪತ್ತೆಯಾಗಿದೆ. ಇದರಲ್ಲಿ ಮೂರುವರೆ ಕೋಟಿ ದುಡ್ಡು, 8 ಕೋಟಿ ಮೌಲ್ಯದ ವಜ್ರಾಭರಣ, ಆಸ್ತಿ ದಾಖಲೆ ಪತ್ರ ಪತ್ತೆಯಾಗಿದೆ. ಒಟ್ಟಾರೆ ಸಂಸ್ಥೆಯ ಕಟ್ಟಡದಲ್ಲಿದ್ದ ಒಟ್ಟು 126 ಲಾಕರ್ ಓಪನ್ ಮಾಡಲಾಗಿತ್ತು ಎಂದು ತಿಳಿಸಿದರು.

    ಲಾಕರ್ ನಲ್ಲಿ ಸಿಕ್ಕಿದ್ದೇನು?
    * 2000 ರೂ. ನೋಟುಗಳ 18 ಬಂಡಲ್ (3 ಕೋಟಿ 90 ಲಕ್ಷ ರೂ.)
    * 7.8 ಕೋಟಿ ಮೌಲ್ಯದ ಡೈಮಂಡ್
    * ಗೋಲ್ಡ್ ಬಿಸ್ಕಟ್ 650 ಗ್ರಾಂ
    * 30 ರಿಂದ 40 ಲಕ್ಷ ರೂ. ಮೌಲ್ಯದ ಎರಡು ವಾಚ್
    * ನೂರಾರು ಕೋಟಿ ಮೌಲ್ಯದ ಆಸ್ತಿ ಪತ್ರ
    * ಹಲವು ಕೋಟಿ ರೂ. ಮೌಲ್ಯ ಚೆಕ್ ಹಾಗೂ ಸಹಿ ಮಾಡದ ಖಾಲಿ ಚೆಕ್‍ಗಳು ಪತ್ತೆ

    ಅಂದಹಾಗೇ ಪತ್ತೆಯಾದ ಅಪಾರ ಪ್ರಮಾಣದ ಹಣ ರಾಜ್ಯ ಪ್ರತಿಷ್ಠಿತ ಉದ್ಯಮಿ ಅವಿನಾಶ್ ಅಮರ್ ಲಾಲ್ ಅವರದ್ದು ಎಂದು ತಿಳಿಸಿದ್ದಾರೆ. ಅಮರ್ ಲಾಲ್ ಪ್ರೆಸ್ಟಿಜ್ ಗ್ರೂಪ್ ಆಫ್ ಕಂಪೆನಿಯಲ್ಲಿ ಪಾಲುದಾರರಾಗಿದ್ದು, ಮೂಲತಃ ರಾಜಸ್ಥಾನದವರಾಗಿದ್ದು, ಬೆಂಗಳೂರಲ್ಲಿ ಬಡ್ಡಿ ವ್ಯವಹಾರ ಮಾಡುತ್ತಿದ್ದು, 30% ರಷ್ಟು ಬಡ್ಡಿಗೆ ಸಾಲ ನೀಡುತ್ತಿದ್ದರು. ಸಾಲ ಕೊಟ್ಟು ಆಸ್ತಿ ಪತ್ರಗಳನ್ನು ಪಡೆಯುತ್ತಿದ್ದರು ಎಂದು ತಿಳಿದು ಬಂದಿದೆ.