Tag: Gold Loan

  • Davanagere | ಗೋಲ್ಡ್ ಲೋನ್ ರಿನಿವಲ್ ಮಾಡಲು ಬಂದಿದ್ದ ಮಹಿಳೆಯ 3.5 ಲಕ್ಷ ಹಣ ಎಗರಿಸಿದ ಕಳ್ಳಿಯರು

    Davanagere | ಗೋಲ್ಡ್ ಲೋನ್ ರಿನಿವಲ್ ಮಾಡಲು ಬಂದಿದ್ದ ಮಹಿಳೆಯ 3.5 ಲಕ್ಷ ಹಣ ಎಗರಿಸಿದ ಕಳ್ಳಿಯರು

    ದಾವಣಗೆರೆ: ಬಂಗಾರದ ಲೋನ್ ರಿನಿವಲ್ (Gold Loan Renewal) ಮಾಡಲು ಬಂದಿದ್ದ ಮಹಿಳೆಯ ಹಣ ಎಗರಿಸಿ ಕಳ್ಳಿಯರು ಎಸ್ಕೇಪ್ ಆದ ಘಟನೆ ದಾವಣಗೆರೆ (Davanagere) ಜಿಲ್ಲೆಯ ಚನ್ನಗಿರಿ (Channagiri) ತಾಲೂಕಿನ ಸಂತೆಬೆನ್ನೂರು ಕೆನರಾ ಬ್ಯಾಂಕ್‌ನಲ್ಲಿ ನಡೆದಿದೆ.

    ಚನ್ನಗಿರಿ ತಾಲೂಕಿನ ತಣಿಗೆರೆ ಗ್ರಾಮದ ಲತಾ ಬಂಗಾರದ ಸಾಲ ನವೀಕರಣಕ್ಕೆಂದು ಪತಿಯೊಂದಿಗೆ ಬ್ಯಾಂಕ್‌ಗೆ ಬಂದಿದ್ದರು. ಈ ವೇಳೆ ಪೆನ್ ನೀಡುವ ನೆಪದಲ್ಲಿ ಲತಾ ಬಳಿ ಇದ್ದ 3.5 ಲಕ್ಷ ರೂ. ಅನ್ನು ಖತರ್ನಾಕ್ ಕಳ್ಳಿಯರು ಎಗರಿಸಿದ್ದಾರೆ. ಕಳ್ಳಿಯರ ಕೈಚಳಕ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನೂ ಓದಿ:  ವಿದೇಶಗಳಲ್ಲಿ ಆಸ್ತಿ ಮಾಡಿದ್ರೆ ಸರ್ಕಾರಕ್ಕೆ ಬರೆದುಕೊಡುವೆ – ಇಡಿ ದಾಳಿಗೊಳಗಾಗಿದ್ದ ಶಾಸಕ ಸುಬ್ಬಾರೆಡ್ಡಿ ಸವಾಲ್‌

    ಹಣ ಕಳುವಾಗಿದೆ ಎಂದು ಅರಿತುಕೊಂಡ ಲತಾ ದಂಪತಿ ಕೂಡಲೇ ಎಚ್ಚೆತ್ತುಕೊಂಡು ಮದ್ಯ ಪ್ರದೇಶ ಮೂಲದ ಇಬ್ಬರನ್ನು ಹಿಡಿದು ಅವರ ಬಳಿ ಇದ್ದ ಎರಡೂವರೆ ಲಕ್ಷ ರೂ. ಹಣ ಪಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆದರೆ ಒಂದು ಲಕ್ಷ ರೂ.ನೊಂದಿಗೆ ಮತ್ತೊಬ್ಬ ಕಳ್ಳಿ ಎಸ್ಕೇಪ್ ಆಗಿದ್ದಾಳೆ. ಸಂತೆಬೆನ್ನೂರು ಪೊಲೀಸರು ಇಬ್ಬರು ಮಹಿಳೆಯರ ವಿಚಾರಣೆ ನಡೆಸುತ್ತಿದ್ದು, ಮತ್ತೊಬ್ಬಳಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಸಂತೆಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.  ಇದನ್ನೂ ಓದಿ: ರಾಯಚೂರಿನಲ್ಲಿ ಹೃದಯಾಘಾತಕ್ಕೆ ಮತ್ತೊಂದು ಬಲಿ – ಜಮೀನಿನಲ್ಲಿ ಕುಸಿದು ಬಿದ್ದು ರೈತ ಸಾವು

  • ಗೋಲ್ಡೋನ್‌ ಗೋಲ್ಮಾಲ್ – ಬ್ಯಾಂಕ್ ಮ್ಯಾನೇಜರ್‌ನಿಂದ 10.97 ಕೋಟಿ ವಂಚನೆ

    ಗೋಲ್ಡೋನ್‌ ಗೋಲ್ಮಾಲ್ – ಬ್ಯಾಂಕ್ ಮ್ಯಾನೇಜರ್‌ನಿಂದ 10.97 ಕೋಟಿ ವಂಚನೆ

    – 105 ನಕಲಿ ಖಾತೆ ಓಪನ್ ಮಾಡಿಸಿ ಪಂಗನಾಮ

    ರಾಯಚೂರು: ಜಿಲ್ಲೆಯ ಬ್ಯಾಂಕ್‌ವೊಂದರಲ್ಲಿ 105 ನಕಲಿ ಖಾತೆ ಓಪನ್ ಮಾಡಿಸಿ, ಬ್ಯಾಂಕ್ ಮ್ಯಾನೇಜರ್‌ನಿಂದ 10.97 ಕೋಟಿ ವಂಚಿಸಿ, ಗೋಲ್ಡೋನ್‌ ಗೋಲ್ಮಾಲ್ ನಡೆದಿರುವುದು ಬೆಳಕಿಗೆ ಬಂದಿದೆ. ಈ ಘಟನೆ ಜಿಲ್ಲೆಯ ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ (Bank of Maharashtra) ನಡೆದಿದೆ.

    ಹೌದು, ಬೇಲಿಯೇ ಎದ್ದು ಹೊಲ ಮೇಯ್ದ ಹಾಗೇ ಜಿಲ್ಲೆಯಲ್ಲಿ ಬ್ಯಾಂಕ್ ಹಾಗೂ ಗ್ರಾಹಕರ ಹಿತ ಕಾಪಾಡಬೇಕಾದ ಬ್ಯಾಂಕ್ ಮ್ಯಾನೇಜರ್ ಕೋಟ್ಯಂತರ ರೂಪಾಯಿ ಗೋಲ್ಮಾಲ್ ಮಾಡಿ ಪರಾರಿಯಾಗಿದ್ದಾನೆ. ಬ್ಯಾಂಕ್ ಆಫ್ ಮಹಾರಾಷ್ಟ್ರದ ಮ್ಯಾನೇಜರ್ ಗ್ರಾಹಕರ ಹೆಸರಲ್ಲಿ ನಕಲಿ ಖಾತೆಗಳನ್ನ (Fake Bank Accounts) ತೆಗೆದು, ಬಂಗಾರ ಅಡವಿಟ್ಟು ಗೋಲ್ಡೋನ್‌ ಹೆಸರಲ್ಲಿ ಕೋಟ್ಯಂತರ ರೂ. ವಂಚನೆ ಮಾಡಿರುವುದು ಹಿರಿಯ ಅಧಿಕಾರಿಗಳ ಬ್ಯಾಂಕ್ ಆಡಿಟ್ ವೇಳೆ ಸುಮಾರು 10.97 ಕೋಟಿ ರೂ. ಗೋಲ್ಮಾಲ್ ಮಾಡಿರುವುದು ಬಯಲಾಗಿದೆ.ಇದನ್ನೂ ಓದಿ:ಬೇವು – ಬೆಲ್ಲ ಸಿಹಿ, ಕಹಿಯ ಸಮಾನ ಹಂಚಿಕೆ ಬಾಳಿಗೊಂದು ಸವಿ ಪಾಠ

    ಆಂಧ್ರಪ್ರದೇಶ (Andhra Pradesh)ಪ್ರಕಾಶಂ ಜಿಲ್ಲೆ ಮೂಲದ ಕೆ.ನರೇಂದ್ರ ರೆಡ್ಡಿ ವಂಚಿಸಿ ಪರಾರಿಯಾಗಿರುವ ಮ್ಯಾನೇಜರ್. ಗ್ರಾಹಕರ ದಾಖಲೆಗಳನ್ನು ಪಡೆದು ಗೋಲ್ಡೋನ್‌ ಹೆಸರಿನಲ್ಲಿ ಖಾತೆ ತೆಗೆದು ಬ್ಯಾಂಕ್ ಹಾಗೂ ಗ್ರಾಹಕರಿಗೆ ವಂಚನೆ ಮಾಡಿದ್ದಾನೆ. ಬ್ಯಾಂಕ್‌ಗೆ ಬಂದು ಮೂರು ವರ್ಷದಲ್ಲಿ 105 ನಕಲಿ ಖಾತೆ ಓಪನ್ ಮಾಡಿದ್ದ ಮ್ಯಾನೇಜರ್ ಗೋಲ್ಡೋನ್‌ (Gold Loan) ತೆಗೆದುಕೊಂಡು ಎಸ್ಕೇಪ್ ಆಗಿದ್ದಾರೆ.

    ಬ್ಯಾಂಕ್‌ನ ಹಣವನ್ನು 29 ನಕಲಿ ಖಾತೆಗಳಿಗೆ ಗೋಲ್ಡೋನ್‌ ಹೆಸರಿನಲ್ಲಿ ವರ್ಗಾವಣೆ ಮಾಡಿದ್ದಲ್ಲದೆ, 8 ಜನ ಸಂಬಂಧಿಕರ ಹೆಸರಿನ ಖಾತೆಗಳಿಗೂ ಹಣ ವರ್ಗಾವಣೆ ಮಾಡಿದ್ದಾನೆ. ಹಿಂದೆ ಆಂಧ್ರಪ್ರದೇಶದ ಕರ್ನೂಲ್‌ನಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದ ಬ್ಯಾಂಕ್‌ನ ಸಹೋದ್ಯೋಗಿ ಹೆಸರಿಗೆ 88 ಲಕ್ಷ ರೂ. ವರ್ಗಾವಣೆ ಮಾಡಿದ್ದಾನೆ. ಆಡಿಟ್ ವೇಳೆ ಕೆ.ನರೇಂದ್ರ ರೆಡ್ಡಿಯ ಬಣ್ಣ ಬಯಲಾಗಿದ್ದು, ಆಡಿಟ್ ಆರಂಭವಾಗುತ್ತಿದ್ದಂತೆಯೇ ಪರಾರಿಯಾಗಿದ್ದಾನೆ.

    ಬ್ಯಾಂಕ್ ಆಫ್ ಮಹಾರಾಷ್ಟ್ರದ ರಿಜಿನಲ್ ಮ್ಯಾನೇಜರ್ ಸುಚೇತ್ ಡಿಸೋಜಾ ರಾಯಚೂರು ಸೈಬರ್ ಪೊಲೀಸ್ ಠಾಣೆಯಲ್ಲಿ ಮ್ಯಾನೇಜರ್ ಕೆ.ನರೇಂದ್ರ ರೆಡ್ಡಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಸದ್ಯ ಪೊಲೀಸರು. ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ.ಇದನ್ನೂ ಓದಿ:ರಾಜ್ಯ ಹವಾಮಾನ ವರದಿ 29-03-2025