Tag: gold jewellery

  • ಚಿನ್ನಪ್ರಿಯರಿಗೆ ಸಿಹಿಸುದ್ದಿ – ಬೆಳ್ಳಿ, ಬಂಗಾರ ಸ್ವಲ್ಪ ಕಡಿಮೆ ಭಾರ!

    ಚಿನ್ನಪ್ರಿಯರಿಗೆ ಸಿಹಿಸುದ್ದಿ – ಬೆಳ್ಳಿ, ಬಂಗಾರ ಸ್ವಲ್ಪ ಕಡಿಮೆ ಭಾರ!

    ಬೆಂಗಳೂರು: ದೀಪಾವಳಿ ಹಬ್ಬಕ್ಕೆ ಚಿನ್ನಾಭರಣ (Gold Jewellery) ಗ್ರಾಹಕರಿಗೆ ಭರ್ಜರಿ ಸಿಹಿಸುದ್ದಿ ಸಿಕ್ಕಿದೆ. ದಾಖಲೆ ಮಟ್ಟದಲ್ಲಿ ಏರಿಕೆ ಕಂಡ ಚಿನ್ನ, ಬೆಳ್ಳಿ ದರ ಈಗ ಕೊಂಚ ಇಳಿಕೆಯಾಗಿದೆ.

    ಪ್ರತಿ ಗ್ರಾಂಗೆ ಚಿನ್ನ ಕಳೆದ 2-3 ದಿನಗಳಿಂದ 600 ರೂ. ಇಳಿಕೆ ಕಂಡಿದೆ. ಇನ್ನು 1.95 ಲಕ್ಷ ರೂ.ವರೆಗೆ ಏರಿಕೆ ಕಂಡಿದ್ದ ಬೆಳ್ಳಿ ದರ 1.58 ಲಕ್ಷ ರೂ.ಗೆ ಇಳಿಕೆಯಾಗಿದೆ. ಇದನ್ನೂ ಓದಿ: PUBLiC TV Explainer| ಅಮೆರಿಕ Vs ಚೀನಾ – ಏನಿದು ಗೋಲ್ಡ್‌ ಬಾಂಬ್‌? ವಿಶ್ವದ ಮೇಲೆ ಪರಿಣಾಮ ಏನು?

    ದಿಢೀರ್ ಇಳಿಕೆಗೆ ಕಾರಣ ಏನು?
    * ಡಾಲರ್ ಎದುರು ರೂಪಾಯಿ ಮೌಲ್ಯ ಏರಿಕೆ
    * ಅಮೆರಿಕ-ಭಾರತದ ಮಧ್ಯೆ ಕಚ್ಚಾ ತೈಲದ ವ್ಯಾಪಾರದ ಮುನ್ಸೂಚನೆ
    * ಮುಂದಿನ ದಿನದಲ್ಲಿ ತೈಲ (Oil) ವ್ಯಾಪಾರದ ಮುನ್ಸೂಚನೆ
    * ತಿಳಿಯಾದ ಚೀನಾ-ಅಮೆರಿಕ ಜಾಗತಿಕ ವ್ಯಾಪಾರ

    ಚಿನ್ನ, ಬೆಳ್ಳಿ ದರ ಡಿಸೆಂಬರ್ ವೇಳೆಯಲ್ಲಿ ಇನ್ನಷ್ಟು ಕಡಿತಗೊಳ್ಳುವ ನಿರೀಕ್ಷೆಯಿದೆ ಅನ್ನೋದು ಹಣಕಾಸು ತಜ್ಞರ ಅಭಿಪ್ರಾಯವಾಗಿದೆ. ಇದನ್ನೂ ಓದಿ: Karnool Bus Fire | ಮೃತರ ಕುಟುಂಬಸ್ಥರಿಗೆ ಕೇಂದ್ರದಿಂದ ತಲಾ 2 ಲಕ್ಷ ಪರಿಹಾರ ಘೋಷಣೆ

  • ಮಗನ ಮದ್ವೆಗಾಗಿ ಇಟ್ಟಿದ್ದ 300 ಗ್ರಾಂ ಚಿನ್ನ, 10 ಲಕ್ಷ ಮೌಲ್ಯದ ಬೆಳ್ಳಿ, 3 ಲಕ್ಷ ಹಣ ಕಳವು

    ಮಗನ ಮದ್ವೆಗಾಗಿ ಇಟ್ಟಿದ್ದ 300 ಗ್ರಾಂ ಚಿನ್ನ, 10 ಲಕ್ಷ ಮೌಲ್ಯದ ಬೆಳ್ಳಿ, 3 ಲಕ್ಷ ಹಣ ಕಳವು

    – ಬಾಗಿಲು ಮುರಿಯದೇ, ಬೀಗ ಒಡೆಯದೇ ಚಿನ್ನದ ಗಣಿ ಹೊತ್ತೊಯ್ದ ಕಳ್ಳ

    ಬೆಂಗಳೂರು: ಎರಡು ಮೂರು ದಿನ ಮನೆ ಬಿಟ್ಟು ಹೊರಗೆ ಹೋಗುವ ಮುನ್ನ ಎಚ್ಚರ ವಹಿಸಬೇಕಾದ ಸ್ಟೋರಿ ಇದು. ಹೌದು. ಬರಿಗೈಯಲ್ಲಿ ಬಂದ ಕಳ್ಳನೊಬ್ಬ (Thief) ಬಾಗಿಲು ಮುರಿಯದೇ, ಬೀಗ ಒಡೆಯದೇ ಒಳಗೆ ನುಗ್ಗಿ ಚಿನ್ನದ ಗಣಿಯನ್ನೇ ದೋಚಿರುವ ಘಟನೆ ಸಿಲಿಕಾನ್‌ ಸಿಟಿಯಲ್ಲಿ ನಡೆದಿದೆ.

    ವಿಂಡೋ ಓಪನ್ ಮಾಡಿ ಲಾಕ್‌ನ ಸ್ಕ್ರೂ ಬಿಚ್ಚಿ ಮಗನ ಮದುವೆಗೆ ಮನೆಯಲ್ಲಿಟ್ಟಿದ್ದ ಹಣ, ಚಿನ್ನಾಭರಣವನ್ನ (Gold Jewellery) ಹೊತ್ತೊಯ್ದಿದ್ದಾನೆ. ಇದನ್ನೂ ಓದಿ: ಬೆಂಗಳೂರಲ್ಲಿ ಟ್ರಯಾಂಗಲ್ ಲವ್ ಸ್ಟೋರಿಗೆ ಯುವಕ ಬಲಿ

    ಬಗಲಗುಂಟೆ ರಾಮಯ್ಯ ಬಡಾವಣೆಯಲ್ಲಿ ದರ್ಶನ್ ಎಂಬುವವರ ಮನೆಯಲ್ಲಿ ಕಳ್ಳತನವಾಗಿದ್ದು, 45 ಲಕ್ಷ ಬೆಲೆ ಬಾಳುವ ಚಿನ್ನಾಭರಣ ಮೂರು ಲಕ್ಷ ನಗದು ದೋಚಿ ಪರಾರಿಯಾಗಿದ್ದಾನೆ. ಒಂದೂವರೆ ಗಂಟೆಗಳ ಕಾಲ ಮನೆಯ ಮೂಲೆ ಮೂಲೆ ಹುಡುಕಿರುವ ಕತರ್ನಾಕ್ ಕಳ್ಳ ಬರುವಾಗ ಬರಿಗೈಲಿ ಬಂದು ವಾಪಸ್ ಆಗುವಾಗ ಬ್ಯಾಗ್ ಸಮೇತ ಹೋಗುವ ದೃಶ್ಯ ಲಭ್ಯವಾಗಿದೆ.

    300 ಗ್ರಾಂ ಗೋಲ್ಡ್, 10 ಲಕ್ಷ ಬೆಲೆ ಬಾಳುವ ಬೆಳ್ಳಿ, 3ಲಕ್ಷ ನಗದು ಒಂದು ಹೊಸ ಮೊಬೈಲ್ ಬಾಕ್ಸ್ ದೋಚಿ ಪರಾರಿಯಾಗಿದ್ದಾನೆ. ಖತರ್ನಾಕ್ ಕಳ್ಳ ಬರಿಗೈಲಿ ಬಂದು ಬ್ಯಾಗ್ ತುಂಬಿಕೊಂಡು ಹೋಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ರೋಗಿ ಜೊತೆ ಸೆಕ್ಸ್ – ಕೆನಡಾದಲ್ಲಿ ಭಾರತ ಮೂಲದ ವೈದ್ಯೆಯ ಮೆಡಿಕಲ್ ಲೈಸೆನ್ಸ್ ಅಮಾನತು

    ಘಟನೆ ಸಂಬಂಧ ಬಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಬಗಲಗುಂಟೆ ಪೊಲೀಸರು ಕಳ್ಳನಿಗಾಗಿ ಹುಡುಕಾಟ ನಡೆಸ್ತಿದ್ದಾರೆ. ಇದನ್ನೂ ಓದಿ: ಭಟ್ಕಳ ಅರಣ್ಯದಲ್ಲಿ ಗೋವುಗಳ ನರಮೇಧ? – ನೂರಾರು ಗೋವುಗಳ ಎಲುಬುಗಳು ಪತ್ತೆ; ಪೊಲೀಸರಿಂದ ತನಿಖೆ

  • ಬೆಂಗಳೂರಿನಲ್ಲಿ ಪರಂಪರೆ ವೈಭವ ಸಾರುವ ʻದಿ ಒರಿಜಿನಲ್‌ ಆಭರಣʼ ಜುವೆಲ್ಲರ್ಸ್‌ ಮಳಿಗೆ ಉದ್ಘಾಟನೆ

    ಬೆಂಗಳೂರಿನಲ್ಲಿ ಪರಂಪರೆ ವೈಭವ ಸಾರುವ ʻದಿ ಒರಿಜಿನಲ್‌ ಆಭರಣʼ ಜುವೆಲ್ಲರ್ಸ್‌ ಮಳಿಗೆ ಉದ್ಘಾಟನೆ

    ಮದುವೆ.. ಮುಂಜಿ ಹಾಗೂ ಮನೆಯಲ್ಲಿ ಸಣ್ಣಪುಟ್ಟ ಸಮಾರಂಭಗಳಿಗೂ ಮೊದಲು ನೆನಪಾಗುವುದೇ ಆಭರಣ. ಚಿನ್ನ, ವಜ್ರ, ಬೆಳ್ಳಿ ಆಭರಣಗಳೆಂದರೆ ಅಲಂಕಾರ ಪ್ರಿಯರಿಗೆ ಅಚ್ಚುಮೆಚ್ಚು. ಈ ನಿಟ್ಟಿನಲ್ಲಿ ರಾಜಧಾನಿ ಬೆಂಗಳೂರಿನ ಮುಕುಟಕ್ಕೆ ಮತ್ತೊಂದು ಚಿನ್ನದ ಗರಿ ಸೇರ್ಪಡೆಯಾಗಿದೆ. ಪರಿಶುದ್ಧ ಚಿನ್ನ, ಮನಮೋಹಕ ವಿನ್ಯಾಸ, ಸರಿಸಾಟಿಯಿಲ್ಲದ ಗುಣಮಟ್ಟ ಹಾಗೂ ಅಸಾಮಾನ್ಯ ಸೇವೆಗೆ ಹೆಸರಾಗಿರುವ ʻದಿ ಒರಿಜಿನಲ್‌ ಆಭರಣʼ ಜ್ಯುವೆಲ್ಲರ್ಸ್‌ನ (Original Abharan Jewellers) ನೂತನ ಶಾಖೆ ಬೆಂಗಳೂರಿನಲ್ಲಿ ಉದ್ಘಾಟನೆಯಾಗಿದೆ.

    ಉಡುಪಿಯ ಪ್ರತಿಷ್ಠಿತ ಚಿನ್ನಾಭರಣ ಮಳಿಗೆ ʻದಿ ಒರಿಜಿನಲ್‌ ಆಭರಣʼ ಜುವೆಲ್ಲರ್ಸ್‌ ಬೆಂಗಳೂರು ನಗರದಲ್ಲಿ (Bengaluru City) ತನ್ನ ಮೊದಲ ಶಾಖೆ ತೆರೆದಿದೆ. 90 ವರ್ಷಗಳ ವಿಶ್ವಾಸಾರ್ಹ ಪರಂಪರೆ ಉಳಿಸಿಕೊಂಡು ಬಂದಿರುವ ʻಒರಿಜಿನಲ್‌ ಆಭರಣʼ ಜುವೆಲ್ಲರ್ಸ್‌ ಜಯನಗರ 5ನೇ ಬ್ಲಾಕ್‌ನ 41ನೇ ಎ ಕ್ರಾಸ್‌ ರಸ್ತೆಯಲ್ಲಿ ತನ್ನ 20ನೇ ಮಳಿಗೆಯನ್ನ ಪ್ರಾರಂಭಿಸಿದೆ. ಇತ್ತೀಚೆಗಷ್ಟೇ ಮಳಿಗೆ ಉದ್ಘಾಟನೆಯ ಸಮಾರಂಭ ಅದ್ಧೂರಿಯಾಗಿ ನೆರವೇರಿತು. ಖ್ಯಾತ ಕೊಳಲು ವಾದಕ ಡಾ.ಪ್ರವೀಣ್‌ ಗೋಡ್ಕಿಂಡಿ ಮಳಿಗೆಯನ್ನ ಉದ್ಘಾಟಿಸಿದರು. ಈ ಸಮಾರಂಭದಲ್ಲಿ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ (DK Shivakumar) ಸಹ ಪಾಲ್ಗೊಂಡಿದ್ದರು.

    ಅತ್ಯಾಧುನಿಕ ಹಾಗೂ ಟ್ರೆಂಡಿಂಗ್ ವಿನ್ಯಾಸ, ಶುದ್ಧತೆಯ ಖಾತ್ರಿಯೊಂದಿಗೆ ತಯಾರಾದ ಚಿನ್ನ, ಬೆಳ್ಳಿ, ಹವಳ ಹಾಗೂ ವಜ್ರಾಭರಣಗಳೊಂದಿಗೆ ಗ್ರಾಹಕರಿಗೆ ವಿಶಿಷ್ಟ ಅನುಭವನ್ನು ಈ ಆಭರಣ ಮಳಿಗೆ ಒದಗಿಸಲಿದೆ.

    ಗುಣಮಟ್ಟದಲ್ಲಿ ರಾಜಿ ಇಲ್ಲ
    ನೂತನ ಮಳಿಗೆ ಆರಂಭವಾದ ಕುರಿತು ಮ್ಯಾನೇಜಿಂಗ್‌ ಡೈರೆಕ್ಟರ್‌ ಸುಭಾಷ್‌ ಕಾಮತ್‌ ಮಾತನಾಡಿ, ಬೆಂಗಳೂರಿನಲ್ಲಿ ಮಳಿಗೆ ತೆರೆದಿರೋದು ತುಂಬಾ ಖುಷಿ ಆಗ್ತಿದೆ, ಎಲ್ಲರೂ ಸಹಕಾರ ನೀಡುವಂತೆ ಮನವಿ ಮಾಡುತ್ತೇನೆ. 1935ರಲ್ಲಿ ನಮ್ಮ ತಾತ ಸ್ಥಾಪಿಸಿದ ಈ ಉದ್ಯಮ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೇ, ಚಿನ್ನದ ಶುದ್ಧತೆ ಕಾಪಡಿಕೊಂಡು ಸಾಗಿತು. ಹೀಗೆ ಪ್ರಾರಂಭವಾದ ʻದಿ ಒರಿಜಿನಲ್‌ ಆಭರಣʼ ಜುವೆಲ್ಲರ್ಸ್‌ 90 ವರ್ಷಗಳನ್ನು ಪೂರೈಸಿ ಮುನ್ನಡೆಯುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.

    ಗೋಲ್ಡ್‌ ಕಾಯಿನ್‌ ಆಫರ್‌ ಇದೆ
    ಸದ್ಯ ಚಿನ್ನದ ಬೆಲೆ ಜಾಸ್ತಿ ಆಗಿದೆ, ಇಂದಿನ ಯುವಜನ ಹೆವಿ ಜ್ಯುವೆಲರ್ಸ್‌ ಉಪಯೋಗಿಸಲ್ಲ. ಹಾಗಾಗಿಯೇ ಚಿನ್ನ, ವಜ್ರ ಹಾಗೂ ಬೆಳ್ಳಿಯಲ್ಲಿ ಹಗುರವಿರುವ ಆಭರಣಗಳ ಕಲೆಕ್ಷನ್ಸ್‌ ಇದೆ. 15,000 ರೂ. ಆರಂಭಿಕ ಬೆಲೆಯಿಂದ ಶುರುವಾಗಲಿದ್ದು, ಪ್ರತಿ ಚಿನ್ನದ ಖರೀದಿ ಮೇಲೆ 1 ಚಿನ್ನದ ನಾಣ್ಯ ಫ್ರೀ ಕೊಡಲಿದ್ದೇವೆ. ಡೈಮಂಡ್‌ ಖರೀದಿ ಮೇಲೆ 12,000 ರೂ. ಗ್ಯಾರಂಟಿ ಆಫರ್‌ ಇದೆ. ನಮ್ಮದೇ ಕಾರ್ಖಾನೆಯಲ್ಲಿ ಎಲ್ಲ ಆಭರಣಗಳು ತಯಾರಾಗುತ್ತವೆ. ನಮ್ಮದೇ ಡಿಸೈನ್‌ ಟೀಂ ಇವುಗಳನ್ನ ತಯಾರಿಸುತ್ತೆ, ಹಾಗಾಗಿ ನಿಖರತೆ ಕೊಡಲು ಸಾಧ್ಯವಾಗಿದೆ. ಆದ್ದರಿಂದ ಬೇರೆ ಆಭರಣ ಮಳಿಗೆಗಳಿಗಿಂತ ನಾವು ಭಿನ್ನ ಅಂತ ತಿಳಿಸಿದ್ರು. ಅಲ್ಲದೇ ನಾವು ಇಷ್ಟು ಸಮಯ ಬೇರೆ ಬೇರೆ ಕಡೆ ಮಳಿಗೆ ಶುರು ಮಾಡಿದ್ದೇವೆ, ಅವೆಲ್ಲವೂ ಒಂದು ರೂಪಕ್ಕೆ ಬಂದಿದೆ. ಇಲ್ಲಿನ ಮಳಿಗೆಯನ್ನ ಇನ್ನಷ್ಟು ದೊಡ್ಡದಾಗಿ ಬೆಳೆಯುವ ದೃಷ್ಟಿಯಿಂದ ಬೆಂಗಳೂರಿನಲ್ಲಿ ಮಳಿಗೆ ತೆರೆದಿದ್ದೇವೆ. ಇದಕ್ಕೆ ಬೆಂಗಳೂರಿನ ಜನ ಸಹಕಾರ ನೀಡಬೇಕು ಎಂದು ಮನವಿ ಮಾಡಿದ್ರು.

    ಸಂಸ್ಥೆಯ ಸಂಧ್ಯಾ ಸುಭಾಷ್‌ ಕಾಮತ್‌ ಮಾತನಾಡಿ, ಬೆಂಗಳೂರಿನಲ್ಲಿ ಮೊದಲ ಮಳಿಗೆ ತೆರೆದಿದ್ದೇವೆ. ಇದು ನಮ್ಮ 20ನೇ ಶಾಖೆ ಅಂತ ಹೇಳಿಕೊಳ್ಳಲು ನಿಜಕ್ಕೂ ತುಂಬಾ ಸಂತಸವಾಗುತ್ತದೆ. ಬಹುಕಾಲದಿಂದ ಕರಾವಳಿ ಕರ್ನಾಟಕ ಭಾಗದಲ್ಲಿ ನಮ್ಮ ಮಳಿಗೆಗಳನ್ನ ತೆರೆದಿದ್ದೇವೆ. ಗೋವಾದಲ್ಲೂ 2 ಮಳಿಗೆ ಓಪನ್‌ ಆಗಿದೆ. ಬೆಂಗಳೂರಿನಲ್ಲಿ ತೆರೆಯಲು ಇದು ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದೆವು, ಈಗ ಅದು ನೆರವೇರಿದೆ ಎಂದು ತಿಳಿಸಿದರು.

    ಡೈಮಂಡ್‌ ಸೆಕ್ಷನ್‌ ಉದ್ಘಾಟಿಸಿದ ರೇವತಿ ಕಾಮತ್‌ ಮಾತನಾಡಿ, ಉಡುಪಿಯ ಒರಿಜಿನಲ್‌ ಆಭರಣ ಇಲ್ಲಿ ಉದ್ಘಾಟನೆಗೊಂಡಿದೆ. ನಾನು ಕೂಡ ಉಡುಪಿ ಆಭರಣ ಮಳಿಗೆಯಲ್ಲೇ ಖರೀದಿ ಮಾಡ್ತೀವಿ. ಆಭರಣ ಸಂಸ್ಥೆಯು ತನ್ನದೇ ಆದ ಪರಂಪರೆ ಕಾಪಾಡಿಕೊಂಡು ಬಂದಿದೆ, ಹಾಗೆಯೇ ಗುಣಮಟ್ಟವನ್ನೂ ಉಳಿಸಿಕೊಂಡಿದೆ. ನನ್ನ ಗಂಡ ಉಡುಪಿಯವರೇ ಆಗಿರುವುದರಿಂದ ನಾವು ಪ್ರತಿ ವರ್ಷವೂ ಉಡುಪಿಗೆ ಹೋಗುತ್ತಿರುತ್ತೇವೆ. ದಿ ಒರಿಜಿನಲ್‌ ಆಭರಣ ಜುವೆಲ್ಲರ್ಸ್‌ನಿಂದ ಖರೀದಿಸಿದ ಚಿನ್ನಾಭರಣ ಅತ್ಯುನ್ನತ ಗುಣಮಟ್ಟದ ಹೊಂದಿರುತ್ತವೆ. ಇಂತಹ ವಿಶ್ವಾಸಾರ್ಹ ಸಂಸ್ಥೆಯಿಂದ ಚಿನ್ನಾಭರಣ ಕೊಳ್ಳುವ ಅವಕಾಶ ಇಂದು ಬೆಂಗಳೂರಿಗರಿಗೆ ಲಭಿಸಿದೆ ಎಂದು ಹರ್ಷ ವ್ಯಕ್ತಪಡಿಸಿದರು.

    ಮಳಿಗೆ ಉದ್ಘಾಟಿಸಿದ ಖ್ಯಾತ ಕೊಳಲು ವಾದಕ ಡಾ.ಪ್ರವೀಣ್‌ ಗೋಡ್ಕಿಂಡಿ ಮಾತನಾಡಿ, ʻದಿ ಒರಿಜಿನಲ್‌ ಆಭರಣʼ ಜುವೆಲ್ಲರ್ಸ್‌ ಗ್ರಾಹಕರಿಂದ ಪಡೆಯುವ ಹಣಕ್ಕೆ ಸೂಕ್ತ ಗುಣಮಟ್ಟದ ಚಿನ್ನಾಭರಣ ನೀಡುತ್ತಾ 90 ವರ್ಷಗಳಿಂದ ಎಲ್ಲರ ವಿಶ್ವಾಸಾರ್ಹತೆ ಕಾಯ್ದುಕೊಂಡು ಬಂದಿದೆ. ಈಗ ತನ್ನ 20ನೇ ಶಾಖೆ ತೆರೆದಿರುವುದೇ ಅದರ ಗುಣಮಟ್ಟಕ್ಕೆ ನಿದರ್ಶನವಾಗಿದೆ. ಉಡುಪಿಯಲ್ಲಿ ಹೋದಾಗ ನನಗೋಸ್ಕರ ಬ್ರೇಸ್‌ಲೆಟ್‌, ಆಭರಣಗಳನ್ನ ಖರೀದಿ ಮಾಡ್ತೀನಿ. ಗೋಲ್ಡ್‌, ಸಿಲ್ವರ್‌, ಡೈಮಂಡ್‌ನಲ್ಲಿ ವೈವಿಧ್ಯತೆ ಇದೆ. ಅಲ್ಲದೇ ನಿಮಗೆ ಬೇಕಾದ ಡಿಸೈನ್‌ಗಳನ್ನೂ ಹೇಳಿ ಮಾಡಿಸಿಕೊಳ್ಳಬಹುದು ಎಂದು ಹೇಳಿದರು.

    ಸಂಸ್ಥೆಯ ಮಹೇಶ್‌ ಕಾಮತ್‌ ಮಾತನಾಡಿ, ಮೆಟ್ರೋ ಸಿಟಿಯಲ್ಲಿ ಮಳಿಗೆ ಶುರು ಮಾಡಿದ್ದು ತುಂಭಾ ಖುಷಿಯಿದೆ. ಬೆಂಗಳೂರು ಜನ ಪ್ರೋತ್ಸಾಹ ನೀಡಿ ಬೆಳೆಸಬೇಕು. ಯುವ ಸಮೂಹಕ್ಕೆ 25,000 ರೂ. ನಿಂದ ಲೈಟ್‌ವೆಟ್‌ ಆಭರಣಗಳ ಕಲೆಕ್ಷನ್ಸ್‌, ದಿನನಿತ್ಯ ಬಳಕೆಗೆ, ಕಚೇರಿಗಳು, ಹಬ್ಬ ಮದುವೆ ಸಮಾರಂಭಗಳಿಗೆ ವೈವಿದ್ಯಮಯ ಆಭರಣಗಳಿವೆ. ಹಬ್ಬಗಳಿಗೆ ವಿಶೇಷ ಆಫರ್‌ಗಳು ಲಭ್ಯವಿರಲಿವೆ. ಜೊತೆಗೆ ಹಳೇ ಚಿನ್ನಗಳ ಮೇಲೆ ವಿಶೇಷ ಆಫರ್‌ ಇರಲಿದೆ ಎಂದು ವಿವರಿಸಿದರು.

    ಈ ಸಮಾರಂಭಕ್ಕೆ ವೀಣಾ ಮಹೇಶ್‌ ಕಾಮತ್‌, ಡಾ.ಅರುಣ್‌ ಕುಡ್ವಾ, ಕ್ಷಮಾ ಕುಡ್ವಾ, ಸಾತ್ವಿಕ್‌ ಕಾಮತ್‌, ಆಕರ್ಷ್ ಕಾಮತ್‌, ಆರ್‌ಎನ್‌ಎಸ್‌ ಗ್ರೂಪ್‌ನ‌ ನವೀನ್‌ ಶೆಟ್ಟಿ, ಸೆಂಚುರಿ ಬಿಲ್ಡರ್‌ನ ಮೋಹಿನಿ ದಯಾನಂದ್‌ ಪೈ, ಸಬಿತಾ ಸತೀಶ್‌ ಪೈ, ಉಲ್ಲಾಸ್‌ ಕಾಮತ್‌ ಮತ್ತಿತರರು ಸಾಕ್ಷಿಯಾದರು.

  • ವಜ್ರ ಖಚಿತ ಡಾಬು, ಬಂಗಾರದ ಕಿರೀಟ – ಚಿತ್ರಗಳಲ್ಲಿ ಜಯಲಲಿತಾ ಆಸ್ತಿ, ಇಲ್ಲಿದೆ ನೋಡಿ…

    ವಜ್ರ ಖಚಿತ ಡಾಬು, ಬಂಗಾರದ ಕಿರೀಟ – ಚಿತ್ರಗಳಲ್ಲಿ ಜಯಲಲಿತಾ ಆಸ್ತಿ, ಇಲ್ಲಿದೆ ನೋಡಿ…

    – 1,526 ಎಕರೆ ಜಾಗದ ಆಸ್ತಿ ಪತ್ರ ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರ

    ಬೆಂಗಳೂರು: ತಮಿಳುನಾಡಿನ ಮಾಜಿ ಸಿಎಂ ದಿ. ಜಯಲಲಿತಾ (Jayalalithaa) ಅವರ ಚಿನ್ನದ ಡಾಬು, ಬಂಗಾರದ ಕಿರೀಟ, ಖಡ್ಗ ಸೇರಿದಂತೆ ಆಸ್ತಿ ಪತ್ರಗಳನ್ನು ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರಿಸುವ ಪ್ರಕ್ರಿಯೆ ಸಿಸಿಎಚ್ ಕೋರ್ಟ್ (CCH Court) ಹಾಲ್-34ರಲ್ಲಿ ನಡೆಯಿತು.

    ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಕೆಲವು ವಸ್ತುಗಳನ್ನು ವಿಶೇಷ ನ್ಯಾಯಾಲಯವು ವಶಪಡಿಸಿಕೊಂಡಿತ್ತು. ವಶಪಡಿಸಿಕೊಂಡ ವಸ್ತುಗಳು, ಬಟ್ಟೆಗಳು ಹಾಗೂ ಒಡವೆಗಳನ್ನು ತಮಿಳುನಾಡು ಸರ್ಕಾರಕ್ಕೆ ನೀಡುವಂತೆ ಕೋರ್ಟ್ ಆದೇಶ ಹೊರಡಿಸಿತ್ತು. ಅದರಂತೆ ಜಯಲಲಿತಾ ಅವರಿಗೆ ಸಂಬಂಧಿಸಿದ ಆಸ್ತಿ ಪತ್ರಗಳು, 11,344 ರೇಷ್ಮೆ ಸೀರೆಗಳು, 7,040 ಗ್ರಾಂ (7.04 ಕೆಜಿ) ತೂಕದ 468 ಬಗೆಯ ಚಿನ್ನಾಭರಣ, ವಜ್ರಖಚಿತ ಆಭರಣಗಳು ಹಾಗೂ 750 ಜೊತೆ ಚಪ್ಪಲಿಗಳು, ವಾಚ್‌ಗಳು ಸೇರಿದಂತೆ ಇನ್ನಿತರ ಬೆಲೆಬಾಳುವ ವಸ್ತುಗಳನ್ನು ತಮಿಳುನಾಡು ಸರ್ಕಾರಕ್ಕೆ (Tamil Nadu Government) ಹಸ್ತಾಂತರಿಸುವ ಪ್ರಕ್ರಿಯೆ ನಡೆಯಿತು.

    ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಸ್‌ಪಿಪಿ ಕಿರಣ್ ಜವಳಿ, ತಮಿಳುನಾಡು ಸರ್ಕಾರಕ್ಕೆ ಚಿನ್ನಾಭರಣ ಮರಳಿ ಕೊಡಲು ಆದೇಶ ಆಗಿದೆ. ತಮಿಳುನಾಡು ವಿಜಿಲೆನ್ಸ್ ಅಧಿಕಾರಿಗಳು ಬಂದಿದ್ದರು. ಅವರ ಸಮಕ್ಷಮದಲ್ಲಿ ಎಲ್ಲ ಆಸ್ತಿಗಳನ್ನ ಪರಿಶೀಲನೆ ಮಾಡಲಾಗಿದೆ. ಒಟ್ಟು 27 ಕೆಜೆಯಷ್ಟು ವಸ್ತುಗಳನ್ನ ಹಸ್ತಾಂತರಿಸಲಾಗಿದೆ. ಸೀಜ್ ಮಾಡಿದ್ದ ಬಸ್‌ ಹಾಗೂ 1,526 ಎಕರೆ ಜಾಗ ಕೂಡ ತಮಿಳುನಾಡು ಸರ್ಕಾರಕ್ಕೆ ಕೊಡಲಾಗಿದೆ. ತಂಜಾವೂರು ಸೇರಿದಂತೆ ಬೇರೆ ಬೇರೆ ಕಡೆ ಇದೇ ಜಮೀನು ಇದ್ದು, ಒಟ್ಟು 1,606 ಐಟಮ್‌ಗಳನ್ನು ಕೊಡಲಾಗಿದೆ. ಸೊಂಟದ ಡಾಬು, ಒಂದು ಕೆಜಿಯ ಚಿನ್ನದ ಕಿರೀಟ, ಖಡ್ಗ, ಗೋಲ್ಡ್ ವಾಚ್, ಪೆನ್‌ಗಳಿದ್ದು ಇವುಗಳನ್ನ ಉಡುಗೊರೆಯಾಗಿ ನೀಡಿರಬಹುದು ಎನ್ನಲಾಗಿದೆ. ಸೀರೆಗಳನ್ನ ಈಗಾಗಲೇ ಹಸ್ತಾಂತರಿಸಲಾಗಿದೆ ಎಂದು ಸಹ ಅವರು ತಿಳಿಸಿದ್ದಾರೆ.

    ಅಲ್ಲದೇ ಕರ್ನಾಟಕ ಸರ್ಕಾರಕ್ಕೆ ಒಟ್ಟು 16 ಕೋಟಿ ರೂ. ನೀಡಲು ಕೋರ್ಟ್‌ ಆದೇಶ ಮಾಡಿದೆ. ಎಐಡಿಎಂಕೆ ಮಾಜಿ ನಾಯಕಿ ಶಶಿಕಲಾ 20 ಕೋಟಿ ಹಣ ಕಟ್ಟಿದ್ದ ಕಾರಣ ಅವರಿಂದ 8 ಕೋಟಿ ಸೇರಿ ಒಟ್ಟು 13 ಕೋಟಿ ರೂ.ಗಳನ್ನ ಕರ್ನಾಟಕ ಸರ್ಕಾರಕ್ಕೆ ಕೊಡಲು ಕೋರ್ಟ್‌ ಹೇಳಿದೆ.

    ಶುಕ್ರವಾರ ವಕೀಲರು ಹಾಗೂ ತಮಿಳುನಾಡಿನ ಕೆಲ ಅಧಿಕಾರಿಗಳು ನ್ಯಾಯಾಧೀಶರ ಮುಂದೆ ಪ್ರತಿಯೊಂದು ಮಾಹಿತಿಯನ್ನು ನೀಡಿ ಚಿನ್ನದ ಒಡವೆಗಳನ್ನು ತೂಕ ಹಾಕಿ ಬಿಗಿ ಭದ್ರತೆಯಲ್ಲಿ ಕೊಂಡೊಯ್ಯಲಾಯ್ತು. 7,040 ಗ್ರಾಂ ತೂಕದ 468 ಬಗೆಯ ಚಿನ್ನ, ವಜ್ರಾಭರಣಗಳು, 700 ಕೆ.ಜಿ ತೂಕದ ಬೆಳ್ಳಿ ಆಭರಣಗಳು, 11,344 ರೇಷ್ಮೆ ಸೀರೆಗಳು, 740 ದುಬಾರಿ ಚಪ್ಪಲಿಗಳು, 250 ಶಾಲು, 12 ರೆಫ್ರಿಜರೇಟರ್, 10 ಟಿವಿ ಸೆಟ್, 8 ವಿಸಿಆರ್, 1 ವಿಡಿಯೋ ಕ್ಯಾಮೆರಾ, 4 ಸಿಡಿ ಪ್ಲೇಯರ್, 2 ಆಡಿಯೋ ಡೆಕ್, 24 ಟೂ-ಇನ್ ಒನ್ ಟೇಪ್ ರೆಕಾರ್ಡರ್ ಹಾಗೂ 1,040 ವಿಡಿಯೋ ಕ್ಯಾಸೆಟ್, 3 ಐರನ್ ಲಾಕರ್‌ಗಳು ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರಿಸಲಾಯಿತು.

  • ಜಯಲಲಿತಾರ 11,344 ರೇಷ್ಮೆ ಸೀರೆ, 750 ಜೋಡಿ ಚಪ್ಪಲಿ, ಆಸ್ತಿ ಪತ್ರ ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರ

    ಜಯಲಲಿತಾರ 11,344 ರೇಷ್ಮೆ ಸೀರೆ, 750 ಜೋಡಿ ಚಪ್ಪಲಿ, ಆಸ್ತಿ ಪತ್ರ ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರ

    ಚೆನ್ನೈ: ತಮಿಳುನಾಡಿನ (TamilNadu) ಮಾಜಿ ಸಿಎಂ ದಿ. ಜಯಲಲಿತಾ ಅವರ 11,344 ರೇಷ್ಮೆ ಸೀರೆ, 750 ಜೋಡಿ ಚಪ್ಪಲಿ ಸೇರಿದಂತೆ ಆಸ್ತಿ ಪತ್ರ ಹಸ್ತಾಂತರ ಪ್ರಕ್ರಿಯೆ ಸಿಸಿಎಚ್ ಕೋರ್ಟ್ ಹಾಲ್ (CCH Court) 34ರಲ್ಲಿ ನಡೆಯಿತು.

    ಸಾಂದರ್ಭಿಕ ಚಿತ್ರ

    ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಕೆಲವು ವಸ್ತುಗಳನ್ನು ವಿಶೇಷ ನ್ಯಾಯಾಲಯವು ವಶಪಡಿಸಿಕೊಂಡಿತ್ತು. ವಶಪಡಿಸಿಕೊಂಡ ವಸ್ತುಗಳನ್ನು ಹಾಗೂ ಬಟ್ಟೆಗಳನ್ನು ಒಡವೆಗಳನ್ನು ತಮಿಳುನಾಡು ಸರ್ಕಾರಕ್ಕೆ ನೀಡುವಂತೆ ಕೋರ್ಟ್ ಆದೇಶ ಹೊರಡಿಸಿತ್ತು. ಅದರಂತೆ ಜಯಲಲಿತಾ (Jayalalithaa) ಅವರಿಗೆ ಸಂಬಂಧಿಸಿದ ಆಸ್ತಿ ಪತ್ರಗಳು, 11,344 ರೇಷ್ಮೆ ಸೀರೆಗಳು, 7,040 ಗ್ರಾಂ (7.04 ಕೆಜಿ) ತೂಕದ 468 ಬಗೆಯ ಚಿನ್ನಾಭರಣ, ವಜ್ರಖಚಿತ ಆಭರಣಗಳು ಹಾಗೂ 750 ಜೊತೆ ಚಪ್ಪಲಿಗಳು, ವಾಚ್‌ಗಳು ಸೇರಿದಂತೆ ಇನ್ನಿತರ ಬೆಲೆಬಾಳುವ ವಸ್ತುಗಳನ್ನು ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರಿಸುವ ಪ್ರಕ್ರಿಯೆ ನಡೀತು. ಇದನ್ನೂ ಓದಿ: ಜಿಯೋ ಹಾಟ್‌ಸ್ಟಾರ್‌ ವಿಲೀನ | ಇನ್ಮುಂದೆ ಐಪಿಎಲ್‌ ಉಚಿತ ವೀಕ್ಷಣೆ ಇಲ್ಲ- ಎರಡನ್ನೂ ಸಬ್‌ಸ್ಕ್ರೈಬ್‌ ಮಾಡಿದವರ ಕಥೆ ಏನು?

    silk saree

    ಸಂಬಂಧಿಕರು ಎಂದು ಹೇಳಿಕೊಂಡು ದೀಪ ಹಾಗೂ ದೀಪಕ್ ಇಬ್ಬರು ಜಯಲಲಿತಾ ಒಡವೆಯನ್ನ ನಮಗೆ ಕೊಡಿ ಎಂದು ಕರ್ನಾಟಕ ಹೈಕೋರ್ಟ್ ನಲ್ಲಿ ಅರ್ಜಿಯನ್ನ ಸಲ್ಲಿಸಿದ್ದರು. ಆದ್ರೆ, ಹೈಕೋರ್ಟ್ ಅವರ ಅರ್ಜಿಯನ್ನು ವಜಾ ಮಾಡಿತ್ತು. ಇಂದು ನ್ಯಾಯಾಧೀಶರ ಸಮ್ಮುಖದಲ್ಲಿ ತಮಿಳುನಾಡು ಸರ್ಕಾರಕ್ಕೆ ಎಲ್ಲಾ ವಸ್ತುಗಳನ್ನು ವರ್ಗಾವಣೆ ಮಾಡಲಾಯ್ತು. ಇದನ್ನೂ ಓದಿ: ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶ ಕರ್ನಾಟಕದ ಸಾಮರ್ಥ್ಯಕ್ಕೆ ಸಾಕ್ಷಿ: ಡಿಕೆಶಿ

    ವಕೀಲರು ಹಾಗೂ ತಮಿಳುನಾಡಿನ ಕೆಲ ಅಧಿಕಾರಿಗಳು ನ್ಯಾಯಾಧೀಶರ ಮುಂದೆ ಪ್ರತಿಯೊಂದು ಮಾಹಿತಿಯನ್ನು ನೀಡಿ ಚಿನ್ನದ ಒಡವೆಗಳನ್ನು ತೂಕ ಹಾಕಿ ಬಿಗಿ ಭದ್ರತೆಯಲ್ಲಿ ಕೊಂಡೊಯ್ಯಲಾಯ್ತು. 7,040 ಗ್ರಾಂ ತೂಕದ 468 ಬಗೆಯ ಚಿನ್ನ, ವಜ್ರಾಭರಣಗಳು, 700 ಕೆ.ಜಿ ತೂಕದ ಬೆಳ್ಳಿ ಆಭರಣಗಳು, 11,344 ರೇಷ್ಮೆ ಸೀರೆಗಳು, 740 ದುಬಾರಿ ಚಪ್ಪಲಿಗಳು, 250 ಶಾಲು, 12 ರೆಫ್ರಿಜರೇಟರ್, 10 ಟಿವಿ ಸೆಟ್, 8 ವಿಸಿಆರ್, 1 ವಿಡಿಯೋ ಕ್ಯಾಮರಾ, 4 ಸಿಡಿ ಪ್ಲೇಯರ್, 2 ಆಡಿಯೋ ಡೆಕ್, 24 ಟೂ-ಇನ್ ಒನ್ ಟೇಪ್ ರೆಕಾರ್ಡರ್ ಹಾಗೂ 1,040 ವಿಡಿಯೋ ಕ್ಯಾಸೆಟ್, 3 ಐರನ್ ಲಾಕರ್‌ಗಳು ತಮಿಳುನಾಡು ಸರ್ಕಾರಕ್ಕೆ ಸೇರಲಿವೆ. ಇದನ್ನೂ ಓದಿ: ಬೆಂಗಳೂರು | 5 ಕೋಟಿ ವೆಚ್ಚದಲ್ಲಿ ಬೀದಿನಾಯಿಗಳಿಗೆ ವ್ಯಾಕ್ಸಿನ್‌ಗೆ ಬಿಬಿಎಂಪಿ ಪ್ಲ್ಯಾನ್‌!

  • ಹಣ ಡಬಲ್‌, ಬಿಎಂಡಬ್ಲ್ಯೂ ಕಾರು ಕೊಡಿಸುವ ಆಸೆ ತೋರಿಸಿ ವಂಚನೆ – ಯುವತಿ ಆತ್ಮಹತ್ಯೆ

    ಹಣ ಡಬಲ್‌, ಬಿಎಂಡಬ್ಲ್ಯೂ ಕಾರು ಕೊಡಿಸುವ ಆಸೆ ತೋರಿಸಿ ವಂಚನೆ – ಯುವತಿ ಆತ್ಮಹತ್ಯೆ

    ಬೆಂಗಳೂರು: ಹಣ ಡಬಲ್‌ ಮಾಡಿಕೊಳ್ಳುವ ಆಸೆಗೆ ಬಿದ್ದ ಯುವತಿಯೊಬ್ಬಳು ವಂಚನೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ರಾಜಾಜೀನಗರದಲ್ಲಿ (Bangalore Rajajinagar) ನಡೆದಿದೆ. ಪ್ರಿಯಾಂಕಾ (19) ಆತ್ಮಹತ್ಯೆಗೆ ಶರಣಾಗಿದ್ದ ಯುವತಿ.

    ಏನಿದು ಪ್ರಕರಣ?
    ಎಂಇಎಸ್ ಕಾಲೇಜಿನಲ್ಲಿ (MES College) ಪ್ರಥಮ ವರ್ಷದ ಬಿಕಾಂ ಓದುತ್ತಿದ್ದ ಪ್ರಿಯಾಂಕಾಗೆ ಅದೇ ಕಾಲೇಜಿನಲ್ಲಿ ಓದುತ್ತಿದ್ದ ದಿಗಂತ್ ಹಣ ಡಬಲ್‌ ಮಾಡಿಕೊಡುವುದಾಗಿ ಹಾಗೂ ಬಿಎಂಡಬ್ಲ್ಯೂ ಕಾರ್‌ ಕೊಡಿಸುವುದಾಗಿ ಆಸೆ ತೋರಿಸಿದ್ದ. ದಿಗಂತ್‌ ಮಾತನ್ನು ನಂಬಿದ ಪ್ರಿಯಾಂಕಾ ಮನೆಯವರಿಗೆ ಗೊತ್ತಾಗದಂತೆ ಮನೆಯಲ್ಲಿದ್ದ ಚಿನ್ನವನ್ನು ದಿಗಂತ್‌ಗೆ ಕೊಟ್ಟಿದ್ದಳು.

    ಪ್ರಿಯಾಂಕಾಳಿಂದ ಪಡೆದ 15 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು (Gold Jewellery) ದಿಗಂತ್‌ ಅಡಮಾನವಿಟ್ಟು ಹಣ ಪಡೆದುಕೊಂಡಿದ್ದ. ಹಲವು ದಿನ ಕಳೆದ್ರೂ ಹಣ ಕೊಡದೆ, ಚಿನ್ನಾಭರಣವನ್ನೂ ವಾಪಸ್ ನೀಡದೆ ಸತಾಯಿಸಿದ್ದ. ಪ್ರಿಯಾಂಕಾ ಹಲವು ಬಾರಿ ಚಿನ್ನಾಭರಣ ವಾಪಸ್ ಕೊಡು ಎಂದರೂ ದಿಗಂತ್ ಕೇರ್ ಮಾಡಿರಲಿಲ್ಲ. ಹೀಗಾಗಿ ಚಿನ್ನಾಭರಣ ತಾನೂ ತೆಗೆದುಕೊಂಡಿರುವ ವಿಷಯ ಮನೆಯವರಿಗೆ ಗೊತ್ತಾಗುತ್ತದೆ ಎಂಬ ಭಯದಲ್ಲಿದ್ದ ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

    ಡೆತ್‌ನೋಟ್‌ನಲ್ಲಿ ಆತ್ಮಹತ್ಯೆಗೆ ದಿಗಂತ್‌ ಕಾರಣ ಎಂದು ಬರೆದಿದ್ದಾಳೆ. ಸದ್ಯ ಡೆತ್ ನೋಟ್ ಆಧಾರದ ಮೇಲೆ ಆರೋಪಿ ದಿಗಂತ್ ಬಂಧನ ಮಾಡಿರೋ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

  • Kodagu | ವಧುವಿಗೆ ತೊಡಿಸಲು ಇಟ್ಟಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು

    Kodagu | ವಧುವಿಗೆ ತೊಡಿಸಲು ಇಟ್ಟಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು

    ಮಡಿಕೇರಿ: ವಧುವಿಗೆ ತೊಡಿಸಲೆಂದು ಇಟ್ಟಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ (Gold jewellery) ಮದುವೆ ಮನೆಯಲ್ಲೇ ಕಳ್ಳತನವಾಗಿರುವ ಘಟನೆ ಕೊಡಗು (Kodagu) ಜಿಲ್ಲೆಯ ಕುಶಾಲನಗರ ತಾಲೂಕಿನ ರೈತ ಭವನದಲ್ಲಿ ನಡೆದಿದೆ.

    ಸಂಬಂಧಿಕರ ಸೋಗಿನಲ್ಲಿ ಬಂದ ಯುವಕನಿಂದಲೇ ಕಳ್ಳತನ ಆಗಿದೆ. ಅಂದಾಜು 45,000 ರೂ. ಮೌಲ್ಯದ ಚಿನ್ನ, 50 ಸಾವಿರ ರೂ. ಮೌಲ್ಯದ ಚಿನ್ನದ ಕಡಗ, 23,000 ಮೌಲ್ಯದ ಒಂದು ಜೊತೆ ಚಿನ್ನದ ಓಲೆ, ಜೊತೆಗೆ 5,000 ರೂ. ಕದ್ದು ಪರಾರಿಯಾಗಿದ್ದಾನೆ ಎಂದು ವಧುವಿನ ಕುಟುಂಬಸ್ಥರು ಆರೋಪಿಸಿದ್ದಾರೆ. ಇದನ್ನೂ ಓದಿ: ಡಿ.1 ರಿಂದ ಒಟಿಪಿ ಬರುತ್ತಾ? ಬರಲ್ವಾ? – ಎಲ್ಲಾ ಗೊಂದಲಗಳಿಗೆ ತೆರೆ ಎಳೆದ ಟ್ರಾಯ್‌

    ಘಟನೆ ಸಂಬಂಧ ಕುಶಾಲನಗರ ನಗರ ಠಾಣೆಗೆ ವಧುವಿನ ಪೋಷಕರು ದೂರು ನೀಡಿದ್ದಾರೆ. ನಂತರ ಮದುವೆ ಮಂಟಪಕ್ಕೆ ತೆರಳಿದ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನ ಪರಿಶೀಲಿಸಿದ್ದಾರೆ. ಮುಂದಿನ ತನಿಖೆ ಕೈಗೊಂಡಿದ್ದು, ಕಳ್ಳನಿಗಾಗಿ ಬಲೆ ಬೀಸಿದ್ದಾರೆ. ಇದನ್ನೂ ಓದಿ: ಒಳ್ಳೆಯ ರಾಜಕಾರಣದ ಬಗ್ಗೆ ಮಾನ ಮರ್ಯಾದೆ ಇರುವವರ ಬಳಿ ಪ್ರಶ್ನೆ ಕೇಳಿ – ಯತ್ನಾಳ್ ಟಾಂಗ್

  • ಅಂತರರಾಜ್ಯ ಮನೆಗಳ್ಳರ ಬಂಧನ – ಅರ್ಧ ಕೆಜಿ ಚಿನ್ನ, 2 ಕೆಜಿ ಬೆಳ್ಳಿ ಸೀಜ್‌

    ಅಂತರರಾಜ್ಯ ಮನೆಗಳ್ಳರ ಬಂಧನ – ಅರ್ಧ ಕೆಜಿ ಚಿನ್ನ, 2 ಕೆಜಿ ಬೆಳ್ಳಿ ಸೀಜ್‌

    ಚಿಕ್ಕಬಳ್ಳಾಪುರ: ಅಂತರರಾಜ್ಯ ಖತರ್ನಾಕ್ ಮನೆಗಳ್ಳರನ್ನ ಬಂಧಿಸಿರುವ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸರು (Chikkaballapur District Police), ಬಂಧಿತರಿಂದ ಬರೋಬ್ಬರಿ ಅರ್ಧ ಕೆಜಿಗೂ ಅಧಿಕ ಚಿನ್ನಾಭರಣ ಹಾಗೂ 2 ಕೆಜಿಗೂ ಅಧಿಕ ಬೆಳ್ಳಿ ಅಭರಣಗಳನ್ನ (Jewellery) ವಶಪಡಿಸಿಕೊಂಡಿದ್ದಾರೆ.

    ಅಂದಹಾಗೆ ಆಂಧ್ರಪ್ರದೇಶದ ಹಿಂದೂಪುರದ ಮಹೇಶ್, ಬೆಂಗಳೂರು (Bengaluru) ಮೂಲದ ಮುದಾಸೀರ್, ಚಿಂತಾಮಣಿ ನಗರದ ಸುಲ್ತಾನ್ ಭಾಷಾ ಬಂಧಿತರು. ಇದನ್ನೂ ಓದಿ: ಬೈಕ್‌ಗೆ ಬೊಲೆರೋ ಕಾರು ಡಿಕ್ಕಿ – ಭೀಕರ ಅಪಘಾತದಲ್ಲಿ ಮಹಿಳೆ ಸಾವು

    ಈ ಮೂವರು ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ನಾಯನಹಳ್ಳಿ ಗ್ರಾಮದ ಕೃಷ್ಣಾರೆಡ್ಡಿ ಎಂಬುವವರ ಮನೆಯ ಬೀಗ ಒಡೆದು ಸರಿಸುಮಾರು ಏಳೂವರೆ ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳು, ಹಾಗೂ ಕಾಗತಿ ಗ್ರಾಮದ ಲಕ್ಷಣ್ ಎಂಬುವವರ ಮನೆಯ ಬೀಗ ಒಡೆದು 98,000 ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ರು.

    ಈ ಎರಡೂ ಪ್ರಕರಣಗಳ ಬೆನ್ನತ್ತಿದ ಪೊಲೀಸರು ಮೂವರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಬಂಧಿತರು ಈ ಎರಡು ಪ್ರಕರಣ ಅಷ್ಟೇ ಅಲ್ಲದೇ ಬೆಂಗಳೂರಿನ ಕೆ.ಆರ್ ಪುರಂ, ಬೈಯಪ್ಪನಹಳ್ಳಿ, ರಾಯಲ್ಪಾಡು ಹಾಗೂ ಅಂಕೋಲಾ, ಮುರಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಮನೆಗಳ್ಳತನ ಮಾಡಿರೋದನ್ನ ಬಾಯ್ಬಿಟ್ಟಿದ್ದಾರೆ.

    ಬಂಧಿತರು ಕಳವು ಮಾಡಿದ್ದ 512 ಗ್ರಾಂ ಚಿನ್ನಾಭರಣಗಳು, 2 ಕೆಜಿ 353 ಗ್ರಾಂ ಬೆಳ್ಳಿ ಅಭರಣಗಳು, ಕೃತ್ಯಕ್ಕೆ ಬಳಿಸಿದ ಕಾರು ಸೇರಿ ಬರೋಬ್ಬರಿ 50 ಲಕ್ಷ ರೂ. ಮೌಲ್ಯದ ವಸ್ತುಗಳನ್ನ ವಶಕ್ಕೆ ಪಡೆದಿದ್ದಾರೆ. ಬಂಧಿತರನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇದನ್ನೂ ಓದಿ: ಚಿಕ್ಕಬಳ್ಳಾಪುರ ಕ್ಷೇತ್ರದ ವಿದ್ಯಾರ್ಥಿಗಳಿಗೆ ವೈಯಕ್ತಿಕ ಸ್ಕಾಲರ್ಶಿಪ್ ಸ್ಕೀಂ ಘೋಷಿಸಿದ ಶಾಸಕ ಪ್ರದೀಪ್ ಈಶ್ವರ್ 

  • ಬೀದರ್ ಪೊಲೀಸರ ಭರ್ಜರಿ ಕಾರ್ಯಾಚರಣೆ – 12 ಲಕ್ಷ ರೂ. ಮೌಲ್ಯದ ವಸ್ತುಗಳು ಜಪ್ತಿ

    ಬೀದರ್ ಪೊಲೀಸರ ಭರ್ಜರಿ ಕಾರ್ಯಾಚರಣೆ – 12 ಲಕ್ಷ ರೂ. ಮೌಲ್ಯದ ವಸ್ತುಗಳು ಜಪ್ತಿ

    ಬೀದರ್: ನಗರದ ಪೊಲೀಸರು (Bidar Police) ಭರ್ಜರಿ ಕಾರ್ಯಾಚರಣೆ ನಡೆಸಿ ಕಳ್ಳತನವಾಗಿದ್ದ 12 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

    ಭಾಲ್ಕಿ, ಮೇಹಕರ್ ಮತ್ತು ಹುಮ್ನಾಬಾದ್ ಪೊಲೀಸ್ ಠಾಣೆಗಳಲ್ಲಿ ಕಳ್ಳತನದ ವಿವಿಧ ಪ್ರಕರಣಗಳು ದಾಖಲಾಗಿದ್ದವು. ಪ್ರಕರಣದ ಬೆನ್ನು ಹತ್ತಿದ ಪೊಲೀಸರು 11 ಕಳ್ಳತನದ ಪ್ರಕರಣಗಳನ್ನು ಭೇದಿಸಿ ಬಂಗಾರ, ಬೆಳ್ಳಿ (Silver), ದ್ವಿಚಕ್ರ ವಾಹನ ಹಾಗೂ ಎಮ್ಮೆ ಸೇರಿದಂತೆ 12 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: Video | Tharun Sonal Wedding – ತಾಳಿ ಕಟ್ಟುವ ಶುಭ ವೇಳೆ – ದೃಶ್ಯ ಕಣ್ತುಂಬಿಕೊಳ್ಳಿ!

    ಮಂದಿರ ಕಳ್ಳತನ ಪ್ರಕರಣದಲ್ಲಿ 11 ಗ್ರಾಂ ಬೆಳ್ಳಿ ಮತ್ತು 1 ಗ್ರಾಂ ಚಿನ್ನಾಭರಣ (Gold Jewellery) ಹಾಗೂ ತೆಲಂಗಾಣದಲ್ಲಿ ಕಳ್ಳತನವಾಗಿದ್ದ 10 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ. ಎಮ್ಮೆ ಕಳ್ಳತನ ಪ್ರಕರಣ ಭೇದಿಸಿದ ಮೇಹಕರ್ ಠಾಣೆಯ ಪೊಲೀಸರು ಸೂಮಾರು 7 ಲಕ್ಷ ರೂ. ಬೆಲೆಬಾಳುವ ಎಮ್ಮೆ ವಶಕ್ಕೆ ಪಡೆದುಕೊಂಡಿದ್ದಾರೆ.

    ಘಟನೆಗೆ ಸಂಬಂಧಿಸಿದಂತೆ 5 ಜನ ಆರೋಪಿಗಳನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ತರಬೇತಿ ವೈದ್ಯೆ ಮೇಲೆ ಅತ್ಯಾಚಾರ ಕೇಸ್‌ – ವಿಚಾರಣೆ ವೇಳೆ ಕಾಮುಕನ ಮೊಬೈಲ್‌ನಲ್ಲಿ ಸೆಕ್ಸ್‌ ವೀಡಿಯೋಗಳು ಪತ್ತೆ!

  • ಭರ್ಜರಿ ಬೇಟೆ – 5.60 ಕೋಟಿ ರೂ. ಹಣ, 3 ಕೆಜಿ ಚಿನ್ನ, 103 ಕೆಜಿ ಬೆಳ್ಳಿ ಜಪ್ತಿ

    ಭರ್ಜರಿ ಬೇಟೆ – 5.60 ಕೋಟಿ ರೂ. ಹಣ, 3 ಕೆಜಿ ಚಿನ್ನ, 103 ಕೆಜಿ ಬೆಳ್ಳಿ ಜಪ್ತಿ

    ಬಳ್ಳಾರಿ: ಇಲ್ಲಿನ ಬ್ರೂಸ್ ಪೇಟೆ ಪೊಲೀಸರು (Bellary Police) ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ ದಾಖಲೆ ಇಲ್ಲದ 5.60 ಕೋಟಿ ರೂ. ನಗದು ಮತ್ತು ಅಪಾರ ಪ್ರಮಾಣದ ಚಿನ್ನ, ಬೆಳ್ಳಿ ಆಭರಣಗಳನ್ನ (Gold and Silver Jewellery) ಜಪ್ತಿ ಮಾಡಲಾಗಿದೆ.

    ಬಳ್ಳಾರಿಯ (Bellary) ಬ್ರೂಸ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಕಂಬಳಿ ಬಜಾರ್‌ನಲ್ಲಿರುವ ಹೇಮಾ ಜ್ಯೂವೆಲರಿ ಶಾಪ್ ಮಾಲೀಕರ ಮನೆಯಲ್ಲಿ ಹಣ, ಆಭರಣಗಳನ್ನು ಜಪ್ತಿ ಮಾಡಲಾಗಿದೆ. ಇದನ್ನೂ ಓದಿ: ಭರ್ಜರಿ ಕಾರ್ಯಾಚರಣೆಯಲ್ಲಿ 5 ಕೆಜಿ ಚಿನ್ನಾಭರಣ ಜಪ್ತಿ!

    ಒಟ್ಟು 5.60 ಕೋಟಿ ರೂ. ನಗದು, 3 ಕೆಜಿ ಬಂಗಾರ 103 ಕೆಜಿ ಬೆಳ್ಳಿ ಆಭರಣ, 21 ಕೆಜಿ ಕಚ್ಚಾ ಬೆಳ್ಳಿಯನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಜಪ್ತಿ ಮಾಡಿದ ನಗದು ಹವಾಲಾಕ್ಕೆ ಸಂಬಂಧಿಸಿದ ಹಣ ಎನ್ನಲಾಗಿದೆ. ಇದನ್ನೂ ಓದಿ: ರಾಜ್ಯಾದ್ಯಂತ ಒಟ್ಟು 15.78 ಕೋಟಿ ಹಣ, 1.27 ಕೋಟಿ ರೂ. ಮೌಲ್ಯದ ಚಿನ್ನಾಭರಣ ಜಪ್ತಿ

    ಪ್ರಕರಣ ಸಂಬಂಧ ಆರೋಪಿ ನರೇಶ್ ಎಂಬಾತನನ್ನ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಮೈಸೂರಿನಲ್ಲಿ 98.52 ಕೋಟಿ ರೂ. ಮೊತ್ತದ ಬಿಯರ್ ಜಪ್ತಿ