Tag: goapalaiah

  • ಸಚಿವ ಸುಧಾಕರ್ ಎದುರೇ ಪತ್ರ ಹರಿದು ಹಾಕಿ ರೇವಣ್ಣ ಆಕ್ರೋಶ

    ಸಚಿವ ಸುಧಾಕರ್ ಎದುರೇ ಪತ್ರ ಹರಿದು ಹಾಕಿ ರೇವಣ್ಣ ಆಕ್ರೋಶ

    ಹಾಸನ: ತಾಲೂಕಿನ ನಿರ್ವಹಣೆ ಹಣಕ್ಕೆ ರೀ ಸ್ವಾಮಿ ನಿಮ್ಮ ಬಳಿ ಬಿಕ್ಷೆ ಬೇಡಬೇಕಾ..? ಎಂದು ಮಾಜಿ ಸಚಿವ ಎಚ್ ಡಿ ರೇವಣ್ಣ ತಮ್ಮ ಕೈಯಲ್ಲಿದ್ದ ಮಾಹಿತಿ ಪತ್ರವನ್ನು ಸಚಿವರೆದುರೇ ಹರಿದು ಹಾಕುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

    ಹಾಸನದ ಜಿಲ್ಲಾ ಪಂಚಾಯ್ತಿ ಆವಣದಲ್ಲಿ ಕೋವಿಡ್ 19 ರ ಸಭೆ ನಡೆಯುವ ಸಂದರ್ಭದಲ್ಲಿ ಆರೋಗ್ಯ ಸಚಿವರ ಎದುರಲ್ಲಿಯೇ ಪತ್ರ ಹರಿದು ಹಾಕುವ ಮೂಲಕ ಕೆಂಡಾಮಂಡಲವಾದ್ರು.

    ನನ್ನ ಜನ ಜಿಲ್ಲೆಯಲ್ಲಿ ಸಾಯುತ್ತಿದ್ದಾರೆ. ಅವರಿಗೆ ನಾವು ಯಾವ ರೀತಿ ಉತ್ತರ ಕೊಡಬೇಕು. ನಿಮ್ಮ ಡಿಸಿ ಬಳಿ ಸರ್ಕಾರದ ಹಣವನ್ನು ಇಟ್ಟುಕೊಂಡು ದಿನಾ ಪೂಜೆ ಮಾಡೋಕೆ ಹೇಳಿ ಅಂತ ಕೂಗಾಡಿದ್ರು.

    ರೇವಣ್ಣನ ಕೂಗಾಟ ಕಿರುಚಾಟ ನೋಡಿ ಆಕ್ರೋಶವನ್ನು ತಣ್ಣಗಾಗಿಸಲು ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಮಧ್ಯಸ್ಥಿಕೆ ವಹಿಸಿ ಕಡೆಗೂ ಪರಿಸ್ಥಿತಿಯನ್ನು ತಿಳಿಗೊಳಿಸುವಲ್ಲಿ ಯಶಸ್ವಿಯಾದರು.

  • ರೈತರಿಗಾಗಿ ಅಣೆಕಟ್ಟೆಯಿಂದ ನೀರು ಹರಿಸಲು ತೀರ್ಮಾನ: ಗೋಪಾಲಯ್ಯ

    ರೈತರಿಗಾಗಿ ಅಣೆಕಟ್ಟೆಯಿಂದ ನೀರು ಹರಿಸಲು ತೀರ್ಮಾನ: ಗೋಪಾಲಯ್ಯ

    ಹಾಸನ: ಹೇಮಾವತಿ ಅಣೆಕಟ್ಟೆ ತುಂಬುತ್ತಿದ್ದು ರೈತರಿಗೆ ಅನುಕೂಲವಾಗುವಂತೆ ಬಲದಂಡೆ ನಾಲೆಗೆ ನೀರು ಬಿಡಲು ತೀರ್ಮಾನಿಸಲಾಗಿದೆ ಎಂದು ಸಚಿವ ಗೋಪಾಲಯ್ಯ ಹೇಳಿದ್ದಾರೆ.

    ಹಾಸನದ ಹೊಳೆನರಸೀಪುರದಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಲು ಆಗಮಿಸಿದ ವೇಳೆ ಮಾತನಾಡಿದ ಸಚಿವರು, ಜಿಲ್ಲೆಯಲ್ಲಿ ಕೋವಿಡ್ ಪರಿಸ್ಥಿತಿ, ಬಲದಂಡೆ ನಾಲೆಗೆ ನೀರು ಹರಿಸುವುದು ಸೇರಿದಂತೆ ಹಲವು ವಿಷ್ಯಗಳ ಬಗ್ಗೆ ಚರ್ಚಿಸಲು ಬಂದಿದ್ದೇನೆ. ಹಾಸನದಲ್ಲಿ ಪದೇ ಪದೇ ಚಾಕುಬಿರಿತದಂತ ಪ್ರಕರಣ ಪುನರಾವರ್ತನೆ ಆಗುತ್ತಿರುವ ಹಿನ್ನೆಲೆಯಲ್ಲಿ ಎಸ್‍ಪಿ ಸೇರಿದಂತೆ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದೇನೆ ಎಂದರು.

    ನಿಮ್ಮ ಜೊತೆ ಸರ್ಕಾರ ಇರಲಿದೆ. ನಿರ್ಭಯವಾಗಿ ಕೆಲಸ ಮಾಡಿ. ರಾಜಕಾರಣಿಗಳು ಯಾರೂ ಒತ್ತಡ ಹಾಕುವ ಪ್ರಶ್ನೆ ಇಲ್ಲ. ಕಾನೂನು ಪ್ರಕಾರ ಏನು ಕೆಲಸ ಮಾಡಬೇಕೋ ಮಾಡಿ ಎಂದು ಅಧಿಕಾರಿಗಳಿಗೆ ಹೇಳಿದ್ದೇನೆ. ಪಿಎಸ್‍ಐ ಆತ್ಮಹತ್ಯೆ ಪ್ರಕರಣ ಎಸ್‍ಪಿ ನೇತೃತ್ವದಲ್ಲಿ ತನಿಖೆಯಾಗುತ್ತಿದ್ದು, ತನಿಖೆ ನಂತರ ಅದರ ಬಗ್ಗೆ ಮಾತನಾಡುತ್ತೇನೆ ಎಂದು ತಿಳಿಸಿದರು.

    ಬಿಜೆಪಿ ಕಾರ್ಯಕರ್ತರ ಜೊತೆ ಸಚಿವ ಚರ್ಚೆ:
    ಹೊಳೆನರಸೀಪುರದಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸುವ ಮುನ್ನ ಸಚಿವ ಗೋಪಾಲಯ್ಯ ತಾಲೂಕಿನ ಬಿಜೆಪಿ ಕಾರ್ಯಕರ್ತರ ಜೊತೆ ಅರ್ಧಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದ್ದು ಕುತೂಹಲಕ್ಕೆ ಕಾರಣವಾಗಿತ್ತು. ರೇವಣ್ಣ ಸ್ವಕ್ಷೇತ್ರದಲ್ಲಿ ಬಿಜೆಪಿ ಬಲಪಡಿಸಲು ಚರ್ಚೆ ನಡೆಸಲಾಯ್ತು ಎಂಬ ಮಾತು ಕೇಳಿ ಬಂದ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿದ ಸಚಿವ ಗೋಪಾಲಯ್ಯ, ಮುಂದಿನ ವಾರ ಹೊಳೆನರಸೀಪುರದಲ್ಲಿ ಸಭೆ ಮಾಡಬೇಕು ಅಂತಿದ್ದಾರೆ. ಆಗಲೂ ಬರುತ್ತೇನೆ. ಪಕ್ಷದ ಕಾರ್ಯಕರ್ತರಿಗೆ ನೈತಿಕವಾಗಿ ಧೈರ್ಯ ತುಂಬುವ ಕೆಲಸ ಮಾಡಿದ್ದೇನೆ ಎಂದರು.

    ಜಿಲ್ಲೆಯ ಅಭಿವೃದ್ಧಿಗೆ ಉಸ್ತುವಾರಿ ಸಚಿವನಾಗಿ ಬಂದಿದೇನೆ. ಅದರ ಜೊತೆಯಲ್ಲೇ ನಾನು ಎಲ್ಲಿಗೆ ಹೋದರೂ ಪಕ್ಷದ ಕಚೇರಿಗೆ ಹೋಗಿ ಅಲ್ಲಿಯ ಮುಖಂಡರ ಜೊತೆ ಭೇಟಿ ಮಾಡುತ್ತೇನೆ. ಅದೇ ರೀತಿ ಇಲ್ಲಿಯೂ ಪಕ್ಷದ ಮುಖಂಡರ ಜೊತೆ ಮಾತನಾಡಿದ್ದೇನೆ. ಮುಂದಿನವಾರ ಹೊಳೆನರಸೀಪುರ, ಅರಕಲಗೂಡಿನಲ್ಲಿ ಪದಾದಿಕಾರಿಗಳ ಜೊತೆ ಕುಳಿತು ಮಾತನಾಡುತ್ತೇನೆ ಎಂದು ಹೇಳಿದ್ರು.

  • ವಿದ್ಯುತ್ ಶಾಕ್ ಹೊಡೆದ ಪ್ರಕರಣ – ಆಸ್ಪತ್ರೆಯಲ್ಲಿ ಸಾಯಿ ಚರಣ್ ಚೇತರಿಕೆ

    ವಿದ್ಯುತ್ ಶಾಕ್ ಹೊಡೆದ ಪ್ರಕರಣ – ಆಸ್ಪತ್ರೆಯಲ್ಲಿ ಸಾಯಿ ಚರಣ್ ಚೇತರಿಕೆ

    ಬೆಂಗಳೂರು: ಆಟವಾಡುತ್ತಿದ್ದಾಗ ವಿದ್ಯುತ್ ಶಾಕ್ ಹೊಡೆದು ಆಸ್ಪತ್ರೆ ಸೇರಿರುವ ಬಾಲಕ ಸಾಯಿ ಚರಣ್ ಚೇತರಿಸಿಕೊಳ್ಳುತ್ತಿದ್ದಾನೆ.

    ಮಗನ ಆರೋಗ್ಯದ ಬಗ್ಗೆ ಬಾಲಕನ ತಂದೆ ಬಸವರಾಜ್ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ಇಂದು ಕೃತಕ ಉಸಿರಾಟದ ಉಪಕರಣ ತೆಗೆಯಲಾಗುತ್ತಿದ್ದು, ನೈಸರ್ಗಿಕವಾಗಿ ಉಸಿರಾಡಿಸಲು ಅವಕಾಶ ಕಲ್ಪಿಸಲಾಗುತ್ತದೆ. 6 ಗಂಟೆಗಳ ಕಾಲ ನೈಸರ್ಗಿಕವಾಗಿ ಉಸಿರಾಟ ಮಾಡಿದ್ರೆ ಮುಂದಿನ 2 ದಿನದಲ್ಲಿ ಡಿಸ್ಚಾರ್ಜ್ ಮಾಡಲಾಗುತ್ತದೆ ಎಂದು ವೈದ್ಯರು ತಿಳಿಸಿರುವುದಾಗಿ ಹೇಳಿದ್ದಾರೆ.

    ಸದ್ಯ ಸಾಯಿ ಚರಣ್ ಮೊಬೈಲ್ ನಲ್ಲಿ ಆಟ ಆಡುತ್ತಿದ್ದಾನೆ. ನೈಸರ್ಗಿಕವಾಗಿ ಉಸಿರಾಡುತ್ತಿರುವ ಬಾಲಕ ಸಹಜ ಸ್ಥಿತಿಯತ್ತ ತಲುಪಲು ಎಂದು ಮೊಬೈಲ್ ನೀಡಿದ್ದೇವೆ. 2 ಗಂಟೆ ನಂತರ ಯಾವುದೇ ತೊಂದರೆ ಆಗದಿದ್ದರೆ ಊಟ ಸಹ ನೀಡಲು ವೈದ್ಯರ ನಿರ್ಧಾರ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ.

    ಶಾಸಕ ಗೋಪಾಲಯ್ಯ ಕರೆ ಮಾಡಿ 2 ಲಕ್ಷ ಚೆಕ್ ಕೊಡಿಸುವುದಾಗಿ ಹೇಳಿದ್ದಾರೆ. ಸದ್ಯ ಚಿಕಿತ್ಸೆಗೆ 5 ಲಕ್ಷ ಖರ್ಚು ಆಗಲಿದೆ. ನಾವು ಈಗಾಗಲೇ ಒಂದೂವರೆ ಲಕ್ಷವನ್ನು ಈಗಾಗಲೇ ಆಸ್ಪತ್ರೆಗೆ ಪಾವತಿಸಿದ್ದೇವೆ. ಮೇಯರ್ ಸಹಾಯ ಮಾಡುವುದಾಗಿ ತಿಳಿಸಿದ್ದಾರೆ. ಬೆಸ್ಕಾಂ ಸಹ ಸಹಾಯ ಮಾಡುವುದಾಗಿ ಹೇಳುತ್ತಿದೆ. ಆದ್ರೆ ನಮ್ಮ ಮಗನ ಸ್ಥಿತಿ ಯಾರಿಗೂ ಬೇಡ. ದಯಮಾಡಿ ಬೆಸ್ಕಾಂ ಅಧಿಕಾರಿಗಳು ವಿದ್ಯುತ್ ಕಂಬಗಳ ದುರಸ್ತಿ ಮಾಡಿ. ಇಲ್ಲವಾದ್ರೆ ಜನ ರೊಚಿಗೆದ್ದು ನಿಮ್ಮ ಮನೆ ಬಾಗಿಲಿಗೆ ಬರುತ್ತಾರೆ ಎಂದು ಬಸವರಾಜ್ ಮನವಿ ಮಾಡಿಕೊಂಡಿದ್ದಾರೆ.

    https://www.youtube.com/watch?v=SMhv7yZ7C5k

    https://www.youtube.com/watch?v=LXHTYpGtJLg