Tag: goa

  • ರಾಜ್ಯದಲ್ಲಿ ಯಾವಾಗ ಬೇಕಾದ್ರೂ ಚುನಾವಣೆ ಬರಬಹುದು: ಬಿಎಸ್‍ವೈ

    ರಾಜ್ಯದಲ್ಲಿ ಯಾವಾಗ ಬೇಕಾದ್ರೂ ಚುನಾವಣೆ ಬರಬಹುದು: ಬಿಎಸ್‍ವೈ

    – ದೇಶದ ಉದ್ದಗಲಕ್ಕೂ ಬಿಜೆಪಿ ಗಾಳಿ ಬೀಸುತ್ತಿದೆ

    ಬೆಂಗಳೂರು: ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ಚುನಾವಣೆಯಲ್ಲಿ ಗೆಲ್ಲಬಹುದೆಂಬ ಭ್ರಮೆಯಲ್ಲಿದ್ದ ಮುಖ್ಯಮಂತ್ರಿಯವರಿಗೆ ಉತ್ತರಪ್ರದೇಶ ಹಾಗೂ ಉತ್ತರಾಖಂಡ್ ಜನ ಸ್ಪಷ್ಟವಾದ ಉತ್ತರ ನೀಡಿದ್ದಾರೆ ಅಂತಾ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

    ಪಂಚ ರಾಜ್ಯ ಚುನಾವಣಾ ಫಲಿತಾಂಶದ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರಪ್ರದೇಶ ಹಾಗೂ ಉತ್ತರಾಖಂಡದ ಗೆಲುವು ನಂಜನಗೂಡು ಮತ್ತು ಗುಂಡ್ಲುಪೇಟೆಯಲ್ಲಿ ನಡೆಯೋ ಉಪಚುನಾವಣೆಗೆ ದೊಡ್ಡ ಶಕ್ತಿಯನ್ನು ತಂದುಕೊಟ್ಟಂತಾಗಿದೆ. ಮುಂದೆ ಬಿಜೆಪಿ ಕರ್ನಾಟಕದಲ್ಲಿ 150ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆದ್ದು ಅಧಿಕಾರ ನಡೆಸೋದಕ್ಕೆ ಇದು ನಾಂದಿಯಾಗಿದೆ ಅಂತಾ ಹೇಳಿದ್ರು.

    ಇಡೀ ದೇಶದ ಉದ್ದಗಲಕ್ಕೂ ಭಾರತೀಯ ಜನತಾ ಪಾರ್ಟಿಯ ಗಾಳಿ ಬೀಸುತ್ತಿದೆ. ಕರ್ನಾಟಕ ರಾಜ್ಯದಲ್ಲೂ ಅದೇ ಉತ್ಸಾಹ ಇರುವಂತಹ ಈ ಸಂದರ್ಭದಲ್ಲಿ ಭ್ರಷ್ಟ ಸರ್ಕಾರವನ್ನು ಕಿತ್ತು ಹಾಕುವ ಸಲುವಾಗಿ ಯಾವಾಗ ಬೇಕಾದ್ರೂ ಚುನಾವಣೆ ಬರಬಹುದು. ಡೈರಿ ಹಗರಣವನ್ನು ಸಿಬಿಐಗೆ ವಹಿಸಿದ್ರೆ ಎಲ್ಲರ ಬಣ್ಣ ಬಯಲಾಗಲಿದೆ. ಗೋಮಾಳಗಳ ಜಮೀನನ್ನು ಕಬಳಿಸಿರುವ ಬಗ್ಗೆ ಅನೇಕ ದಾಖಲೆಗಳು ನಮ್ಮಲ್ಲಿವೆ. ಅದೇ ರೀತಿ ಬಿಬಿಎಂಪಿಯಲ್ಲಿ ನಡೆದ ಅನೇಕ ಹಗರಣಗಳ ಬಗ್ಗೆ ನಮ್ಮಲ್ಲಿ ಮಾಹಿತಿಯಿದೆ. ಒಟ್ಟಿನಲ್ಲಿ ಕಳೆದ 4 ವರ್ಷಗಳಲ್ಲಿ 90 ಸಾವಿರ ಕೋಟಿಗೂ ಹೆಚ್ಚು ಹಣ ಸಾಲ ಮಾಡಿರುವುದೇ ಸಿದ್ದರಾಮಯ್ಯನವರ ದೊಡ್ಡ ಸಾಧನೆ. ಇವೆಲ್ಲವನ್ನೂ ಕೂಡ ಬಯಲು ಮಾಡ್ತೇವೆ. ನಾಳೆ ಈ ಎರಡೂ ಉಪಚುನಾವಣೆಯಲ್ಲಿ ಸಿದ್ದರಾಮಯ್ಯ ಸರ್ಕಾರದ ವೈಫಲ್ಯ ಹಾಗೂ ಭ್ರಷ್ಟಾಚಾರ ಹಗರಣಗಳ ವಿರುದ್ಧ ನಮ್ಮ ಹೋರಾಟವಿರುತ್ತದೆ ಅಂತಾ ಅಂದ್ರು.

    ಉತ್ತರಪ್ರದೇಶ ಹಾಗೂ ಉತ್ತರಾಖಂಡ್ ಎರಡೂ ರಾಜ್ಯಗಳಲ್ಲಿ ಹಗರಣಗಳನ್ನು ಬಟ್ಟ ಬಯಲು ಮಾಡಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಇಂದು ಯಶಸ್ಸು ಕಂಡಿದೆ. ಅದಕ್ಕಿಂತ ದೊಡ್ಡ ಪ್ರಮಾಣದಲ್ಲಿ ಹಗರಣಗಳ ಸುರಿಮಾಲೆಯೆ ಸುತ್ತಿಕೊಂಡಿರುವುದು ಈ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ. ಹೀಗಾಗಿ ಹೈಕಮಾಂಡ್ ಇವರೆಲ್ಲರನ್ನ ತುರ್ತಾಗೆ ದೆಹಲಿಗೆ ಬರಮಾಡಿಕೊಳ್ಳುವ ಪ್ರಯತ್ನ ನಡೆದಿದೆ. ಕಾಂಗ್ರೆಸ್ ಗೆ ದೊಡ್ಡ ಮಟ್ಟದ ಹಿನ್ನಡೆಯಾಗುತ್ತದೆ ಎಂಬುವುದು ಪಕ್ಷದ ಮುಖಂಡರಿಗೆ ಸ್ಪಷ್ಟವಾಗಿದೆ. ಬಹುಶಃ ಉತ್ತರಪ್ರದೇಶದಲ್ಲಿ ಯಾವ ರೀತಿ ಫಲಿತಾಂಶ ಬಂತೋ, ಅದೇ ರೀತಿ ಕರ್ನಾಟಕದಲ್ಲೂ ಗೆಲುವು ಸಾಧಿಸಲಿದ್ದೇವೆ. ಇದಕ್ಕೆ ಜನರ ಆಶೀರ್ವಾದ, ದೈವ ಬಲ, ಜನಬಲವಿದೆ. ಹಾಗೆಯೇ ನಾವು ಮಾಡಿರುವ ಸಾಧನೆಯಿದೆ ಅಂತಾ ಹೇಳಿದ್ದಾರೆ.

    ಸಿಎಂ ವಿರುದ್ಧ ಚಾಟಿ: ಎಲ್ಲ ವರ್ಗದ ಜನರ ಬೆಂಬಲದೊಂದಿಗೆ ನಾವು ಇಂದು ಚುನಾವಣೆಯಲ್ಲಿ ಗೆದಿದ್ದೇವೆ. ಹಾಗಾದ್ರೆ ಅಲ್ಪ ಸಂಖ್ಯಾತ ಮುಸ್ಲಿಂ ಮಂದಿಗಳು ಇಷ್ಟು ದೊಡ್ಡ ಪ್ರಮಾಣದಲ್ಲಿ ಸೀಟುಗಳನ್ನು ಕೊಟ್ಟಿದ್ದೀರಲ್ವಾ ಯಾಕೆ ಗೆಲ್ಲಲು ಸಾಧ್ಯವಾಗಿಲ್ಲ. ಜಾತಿ ಎಂಬ ವಿಷ ಬೀಜ ಬಿತ್ತು ರಾಜಕಾರಣ ಮಾಡಿರೋದಕ್ಕೆ ಜನ ತಕ್ಕ ಉತ್ತರ ಕೊಟ್ಟಿದ್ದಾರೆ ಅಂತಾ ಸಿಎಂ ವಿರುದ್ಧ ಬಿಎಸ್‍ವೈ ಚಾಟಿ ಬೀಸಿದ್ರು.

    ಉತ್ತರಪ್ರದೇಶದಲ್ಲಿ ಜನರ ಭಾವನೆಯ ಜೊತೆ ಬಿಜೆಪಿ ಆಟ ಆಡಿದೆ. ಹಿಂದೂಗಳ ವಿಚಾರವನ್ನು ಪ್ರಸ್ತಾಪ ಮಾಡಿ ಮತ ಗಳಿಸಿದೆ. ಕರ್ನಾಟಕದಲ್ಲಿ ಇದೇ ರೀತಿ ಆಗಲು ಸಾಧ್ಯವೇ ಇಲ್ಲ. ಅವರು ಗೆದ್ದೇ ಗೆಲ್ತೀವಿ ಅನ್ನೋ ಭ್ರಮೆಯಲ್ಲಿದ್ದಾರೆ ಅಂತಾ ಮುಖ್ಯಮಮಂತ್ರಿ ಸಿದ್ದರಾಮಯ್ಯ ಹೇಳಿದ್ದರು.

    ಇದನ್ನೂ ಓದಿ: ಮೋದಿ ಅಲೆ ಉತ್ತರ ಪ್ರದೇಶಕ್ಕೆ ಮಾತ್ರ ಸೀಮಿತವೇ: ಸಿಎಂ ಪ್ರಶ್ನೆ

  • ಗೋವಾ ಹಾಲಿ ಸಿಎಂ ಲಕ್ಷ್ಮೀಕಾಂತ್ ಪೆರ್ಸೆಕರ್‍ಗೆ ಭಾರೀ ಮುಖಭಂಗ

    ಗೋವಾ ಹಾಲಿ ಸಿಎಂ ಲಕ್ಷ್ಮೀಕಾಂತ್ ಪೆರ್ಸೆಕರ್‍ಗೆ ಭಾರೀ ಮುಖಭಂಗ

    ನವದೆಹಲಿ: ಗೋವಾ ಹಾಲಿ ಮುಖ್ಯಮಂತ್ರಿ ಲಕ್ಷ್ಮೀಕಾಂತ್ ಪರ್ಸೇಕರ್ ಭಾರೀ ಮುಖಭಂಗವಾಗಿದೆ.

    ಮಾಂಡ್ರೆಮ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಪರ್ಸೇಕರ್ ಕಾಂಗ್ರೆಸ್ ಅಭ್ಯರ್ಥಿ ದಯಾನಂದ್ ರಘುನಾಥ್ ವಿರುದ್ಧ ಸೋಲು ಅನುಭವಿಸಿದ್ದಾರೆ.

    ಗೋವಾ ರಾಜ್ಯದ ಫಲಿತಾಂಶದಲ್ಲಿ ಕಾಂಗ್ರೆಸ್ ಮುನ್ನಡೆ ಕಾಯ್ದುಕೊಂಡಿದೆ. ಒಟ್ಟು 40 ಸ್ಥಾನಗಳಲ್ಲಿ ಕಾಂಗ್ರೆಸ್ 11 ರಲ್ಲಿ ಮುನ್ನಡೆ ನಡೆಯುತ್ತಿದೆ. ಇನ್ನು 8 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆಯನ್ನು ಕಾಯ್ದುಕೊಂಡಿದೆ. ಪಕ್ಷೇತರ ಅಭ್ಯರ್ಥಿಗಳು 5 ಕ್ಷೇತ್ರಗಳಲ್ಲಿ ಮುನ್ನಡೆಯನ್ನು ಸಾಧಿಸಿದ್ದಾರೆ. ಗೋವಾದಲ್ಲಿ ಸರ್ಕಾರ ರಚಿಸಲು ಬಹುಮತಕ್ಕೆ 21 ಕ್ಷೇತ್ರಗಳಲ್ಲಿ ಗೆಲವು ಕಾಣಬೇಕಿದೆ.

    2012 ರ ವಿಧಾನಸಭಾ ಚುನಾವಣೆಯಲ್ಲಿ ಲಕ್ಷ್ಮೀಕಾಂತ್ ಪರ್ಸೆಕರ್ ಇದೇ ಮಾಂಡ್ರೆಮ್ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದರು. ಅಂದು ಕಾಂಗ್ರೆಸ್ ಅಭ್ಯರ್ಥಿ ದಯಾನಂದ್ ರಘುನಾಥ್ ಅವರ ವಿರುದ್ಧ 3,435 ಮತಗಳ ಅಂತರದಲ್ಲಿ ಜಯಭೇರಿ ಸಾಧಿಸಿದ್ದರು.

     

  • ಫಲಿತಾಂಶಕ್ಕೂ ಮೊದಲೇ ಕುರ್ಚಿಗಾಗಿ ಸರ್ಕಸ್- ಯಾವ ರಾಜ್ಯದಿಂದ ಯಾರೆಲ್ಲಾ ಸಂಭವನೀಯ ಸಿಎಂ ಅಭ್ಯರ್ಥಿಗಳು?

    ಫಲಿತಾಂಶಕ್ಕೂ ಮೊದಲೇ ಕುರ್ಚಿಗಾಗಿ ಸರ್ಕಸ್- ಯಾವ ರಾಜ್ಯದಿಂದ ಯಾರೆಲ್ಲಾ ಸಂಭವನೀಯ ಸಿಎಂ ಅಭ್ಯರ್ಥಿಗಳು?

    ನವದೆಹಲಿ: ಫಲಿತಾಂಶಕ್ಕೂ ಮೊದಲೇ ಸಿಎಂ ಸ್ಥಾನಕ್ಕಾಗಿ ಉತ್ತರ ಪ್ರದೇಶದಲ್ಲಿ ಭಾರೀ ಪೈಪೋಟಿ ನಡೀತಿದೆ. ಜೊತೆಗೆ ಉಳಿದ ರಾಜ್ಯಗಳಲ್ಲಿ ಯಾರೆಲ್ಲಾ ಸಿಎಂ ಸಂಭವನೀಯ ಅಭ್ಯರ್ಥಿಗಳಿದ್ದಾರೆ ಅನ್ನೋದನ್ನ ನೋಡೋದಾದ್ರೆ;

    1. ಉತ್ತರಪ್ರದೇಶ
    * ಯೋಗಿ ಆದಿತ್ಯನಾಥ್: ಪೂರ್ವಾಂಚಲ ಭಾಗದ ಪ್ರಬಲ ಮುಖಂಡರಾಗಿರೋ ಇವರಿಗೆ ಆರ್‍ಎಸ್‍ಎಸ್ ಆರ್ಶೀವಾದವಿದೆ. ಸನ್ಯಾಸಿ ಹಾಗೂ ಹೈಕಮಾಂಡ್‍ಗೆ ತುಂಬಾ ಹತ್ತಿರ.

    * ಕೇಶವ ಮಯೂರ: ಹಿಂದುಳಿದ ವರ್ಗಗಳ ಮುಖಂಡ, ಕುರ್ಮಿ ಜನಾಂಗದ ನಾಯಕ. ವಿಹೆಚ್‍ಪಿ ಹಿನ್ನೆಲೆ ಇದ್ದು, ಕೇಂದ್ರ ಸಚಿವರಾಗಿದ್ದಾರೆ. ಪೂರ್ವಾಂಚಲ ಭಾಗದ ಮುಖಂಡರಾಗಿರೀ ಇವರು ಅನುಭವಿ ರಾಜಕಾರಣಿ.

    * ಡಾ.ಮಹೇಶ್ ಶರ್ಮಾ: ಆರ್‍ಎಸ್‍ಎಸ್‍ಗೆ ಹತ್ತಿರ. ಉತ್ತಮ ಶೈಕ್ಷಣಿಕ ಹಿನ್ನೆಲೆ ಹೊಂದಿದ್ದಾರೆ. ಹಾಲಿ ಕೇಂದ್ರ ಸಚಿವರಾಗಿದ್ದಾರೆ.

    * ಕಲ್‍ರಾಜ್ ಮಿಶ್ರಾ: ಬ್ರಾಹ್ಮಣ ಮುಖಂಡ, ಉತ್ತಮ ರಾಜಕಾರಣಿ. ಇವರಿಗೆ ರಾಷ್ಟ್ರ ರಾಜಕಾರಣದ ಅನುಭವವಿದೆ.

    2. ಪಂಜಾಬ್
    ಕಾಂಗ್ರೆಸ್‍ನಿಂದ ಅಮರೀಂದರ್ ಸಿಂಗ್ ಸಿಎಂ ರೇಸ್‍ನಲ್ಲಿದ್ದರೆ, ನವಜೋತ್ ಸಿಂಗ್ ಸಿಧು ಸಂಭವನೀಯ ಡಿಸಿಎಂ ಅಭ್ಯರ್ಥಿಯಾಗಿದ್ದಾರೆ. ಬಿಜೆಪಿ, ಅಕಾಲಿದಳದಿಂದ ಪ್ರಕಾಶ್ ಸಿಂಗ್ ಬಾದಲ್ ಇದ್ದಾರೆ.

    3. ಗೋವಾ
    ಗೋವಾದಲ್ಲಿ ಸದ್ಯಕ್ಕೆ ಬಿಜೆಪಿ ಆಡಳಿತವಿದೆ. ಮತ್ತೊಂದು ಬಾರಿಗೆ ಅಧಿಕಾರಕ್ಕೆ ಬರುತ್ತೆ ಅಂತ ಚುನವಣೋತ್ತರ ಸಮೀಕ್ಷೆ ಹೇಳ್ತಿದೆ. ಹಾಗಾದ್ರೆ, ಗೋವಾಕ್ಕೆ ಯಾರು ಸಿಎಂ..? ನಾಯಕರ ಹಿನ್ನೆಲೆ ಏನು ಅಂತ ನೋಡೋದಾದ್ರೆ;
    * ಬಿಜೆಪಿಯಿಂದ ಮನೋಹರ್ ಪರಿಕ್ಕರ್ (ಅನುಭವಿ ರಾಜಕಾರಣಿ, ಕೇಂದ್ರ ಸಚಿವ)
    * ಬಿಜೆಪಿಯಿಂದ ಲಕ್ಷ್ಮಿಕಾಂತ್ ಪರ್ಸೇಕರ್ (ಹಾಲಿ ಸಿಎಂ, ಗೆಲುವಿನ ರೂವಾರಿ)
    * ಬಿಜೆಪಿಯಿಂದ ಫ್ರಾನ್ಸಿಸ್ ಡಿಸೋಜಾ (ಕ್ರಿಶ್ಚಿಯನ್ ಲೀಡರ್)
    * ಲೂಸಿನೋ ಫೆಲೈರೋ ( ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ )

    4. ಉತ್ತರಾಖಂಡ್
    ಉತ್ತರಾಖಂಡ್‍ನಲ್ಲಿ ಕಾಂಗ್ರೆಸ್‍ನ ಹರೀಶ್ ರಾವತ್ ವಿರೋಧಿ ಅಲೆ ಇದೆ. ಹೀಗಾಗಿ, ನಾವು ಪಟ್ಟಕ್ಕೇರ್ತೇವೆ ಅನ್ನೋದು ಬಿಜೆಪಿ ನಾಯಕರ ನಿರೀಕ್ಷೆ. ಹಾಗಾಗಿ, ಉತ್ತರಾಖಂಡ್‍ಗೆ ಯಾರು ಸಿಎಂ..? ನಾಯಕರ ಹಿನ್ನೆಲೆ ಏನು..?
    * ಬಿಜೆಪಿಗೆ ಸ್ಪಷ್ಟ ಬಹುಮತ ಸಾಧ್ಯತೆ
    * ಬಿಜೆಪಿಯಿಂದ ಬಿಸಿ ಖಂಡೂರಿ ರೇಸ್‍ನಲ್ಲಿದ್ದಾರೆ. 2007 ರಿಂದ 2009, 2011 ರಿಂದ 2012 ರವರೆಗೆ ಸಿಎಂ ಆಗಿದ್ದ ಅನುಭವ ಇವರಿಗಿದೆ.

    5. ಮಣಿಪುರ
    ಪುಟ್ಟರಾಜ್ಯ ಮಣಿಪುರದಲ್ಲಿ ಸತತವಾಗಿ ಹ್ಯಾಟ್ರಿಕ್ ಸಿಎಂ ಆಗಿದ್ದ ಕಾಂಗ್ರೆಸ್‍ನ ಒಕರಾಮ್ ಇಬೋಬಿ ಸಿಂಗ್‍ಗೆ ಬಿಜೆಪಿ ಪ್ರಬಲ ಪೈಪೋಟಿ ನೀಡಿದೆ. ಮಣಿಪುರದಲ್ಲಿ ಬಿಜೆಪಿ ಸಿಎಂ ಕ್ಯಾಂಡಿಡೇಟ್ ಯಾರು? ಅವರ ಹಿನ್ನೆಲೆ ಏನು ಅನ್ನೋದನ್ನ ನೋಡೋದಾದ್ರೆ;

    ಚವೋಬ ಸಿಂಗ್
    * ಚುನಾವಣಾ ನಿರ್ವಹಣಾ ಸಮಿತಿ ಮುಖ್ಯಸ್ಥ
    * ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ
    * ಪಕ್ಷ ಬೆಳವಣಿಗೆ ರೂವಾರಿ
    ಇವರ ಜೊತೆಗೆ ಹಾಲಿ ಬಿಜೆಪಿ ರಾಜ್ಯಾಧ್ಯಕ್ಷ ಬಾಬಾನಂದ ಸಿಂಗ್ ಹೆಸರು ಕೇಳಿ ಬಂದಿದೆ. ಇವರು ಪ್ರಧಾನಿ ಮೋದಿಯ ಕಟ್ಟಾ ಆರಾಧಕ.

  • ಪಂಚರಾಜ್ಯಗಳ ಮಹಾ ಫಲಿತಾಂಶಕ್ಕೆ ಕ್ಷಣಗಣನೆ

    ಪಂಚರಾಜ್ಯಗಳ ಮಹಾ ಫಲಿತಾಂಶಕ್ಕೆ ಕ್ಷಣಗಣನೆ

    ನವದೆಹಲಿ: ಪಂಚರಾಜ್ಯಗಳ ವಿಧಾನಸಭಾ ಮಹಾ ಫಲಿತಾಂಶಕ್ಕೆ 2 ಗಂಟೆಯಷ್ಟೇ ಬಾಕಿ ಇದೆ. ಕೆಲವೇ ಕ್ಷಣಗಳಲ್ಲಿ ಮತದಾನ ಎಣಿಕೆ ಕಾರ್ಯ ಶುರುವಾಗಲಿದೆ.

    ಸಾವಿರಾರು ಅಭ್ಯರ್ಥಿಗಳ ಎದೆಯಲ್ಲಿ ಢವ ಢವ ಶುರುವಾಗಿದೆ. ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ ಮೊದಲ ಬಾರಿಗೆ ಉತ್ತರ ಪ್ರದೇಶ, ಮಣಿಪುರದಲ್ಲಿ ಬಿಜೆಪಿ ಬಹುಮತ ಪಡೆಯುತ್ತಾ 4 ದಶಕದ ಬಳಿಕ ಮತ್ತೆ ಉತ್ತರಪ್ರದೇಶದಲ್ಲಿ ಬಿಜೆಪಿ ಪ್ರಚಂಡ ಜಯ ಸಾಧಿಸುತ್ತಾ? ಎಂಬುದಕ್ಕೆ ಇಂದು ಉತ್ತರ ಸಿಗಲಿದೆ.

    ಹಾಗೆ ಪಂಜಾಬ್‍ನಲ್ಲಿ 14 ಬಾರಿ ಕಾಂಗ್ರೆಸ್, 8 ಬಾರಿ ಅಕಾಲಿದಳದ ಆಡಳಿತ ಅಂತ್ಯವಾಗುತ್ತಾ? 3ನೇ ಬಾರಿಗೆ ಗೋವಾ, ಉತ್ತರಾಖಂಡ್‍ನಲ್ಲಿ ಮತ್ತೆ ಕಮಲ ಅರಳುತ್ತಾ ಎಂಬ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ.

  • ಪಂಚ ರಾಜ್ಯಗಳ ಚುನಾವಣೆ: ಯಾವ ರಾಜ್ಯದಲ್ಲಿ ಎಷ್ಟು ಹಣ, ಮದ್ಯ, ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ?

    ಪಂಚ ರಾಜ್ಯಗಳ ಚುನಾವಣೆ: ಯಾವ ರಾಜ್ಯದಲ್ಲಿ ಎಷ್ಟು ಹಣ, ಮದ್ಯ, ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ?

    ದು ರಾಜ್ಯಗಳಲ್ಲಿ ಚುನಾವಣೆ ಮುಕ್ತಾಯವಾಗಿದ್ದು, ಮಾರ್ಚ್ 11ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ಹೀಗಾಗಿ ಇಲ್ಲಿ ಚುನಾವಣೆಯ ಸಂದರ್ಭದಲ್ಲಿ ವಶಪಡಿಸಿಕೊಂಡಿರುವ ಹಣ, ಮದ್ಯ, ಡ್ರಗ್ಸ್ ಪ್ರಮಾಣದ ಮಾಹಿತಿಯನ್ನು ನೀಡಲಾಗಿದೆ.

    ಹಣ: 2017ರ ಚುನಾವಣೆ ಸಂದರ್ಭದಲ್ಲಿ ದಾಖಲೆ ಇಲ್ಲದ ಒಟ್ಟು 184.85 ಕೋಟಿ ರೂಪಾಯಿ ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ. 2012 ರ ಚುನಾವಣೆ ಸಮಯದಲ್ಲಿ 50.78 ಕೋಟಿ ರೂ. ಹಣವನ್ನು ವಶಕ್ಕೆ ಪಡೆಯಲಾಗಿತ್ತು.

    ಮದ್ಯ: ಚುನಾವಣೆಯ ಹೊಸ್ತಿಲಲ್ಲಿ ಎಲ್ಲ ಐದು ರಾಜ್ಯಗಳಿಂದ 83.21 ಕೋಟಿ ರೂ. ಮೌಲ್ಯದ ಮದ್ಯವನ್ನು ವಶ ಪಡೆಯಲಾಗಿದೆ. ಇನ್ನು ಕಳೆದ ವಿಧಾನಸಭಾ ಚುನಾವಣೆಯಲ್ಲಿ 2.82 ಕೋಟಿ ರೂ. ಮೌಲ್ಯದ ಮದ್ಯ ಅಧಿಕಾರಿಗಳು ವಶ ಪಡೆದಿದ್ದರು.

    ಡ್ರಗ್ಸ್: ಐದು ರಾಜ್ಯಗಳಲ್ಲಿ 31.78 ಕೋಟಿ ರೂ. ಮೌಲ್ಯದ ಡ್ರಗ್ಸ್ ಪತ್ತೆಯಾಗಿದೆ. 2012 ರ ಚುನಾವಣೆಯ ವೇಳೆಯಲ್ಲಿ 54.0 ಕೋಟಿ ಮೌಲ್ಯದ ಡ್ರಗ್ಸ್ ಪತ್ತೆಯಾಗಿತ್ತು.

    ರಾಜ್ಯಗಳಲ್ಲಿ ಸಿಕ್ಕಿರುವ, ಹಣ, ಮದ್ಯ, ಡ್ರಗ್ಸ್ ವಿವರ:

    ಉತ್ತರಪ್ರದೇಶ:
    ಹಣ: 2017 ರ ಚುನಾವಣೆಯಲ್ಲಿ 119.03 ಕೋಟಿ ರೂ. ವಶಕ್ಕೆ ಪಡೆದಿದ್ರೆ, 2012 ರಲ್ಲಿ 36.29 ಕೋಟಿ ರೂ. ವಶಕ್ಕೆ ಪಡೆಯಲಾಗಿತ್ತು.

    ಮದ್ಯ: 2017 ರ ಚುನಾವಣೆಯಲ್ಲಿ 64.66 ಕೋಟಿ ಮೌಲ್ಯದ ಮದ್ಯವನ್ನು ವಶಕ್ಕೆ ಪಡೆದಿದ್ರೆ. 2012 ರಲ್ಲಿ 0.07 ಕೋಟಿ ಮೌಲ್ಯದ ಮದ್ಯವನ್ನು ವಶಕ್ಕೆ ಪಡಯಲಾಗಿತ್ತು.

    ಡ್ರಗ್ಸ್: 2017 ಚುನಾವಣೆಯಲ್ಲಿ 9.60 ಕೋಟಿ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ.

    ಪಂಜಾಬ್ :

    ಹಣ: 2017 ರ ಚುನಾವಣೆಯಲ್ಲಿ 58.02 ಕೋಟಿ ರೂ. ನಗದು ವಶಕ್ಕೆ ಪಡೆಯಲಾಗಿದೆ. ಕಳೆದ 2012ರ ಚುನಾವಣೆಯಲ್ಲಿ 11.51 ಕೋಟಿ ರೂ. ನಗದನ್ನು ವಶಕ್ಕೆ ಪಡೆಯಲಾಗಿತ್ತು.

    ಮದ್ಯ: 2017 ರ ಚುನಾವಣೆಯಲ್ಲಿ 13.36 ಕೋಟಿ ರೂ. ಮೌಲ್ಯದ ಮದ್ಯವನ್ನು ವಶಕ್ಕೆ ಪಡೆಯಲಾಗಿದೆ. ಕಲೇದ 2012 ರ ಚುನಾವಣೆಯಲ್ಲಿ 2.59 ಕೋಟಿ ರೂ. ಮೌಲ್ಯದ ಮದ್ಯವನ್ನು ವಶ ಪಡೆಯಲಾಗಿತ್ತು.

    ಡ್ರಗ್ಸ್: 2017 ರ ಚುನಾವಣೆಯಲ್ಲಿ 18.26 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ. 2012 ಚುನಾವಣೆಯಲ್ಲಿ 54.0 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆಯಲಾಗಿತ್ತು.

    ಉತ್ತರಾಖಂಡ:
    ಹಣ: 2017 ರಚುನಾವಣೆಯಲ್ಲಿ 3.38 ಕೋಟಿ ರೂ. ವಶಕ್ಕೆ ಪಡೆದಿದ್ರೆ, 2012 ರ ಚುನಾವಣೆಯಲ್ಲಿ 1.30 ಕೋಟಿ ರೂ. ವಶಕ್ಕೆ ಪಡೆಯಲಾಗಿತ್ತು.

    ಮದ್ಯ: 2017 ರ ಚುನಾವಣೆಯಲ್ಲಿ 3.10 ಕೋಟಿ ರೂ. ಮೌಲ್ಯದ ಮದ್ಯ ವಶಕ್ಕೆ ಪಡೆದಿದ್ರೆ, 2012ರ ಚುನಾವಣೆಯಲ್ಲಿ 0.15 ಕೋಟಿ ಮೌಲ್ಯದ ಮದ್ಯವನ್ನು ವಶಕ್ಕೆ ಪಡೆಯಲಾಗಿತ್ತು.

    ಡ್ರಗ್ಸ್: 2017ರ ಚುನಾವಣೆಯಲ್ಲಿ 0.37 ಕೋಟಿ ರೂ. ಮೌಲ್ಯದ ಡ್ರಗ್ಸ್ ನ್ನು ವಶಕ್ಕ ಪಡೆಯಲಾಗಿದೆ.

    ಮಣಿಪುರ:
    ಹಣ: 2017 ರ ಚುನಾವಣೆಯಲ್ಲಿ 2.18 ಕೋಟಿ ರೂ. ನಗದು ಹಣವನ್ನು ವಶಕ್ಕೆ ಪಡೆದಿದ್ರೆ, 2012 ರ ಚುನಾವಣೆ ಸಮಯದಲ್ಲಿ 1.08 ಕೋಟಿ ರೂ. ನಗದು ಹಣವನ್ನು ವಶಕ್ಕೆ ಪಡೆಯಲಾಗಿತ್ತು.

    ಮದ್ಯ: 2017 ರ ಚುನಾವಣೆಯಲ್ಲಿ 1.02 ಕೋಟಿ ರೂ. ಮೌಲ್ಯದ ಮದ್ಯವನ್ನು ವಶಕ್ಕೆ ಅಧಿಕಾರಿಗಳು ವಶಕ್ಕೆ ಪಡೆದಿದ್ರು. ಇನ್ನೂ 2012 ರ ಚುನಾವಣೆಯಲ್ಲಿ 0.02 ಕೋಟಿ ಮೌಲ್ಯದ ಮದ್ಯವನ್ನ ವಶಕ್ಕೆ ಪಡೆಯಲಾಗಿತ್ತು.

    ಡ್ರಗ್ಸ್: 2017 ರ ಚುನಾವಣೆಯಲ್ಲಿ 3.32 ಕೋಟಿ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ.

    ಗೋವಾ:
    ಹಣ: ಈ ಬಾರಿಯ 2017 ರ ಚುನಾವಣೆಯಲ್ಲಿ 2.24 ಕೋಟಿ ರೂ. ನಗದು ಹಣವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. 2012ರ ಚುನಾವಣೆ ವೇಳೆಯಲ್ಲಿ 0.60 ಕೋಟಿ ರೂ. ನಗದು ಚವಶಕ್ಕೆ ಪಡೆಯಲಾಗಿತ್ತು.

    ಮದ್ಯ: 2017ರ ಚುನಾವಣೆಯಲ್ಲಿ 1.07 ಕೋಟಿ ರೂ. ಮೌಲ್ಯದ ಮದ್ಯವನ್ನು ವಶಕ್ಕೆ ಪಡೆಯಲಾಗಿದೆ.

    ಡ್ರಗ್ಸ್: ಈ ಬಾರಿಯ ಚುನಾವಣೆಯಲ್ಲಿ 0.33 ಕೋಟಿ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ.

     

  • ನಾಲ್ಕು ರಾಜ್ಯಗಳಲ್ಲಿ ಮೋದಿ ಭರ್ಜರಿ ಕಮಾಲ್

    ನಾಲ್ಕು ರಾಜ್ಯಗಳಲ್ಲಿ ಮೋದಿ ಭರ್ಜರಿ ಕಮಾಲ್

    ಚುನಾವಣೋತ್ತರ ಸಮೀಕ್ಷೆಯಲ್ಲಿ ಕಮಲ ಕಿಲಕಿಲ
    – ಆನೆ ಜೊತೆ ಸೈಕಲ್ ತುಳಿಯಲು ಅಖಿಲೇಶ್ ಸಿದ್ದ

    ನವದೆಹಲಿ: ದೇಶವೇ ಕುತೂಹಲದಿಂದ ಕಾಯುತ್ತಿದ್ದ ಪಂಚರಾಜ್ಯಗಳ ಚುನಾವಣೋತ್ತರ ಸಮೀಕ್ಷೆಯ ಅಂಕಿ-ಅಂಶಗಳು ಬಹಿರಂಗವಾಗಿವೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

    ಪಂಜಾಬ್‍ನಲ್ಲಿ ಆಪ್, ಗೋವಾ ಅತಂತ್ರ, ಉತ್ತರಾಖಂಡ್ ಮತ್ತು ಮಣಿಪುರದಲ್ಲಿ ಬಿಜೆಪಿ ಅಧಿಕಾರಕ್ಕೇರಲಿದೆ ಅಂತ ಸಮೀಕ್ಷೆ ನಡೆಸಿರುವ ರಾಷ್ಟ್ರೀಯ ವಾಹಿನಿಗಳು, ಸುದ್ದಿ ಸಂಸ್ಥೆಗಳು ಹೇಳಿವೆ.

    ಇಂದು ಚುನಾವಣೋತ್ತರ ಸಮೀಕ್ಷೆಯಾದರೂ ಇದೇ 11ಕ್ಕೆ ಫಲಿತಾಂಶ ಅಧಿಕೃತವಾಗಿ ಹೊರಬರಲಿದೆ. ಸಮೀಕ್ಷೆಗಳ ಫಲಿತಾಂಶದಿಂದ ಬಿಜೆಪಿ ನಾಯಕರು ಹಿಗ್ಗಿದ್ದಾರೆ.

    ಕಾಂಗ್ರೆಸ್, ಸಮಾಜವಾದಿ ಪಕ್ಷ ಸೇರಿದಂತೆ ಇತರೆ ರಾಜ್ಯಗಳ ಪಕ್ಷಗಳು ಆತ್ಮಾವಲೋಕನ ಮಾಡಿಕೊಳ್ಳೋದು ಗ್ಯಾರಂಟಿ. ಇನ್ನು, ಈ ಫಲಿತಾಂಶ ದೇಶದ ರಾಜಕೀಯ, ಆರ್ಥಿಕ, ಆಡಳಿತಾತ್ಮಕ ವಿಷ್ಯಗಳಲ್ಲಿ ಭಾರೀ ಮಹತ್ವ ಪಡೆದಿದೆ. ಈ ಮಧ್ಯೆ, ಬಿಜೆಪಿಯನ್ನ ಹೊರಗಿಡಲು ಬಿಎಸ್‍ಪಿ ಜೊತೆಗಾದರೂ ಮೈತ್ರಿಗೆ ಸಿದ್ಧ ಅಂತ ಸಿಎಂ ಅಖಿಲೇಶ್ ಯಾದವ್ ಘೋಷಿಸಿದ್ದಾರೆ.

    ಹೀಗಾಗಿ ಇಲ್ಲಿ ಪಂಚರಾಜ್ಯಗಳ ಚುನಾವಣೋತ್ತರ ಸಮೀಕ್ಷೆ, ಚುನಾವಣಾ ಪೂರ್ವ ಸಮೀಕ್ಷೆ, 2012ರ ವಿಧಾನಸಭಾ ಚುನಾವಣೆ, 2014ರ ಲೋಕಸಭಾ ಚುನಾವಣಾ ಫಲಿತಾಂಶ ಮಾಹಿತಿಯನ್ನು ನೀಡಲಾಗಿದೆ. ಜೊತೆಗೆ ಲೋಕಸಭಾ ಚುನಾವಣೆಯಲ್ಲಿ ಪಡೆದ ಮತಗಳನ್ನು ಲೆಕ್ಕ ಹಾಕಿದ್ರೆ ಈಗ ಎಷ್ಟು ಸ್ಥಾನಗಳನ್ನು ಗೆಲ್ಲಬಹುದು ಎನ್ನುವ ಮಾಹಿತಿಯೂ ಇದೆ.

    ಉತ್ತರ ಪ್ರದೇಶ
    ಒಟ್ಟು ಕ್ಷೇತ್ರ – 403
    ಸರಳ ಬಹುಮತ – 202
    ಒಟ್ಟು 7 ಹಂತಗಳಲ್ಲಿ ಮತದಾನ
    ಒಟ್ಟು ಅಭ್ಯರ್ಥಿಗಳು – 4,843
    ಒಟ್ಟು ಮತದಾರರು – 10.18 ಕೋಟಿ

    ಪಂಜಾಬ್ 
    ಒಟ್ಟು ಕ್ಷೇತ್ರಗಳು – 117 ಕ್ಷೇತ್ರ
    ಸರಳ ಬಹುಮತ – 59
    ಒಂದೇ ಹಂತದಲ್ಲಿ ಮತದಾನ
    ಒಟ್ಟು ಅಭ್ಯರ್ಥಿಗಳು – 1,145
    ಒಟ್ಟು ಮತದಾರರು – 1,98,76,069

    ಗೋವಾ
    ಒಟ್ಟು ಕ್ಷೇತ್ರಗಳು – 40 ಕ್ಷೇತ್ರ
    ಸರಳ ಬಹುಮತ – 21
    ಒಂದೇ ಹಂತದಲ್ಲಿ ಮತದಾನ
    ಒಟ್ಟು ಅಭ್ಯರ್ಥಿಗಳು – 251
    ಒಟ್ಟು ಮತದಾರರು – 11,10,884

    ಉತ್ತರಾಖಂಡ್
    ಒಟ್ಟು ಕ್ಷೇತ್ರಗಳು – 70
    ಒಂದೇ ಹಂತದಲ್ಲಿ ಮತದಾನ
    ಒಟ್ಟು ಅಭ್ಯರ್ಥಿಗಳು – 628
    ಒಟ್ಟು ಮತದಾರರು – 75,12,559

    ಮಣಿಪುರ
    ಒಟ್ಟು ಕ್ಷೇತ್ರಗಳು – 60
    ಎರಡು ಹಂತಗಳಲ್ಲಿ ಮತದಾನ
    ಒಟ್ಟು ಅಭ್ಯರ್ಥಿಗಳು – 266
    ಒಟ್ಟು ಮತದಾರರು – 19.02 ಲಕ್ಷ

     

  • ವಿಶ್ವದಲ್ಲಿ 8, ಏಷ್ಯಾದಲ್ಲಿ ನಂಬರ್ ಒನ್ ಆಗಿದೆ ಭಾರತದ ಈ ಬೀಚ್

    ವಿಶ್ವದಲ್ಲಿ 8, ಏಷ್ಯಾದಲ್ಲಿ ನಂಬರ್ ಒನ್ ಆಗಿದೆ ಭಾರತದ ಈ ಬೀಚ್

    ಮುಂಬೈ: ಕೇಂದ್ರಾಡಳಿತ ಪ್ರದೇಶವಾದ ಅಂಡಮಾನ್ ನಿಕೋಬಾರ್ ದ್ವೀಪದಲ್ಲಿರುವ ರಾಧಾನಗರ್ ಬೀಚ್ ವಿಶ್ವದಲ್ಲೇ 8ನೇ ಸುಂದರ ಬೀಚ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

    ಅಮೆರಿಕದ ಪ್ರವಾಸಿ ವೆಬ್‍ಸೈಟ್ ಟ್ರಿಪ್ ಅಡ್ವೈಸರ್ ವಿಶ್ವದ 343 ಬೀಚ್‍ಗಳನ್ನು ಗುರುತಿಸಿ ಶ್ರೇಯಾಂಕ ನೀಡಿದೆ. ಈ ಪಟ್ಟಿಯಲ್ಲಿ ರಾಧಾನಗರ್ ಬೀಚ್‍ಗೆ ವಿಶ್ವದಲ್ಲಿ 8ನೇ ಸ್ಥಾನ ಸಿಕ್ಕಿದೆ.

    ಏಷ್ಯಾ ಖಂಡಗಳ ಪಟ್ಟಿಯಲ್ಲಿ ಮೊದಲ ಸ್ಥಾನ ರಾಧಾನಗರ್ ಬೀಚ್‍ಗೆ ಸಿಕ್ಕಿದರೆ, ಐದನೇ ಸ್ಥಾನವನ್ನು ಗೋವಾ ಬೀಚ್ ಪಡೆದುಕೊಂಡಿದೆ.

    ಬ್ರೆಜಿಲ್‍ನ ಫೆರ್ನಾಂಡೋ ಡಿ ನೂರನ್ಹಾ ಬೀಚ್ ವಿಶ್ವದಲ್ಲೇ ಮೊದಲ ಸ್ಥಾನವನ್ನು ಪಡೆದುಕೊಂಡರೆ, ಫಿಲಿಪ್ಪೀನ್ಸ್ ವೈಟ್ ಬೀಚ್ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ.

    12 ತಿಂಗಳ ಅವಧಿಯಲ್ಲಿ ಈ ಬೀಚ್‍ಗೆ ಭೇಟಿ ನೀಡಿದ ಪ್ರವಾಸಿಗರು ನೀಡಿದ ರೇಟಿಂಗ್ ಆಧಾರದಲ್ಲಿ ಟ್ರಿಪ್ ಅಡ್ವೈಸರ್ ಈ ಶ್ರೇಯಾಂಕ ನೀಡಿದೆ.

  • ಪಂಚರಾಜ್ಯ ಚುನಾವಣಾ ಕದನ ಆರಂಭ – ಗೋವಾ, ಪಂಜಾಬ್‍ನಲ್ಲಿಂದು ಮತದಾನ

    ಪಣಜಿ/ಚಂಡೀಘಢ: ನೋಟ್‍ಬ್ಯಾನ್ ಬಳಿಕ ನಡೆಯುತ್ತಿರುವ ಪಂಚರಾಜ್ಯ ಚುನಾವಣೆಯಲ್ಲಿ ಇವತ್ತು ಗೋವಾ ಮತ್ತು ಪಂಜಾಬ್ ವಿಧಾನಸಭೆಗಳಿಗೆ ಚುನಾವಣೆ ನಡೀತಿದೆ.

    ಗೋವಾದಲ್ಲಿ 40 ಹಾಗೂ ಪಂಜಾಬ್‍ನಲ್ಲಿ 117 ಸೀಟ್‍ಗಳಿವೆ. ಪಂಜಾಬ್‍ನಲ್ಲಿ ಅಕಾಲಿದಳ-ಬಿಜೆಪಿ ಮೈತ್ರಿ ಪ್ರಕಾಶ್ ಸಿಂಗ್ ಬಾದಲ್ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತಿದ್ದರೆ, ಅಮರೀಂದರ್ ಸಿಂಗ್ ನೇತೃತ್ವದಲ್ಲಿ ಕಾಂಗ್ರೆಸ್ ಅಖಾಡಕ್ಕೆ ಇಳಿದಿದೆ. ಚುನಾವಣಾ ಪೂರ್ವ ಸಮೀಕ್ಷೆಗಳ ಪ್ರಕಾರ ಪಂಜಾಬ್‍ನಲ್ಲಿ ಕಾಂಗ್ರೆಸ್ ಹಾಗೂ ಆಪ್ ಮಧ್ಯೆ ಫೈಟ್ ಇದೆ.

    ಗೋವಾದಲ್ಲಿ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ನಾಯಕತ್ವದಲ್ಲಿ ಬಿಜೆಪಿ ಮತ ಯಾಚಿಸಿದ್ದರೆ, ಕಾಂಗ್ರೆಸ್ ಹಾಗೂ ಆಪ್ ಸಹ ಸ್ಪರ್ಧೆಯೊಡ್ಡುತ್ತಿವೆ. ಎರಡು ರಾಜ್ಯಗಳ ಫಲಿತಾಂಶ ಮಾರ್ಚ್ 11ಕ್ಕೆ ಹೊರ ಬೀಳಲಿದೆ.