Tag: glass

  • ಜಿ20ಯಲ್ಲಿ ಭಾಗಿಯಾಗುವ ಗಣ್ಯರಿಗೆ ಭವ್ಯ ಭೋಜನ – ಚಿನ್ನ, ಬೆಳ್ಳಿ ಲೇಪಿತ ತಟ್ಟೆಯಲ್ಲಿ ಊಟದ ವ್ಯವಸ್ಥೆ

    ಜಿ20ಯಲ್ಲಿ ಭಾಗಿಯಾಗುವ ಗಣ್ಯರಿಗೆ ಭವ್ಯ ಭೋಜನ – ಚಿನ್ನ, ಬೆಳ್ಳಿ ಲೇಪಿತ ತಟ್ಟೆಯಲ್ಲಿ ಊಟದ ವ್ಯವಸ್ಥೆ

    ನವದೆಹಲಿ: ಜಿ20 ಶೃಂಗಸಭೆಗೆ (G20 Summit) ಭಾರತ ಸಂಪೂರ್ಣ ಸಿದ್ಧವಾಗಿದೆ. ವಿದೇಶಿ ಗಣ್ಯರ ವಾಸ್ತವ್ಯಕ್ಕೆ ಹೋಟೆಲ್‌ಗಳನ್ನು ಬುಕ್ ಮಾಡಲಾಗಿದ್ದು, ಇಲ್ಲಿ ಭೋಜನದ (Dinner) ವೇಳೆ ವಿಶೇಷ ಅನುಭೂತಿ ನೀಡಲು ಚಿನ್ನ (Gold) ಲೇಪಿತ ತಟ್ಟೆ (Plate), ಬೆಳ್ಳಿ (Silver) ಲೋಟಗಳಲ್ಲಿ (Glass) ಅತಿಥಿಗಳಿಗೆ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ಈ ಮೂಲಕ ಭಾರತದ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರದರ್ಶಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಮೂಲಗಳು ಹೇಳಿವೆ.

    ಇದಕ್ಕಾಗಿ ಐಕಾನಿಕ್ ಐಟಿಸಿ ತಾಜ್ ಸೇರಿದಂತೆ 11 ಹೋಟೆಲ್‌ಗಳಿಗೆ ತಟ್ಟೆ ಮತ್ತು ಲೋಟಗಳನ್ನು ಸರಬರಾಜು ಮಾಡುವ ಕ್ರೋಕರಿ ಕಂಪನಿಗೆ ಚಿನ್ನ ಮತ್ತು ಬೆಳ್ಳಿ ಲೇಪಿತ ಅಗತ್ಯಗಳನ್ನು ಪೂರೈಕೆ ಮಾಡಲು ಜವಾಬ್ದಾರಿ ನೀಡಲಾಗಿದೆ. ಪಾತ್ರೆಗಳ ಮೇಲೆ ಜೈಪುರ, ಉದಯಪುರ, ವಾರಣಾಸಿ ಮತ್ತು ಕರ್ನಾಟಕದ ಸಂಕೀರ್ಣ ಕಲಾತ್ಮಕತೆ ಇರಲಿದ್ದು, ಇದು ಭಾರತದ ವೈವಿಧ್ಯಮಯ ಸಾಂಸ್ಕೃತಿಕತೆಯನ್ನು ಪ್ರತಿಬಿಂಬಿಸುತ್ತದೆ. ಇದನ್ನೂ ಓದಿ: ಜಿ20 ಶೃಂಗಸಭೆಯಲ್ಲಿ ಭಗವದ್ಗೀತೆಯ ನೀತಿಗಳನ್ನು ಹರಡಲಿರುವ ಗೀತಾ ಅಪ್ಲಿಕೇಷನ್!

     

    ಈ ವಸ್ತುಗಳು ತಯಾರಾದ ಬಳಿಕ ಪ್ರತಿ ವಸ್ತುವನ್ನು R&D ಲ್ಯಾಬ್‌ನಲ್ಲಿ ಸಂಪೂರ್ಣ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಈ ಪಾತ್ರೆಗಳ ವಿನ್ಯಾಸವು ಪ್ರತಿ ಹೋಟೆಲ್‌ನ ನಿರ್ದಿಷ್ಟ ಅವಶ್ಯಕತೆಗಳಿಗೆ ಅನುಗುಣವಾಗಿರುತ್ತದೆ. ಉದಾಹರಣೆಗೆ ‘ಮಹಾರಾಜ ಥಾಲಿ’ ಸೆಟ್, ಉಪ್ಪು ಮತ್ತು ಮೆಣಸಿನಕಾಯಿಗಾಗಿ ಪ್ರತ್ಯೇಕ ಬೆಳ್ಳಿಯ ಪೆಟ್ಟಿಗೆಗಳು ಮತ್ತು 5-6 ಬೌಲ್‌ಗಳನ್ನು ಒಳಗೊಂಡಿರುತ್ತದೆ. ಎಲ್ಲವನ್ನೂ ಹೋಟೆಲ್‌ನ ಮೆನು ಮತ್ತು ಶೈಲಿಗೆ ಹೊಂದಿಸಲು ವಿನ್ಯಾಸಗೊಳಿಸಲಾಗಿದೆ. ಇದನ್ನೂ ಓದಿ: G20 ಸಭೆಗೆ ಆಗಮಿಸುತ್ತಿರೋ ಜೋ ಬೈಡನ್‌ಗಾಗಿ ಮೂರು ಹಂತದ ಭದ್ರತೆ

    ಕ್ರೋಕರಿ ಕಂಪನಿಯು ರಾಷ್ಟ್ರೀಯ ಪಕ್ಷಿಯಾದ ನವಿಲನ್ನು ವಿನ್ಯಾಸದಲ್ಲಿ ಅಳವಡಿಸಿಕೊಂಡಿದೆ. ಇದು ಈ ಹಿಂದೆ ಅತಿಥಿಗಳಿಂದ ಮೆಚ್ಚುಗೆಯನ್ನು ಗಳಿಸಿತ್ತು. ಮಹಾರಾಜ ಥಾಲಿ ಜೊತೆಗೆ, ದಕ್ಷಿಣ ಭಾರತದ ವಿನ್ಯಾಸಗಳನ್ನು ಸಹ ಸಂಗ್ರಹದಲ್ಲಿ ಒಳಗೊಳಿಸಲಾಗುತ್ತಿದೆ. ಕಂಪನಿಯ ಮಾಲೀಕ ರಾಜೀವ್, ಮಾಜಿ ಅಮೇರಿಕಾ ಅಧ್ಯಕ್ಷ ಬರಾಕ್ ಒಬಾಮಾ ಭಾರತಕ್ಕೆ ಭೇಟಿ ನೀಡಿದಾಗ ವಿಶೇಷ ಊಟದ ಸೆಟ್‌ಗಳನ್ನು ಪ್ರಸ್ತುತಪಡಿಸಿದ್ದರು. ಇವುಗಳನ್ನು ಕಂಡು ಒಬಾಮಾ ತುಂಬಾ ಪ್ರಭಾವಿತರಾಗಿ ತಮ್ಮೊಂದಿಗೆ ಊಟದ ಸೆಟ್ ಅನ್ನು ಕೊಂಡೊಯ್ದಿದ್ದರು. ಇದನ್ನೂ ಓದಿ: ಇಂಡಿಯಾ, ಭಾರತದ ನಡುವಿನ ವ್ಯತ್ಯಾಸ ವಿವರಿಸಿದ್ದ ಲಾಲೂ ಹಳೆಯ ವೀಡಿಯೋ ವೈರಲ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪ್ಯಾಂಟ್ ಜೇಬಲ್ಲಿ ಗ್ಲಾಸ್ ಇಟ್ಕೊಂಡೇ ಪಾರ್ಟಿಗೆ ಬಂದ ನಟ ಸಲ್ಮಾನ್ ಖಾನ್

    ಪ್ಯಾಂಟ್ ಜೇಬಲ್ಲಿ ಗ್ಲಾಸ್ ಇಟ್ಕೊಂಡೇ ಪಾರ್ಟಿಗೆ ಬಂದ ನಟ ಸಲ್ಮಾನ್ ಖಾನ್

    ಬಾಲಿವುಡ್ ಖ್ಯಾತ ನಟ ಸಲ್ಮಾನ್ ಖಾನ್ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಾರ್ಟಿ ಮೂಡ್ ನಲ್ಲಿರುವ ಸಲ್ಮಾನ್ ಖಾನ್ ತಮ್ಮ ಐಷಾರಾಮಿ ಕಾರು ಹತ್ತಿಕೊಂಡು ನಿರ್ಮಾಪಕ ಮುರಾದ್ ಖೇತನಿ ಅವರ ಹುಟ್ಟು ಹಬ್ಬದ ಪಾರ್ಟಿಗೆ ಆಗಮಿಸುತ್ತಾರೆ. ಕಾರಿನಿಂದ ಕೆಳಗೆ ಇಳಿಯುತ್ತಿದ್ದಂತೆಯೇ ಅವರನ್ನು ಕ್ಯಾಮೆರಾಗಳು ಮುತ್ತಿಕೊಳ್ಳುತ್ತವೆ. ತಕ್ಷಣವೇ ತಮ್ಮ ಕೈಯಲ್ಲಿ ಗ್ಲಾಸ್ ಇದೆ ಎಂದು ನೆನಪಾಗಿದೆ ಅನ್ನು ಪ್ಯಾಂಟ್ ಜೇಬಿಗೆ ಇಳಿಸುತ್ತಾರೆ.

    ಕಾರಿನಲ್ಲಿ ಬರುವಾಗಲೇ ಗ್ಲಾಸ್ ಹಿಡಿದುಕೊಂಡು ಬಂದಿದ್ದ ಸಲ್ಮಾನ್, ಗ್ಲಾಸ್ ಅರ್ಧ ತುಂಬಿದ್ದರೂ ಕ್ಯಾಮೆರಾಗಳು ಕಾಣುತ್ತಿದ್ದಂತೆಯೇ ಅದನ್ನು ಜೇಬಿನಲ್ಲಿ ಇಟ್ಟುಕೊಂಡು ಏನೂ ನಡೆದೇ ಇಲ್ಲ ಎನ್ನುವಂತೆ ಕೂಲ್ ಆಗಿ ನಡೆದುಕೊಂಡು ಹೋಗುತ್ತಾರೆ. ಈ ವಿಡಿಯೋವನ್ನು ಹಲವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಆ ಗ್ಲಾಸ್ ನಲ್ಲಿ ಇರುವುದು ಏನು ಎನ್ನುವ ಕಾಮೆಂಟ್ ಅನ್ನು ಮಾಡುತ್ತಿದ್ದಾರೆ. ದೊಡ್ಡ ನಟ ಗ್ಲಾಸ್ ಹಿಡಿದುಕೊಂಡು ಪಾರ್ಟಿಗೆ ಬಂದಿದ್ದು ಯಾಕೆ? ಎಂದು ಹಲವರು ಪ್ರಶ್ನಿಸಿದ್ದಾರೆ.

    ಸಲ್ಮಾನ್ ಜೇಬಿನಲ್ಲಿ ಇಟ್ಟುಕೊಂಡಿದ್ದ ಗ್ಲಾಸ್ ನಲ್ಲಿ ಮದ್ಯ ಇತ್ತಾ? ಅಥವಾ ಅವರು ನೀರು ಕುಡಿಯುತ್ತಿದ್ದರಾ ಎನ್ನುವುದು ಅವರಿಗಷ್ಟೇ ಗೊತ್ತು. ಆದರೆ, ಕೆಲವರಂತೂ ವಿಪರೀತ ಕಲ್ಪನೆ ಮಾಡಿಕೊಂಡು ಆ ವಿಡಿಯೋಗೆ ಕಾಮೆಂಟ್ ಬರೆಯುತ್ತಿದ್ದಾರೆ. ಮನೆಯಿಂದಲೇ ಬರುವಾಗಲೇ ಕಾರಿನಲ್ಲಿ ಸಲ್ಮಾನ್ ಕುಡಿಯುತ್ತಾ ಬಂದಿದ್ದಾರೆ ಎಂದು ಕೆಲವರು ಬರೆದಿದ್ದರೆ, ಫೆವರೆಟ್ ಗ್ಲಾಸ್ ನಲ್ಲಿ ಕುಡಿಯಬೇಕು ಎನ್ನುವ ಕಾರಣಕ್ಕಾಗಿ ತಮ್ಮದೇ ಗ್ಲಾಸ್ ತಗೆದುಕೊಂಡು ಹೋಗುತ್ತಾರಾ ಎಂದು ಕೆಲವರು ಬರೆದಿದ್ದಾರೆ. ಒಟ್ಟಿನಲ್ಲಿ ಪ್ಯಾಂಟ್ ನಲ್ಲಿ ಗ್ಲಾಸ್ ಇಟ್ಟುಕೊಳ್ಳುವುದು ಭಾರೀ ಚರ್ಚೆಗೆ ಅಂತೂ ಕಾರಣವಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಲಾಕ್ ಡೌನ್ ನಡುವೆ ಮನೆಯ ಮುಂದೆ ನಿಲ್ಲಿಸಿದ್ದ ಕಾರುಗಳ ಗಾಜು ಪುಡಿ ಪುಡಿ

    ಲಾಕ್ ಡೌನ್ ನಡುವೆ ಮನೆಯ ಮುಂದೆ ನಿಲ್ಲಿಸಿದ್ದ ಕಾರುಗಳ ಗಾಜು ಪುಡಿ ಪುಡಿ

    ಶಿವಮೊಗ್ಗ: ಕಠಿಣ ಲಾಕ್ ಡೌನ್ ನಡುವೆ ಮನೆಗಳ ಮುಂದೆ ನಿಲ್ಲಿಸಿದ್ದ ಕಾರುಗಳ ಗಾಜುಗಳನ್ನು ಕಿಡಿಗೇಡಿಗಳು ಪುಡಿ ಪುಡಿ ಮಾಡಿರುವ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ.

    ಶಿವಮೊಗ್ಗದ ಸಿದ್ದಯ್ಯ ರಸ್ತೆ ಹಾಗೂ ಎಂಕೆಕೆ ರಸ್ತೆಯಲ್ಲಿ ಕಾರುಗಳ ಮಾಲೀಕರು ತಮ್ಮ ತಮ್ಮ ಕಾರುಗಳನ್ನು ಮನೆಯ ಮುಂದೆ ನಿಲ್ಲಿಸಿದ್ದರು. ಆದರೆ ಮಧ್ಯರಾತ್ರಿ 1.30ರ ಸುಮಾರಿಗೆ ಮನೆಯ ಮುಂದೆ ನಿಲ್ಲಿಸಿದ್ದ ಸುಮಾರು 17 ಕಾರುಗಳು, ಆಟೋ ಹಾಗೂ ಬೈಕ್‍ಗಳನ್ನು ಕಿಡಿಗೇಡಿಗಳು ಜಖಂಗೊಳಿಸಿದ್ದಾರೆ.

    ಘಟನೆ ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶಿವಮೊಗ್ಗ ನಗರದಲ್ಲಿ ಪದೇ ಪದೇ ಇಂತಹ ದುಷ್ಕøತ್ಯ ನಡೆಯುತ್ತಿದೆ. ಪೊಲೀಸರು ಇಂತಹ ಸಮಾಜ ಘಾತುಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

    ಇಡೀ ದೇಶ ಕೊರೊನಾ ಸಂಕಷ್ಟಕ್ಕೆ ಸಿಲುಕಿದೆ. ಪೊಲೀಸರು ಲಾಕ್‍ಡೌನ್ ಕರ್ತವ್ಯದಲ್ಲಿ ನಿರತರಾಗಿದ್ದಾರೆ. ಇಂತಹ ಸಮಯದಲ್ಲಿ ಕಿಡಿಗೇಡಿಗಳು ಇಂತಹ ದುಷ್ಕೃತ್ಯ ಮೆರೆದಿದ್ದಾರೆ. ದುಷ್ಕೃತ್ಯ ನಡೆಸಿರುವ ಇಬ್ಬರು ಯುವಕರನ್ನು ಸ್ಥಳಿಯರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

    ದೊಡ್ಡಪೇಟೆ ಪೊಲೀಸರು ಈಗಾಗಲೇ ಇಬ್ಬರು ಕಿಡಿಗೇಡಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಘಟನೆಯಲ್ಲಿ ಇಬ್ಬರು ಅಷ್ಟೇ ಅಲ್ಲದೇ ಇನ್ನು ಕೆಲವು ಕಿಡಿಗೇಡಿಗಳು ಇರುವ ಬಗ್ಗೆ ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಪೊಲೀಸರಿಗೆ ತನಿಖೆ ನಡೆಸಿ ತಪ್ಪಿತಸ್ಥರನ್ನು ಬಂಧಿಸುವಂತೆ ಇಂತಹ ಘಟನೆ ಮರುಕಳಿಸದಂತೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಸಚಿವ ಈಶ್ವರಪ್ಪ ತಿಳಿಸಿದ್ದಾರೆ.

  • ರಾಜ್ಯಾದ್ಯಂತ ಸಾರಿಗೆ ನೌಕರರ ಕುಟುಂಬಸ್ಥರು ತಟ್ಟೆ, ಲೋಟ ಬಡಿದು ಆಕ್ರೋಶ

    ರಾಜ್ಯಾದ್ಯಂತ ಸಾರಿಗೆ ನೌಕರರ ಕುಟುಂಬಸ್ಥರು ತಟ್ಟೆ, ಲೋಟ ಬಡಿದು ಆಕ್ರೋಶ

    – ಮಕ್ಕಳ ಜೊತೆ ಆಗಮಿಸಿದ ಮಹಿಳೆಯರು
    – ಸರ್ಕಾರದ ವಿರುದ್ಧ ಫಲಕ ಹಿಡಿದು ಆಕ್ರೋಶ

    ಬೆಂಗಳೂರು: ಆರನೇ ವೇತನ ಆಯೋಗ ಜಾರಿಗೊಳಿಸುವಂತೆ ಆಗ್ರಹಿಸಿ ಸರ್ಕಾರದ ವಿರುದ್ಧ ಕಳೆದ ಆರು ದಿನಗಳಿಂದ ಸಾರಿಗೆ ಸಿಬ್ಬಂದಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸದ್ಯ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಾರಿಗೆ ಸಿಬ್ಬಂದಿ ಕುಟುಂಬ ಸಮೇತರಾಗಿ ರಸ್ತೆಗಿಳಿದು ತಟ್ಟೆ ಹಾಗೂ ಲೋಟ ಬಡಿಯುವ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

    ಚಿಕ್ಕಮಗಳೂರು: ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಕೆಎಸ್‌ಆರ್‌ಟಿಸಿ ಸಾರಿಗೆ ನೌಕರರು ಕುಟುಂಬ ಸಮೇತ ಬಂದು ರಸ್ತೆ ಮಧ್ಯೆ ತಟ್ಟೆ-ಲೋಟ ಬಡಿದು ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದರು. ಸುಮಾರು 300 ಕ್ಕೂ ಅಧಿಕ ಮಂದಿ ನಗರದ ಆಜಾದ್ ಪಾರ್ಕ್‍ನಲ್ಲಿ ಜಮಾಯಿಸಿ ಸರ್ಕಾರ ಹಾಗೂ ಸಾರಿಗೆ ಸಚಿವರ ವಿರುದ್ಧ ಕಿಡಿ ಕಾರಿದರು. ನಿಮ್ಮಿಂದ ಇಂದು ನಾವು ಬೀದಿಗೆ ಬಂದಿದ್ದೇವೆ. ಮಾರ್ಚ್ ತಿಂಗಳ ಸಂಬಳ ನೀಡಿಲ್ಲ. ತಿನ್ನೋಕೆ ಅನ್ನ ಇಲ್ಲ. ನಾವು ಇಂದು ಇಲ್ಲಿ ಕೂತಿದ್ದೇವೆ ಅಂದರೆ ಅದಕ್ಕೆ ನೀವೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರ ನಮ್ಮ ಬೇಡಿಕೆಗಳನ್ನ ಈಡೇರಿಸದೆ ನೌಕರರ ಹೋರಾಟವನ್ನ ಹತ್ತಿಕ್ಕಲು ಪ್ರಯತ್ನಿಸುತ್ತಿದೆ. ಆದರೆ, ನಾವು ನಿಮ್ಮ ಬೆದರಿಕೆಗಳಿಗೆ ಬಗ್ಗುವುದಿಲ್ಲ. ಕೂಡಲೇ ನಮ್ಮ ಬೇಡಿಕೆ ಈಡೇರಿಸಬೇಕು, ಬೇಡಿಕೆ ಈಡೇರುವವರೆಗೂ ಪ್ರತಿಭಟನೆಯಿಂದ ಹಿಂದೆ ಸರಿಯೋ ಮಾತೇ ಇಲ್ಲ ಎಂದು ಸರ್ಕಾರಕ್ಕೆ ಎಚ್ಚರಿಸಿದ್ದಾರೆ. ಡಿಸೆಂಬರ್ ತಿಂಗಳಲ್ಲಿ ನೀವೇ ಕೊಟ್ಟಂತ ಮಾತನ್ನ ಉಳಿಸಿಕೊಳ್ಳುವಲ್ಲಿ ವಿಫಲವಾಗಿದ್ದೀರಾ. ಕೊಟ್ಟ ಮಾತನ್ನ ಉಳಿಸಿಕೊಳ್ಳುವಂತೆ ಸರ್ಕಾರ ಹಾಗೂ ಸಾರಿಗೆ ಸಚಿವರಿಗೆ ಆಗ್ರಹಿಸಿದ್ದಾರೆ.

    ಚಿಕ್ಕಬಳ್ಳಾಪುರ: ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಇಂದು ಚಿಕ್ಕಬಳ್ಳಾಪುರದಲ್ಲಿ ಸಾರಿಗೆ ನೌಕರರು ಪ್ರತಿಭಟನೆ ನಡೆಸಿದ್ದಾರೆ. ಚಿಕ್ಕಬಳ್ಳಾಪುರ ನಗರದ ಅಂಬೇಡ್ಕರ್ ಭವನದಿಂದ ಶಿಡ್ಲಘಟ್ಟ ಮಾರ್ಗದ ಅಂಬೇಡ್ಕರ್ ವೃತ್ತದವರೆಗೆ ಮೆರವಣಿಗೆ ನಡೆಸಿದರು. ಅಂಬೇಡ್ಕರ್ ವೃತ್ತದಲ್ಲಿ ಕೆಲ ಕಾಲ ರಸ್ತೆ ತಡೆ ನಡೆಸಿದ ಸಾರಿಗೆ ನೌಕರರ ಕುಟುಂಬಸ್ಥರು, ತಟ್ಟೆ ಲೋಟ ಬಡಿಯುವ ಚಳುವಳು ನಡೆಸಿದರು. ಪ್ರತಿಭಟನೆಯಲ್ಲಿ ಸಾರಿಗೆ ನೌಕರರು ತಂದೆ ತಾಯಿ, ಪತ್ನಿ , ಅಣ್ಣ, ತಮ್ಮ, ಮಕ್ಕಳು ಎಲ್ಲರೂ ಭಾಗಿಯಾಗಿದ್ದರು. ಸರ್ಕಾರ ಸಾರಿಗೆ ನೌಕರರ ಬೇಡಿಕೆಗಳನ್ನ ಈಡೇರಿಸಬೇಕು ಅಂತ ಆಗ್ರಹಿಸಿದರು.

    ಬಾಗಲಕೋಟೆ: ಜಿಲ್ಲೆಯ ಹುನಗುಂದ ಪಟ್ಟಣದಲ್ಲಿ ಸಾರಿಗೆ ನೌಕರರು ಕುಟುಂಬ ಸಮೇತರಾಗಿ ಸಾರಿಗೆ ನೌಕರರಿಗೂ 6ನೇ ವೇತನ ಆಯೋಗ ವರದಿ ಜಾರಿಯಾಗಬೇಕೆಂದು ಬರೆದ ಫಲಕ ಹಿಡಿದು ಫಲಕ ಹಿಡಿದು ತಹಶೀಲ್ದಾರ್ ಕಚೇರಿವರೆಗೂ ಮೆರವಣಿಗೆ ನಡೆಸಿದರು. ಈ ವೇಳೆ ಸಾರಿಗೆ ನೌಕರರ ಪ್ರತಿಭಟನೆ ರೈತ ಸಂಘಟನೆಗಳು ಸಾಥ್ ನೀಡಿದವು.

    ವಿಜಯಪುರ: ವಿಜಯಪುರದ ಸೆಟಲೈಟ್ ಬಸ್ ನಿಲ್ದಾಣದ ಕ್ವಾಟ್ರಸ್ ನ ಸಾರಿಗೆ ನೌಕರರ ಕುಟುಂಬಸ್ಥರೊಂದಿಗೆ ಮಾರ್ಚ್ ತಿಂಗಳ ಸಂಬಳ ನೀಡುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ ನಡೆಸಿದರು.

    ಬಳ್ಳಾರಿ: ಸಾರಿಗೆ ನೌಕರರ ಪತ್ನಿಯರು ತಮಟೆ ಮತ್ತು ಗಂಟೆ ಬಾರಿಸುವ ಹೋರಾಟಕ್ಕೆ ಬಳ್ಳಾರಿ ಜಿಲ್ಲಾಡಳಿತ ಅವಕಾಶ ನೀಡದ ಹಿನ್ನೆಲೆಯಲ್ಲಿ, ಬೀದಿಯಲ್ಲಿ ನಿಂತು ರಸ್ತೆ ಮಧ್ಯೆ ಬಸ್ ತಡೆದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಿಢೀರನೆ ನಡೆದ ಪ್ರತಿಭಟನೆಯಿಂದ ಕೆಲ ಕಾಲ ಗೊಂದಲ ಮತ್ತು ಗಲಾಟೆ ವಾತಾವರಣ ಸೃಷ್ಟಿಯಾಯಿತು, ದಾರಿಯಲ್ಲಿ ಬಂದ ಸಾರಿಗೆ ಬಸ್ ತಡೆದು ಬಸ್ ಚಾಲಕನನ್ನು ತರಾಟೆ ತೆಗೆದುಕೊಂಡು ಕುಟುಂಬಸ್ಥರು ಬಸ್ ಮುಂದೆ ಕುಳಿತು ಪ್ರತಿಭಟನೆ ಮಾಡಿದ್ದಾರೆ.

    ಚಾಮರಾಜನಗರ: ಚಾಮರಾಜನಗರ ಡಿಸಿ ಕಚೇರಿ ಮುಂದೆ ಸಾರಿಗೆ ನೌಕರರು ಕುಟುಂಬಸ್ಥರೊಟ್ಟಿಗೆ ತಟ್ಟೆ, ಲೋಟ ಬಡಿದು ಪ್ರತಿಭಟನೆ ನಡೆಸಿದರು. ಈ ವೇಳೆ ಸಾರಿಗೆ ನೌಕರರಿಗೆ ರೈತ ಸಂಘದ ಕಾರ್ಯಕರ್ತರು ಭಾಗಿಯಾಗಿ ಬೆಂಬಲ ನೀಡಿದರು.

    ಚಿತ್ರದುರ್ಗ: ಜಿಲ್ಲೆಯ ಓಬವ್ವ ವೃತ್ತದಿಂದ ಡಿಸಿ ಕಚೇರಿವರೆಗೆ ಸಾರಿಗೆ ನೌಕರರು ಕುಟುಂಬಸ್ಥರೊಂದಿಗೆ ಸಿಎಂ ಬಿಎಸ್ ವೈ, ಸಾರಿಗೆ ಸಚಿವ ಸವದಿ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಧರಣಿ ನಡೆಸಿದರು ಹಾಗೂ ಈ ಪ್ರತಿಭಟನೆಯಲ್ಲಿ ವಿವಿಧ ಸಂಘಟನೆ ಮುಖಂಡರು ಭಾಗಿಯಾಗಿದ್ದರು.

    ದಾವಣಗೆರೆ: ಯುಗಾದಿ ಹಬ್ಬವನ್ನು ಮರೆತು ಇಂದು ಸಾರಿಗೆ ನೌಕರರು ಕುಟುಂಬಸ್ಥರ ಸಮೇತ ಪ್ರತಿಭಟನೆ ನಡೆಸಿದರು. ಯಡಿಯೂರಪ್ಪನವರು ಒಂದೇ ದಿನ ಬಂದು ಬಸ್ ಓಡಿಸಲಿ, ಎಸಿ ಕಾರಿನಲ್ಲಿ ಡ್ರೈವರ್‍ನನ್ನು ಇಟ್ಟುಕೊಂಡು ಹೋಗುವುದಲ್ಲ. ನಮ್ಮ ಗಂಡಂದಿರ ತರ ಗಾಡಿ ಓಡಿಸಲಿ ಗೊತ್ತಾಗುತ್ತೆ. ಹಬ್ಬ ಇದೆ ಮಕ್ಕಳಿಗೆ ಬಟ್ಟೆ ಇಲ್ಲ, ಮನೆಯಲ್ಲಿ ರೇಷನ್ ಇಲ್ಲ ಹೇಗೆ ಹಬ್ಬ ಮಾಡುವುದು. ಕೂಡಲೇ ನಮ್ಮ ಬೇಡಿಕೆ ಈಡೇರಿಸಲು ಒತ್ತಾಯಿಸುತ್ತೇವೆ. ಬೇಡಿಕೆ ಈಡೇರಿದರೆ ಆಗ ನಮಗೆ ನಿಜವಾದ ಯುಗಾದಿ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದಸಿರು.

    ಧಾರವಾಡ: ಸಾರಿಗೆ ಮಹಿಳಾ ಸಿಬ್ಬಂದಿ ಮತ್ತು ಅವರ ಮಕ್ಕಳು ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ತಟ್ಟೆ ಬಾರಿಸಿ ಪ್ರತಿಭಟನೆ ನಡೆಸಿದರು.

    ಬಾಗಲಕೋಟೆ: ಕಲಬುರಗಿ ನಗರದ ಮೂರು ಡಿಪೋ ಮುಂದೆ ಕುಳಿತು ಮಹಿಳೆಯರು ಬೇಡಿಕೆ ಈಡೇರಿಸುವವರೆಗೆ ನಮ್ಮ ಮನೆಯವರನ್ನು ಕೆಲಸಕ್ಕೆ ಕಳಿಸೋದಿಲ್ಲಾ ಅಂತ ಧರಣಿ ನಡೆಸಿದರು.

    ಹಾಸನ: ಸಾರಿಗೆ ನೌಕರರು ಮತ್ತು ಅವರ ಕುಟುಂಬದವರು ತಟ್ಟೆ, ಲೋಟ ಹಿಡಿದು ಹಾಸನದ ಬಸ್ ನಿಲ್ದಾಣದವರೆಗೆ ಪ್ರತಿಭಟನಾ ರ್ಯಾಲಿ ನಡೆಸಿದರು. ಈ ವೇಳೆ ಕರ್ತವ್ಯಕ್ಕೆ ಹಾಜರಾಗಿದ್ದ ಸಿಬ್ಬಂದಿ ವಿರುದ್ಧ ಆಕ್ರೋಶ ಹೊರಹಾಕಿ ಬಸ್‍ನಿಂದ ಕೆಳಗಿಳಿಸಿದರು. ಪೊಲೀಸರು ಮಧ್ಯಪ್ರವೇಶ ಮಾಡಿ ಪರಿಸ್ಥಿತಿ ತಿಳಿಗೊಳಿಸಿದರು. ಮತ್ತೊಂದೆಡೆ ಸಾರಿಗೆ ನೌಕರ ಪಾಲಾಕ್ಷ ಎಂಬವರು ಹಾಸನದ ಸಿಟಿ ಬಸ್‍ನಿಲ್ದಾಣದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಸರ್ಕಾರ ವಿರುದ್ಧ ಆಕ್ರೋಶ ಹೊರಹಾಕಿದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

    ಹಾವೇರಿ: ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಸಾರಿಗೆ ನೌಕರರು ಹಾಗೂ ಅವರ ಕುಟುಂಬದವರೊಂದಿಗೆ ಹಾವೇರಿಯಲ್ಲಿ ತಟ್ಟೆ ಮತ್ತು ಲೋಟ ಬಾರಿಸಿ ಸಾರಿಗೆ ಸಚಿವ ಲಕ್ಷ್ಮಣ ಸವದಿ ಹಾಗೂ ಸರಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ಈ ವೇಳೆ ರಾಜ್ಯ ರೈತ ಸಂಘ, ಎಸ್‍ಎಫ್‍ಐ, ಕರ್ನಾಟಕ ರಕ್ಷಣಾ ವೇದಿಕೆ, ದಲಿತ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳಿಂದ ಪ್ರತಿಭಟನೆಗೆ ಸಾಥ್ ನೀಡಿದರು.

    ಕೋಲಾರ: ಸಾರಿಗೆ ನೌಕರರ ಮುಷ್ಕರವನ್ನ ಬೆಂಬಲಿಸಿ ಕಾಂಗ್ರೆಸ್ ಶಾಸಕರ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಮುಖಂಡರು ತಟ್ಟೆ ಲೋಟ ಹಿಡಿದುಕೊಂಡು ಪ್ರತಿಭಟನೆ ನಡೆಸಿದ ಘಟನೆ ಕೋಲಾರದಲ್ಲಿ ನಡೆದಿದೆ. ಕೋಲಾರ ಜಿಲ್ಲೆ ಬಂಗಾರಪೇಟೆ ಪಟ್ಟಣದ ಅಂಬೇಡ್ಕರ್ ಪ್ರತಿಮೆ ಎದುರು ತಟ್ಟೆ ಲೋಟ ಹಿಡಿದು ಪ್ರತಿಭಟನೆ ನಡೆಸಿದ ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ, ಸರ್ಕಾರದ ವಿರುದ್ದ ದಿಕ್ಕಾರಗಳನ್ನ ಕೂಗಿದ್ರು. ಸಾರಿಗೆ ನೌಕರರ ಬೇಡಿಕೆಗಳನ್ನ ಈಡೇರಿಸದೆ, ಸರ್ಕಾರ ನೌಕರರ ವಿರುದ್ದ ತೆಗೆದುಕೊಳ್ಳುತ್ತಿರುವ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರ ಬೇಡಿಕೆಗಳನ್ನ ಈಡೇರಿಸುವುದನ್ನ ಬಿಟ್ಟು, ಅವರ ಮೇಲೆ ಎಸ್ಮಾ ಜಾರಿ ಮಾಡುವುದು ಹಾಗೂ ವರ್ಗಾವಣೆ ಮಾಡುತ್ತಿರುವುದು ಖಂಡನೀಯ ಎಂದರು. ಅಲ್ಲದೆ ತರಬೇತಿಯಲ್ಲಿರುವ ಸಾರಿಗೆ ನೌಕರರನ್ನ ಕೆಲಸದಿಂದ ವಜಾ ಮಾಡಿತ್ತೇವೆಂದು ಬೆದರಿಕೆ ಹಾಕಿ ನೋಟೀಸ್ ನೀಡುತ್ತಿರುವ ಸರ್ಕಾರದ ಧೋರಣೆಗೆ ಅಸಮಧಾನ ವ್ಯಕ್ತಪಡಿಸಿದರು.

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಕುಮಟಾ, ಅಂಕೋಲ ತಾಲೂಕು ಸೇರಿ ವಿವಿಧ ತಾಲೂಕಿನಲ್ಲಿ ಸಾರಿಗೆ ನೌಕರರ ಕುಟುಂಬಸ್ಥರ ಜೊತೆ ಪ್ರತಿಭಟನೆಗೆ ನಡೆಸಿದರು.

    ಮಂಡ್ಯ: ನಮ್ಮ ಕುಟುಂಬದ ಜೊತೆ ಸರ್ಕಾರ ಚೆಲ್ಲಾಟವಾಡುತ್ತಿದೆ. ಹೋರಾಟ ಹತ್ತಿಕ್ಕಲು ಧಮನಕಾರಿ ನೀತಿ ಅನುಸರಿಸಲಾಗುತ್ತಿದೆ ಎಂದು ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಎದುರು ಸಾರಿಗೆ ನೌಕರರ ಜೊತೆ ಕುಟುಂಸ್ಥರು ಪ್ರತಿಭಟನೆ ನಡೆಸಿದರು.

    ಮೈಸೂರು: ಜಿಲ್ಲೆಯ ಗಾಂಧಿ ವೃತ್ತದಲ್ಲಿ ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ಮುಂದುವರೆಸುತ್ತೇವೆ. ನಾವು ನಮ್ಮ ಮನೆಗಳನ್ನು ಖಾಲಿ ಮಾಡುವುದಿಲ್ಲ ಎಂದು ಸಾರಿಗೆ ನೌಕರರ ಕುಟುಂಬಸ್ಥರು ಧರಣಿ ನಡೆಸಿದರು.

    ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಸಾಗರದ ಉಪ ವಿಭಾಗಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಸಾರಿಗೆ ನೌಕರರ ಜೊತೆ ಕುಟುಂಬಸ್ಥರು ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಸಾರಿಗೆ ನೌಕರರ ಕುಟುಂಬಸ್ಥರಿಗೆ ರೈತ ಸಂಘದ ಕಾರ್ಯಕರ್ತರ ಸಾಥ್ ನೀಡಿದರು.

  • ಶ್ವಾನಕ್ಕಾಗಿ ಕಾರು ಗ್ಲಾಸ್ ಒಡೆದ ವ್ಯಕ್ತಿ – ನೆಟ್ಟಿಗರಿಂದ ಮೆಚ್ಚುಗೆ

    ಶ್ವಾನಕ್ಕಾಗಿ ಕಾರು ಗ್ಲಾಸ್ ಒಡೆದ ವ್ಯಕ್ತಿ – ನೆಟ್ಟಿಗರಿಂದ ಮೆಚ್ಚುಗೆ

    ಲಂಡನ್: ಕಾರಿನಲ್ಲಿ ಬಿಟ್ಟು ಹೋಗಿದ್ದ ಶ್ವಾನಕ್ಕಾಗಿ ವ್ಯಕ್ತಿಯೋರ್ವ ಶಾಪಿಂಗ್ ಮಾಲ್ ಮುಂದೆ ಪಾರ್ಕ್ ಮಾಡಿದ್ದ ಬೇರೆಯವರ ಕಾರಿನ ಗ್ಲಾಸ್ ಒಡೆದು ಹಾಕಿರುವ ಘಟನೆ ಲಂಡನ್‍ನಲ್ಲಿ ನಡೆದಿದೆ.

    ಶಾಪಿಂಗ್‍ಗೆಂದು ಕಾರಿನಲ್ಲಿ ಬಂದ ಮಾಲೀಕ ನಾಯಿಯ ಮರಿಯನ್ನು ಕಾರಿನಲ್ಲೇ ಬಿಟ್ಟು ಮಗಳ ಜೊತೆ ಶಾಪಿಂಗ್ ಮಾಡಲು ಹೋಗಿದ್ದಾನೆ. ಈ ವೇಳೆ ಕಾರಿನಲ್ಲಿದ್ದ ಶ್ವಾನ ಹೊರಗೆ ಬರಲಾಗದೆ ಉಸಿರಾಡಲೂ ಆಗದೇ ಕಷ್ಟಪಟ್ಟಿದೆ. ಕಾರು ಕೂಡ ಬಿಸಿಲಿನಲ್ಲಿ ನಿಂತಿದ್ದು, ಬಿಸಿಲ ಝಳಕ್ಕೆ ನಾಯಿ ಬೊಗಳಲು ಆರಂಭಿಸಿದೆ.

    ಸುಮಾರು 45 ನಿಮಿಷ ನಾಯಿ ಕಾರಿನಲ್ಲಿ ಕಷ್ಟಪಟ್ಟಿದೆ. ಆ ನಂತರ ಸ್ಥಳದಲ್ಲಿ ಇದ್ದ ಜನರು ನಾಯಿಯನ್ನು ಹೊರತೆಗೆಯಲು ಮಾಲೀಕನನ್ನು ಹುಡುಕಿದ್ದಾರೆ. ಆದರೆ ಮಾಲೀಕ ಸಿಕ್ಕಿಲ್ಲ. ಆ ನಂತರ ಸ್ಥಳಕ್ಕೆ ಬಂದ ವ್ಯಕ್ತಿಯೋರ್ವ ತನ್ನ ಬಳಿಯಿದ್ದ ಕೊಡಲಿಯಿಂದ ಕಾರಿನ ಗ್ಲಾಸ್ ಅನ್ನು ಒಡೆದು ಹಾಕಿ ನಾಯಿಯನ್ನು ಹೊರ ತೆಗೆದಿ ದ್ದಾನೆ. ಬರೋಬ್ಬರಿ 8 ಬಾರಿ ಕೊಡಲಿಯಿಂದ ಗ್ಲಾಸ್‍ಗೆ ಒಡೆದು ಅದನ್ನು ಬ್ರೇಕ್ ಮಾಡಲಾಗಿದೆ. ನಂತರ ನಾಯಿಯನ್ನು ಪೆಟ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.

    ಈಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಗ್ಲಾಸ್ ಒಡೆದು ಹಾಕಿದ ವ್ಯಕ್ತಿಗೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ. ಜೊತೆಗೆ ನಾಯಿಯನ್ನು ಕಾರಿನಲ್ಲಿ ಬಿಟ್ಟು ಹೋದ ಮಾಲೀಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರು ನಾಯಿ ಸಾಕಲೂ ಕೂಡ ಅರ್ಹವಾಗಿಲ್ಲ. ಅವರನ್ನು ಜೈಲಿಗೆ ಹಾಕಿ ಎಂದು ಕಾಮೆಂಟ್ ಮಾಡಿದ್ದಾರೆ. ಸದ್ಯ ನಾಯಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

  • ನೀರು ಕುಡಿಯುತ್ತಿರುವ ವಿಡಿಯೋ ವೈರಲ್‌ – ಟ್ರಂಪ್‌ ಆರೋಗ್ಯದಲ್ಲಿ ಸಮಸ್ಯೆ ಆಗಿದ್ಯಾ?

    ನೀರು ಕುಡಿಯುತ್ತಿರುವ ವಿಡಿಯೋ ವೈರಲ್‌ – ಟ್ರಂಪ್‌ ಆರೋಗ್ಯದಲ್ಲಿ ಸಮಸ್ಯೆ ಆಗಿದ್ಯಾ?

    – ಸಾಮಾಜಿಕ ಜಾಲತಾಣದಲ್ಲಿ ಚರ್ಚೆ

    ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆರೋಗ್ಯದಲ್ಲಿ ಸಮಸ್ಯೆ ಆಗಿದ್ಯಾ ಹೀಗೊಂದು ಪ್ರಶ್ನೆಯನ್ನು ಇಟ್ಟುಕೊಂಡು ಜನ ಸಾಮಾಜಿಕ ಸಾಮಾಜಿಕ ಜಾಲತಾಣದಲ್ಲಿ ಚರ್ಚಿಸುತ್ತಿದ್ದಾರೆ.

    ಟ್ರಂಪ್‌ ಗ್ಲಾಸ್‌ನಲ್ಲಿ ನೀರು ಕುಡಿಯತ್ತಿರುವ ವಿಡಿಯೋ ಈಗ ವೈರಲ್‌ ಆಗಿದೆ. ವೈರಲ್‌ ಆಗಿರುವ ವಿಡಿಯೋದಿಂದಾಗಿ ಟ್ರಂಪ್‌ ಆರೋಗ್ಯ ಸಮಸ್ಯೆಯಲ್ಲಿದ್ದಾರಾ ಎಂಬ ಪ್ರಶ್ನೆ ಎದ್ದಿದೆ.

    ನಡೆದಿದ್ದು ಏನು?
    ಶನಿವಾರ ಅಮೆರಿಕ ಸೇನಾ ಅಕಾಡೆಮಿಯಲ್ಲಿನ ಪದವಿ ಸಮಾರಂಭದಲ್ಲಿ ಟ್ರಂಪ್‌ ಭಾಷಣ ಮಾಡುತ್ತಿದ್ದರು. ಈ ವೇಳೆ ಬಲಗೈಯಿಂದ ನೀರು ಕುಡಿಯಲು ಯತ್ನಿಸಿದ್ದು ಸಾಧ್ಯವಾಗದಿದ್ದಾಗ ಎಡಗೈ ಸಹಾಯ ಪಡೆದಿದ್ದಾರೆ. ನೀರು ಕುಡಿಯಲು ಬಹಳ ಕಷ್ಟ ಪಟ್ಟಿದ್ದನ್ನು ನೋಡಿ ಜನ ಈಗ ತಮ್ಮದೇ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೇ ಕಾರ್ಯಕ್ರಮ ಮುಗಿಸಿ ಟ್ರಂಪ್‌ ಮೆಟ್ಟಿಲುಗಳಿಂದ ಇಳಿಯಲು ಬಹಳ ಕಷ್ಟಪಟ್ಟಿರುವ ವಿಡಿಯೋ ಸಹ ಹರಿದಾಡುತ್ತಿದೆ.

    ವಿಡಿಯೋ ಬಗ್ಗೆ ಚರ್ಚೆ ಆಗುತ್ತಿದ್ದಂತೆ ಪ್ರತಿಕ್ರಿಯೆ ನೀಡಿದ ಟ್ರಂಪ್‌ ಇಳಿಯುವ ಸಂದರ್ಭದಲ್ಲಿ ಹಿಡಿದುಕೊಳ್ಳಲು ಹ್ಯಾಂಡ್ರೈಲ್‌ ಇರಲಿಲ್ಲ. ಹೀಗಾಗಿ ಜಾರಿ ಬೀಳದೇ ಇರಲು ನಿಧಾನವಾಗಿ ಇಳಿಯುತ್ತಿದ್ದೆ. ಫೇಕ್‌ ನ್ಯೂಸ್‌ ಗಳು ಇದನ್ನು ಸಂಭ್ರಮಿಸುತ್ತದೆ ಎಂದು ಟ್ವೀಟ್‌ ಮಾಡಿದ್ದಾರೆ.

    ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಸಂದರ್ಭದಲ್ಲೇ ಅಮೆರಿಕದಲ್ಲಿ ವರ್ಣತಾರತಮ್ಯ ಗಲಾಟೆ ಜೋರಾಗಿದೆ. ಈ ವರ್ಷವೇ ಅಧ್ಯಕ್ಷೀಯ ಚುನಾವಣೆ ನಡೆಯಲಿರುವ ಕಾರಣ ಟ್ರಂಪ್‌ ಈಗ ಏನೇ ಎಡವಟ್ಟು ಮಾಡಿದರೂ ಅದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆಗುತ್ತದೆ.

    ಈ ಹಿಂದೆ ಟ್ರಂಪ್‌ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿರುವುದಾಗಿ ತಿಳಿಸಿದ್ದರು. ಒಂದು ವಾರಕ್ಕೂ ಹೆಚ್ಚು ಕಾಲ ನಾನು ಮಾತ್ರೆಯನ್ನು ಸೇವಿಸಿದ್ದು, ಈ ಮಾತ್ರೆಯ ಬಗ್ಗೆ ನಾನು ಬಹಳಷ್ಟು ತಿಳಿದಿರುವುದಾಗಿ ಹೇಳಿದ್ದರು. ಭಾರತ ಸರ್ಕಾರ ಹೈಡ್ರಾಕ್ಸಿಕ್ಲೋರೋಕ್ವಿನ್‌ ಔಷಧಿಗಳನ್ನು ಅಮೆರಿಕ ಸೇರಿದಂತೆ ಹಲವು ದೇಶಗಳಿಗೆ ರಫ್ತು ಮಾಡಿದೆ.

  • ಏರಿಯಾದಲ್ಲಿ ಹವಾ ಸೃಷ್ಟಿಸಲು 20ಕ್ಕೂ ಹೆಚ್ಚು ಕಾರುಗಳನ್ನು ಜಖಂಗೊಳಿಸಿದ ಪುಂಡರು ಅರೆಸ್ಟ್

    ಏರಿಯಾದಲ್ಲಿ ಹವಾ ಸೃಷ್ಟಿಸಲು 20ಕ್ಕೂ ಹೆಚ್ಚು ಕಾರುಗಳನ್ನು ಜಖಂಗೊಳಿಸಿದ ಪುಂಡರು ಅರೆಸ್ಟ್

    – ಜೈಲಿಗೆ ಹೋದರೆ ಹೆಸರು ಮಾಡಬಹುದು
    – ಎದುರಾಳಿಗಳಿಗೆ ಭಯ ಹುಟ್ಟಿಸಲು ಕೃತ್ಯ
    – ವಿಜಯನಗರ ಪೊಲೀಸರಿಂದ 7 ಮಂದಿ ಅರೆಸ್ಟ್

    ಬೆಂಗಳೂರು: ಏರಿಯಾದಲ್ಲಿ ಹವಾ ಸೃಷ್ಟಿ ಮಾಡಲು 20ಕ್ಕೂ ಹೆಚ್ಚು ಕಾರುಗಳ ಗ್ಲಾಸ್ ಒಡೆದು ಪುಂಡಾಟ ಮೆರೆದಿದ್ದ ಆರೋಪಿಗಳು ಕೊನೆಗೂ ಅಂದರ್ ಆಗಿದ್ದಾರೆ.

    ಬುಧವಾರ ರಾತ್ರಿ ವಿಜಯನಗರದಲ್ಲಿ ನಿಲ್ಲಿಸಿದ್ದ 20ಕ್ಕೂ ಹೆಚ್ಚು ಕಾರುಗಳ ಗಾಜನ್ನು ಕಿಡಿಗೇಡಿಗೇಡಿಗಳು ಒಡೆದು ಹಾಕಿದ್ದರು. ಈ ದೃಶ್ಯಗಳು ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಮಾಲೀಕರು ದೂರು ನೀಡಿದ ಹಿನ್ನೆಲೆಯಲ್ಲಿ ದೃಶ್ಯಗಳನ್ನು ಆಧರಿಸಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ನಿತಿನ್, ಯಶವಂತ್ ಆಶ್ರಯ್, ಬಾಲಾಜಿ, ಕಿರಣ್ ರೆಡ್ಡಿ, ಮುತ್ತು ಹಾಗೂ ಚರಣ್ ರಾಜ್ ಒಟ್ಟು ಏಳು ಆರೋಪಿಗಳನ್ನು ವಿಜಯನಗರ ಪೊಲೀಸರು ಬಂಧಿಸಿದ್ದಾರೆ. ಕಿರಣ್ ರೆಡ್ಡಿ ವಿಜಯನಗರದ ರೌಡಿಶೀಟರ್ ಆಗಿದ್ದು, ಉಳಿದವರು ಆತನ ಸಹಚರರಾಗಿದ್ದಾರೆ.

    ಕುಡಿದ ಅಮಲಿನಲ್ಲಿ ಆರೋಪಿಗಳು ಈ ಕೃತ್ಯ ಎಸಗಿದ್ದು, ಈ ಪ್ರಕರಣದಲ್ಲಿ ಭಾಗಿಯಾಗಿದ್ದ ನಾಲ್ಕು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಆರೋಪಿಗಳು ತಡರಾತ್ರಿ ಮನೆಯ ಮುಂದೆ ನಿಲ್ಲಿಸಿದ್ದ ಕಾರುಗಳ ಗ್ಲಾಸ್ ಒಡೆದಿದ್ದರು. ಏಳು ಜನರಲ್ಲಿ ಮೂವರು ಆರೋಪಿಗಳು 20ಕ್ಕೂ ಅಧಿಕ ಕಾರುಗಳ ಗ್ಲಾಸ್ ಒಡೆದು ಹಾಕಿದ್ದಾರೆ. ಬೈಕಿನಲ್ಲಿ ಬಂದ ನಿತಿನ್, ಯಶವಂತ, ಆಶ್ರಯ್ ಸಿಕ್ಕ ಸಿಕ್ಕ ಕಾರುಗಳ ಗಾಜುಗಳನ್ನು ಒಡೆದು ಹಾಕಿದ್ದರೆ.

    ಬಂಧಿತ ಮೂವರನ್ನು ಪೊಲೀಸರು ವಿಚಾರಣೆ ನಡೆಸಿದ್ದು, ಈ ಹಿಂದೆ ಇಂತಹ ಕೃತ್ಯಗಳನ್ನು ಎಸಗಿದ್ದ ನಾಲ್ಕು ಜನ ಆರೋಪಿಗಳು ಸಹ ಈ ಕೃತ್ಯದಲ್ಲಿ ಭಾಗಿಯಾಗಿದ್ದರು. ಅವರನ್ನೂ ಸಹ ವಿಜಯನಗರ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

    ರೌಡಿ ಶೀಟರ್ ಕಿರಣ್ ರೆಡ್ಡಿಯೇ ತನ್ನ ಸಹಚರರಿಗೆ ನಿರ್ದೇಶನ ನೀಡಿ ಈ ಕೃತ್ಯ ಮಾಡಿಸಿದ್ದಾನೆ. ಅಲ್ಲದೆ ಅವರಿಗೆ ಸಹಾಯ ಮಾಡುತ್ತಿದ್ದ, ಏರಿಯಾದಲ್ಲಿ ಹವಾ ಸೃಷ್ಟಿ ಮಾಡಲು ಆರೋಪಿಗಳು ಕೃತ್ಯ ಎಸಗಿದ್ದಾರೆ ಎಂದು ತಿಳಿದು ಬಂದಿದೆ. ಒಮ್ಮೆ ಜೈಲಿಗೆ ಹೋಗಿ ಬಂದರೆ ಹೆಸರು ಮಾಡಬಹುದು. ನಮ್ಮ ಎದುರಾಳಿಗಳಿಗೆ ಭಯ ಹುಟ್ಟಿಸಬೇಕು ಎಂಬ ಉದ್ದೇಶದಿಂದ ಕಂಡ ಕಂಡ ಕಾರುಗಳ ಗಾಜುಗಳನ್ನು ಪುಡಿ ಮಾಡುತ್ತಿದ್ದರು. ಆರೋಪಿಗಳು ಈಗಾಗಲೇ ಮನೆ ಬಿಟ್ಟು ಹೊರ ಬಂದಿದ್ದು, ಅವರ ಪೋಷಕರು ಸಹ ಮಕ್ಕಳಿಂದ ಕಿರಿಕಿರಿಯಾಗುತ್ತಿದೆ. ಇವರಿಂದ ಮುಕ್ತಿ ಕೊಡಿಸಿ ಎಂದು ಪೊಲೀಸರಲ್ಲಿ ಮನವಿ ಮಾಡಿದ್ದಾರೆ.

    ಇತ್ತೀಚೆಗೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಸಿಡಿಹೊಸಕೋಟೆ ಗ್ರಾಮದಲ್ಲಿ 20 ಜನ ಯುವಕರ ತಂಡವೊಂದು ರಾತ್ರಿ ವೇಳೆ ಗ್ರಾಮಕ್ಕೆ ನುಗ್ಗಿ ಮನೆಯ ಬಳಿ ನಿಲ್ಲಿಸಿದ್ದ ಕಾರುಗಳ ಗಾಜುಗಳನ್ನು ಪುಡಿ ಪುಡಿ ಮಾಡಿತ್ತು. ಇದನ್ನು ಪ್ರಶ್ನಿಸಿದ ಗ್ರಾಮಸ್ಥರ ಮೇಲೆಯೇ ಲಾಂಗ್ ಮಚ್ಚುಗಳಿಂದ ಹಲ್ಲೆ ನಡೆಸಿದ್ದರು.

    ಮಧ್ಯರಾತ್ರಿ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಶ್ರೀರಾಮ ಎಂಬವರ ಮನೆ ಬಳಿ ನಿಲ್ಲಿಸಿದ್ದ ಕಾರಿನ ಗಾಜುಗಳನ್ನು ಯುವಕರು ಜಖಂ ಮಾಡುತ್ತಿದ್ದರು. ಈ ವೇಳೆ ಅಕ್ಕಪಕ್ಕದ ಮನೆಯವರು ಹೊರಗೆ ನೋಡುತ್ತಿದ್ದಂತೆ ಅವರ ಮೇಲೆಯೂ ಯುವಕರು ಲಾಂಗು, ಮಚ್ಚು ಹಾಗು ಚಾಕುಗಳಿಂದ ಹಲ್ಲೆ ನಡೆಸಿದ್ದರು.

    ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಶ್ರೀರಾಮ ಮನೆಯಲ್ಲಿದ್ದ ಪಿಸ್ತೂಲಿನಿಂದ ಗಾಳಿಯಲ್ಲಿ ಮೂರಕ್ಕೂ ಹೆಚ್ಚು ಬಾರಿ ಗುಂಡು ಹಾರಿಸಿದ್ದು, ಇದರಿಂದ ಭಯಭೀತರಾದ ಯುವಕರು ಅಲ್ಲಿಂದ ಪರಾರಿಯಾಗಿದ್ದರು. ರಾತ್ರಿ 10 ಗಂಟೆಯ ಸಮಯದಲ್ಲಿ ಘಟನೆ ನಡೆದಿದ್ದರಿಂದ ಗ್ರಾಮದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿತ್ತು.

  • 40 ವರ್ಷದಿಂದ ಗಾಜನ್ನು ತಿನ್ನುತ್ತಿದ್ದಾರೆ ವಕೀಲ

    40 ವರ್ಷದಿಂದ ಗಾಜನ್ನು ತಿನ್ನುತ್ತಿದ್ದಾರೆ ವಕೀಲ

    ಭೋಪಾಲ್: ಚಿತ್ರ ವಿಚಿತ್ರ ಹವ್ಯಾಸಗಳನ್ನು ರೂಢಿಸಿಕೊಂಡವರನ್ನು ಜಗತ್ತಿನಲ್ಲಿ ಇರುತ್ತಾರೆ. ಅವರ ಸಾಲಿಗೆ ಮಧ್ಯಪ್ರದೇಶದ ವಕೀಲರೊಬ್ಬರು ಸೇರಿದ್ದು, ಅವರಿಗೆ ಗಾಜಿನ ಚೂರು ತಿನ್ನುವ ವಿಚಿತ್ರ ಹವ್ಯಾಸವಿದೆ.

    ಮಧ್ಯಪ್ರದೇಶದ ವಕೀಲ ದಯಾರಾಮ್ ಸಾಹು ಕಳೆದ 40 ರಿಂದ 45 ವರ್ಷಗಳಿಂದ ಗಾಜಿನ ಚೂರುಗಳನ್ನು ತಿನ್ನುತ್ತಿದ್ದಾರೆ. ಅವರು ಗಾಜುಗಳ ಚೂರುಗಳನ್ನು ತಿನ್ನುತ್ತಿರುವ ವಿಡಿಯೋ ಎಲ್ಲರನ್ನು ನಿಬ್ಬೆರಗಾಗಿಸಿದೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಈ ಬಗ್ಗೆ ದಯಾರಾಮ್ ಮಾತನಾಡಿ, ನನಗೆ ಇದು ಹವ್ಯಾಸವಾಗಿ ಬಿಟ್ಟಿದೆ. ಇದರಿಂದ ನನ್ನ ಹಲ್ಲುಗಳು ಗಾಯವಾಗಿವೆ. ಇತ್ತೀಚೆಗೆ ಗಾಜು ತಿನ್ನುವುದು ಕಡಿಮೆ ಮಾಡಿದ್ದೇನೆ. ಇದನ್ನು ಯಾರು ಮಾಡಬೇಡಿ. ಇದು ಆರೋಗ್ಯಕ್ಕೆ ಹಾನಿಕಾರಕ, ಯಾರು ಇಂತಹ ಹವ್ಯಾಸ ರೂಢಿಸಿಕೊಳ್ಳಬೇಡಿ ಎಂದು ಮನವಿ ಮಾಡಿದ್ದಾರೆ.

    ಗಾಜು ತಿನ್ನುವುದರಿಂದ ಮನುಷ್ಯನ ಒಳಗಿನ ಎಲ್ಲಾ ಭಾಗಗಳು ಹಾನಿಗೊಳಗಾಗುತ್ತವೆ. ಆದ್ದರಿಂದ ಈ ರೀತಿ ಯಾರು ಗಾಜನ್ನು ತಿಂದು ಜೀವಕ್ಕೆ ಕುತ್ತು ತಂದುಕೊಳ್ಳಬೇಡಿ ಎಂದು ವೈದ್ಯರು ಪ್ರತಿಕ್ರಿಯಿಸಿದ್ದಾರೆ.

    ಈ ಹಿಂದೆ ಹಿಮಾಚಲ್ ಪ್ರದೇಶದ ವ್ಯಕ್ತಿಯೊಬ್ಬನ ಹೊಟ್ಟೆಯಲ್ಲಿ ವೈದ್ಯರು 8 ಚಮಚ, 2 ಸ್ಕ್ರೂ ಡ್ರೈವರ್, 2 ಟೂತ್‍ಬ್ರೆಶ್, ಚಾಕು ಹಾಗೂ ಇತರೇ ವಸ್ತುಗಳನ್ನು ಹೊರತೆಗೆದಿದ್ದರು. ಈ ವಿಚಾರ ಎಲ್ಲೆಡೆ ವೈರಲ್ ಆಗಿ ಭಾರೀ ಸುದ್ದಿಯಾಗಿತ್ತು.

  • ಕೆಮಿಕಲ್ ಬಳಸಿ ಕಾರಿನ ಗ್ಲಾಸ್ ಒಡೆದು ಹಣ ಎಗರಿಸಿದ ಖತರ್ನಾಕ್ ಕಳ್ಳರು

    ಕೆಮಿಕಲ್ ಬಳಸಿ ಕಾರಿನ ಗ್ಲಾಸ್ ಒಡೆದು ಹಣ ಎಗರಿಸಿದ ಖತರ್ನಾಕ್ ಕಳ್ಳರು

    ಹಾವೇರಿ: ಕಚೇರಿ ಒಳಗಡೆ ಹೋಗಿ ಬರುವಷ್ಟರಲ್ಲಿ ಕಾರಿನಲ್ಲಿದ್ದ ಹಣ ಎಗರಿಸಿದ ಚೋರರು ಪರಾರಿಯಾದ ಘಟನೆ ಹಾವೇರಿ ನಗರದ ಹಳೆ ಜಿಲ್ಲಾ ಪಂಚಾಯ್ತಿ ಕಚೇರಿ ಆವರಣದಲ್ಲಿ ನಡೆದಿದೆ.

    ಗುತ್ತಿಗೆದಾರ ರಾಜಶೇಖರ್ ಮಾದರ ಎಂಬುವರಿಗೆ ಸೇರಿದ ಕಾರಿನ ಗ್ಲಾಸ್ ಒಡೆದು ಕಳ್ಳತನ ಮಾಡಿರುವ ಕಳ್ಳರು, ಕಾರಿನಲ್ಲಿದ್ದ 80 ಸಾವಿರ ರುಪಾಯಿ ಹಣ ದೋಚಿ ಪರಾರಿಯಾಗಿದ್ದಾರೆ.

    ರಾಜಶೇಖರ್ ಬ್ಯಾಂಕ್ ಆಫ್ ಬರೋಡಾದಲ್ಲಿ 2 ಲಕ್ಷ ರೂಪಾಯಿ ಡ್ರಾ ಮಾಡಿಕೊಂಡು ಒಬ್ಬರಿಗೆ 1.20 ಲಕ್ಷ ಇಪ್ಪತ್ತು ಸಾವಿರ ನೀಡಿ ಉಳಿದ ಹಣವನ್ನು ಕಾರಿನಲ್ಲಿ ಇಟ್ಟುಕೊಂಡಿದ್ದರು. ಜಿಲ್ಲಾಪಂಚಾಯಿತ್ ಕಟ್ಟಡಕ್ಕೆ ಆಗಮಿಸಿದ ಬಳಿಕ ಕೆಲಸಕ್ಕೆ ಎಂದು ಒಳ ಪ್ರವೇಶಿಸಿದ್ದಾರೆ.

    ಈ ವೇಳೆ ಕೆಮಿಕಲ್ ಬಳಸಿ ಕಾರಿನ ಗ್ಲಾಸ್ ಒಡೆದ ಕಳ್ಳರು ಹಾಡಹಗಲೇ ಹಣ ದೋಚಿ ಪರಾರಿಯಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹಾವೇರಿ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಹಾವೇರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ. ನಗರದಲ್ಲಿರೋ ಸಿಸಿಟಿವಿ ಸರಿಪಡಿಸಬೇಕು. ಇಲ್ಲ ಎಂದರೆ ಈ ರೀತಿಯ ಪ್ರಕರಣಗಳು ಹೆಚ್ಚಾಗುತ್ತವೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

  • ಬೆಂಗ್ಳೂರಲ್ಲಿ ಮತ್ತೆ ಗುಂಡಿನ ಸದ್ದು – ಇಬ್ಬರು ಪುಂಡರ ಕಾಲು ಸೀಳ್ತು ಪೊಲೀಸರ ರಿವಾಲ್ವರ್!

    ಬೆಂಗ್ಳೂರಲ್ಲಿ ಮತ್ತೆ ಗುಂಡಿನ ಸದ್ದು – ಇಬ್ಬರು ಪುಂಡರ ಕಾಲು ಸೀಳ್ತು ಪೊಲೀಸರ ರಿವಾಲ್ವರ್!

    ಬೆಂಗಳೂರು: ಕಳೆದ ಎರಡು ದಿನಗಳ ಅಂತರದಲ್ಲಿ ಬೆಂಗಳೂರಲ್ಲಿ ಮತ್ತೆ ಪೊಲೀಸರ ಗುಂಡಿನ ಸದ್ದು ಕೇಳಿಬಂದಿದೆ. ಇದೀಗ ಪೊಲೀಸರ ರಿವಾಲ್ವರ್ ರಫಿ ಮತ್ತು ಸುಧಾಕರ್ ಅನ್ನೋ ಇಬ್ಬರು ಪುಂಡರ ಕಾಲು ಸೀಳಿದೆ.

    ಮನೆ ಮುಂದೆ ನಿಲ್ಲಿಸಿದ್ದ ವಾಹನಗಳ ಗಾಜುಗಳನ್ನು ಕಳೆದ ವಾರ ಪುಡಿ ಪುಡಿ ಮಾಡಿದ್ದ ಇವರಿಬ್ಬರು ರಾಜಗೋಪಾಲನಗರದ ಕರೀಂ ಸಾಬ್ ಲೇಔಟ್‍ನಲ್ಲಿ ಕಾರ್‍ನಲ್ಲಿ ಹೋಗ್ತಿದ್ದರು. ಈ ಕುರಿತು ಖಚಿತ ಮಾಹಿತಿ ಪಡೆದ ಪೊಲೀಸರು ನಸುಕಿನ ಜಾವ ದಾಳಿ ನಡೆಸಿದ್ದಾರೆ. ಈ ವೇಳೆ ಶರಣಾಗುವ ಬದಲು ಪೊಲೀಸರ ಮೇಲೆಯೇ ಪುಂಡರು ದಾಳಿ ನಡೆಸಿದ್ದಾರೆ.

    ಆಗ ಮಹಾಲಕ್ಷ್ಮಿ ಲೇಔಟ್ ಇನ್ಸ್ ಪೆಕ್ಟರ್ ಲೋಹಿತ್, ತಮ್ಮ ಆತ್ಮರಕ್ಷಣೆಗಾಗಿ ಆರೋಪಿಗಳ ಮೇಲೆ ಗುಂಡು ಹಾರಿಸಿದ್ದಾರೆ. ರಫಿಯ ಬಲಗಾಲು ಮತ್ತು ಸುಧಾಕರ್ ಎಡಗಾಲಿಗೆ ಲೋಹಿತ್ ಗುಂಡಿಕ್ಕಿದ್ರು. ಇನ್ನು ಘಟನೆಯಲ್ಲಿ ಮುಖ್ಯ ಪೇದೆ ಹನುಮಂತರಾಜು ಮತ್ತು ಶ್ರೀನಿವಾಸ್‍ಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

    ಎರಡು ದಿನಗಳ ಹಿಂದಷ್ಟೇ ಸರಗಳ್ಳ ಅಚ್ಯುತ್ ಕಾಲಿಗೆ ಪೊಲೀಸರು ಗುಂಡಿಕ್ಕಿದ್ದರು. ಇದನ್ನೂ ಓದಿ: 150 ಕೇಸ್ ನಲ್ಲಿ ಬೇಕಾಗಿದ್ದ ಆರೋಪಿಗೆ ಶೂಟ್, ಅರೆಸ್ಟ್ – ಡಿಸಿಪಿ ರವಿ ಡಿ.ಚನ್ನಣ್ಣನವರಿಂದ ತಂಡಕ್ಕೆ ಬಹುಮಾನ ಘೋಷಣೆ