Tag: Girl Friend

  • 100 ಸಾಕ್ಷ್ಯಗಳೊಂದಿಗೆ 3 ಸಾವಿರ ಪುಟಗಳ ಚಾರ್ಜ್‌ಶೀಟ್‌ ಸಿದ್ಧಪಡಿಸಿದ ದೆಹಲಿ ಪೊಲೀಸರು

    100 ಸಾಕ್ಷ್ಯಗಳೊಂದಿಗೆ 3 ಸಾವಿರ ಪುಟಗಳ ಚಾರ್ಜ್‌ಶೀಟ್‌ ಸಿದ್ಧಪಡಿಸಿದ ದೆಹಲಿ ಪೊಲೀಸರು

    ನವದೆಹಲಿ: ಶ್ರದ್ಧಾವಾಕರ್ ಹತ್ಯೆ ಪ್ರಕರಣಕ್ಕೆ (Shraddha Walkar Murder Case) ಸಂಬಂಧಿಸಿದಂತೆ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿರುವ ದೆಹಲಿ ಪೊಲೀಸರು (Delhi Police) 100 ಸಾಕ್ಷ್ಯಗಳೊಂದಿಗೆ 3 ಸಾವಿರ ಪುಟಗಳ ಚಾರ್ಜ್‌ಶೀಟ್ ಕರಡನ್ನು ಸಿದ್ಧಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

    3000 ಸಾವಿರ ಪುಟಗಳ ಚಾರ್ಜ್‌ಶೀಟ್ ಕರಡಿನೊಂದಿಗೆ ವಿಧಿವಿಜ್ಞಾನ (Forensic) ಹಾಗೂ ತಾಂತ್ರಿಕ 100 ಸಾಕ್ಷ್ಯಗಳನ್ನು ಒಳಗೊಂಡ ಅಂತಿಮ ದೋಷಾರೋಪ ಪಟ್ಟಿ ಸಿದ್ಧಪಡಿಸಲಾಗಿದೆ. ಅದನ್ನು ಕಾನೂನು ತಜ್ಞರು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಶ್ರದ್ಧಾಳನ್ನ ಕೊಂದು ಗೆಳತಿಯೊಂದಿಗೆ ಸೆಕ್ಸ್- ಡಾಕ್ಟರ್ ಜೊತೆ ಡೇಟಿಂಗ್ ಮಾಡ್ತಿದ್ದ ಅಫ್ತಾಬ್

    ಏನಿದು ಘಟನೆ?
    ತನ್ನೊಂದಿಗೆ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ (Live In Relationship) ಗೆಳತಿ ಶ್ರದ್ಧಾವಾಕರ್ ಹತ್ಯೆ ನಡೆಸಿ, ದೇಹವನ್ನು 35 ತುಂಡುಗಳನ್ನಾಗಿ ಮಾಡಿ, ಅದನ್ನು ಫ್ರಿಡ್ಜ್‌ನಲ್ಲಿಟ್ಟಿದ್ದ. ಆನಂತರ ಬೇರೆ ಬೇರೆ ಪ್ರದೇಶಗಳಲ್ಲಿ ದೇಹದ ಭಾಗಗಳನ್ನು ಹೂತು ಹಾಕಿದ್ದ ಘಟನೆ ದೆಹಲಿಯಲ್ಲಿ ಬೆಳಕಿಗೆ ಬಂದಿತ್ತು. ಈ ಅಮಾನುಷ ಕೃತ್ಯ ಎಸಗಿದ 5 ತಿಂಗಳ ಬಳಿಕ (2022ರ ನವೆಂಬರ್ 12ರಂದು) ಕೊಲೆ ಆರೋಪಿ ಅಫ್ತಾಬ್ ಅಮೀನ್ ಪೂನಾವಾಲಾನನ್ನ (Aftab Amin Poonawala) ಪೊಲೀಸರು ಬಂಧಿಸಿದ್ದರು.

    ಈ ತನಿಖೆಯಲ್ಲಿ ಛತ್ತರ್‌ಪುರದ ಅರಣ್ಯ ಪ್ರದೇಶದಲ್ಲಿ ಪತ್ತೆಯಾದ ಮೂಳೆಗಳು ಶ್ರದ್ಧಾವಾಕರ್ ದೇಹದ್ದೇ ಎಂದು ಡಿಎನ್‌ಎ ವರದಿಗಳು ದೃಢಪಡಿಸಿದೆ. ಅಫ್ತಾಬ್‌ಗೆ ಮಂಪರು ಪರೀಕ್ಷೆ ಸಹ ನಡೆಸಲಾಗಿತ್ತು. ಈ ವೇಳೆ ತಾನೇ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದನು. ಆದ್ರೆ ಪ್ರಾಸಿಕ್ಯೂಷನ್ ದೃಷ್ಟಿಕೋನದಿಂದ ತಪ್ಪೊಪ್ಪಿಗೆಯೊಂದೆ ಅಪರಾಧ ನಿರ್ಣಯಕ್ಕೆ ಸಾಕಾಗಲ್ಲ ಎಂದು ಹೇಳಲಾಗಿತ್ತು. ಇದನ್ನೂ ಓದಿ: ಶ್ರದ್ಧಾ ಹತ್ಯೆ ಕೇಸ್ – ಕಾಡಿನಲ್ಲಿ ದೊರೆತ ಮೂಳೆಗಳು ತಂದೆಯ ಡಿಎನ್‌ಎಗೆ ಮ್ಯಾಚ್

    2022ರಲ್ಲಿ ಘಟನೆ ನಡೆದ ಬಳಿಕ ತನಿಖೆ ಚುರುಕುಗೊಳಿಸಿದ ದೆಹಲಿ ಪೊಲೀಸರು ಕೊಲೆಗೆ ಬಳಸಿದ್ದ ಗರಗಸ, ಚಾಕುಗಳು ಮತ್ತು ಇತರ ಸಾಧನಗಳನ್ನ ವಶಪಡಿಸಿಕೊಳ್ಳಲಾಗಿದೆ. ಈ ಎಲ್ಲ ಅಂಶಗಳನ್ನು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಗೆಳತಿಗೆ ಹತ್ತಿರವಾಗಿದ್ದ ಹುಡುಗನ ವಿರುದ್ಧ ಸೇಡು – ಮೋದಿಗೆ ಬೆದರಿಕೆ ಹಾಕಿದ್ದ ಟೆಕ್ಕಿ ಅರೆಸ್ಟ್

    ಗೆಳತಿಗೆ ಹತ್ತಿರವಾಗಿದ್ದ ಹುಡುಗನ ವಿರುದ್ಧ ಸೇಡು – ಮೋದಿಗೆ ಬೆದರಿಕೆ ಹಾಕಿದ್ದ ಟೆಕ್ಕಿ ಅರೆಸ್ಟ್

    ಗಾಂಧೀನಗರ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೆದರಿಕೆ ಇಮೇಲ್ ಕಳುಹಿಸಿದ್ದ ಆರೋಪದ ಮೇರೆಗೆ ಉತ್ತರ ಪ್ರದೇಶದ ಬದೌನ್‍ನ ಯುವಕನನ್ನು ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಬಂಧಿಸಿದೆ.

    ಬದೌನ್‍ನ ಆದರ್ಶನಗರದ ನಿವಾಸಿ ಅಮನ್ ಸಕ್ಸೇನಾ (25) ಬಂಧಿತ ಆರೋಪಿ. ಈತ ಸೋಮವಾರ ಜಾಮ್‍ನಗರದಲ್ಲಿ ನಡೆದ ರ್ಯಾಲಿಯಲ್ಲಿ ಮೋದಿ ಅವರಿಗೆ ಜೀವ ಬೆದರಿಕೆಯ ಇಮೇಲ್ ಕಳುಹಿಸಿದ್ದ. ಸಕ್ಸೇನಾ ಮುಂಬೈನ ಐಐಟಿಯಲ್ಲಿ ಬಿಟೆಕ್ ಪದವಿ ಪಡೆದಿದ್ದು, ಪ್ರೀತಿಸಿದ್ದ ಹುಡುಗಿಗೆ (Girl Friend) ಹತ್ತಿರವಾಗಿದ್ದ ವ್ಯಕ್ತಿಯಿಂದ ಸೇಡು ತೀರಿಸಿಕೊಳ್ಳಲು ಆ ಇಮೇಲ್ (E Mail) ಕಳುಹಿಸಿದ್ದನು.

    ಘಟನೆಯೇನು?: ಪ್ರಧಾನಿ ನರೇಂದ್ರ ಮೋದಿ ಅವರ ಇಮೇಲ್‍ಗೆ ಬಂದಿದ್ದ ಜೀವ ಬೆದರಿಕೆ ಮೇಲ್ ಬಂದಿದ್ದನ್ನು ನೋಡಿದ್ದ ಪಿಎಂಒ (ಪ್ರಧಾನಿ ಕಚೇರಿ) ಘಟನೆಗೆ ಸಂಬಂಧಿಸಿ ತನಿಖೆ ನಡೆಸಲು ಗುಜರಾತ್ ಎಟಿಎಸ್‍ಗೆ ವಹಿಸಿತ್ತು. ಈ ಹಿನ್ನೆಲೆಯಲ್ಲಿ ಎಟಿಎಸ್ ವಿಚಾರಣೆಯನ್ನು ಪ್ರಾರಂಭಿಸಿತ್ತು. ಈ ವೇಳೆ ಬದೌನ್‍ನ ಆದರ್ಶನಗರದ ನಿವಾಸಿಯಿಂದ ಈ ಮೇಲ್ ಬಂದಿದೆ ಎಂದು ಪತ್ತೆ ಹಚ್ಚಿದ್ದಾರೆ. ಅದಾದ ಬಳಿಕ ತನಿಖೆಯನ್ನು ಮುಂದುವರಿಸಿದ ಎಟಿಎಸ್ ತಂಡ ಅಮನ್ ಸಕ್ಸೇನಾನನ್ನು ವಶಕ್ಕೆ ಪಡೆದಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ಕ್ಷೇತ್ರದಲ್ಲಿ ರಮೇಶ್ ಜಾರಕಿಹೊಳಿ ಫುಲ್ ಆಕ್ಟೀವ್

    ಈ ವೇಳೆ ಎಟಿಎಸ್ ಅಮನ್ ಸಕ್ಸೇನಾನನ್ನು ತೀವ್ರವಾಗಿ ವಿಚಾರಣೆ ನಡೆಸಿದೆ. ಈ ವೇಳೆ ಅಮನ್ ಸಕ್ಸೇನಾ ಮಾತನಾಡಿ, ತಾನು ಪ್ರೀತಿಸಿದ್ದ ಹುಡುಗಿಗೆ ಮತ್ತೊಬ್ಬ ಹುಡುಗ ಹತ್ತಿರವಾಗಿದ್ದ. ಇದರಿಂದಾಗಿ ಅವನ ವಿರುದ್ಧ ಸೇಡು ತೀರಿಸಿಕೊಳ್ಳಲು ಆತನ ಹೆಸರಲ್ಲಿ ಪ್ರಧಾನಿ ಮೋದಿ ಅವರಿಗೆ ಜೀವ ಬೆದರಿಕೆಯ ಮೇಲ್ ಅನ್ನು ಕಳುಹಿಸಿರುವುದಾಗಿ ಬಹಿರಂಗ ಪಡಿಸಿದ್ದಾನೆ. ಈ ಮೂಲಕ ಹುಡುಗಿಗೆ ಹತ್ತಿರವಾಗಿದ್ದ ವ್ಯಕ್ತಿಯನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲು ಪ್ರಯತ್ನಿಸಿದ್ದ ಎಂಬುದು ಬೆಳಕಿಗೆ ಬಂದಿದೆ. ಕರ್ನಾಟಕದ ಒಂದಿಂಚೂ ಜಾಗ ಮಹಾರಾಷ್ಟ್ರಕ್ಕೆ ಹೋಗೋದಿಲ್ಲ: ಜೋಶಿ

    Live Tv
    [brid partner=56869869 player=32851 video=960834 autoplay=true]

  • ಕೈಕೊಟ್ಟ ಲವರ್‌ಗೆ ಠಕ್ಕರ್ ಕೊಡಲು ಆಕೆಯ ಮೊದಲ ಅಕ್ಷರ ಬಳಸಿ ಚಹಾ ಅಂಗಡಿ ತೆರೆದ ಪ್ರೇಮಿ

    ಕೈಕೊಟ್ಟ ಲವರ್‌ಗೆ ಠಕ್ಕರ್ ಕೊಡಲು ಆಕೆಯ ಮೊದಲ ಅಕ್ಷರ ಬಳಸಿ ಚಹಾ ಅಂಗಡಿ ತೆರೆದ ಪ್ರೇಮಿ

    ಭೋಪಾಲ್: ಲವರ್ (Girl Friend) ಕೈಕೊಟ್ಟಿದ್ದಕ್ಕೆ ಆ ದ್ವೇಷ ತೀರಿಸಿಕೊಳ್ಳಲು ಯುವಕನೊಬ್ಬ ಚಾಯ್ ಅಂಗಡಿ ತೆಗೆದು ಎಂ ಬೇವಾಫಾ ಚಾಯ್‍ವಾಲಾ ಎಂದು ಹೆಸರಿಟ್ಟ ವಿಚಿತ್ರ ಘಟನೆ ಮಧ್ಯಪ್ರದೇಶದ (Madhya Pradesh) ರಾಜ್‍ಗಢ್‍ನಲ್ಲಿ ನಡೆದಿದೆ.

    ಅಂತರ್ ಗುಜ್ಜಾರ್ ಎಂಬಾತ ತನ್ನ ಮಾಜಿ ಪ್ರೇಯಸಿಯು ತನಗೆ ದ್ರೋಹ ಬಗೆದಿದ್ದಾಳೆ ಎಂಬ ಸಿಟ್ಟಿನಿಂದ ಖಲ್ಚಿಪುರ್ ನಗರದ ಬಸ್ ನಿಲ್ದಾಣದ ಬಳಿ ಚಹಾದ ಅಂಗಡಿಯನ್ನು ತೆರೆದಿದ್ದಾನೆ. ಅದಕ್ಕೆ ಎಂ ಬೇವಾಫಾ ಚಾಯ್‍ವಾಲ್ (M Bewafa Chaiwala) ಎಂದು ಹೆಸರಿಟ್ಟಿದ್ದಾನೆ. ಎಂ ಎಂದರೆ ಅಂತರ್‌ನ ಮಾಜಿ ಪ್ರೇಯಸಿಯ ಹೆಸರಿನ ಮೊದಲ ಅಕ್ಷರವಾಗಿದೆ. ಬೇವಫಾ ಎಂದರೆ ವಿಶ್ವಾಸದ್ರೋಹ ಎಂದಾಗಿದ್ದು, ʼಎಂ ವಿಶ್ವಾಸದ್ರೋಹಿ ಚಹಾದ ಅಂಗಡಿʼ ಎಂಬುದು ಕನ್ನಡದಲ್ಲಿ ಅಂಗಡಿಯ ಹೆಸರಾಗಿದೆ.

    ಅಂತರ್‌ಗೆ ಐದು ವರ್ಷಗಳ ಹಿಂದೆ ಸಂಬಂಧಿಕರೊಬ್ಬರ ಮದುವೆಯಲ್ಲಿ ಹುಡುಗಿಯೊಬ್ಬಳ ಪರಿಚಯವಾಗಿತ್ತು. ಅದಾದ ಬಳಿಕ ಅವರಿಬ್ಬರು ಸ್ನೇಹಿತರಾಗಿದ್ದು, ಆ ಸ್ನೇಹವೇ ಮುಂದೆ ಪ್ರೀತಿಗೆ ತಿರುಗಿತ್ತು. ಸುಮಾರು 2 ವರ್ಷಗಳ ಕಾಲ ಸಂಬಂಧದಲ್ಲಿದ್ದರಿಂದ ಅಂತರ್ ಆ ಹುಡುಗಿಯ ಬಳಿ ಮದುವೆ (Marriage) ಪ್ರಸ್ತಾಪವನ್ನು ಇಟ್ಟಿದ್ದಾನೆ. ಆದರೆ ಆಕೆ ಆ ಪ್ರಸ್ತಾಪವನ್ನು ತಿರಸ್ಕರಿಸಿ ಇನ್ನೊಬ್ಬ ಹುಡುಗನೊಂದಿಗೆ ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದಳು. ಅಷ್ಟೇ ಅಲ್ಲದೇ ಅಂತರ್‌ನಿಗೆ ನೀನು ನಿರುದ್ಯೋಗಿ, ನನ್ನ ವರನ ಬಳಿ ಎಲ್ಲವೂ ಇದೆ ಎಂದು ಹೇಳಿ ಅಂತರ್ ಅನ್ನು ಹೀಯಾಳಿಸಿ ಆತನೊಂದಿಗೆ ಮಾತನಾಡುವುದನ್ನು ನಿಲ್ಲಿಸಿದ್ದಳು.

    ಇದಾದ ಬಳಿಕ ಪ್ರೇಯಸಿ ಕೈಕೊಟ್ಟಿದ್ದರಿಂದ ಡಿಪ್ರೆಶನ್‌ಗೆ ಒಳಗಾದ ಅಂತರ್ ಆತ್ಮಹತ್ಯೆಗೆ ಶರಣಾಗಲು ನಿರ್ಧರಿಸಿದ್ದನು. ಆದರೆ ಆತನ ಸ್ನೇಹಿತರು ಧೈರ್ಯದ ಮಾತುಗಳು ಅವರ ಮಾರ್ಗದರ್ಶನವು ಅಂತರ್‌ಗೆ ಡಿಪ್ರೆಶನ್‌ನಿಂದ ಹೊರಬರಲು ಸಾಧ್ಯವಾಯಿತು. ಇದಾದ ನಂತರ ತನ್ನ ಮಾಜಿ ಗೆಳತಿಯ ಮೇಲಿನ ದ್ವೇಷವನ್ನು ತೀರಿಸಿಕೊಳ್ಳಲು ಸಿದ್ಧನಾಗಿ, ಆಕೆಯ ಹೆಸರ ಮೊದಲ ಅಕ್ಷರವನ್ನು ಬಳಸಿಕೊಂಡು ಅವಳನ್ನು ಕೀಟಲೆ ಮಾಡಲು ಚಹಾ ಅಂಗಡಿಯನ್ನು ತೆರೆದಿದ್ದಾನೆ. ಇದನ್ನೂ ಓದಿ: ಶ್ರದ್ಧಾ ಕೊಲೆ ಆಕಸ್ಮಿಕ, ಇದರಲ್ಲಿ ಹೊಸದೇನಿಲ್ಲ- ಅಶೋಕ್ ಗೆಹ್ಲೋಟ್ ವಿವಾದಿತ ಹೇಳಿಕೆಗೆ ಬಿಜೆಪಿ ಕಿಡಿ

    ಈ ಚಾಯ್ ಅಂಗಡಿಯಲ್ಲಿ ಅಂತರ್ ವಿಭಿನ್ನ ರೀತಿಯಲ್ಲಿ ದರ ಫಿಕ್ಸ್ ಮಾಡಿದ್ದಾನೆ. ಈತ ದಂಪತಿ ಬಳಿ ಚಹಾಕ್ಕೆ 10 ರೂ. ತೆಗೆದುಕೊಂಡರೆ, ಇನ್ನೂ ಲವ್ ಫೇಲ್ ಆದವರ ಬಳಿ ಅಥವಾ ಹುಡುಗಿ ಕೈಕೊಟ್ಟವರ ಬಳಿ ಒಂದು ಚಹಾಕ್ಕೆ ಕೇವಲ 5 ರೂ. ತೆಗೆದುಕೊಳ್ಳುತ್ತಿದ್ದಾನೆ. ಇದನ್ನೂ ಓದಿ: ಮಾನ, ಮರ್ಯಾದೆ ಇದ್ದರೆ ಡಿಕೆಶಿ ರಾಜೀನಾಮೆ ನೀಡಲಿ: ಈಶ್ವರಪ್ಪ

    Live Tv
    [brid partner=56869869 player=32851 video=960834 autoplay=true]

  • ಬ್ರೇಕಪ್ ಮಾಡಿದಳೆಂದು ಗರ್ಲ್‍ಫ್ರೆಂಡ್ ಕೊಲೆಗೈದ ವಿವಾಹಿತ!

    ಬ್ರೇಕಪ್ ಮಾಡಿದಳೆಂದು ಗರ್ಲ್‍ಫ್ರೆಂಡ್ ಕೊಲೆಗೈದ ವಿವಾಹಿತ!

    ನವದೆಹಲಿ: ಯುವತಿಯೊಬ್ಬಳನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 29 ವರ್ಷದ ವಿವಾಹಿತನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

    ಆರೋಪಿಯನ್ನು ರೋಹಿತ್ ಗುಪ್ತಾ ಹಾಗೂ ಮೃತ ದುರ್ದೈವಿಯನ್ನು ಸಲ್ಮಾ ಎಂದು ಗುರುತಿಸಲಾಗಿದೆ. ಈತ ಕಿರಾಣಿ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರೆ, ಯುವತಿ ಕರೋಲ್ ಭಾಗ್‍ನಲ್ಲಿ ಬ್ಯೂಟಿ ಪಾರ್ಲರ್ ಒಂದರಲ್ಲಿ ಕೆಲಸ ಮಾಡುತ್ತಿದ್ದಳು.

    ರೋಹಿತ್ ಮೃತ ಯುವತಿ ಜೊತೆ ಸಂಬಂಧ ಹೊಂದಿದ್ದನು. ಆದರೆ ಇದೀಗ ಆಕೆಯ ಜೊತೆಗಿನ ಸಂಬಂಧ ಬೇರ್ಪಟ್ಟಿದೆ. ಹೀಗಾಗಿ ಹತಾಶೆಗೊಂಡ ರೋಹಿತ್ ಯುವತಿಯನ್ನು ಕೊಲೆ ಮಾಡಲು ನಿರ್ಧರಿಸಿದ್ದಾನೆ. ಇದನ್ನೂ ಓದಿ: ಕಣ್ಣಾಮುಚ್ಚಾಲೆ ಆಡುವಾಗ ತಲೆಗೆ ಲಿಫ್ಟ್ ಬಡಿದು ಬಾಲಕಿ ಸಾವು

    ಅಕ್ಟೋಬರ್ 28ರಂದು ಜೆಜೆ ಕಾಲೋನಿಯಲ್ಲಿ ಯುವತಿಯೊಬ್ಬಳು ಸಾವಿಗೀಡಾಗಿರುವ ವಿಚಾರವೊಂದು ಪೊಲೀಸರಿಗೆ ತಿಳಿಯುತ್ತಿದೆ. ಆ ಬಳಿಕ ಘಟನೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ದೌಡಾಯಿಸಿದಾಗ ಶೂಟೌಟ್‍ಗೊಳಗಾದ ಸ್ಥಿತಿಯಲ್ಲಿ ಪತ್ತೆಯಾದಳು. ಕೂಡಲೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅದಾಗಲೇ ಆಕೆ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

    ತಕ್ಷಣವೇ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಇತ್ತ ಆರೋಪಿಗಳ ಪತ್ತೆಗಾಗಿ ಸಿಸಿಟಿವಿ (CCTV) ಕ್ಯಾಮೆರಾಗಳ ಪರಿಶೀಲನೆ ನಡೆಸಲಾಗಿದೆ. ಅಲ್ಲದೆ ವಿವಿಧ ಸ್ಥಳಗಳು ಮತ್ತು ಸಂಭವನೀಯ ಅಡಗುತಾಣಗಳಲ್ಲಿ ದಾಳಿ ನಡೆಸಲಾಯಿತು. ವಿವರವಾದ ತನಿಖೆಯ ನಂತರ, ಆರೋಪಿಯನ್ನು ಸಿವಿಲ್ ಲೈನ್ಸ್ ಪ್ರದೇಶದಲ್ಲಿ ಬಂಧಿಸಲಾಯಿತು. ಇದನ್ನೂ ಓದಿ: ಹಾಸ್ಟೆಲ್‍ನಲ್ಲಿ ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹತ್ಯೆ

    ನಿರಂತರ ವಿಚಾರಣೆಯ ವೇಳೆ, ಅವನು ಸಾವಿಗೀಡಾದ ಯುವತಿಯೊಂದಿಗೆ ಸಂಬಂಧ ಹೊಂದಿದ್ದನೆಂದು ಬಹಿರಂಗಪಡಿಸಿದನು. ಆಕೆ ನನ್ನ ಜೊತೆ ಬ್ರೇಕಪ್ ಮಾಡಿಕೊಂಡಿದ್ದರಿಂದ ಹತಾಶೆಗೊಂಡು ಕೊಲೆ ಮಾಡಲು ನಿರ್ಧರಿಸಿದನು. ಅಪರಾಧ ಎಸಗಿದ ಬಳಿಕ ಬೇರೆ ಬೇರೆ ಹೊಟೇಲ್‍ಗಳಲ್ಲಿ ತಲೆಮರೆಸಿಕೊಂಡಿದ್ದ. ಆತ ಪೊಲೀಸರ ಬಂಧನದಿಂದ ತಪ್ಪಿಸಿಕೊಳ್ಳಲು ಸ್ಥಳ ಬದಲಿಸುತ್ತಿದ್ದನು. ಕೊಲೆಗೆ ಬಳಸಲಾದ ಆಯುಧವನ್ನು ಚರಂಡಿಗೆ ಎಸೆದಿರುವುದಾಗಿ ತಿಳಿದುಬಂದಿದೆ.

    Live Tv
    [brid partner=56869869 player=32851 video=960834 autoplay=true]

  • ಇನ್‌ಸ್ಟಾಗ್ರಾಮ್‌ನ ಸೆಲ್ಫಿ ಫೋಟೋ ತೆಗೆದುಹಾಕು, ಇಲ್ಲಾಂದ್ರೆ ಬ್ರೇಕ್‌ಅಪ್‌ ಆಗು: ಯುವತಿಗೆ ಪ್ರಿಯಕರ ಎಚ್ಚರಿಕೆ

    ಇನ್‌ಸ್ಟಾಗ್ರಾಮ್‌ನ ಸೆಲ್ಫಿ ಫೋಟೋ ತೆಗೆದುಹಾಕು, ಇಲ್ಲಾಂದ್ರೆ ಬ್ರೇಕ್‌ಅಪ್‌ ಆಗು: ಯುವತಿಗೆ ಪ್ರಿಯಕರ ಎಚ್ಚರಿಕೆ

    ನವದೆಹಲಿ: ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿರುವ ಸೆಲ್ಫಿ ಫೋಟೋ ಡಿಲೀಟ್‌ ಮಾಡು. ಇಲ್ಲದಿದ್ದರೆ ಬ್ರೇಕ್‌ ಅಪ್‌ ಆಗೋಣ ಎಂದು ಪ್ರೇಯಸಿಗೆ ಪ್ರಿಯತಮ ವಿಧಿಸಿರುವ ಷರತ್ತಿನ ಸಂದೇಶ ಎಲ್ಲೆಡೆ ವೈರಲ್‌ ಆಗಿದೆ.

    ಈ ಸಂದೇಶದಿಂದಾಗಿ ಕೊನೆಗೂ ಪ್ರೇಮಿಗಳು ದೂರಾಗಿದ್ದಾರೆ. ಮಾಜಿ ಪ್ರಿಯಕರ ತನಗೆ ಷರತ್ತು ವಿಧಿಸಿ ಮಾಡಿದ್ದ ಮೆಸೇಜ್‌ ಅನ್ನು ಯುವತಿ ಶೇರ್‌ ಮಾಡಿಕೊಂಡಿದ್ದಾಳೆ. ಆ ಬಗ್ಗೆ ಕಾಮೆಂಟ್‌ ಕೂಡ ಮಾಡಿದ್ದಾರೆ. ಇದನ್ನೂ ಓದಿ: ಸ್ನೇಹಿತನ ಜೊತೆಗೆ ಹೋಟೆಲ್‍ನಲ್ಲಿ ಉಳಿದಿದ್ದ ಮಹಿಳೆ ಸಾವು- ಗೆಳೆಯ ಸಾಪತ್ತೆ

    ಟೀಸೆ ಎಂಬ ಹೆಸರಿನಲ್ಲಿ ಖಾತೆ ಹೊಂದಿರುವ ಯುವತಿಗೆ ಮಾಜಿ ಪ್ರಿಯಕರ ಮಾಡಿರುವ ಮೆಸೇಜ್‌ನಲ್ಲಿ, ಇನ್‌ಸ್ಟಾ ಸ್ಟೇಟಸ್‌ಗೆ ಹಾಕಿರುವ ಸೆಲ್ಫೀ ಮೆಸೇಜ್‌ ತೆಗೆದುಹಾಕಬೇಕು. ಮುಂದಿನ 5 ನಿಮಿಷಗಳಲ್ಲಿ ನಾನು ಇದನ್ನು ನೋಡಬಾರದು ಎಂದು ಸಮಯವನ್ನೂ ಉಲ್ಲೇಖಿಸಿ ಸಂದೇಶ ಕಳುಹಿಸಿದ್ದಾನೆ.

    ತಾನು ಕೊಟ್ಟಿದ್ದ ಗಡುವು ಮುಗಿದ ನಂತರ ಮತ್ತೊಂದು ಮೆಸೇಜ್‌ನಲ್ಲಿ, ಕೊಟ್ಟಿದ್ದ ಸಮಯ ಮುಗಿಯಿತು. ನಿಮಗೆ ಒಳ್ಳೆಯ ಜೀವನವಿದೆ. ಇನ್ನು ಮುಂದೆ ನೀನು ನನ್ನೊಂದಿಗೆ ಇರಬೇಕಾಗಿಲ್ಲ. ನೀನು ಏನು ಬೇಕಾದರೂ ಮಾಡಬಹುದು ಎಂದು ಬ್ರೇಕ್‌ ಅಪ್‌ ಹೇಳಿದ್ದಾನೆ. ಇದನ್ನೂ ಓದಿ: ಬಾಹುಬಲಿ ಕಟ್ಟಪ್ಪನ ಬಗ್ಗೆ ಪ್ರಭಾಸ್ ಹೇಳಿದ್ದೇನು ಗೊತ್ತಾ?

    ಯೂಫೋರಿಯಾ (ಅತಿಯಾದ ಸಂತೋಷ) ನಾಟಕೀಯವಾಗಿರುತ್ತದೆ ಎಂದು ಜನ ಹೇಳುತ್ತಾರೆ. ಆದರೆ ನಾನು ಈಗ ಅದನ್ನು ಅನುಭವಿಸಿದ್ದೇನೆ ಎಂದು ಪ್ರಿಯಕರನ ಸಂದೇಶಕ್ಕೆ ಯುವತಿ ವೀಡಿಯೋ ಮಾಡಿ ಪ್ರತಿಕ್ರಿಯಿಸಿದ್ದಾಳೆ. ಇದು ಎಲ್ಲೆಡೆ ವೈರಲ್‌ ಆಗಿದೆ.

    ಇದಕ್ಕೆ ಅನೇಕರು ಕಾಮೆಂಟ್‌ಗಳನ್ನು ಕೂಡ ಮಾಡಿದ್ದಾರೆ. ಆ ಚಿತ್ರದಲ್ಲಿ ಏನು ತಪ್ಪಾಗಿದೆ ಎಂದು ಒಬ್ಬರು ಪ್ರಶ್ನಿಸಿದರೆ. ಅದು ಅವನಲ್ಲಿ ಮುಜುಗರ ಉಂಟುಮಾಡಿದೆ ಎಂದು ಮತ್ತೊಬ್ಬರು ಕಾಮೆಂಟ್‌ ಮಾಡಿದ್ದಾರೆ. ಇದನ್ನೂ ಓದಿ: ಅವಧಿಗೂ ಮುನ್ನವೇ ರಾಜ್ಯದಲ್ಲಿ ಚುನಾವಣೆ ಬರುವ ಸಾಧ್ಯತೆ: ಹೆಚ್‍ಡಿಕೆ

  • 3 ವರ್ಷದಿಂದ ಗೆಳತಿ ನೋಡಲು ಸಾಧ್ಯವಾಗಿಲ್ಲ ಎಂದು ಪ್ರಾಣ ಬಿಟ್ಟ ಪ್ರಿಯಕರ

    3 ವರ್ಷದಿಂದ ಗೆಳತಿ ನೋಡಲು ಸಾಧ್ಯವಾಗಿಲ್ಲ ಎಂದು ಪ್ರಾಣ ಬಿಟ್ಟ ಪ್ರಿಯಕರ

    ಹೈದರಾಬಾದ್: ಕೊರೊನಾ ಕಾರಣದಿಂದ ಗೆಳತಿಯನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ. ನ್ಯೂ ಇಯರ್‌ಗೆ ಗೆಳತಿ ನೋಡಲು ಹೋಗಲು ಸಾಧ್ಯವಾಗದ ಕಾರಣ ಮನನೊಂದ ಪ್ರಿಯಕರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್‍ನಲ್ಲಿ ನಡೆದಿದೆ.

    ವಿನೀತ್(22) ಮೃತ ಯುವಕ. ಈತ ಉತ್ತರ ಪ್ರದೇಶ ಮೂಲದವನಾಗಿದ್ದಾನೆ. ಸೋಂಕು ಹೆಚ್ಚಾಗಿರುವ ಕಾರಣ ಪ್ರಿಯತಮೆಯನ್ನು ನೋಡಲು ಸಾಧ್ಯವಾಗುತ್ತಿಲ್ಲ ಎನ್ನುವ ವಿಚಾರವಾಗಿ ಬೇಸರಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಈ ಸಂಬಂಧ ಪಹದಿ ಶರೀಫ್ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಬಸ್ ಅಪಘಾತದಲ್ಲಿ 22 ಮಂದಿ ಸಾವಿಗೆ ಕಾರಣನಾದ ಚಾಲಕನಿಗೆ 190 ವರ್ಷ ಜೈಲು ಶಿಕ್ಷೆ

    ಶ್ರೀನಗರ ಕಾಲೋನಿಯ ಹೋಟೆಲ್‍ವೊಂದರಲ್ಲಿ ಕೆಲಸಕ್ಕೆ ಸೇರಿದ್ದ ವಿನೀತ್ ಅದೇ ಪ್ರದೇಶದಲ್ಲೇ ವಾಸವಾಗಿದ್ದ. ಹುಟ್ಟೂರಾದ ಉತ್ತರ ಪ್ರದೇಶದಲ್ಲಿ ವಿನೀತ್ ಯುವತಿಯನ್ನು ಪ್ರೀತಿಸಿ ಮದುವೆ ಆಗುವುದಾಗಿ ಹೇಳಿದ್ದ. ಒಳ್ಳೆ ಜೀವನ ನಡೆಸಲು ಹೆಚ್ಚಿನ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಕೆಲಸವನ್ನು ಹುಡುಕಿಕೊಂಡು ಹೈದರಾಬಾದ್‍ಗೆ ಬಂದಿದ್ದ. ಇದನ್ನೂ ಓದಿ: ಪಾಕ್ ಪ್ರಧಾನಿ, ಮಾಜಿ ಪತ್ನಿಯ ಕಾರಿನ ಮೇಲೆ ಗುಂಡಿನ ದಾಳಿ

    ವಿನೀತ್ ನಗರಕ್ಕೆ ಬಂದ ಮೊದಲ ವರ್ಷವೇ ಕೋವಿಡ್ ಲಾಕ್‍ಡೌನ್‍ನಿಂದ ಮತ್ತೆ ಯುಪಿಗೆ ಹೋಗಲು ಸಾಧ್ಯವಾಗಲಿಲ್ಲ. ಕೊರೊನಾ ಸಂಕಷ್ಟದಿಂದ ಸಾಕಷ್ಟು ಹಣದ ಸಮಸ್ಯೆಯನ್ನು ಈತ ಎದುರಿಸಿದ್ದಾನೆ. ಇದರಿಂದಾಗಿ ಊರಿಗೆ ಹೋಗಲು ಆಗಲಿಲ್ಲ. ಪ್ರತಿದಿನ ಕೆಲಸದ ನಂತರ ಗಂಟೆಗಟ್ಟಲೇ ತನ್ನ ಪ್ರೇಯಸಿ ಜೊತೆ ಫೋನಿನಲ್ಲಿ ಮಾತನಾಡುತ್ತಿದ್ದ.

    ಒಂದು ದಿನ ಎಂದಿನಂತೆ ಕೆಲಸ ಮುಗಿಸಿ ಪ್ರೇಯಸಿಗೆ ಫೋನ್ ಮಾಡಿದಾಗ ಆಕೆ ಸಿಟ್ಟಾಗಿದ್ದಾಳೆ. ಮೂರು ವರ್ಷದಿಂದ ಯಾಕೆ ಬಂದಿಲ್ಲ ಎಂದು ಪ್ರಶ್ನಿಸಿದ್ದಾಳೆ. ಅಲ್ಲದೆ ನ್ಯೂ ಇಯರ್‌ಗೆ ಬರುವುದಾಗಿ ಹೇಳಿದ್ದ ವಿನೀತ್ಗೆ ಊರಿಗೆ ಊಗಲು ಸಾಧ್ಯವಾಗಿಲ್ಲ. ಈ ವಿಚಾರವಾಗಿ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

  • ಪ್ರೀತಿಗಾಗಿ ಅಪಹರಣ ನಾಟಕ – ತಂದೆಗೆ 10 ಲಕ್ಷ ಬೇಡಿಕೆ ಇಟ್ಟ ಯುವಕ

    ಪ್ರೀತಿಗಾಗಿ ಅಪಹರಣ ನಾಟಕ – ತಂದೆಗೆ 10 ಲಕ್ಷ ಬೇಡಿಕೆ ಇಟ್ಟ ಯುವಕ

    ಲಕ್ನೋ: ಪ್ರೇಯಸಿ ತಂದೆಯ ಮೇಲೆ ಸುಳ್ಳು ಆಪಾದನೆ ಮಾಡುವ ಸಲುವಾಗಿ ಯುವಕನೊಬ್ಬ ಸ್ನೇಹಿತನೊಂದಿಗೆ ಅಪಹರಣ ನಾಟಕವಾಡಿ ತಾನೇ ಸಮಸ್ಯೆಗೆ ಸಿಲುಕಿಕೊಂಡ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

    ಆರೋಪಿಯನ್ನು ಜಿತೇಂದ್ರ ಕುಮಾರ್ ಎಂದು ಗುರುತಿಸಲಾಗಿದ್ದು, ಈತ ಅಮೇಥಿ ಜಿಲ್ಲೆಯ ನಿವಾಸಿ. ಸುಲ್ತಾನಪುರ ಜಿಲ್ಲೆಯ ಲಂಭುವಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ನವಧನ್ ಗ್ರಾಮದಲ್ಲಿ ತನ್ನ ಅಜ್ಜಿ ಜೊತೆ ವಾಸವಾಗಿದ್ದನು. ಇತ್ತೀಚೆಗಷ್ಟೇ ಸ್ಥಳೀಯ ಕಾರ್ಯಕ್ರಮಗಳಲ್ಲಿ ಗಾಯಕನಾಗಿ ವೃತ್ತಿ ಆರಂಭಿಸಿದ್ದ ಈತ ಸಂಗೀತ ಕಲಿಯುವ ನೆಪ ಹೇಳಿ ಜನವರಿ 23ರಂದು ಮನೆಯಿಂದ ವಾರಣಾಸಿಗೆ ಹೋಗಿದ್ದಾನೆ.

    ಮರುದಿನ ಜಿತೇಂದ್ರ ಕುಮಾರ್ ಮೊಬೈಲ್ ಮೂಲಕ ಆತನ ತಂದೆ ಸುರೇಂದ್ರ ಕುಮಾರ್ ಗೆ ತಮ್ಮ ಮಗನನ್ನು ಅಪಹರಣ ಮಾಡಲಾಗಿದೆ ಎಂಬ ಕರೆ ಬಂದಿದೆ. ಅಲ್ಲದೆ ಆತನನ್ನು ಸುರಕ್ಷಿತವಾಗಿ ವಾಪಸ್ ಕಳುಹಿಸಬೇಕಾದರೆ 10 ಲಕ್ಷ ರೂ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಇದರಿಂದ ಆತಂಕಗೊಂಡ ಸುರೇಂದ್ರ ಕುಮಾರ್ ದಿಕ್ಕುತೋಚದೆ ಪೊಲೀಸರ ಮೊರೆ ಹೋಗಿದ್ದಾರೆ.

    ತನಿಖೆ ವೇಳೆ ಅಪಹರಣಕಾರರು ಜಿತೇಂದ್ರ ಕುಮಾರ್ ಫೋನ್ ಬಳಸಿ ಕರೆ ಮಾಡಿರುವುದನ್ನು ಪತ್ತೆ ಹಚ್ಚಿದ ಪೊಲೀಸರು ಘಟನೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಜನವರಿ 24ರಂದು ಮಧ್ಯರಾತ್ರಿ 2 ಗಂಟೆಗೆ ಜಿತೇಂದ್ರ್ರ ಮೊಬೈಲ್ ನಿಂದ ಸಿಮ್ ಬದಲಿಸಿ ಬೆಳಗ್ಗೆ 8 ಗಂಟೆ ಹೊತ್ತಿಗೆ ಕರೆ ಮಾಡಲಾಗಿದೆ ಎಂದು ಪೊಲೀಸರು ಸುರೇಂದ್ರ ಕುಮಾರ್ ತಿಳಿಸಿದ್ದಾರೆ. ಅಲ್ಲದೆ ಕರೆ ಮಾಡಲು ಬಳಸಿದ್ದ ಸಿಮ್ ಜಿತೇಂದ್ರ ಕುಮಾರ್ ಸ್ನೇಹಿತನ ರವಿ ಹೆಸರು ತೋರಿಸುತ್ತಿದೆ. ಕೊನೆಗೆ ಟ್ರೇಸ್ ಮಾಡಿ ಶಿವಗರದಲ್ಲಿ ಆರೋಪಿಗಳನ್ನು ಪತ್ತೆ ಮಾಡಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

    ನಂತರ ವಿಚಾರಣೆ ವೇಳೆ ಜಿತೇಂದ್ರ ಕುಮಾರ್ ಒಂದು ಹುಡುಗಿಯನ್ನು ಪ್ರೀತಿಸುತ್ತಿದ್ದು, ಆಕೆಯ ತಂದೆ ಪ್ರೀತಿಯನ್ನು ನಿರಾಕರಿಸಿದ ಕಾರಣ ಅವರ ಮೇಲೆ ಸುಳ್ಳು ಆಪಾದನೆ ಮಾಡುವ ಸಲುವಾಗಿ ಅಪಹರಣ ನಾಟಕವಾಡಿರುವುದಾಗಿ ಬಾಯ್ಬಿಟ್ಟಿದ್ದಾನೆ.

  • ಸ್ನೇಹಿತೆಗೆ ದೋಸೆ ತಿನ್ನಿಸುವಾಗ ತಗ್ಲಾಕ್ಕೊಂಡ ಪತಿ – ಪತ್ನಿಯಿಂದ ಕಂಪ್ಲೆಂಟ್

    ಸ್ನೇಹಿತೆಗೆ ದೋಸೆ ತಿನ್ನಿಸುವಾಗ ತಗ್ಲಾಕ್ಕೊಂಡ ಪತಿ – ಪತ್ನಿಯಿಂದ ಕಂಪ್ಲೆಂಟ್

    ಮುಂಬೈ: ವಿವಾಹಿತನೊಬ್ಬ ಕಾರೊನೊಳಗೆ ತನ್ನ ಸ್ನೇಹಿತೆಗೆ ದೋಸೆ ತಿನ್ನಿಸುವ ವೇಳೆ ಪತ್ನಿ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ಅಪರೂಪದ ನಾಟಕೀಯ ದೃಶ್ಯ ಉತ್ತರ ಪ್ರದೇಶದ ಬಂದನಲ್ಲಿ ನಡೆದಿದೆ. ಪತಿಯ ಅನೇಕ ಅಕ್ರಮ ಸಂಬಂಧಗಳಿಗೆ ಬೇಸತ್ತ ಮಹಿಳೆ ಇದೀಗ ಪತಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಮುಂದಾಗಿದ್ದಾಳೆ.

    ಮಹಿಳೆಯ ಪತಿ ಉತ್ತರ ಪ್ರದೇಶದ ಸರ್ಕಾರಿ ಜೂನಿಯರ್ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಆತ ತನ್ನ ಸ್ನೇಹಿತೆಯನ್ನು ದೇವಾಲಯಕ್ಕೆ ಕರೆದುಕೊಂಡು ಹೋಗಿದ್ದಾನೆ. ನಂತರ ಹತ್ತಿರದ ಹೋಟೆಲ್ ನಿಂದ ದೋಸೆ ತೆಗೆದುಕೊಂಡು ಬಂದು ಕಾರಿನೊಳಗೆ ಆಕೆಗೆ ತಿನ್ನಿಸಿದ್ದಾನೆ. ಇದೇ ವೇಳೆ ಮಹಿಳೆ ಸಹೋದರನೊಂದಿಗೆ ಸ್ಥಳಕ್ಕೆ ಹೋದಾಗ ಪತಿ ರೆಡ್ ಹ್ಯಾಂಡ್ ಆಗಿ ಸ್ನೇಹಿತೆಯೊಂದಿಗೆ ಸಿಕ್ಕಿಬಿದ್ದಿದ್ದಾನೆ.

    ಪತಿ ಮಾಡಿದ ದ್ರೋಹಕ್ಕೆ ಕೋಪಗೊಂಡ ಪತ್ನಿ ಮತ್ತು ಆಕೆಯ ಸಹೋದರ ಇಬ್ಬರನ್ನು ಕರೆದುಕೊಂಡು ಪೊಲೀಸ್ ಠಾಣೆಗೆ ಹೋಗಿ ಕಂಪ್ಲೆಂಟ್ ನೀಡಲು ಮುಂದಾಗಿದ್ದಾರೆ. ಆದರೆ ಭಾರತದಲ್ಲಿ ವ್ಯಭಿಚಾರ ಅಪರಾಧವೇನಲ್ಲ ಎಂದು ತಿಳಿಸಿ ಪೊಲೀಸರು ಆತನಿಗೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.

    ತನಿಖೆ ವೇಳೆ ತನ್ನ ಪತಿ ನನಗೆ ಮೊದಲ ಬಾರಿಗೆ ಮೋಸ ಮಾಡುತ್ತಿಲ್ಲ. ಮೊದಲಿನಿಂದಲೂ ಈತ ಅನೇಕ ಮಹಿಳೆಯರ ಜೊತೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಪತಿ ವಿರುದ್ಧ ಮಹಿಳೆ ಆರೋಪಿಸಿದ್ದಾಳೆ.

    ವ್ಯಭಿಚಾರವು ಅಪರಾಧವಲ್ಲ ಎಂದು ಸುಪ್ರೀಂ ಕೋರ್ಟ್ ಸೆಪ್ಟೆಂಬರ್ 2018ರಂದು ತೀರ್ಪು ನೀಡಿತ್ತು.

  • ವಿವಾಹಿತ ಪ್ರಿಯತಮೆಯನ್ನ ಕರೆ ತರಲು ಹೋದವ ಹೆಣವಾದ

    ವಿವಾಹಿತ ಪ್ರಿಯತಮೆಯನ್ನ ಕರೆ ತರಲು ಹೋದವ ಹೆಣವಾದ

    – ಮದ್ವೆಯಾದ್ರೂ ನೀನು ನನಗೆ ಬೇಕೆಂದ!

    ಲಕ್ನೋ: ವಿವಾಹಿತೆ ಪ್ರಿಯತಮೆಯನ್ನ ಕರೆ ತರಲು ಹೋಗಿದ್ದ ಯುವಕ ಕೊಲೆಯಾಗಿರುವ ಘಟನೆ ಉತ್ತರ ಪ್ರದೇಶದ ಬನಾಕಟ್ ಠಾಣಾ ವ್ಯಾಪ್ತಿಯ ನೊನಾರ್ ಗ್ರಾಮದಲ್ಲಿ ನಡೆದಿದೆ. ಘಟನೆ ಸಂಬಂಧ ಪೊಲೀಸರು ಏಳು ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

    ಪಂಕಜ್ ಮಿಶ್ರಾ ಕೊಲೆಯಾದ ಯುವಕ. ಪಂಕಜ್ ಮತ್ತು ಮಿಠಿಯಾ ಗ್ರಾಮದ ಕಾಜಲ್ ಕಳೆದ ಒಂದು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದ್ರೆ ಡಿಸೆಂಬರ್ 8ರಂದು ಪೋಷಕರ ಇಚ್ಛೆಯಂತೆ ನೊನಾರ್ ಗ್ರಾಮದ ವಿಕಾಸ್ ಪಾಂಡೆ ಜೊತೆ ಕಾಜಲ್ ಮದುವೆ ನಡೆದಿತ್ತು. ಇತ್ತ ಕಾಜಲ್ ಮದುವೆಯಿಂದ ನೊಂದಿದ್ದ ಪಂಕಜ್ ಆಕೆಯನ್ನ ಕಾಣಲು ಡಿಸೆಂಬರ್ 23ರಂದು ತಡರಾತ್ರಿ ನೊನಾರ್ ಗ್ರಾಮಕ್ಕೆ ತೆರಳಿದ್ದಾನೆ.

    ಕಾಜಲ್ ಒಪ್ಪಿಗೆ ಮೇರೆಗೆ ಆಕೆಯನ್ನು ಕರೆದೊಯ್ಯಲು ಪಂಕಜ್ ತೆರಳಿದ್ದನು. ಆದ್ರೆ ಪತ್ನಿಯನ್ನ ಕಳುಹಿಸಲು ವಿಕಾಸ್ ಮತ್ತು ಆತನ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ. ಆದ್ರೂ ಹಠ ಬಿಡದ ಪಂಕಜ್ ಎಲ್ಲರ ಮುಂದೆಯೇ ಕಾಜಲ್ ಕೈ ಹಿಡಿದುಕೊಂಡು ಬರಲು ಪ್ರಯತ್ನಿಸಿದ್ದಾನೆ.

    ಈ ವೇಳೆ ವಿಕಾಸ್ ಪಾಂಡೆ ಮತ್ತು ಪಂಕಜ್ ನಡುವೆ ಜಗಳ ಆರಂಭಗೊಂಡಿದೆ. ಇಬ್ಬರ ಗಲಾಟೆಯ ಸದ್ದು ಕೇಳಿ ಆಗಮಿಸಿದ ಗ್ರಾಮಸ್ಥರು ಪಂಕಜ್ ನನ್ನು ಥಳಿಸಿದ್ದಾರೆ. ಈ ಸಮಯದಲ್ಲಿ ಗ್ರಾಮಸ್ಥರೊಬ್ಬರು ಪೊಲೀಸರಿಗೂ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಥಳಿತಕ್ಕೊಳಗಾಗಿದ್ದ ಯುವಕನನ್ನ ಪ್ರಾಥಮಿಕ ಚಿಕಿತ್ಸಾ ಕೇಂದ್ರಕ್ಕೆ ದಾಖಲಿಸಿದ್ದಾರೆ.

    ಪ್ರಾಥಮಿಕ ಚಿಕಿತ್ಸೆ ನೀಡಿದ ವೈದ್ಯರು ಕೂಡಲೇ ಜಿಲ್ಲಾಸ್ಪತ್ರೆಗೆ ರವಾನಿಸುವಂತೆ ಪೊಲೀಸರಿಗೆ ತಿಳಿಸಿದ್ದರು. ಜಿಲ್ಲಾಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆಯೇ ಪಂಕಜ್ ಸಾವನ್ನಪ್ಪಿದ್ದಾನೆ.

     

  • ಚಳಿಯಲ್ಲಿ ಗರ್ಭಿಣಿ ಗೆಳತಿಯನ್ನ ನಿಲ್ಲಿಸಿ ಕೊಂದ ಯುಟ್ಯೂಬರ್

    ಚಳಿಯಲ್ಲಿ ಗರ್ಭಿಣಿ ಗೆಳತಿಯನ್ನ ನಿಲ್ಲಿಸಿ ಕೊಂದ ಯುಟ್ಯೂಬರ್

    – ಬಿಕಿನಿ ತೊಟ್ಟು ಚಳಿಯಲ್ಲಿ ನಿಂತಿದ್ದ ಗರ್ಭಿಣಿ ಗೆಳತಿ

    ಮಾಸ್ಕೋ: ಯೂಟ್ಯೂಬ್ ಲೈವ್ ಸ್ಟ್ರೀಮ್ ಗೋಸ್ಕರ್ ಗರ್ಭಿಣಿ ಗೆಳತಿಯನ್ನ ಚಳಿಯಲ್ಲಿ ನಿಲ್ಲಿಸಿ ಕೊಲೆಗೈದಿರುವ ಘಟನೆ ರಷ್ಯಾದಲ್ಲಿ ನಡೆದಿದೆ. ಆರೋಪಿ ಪ್ರಿಯತಮನನ್ನ ಪೊಲೀಸರು ಬಂಧಿಸಿದ್ದು, ಎರಡು ವರ್ಷಕ್ಕೂ ಅಧಿಕ ಜೈಲು ಶಿಕ್ಷೆಯಾಗುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ.

    28 ವರ್ಷದ ವೆಲಿಂಟನಾ ಗ್ರಿಗೊರ್ಯೆವಾ ಉಫ್ ವಲ್ಯಾ ಮೃತ ಗರ್ಭಿಣಿ. 30 ವರ್ಷದ ಯುಟ್ಯೂಬರ್ ಸ್ಟಾಸ್ ರಿಫ್ಲೈ ಜೈಲು ಶಿಕ್ಷೆಗೆ ಗುರಿಯಾಗಿದ್ದಾನೆ. ಮೈನಸ್ ಡಿಗ್ರಿ ಚಳಿಯಲ್ಲಿ ಗೆಳತಿಯನ್ನ ಲೈವ್ ಸ್ಟ್ರೀಮ್ ಗಾಗಿ ಬಿಕಿನಿಯಲ್ಲಿ ಮನೆಯಿಂದ ಹೊರಗೆ ನಿಲ್ಲಿಸಿದ್ದಾನೆ. ತೀವ್ರ ಚಳಿಯಿಂದಾಗಿ ವೆಲಿಂಟಿನಾ ಪ್ರಾಣ ಬಿಟ್ಟಿದ್ದಾಳೆ.

    15 ನಿಮಿಷದ ಬಳಿಕ ಬಾಗಿಲು ತೆಗೆದಾಗ ವೆಲಿಂಟಿನಾ ಶವ ಕಂಡ ಸ್ಟಾಸ್ ಭಯಗೊಂಡು ಆಕೆಯನ್ನ ಒಳ ಕರೆ ತಂದು, ವೈದ್ಯರಿಗೂ ಕರೆ ಮಾಡಿ ಸಹಾಯ ಕೇಳಿದ್ದಾನೆ. ಈ ಎಲ್ಲ ದೃಶ್ಯಗಳು ಯುಟ್ಯೂಬ್ ನಲ್ಲಿ ನೇರ ಪ್ರಸಾರವಾಗಿದೆ. ವೆಲಿಂಟಿನಾ ಶವ ನೋಡುತ್ತಿದ್ದಂತೆ ವೆಲ್ಯಾ ನೀನು ಜೀವಂತವಾಗಿದ್ದಿ ಅಲ್ವಾ? ನಿನ್ನ ನಾಡಿ, ಹೃದಯ ಬಡಿತ ನನಗೆ ಕೇಳಿಸುತ್ತಿಲ್ಲ? ಎದ್ದೇಳು? ಅಯ್ಯೋ ಏನಾಯ್ತು? ನನ್ನ ಗೆಳತಿಗೆ ಏನಾಯ್ತು ಎಂದು ಸ್ಟಾಸ್ ಕಣ್ಣೀರು ಹಾಕಿದ್ದಾನೆ.

    ಸ್ಥಳಕ್ಕಾಗಮಿಸಿ ಆರೋಗ್ಯಾಧಿಕಾರಿಗಳು ವೆಲಿಂಟಿನಾ ಹೈಫೋಥರ್ಮಿಯಾ (ಅತಿಯಾದ ಚಳಿಯಿಂದ) ಸಾವನ್ನಪ್ಪಿರೋದನ್ನ ಖಚಿತ ಪಡಿಸಿದ್ದಾರೆ. ಇನ್ನು ನೇರ ಪ್ರಸಾರ ವೀಕ್ಷಿಸುತ್ತಿದ್ದ ನೆಟ್ಟಿಗರು, ಅತಿ ಭಯಾನಕ ಕೊಲೆ. ಲೈಕ್ಸ್ ಮತ್ತು ವ್ಯೂವ್ ಗಳಿಗಾಗಿ ಇಷ್ಟು ಕ್ರೂರವಾಗಿ ನಡೆದುಕೊಳ್ಳುವುದು ತಪ್ಪ ಎಂದು ಕಮೆಂಟ್ ಮಾಡಿದ್ದಾರೆ. ಸದ್ಯ ಸ್ಟಾಸ್ ರಿಫ್ಲೈ ಖಾತೆಯನ್ನ ಯುಟ್ಯೂಬ್ ನಿಂದ ಡಿಲೀಟ್ ಮಾಡಲಾಗಿದೆ.