Tag: girl baby

  • ಬೆಂಗ್ಳೂರಿನಲ್ಲಿ 5ರ ಮಗುವಿನ ಮೇಲೆ ಅತ್ಯಾಚಾರಕ್ಕೆ ಯತ್ನ!

    ಬೆಂಗ್ಳೂರಿನಲ್ಲಿ 5ರ ಮಗುವಿನ ಮೇಲೆ ಅತ್ಯಾಚಾರಕ್ಕೆ ಯತ್ನ!

    ಬೆಂಗಳೂರು: ಐದು ವರ್ಷದ ಹೆಣ್ಣು ಮಗುವಿನ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆಯೊಂದು ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

    ಬೆಂಗಳೂರಿನ ಕಮಲಾನಗರದಲ್ಲಿ ಈ ಘಟನೆ ನಡೆದಿದ್ದು, ಭಾಸ್ಕರ್ ಎಂಬಾತ ಮಗುವಿನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಮಗು ಟಿವಿ ನೋಡೋಕೆ ಬಂದಿದ್ದ ಸಂದರ್ಭದಲ್ಲಿ ಭಾಸ್ಕರ್ ಆಕೆಯನ್ನು ರೇಪ್ ಮಾಡಲು ಪ್ರಯತ್ನಿಸಿದ್ದಾನೆ ಎನ್ನಲಾಗಿದೆ.

    ಆರೋಪಿ ಭಾಸ್ಕರ್ ಕಟ್ಟಿಂಗ್ ಶಾಪ್ ನಡೆಸ್ತಿದ್ದಾನೆ. ಈತ ಟಿವಿ ನೋಡೀಕೆ ಮಗು ಬಂದಾಗ ಚಾಕಲೇಟ್ ನೀಡೋದಾಗಿ ಹೇಳಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಘಟನೆಯನ್ನರಿತ ಕೂಡಲೇ ಬಸವೇಶ್ವರ ನಗರ ಪೊಲೀಸರು ಆರೋಪಿಗೆ ಬಲೆ ಬೀಸಿದ್ದಾರೆ.

    ಸದ್ಯ ಆರೋಪಿ ಭಾಸ್ಕರ್ ನನ್ನು ಪೋಕ್ಸೋ ಕೇಸ್ ನಡಿ ಬಂಧಿಸಲಾಗಿದ್ದು, ವಿಚಾರಣೆ ನಡೆಸಿದ್ದಾರೆ.

    ಏನಿದು ಪೋಕ್ಸೋ ಕಾಯ್ದೆ?
    ಅಪ್ರಾಪ್ತ ವಯಸ್ಕರ ಮೇಲಿನ ಲೈಂಗಿಕ ದೌರ್ಜನ್ಯ ತಡೆಯಲು ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಅಧಿನಿಯಮ ಮತ್ತು ನಿಯಮಗಳು(ಪೋಕ್ಸೋ) ಜಾರಿಗೆ ತರಲಾಗಿದೆ. ಪೋಕ್ಸೋ ಪ್ರಕಾರ 18 ವರ್ಷದೊಳಗಿನವರನ್ನು ಮಗು ಎಂದು ಪರಿಗಣಿಸಲಾಗುತ್ತದೆ.  ಅತ್ಯಾಚಾರ, ಗುಪ್ತಾಂಗ ಮುಟ್ಟುವುದು, ಲೈಂಗಿಕತೆಗೆ ಪ್ರಚೋದಿಸುವುದು,ಅಶ್ಲೀಲ ಚಿತ್ರಗಳ ಬಳಕೆ, ಮಗುವಿನ ಅಶ್ಲೀಲ ಚಿತ್ರ ಸಂಗ್ರಹಿಸಿದರೆ ಅದು ಈ ಕಾಯ್ದೆಯ ಪ್ರಕರ ಅಪರಾಧ ಎಂದು ಪರಿಗಣಿಸಲ್ಪಡುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

     

  • ಗಂಡು ಮಗು ಜನಿಸಿ ಹೆಣ್ಣು ಮಗುವನ್ನು ತಾಯಿಗೆ ನೀಡಿದ್ರು- ಆಸ್ಪತ್ರೆ ಸಿಬ್ಬಂದಿ ವಿರುದ್ಧ ಆಕ್ರೋಶ

    ಗಂಡು ಮಗು ಜನಿಸಿ ಹೆಣ್ಣು ಮಗುವನ್ನು ತಾಯಿಗೆ ನೀಡಿದ್ರು- ಆಸ್ಪತ್ರೆ ಸಿಬ್ಬಂದಿ ವಿರುದ್ಧ ಆಕ್ರೋಶ

    ದಾವಣಗೆರೆ: ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ವೈದ್ಯರು ಆಗ ತಾನೇ ಹುಟ್ಟಿದ ನವಜಾತ ಶಿಶುವನ್ನು ಅದಲು ಬದಲು ಮಾಡಿದ್ದಾರೆಂದು ರೋಗಿಯ ಸಂಬಂಧಿಕರು ಅರೋಪಿಸುತ್ತಿದ್ದಾರೆ.

    ದಾವಣಗೆರೆಯ ಹರಿಹರದ ತಾಲೂಕಿನ ಯಲವಟ್ಟಿ ಗ್ರಾಮದ ಅಶಾಬಾಯಿ ಎಂಬವರು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು, ಸಂಜೆ 7 ಗಂಟೆಗೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಬಳಿಕ ಇನ್ನೂರು ರೂಪಾಯಿ ಕೊಡಿ ಎಂದು ಆಸ್ಪತ್ರೆಯ ಸಿಬ್ಬಂದಿ ತಿಳಿಸಿದ್ರು.

    ಗಂಡು ಮಗು ಹುಟ್ಟಿದೆ ಎಂದು ಖುಷಿಯಿಂದ ಇನ್ನೂರು ರೂಪಾಯಿ ಕೊಟ್ಟಿದ್ದಾರೆ. ಆದ್ರೆ ಒಂದು ಗಂಟೆಯ ನಂತರ ಹೆಣ್ಣು ಮಗು ಹುಟ್ಟಿದೆ ತೆಗೆದುಕೊಂಡು ಹೋಗಿ ಎಂದು ಹೇಳಿದ್ದಾರೆ. ಹುಟ್ಟಿದ ಗಂಡು ಮಗುವಿನ ಬದಲು ವೈದ್ಯರು ಹೆಣ್ಣು ಮಗುವನ್ನು ನೀಡಿದ್ದಾರೆ. ಗಂಡು ಮಗುವನ್ನು ಅದಲು ಬದಲು ಮಾಡಿದ್ದಾರೆ ಎಂದು ಆಶಾಬಾಯಿ ಸಂಬಂಧಿಕರು ಆಸ್ಪತ್ರೆ ಸಿಬ್ಬಂದಿ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

    ಕೂಡಲೇ ಮೇಲಾಧಿಕಾರಿಗಳು ಬಂದು ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಓತ್ತಾಯಿಸಿದ್ರು. ಇನ್ನು ಗಲಾಟೆ ಜೋರಾಗುತ್ತಿದ್ದಂತೆ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ರು.

  • 5 ದಿನದ ಹೆಣ್ಣು ಶಿಶುವನ್ನು ರೈಲಿನಲ್ಲೇ ಬಿಟ್ಟು ಹೋದ್ರು!

    5 ದಿನದ ಹೆಣ್ಣು ಶಿಶುವನ್ನು ರೈಲಿನಲ್ಲೇ ಬಿಟ್ಟು ಹೋದ್ರು!

    ಮುಂಬೈ: ಇಲ್ಲಿನ  ಚರ್ಚ್‍ಗೇಟ್ ಬಳಿ 5 ದಿನದ ಹೆಣ್ಣು ಶಿಶುವನ್ನು ರೈಲಿನಲ್ಲೇ ಬಿಟ್ಟು ಹೋಗಿದ್ದು, ಸೋಮವಾರ ಸಂಜೆ ಪ್ರಯಾಣಿಕರೊಬ್ಬರಿಂದಾಗಿ ಬೆಳಕಿಗೆ ಬಂದಿದೆ.

    ಮುಂಬೈ ಸ್ಥಳೀಯ ರೈಲಿನಲ್ಲಿ ಪುಟ್ಟ ಕಂದಮ್ಮನನ್ನು ಬಿಟ್ಟು ಹೋಗಿದ್ದರು. ರೈಲಿನ ಅಂಗವಿಕಲ ಬೋಗಿಯಲ್ಲಿದ್ದ ಮಗುವನ್ನು ಕಂಡ ಪ್ರಯಾಣಿಕರೊಬ್ಬರು ಜಿಆರ್ ಪಿ (ಸರ್ಕಾರಿ ರೈಲ್ವೇ ಪೊಲೀಸರು) ಅಧಿಕಾರಿಗಳಿಗೆ ಕರೆ ಮಾಡಿ ಅಂಗವಿಕಲರ ಬೋಗಿಯಲ್ಲಿ ಯಾರೋ ಮಗುವನ್ನು ಬಿಟ್ಟು ಹೋಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

    ಮಾಹಿತಿ ಪಡೆದ ಕೂಡಲೇ ಅಧಿಕಾರಿಗಳು ರೈಲ್ವೇ ನಿಲ್ದಾಣಕ್ಕೆ ಧಾವಿಸಿದ್ದಾರೆ. ಬಿಳಿ ಬಟ್ಟೆಯಿಂದ ಸುತ್ತಿ ಮಗುವನ್ನು ಸೀಟ್ ನಲ್ಲಿ ಬಿಟ್ಟು ಹೋಗಿದ್ದರು. ಬಹಳ ದುರ್ಬಲ ಸ್ಥಿತಿಯಲ್ಲಿದ್ದ ಶಿಶುವನ್ನು ಜಿಆರ್ ಪಿ ಅಧಿಕಾರಿಗಳು ಮುಂಬೈ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದೇವೆ ಮತ್ತು ಮಗುವಿನ ಹೆತ್ತವರನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಬೋಗಿಯಲ್ಲಿ ಮಗುವನ್ನು ಯಾರು ಬಿಟ್ಟು ಹೋಗಿದ್ದಾರೆ ಎಂದು ಹುಡುಕುತ್ತಿದ್ದೇವೆ. ಜೊತೆಗೆ ಯಾರೆಲ್ಲ ಮಗುವಿನೊಂದಿಗೆ ರೈಲು ಹತ್ತಿದ್ದಾರೆ ಎಂದು ಕಂಡುಹಿಡಿಯಲು ಎಲ್ಲಾ ರೈಲ್ವೆ ನಿಲ್ದಾಣದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶಿಸುತ್ತಿದ್ದೇವೆ ಎಂದು ಜಿಆರ್ ಪಿ ಅಧಿಕಾರಿ ಹೇಳಿದರು.

  • ಆಸ್ಪತ್ರೆಯಲ್ಲಿ ಮಗುಬಿಟ್ಟು ಕರುಳಬಳ್ಳಿ ಕಡಿದುಕೊಂಡಳು!

    ಆಸ್ಪತ್ರೆಯಲ್ಲಿ ಮಗುಬಿಟ್ಟು ಕರುಳಬಳ್ಳಿ ಕಡಿದುಕೊಂಡಳು!

    ಧಾರವಾಡ: ಎಷ್ಟೋ ಜನರು ಮಕ್ಕಳೇ ಆಗಲಿಲ್ಲವೆಂದು ಜೀವನದಲ್ಲಿ ಜಿಗುಪ್ಸೆ ಹೊಂದುತ್ತಾರೆ. ಆದರೆ ತಾಯಿಯೊಬ್ಬಳು ತನ್ನ ಎರಡು ತಿಂಗಳ ಮಗುವನ್ನು ಜಿಲ್ಲಾಸ್ಪತ್ರೆ ಆವರಣದ ಕ್ಯಾಂಟಿನ್ ಬಳಿ ಬಿಟ್ಟು ಹೋದ ಘಟನೆ ಧಾರವಾಡದಲ್ಲಿ ಮಂಗಳವಾರ ನಡೆದಿದೆ.

    ಬಿಟ್ಟು ಹೋಗಿರುವ ಹೆಣ್ಣು ಮಗು ಕೇವಲ ಎರಡು ತಿಂಗಳ ಹಸುಗುಸು. ಇಂದು ಬೆಳಿಗ್ಗೆ ಜಿಲ್ಲಾಸ್ಪತ್ರೆ ಆವರಣದಲ್ಲಿ ಮಗುವನ್ನು ಹೊತ್ತು ಸಂದೇಹಾಸ್ಪದವಾಗಿ ಓಡಾಡುತ್ತಿದ್ದ ಮಹಿಳೆಯೇ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಇದನ್ನು ಓದಿ: ಮಕ್ಕಳಿಲ್ಲವೆಂದು ಆತ್ಮಹತ್ಯೆ ಮಾಡಿಕೊಂಡ ವೃದ್ಧ ದಂಪತಿ

    ಆಸ್ಪತ್ರೆಯ ಆವರಣದಲ್ಲಿ ಮಗುವೊಂದೇ ಇರುವುದನ್ನು ಕಂಡ ಜನರು, ಎತ್ತಿಕೊಂಡು ಹೋಗಿ ಆಸ್ಪತ್ರೆಯ ವೈದ್ಯರಿಗೆ ಮುಟ್ಟಿಸಿದ್ದಾರೆ. ಸದ್ಯ ವೈದ್ಯರು ಮಗುವನ್ನು ಐಸಿಯುನಲ್ಲಿ ಇಟ್ಟು ಆರೈಕೆ ಮಾಡುತ್ತಿದ್ದಾರೆ. ನಂತರ ಮಗುವನ್ನು ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳ ಸುಪರ್ದಿಗೆ ನೀಡುವುದಾಗಿ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

    ಮಗುವನ್ನು ಬಿಟ್ಟು ಹೋದ ಪ್ರಕರಣ ಕುರಿತು ಉಪನಗರ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಮಗು ಬಿಟ್ಟು ಹೋಗಿರುವ ತಾಯಿಗಾಗಿ ಹುಡುಕಾಟ ನಡೆಸಿದ್ದಾರೆ.

  • ವಿಚಾರಣಾಧೀನ ಕೈದಿಯ ಮಗುವಿಗೆ ಜೈಲಿನಲ್ಲೇ ನಾಮಕರಣ ಮಾಡಿದ ಹಾವೇರಿ ಜಿಲ್ಲಾಧಿಕಾರಿ!

    ವಿಚಾರಣಾಧೀನ ಕೈದಿಯ ಮಗುವಿಗೆ ಜೈಲಿನಲ್ಲೇ ನಾಮಕರಣ ಮಾಡಿದ ಹಾವೇರಿ ಜಿಲ್ಲಾಧಿಕಾರಿ!

    ಹಾವೇರಿ: ವಿಚಾರಣಾಧೀನ ಕೈದಿಯೋರ್ವರಿಗೆ ಜನಿಸಿದ ನವಜಾತ ಶಿಶುವಿಗೆ ಜಿಲ್ಲಾಧಿಕಾರಿ ಕೇಂದ್ರ ಕಾರಾಗೃಹದಲ್ಲಿ ನಾಮಕರಣ ಮಾಡಿದ ಅಪರೂಪದ ಕಾರ್ಯಕ್ರಮ ಜರುಗಿತು.

    ಹಾವೇರಿ ಜಿಲ್ಲಾಧಿಕಾರಿ ಡಾ.ಎಂ.ವ್ಹಿ.ವೆಂಕಟೇಶ್ ಮಗುವನ್ನ ತೊಟ್ಟಿನಲ್ಲಿ ಹಾಕಿ ಶಿಶುವಿಗೆ ಹರ್ಷಿತಾ ಎಂದು ನಾಮಕರಣ ಮಾಡಿದ್ರು. ಕಳ್ಳತನ ಪ್ರಕರಣ ಒಂದರಲ್ಲಿ ಜಿಲ್ಲಾ ಕಾರಾಗೃಹದಲ್ಲಿ, ಕೈದಿಯಾಗಿರುವ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಮಹಾಲಿಂಗಪೂರ ಮೂಲದ 26 ವರ್ಷದ ಮಹಿಳೆ, ಕಳೆದ ಜನವರಿ 4 ರಂದು ಹಾವೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಹೆಣ್ಣುಮಗುವಿಗೆ ಜನ್ಮ ನೀಡಿದ್ದರು.

    19 ದಿನಗಳ ಈ ನವಜಾತ ಶಿಶುವಿಗೆ ಮಹಿಳಾ ಕೈದಿಗಳ ಸೆಲ್‍ನಲ್ಲಿ ಕಾರಾಗೃಹದ ಸಿಬ್ಬಂದಿ ನಾಮಕರಣ ಕಾರ್ಯಕ್ರಮ ಆಯೋಜನೆ ಮಾಡಿದ್ರು. ಜೈಲಿನ ಮಹಿಳಾ ಅಧಿಕಾರಿಗಳು ಒಳಗೊಂಡಂತೆ 11 ಜನ ಮಹಿಳಾ ಕೈದಿಗಳು ಹೆಣ್ಣು ಮಗುವಿನ ತಾಯಿಯ ಸಂಪ್ರದಾಯದಂತೆ ತೊಟ್ಟಿಲು ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಂಡಿದ್ದರು. ತೊಟ್ಟಿಲು ಅಲಂಕಾರ, ಜೈಲು ಮಹಿಳಾ ಸೆಲ್‍ನ ಅಲಂಕಾರ ಮನೆಯ ವಾತಾವರಣದಂತೆ ಕಂಗೊಳಿಸಿ ಎಲ್ಲರ ಗಮನಸೆಳೆಯಿತು.

    ಕಂಕಣ ಧರಿಸಿದ ಜಿಲ್ಲಾಧಿಕಾರಿಗಳು ಅಲಂಕರಿಸಿದ ತೊಟ್ಟಿನಲ್ಲಿ ನವಜಾತ ಶಿಶುವನ್ನು ಮಲಗಿಸಿ ನೂಲು ಹಿಡಿದು ಕಿವಿಯಲ್ಲಿ ಮೂರುಭಾರಿ ಹರ್ಷಿತಾ, ಹರ್ಷಿತಾ, ಹರ್ಷಿತಾ.. ಎಂದು ಕರೆಯುವುದರ ಮೂಲಕ ಕೈದಿಯ ಮಗಳಿಗೆ ನಾಮಕರಣಮಾಡಿದ ಅಪರೂಪದ ಪ್ರಸಂಗ ಜರುಗಿತು. ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಅಧಿಕಾರಿಗಳು ಅಪರೂಪದ ಕಾರ್ಯಕ್ರಮದಲ್ಲಿ ಭಾಗವಹಿಸಿ ಖುಷಿ ವ್ಯಕ್ತಪಡಿಸಿದ್ರು.

  • ಹೊಸವರ್ಷದಂದು 12.05 ಕ್ಕೆ ಹೆಣ್ಣುಮಗು ಜನನ- ಬಿಬಿಎಂಪಿಯಿಂದ ದಂಪತಿಗೆ ಸಿಕ್ತು ಭರ್ಜರಿ ಗಿಫ್ಟ್!

    ಹೊಸವರ್ಷದಂದು 12.05 ಕ್ಕೆ ಹೆಣ್ಣುಮಗು ಜನನ- ಬಿಬಿಎಂಪಿಯಿಂದ ದಂಪತಿಗೆ ಸಿಕ್ತು ಭರ್ಜರಿ ಗಿಫ್ಟ್!

    ಬೆಂಗಳೂರು: ಹೊಸವರ್ಷದಂದು ರಾತ್ರಿ 12 ಗಂಟೆಗೆ ಹುಟ್ಟಿದ ಹೆಣ್ಣು ಮಗುವಿಗೆ 5 ಲಕ್ಷ ರೂ. ನೀಡೋ ಮೂಲಕ ಬಿಬಿಎಂಪಿ ಭರ್ಜರಿ ಗಿಫ್ಟ್ ನೀಡಿದೆ.

    ಹೊಸವರ್ಷದ ಮೊದಲ ದಿನವೇ ಗೋಪಿ-ಪುಷ್ಪಾ ದಂಪತಿಗೆ ಹುಟ್ಟಿದ ಹೆಣ್ಣು ಮಗುವಿಗೆ ಬಿಬಿಎಂಪಿ ಈ ಭರ್ಜರಿ ಗಿಫ್ಟ್ ಘೋಷಿಸಿದ್ದಾರೆ. ರಾಜಾಜಿನಗರದ ಡಾ.ನಾಗರಾಜ್ ಸ್ಮಾರಕ ಆಸ್ಪತ್ರೆಯಲ್ಲಿ 12.05 ಕ್ಕೆ ಹೆಣ್ಣು ಮಗು ಜನಿಸಿದೆ. ಕೂಡಲೇ ಸ್ಥಳಕ್ಕೆ ಮೇಯರ್ ಸಂಪತ್ ರಾಜ್ ತೆರಳಿ ಬಹುಮಾನ ಘೋಷಿಸಿದ್ದಾರೆ.

    ತಮ್ಮ ಮಗುವಿಗೆ ಒಲಿದ ಈ ಅದೃಷ್ಟದಿಂದ ದಂಪತಿ ಖುಷಿಯಾಗಿದ್ದಾರೆ. ಮೇಯರ್ ಇದೇ ಮೊದಲ ಬಾರಿ ಈ ಬಗೆಯ ಬಹುಮಾನ ಘೋಷಿಸಿದ್ದಾರೆ. ಬಿಬಿಎಂಪಿ ಆಯುಕ್ತರು ಹಾಗೂ ಮಗುವಿನ ಹೆಸರಿನಲ್ಲಿ ಐದು ಲಕ್ಷ ಹಣ ಠೇವಣಿ ಇಡಲು ನಿರ್ಧರಿಸಲಾಗಿದೆ. ಈ ಹಣವನ್ನು 18 ವರ್ಷದ ನಂತರ ಮಗುವಿನ ಉನ್ನತ ಶಿಕ್ಷಣಕ್ಕೆ ಬಳಕೆ ಮಾಡಬಹುದು. ಐದು ಲಕ್ಷದ ಠೇವಣಿಯ ಬಡ್ಡಿ ಹಣವನ್ನು ಪ್ರತಿ ವರ್ಷ ಶಿಕ್ಷಣಕ್ಕೆ ಉಪಯೋಗಿಸಬಹುದು. ಹಣವನ್ನು ಮಗುವಿನ ವಿದ್ಯಾಭ್ಯಾಸ ಮತ್ತು ಭವಿಷ್ಯಕ್ಕೆ ಬಳಸಲು ದಂಪತಿ ನಿರ್ಧರಿಸಿದ್ದಾರೆ. ಇದನ್ನೂ ಓದಿ: ಹೊಸ ವರ್ಷದಂದು ಹುಟ್ಟುವ ಮೊದಲ ಹೆಣ್ಣು ಮಗುವಿಗೆ ಬಿಬಿಎಂಪಿಯಿಂದ ಬಂಪರ್ ಆಫರ್!

    ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಮೇಯರ್ ಸಂಪತ್ ರಾಜ್, ಬಡವರ ಮನೆಯಲ್ಲಿ ಹೆಣ್ಣು ಮಗು ಹುಟ್ಟಿದ್ರೆ ಕಷ್ಟ ಅಂದುಕೊಳ್ಳುವ ಜನ ತುಂಬಾ ಇದ್ದಾರೆ. ಆದ್ರೇ ಇದೀಗ ಪರಿಸ್ಥಿತಿ ಬದಲಾಗಿದೆ. ಬಿಬಿಎಂಪಿಯಲ್ಲಿಯೇ 102 ಜನ ಮಹಿಳೆಯರು ಜನಪ್ರತಿನಿಧಿಗಳಿದ್ದಾರೆ. ಮಗು ಹಾಗೂ ಬಿಬಿಎಂಪಿ ಕಮಿಷನರ್ ಹೆಸರಿನಲ್ಲಿ ಐದು ಲಕ್ಷ ರೂ. ಹಣ ಠೇವಣಿ ಇಡಲಾಗಿದೆ. ಮಗುವಿನ ಶಿಕ್ಷಣಕ್ಕೆ ಮಾತ್ರ ಈ ಹಣ ಬಳಕೆಯಾಗಲಿದೆ. ಹೆಣ್ಣು ಮಕ್ಕಳ ಜನನವನ್ನು ಪ್ರೋತ್ಸಾಹಿಸೋ ಉದ್ದೇಶದಿಂದ ಯೋಜನೆ ಜಾರಿಗೊಳಿಸಲಾಗಿದೆ ಎಂದು ಹೇಳಿದ್ರು.

    ಮಗುವಿನ ತಾಯಿ ಪುಷ್ಪಾ ಸಿಎಂ ಸಿದ್ದರಾಮಯ್ಯನವರ ತವರು ಸಿದ್ದರಾಮನಹುಂಡಿಯವರು ಎಂದು ತಿಳಿದುಬಂದಿದೆ.

  • ಹುಟ್ಟಿದ ಮಗು ಹೆಣ್ಣಾಯ್ತು ಅಂತ ವಾಷಿಂಗ್ ಮೆಷಿನ್ ಗೆ ತುರುಕಿ ಕೊಲೆಗೈದ್ಳು!

    ಹುಟ್ಟಿದ ಮಗು ಹೆಣ್ಣಾಯ್ತು ಅಂತ ವಾಷಿಂಗ್ ಮೆಷಿನ್ ಗೆ ತುರುಕಿ ಕೊಲೆಗೈದ್ಳು!

    ಗಾಜಿಯಾಬಾದ್: ಗಂಡು ಮಗುವಿನ ಆಸೆ ಹೊಂದಿದ್ದ 22 ವರ್ಷದ ಮಹಿಳೆಯೊಬ್ಬರಿಗೆ ಹುಟ್ಟಿದ್ದು ಹೆಣ್ಣು ಮಗು. ಇದರಿಂದ ಬೇಸತ್ತ ಮಹಿಳೆ ಆ ಮಗುವನ್ನು ತನ್ನ ಕೈಯ್ಯಾರೇ ಕ್ರೂರವಾಗಿ ಕೊಲೆಗೈದ ಘಟನೆಯೊಂದು ಉತ್ತರ ಪ್ರದೇಶದಲ್ಲಿ ನಡೆದಿದೆ.

    ಈ ಘಟನೆ ಗಾಜಿಯಾಬಾದ್ ನ ಪಟ್ಲ ನಗರದಲ್ಲಿ ನಡೆದಿದ್ದು, ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಮಹಿಳೆಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

    ಮೂರು ತಿಂಗಳ ಹಿಂದೆ ಆರತಿ ಎಂಬ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಆದ್ರೆ ಗಂಡು ಮಗುವಿನ ಆಸೆ ಹೊಂದಿದ್ದ ಆರತಿಗೆ ಹೆಣ್ಣು ಮಗುವಾಗಿದ್ದರಿಂದ ನಿರಾಶೆಗೊಂಡು, ಆಕೆಯ ಮೇಲೆಯೇ ಆಕೆಗೆ ಸಿಟ್ಟು ಬಂದಿದ್ದರಿಂದ ಈ ಕೃತ್ಯ ಎಸಗಿದ್ದಾಳೆ ಎಂದು ಹಿರಿಯ ಪೊಲೀಸ್ ಅಧೀಕ್ಷಕ ಆಕಾಶ್ ತೋಮರ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

    ಹೀಗೆ ತನ್ನ ಮೇಲೆಯೇ ಸಿಟ್ಟುಗೊಂಡಿದ್ದ ಆಕೆ ಹೆಣ್ಣು ಮಗುವನ್ನು ಕೊಲೆ ಮಾಡಲು ನಿರ್ಧರಿಸಿದ್ದಳು. ಅಂತೆಯೇ ಭಾನುವಾರ ಮಗುವನ್ನು ದಿಂಬಿನಿಂದ ಮುಚ್ಚಿ ಬಳಿಕ ವಾಷಿಂಗ್ ಮೆಷಿನ್ ಗೆ ತುರುಕಿದ್ದಾಳೆ. ನಂತ್ರ ತನ್ನ ಮಗುವನ್ನು ಯಾರೋ ಅಪಹರಣ ಮಾಡಿದ್ದಾರೆ ಅಂತ ಪೊಲೀಸರಿಗೆ ದೂರು ನೀಡಿದ್ದಾಳೆ. ಈ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದು, ಆರತಿಯನ್ನು ಪ್ರಶ್ನಿಸಿದಾಗ ಆಕೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ ಅಂತ ಅವರು ವಿವರಿಸಿದ್ದಾರೆ.

    ಗಂಡು ಮಗು ಬೇಕು ಅಂತಾ ನಾವು ಆಕೆಗೆ ಕಿರುಕುಳ ಅಥವಾ ಬೆದರಿಕೆ ಹಾಕಿಲ್ಲ. ಬೇಕುಂತಲೇ ಮುದ್ದಾದ ಹೆಣ್ಣು ಮಗುವನ್ನು ಕೊಲೆ ಮಾಡಿದ್ದಾಳೆ ಅಂತ ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದಾರೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರೆದಿದೆ.

  • ಹೆಣ್ಣು ಮಗು ಹುಟ್ಟಿದ್ರೆ 1 ಗ್ರಾಂ ಚಿನ್ನ ಸಿಗುತ್ತೆ!

    ಹೆಣ್ಣು ಮಗು ಹುಟ್ಟಿದ್ರೆ 1 ಗ್ರಾಂ ಚಿನ್ನ ಸಿಗುತ್ತೆ!

    ತಿರುವನಂತಪುರ: ಹೆಣ್ಣು ಮಗು ಹುಟ್ಟಿದ್ರೆ ಸಾಕು ಶಾಪ ಹಾಕುವ ಅಥವಾ ಹೆಣ್ಣು ಭ್ರೂಣವನ್ನು ಕಸದ ಬುಟ್ಟಿಗೆ ಎಸೆಯೋ ಅನೇಕ ಘಟನೆಗಳು ಪ್ರತಿನಿತ್ಯ ನಡೆಯುತ್ತವೆ. ಅಂತದ್ದರಲ್ಲಿ ಕೇರಳದ ವ್ಯಕ್ತಿಯೊಬ್ಬರು ಹೆಣ್ಣು ಮಗು ಹುಟ್ಟಿದ್ರೆ ಚಿನ್ನ ನೀಡೋ ಮೂಲಕ ರಕ್ಷಣೆಗೆ ನಿಂತಿದ್ದಾರೆ.

    ಹೌದು. ಕೇರಳದ ಮುಸ್ಲಿಂ ಪ್ರಾಬಲ್ಯವಿರುವ ಜಿಲ್ಲೆಯಲ್ಲಿ ಹೆಣ್ಣು ಮಗು ಹುಟ್ಟಿದ ಸಂತಸದ ಜೊತೆಗೆ ಮಗುವಿನ ಕುಟುಂಬಕ್ಕೆ ಈ ಉಡುಗೊರೆಯನ್ನು ನೀಡುತ್ತಾರೆ. ಮಲಪ್ಪುರಂ ಜಿಲ್ಲೆಯ ಪುಸಭೆ ಕೌನ್ಸಿಲರ್ 38 ವರ್ಷ ವಯಸ್ಸಿನ ಅಬ್ದುಲ್ ರಹೀಮ್ ಎಂಬವರೇ ಈ ಮಹಾನ್ ಕಾರ್ಯ ಮಾಡುತ್ತಿರೋ ವ್ಯಕ್ತಿಯಾಗಿದ್ದಾರೆ. ಇವರು ತನ್ನ ವಾರ್ಡ್ ನಲ್ಲಿ ಯಾವುದೇ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ರೆ ಅದರ ಸಂಭ್ರಮಾಚರಣೆಯ ಜೊತೆಗೆ ಆ ಕುಟುಂಬಕ್ಕೆ ಒಂದು ಗ್ರಾಂ ಚಿನ್ನ ನೀಡುತ್ತಿದ್ದಾರೆ. ರಹೀಮ್ ಅವರು ಈ ಕೆಲಸವನ್ನು ಕಳೆದ 2 ವರ್ಷಗಳಿಂದ ಮಾಡುತ್ತಾ ಬಂದಿದ್ದಾರೆ.

    `ಹುಟ್ಟಿದ ಮಗು ಹೆಣ್ಣಾದ್ರೆ ಕೆಲ ಕುಟುಂಬಗಳು ಶಪಿಸುವುದನ್ನು ನಾನು ನೋಡಿದ್ದೇನೆ. ಇಂತಹ ಘಟನೆಗಳು ಮತ್ತೆ ಮರುಕಳಿಸಬಾರದು. ಯಾಕಂದ್ರೆ ಹೆಣ್ಣು ಮಗು ಮನೆಗೆ ಸಂಪತ್ತನ್ನು ತರುತ್ತಾಳೆ. ಹೆಚ್ಚಿನ ಜನರಿಗೆ ಈ ವಿಚಾರ ತಿಳಿದಿಲ್ಲ. ಹೆಣ್ಣು ಇಲ್ಲದಿದ್ದಲ್ಲಿ ಈ ಜಗತ್ತನ್ನು ಕಲ್ಪನೆ ಮಾಡಲು ಸಾಧ್ಯವೇ ಅಂತ 4 ವರ್ಷದ ಮಗುವಿನ ತಂದೆಯಾಗಿರೋ ಅಬ್ದುಲ್ ರಹೀಮ್ ಪ್ರಶ್ನಿಸಿದ್ದಾರೆ.

    ರಹೀಮ್ ಅವರು ಇಲ್ಲಿಯವರೆಗೆ ಸುಮಾರು 16 ಹೆಣ್ಣು ಮಗುವಿನ ತಾಯಂದಿರಿಗೆ ಈ ಉಡುಗೊರೆಯನ್ನು ನೀಡಿದ್ದಾರೆ. ಅಲ್ಲದೇ ಈ ಚಿನ್ನದ ನಾಣ್ಯದ ಪ್ರಮಾಣವನ್ನು ಎರಡಷ್ಟು ಹೆಚ್ಚಿಸಲು ಚಿಂತಿಸಿದ್ದಾರೆ. ಹುಟ್ಟಿದ ಮಗು ಹೆಣ್ಣಾದ್ರೆ ಸಾಕು ಆಸ್ಪತ್ರೆಯಿಂದಲೇ ರಹೀಮಾನ್ ಅವರಿಗೆ ಕರೆ ಬರುತ್ತದೆ. ಕೂಡಲೇ ಅವರು ಆಸ್ಪತ್ರೆಗೆ ತೆರಳಿ ಅವರು ಚಿನ್ನದ ನಾಣ್ಯವನ್ನು ನೀಡಿ ಗಿಫ್ಟ್ ನೀಡುತ್ತಾರೆ.

    ಮಹಿಳೆಗೆ ಹೆಣ್ಣು ಮಗು ಹುಟ್ಟಿದ ವಿಚಾರವನ್ನು ನಮಗೂ ತಿಳಿಸಿ, ನಾವು ಕೂಡ ಚಿನ್ನ ಕೊಡುತ್ತೇವೆ ಎಂದು ಕೊಟ್ಟಕ್ಕಲ್ ನ ಪ್ರಮುಖ ಆಭರಣ ಮಳಿಗೆಗಳು ರಹೀಮ್ ಅವರೆ ಮುಂದೆ ಆಫರ್ ಪ್ರಸ್ತಾಪಿಸಿದ್ದವು. ಆದ್ರೆ ರಹೀಮಾನ್ ಮಳಿಗೆಗಳ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದಾರೆ. ನಾನು ಯಾವುದೇ ಪ್ರಚಾರಕ್ಕಾಗಿ ಈ ಕೆಲಸ ಮಾಡುತ್ತಿಲ್ಲ ಅಂತ ಹೇಳಿದ್ದಾರೆ.

    ಪುರಸಭೆ ಕೌನ್ಸಿಲರ್ ಆಗಿರೋ ನನಗೆ ತಿಂಗಳಿಗೆ 8 ಸಾವಿರದಿಂದ 10 ಸಾವಿರ ಸಂಬಳ ಬರುತ್ತದೆ. ಒಂದು ಗ್ರಾಂ ನಾಣ್ಯಕ್ಕೆ 2500 ರೂ. ವೆಚ್ಚವಾಗುತ್ತದೆ. ನನ್ನ ಸಂಬಳದ ಸಣ್ಣ ಮೊತ್ತವನ್ನು ಇದಕ್ಕಾಗಿ ನಾನು ಖರ್ಚ ಮಾಡಬಲ್ಲೆ ಎಂದು ರಹೀಮ್ ಹೇಳಿದ್ದಾರೆ.

    ದೇಶದ ಇತರ ಭಾಗಗಳಿಗಿಂತ ಕೇರಳದಲ್ಲಿ 1000 ಪುರುಷರಿಗೆ 1084 ಮಹಿಳೆಯರಿದ್ದಾರೆ. ಆದರೆ ಜನನ ದರ ಇಳಿಕೆಯಾಗುತ್ತಿದ್ದು, ಲಿಂಗಾನುಪಾತ ಇಳಿಕೆಯಾಗುವ ಸಾಧ್ಯತೆಯಿದೆ.

  • ಬೆಂಗ್ಳೂರು ಜೈಲಿನಲ್ಲಿ ಪಾಕ್ ಪ್ರಜೆಗೆ ಹೆಣ್ಮಗು-ಅಕ್ರಮವಾಗಿ ನೆಲೆಸಿದ್ದವಳಿಗೆ ತಾಯ್ತನದ ಖುಷಿ

    ಬೆಂಗ್ಳೂರು ಜೈಲಿನಲ್ಲಿ ಪಾಕ್ ಪ್ರಜೆಗೆ ಹೆಣ್ಮಗು-ಅಕ್ರಮವಾಗಿ ನೆಲೆಸಿದ್ದವಳಿಗೆ ತಾಯ್ತನದ ಖುಷಿ

    ಬೆಂಗಳೂರು: ನಗರದ ಪರಪ್ಪನ ಅಗ್ರಹಾರ ಜೈಲಿನಲ್ಲಿ ಪಾಕ್ ಪ್ರಜೆಯೊಬ್ಬಳು ಹೆಣ್ಣು ಮಗುವಿಗೆ ಜನ್ಮ ನೀಡಿರುವುದು ಬೆಳಕಿಗೆ ಬಂದಿದೆ.

    ಸಮೀರಾ ಮಗುವಿಗೆ ಜನ್ಮ ನೀಡಿದ ಪಾಕ್ ಪ್ರಜೆ. ಈಕೆ ಕೇರಳ ಮೂಲದ ಮೊಹಮದ್ ಸಿಹಾಬ್ ನನ್ನ ಪ್ರೀತಿಸಿ ಮದುವೆಯಾಗಿದ್ದಳು. ಪತಿ ಕೇರಳ ಮೂಲದವನಾಗಿದ್ದರಿಂದ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರೇಮಿಗಳು ನೇಪಾಳ ಮೂಲಕ ಭಾರತಕ್ಕೆ ಬಂದಿದ್ದರು. ಹೀಗೆ ಕತಾರ್ ನಿಂದ ನೇಪಾಳಕ್ಕೆ ಹೋಗಿ ಅಲ್ಲಿಂದ ಪಾಟ್ನಾಗೆ ಬಂದು ಬಳಿಕ ಬೆಂಗಳೂರಲ್ಲಿ ನೆಲೆಸಿದ್ದರು.

    ಬಳಿಕ ಇಲ್ಲಿ ಅಕ್ರಮ ವಲಸೆ, ನಕಲಿ ದಾಖಲೆ ಸೃಷ್ಟಿಸಿದ ಆರೋಪದಡಿ ಕುಮಾರಸ್ವಾಮಿ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ಸಿಸಿಬಿ ಪೊಲೀಸರು ದಾಳಿ ಮಾಡಿದ್ರು. ಸಮೀರ ಸಂಬಂಧಿಕರಾದ ಕಾಸಿಫ್ ಶಂಶುದ್ದೀನ್ ಮತ್ತು ಪತ್ನಿ ಕಿರಣ್ ಗುಲಾಮ್ ಅಲಿ ಸಹ ಕಳೆದ ಮೇ ತಿಂಗಳಿನಲ್ಲಿ ಬಂಧನಕ್ಕೆ ಒಳಗಾಗಿದ್ದರು. ಈ ವೇಳೆ ಆರೋಪಿಗಳು ನಕಲಿ ಆಧಾರ್ ಪಡೆದಿದ್ದ ವಿಚಾರ ಬೆಳಕಿಗೆ ಬಂದಿತ್ತು. ಅಲ್ಲದೇ ಬಂಧನದ ವೇಳೆ ಸಮೀರಾ 4 ತಿಂಗಳ ಗರ್ಭಿಣಿಯಾಗಿದ್ದಳು. ಹೀಗಾಗಿ ಇತ್ತೀಚೆಗಷ್ಟೇ ಸಮೀರಾ ಜೈಲಿನಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಸದ್ಯ ಹೆಣ್ಣು ಮಗು ತಾಯಿ ಜೊತೆ ಪರಪ್ಪನ ಅಗ್ರಹಾರ ಜೈಲಿನಲ್ಲಿದೆ.

    ಭಾರತೀಯ ಪೌರತ್ವ ಕಾಯ್ದೆ ಅಡಿ 2004ರ ಬಳಿಕ ಜನಿಸುವ ಮಗುವಿನ ತಂದೆ ತಾಯಿ ಭಾರತೀಯ ಪೌರರಾಗಿರಬೇಕು. ಒಬ್ಬರು ಹೊರ ದೇಶಕ್ಕೆ ಸೇರಿದ್ರೂ ಮಗುವಿಗೆ ಭಾರತೀಯ ಪೌರತ್ವ ಸಿಗಲ್ಲ. ಈಗಾಗಲೇ ಸಮೀರಾ ವಿರುದ್ಧ ಪೊಲೀಸರು 9 ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ಇತ್ಯರ್ಥ ಅಗುವವರೆಗೂ ಸಮೀರಾ ಜೈಲಿನಲ್ಲೇ ಇರಬೇಕು. ಇದರಿಂದ ಸಮೀರಾ ಹಾಗು ಸಿಹಾಬ್ ದಂಪತಿಗಳ ಮಗುವಿಗೆ ರಾಷ್ಟ್ರೀಯತೆ ಸಮಸ್ಯೆ ಎದುರಾಗಿದೆ.

    ಈ ಹಿಂದೆ ಕೆಲವರು ವಿದೇಶಿ ಮಹಿಳೆಯರನ್ನು, ಪುರುಷರನ್ನು ಮದುವೆಯಾದ ನಿದರ್ಶನಗಳಿವೆ. ಉದಾಹರಣೆಗೆ ರಾಜೀವ್ ಗಾಂಧಿ, ಇಟಲಿಯ ಸೋನಿಯಾರನ್ನ ಕಾನೂನು ಬದ್ಧವಾಗಿ ವರಿಸಿದ್ರು. ಹೀಗಾಗಿ ಅವರು ಕಾನೂನು ಬದ್ಧವಾಗಿ ಭಾರತೀಯ ಪೌರತ್ವ ಪಡೆದಿದ್ದರು. ಇನ್ನು ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಕೂಡ ಪಾಕಿಸ್ತಾನಿ ಕ್ರಿಕೆಟಿಗ ಶೋಯಬ್ ಮಲಿಕ್ ರನ್ನ ಮದುವೆಯಾಗಿದ್ರೂ ಸಹ ಭಾರತೀಯ ಪೌರತ್ವ ಉಳಿಸಿಕೊಂಡಿದ್ದಾರೆ. ಹೀಗಾಗಿ ಸಮೀರಾ ಭಾರತೀಯ ಪೌರತ್ವ ಹೊಂದಿಲ್ಲದ ಕಾರಣ ಆಕೆಗೆ ಜನಿಸಿದ ಮಗುವಿಗೆ ಪೌರತ್ವ ಸಿಗೋದಿಲ್ಲ ಅನ್ನೋ ವಾದಗಳು ಕೇಳಿ ಬರ್ತಿವೆ.

     

  • ಆಂಬುಲೆನ್ಸ್ ನಲ್ಲೇ ಮಗುವಿನ ಜನನ- ವೈದ್ಯರು ಕೈ ಕೊಟ್ರೂ ಕೈ ಹಿಡಿದ ಆಂಬುಲೆನ್ಸ್ ಸಿಬ್ಬಂದಿಗೆ ಬಾಣಂತಿಯಿಂದ ಧನ್ಯವಾದ

    ಆಂಬುಲೆನ್ಸ್ ನಲ್ಲೇ ಮಗುವಿನ ಜನನ- ವೈದ್ಯರು ಕೈ ಕೊಟ್ರೂ ಕೈ ಹಿಡಿದ ಆಂಬುಲೆನ್ಸ್ ಸಿಬ್ಬಂದಿಗೆ ಬಾಣಂತಿಯಿಂದ ಧನ್ಯವಾದ

    ಚಿಕ್ಕಬಳ್ಳಾಪುರ: ಮಹಿಳೆಯೊಬ್ಬರು ಆಂಬುಲೆನ್ಸ್ ನಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿಯಲ್ಲಿ ನಡೆದಿದೆ.

    ಸಿದ್ದೇಪಲ್ಲಿ ಗ್ರಾಮದ ವೆಂಕಟರತ್ನಮ್ಮ ಎಂಬವರನ್ನು ಚಿಂತಾಮಣಿಯಿಂದ ಕೋಲಾರ ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆ ಮಾರ್ಗ ಮಧ್ಯೆಯೇ ಹೆರಿಗೆಯಾಗಿದೆ. ಮೊದಲು ಚಿಂತಾಮಣಿ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದ ವೆಂಕಟರತ್ನಮ್ಮರಿಗೆ ಇಲ್ಲಿ ಸಹಜ ಹೆರಿಗೆಯಾಗೋದು ಕಷ್ಟ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಕೋಲಾರದ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ವೈದ್ಯರು ಸೂಚನೆ ನೀಡಿದ್ದರು. ಹೀಗಾಗಿ ಆಂಬುಲೆನ್ಸ್ ಮೂಲಕ ಕೋಲಾರ ಜಿಲ್ಲಾ ಆಸ್ಪತ್ರೆಗೆ ತೆರಳುತ್ತಿದ್ದ ವೇಳೆ ಹೆರಿಗೆ ನೋವು ಜಾಸ್ತಿಯಾಗಿ ವೆಂಕಟರತ್ನಮ್ಮರಿಗೆ ಸಹಜವಾಗಿಯೇ ಹೆರಿಗೆಯಾಗಿದ್ದು ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

    ಸದ್ಯ ತಾಯಿ ಮಗು ಇಬ್ಬರೂ ಆರೋಗ್ಯವಾಗಿದ್ದು ಮತ್ತೆ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದ್ರೆ ಸಹಜ ಹೆರಿಗೆ ಕಷ್ಟ ಅಂತ ನೆಪ ಹೇಳಿ ಕೋಲಾರ ಆಸ್ಪತ್ರೆಗೆ ಸಾಗಹಾಕಿದ್ದ ವೈದ್ಯರು ಹಾಗೂ ಶುಶ್ರೂಕಿಯರನ್ನ ವೆಂಕಟರತ್ನಮ್ಮ ಸಂಬಂಧಿಕರು ತರಾಟೆಗೆ ತೆಗೆದುಕೊಂಡಿದ್ದಾರೆ.

    ಮತ್ತೊಂದೆಡೆ ವೈದ್ಯರು ಕೈ ಕೊಟ್ರೂ ಹೆರಿಗೆಗೆ ಸಹಕರಿಸಿ ಸಹಜ ಹೆರಿಗೆ ಮಾಡಿಸಿದ ಆಂಬ್ಯುಲೆನ್ಸ್ ಸಿಬ್ಬಂದಿಗೆ ವೆಂಕಟರತ್ನಮ್ಮ ಸಂಬಂಧಿಕರು ಧನ್ಯವಾದಗಳನ್ನ ಅರ್ಪಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.