ಒಂದ್ ಕಥೆ ಹೇಳ್ಲಾ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಅಡಿ ಇಟ್ಟ ಪ್ರತಿಭಾನ್ವಿತ ನಿರ್ದೇಶಕ ಕಂ ನಟ ಗಿರೀಶ್ ಜಿ ಸದ್ಯ ವಾವ್ಹಾ ಸಿನಿಮಾ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ಪ್ರಖ್ಯಾತ ಒಟಿಟಿಯಲ್ಲಿ ವಾವ್ಹಾ ಜುಲೈ ಕೊನೆಗೆ ರಿಲೀಸ್ ತಯಾರಿಯಲಿದ್ದು, ಇದೇ ಗ್ಯಾಪ್ ನಲ್ಲಿ ಗಿರೀಶ್ ಮತ್ತೊಂದು ಸಿನಿಮಾಗೆ ಮುನ್ನುಡಿ ಬರೆದಿದ್ದಾರೆ. ಅದೇ ಶಾಲಿವಾಹನ ಶಕೆ.
ಮೊದಲ ಸಿನಿಮಾದಲ್ಲಿಯೇ ಗಿರೀಶ್ ತಮ್ಮದೆ ಶೈಲಿಯಲ್ಲಿ ಕಥೆ ಹೇಳಿ ತಾವೊಬ್ಬ ಪ್ರತಿಭಾನ್ವಿತ ನಿರ್ದೇಶಕ ಅನ್ನುವುದನ್ನು ತೋರಿಸಿಕೊಟ್ಟಿದ್ದರು. ಈ ಬಾರಿಯೂ ಅಂತಹದ್ದೇ ಒಂದು ಹೊಸಬಗೆಯ ಹಾಗೂ ವಿಶೇಷ ಕಥೆಯೊಂದಿಗೆ ಶಾಲಿವಾಹನ ಶಕೆ ಸಿನಿಮಾ ಮೂಲಕ ನಿಮ್ಮ ಮುಂದೆ ಹಾಜರಾಗಲು ಸಜ್ಜಾಗಿದ್ದು, ಅದರ ಮೊದಲ ಭಾಗವಾಗಿ ಚಿತ್ರದ ಟೈಟಲ್ ಮೋಷನ್ ಪೋಸ್ಟರ್ ರಿಲೀಸ್ ಆಗಿದೆ. ಡಿಜಿಟಲ್ ಸ್ಕೆಚ್ ಆರ್ಟ್ ಮೂಲಕ ತಯಾರಿಸಿರುವ ಮೋಷನ್ ಪೋಸ್ಟರ್ ಸಿನಿಮಾ ಮೇಲಿನ ನಿರೀಕ್ಷೆಯನ್ನು ಇಮ್ಮಡಿಗೊಳಿಸಿದೆ. ಇದನ್ನೂ ಓದಿ : ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷರಿಗೆ ಲೆಕ್ಕ ಕೇಳಿದೆ ಆಡಳಿತಾಧಿಕಾರಿ
ಟೈಮ್ ಥ್ರಿಲ್ಲರ್ ಕಥಾನಕದ ಈ ಸಿನಿಮಾ ಕನ್ನಡ ಇಂಡಸ್ಟ್ರೀ ಮಟ್ಟಿಗೆ ಹೊಸತದಿಂದ ಕೂಡಿದೆ. ಸದ್ಯ ಶೂಟಿಂಗ್ ಮುಗಿಸಿರುವ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದು, ಒಂದಷ್ಟು ಹೊಸಬರು ಈ ಚಿತ್ರದಲ್ಲಿ ನಟಿಸಿದ್ದಾರೆ. ಗಿರೀಶ್ ಜಿ ಕಥೆ ಬರೆದು ನಿರ್ದೇಶನ ಮಾಡಿರುವ ಈ ಸಿನಿಮಾಗೆ ಶೈಲೇಶ್ ಕುಮಾರ್ ಎಂ.ಎಂ ಬಂಡವಾಳ ಹೂಡಿದ್ದು, ಅರುಣ್ ಸುರೇಶ್ ಛಾಯಾಗ್ರಹಣ, ಉಜ್ವಲ್ ಚಂದ್ರ ಸಂಕಲನ, ಕಾರ್ತಿಕ್ ಭೂಪತಿ-ಹರಿ ಅಜಯ್ ಸಂಗೀತ, ಪ್ರಶಾಂತ್ ವೈಎನ್ ಸಂಭಾಷಣೆ ಸಿನಿಮಾಕ್ಕಿದೆ. ಸದ್ಯ ಟೈಟಲ್ ಮೋಷನ್ ಪೋಸ್ಟರ್ ರಿಲೀಸ್ ಮಾಡಿರುವ ಚಿತ್ರತಂಡ ಶೀರ್ಘದಲ್ಲಿಯೇ ತಾರಾಬಳಗದ ಜೊತೆ ರಿಲೀಸ್ ಡೇಟ್ ಅನೌನ್ಸ್ ಮಾಡಲಿದೆ.
ಬೆಂಗಳೂರು: ಚಿಕ್ಕಮಗಳೂರು ಜಿಲ್ಲೆಯ ಭದ್ರಾ ವನ್ಯಜೀವಿ ಅಭಯಾರಣ್ಯದ ಉಳಿವಿಗಾಗಿ ಸಾಕಷ್ಟು ಹೋರಾಟ ನಡೆಸಿಕೊಂಡು ಬಂದಿರುವ ಪರಿಸರವಾದಿ ಡಿವಿ ಗಿರೀಶ್ ಮೇಲೆ ಕಿಡಿಗೇಡಿಗಳು ಹಲ್ಲೆ ನಡೆಸಿದ್ದರು. ಇದೇ ವೇಳೆ ವಾಹನದಲ್ಲಿದ್ದ ಬಾಲಕಿ ಕುರಿತಂತೆ ಆಶ್ಲೀಲವಾಗಿ ಮಾತನಾಡಿದ್ದರು. ಸದ್ಯ ಈ ಬಗ್ಗೆ ನಟಿ ಹಾಗೂ ರಾಜಕಾರಣಿ ರಮ್ಯಾ ಬೇಸರ ವ್ಯಕ್ತಪಡಿಸಿದ್ದಾರೆ.
ಈ ವಿಚಾರವಾಗಿ ರಮ್ಯಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯ ಸ್ಟೋರಿಯಲ್ಲಿ ಬರೆದುಕೊಂಡಿದ್ದು, ಚಿಕ್ಕಮಗಳೂರಿನಲ್ಲಿ ಡಿ.ವಿ ಗಿರೀಶ್ ಹಾಗೂ ಅವರ ಸ್ನೇಹಿತರ ಮೇಲೆ ನಡೆದ ಹಲ್ಲೆ ವಿಚಾರ ಓದಿದೆ. ಪುಂಡರು ಇಬ್ಬರು ವ್ಯಕ್ತಿಯನ್ನು ನಿಂದಿಸುವ ವೇಳೆ 17 ವರ್ಷದ ಬಾಲಕಿ ಅಸಹಾಯಕಳಾಗಿ ವಾಹನದಲ್ಲಿಯೇ ಕುಳಿತುಕೊಂಡು ಇಡೀ ಘಟನೆಯನ್ನು ನೋಡುತ್ತಿದ್ದಳು. ಈ ವೇಳೆ ಬಾಲಕಿಯ ಮೇಲೆ ಎಷ್ಟು ಪರಿಣಾಮ ಬೀರಿರಬಹುದು ಊಹಿಸಿಕೊಳ್ಳಿ ಎಂದಿದ್ದಾರೆ. ಇದನ್ನೂ ಓದಿ: ಮಹಿಳೆಯರ ವಿರುದ್ಧದ ಅಪರಾಧಗಳತ್ತ ಕಣ್ಣು ಮುಚ್ಚಬೇಡಿ, ಮಾತನಾಡಿ: ರಮ್ಯಾ
ಮಾನಸಿಕವಾಗಿ ಬಾಲಕಿ ಎಷ್ಟು ಘಾಸಿಯಾಗಿರಬಹುದು. ಆ ದುಷ್ಟರನ್ನು ಅರೆಸ್ಟ್ ಮಾಡಬೇಕು. ಜನರ ಮೇಲೆ ದೈಹಿಕ ಹಲ್ಲೆ ನಡೆಸುವುದು ಅಷ್ಟು ಸುಲಭವೇ? ಕಾನೂನಿನ ಭಯ ಇಲ್ಲವೇ? ಬೇರೆ ಮನುಷ್ಯರ ಬಗ್ಗೆ ಗೌರವವಿಲ್ಲವೇ? ಎಂದು ಪ್ರಶ್ನಿಸುವ ಮೂಲಕ ಕಿಡಿಕಾರಿದ್ದಾರೆ. ಇದನ್ನೂ ಓದಿ: ನಾನು ಈ ಮೂರು ವಸ್ತುಗಳನ್ನು ಮರೆಯುತ್ತೇನೆ: ರಮ್ಯಾ
ಗಿರೀಶ್ ತಮ್ಮ ಜಿಪ್ಸಿಯಲ್ಲಿ ಕೆಮ್ಮಣ್ಣುಗುಂಡಿ ಸಮೀಪದ ಕಟ್ಟೆಹೊಳೆ ಎಸ್ಟೇಟ್ನಿಂದ ಸ್ನೇಹಿತರೊಂದಿಗೆ ಹಿಂದಿರುಗುವ ವೇಳೆ ಸಂತವೇರಿ ತಿರುವಿನ ಸಮೀಪದಲ್ಲಿ ಕೆಲ ಯುವಕರು ಬಾಲಕಿಯ ಬಗ್ಗೆ ಆಶ್ಲೀಲವಾಗಿ ಮಾತನಾಡಿದ್ದಾರೆ. ಈ ವೇಳೆ ಗಿರೀಶ್ ಆ ರೀತಿ ಮಾತನಾಡಬಾರದು ಎಂದು ಯುವಕರಿಗೆ ಬುದ್ಧಿ ಹೇಳಿ ಹೋಗಿದ್ದರು.
ಕೆಲ ಹೊತ್ತಿನ ಬಳಿಕ ಯುವಕರು ಮತ್ತೆ ಅವರನ್ನು ಹಿಂಬಾಲಿಸಿಕೊಂಡು ಹೋಗಿ ಜಿಪ್ಸಿಗೆ ಅಡ್ಡ ಹಾಕಿ ಮನಬಂದಂತೆ ನಿಂದಿಸಿ ಹಲ್ಲೆ ನಡೆಸಿದ್ದು, ಈ ವೇಳೆ ಗಿರೀಶ್ಗೆ ಪೆಟ್ಟಾಗಿದೆ. ನಂತರ ಈ ಬಗ್ಗೆ ಗಿರೀಶ್ ಪೊಲೀಸರಿಗೆ ತಿಳಿಸಿ ಘಟನೆಯಲ್ಲಿ ಬಾಲಕಿಯನ್ನು ಹಿಡಿದು ಎಳೆದಾಡಿರುವುದಾಗಿ ದೂರು ನೀಡಿದ್ದರು.
ಬಳ್ಳಾರಿ: ಇಸ್ರೇಲ್ ಮಾದರಿ ಕೃಷಿ ಪದ್ಧತಿಯನ್ನು ರಾಜ್ಯದಲ್ಲಿ ಪರಿಚಯಿಸುತ್ತೇನೆ ಎಂದು ಮುಖ್ಯಮಂತ್ರಿಗಳು ಕಳೆದ ಬಜೆಟ್ನಲ್ಲಿ ಘೋಷಿಸಿದ್ದಾರೆ. ಇದು ಎಷ್ಟರ ಮಟ್ಟಿಗೆ ಕಾರ್ಯಗತವಾಗಿದ್ಯೋ ಗೊತ್ತಿಲ್ಲ. ಆದರೆ ಸಿಎಂಗೂ ಮೊದಲೇ ಬಳ್ಳಾರಿಯ ಕೂಡ್ಲಗಿ ತಾಲೂಕಿನ ಚಿಕ್ಕಜೋಗಿಹಳ್ಳಿ ಗಿರೀಶ್ ಅವರು ಇಸ್ರೇಲ್ ಮಾದರಿ ಗುಲಾಬಿ ಕೃಷಿಯಲ್ಲಿ ಯಶಸ್ವಿಯಾಗುವ ಮೂಲಕ ಪಬ್ಲಿಕ್ ಹೀರೋ ಆಗಿದ್ದಾರೆ.
ಕೂಡ್ಲಗಿ ತಾಲೂಕಿನ ಚಿಕ್ಕಜೋಗಿಹಳ್ಳಿ ತಾಂಡಾದ ನಿವಾಸಿ ಗಿರೀಶ್ ಅವರು ಬಿಇ, ಬಿಟೆಕ್ ಮಾಡಿ ಜರ್ಮನಿಯಲ್ಲಿ ತಿಂಗಳಿಗೆ 4 ಲಕ್ಷದ ನೌಕರಿ ಮಾಡುತ್ತಿದ್ದರು. ಅದ್ಯಾಕೋ ಹುಟ್ಟೂರಿನಲ್ಲಿ ಕೃಷಿಯ ಅದಮ್ಯ ಆಸೆಯಿಂದ ಈ ಗುಲಾಬಿ ತೋಟಗಾರಿಕೆ ಮಾಡುತ್ತಿದ್ದಾರೆ. 2 ಮನೆ, ಬಂಗಾರ, ತಂದೆಯ ಪಿಎಫ್ ಫಂಡ್ ಜೊತೆಗೆ 4 ಕೋಟಿ ಸಾಲ ಮಾಡಿ, 10 ಎಕರೆ ಜಮೀನಿನಲ್ಲಿ 1 ಎಕರೆ ವಿಸ್ತಾರವುಳ್ಳ 7 ಪಾಲಿಹೌಸ್ಗಳನ್ನ ನಿರ್ಮಿಸಿ ಇಸ್ರೇಲ್ ಮಾದರಿಯ ಕೃಷಿಯಲ್ಲಿ ಯಶಸ್ವಿಯಾಗಿದ್ದಾರೆ.
ಆಟೋಮೊಬೈಲ್ ಎಂಜಿನಿಯರ್ ಆಗಿದ್ದ ಗಿರೀಶ್ ಮೊದಲಿಗೆ ಕೃಷಿ ಮಾಡುತ್ತೇನೆ ಅಂದಾಗ ಕುಟುಂಬದವರು ಒಪ್ಪಿರಲಿಲ್ಲ. ಅದರಲ್ಲೂ 40 ಬೊರ್ವೆಲ್ ಕೊರೆಸಿದ್ರೂ ನೀರು ಸಿಗ್ಲಿಲ್ಲ. ಇಂಥ ಹೊತ್ತಲ್ಲಿ ಮಗನಿಗೆ ಧೈರ್ಯ ತುಂಬಿದ್ದು ಕೆಇಬಿ ನಿವೃತ್ತ ಎಂಜಿನಿಯರ್ ತಂದೆ ರಾಮಸ್ವಾಮಿ. ನನ್ನ ಸಲಹೆಯಂತೆ ಪೌಲಿಹೌಸ್ಗಳ ಮೇಲೆ ಮಳೆ ನೀರು ಕೊಯ್ಲು ಪದ್ಧತಿ ಅಳವಡಿಸಿಕೊಂಡು 1 ಕೋಟಿ 30 ಲಕ್ಷ ಲೀಟರ್ ಸಾಮರ್ಥ್ಯದ ಕೆರೆ ನಿರ್ಮಿಸಿದ ಬಳಿಕ ಈಗ ನೀರಿನ ಸಮಸ್ಯೆಯೇ ಇಲ್ಲ ಎಂದು ಗಿರೀಶ್ ತಂದೆ ರಾಮಸ್ವಾಮಿ ಹೇಳುತ್ತಾರೆ.
ಒಂದೂವರೆ ವರ್ಷದಿಂದ ಉತ್ತಮ ಗುಣಮಟ್ಟದ ಗುಲಾಬಿ ಹೂವುಗಳನ್ನ ಬೆಳೆಯುತ್ತಿದ್ದಾರೆ. ನಿತ್ಯ 10 ರಿಂದ 15 ಸಾವಿರ ಗುಲಾಬಿ ಹೂವುಗಳನ್ನು ಕೋಲ್ಡ್ ಸ್ಟೋರೇಜ್ ವಾಹನದಲ್ಲೇ ಮಾರುಕಟ್ಟೆಗಳಿಗೆ ಕಳಿಸುತ್ತಿದ್ದಾರೆ. ತಾಯಿ ಲಲಿತಮ್ಮ, ಎಂಟೆಕ್ ಪದವೀಧರೆಯಾಗಿರೋ ಪತ್ನಿ ಅಕ್ಷತಾ ಸಹ ಗಿರೀಶ್ಗೆ ಸಾಥ್ ನೀಡುತ್ತಿದ್ದಾರೆ.
ಒಂದು ಕಥೆ ಹೇಳ್ಲಾ ಚಿತ್ರ ಈ ವಾರ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ. ಕ್ರೌಡ್ ಫಂಡಿಂಗ್ ಮೂಲಕ ನಿರ್ಮಾಣಗೊಂಡಿರೋ ಈ ಚಿತ್ರವನ್ನು ಗಿರೀಶ್ ನಿರ್ದೇಶನ ಮಾಡಿದ್ದಾರೆ. ಹಲವಾರು ವರ್ಷಗಳಿಂದ ಸಿನಿಮಾ ಧ್ಯಾನದಲ್ಲಿದ್ದ ಇವರು ಒಂದಷ್ಟು ಅನುಭವವನ್ನೂ ಹೊಂದಿದ್ದಾರೆ. ಈ ಹಿಂದೆ ದಿ ಲೂಸಿಡ್ ಹ್ಯಾಂಗೋವರ್ ಮುಂತಾದ ವಿಭಿನ್ನ ಕಿರುಚಿತ್ರಗಳನ್ನು ನಿರ್ದೇಶನ ಮಾಡಿದ ಅನುಭವ ಅವರಿಗಿದೆ.
ಹೊಸತನದೊಂದಿಗೇ ಏನನ್ನಾದ್ರೂ ಮಾಡಬೇಕನ್ನೋ ಹಂಬಲದಿಂದಲೇ ಅವರು ಒಂದು ಕಥೆ ಹೇಳ್ಲಾ ಚಿತ್ರಕ್ಕೆ ಜೀವ ತುಂಬಿದ್ದಾರೆ. ಆದ್ದರಿಂದಲೇ ಈವತ್ತಿಗೆ ಈ ಸಿನಿಮಾ ಟ್ರೈಲರ್ ಮೂಲಕವೇ ಕ್ರೇಜ್ ಹುಟ್ಟು ಹಾಕಿದೆ. ಹೊಸ ಪ್ರಯೋಗಳ ಸಂತೆಯೇ ಈ ಚಿತ್ರದಲ್ಲಿ ನೆರೆದಿದೆ. ಇದರಲ್ಲಿ ತಾಂಡವ್, ಶಕ್ತಿ ಸೋಮಣ್ಣ, ಪ್ರತೀಕ್, ಸೌಮ್ಯಾ ರಮಾಕಾಂತ್, ರಮಾಕಾಂತ್ ಮುಂತಾದವರು ನಟಿಸಿದ್ದಾರೆ. ಬಕೇಶ್ ಮತ್ತು ಕಾರ್ತಿಕ್ ಸಂಗೀತ ಸಂಯೋಜನೆ ಮಾಡಿದ್ದಾರೆ.
ಹೊಸಬರು ಇದ್ದಲ್ಲಿ ಹೊಸ ಪ್ರಯೋಗ, ಹೊಸತನ ಇದ್ದೇ ಇರುತ್ತೆ ಅನ್ನೋ ನಂಬಿಕೆ ಪ್ರೇಕ್ಷಕರಲ್ಲಿದೆ. ಅಂಥಾದ್ದೇ ಒಂದು ಹೊಸ ತಂಡ ಭಾರೀ ಹುಮ್ಮಸ್ಸಿನೊಂದಿಗೆ ಈ ಚಿತ್ರವನ್ನ ರೂಪಿಸಿದೆ. ಚಿತ್ರರಂಗವನ್ನ ಗಂಭೀರವಾಗಿ ಪರಿಗಣಿಸಿದ ಹತ್ತಾರು ಮನಸುಗಳ ಧ್ಯಾನದ ಫಲವಾಗಿ ಈ ಸಿನಿಮಾ ಮೂಡಿ ಬಂದಿದೆ. ಆದ್ದರಿಂದಲೇ ಹಾರರ್ ಜಾನರಿನ ಈ ಚಿತ್ರ ಹತ್ತು ಹಲವು ರೀತಿಯ ಪ್ರಯೋಗಗಳೊಂದಿಗೇ ತೆರೆ ಕಾಣಲು ರೆಡಿಯಾಗಿದೆ. ಸ್ಕ್ರೀನ್ ಪ್ಲೇ, ಪಾತ್ರವರ್ಗ, ಛಾಯಾಗ್ರಹಣ ಸೇರಿದಂತೆ ಎಲ್ಲದರಲ್ಲಿಯೂ ಈ ಚಿತ್ರ ಪ್ರೇಕ್ಷಕರಿಗೆ ಹೊಸಾ ಅನುಭವ ನೀಡಲಿದೆ ಅನ್ನೋದು ಚಿತ್ರತಂಡದ ಭರವಸೆ.
ಬೆಂಗಳೂರು: ಗಿರೀಶ್ ನಿರ್ದೇಶನದ ಒಂದು ಕಥೆ ಹೇಳ್ಲಾ ಚಿತ್ರ ಈ ವಾರ ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಈ ಸಿನಿಮಾ ಕಡೇ ಕ್ಷಣದ ಹೊತ್ತಿನಲ್ಲಿ ಭರ್ಜರಿಯಾಗಿಯೇ ಜನರನ್ನೆಲ್ಲ ತಲುಪಿಕೊಂಡಿರೋದು ಹೊಸ ಹೊಳಹಿನ ಮೂಲಕವೇ. ಯಾವುದೇ ಪ್ರಚಾರದ ಭರಾಟೆಯಿಲ್ಲದೆಯೂ ಈ ಸಿನಿಮಾ ಪ್ರೇಕ್ಷಕರನ್ನು ಸೆಳೆದುಕೊಂಡಿದ್ದು ತನ್ನೊಳಗಿನ ವಿಶೇಷತೆಗಳ ಕಾರಣದಿಂದ.
ಇದು ಹಾರರ್ ಚಿತ್ರ. ಹಾಗೆಂದಾಕ್ಷಣ ಮಾಮೂಲಿಯಾಗಿ ಭಯ ಬೀಳಿಸೋ ಸಿದ್ಧ ಸೂತ್ರಗಳನ್ನು ಹೊಂದಿರೋ ಸಿನಿಮಾ ಅನ್ನೋ ನಿರ್ಧಾಕ್ಕೆ ಬರುವಂತಿಲ್ಲ. ಯಾಕಂದ್ರೆ ಇದನ್ನು ಪ್ರತಿಯೊಂದು ವಿಚಾರದಲ್ಲಿಯೂ ನವೀನ ಪ್ರಯೋಗಗಳೊಂದಿಗೇ ರೂಪಿಸಲಾಗಿದೆ.
ಶೀರ್ಷಿಕೆಯಲ್ಲಿಯೇ ಒಂದು ಕಥೆ ಹೇಳ್ಲಾ ಅಂತಿದ್ದರೂ ಇಲ್ಲಿ ಹೇಳಿರೋದು ಐದು ಕಥೆ. ಅವೆಲ್ಲವೂ ಸತ್ಯ ಘಟನೆಯಿಂದ ಪ್ರೇರಿತವಾದ ಹಾರರ್ ಕಥೆಗಳೇ ಅನ್ನೋದು ವಿಶೇಷ. ಇನ್ನು ಬೆಚ್ಚಿಬೀಳಿಸಲೇಬೇಕು ಅನ್ನೋ ಒತ್ತಾಯವಿಲ್ಲದೆ ಸಹಜವಾಗಿ ಭಯ ಹುಟ್ಟಿಸೋ ಅನೇಕ ಸನ್ನಿವೇಶಗಳು ಈ ಚಿತ್ರದಲ್ಲಿವೆ.
ಇದೆಲ್ಲ ಕಥೆಯ ವಿಚಾರವಾದರೆ, ತಾಂತ್ರಿಕವಾಗಿಯೂ ಈ ಸಿನಿಮಾ ಭಿನ್ನವಾಗಿ ದಾಖಲಾಗಲಿದೆ. ಸ್ಕ್ರೀನ್ ಪ್ಲೇಯಲ್ಲಂತೂ ಗಿರೀಶ್ ಕನ್ನಡಕ್ಕೆ ತಾಜಾ ಅನ್ನಿಸುವಂಥಾ ಹೊಸಾ ಸರ್ಕಸ್ಸು ನಡೆಸಿದ್ದಾರೆ. ಇದೆಲ್ಲವೂ ಖಂಡಿತಾ ಜನರಿಗೆ ಇಷ್ಟವಾಗುತ್ತೆ ಎಂಬ ನಂಬಿಕೆ ಚಿತ್ರತಂಡದಲ್ಲಿದೆ.
ಬೆಂಗಳೂರು: ಜೋಡಿಹಕ್ಕಿ ಸೀರಿಯಲ್ ಮೂಲಕ ರಾಮಣ್ಣ ಎಂದೇ ಖ್ಯಾತರಾಗಿರುವವರು ತಾಂಡವ್. ಅವರೀಗ ಒಂದು ಕಥೆ ಹೇಳ್ಲಾ ಎಂಬ ವಿನೂತನ ಪ್ರಯೋಗದ ಹಾರರ್ ಚಿತ್ರವೊಂದರ ಪ್ರಧಾನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಹೊಸ ಥರದ ಪೋಸ್ಟರ್ ಸೇರಿದಂತೆ ನಾನಾ ರೀತಿಯಲ್ಲಿ ಈ ಸಿನಿಮಾ ಸುದ್ದಿ ಕೇಂದ್ರದಲ್ಲಿದೆ. ಇದೀಗ ಇದರ ಟ್ರೈಲರ್ ಹೊರ ಬಂದಿದೆ. ಇದುವೇ ಕ್ಷಣ ಕ್ಷಣವೂ ಬೆಚ್ಚಿ ಬೆರಗಾಗಿಸುವಂಥಾ ಡಿಫರೆಂಟಾದ ಕಂಟೆಂಟು ಈ ಚಿತ್ರದಲ್ಲಿದೆ ಎಂಬಂಥಾ ಸುಳಿವನ್ನೂ ಬಿಟ್ಟುಕೊಟ್ಟಿದೆ.
ಕ್ರೌಡ್ ಫಂಡಿಂಗ್ ಮೂಲಕ ನಿರ್ಮಾಣಗೊಂಡಿರೋ ಈ ಚಿತ್ರವನ್ನು ಗಿರೀಶ್ ನಿರ್ದೇಶನ ಮಾಡಿದ್ದಾರೆ. ಈಗ ಹೊರ ಬಂದಿರೋ ಟ್ರೈಲರ್ ಅಂತೂ ಬಹು ಬೇಗನೆ ಪ್ರತೀ ವರ್ಗದ ಪ್ರೇಕ್ಷಕರನ್ನೂ ಕೂಡಾ ತನ್ನತ್ತ ಸೆಳೆದುಕೊಂಡಿದೆ. ಅದ್ಭುತವಾದ ಕಥೆಯೊಂದು ಒಂದು ಕಥೆ ಹೇಳ್ಲಾ ಚಿತ್ರದಲ್ಲಿ ಅಡಕವಾಗಿದೆ ಎಂಬ ವಿಚಾರವನ್ನಂತೂ ಈ ಟ್ರೈಲರ್ ರವಾನಿಸಿದೆ.
ಇದು ಹಾರರ್ ಚಿತ್ರ. ಹಾಗೆಂದಾಕ್ಷಣ ಮಾಮೂಲಿ ಮೆಥಡ್ಡಿನ ಸಿನಿಮಾ ಎಂದು ಖಂಡಿತಾ ಅಂದುಕೊಳ್ಳುವಂತಿಲ್ಲ. ಇದು ತಾಜಾತನದಿಂದ, ಸಾಕಷ್ಟು ನವೀನ ಪ್ರಯೋಗಗಳಿಂದಲೇ ರೂಪುಗೊಂಡಿದೆ. ಇಲ್ಲಿರೋದು ಒಂದು ಕಥೆಯಲ್ಲ. ಬದಲಾಗಿ ಒಂದೇ ಚಿತ್ರದಲ್ಲಿ ಐದು ಬೇರೆ ಬೇರೆ ಹಾರರ್ ಕಥೆಗಳನ್ನು ಹೇಳೋ ಸಾಹಸಕ್ಕೆ ನಿರ್ದೇಶಕರು ಕೈ ಹಾಕಿದ್ದಾರೆ. ಈ ಐದೂ ಕಥೆಗಳ ದಿಕ್ಕೂ ಬೇರೆ ಬೇರೆ. ಅದರಲ್ಲೊಂದಷ್ಟು ಸತ್ಯ ಘಟನೆಗಳನ್ನ ಆಧರಿಸಿದವುಗಳಂತೆ. ಆದರೆ ಇವೆಲ್ಲವೂ ಕ್ಲೈಮ್ಯಾಕ್ಸ್ ಹೊತ್ತಿಗೆ ಒಂದಕ್ಕೊಂದು ಕನೆಕ್ಟ್ ಆಗುತ್ತವಂತೆ.
ಬಹುತೇಕ ಹೊಸಬರೇ ಸೇರಿಕೊಂಡು ಈ ಚಿತ್ರವನ್ನ ರೂಪಿಸಿದ್ದಾರೆ. ಈಗಾಗಲೇ ಈ ಸಿನಿಮಾ ಪೋಸ್ಟರ್ಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ. ಟ್ರೈಲರ್ ಮೂಲಕ ಆ ಬಿಸಿ ಮತ್ತಷ್ಟು ಏರಿಕೊಂಡಿದೆ.
ಬೆಂಗಳೂರು: ಅಂಬಿಡೆಂಟ್ ಕಂಪೆನಿ ಜೊತೆ 20 ಕೋಟಿ ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಗಣಿಧಣಿ ಜನಾರ್ದನ ರೆಡ್ಡಿ ಅವರನ್ನು ಇಂದು ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ವಿಚಾರಣೆಯಲ್ಲಿ ಕೇಳಿದ ಪ್ರಶ್ನೆಗಳು ಇಂತಿವೆ.. * ಅಲೋಕ್: ಡೀಲ್ ಮಾಡಿದ್ದೀಯಾ.. ಖಾತೆಗೆ ದುಡ್ಡು ಬಂದಿದೆ. ಟಾಪ್ ಟು ಬಾಟಂ ಏನಾಗಿದೆ ಅಂತ ಒಂದೇ ಸಲ ಒದರಬೇಕು. ನಿನ್ನ ಎಲ್ಲಾ ಆಟಗಳು ನಮಗೆ ಗೊತ್ತಿದೆ
( ರೆಡ್ಡಿ ವಕೀಲ ಚಂದ್ರಶೇಖರ್ ಮಾತನಾಡೋಕೆ ಮುಂದಾಗ್ತಾರೆ.. ಸುಮ್ನಿರಿ. ಏನಿದ್ರೂ ವಿಚಾರಣೆ ಬಳಿಕ ಮಾತನಾಡಿ. ನಾವೇನು ರೆಡ್ಡಿ ಮೇಲೆ ಹಲ್ಲೆ ಮಾಡ್ತಿಲ್ಲ. ತನಿಖೆಗೆ ಅಡ್ಡಿ ಪಡಿಸ್ಬೇಡಿ ಅಂತ ವಾರ್ನಿಂಗ್) * ಸಿಸಿಬಿ: ಅಂಬಿಡೆಂಟ್ನ ಫರೀದ್ ಮತ್ತು ನಿಮ್ಮ ನಡುವೆ ಎಷ್ಟು ವರ್ಷದ ಸಂಬಂಧ..? * ರೆಡ್ಡಿ: ಫರೀದ್ನ ಆಲಿಖಾನ್ ಪರಿಚಯ ಮಾಡಿದ್ದು. ಅಲಿಖಾನ್ ಕುಟುಂಬ ಅಂಬಿಡೆಂಟ್ನಲ್ಲಿ ಹೂಡಿಕೆ ಮಾಡಿರೋ ವಿಚಾರ ಗೊತ್ತಿತ್ತು. ಆ ಮೂಲಕ ನನಗೆ ಪರಿಚಯ
* ಸಿಸಿಬಿ: ಫರೀದ್ ವ್ಯವಹಾರದಲ್ಲಿ ನಿಮ್ಮ ಪಾಲುದಾರಿಕೆ ಇದ್ಯಾ..? * ರೆಡ್ಡಿ: ಯಾವುದೇ ಪಾಲುದಾರಿಕೆ ಇಲ್ಲ. ಪಾಲುದಾರಿಕೆ ಬಗ್ಗೆ ಫರೀದ್ ಜೊತೆ ಮಾತನಾಡಿಲ್ಲ.. * ಸಿಸಿಬಿ: ನಿಮ್ಮ ಆಪ್ತ ಆಲಿಖಾನ್ ಹೊಂದಿದ್ದಾರೆ ಅನ್ನೋ ಮಾಹಿತಿ ಇದೆ * ರೆಡ್ಡಿ: ಅಲಿಖಾನ್ ಬಳಿ ಎಲ್ಲವನ್ನೂ ಕೇಳಿದ್ದೀನಿ. ಆತನ ಕುಟುಂಬ 70 ಲಕ್ಷ ಹಣ ಹೂಡಿಕೆ ಮಾಡಿದ್ರು. ಆ ಹಣಕ್ಕೂ ಫರೀದ್ ಮೋಸ ಮಾಡಿದ್ದ. ಆ ವಿಚಾರ ಅಷ್ಟೇ ನನಗೆ ಗೊತ್ತು. ಆತನೂ ಪಾಲುದಾರಿಕೆಯನ್ನು ಹೊಂದಿಲ್ಲ ..
* ಸಿಸಿಬಿ: ಫರೀದ್ ಬಚಾವ್ ಮಾಡಲು ನೀವು ಡೀಲ್ ತೆಗೆದುಕೊಂಡಿದ್ದೀರಿ..? * ರೆಡ್ಡಿ: ನನ್ನ ಕೇಸ್ಯಿಂದ್ಲೇ ಬಚಾವ್ ಆಗೋದಕ್ಕೆ ಆಗಿಲ್ಲ. ಫರೀದ್ನ ಹೇಗೆ ಬಚಾವ್ ಮಾಡ್ಲಿ. ತನಿಖಾ ಸಂಸ್ಥೆಗಳು ನಾವು ಹೇಳಿದಂತೆ ಕೇಳ್ತಾವಾ..? * ಸಿಸಿಬಿ: ಇ.ಡಿ. ಅಧಿಕಾರಿಗಳಿಗೆ ನಿಮ್ಮಿಂದ ಹಣದ ಆಮಿಷ ಹೋಗಿದೆ.. ಅದಕ್ಕೆ ಸೂಕ್ತ ದಾಖಲೆಗಳು ಇವೆ.. * ರೆಡ್ಡಿ: ಇಡಿ ಆಫೀಸರ್ಸ್ ಏನೂ ಅಂತ ನಿಮಗೂ ಗೊತ್ತು. ನಾವು ಅವರ ಬಳಿ ಡೀಲ್ ಮಾಡೋಕೆ ಸಾಧ್ಯನಾ..? ನಿಮ್ಮ ಸಾಕ್ಷ್ಯ ತೋರಿಸಿದ್ರೆ ಉತ್ತರ ಕೊಡ್ತೀನಿ. * ಸಿಸಿಬಿ: ಇಲ್ಲ ಅನ್ನೋದೇ ಆದ್ರೆ, ಫರೀದ್ ಡೀಲ್ನಲ್ಲಿ ನಿಮ್ಮೆಸ್ರು ಹೇಳಿದ್ಯಾಕೆ..?
* ರೆಡ್ಡಿ: ಬಚಾವ್ ಆಗೋಕೆ ಫರೀದ್ ಹೇಳಿರ್ಬೋದು. ಅಥವಾ ಆತನ ಮೇಲೆ ಒತ್ತಡ ಇದೆ ಅನ್ನೋದು ಗೊತ್ತಿಲ್ಲ. * ಸಿಸಿಬಿ: ಫರೀದ್ ನಿಮಗೆ 57 ಕೆಜಿ ಚಿನ್ನದ ಗಟ್ಟಿ ಕೊಟ್ಟಿದ್ದಾರೆ. ಇದಕ್ಕೂ ದಾಖಲೆ ಇದೆ * ರೆಡ್ಡಿ: ಫರೀದ್ ಚಿನ್ನ ಕೊಟ್ಟಿದ್ದೀನಿ ಅಂತ ಅಷ್ಟೇ ಹೇಳಿದ್ದಾನೆ. ಅದನ್ನು ನಾನು ರಿಸೀವ್ ಮಾಡಿಕೊಂಡಿದ್ದೇನಾ..? ಯಾವುದಾದರು ಸಾಕ್ಷ್ಯ ಇದ್ರೆ ಉತ್ತರ ಕೊಡ್ತೀನಿ. ಸುಖಾಸುಮ್ಮನೆ ನೀವು ಹೇಳ್ತಾ ಇದ್ದೀರಿ * ಸಿಸಿಬಿ: ನೀವು ಇಷ್ಟು ದಿನ ಎಸ್ಕೇಪ್ ಆಗಿದ್ಯಾಕೆ..? * ರೆಡ್ಡಿ: ನಾನು ಎಲ್ಲಿಯು ಓಡಿ ಹೋಗಿಲ್ಲ. ಹೈದರಾಬಾದ್ಗೂ ಹೋಗಿಲ್ಲ. ವಕೀಲರ ಜೊತೆ ಮಾತುಕತೆ ನಡೆಸುತ್ತಿದೆ. * ಸಿಸಿಬಿ: ನಾವು ಮನೆ ರೈಡ್ ಮಾಡಿದಾಗ ಎಲ್ಲಿ ಇದ್ರಿ.. * ರೆಡ್ಡಿ: ಬೆಂಗಳೂರಲ್ಲೇ.. ಬೇರೆ ಮನೇಲಿ ಇದ್ದೆ. ನನಗೆ ವಿಚಾರಣಾ ನೋಟಿಸ್ ಕೊಡೋ ಮೊದಲೇ ರೇಡ್ ಆಗಿದ್ದು ಯಾಕೆ..?
ಹೀಗೆ.. ವಿಚಾರಣೆ ಮುಂದುವರಿದಿದೆ.
ವಿಚಾರಣೆಯ ಮಧ್ಯೆಯೇ ತನಿಖಾಧಿಕಾರಿಗಳ ಪ್ರಶ್ನೆಗೆ ಸರಿಯಾಗಿ ಉತ್ತರಿಸದ ಪರಿಣಾಮ ಸಿಸಿಬಿ ಮುಖ್ಯಸ್ಥ ಅಲೋಕ್ ಕುಮಾರ್ ಕಚೇರಿಗೆ ಆಗಮಿಸಿ ರೆಡ್ಡಿಯನ್ನು ವಶಕ್ಕೆ ಪಡೆದು ಮತ್ತೆ ವಿಚಾರಣೆ ಮುಂದುವರಿಸಿದ್ದಾರೆ. ರೆಡ್ಡಿಗೆ ಐವರು ಪೊಲೀಸ್ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಅಲೋಕ್ ಕುಮಾರ್, ಡಿಸಿಪಿ ಗಿರೀಶ್, ಎಸ್ ಪಿಗಳಾದ ವೆಂಕಟೇಶ್ ಪೆಸನ್ನು ಸೇರಿದಂತೆ ಇತರ ಪೊಲೀಸರ ತಂಡ ಪ್ರಶ್ನೆಗಳನ್ನು ಕೇಳಿದ್ದಾರೆ.
ಹಾಸನ: ಪ್ಯಾರಾ ಒಲಿಂಪಿಕ್ ಅಥ್ಲೀಟ್ ಎಚ್ ಎನ್ ಗಿರೀಶ್ ಅವರಿಗೆ ಇಂದು ನಿಶ್ಚಿತಾರ್ಥ ಸಂಭ್ರಮ.
ಹೌದು. ಹಾಸನದ ತನ್ವಿ ತ್ರಿಶಾ ಕಲ್ಯಾಣ ಮಂಟಪದಲ್ಲಿ ಗಿರೀಶ್ ಇಂದು ಮೈಸೂರಿನ ಸಹನಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಗಿರೀಶ್ ಅವರು 2012ರಲ್ಲಿ ಲಂಡನ್ ನಲ್ಲಿ ನಡೆದ ಎತ್ತರ ಜಿಗಿತದಲ್ಲಿ 1.74 ಮೀ ಎತ್ತರಕ್ಕೆ ಜಿಗಿದು ರಜತ ಪದಕ ಗೆದ್ದಿದ್ದರು. ಭಾರತದಲ್ಲೇ ಮೊದಲ ಬಾರಿಗೆ ಈ ವಿಭಾಗದಲ್ಲಿ ಪದಕ ಪಡೆದ ಗಿರೀಶ್ ಹೊಸನಗರ ನಾಗರಾಜೇ ಗೌಡ ಅವರಿಗೆ ಅಭಿನಂದನೆಗಳು ಅಂತ ಅಂದು ಗುಜುರಾತ್ ಮುಖ್ಯಮಂತ್ರಿಯಾಗಿದ್ದಾಗ ಮೋದಿ ಟ್ವೀಟ್ ಮಾಡಿ ಶುಭಾಶಯ ಹೇಳಿದ್ದರು.
ಗಿರೀಶ್ ಅವರಿಗೆ 2012ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, 2013ರಲ್ಲಿ ಪದ್ಮಶ್ರೀ ಪ್ರಶಸ್ತಿ ಸಿಕ್ಕಿತ್ತು. 2014ರಲ್ಲಿ ಅರ್ಜುನ ಪ್ರಶಸ್ತಿಯ ಗೌರವಕ್ಕೆ ಪಾತ್ರರಾಗಿದ್ದರು.