Tag: Ghaziabad Police

  • 3ನೇ ಮದುವೆಯಾದ್ರೂ 2ನೇ ಗಂಡನೊಂದಿಗೆ ಸಂಬಂಧ- ರೊಚ್ಚಿಗೆದ್ದು ಪತ್ನಿಯನ್ನೇ ಕೊಲೆಗೈದ ಮೂರನೇ ಪತಿ

    3ನೇ ಮದುವೆಯಾದ್ರೂ 2ನೇ ಗಂಡನೊಂದಿಗೆ ಸಂಬಂಧ- ರೊಚ್ಚಿಗೆದ್ದು ಪತ್ನಿಯನ್ನೇ ಕೊಲೆಗೈದ ಮೂರನೇ ಪತಿ

    ಲಕ್ನೋ: ತಾನು 3ನೇ ಮದುವೆಯಾಗಿದ್ರೂ (Marriage) 2ನೇ ಗಂಡನೊಂದಿಗೆ ಸಂಬಂಧ ಮುಂದುವರಿಸಿದ್ದಾಳೆ ಎಂದು ತನ್ನ ಪತ್ನಿಯನ್ನೇ ಕೊಲೆಗೈದಿರುವ (Murder) ಘಟನೆ ಗಾಜಿಯಾಬಾದ್‌ನಲ್ಲಿ (Ghaziabad) ನಡೆದಿದೆ.

    ಕೊಲೆ ಆರೋಪದ ಮೇಲೆ 3ನೇ ಪತಿಯನ್ನು ಪೊಲೀಸರು (Police) ಬಂಧಿಸಿದ್ದಾರೆ. ಬಳಿಕ ನಡೆದ ತನಿಖೆಯಲ್ಲಿ ಆಕೆ 3ನೇ ಮದುವೆಯಾಗಿದ್ದರೂ 2ನೇ ಗಂಡನೊಂದಿಗೆ ಸಂಬಂಧ ಹೊಂದಿದ್ದಳು. ಅದಕ್ಕಾಗಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಗಾಜಿಯಾಬಾದ್ ಪೊಲೀಸರು (Ghaziabad Police) ತಿಳಿಸಿದ್ದಾರೆ. ಇದನ್ನೂ ಓದಿ: ನಾನು ಫ್ಯೂಚರ್‌ನಲ್ಲಿ ಮದುವೆ ಆದರೆ ರಾಜಣ್ಣ ಥರ ಇರುತ್ತೀನಿ: ರೂಪೇಶ್ ಶೆಟ್ಟಿ

    ಏನಿದು ಘಟನೆ?: ಇದೇ ತಿಂಗಳ ಡಿಸೆಂಬರ್ 26ರಂದು ಗಾಜಿಯಾಬಾದ್‌ನ ಕಾಶ್ಕಿರಾಮ್ ಕಾಲೋನಿಯಲ್ಲಿ ಭವ್ಯ ಶರ್ಮಾ ಹೆಸರಿನ ಮಹಿಳೆ (Women) ಕೊಲೆಯಾಗಿತ್ತು. ಬಳಿಕ ಪತಿ ವಿನೋದ್ ಶರ್ಮಾನನ್ನ ಪೊಲೀಸರು ಬಂಧಿಸಿದ್ದರು. ವಿಚಾರಣೆ ನಡೆಸಿದಾಗ ಭವ್ಯ ಈಗಾಗಲೇ ಮೂರು ಮದುವೆಯಾಗಿದ್ದಳು ಎಂಬುದು ತಿಳಿದುಬಂದಿದೆ. ಯೋಗೇಂದ್ರ ಯಾದವ್ ಜೊತೆ ಬೇಬಿ ಎಂಬ ಹೆಸರಿನಲ್ಲಿ ಮೊದಲ ಮದುವೆಯಾಗಿದ್ದ ಭವ್ಯ ಈ ಸಂಬಂಧ ಮುರಿದುಕೊಂಡು ಅನೀಸ್ ಅನ್ಸಾರಿ ಜೊತೆ ಆಸಿಫಾ ಎಂಬ ಹೆಸರಿನಲ್ಲಿ 2ನೇ ಮದುವೆಯಾಗಿದ್ದಳು. ಕಳೆದ 5 ತಿಂಗಳ ಹಿಂದೆ ಈ ಸಂಬಂಧವನ್ನೂ ಕಡಿದುಕೊಂಡು ವಿನೋದ್ ಶರ್ಮಾನೊಂದಿಗೆ ಭವ್ಯ ಹೆಸರಿನಲ್ಲಿ ಮದುವೆಯಾಗಿದ್ದಳು.

    ಕೆಲ ದಿನಗಳ ವರೆಗೆ ಸಂಸಾರ ಚೆನ್ನಾಗಿಯೇ ಇತ್ತು. ವಿನೋದ್ ಶರ್ಮಾಗೆ ಮಕ್ಕಳಿಲ್ಲದ ಕಾರಣ 2ನೇ ಪತಿ ಅನೀಸ್ ಅನ್ಸಾರಿಯ ಮಗನನ್ನೇ ತನ್ನ ಮಗನೆಂದು ಭಾವಿಸಿದ್ದಳು. ಆಗಾಗ್ಗೆ ಮಗುವನ್ನು ನೋಡಿಕೊಂಡು ಬರುತ್ತಿದ್ದಳು. ಇದೇ ಡಿಸೆಂಬರ್ 24 ರಂದು ಇಂಧೋರ್‌ಗೆ ಹೋಗಿದ್ದ ಭವ್ಯ 2ನೇ ಪತಿಯೊಂದಿಗಿದ್ದುಕೊಂಡೇ 3ನೇ ಪತಿಗೆ ವೀಡಿಯೋ ಕಾಲ್‌ ಮಾಡಿದ್ದಳು. ಇದರಿಂದ ಸಿಟ್ಟಿಗೆದ್ದ ಪತಿ ಆಗಲೇ ಕೊಲೆಗೆ ಪ್ಲ್ಯಾನ್ ಮಾಡಿದ್ದಾನೆ. ಇದನ್ನೂ ಓದಿ: ತಾಯಿಗೆ ಸರ್ಪ್ರೈಸ್‌ ಕೊಡಲು ತೆರಳ್ತಿದ್ದಾಗಲೇ ದುರಂತ – ಪಂತ್ ಅಭಿಮಾನಿಗಳ ಆಕ್ರಂದನ

    ಬಳಿಕ ಆಕೆ ಮನೆಗೆ ಬಂದಾಗ ಮಗನನ್ನು ಹೊರಗೆ ಕಳುಹಿಸಿ ಹರಿತವಾದ ಚಾಕುವಿನಿಂದ ಚುಚ್ಚಿ-ಚುಚ್ಚಿ ಕೊಲೆ ಮಾಡಿದ್ದಾನೆ. ರಕ್ತದ ಕಲೆಗಳು ಕಾಣಬಾರದು ಅಂತಾ ಶುಚಿಗೊಳಿಸಿದ್ದಾನೆ. ಬಳಿಕ ಮಗ ಬಂದಾಗ ಭವ್ಯ ಮಲಗಿರೋದಾಗಿ ಹೇಳಿ ಸುಮ್ಮನಾಗಿಸಿದ್ದಾನೆ. ಒಂದು ದಿನವಾದ್ರೂ ಆಕೆ ಎಚ್ಚರವಾಗದ ಹಿನ್ನೆಲೆಯಲ್ಲಿ ಅಳಲು ಶುರು ಮಾಡಿದ್ದಾನೆ. ನಂತರ ಕೊಲೆಯಾಗಿರುವುದು ಗೊತ್ತಾಗಿ ಆತನನ್ನು ಬಂಧಿಸಿದ್ದಾರೆ ಎಂದು ಗಾಜಿಯಾಬಾದ್ ಪೊಲೀಸರು ಮಾಹಿತಿ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ವಿವಾಹಿತೆಯೊಂದಿಗೆ ಪ್ರೇಮ- ಹೋಟೆಲ್‌ನಲ್ಲಿ ರಾತ್ರಿ ತನ್ನೊಂದಿಗೆ ಇರಲು ನಿರಾಕರಿಸಿದ್ದಕ್ಕೆ ಕೊಲೆ

    ವಿವಾಹಿತೆಯೊಂದಿಗೆ ಪ್ರೇಮ- ಹೋಟೆಲ್‌ನಲ್ಲಿ ರಾತ್ರಿ ತನ್ನೊಂದಿಗೆ ಇರಲು ನಿರಾಕರಿಸಿದ್ದಕ್ಕೆ ಕೊಲೆ

    ಲಕ್ನೋ: ಹೋಟೆಲ್‌ನಲ್ಲಿ (Hotel) ಒಂದು ರಾತ್ರಿ ತನ್ನೊಂದಿಗೆ ಉಳಿಯಲು ನಿರಾಕರಿಸಿದ್ದಕ್ಕೆ ವಿವಾಹಿತ ಪ್ರೇಯಸಿಯನ್ನ ಹತ್ಯೆಗೈದಿರುವ ಘಟನೆ ಉತ್ತರಪ್ರದೇಶದ (UttarPradesh) ಗಾಜಿಯಾಬಾದ್‌ನಲ್ಲಿ ನಡೆದಿದೆ.

    ಪ್ರೇಯಸಿಯನ್ನು (Lover) ಹತ್ಯೆ ಮಾಡಿದ ಆರೋಪದ ಮೇಲೆ ಗಾಜಿಯಾಬಾದ್ ಪೊಲೀಸರು (Ghaziabad Police) ಆರೋಪಿಯನ್ನ (Accused) ಬಂಧಿಸಿದ್ದಾರೆ. ಬಾಗ್‌ಪತ್ ಮೂಲದ ಯುವತಿ ರಚನಾ ಮದುವೆಯಾಗಿದ್ದರೂ ಆಗಾಗ್ಗೆ ತನ್ನ ಪ್ರಿಯಕರ ಗೌತಮ್‌ನನ್ನು ಭೇಟಿಯಾಗುತ್ತಿದ್ದಳು ಎಂದು ಆಕೆಯ ಪತಿ ರಾಜ್‌ಕುಮಾರ್ ತಿಳಿಸಿದ್ದಾರೆ. ಇದನ್ನೂ ಓದಿ: ಭೀಕರ ಸುನಾಮಿಗೆ 60 ಮಂದಿ ಬಲಿ – 15 ಸಾವಿರ ವಿಮಾನಗಳ ಸಂಚಾರ ರದ್ದು

    ಸಂತ್ರಸ್ತೆ ಡಿಸೆಂಬರ್ 25ರ ಕ್ರಿಸ್‌ಮಸ್ ದಿನದಂದು ಗಾಜಿಯಾಬಾದ್ ಹೋಟೆಲ್‌ನಲ್ಲಿ (Hotel) ಆರೋಪಿಯನ್ನ ಭೇಟಿಯಾಗಿದ್ದಳು. ಬಳಿಕ ಬೇಗನೇ ಹೊರಡಬೇಕೆಂದು ಕೇಳಿಕೊಂಡಿದ್ದಾಳೆ. ಮರುದಿನ ಹೋಟೆಲ್ ಸಿಬ್ಬಂದಿ ರೂಮ್‌ಗೆ ಹೋಗಿ ನೋಡಿದಾಗ ಆಕೆ ಕೊಲೆಯಾದ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬಂದಿದೆ. ತಕ್ಷಣವೇ ಅವರು ಪೊಲೀಸರಿಗೆ (Police) ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರು ಸಿಸಿಟಿವಿ ಪರಿಶೀಲಿಸಿ, ಆರೋಪಿಯನ್ನ ಬಂಧಿಸಿದ್ದಾರೆ. ಇದನ್ನೂ ಓದಿ: ಮಗಳ ಅಶ್ಲೀಲ ವೀಡಿಯೋ ಪೋಸ್ಟ್ ಮಾಡಿದ್ದನ್ನು ಖಂಡಿಸಿದ್ದಕ್ಕೆ ಯೋಧನ ಹತ್ಯೆ

    ಬಳಿಕ ತನಿಖೆಯಲ್ಲಿ ತನಗೂ ಸಂತ್ರಸ್ತೆಗೂ ಕಳೆದ ಮೂರು ತಿಂಗಳಿಂದ ಸಂಬಂಧವಿತ್ತು ಎಂದು ಒಪ್ಪಿಕೊಂಡಿದ್ದಾನೆ. ಡಿಸೆಂಬರ್ 25 ರಂದು ಭೇಟಿಯಾದಾಗ ರಚನಾ ತನ್ನೊಂದಿಗೆ ರಾತ್ರಿ ಹೋಟೆಲ್‌ನಲ್ಲಿ ಉಳಿಯಲು ನಿರಾಕರಿಸಿದಳು. ಆದ್ದರಿಂದ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದೇನೆ ಎಂಬುದಾಗಿ ಗೌತಮ್ ಪೊಲೀಸರ ಬಳಿ ಒಪ್ಪಿಕೊಂಡಿದ್ದಾನೆ.

    Live Tv
    [brid partner=56869869 player=32851 video=960834 autoplay=true]

  • PHD ಸಂಶೋಧಕನನ್ನ ಕೊಂದು ಕಾಲುವೆಗೆ ಎಸೆದಿದ್ದ ಸೈಕೋ ಕಿಲ್ಲರ್ – 2 ತಿಂಗಳ ನಂತರ ಕೇಸ್ ಪತ್ತೆ

    PHD ಸಂಶೋಧಕನನ್ನ ಕೊಂದು ಕಾಲುವೆಗೆ ಎಸೆದಿದ್ದ ಸೈಕೋ ಕಿಲ್ಲರ್ – 2 ತಿಂಗಳ ನಂತರ ಕೇಸ್ ಪತ್ತೆ

    ಲಕ್ನೋ: ತನ್ನ ಮನೆಯಲ್ಲಿ ಬಾಡಿಗೆಗೆ ಇದ್ದ ಪಿಹೆಚ್‌ಡಿ ಸಂಶೋಧಕನನ್ನ (PHD Scholar) ಕೊಂದು ರಾಜ್ಯದ ವಿವಿಧ ಕಾಲುವೆಗಳಲ್ಲಿ ಬಿಸಾಡಿದ್ದ ಘಟನೆ ಉತ್ತರ ಪ್ರದೇಶದಲ್ಲಿ (UttarPradesh) ನಡೆದಿದ್ದು, 2 ತಿಂಗಳ ನಂತರ ಕೇಸ್ (FIR) ಪತ್ತೆಯಾಗಿದೆ.

    ಬಾಡಿಗೆದಾರ ಅಂಕಿತ್ ಖೋಕರ್ ಕೊಲೆಯಾದ ವ್ಯಕ್ತಿಯಾಗಿದ್ದು, ಮೋದಿನಗರದ ಕೊಲೆ ಆರೋಪಿ ಉಮೇಶ್ ಶರ್ಮಾ ಹಾಗೂ ಹಂತಕನ ಸ್ನೇಹಿತ ಪರ್ವೇಶ್‌ನನ್ನೂ ಪೊಲೀಸರು ಬಂಧಿಸಿದ್ದಾರೆ.

    ಕೆಲ ವರ್ಷಗಳ ಹಿಂದೆ ಅಂಕಿತ್ ಖೋಕರ್ ತಮ್ಮ ಪೋಷಕರನ್ನು ಕಳೆದುಕೊಂಡಿದ್ದರು. ನಂತರ ಒಬ್ಬಂಟಿಯಾಗಿ ವಾಸಿಸುತ್ತಿದ್ದರು, ಲಕ್ನೋ ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ಸಂಶೋಧಕನಾಗಿದ್ದರು. ಬಾಡಿಗೆ ಮನೆಯಲ್ಲಿದ್ದ ಅಂಕಿತ್ ಖೋಕರ್ ಬಾಗ್‌ಪತ್‌ನಲ್ಲಿರುವ ತನ್ನ ಪೂರ್ವಜರ ಜಮೀನನ್ನು ಮಾರಾಟ ಮಾಡಿದ್ದ. ಇದರಿಂದ ಆತನಿಗೆ 1 ಕೋಟಿ ರೂ. ಬಂದಿತ್ತು. ಆ ಹಣದ ಮೇಲೆ ಕೊಲೆ ಆರೋಪಿ ಕಣ್ಣಿಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಮಂಡ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಕೇಂದ್ರ ಸಚಿವ ಕ್ರಿಶನ್ ಪಾಲ್ ಗುರ್ಜರ್‌

    ಆತ ವಾರಗಟ್ಟಲೆ ಸ್ನೇಹಿತರ ಕರೆಗಳಿಗೆ ಉತ್ತರಿಸದೇ ಇದ್ದಾಗ, ಅನುಮಾನಗೊಂಡು ಪೊಲೀಸರಿಗೆ (Ghaziabad Police) ತಿಳಿಸಿ ಹುಡುಕಾಟ ನಡೆಸಿದ್ದಾರೆ. ನಂತರ ಅಂಕಿತ್ ಮೊಬೈಲ್ ಸಂಖ್ಯೆಯಿಂದ ಕೆಲವು ಮೆಸೇಜ್‌ಗಳು ಬಂದಿವೆ. ಇದರಿಂದ ಸಂಭಾಷಣೆಯ ಶೈಲಿ ಅವನದ್ದಲ್ಲ ಅನ್ನೋದು ಗೊತ್ತಾಗಿದೆ. ಬಳಿಕೆ ಕರೆ ಮಾಡಿದರೂ ಉತ್ತರಿಸಲಿಲ್ಲ. ನಂತರ ತನಿಖೆ (Investigation) ಕೈಗೊಂಡಿದ್ದ ಪೊಲೀಸರು ಕಳೆದ ಅಕ್ಟೋಬರ್ 6 ರಂದು ಅಂಕಿತ್ ಖೋಕರ್ ಅವರನ್ನು ಕತ್ತು ಹಿಸುಕಿ ಕೊಂದಿದ್ದಾರೆ ಎಂಬುದನ್ನು ಪತ್ತೆಹಚ್ಚಿದ್ದಾರೆ. ಇದನ್ನೂ ಓದಿ: ಮೋದಿ ಸರ್ಕಾರದಲ್ಲಿ ಚೀನಾ ವಿರುದ್ಧ ಮಾತನಾಡಲು ಅವಕಾಶವೇ ಇಲ್ಲ – ಖರ್ಗೆ ಕಿಡಿ

    ಆರೋಪಿ ಕತ್ತು ಹಿಸುಕಿ ಕೊಂದ ನಂತರ ಗರಗಸ ಬಳಸಿ, ದೇಹವನ್ನು ಮೂರು ಭಾಗಗಳಾಗಿ ಕತ್ತರಿಸಿದ್ದಾನೆ. ಅವುಗಳನ್ನು ಅಲ್ಯೂಮಿನಿಯಂ ಫಾಯಿಲ್ ನಲ್ಲಿ (ಪಾರ್ಸೆಲ್ ಕವರ್) ಪ್ಯಾಕ್ ಮಾಡಿ, ಒಂದು ಭಾಗವನ್ನು ಮುಜಾಫರ್‌ನಗರದ ಖತೌಲಿಯಲ್ಲಿ ಕಾಲುವೆಯಲ್ಲಿ, ಇನ್ನೊಂದು ಭಾಗವನ್ನು ಮಸ್ಸೂರಿ ಕಾಲುವೆಯಲ್ಲಿ ಮತ್ತೊಂದು ಭಾಗವನ್ನು ಹೆದ್ದಾರಿಯಲ್ಲಿ ಬಿಸಾಕಿ ಬಂದಿದ್ದಾನೆ.

    ನಂತರ ಕೊಲೆಯಾದ ಅಂಕಿತ್ ಎಟಿಎಂ ಕಾರ್ಡ್ ಬಳಸಿ ಹಂತ-ಹಂತವಾಗಿ 20 ಲಕ್ಷ ರೂಪಾಯಿ ಡ್ರಾ ಮಾಡಿದ್ದಾನೆ. ನಂತರ ತನ್ನ ಸ್ನೇಹಿತ ಪರ್ವೇಶ್‌ಗೆ ನೀಡಿ ಉತ್ತರಾಖಂಡ್‌ನಲ್ಲಿ ಉಳಿದ ಹಣ ಡ್ರಾ ಮಾಡಿಕೊಳ್ಳುವಂತೆ, ಸಂತ್ರನ ಮೊಬೈಲ್ ಅನ್ನು ತನ್ನೊಂದಿಗೆ ತೆಗೆದುಕೊಂಡು ಹೋಗುವಂತೆ ಹೇಳಿದ್ದಾನೆ. ಜೊತೆಗೆ ಅಂಕಿತ್ ನಾಪತ್ತೆ ಎಂದು ವರದಿಯಾದರೆ ತನಿಖೆಯನ್ನು ತಪ್ಪುದಾರಿಗೆ ಎಳೆಯುವಂತೆ ಸಲಹೆ ನೀಡಿದ್ದಾನೆ ಎಂದು ಗಾಜಿಯಾಬಾದ್ ಗ್ರಾಮಾಂತರದ ಉಪ ಪೊಲೀಸ್ ಆಯುಕ್ತ ಇರಾಜ್ ರಾಜಾ ಮಾಹಿತಿ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪ್ರಿಯಕರನೊಂದಿಗೆ ಲವ್ವಿ-ಡವ್ವಿ – ಗಂಡನನ್ನ ಗುಂಡಿಟ್ಟು ಕೊಂದು, ಕತ್ತರಿಸಿ ಮನೆಯಲ್ಲೇ ಹೂತಿದ್ದ ಪತ್ನಿ

    ಪ್ರಿಯಕರನೊಂದಿಗೆ ಲವ್ವಿ-ಡವ್ವಿ – ಗಂಡನನ್ನ ಗುಂಡಿಟ್ಟು ಕೊಂದು, ಕತ್ತರಿಸಿ ಮನೆಯಲ್ಲೇ ಹೂತಿದ್ದ ಪತ್ನಿ

    ಲಕ್ನೋ: ರಾಷ್ಟ್ರರಾಜಧಾನಿಯಲ್ಲಿಂದು ಬೆಚ್ಚಿ ಬೀಳಿಸುವ ಘಟನೆಯೊಂದು ನಡೆದಿದೆ. ತನ್ನೊಂದಿಗೆ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ (Live In Relationship) ಗೆಳತಿಯನ್ನ ಕೊಂದು 35 ತುಂಡುಗಳಾಗಿ ಕತ್ತರಿಸಿ, ವಿವಿಧ ಅರಣ್ಯ ಪ್ರದೇಶದಲ್ಲಿ ಎಸೆದಿದ್ದ ಘಟನೆ ಬೆಳಕಿಗೆ ಬಂದಿದೆ. ಇದರ ಬೆನ್ನಲ್ಲೇ ಉತ್ತರ ಪ್ರದೇಶದ (Uttar Pradesh) ಗಾಜಿಯಾಬಾದ್‌ನಲ್ಲಿ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಕೊಲೆ ಮಾಡಿ ಮನೆಯೊಳಗೆ ಹೂತು ಹಾಕಿದ್ದ ಮಹಿಳೆಯನ್ನು ಗಾಜಿಯಾಬಾದ್ ಪೊಲೀಸರು (Ghaziabad Police) ಬಂಧಿಸಿರುವ ಘಟನೆಯೂ ಬೆಳಕಿಗೆ ಬಂದಿದೆ.

    ನಾಲ್ಕು ವರ್ಷಗಳ ಬಳಿಕ ಪ್ರಕರಣ ಬೆಳಕಿಗೆ ಬಂದಿದ್ದು, ಸೋಮವಾರ ಆರೋಪಿ ಸವಿತಾ ಹಾಗೂ ಪ್ರಿಯಕರ ಅರುಣ್ ಇಬ್ಬರನ್ನು ಬಂಧಿಸಲಾಗಿದೆ. ಇದನ್ನೂ ಓದಿ: ದೆಹಲಿಯ ಭಯಾನಕ ಕೃತ್ಯಕ್ಕೆ ಅಮೆರಿಕದ ಥ್ರಿಲ್ಲರ್ `ಡೆಕ್ಸ್ಟರ್‌’ ಸ್ಫೂರ್ತಿ – ರೋಚಕ ಸತ್ಯ ಬಯಲು

    ಏನಿದು ಮರ್ಡರ್ ಮಿಸ್ಟ್ರಿ?
    ಕಳೆದ ನಾಲ್ಕು ವರ್ಷಗಳ ಹಿಂದೆ ಆರೋಪಿ ಸವಿತಾ ತನ್ನ ಪ್ರಿಯಕರ ಅರುಣ್ ಜೊತೆ ಸೇರಿಕೊಂಡು ಪತಿ ಚಂದ್ರವೀರ್ ಮೇಲೆ ಗುಂಡು ಹಾರಿಸಿ ಕೊಂದಿದ್ದಾಳೆ. ಬಳಿಕ ತುಂಡುತುಂಡಾಗಿ ಕತ್ತರಿಸಿ ಶವವನ್ನು ಚಂದ್ರವೀರ್‌ನ ಮನೆಯೊಳಗೆ 7 ಅಡಿ ಗುಂಡಿ ತೋಡಿ ಹೂತು ಹಾಕಲಾಗಿತ್ತು. ಶವದ ಕೊಳೆತ ದುರ್ವಾಸನೆ ಬರಬಾರದು ಎಂದು 7 ಅಡಿ ಗುಂಡು ತೆಗೆದು ಹೂತು ಹಾಕಿದ್ದರು. ಆದರೂ ಏನೂ ಆಗಿಲ್ಲವೆಂಬಂತೆ ಅದೇ ಮನೆಯಲ್ಲಿ ವಾಸವಾಗಿದ್ದರು.

    ಕೃತ್ಯ ಎಸಗುವುದಕ್ಕೂ ಮುನ್ನ ಚಂದ್ರವೀರ್ ಮನೆಯಲ್ಲಿ ಏಳು ಅಡಿಯ ಗುಂಡಿ ತೋಡಲಾಗಿತ್ತು. ಬಳಿಕ ಗಂಡನನ್ನು ಅಪಹರಣ ಮಾಡಿ ಗುಂಡಿಕ್ಕಿ ಕೊಲೆ ಮಾಡಿ, ಹೂತು ಹಾಕಿದ್ದಾರೆ. ಬಳಿಕ ಸವಿತಾ ಈ ಕೃತ್ಯವನ್ನು ತನ್ನ ಸಹೋದರನ ಮೇಲೆ ಹೊರಿಸಿದ್ದಳು. ಇದನ್ನೂ ಓದಿ: ಕಾಮೋತ್ತೇಜಕ ಮಾತ್ರೆ ಸೇವಿಸಿ ರೇಪ್ – ವಿಪರೀತ ರಕ್ತಸ್ರಾವದಿಂದ ಗೆಳತಿ ಸಾವು

    ಇದೀಗ 4 ವರ್ಷಗಳ ಬಳಿಕ ಪ್ರಕರಣ ಬಯಲಾಗಿದ್ದು, ಹೂತು ಹಾಕಿದ್ದ ಜಾಗದಿಂದ ಪೊಲೀಸರು (Police) ಮೃತದೇಹವನ್ನು ಹೊರತೆಗೆದಿದ್ದಾರೆ. ಕೃತ್ಯಕ್ಕೆ ಬಳಸಲಾಗಿದ್ದ ಆಯುಧಗಳನ್ನು ಮುಟ್ಟುಗೋಲು ಹಾಕಲಾಗಿದೆ. ಒಂದು ಪಿಸ್ತೂಲು ಹಾಗೂ ಕೊಡಲಿಯನ್ನು ವಶಪಡಿಸಿಕೊಳ್ಳಲಾಗಿದೆ.

    Live Tv
    [brid partner=56869869 player=32851 video=960834 autoplay=true]