Tag: ghajiyabad

  • ದಂಗೆಯ ನೆಪ, ರೈತ ಹೋರಾಟ ಹತ್ತಿಕ್ಕಲು ಯತ್ನ? – ಧರಣಿ ಸ್ಥಳದಲ್ಲಿ ಕರೆಂಟ್, ನೀರು ಕಟ್

    ದಂಗೆಯ ನೆಪ, ರೈತ ಹೋರಾಟ ಹತ್ತಿಕ್ಕಲು ಯತ್ನ? – ಧರಣಿ ಸ್ಥಳದಲ್ಲಿ ಕರೆಂಟ್, ನೀರು ಕಟ್

    ನವದೆಹಲಿ: ರೈತರ ಹೋರಾಟ ಸ್ಥಳಗಳಾದ ದೆಹಲಿ ಗಡಿಗಳಲ್ಲಿ ಇಂದು ಸಂಜೆಯಿಂದ ಭಾರೀ ಹೈಡ್ರಾಮಾಗಳು ನಡೆಯುತ್ತಿವೆ. ಉದ್ವಿಗ್ನತೆ ಮನೆ ಮಾಡಿದೆ. ಯಾವಾಗ ಏನು ನಡೆಯುತ್ತೋ ಎಂಬ ಭಯ, ಆತಂಕ ಮನೆ ಮಾಡಿದೆ. ದೆಹಲಿ ಗಲಭೆ ಪ್ರಕರಣವನ್ನೇ ನೆಪ ಮಾಡಿಕೊಂಡು ಉತ್ತರ ಪ್ರದೇಶ ಸರ್ಕಾರ ರೈತ ಹೋರಾಟವನ್ನು ಪೊಲೀಸರ ಮೂಲಕ ಹತ್ತಿಕ್ಕುವ ಪ್ರಯತ್ನ ನಡೆಸಿದೆ.

    ಘಾಜಿಪುರ ಗಡಿಯಲ್ಲಿ ಇದ್ದಕ್ಕಿದ್ದಂತೆ ಸಾವಿರಾರು ಶಸ್ತ್ರಸಜ್ಜಿತ ಪೊಲೀಸರು ಕಾಣಿಸಿಕೊಂಡಿದ್ದು, ಈ ಕೂಡಲೇ ಧರಣಿ ಅಂತ್ಯಗೊಳಿಸಿ ಜಾಗ ಖಾಲಿ ಮಾಡಿ ಒತ್ತಡ ಹಾಕಲಾಗ್ತಿದೆ. ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ಅನುಮಾಡಿಕೊಡುವಂತೆ ರೈತರ ಮೇಲೆ ಒತ್ತಡ ಹೇರುತ್ತಿದ್ದಾರೆ. ರೈತರು ಬೀಡುಬಿಟ್ಟಿರುವ ಘಾಜಿಪುರ ಗಡಿ ಪ್ರದೇಶದಲ್ಲಿ ವಿದ್ಯುತ್, ನೀರಿನ ಸಂಪರ್ಕವನ್ನು ಘಾಜಿಯಾಬಾದ್ ಜಿಲ್ಲಾಡಳಿತ ಕಡಿತ ಮಾಡಿದೆ.

    ರೈತ ಹೋರಾಟದ ಮುಂದಾಳು ರಾಕೇಶ್ ಟಿಕಾಯತ್ ಮಾತ್ರ, ಯಾವುದೇ ಕಾರಣಕ್ಕೂ ನಾವಿಲ್ಲಿಂದ ಕದಲಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ. ಗುಂಡು ಹೊಡೀತೀರಾ ಹೊಡೀರಿ ಎಂದು ಎಂದು ನೇರ ಸವಾಲು ಹಾಕಿದ್ದಾರೆ. ನಮ್ಮನ್ನು ಏನಾದ್ರೂ ಮುಟ್ಟಿದ್ರೆ,. ಅರೆಸ್ಟ್ ಮಾಡಿದ್ರೆ, ನಮಗೆ ನಾವೇ ಪ್ರಾಣಗಳನ್ನು ಅರ್ಪಿಸಿಕೊಳ್ಳಲು ಸಿದ್ಧ ಎಂದು ಘೋಷಿಸಿದ್ದಾರೆ. ಶಾಂತಿಯುತ ಪ್ರತಿಭಟನೆಗೆ ಅಡ್ಡಿಯಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ಘಾಜಿಪುರದಲ್ಲಿ ಯಾವುದೇ ಹಿಂಸಾಚಾರ ಸಂಭವಿಸಿಲ್ಲ. ಹೀಗಾಗಿದ್ದು ನಮ್ಮನ್ನು ಒಕ್ಕಲೆಬ್ಬಿಸಲು ಹೊರಟಿರೋದು ಸರಿಯಲ್ಲ ಎಂದು ರಾಕೇಶ್ ಟಿಕಾಯತ್ ಗುಡುಗಿದ್ದಾರೆ.

    ಘಾಜಿಯಾಬಾದ್ ಜಿಲ್ಲಾಡಳಿತ ಮಾತ್ರ, ನೀವು ಸಾರ್ವಜನಿಕ ರಸ್ತೆಯಲ್ಲಿ ತೊಂದರೆ ಉಂಟು ಮಾಡುತ್ತಿರೋದನ್ನ ಸಹಿಸಲು ಸಾಧ್ಯವೇ ಇಲ್ಲ. ಈ ರಾತ್ರಿಯೊಳಗೆ ನೀವು ಖಾಲಿ ಮಾಡಲೇಬೇಕು. ಇಲ್ಲದಿದ್ರೆ ಬಲ ಪ್ರಯೋಗ ಮಾಡಬೇಕಾಗುತ್ತದೆ ಎಂದು ವಾರ್ನಿಂಗ್ ನೀಡಿದ್ದಾರೆ.

    ಸ್ಥಳದಲ್ಲಿ ಸಿಐಎಸ್‍ಎಫ್, ಸಿಆರ್ ಪಿಎಫ್, ಆರ್‍ಎಎಫ್ ಪಡೆಗಳನ್ನು ದೊಡ್ಡಮಟ್ಟದಲ್ಲಿ ನಿಯೋಜಿಸಲಾಗಿದೆ. 144 ಸೆಕ್ಷನ್ ಜಾರಿ ಮಾಡಲಾಗಿದೆ. ಡಿಸಿ, ಎಸ್‍ಪಿ, ಡಿಸಿಪಿಗಳು ಬೀಡುಬಿಟ್ಟಿದ್ದಾರೆ. ಇಂದು ರಾತ್ರಿಯೊಳಗೆ ರೈತರನ್ನು ಖಾಲಿ ಮಾಡಿಸುವಂತೆ ಉತ್ತರ ಪ್ರದೇಶ ಸರ್ಕಾರ, ಘಾಜಿಯಾಬಾದ್ ಜಿಲ್ಲಾಡಳಿತಕ್ಕೆ ಆದೇಶ ನೀಡಿದೆ. ಇನ್ನು ಸಿಂಘು, ಟಿಕ್ರಿ ಗಡಿಯಲ್ಲಿಯೂ ಹೆಚ್ಚು ಕಡಿಮೆ ಇದೇ ರೀತಿಯ ಪರಿಸ್ಥಿತಿ ಕಂಡು ಬರುತ್ತಿದೆ. ಎಲ್ಲಾ ಕಡೆ ಸಾವಿರಾರು ಪೊಲೀಸರನ್ನು ನಿಯೋಜಿಸಲಾಗಿದೆ. ದೆಹಲಿ ಗಡಿಗಳೆಲ್ಲಾ ಮೂರು ಸುತ್ತಿನ ಪೊಲೀಸ್ ಕೋಟೆಗಳಾಗಿ ಬದಲಾಗಿವೆ.

  • 22ನೇ ಮಹಡಿಯಿಂದ ಜಿಗಿದ 21 ವರ್ಷದ ಯುವಕ

    22ನೇ ಮಹಡಿಯಿಂದ ಜಿಗಿದ 21 ವರ್ಷದ ಯುವಕ

    -ಪೊಲೀಸರಿಂದ ಘಟನಾ ಸ್ಥಳದ ಪರಿಶೀಲನೆ

    ನವದೆಹಲಿ: 21 ವರ್ಷದ ಯುವಕ 22ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಘಾಜಿಯಾಬಾದ್ ನಲ್ಲಿ ನಡೆದಿದೆ.

    ಘಾಜಿಯಾಬಾದ್ ನಲ್ಲಿ ಇಂದಿರಾಪುರಂನಲ್ಲಿ ಘಟನೆ ನಡೆದಿದೆ. ಯುವಕ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಎಂದು ತಿಳಿದಿ ಬಂದಿದೆ. ಘಟನಾ ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಲಭ್ಯವಾಗಿಲ್ಲ. ಯುವಕ ವಿದ್ಯಾರ್ಥಿಯಾಗಿದ್ದು, ಕೊರೊನಾದಿಂದಾಗಿ ಕಾಲೇಜು ಬಂದ್ ಆಗಿದ್ದರಿಂದ ಮನೆಯಲ್ಲಿದ್ದನು.

    ಈ ಕುರಿತು ಮಾಹಿತಿ ನೀಡಿರುವ ಎಎಸ್‍ಪಿ ಅಂಶು ಜೈನ್, ಘಟನೆ ನಡೆದ ವೇಳೆ ಯುವಕನ ಕುಟುಂಬಸ್ಥರು ಮನೆಯಲ್ಲಿದ್ದರು. ಯುವಕ ನೆರೆಯ ಕಟ್ಟಡದ ಮೇಲೆ ಹೋಗುತ್ತಿರೋದನ್ನು ಸ್ಥಳೀಯರು ಗಮನಿಸಿದ್ದಾರೆ. ಮೇಲ್ನೋಟಕ್ಕೆ ಆತ್ಮಹತ್ಯೆ ಎಂದು ಕಂಡು ಬಂದಿದೆ. ಪ್ರಕರಣ ದಾಖಲಿಸಿಕೊಂಡಿದ್ದು, ಪೋಷಕರು ಮತ್ತು ನೆರೆಹೊರೆಯವರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.

     

  • ಶಾಲೆ ಆವರಣದಲ್ಲಿ ಕಾಲುಜಾರಿ ಬಿದ್ದು 10 ವರ್ಷದ ಬಾಲಕ ಸಾವು!

    ಶಾಲೆ ಆವರಣದಲ್ಲಿ ಕಾಲುಜಾರಿ ಬಿದ್ದು 10 ವರ್ಷದ ಬಾಲಕ ಸಾವು!

    ಘಜಿಯಾಬಾದ್: ಇಲ್ಲಿನ ಇಂದಿರಾಪುರಂ ಶಾಲೆಯ ಎರಡನೇ ಮಹಡಿಯ ಆವರಣದಲ್ಲಿ 10 ವರ್ಷದ ಬಾಲಕನೊಬ್ಬ ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ.

    ಅರ್ಮನ್ ಸೆಹಗಲ್ ಮೃತ ದುರ್ದೈವಿ ಬಾಲಕ. ಈತ ಇಂದಿರಾಪುರಂ ಜಿ ಜಿ ಗೊಯೆಂಕಾ ಪಬ್ಲಿಕ್ ಸ್ಕೂಲ್ ನಲ್ಲಿ 4 ನೇ ತರಗತಿ ಓದುತ್ತಿದ್ದನು.

    ಏನಿದು ಘಟನೆ?: ತಂದೆ ಗುಲ್ಶನ್ ಸೆಹಗಲ್ ಮಗ ಅರ್ಮನ್ ನನ್ನು ಮಂಗಳವಾರ ಬೆಳಗ್ಗೆ 7.30ರ ವೇಳೆಗೆ ಶಾಲೆಗೆ ಬಿಟ್ಟು ಬಂದಿದ್ದರು. ಅಂದು ಅರ್ಮನ್ ಗೆ ವಾರದ ಪರೀಕ್ಷೆ ನಡೆಯುವುದಿತ್ತು. ಹೀಗಾಗಿ ಮಗನನ್ನು ತಂದೆ ಬೇಗನೆ ಶಾಲೆಗೆ ಬಿಟ್ಟು ಬಂದಿದ್ದರು. ಗುಲ್ಶನ್ ಮನೆಗೆ ಹಿಂದಿರುಗುತ್ತಿದ್ದಂತೆಯೇ ಅರ್ಮನ್ ಶಾಲೆಯ ಆವರಣದಲ್ಲಿ ಕಾಲು ಜಾರಿ ಬಿದ್ದಿದ್ದಾನೆ. ಹೀಗಾಗಿ ಆತನನ್ನು ಕೂಡಲೇ ನಗರದ ಶಾಂತಿ ಗೋಪಾಲ್ ಆಸ್ಪತ್ರೆಗೆ ದಾಖಲಿಸಿರುವುದಾಗಿ ಶಾಲೆಯಿಂದ ಕರೆ ಬಂದಿದೆ. ಅಂತೆಯೇ ಅರ್ಮನ್ ಪೋಷಕರು ಆಸ್ಪತ್ರೆಗೆ ಕೂಡಲೇ ತೆರಳಿದ್ರು. ಆದ್ರೆ ಅದಾಗಲೇ ವೈದ್ಯರು ಆತ ಮೃತಪಟ್ಟಿದ್ದಾನೆ ಅಂತ ಹೇಳಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ತಲೆಗೆ ತೀವ್ರ ಗಾಯಗಳಾಗಿರುವುದರಿಂದ ಬಾಲಕ ಮೃತಪಟ್ಟಿದ್ದಾನೆ ಅಂತ ಹೇಳಲಾಗಿದೆ.

    ಹೆತ್ತವರ ಆರೋಪವೇನು?: ಶಾಲೆಯ ಶಿಕ್ಷಕರ ನಿರ್ಲಕ್ಷ್ಯಕ್ಕೆ ನನ್ನ ಮಗ ಬಲಿಯಾಗಿದ್ದಾನೆ ಅಂತ ಆರೋಪಿಸುತ್ತಿದ್ದಾರೆ. ಮಗ ಶಾಲೆಯಲ್ಲಿ ಬಿದ್ದ ಕೂಡಲೇ ಯಾರೊಬ್ಬರು ನಮಗೆ ಮಾಹಿತಿ ನೀಡಿಲ್ಲ. ಆತನನ್ನು ಆಸ್ಪತ್ರೆಗೆ ದಾಖಲಿಸಿದ ಬಳಿಕ ನಮಗೆ ಕರೆ ಮಾಡಿದ್ದಾರೆ ಅಂತ ಅರ್ಮನ್ ತಾಯಿ ಸ್ವಾತಿ ಸೆಹಗಲ್ ತಿಳಿಸಿದ್ದಾರೆ.

    ಅರ್ಮನ್ ಕಾಲು ಜಾರಿ ಬಿದ್ದ ಕೂಡಲೇ ಅಲ್ಲೇ ಮೂತ್ರ ವಿಸರ್ಜನೆ ಮಾಡಿಕೊಂಡಿದ್ದಾನೆ ಅಂತ ಶಾಲೆಯವರು ಹೇಳುತ್ತಾರೆ. ಆದ್ರೆ ಇದು ಸುಳ್ಳು. ಶಾಲೆಯ ಆವರಣದಲ್ಲಿ ನೀರು ಇದ್ದುದರಿಂದ ಆತ ಕಾಲು ಜಾರಿ ಬಿದ್ದಿದ್ದಾನೆ. ಇಲ್ಲಿ ನಿಜ ವಿಚಾರವನ್ನು ಶಾಲೆಯ ಆಡಳಿತ ಮಂಡಳಿ ಮುಚ್ಚಿಡುತ್ತಿದೆ. ನನ್ನ ಎದುರೇ ಅರ್ಮನ್ ಕಾಲು ಜಾರಿ ಬಿದ್ದಿದ್ದಾನೆ ಅಂತ ಆತನ ಕ್ಲಾಸ್ ಟೀಚರ್ ಹೇಳುತ್ತಿದ್ದಾರೆ. ಆದ್ರೆ ಇದನ್ನು ನಾನು ನಂಬಲ್ಲ. ನನ್ನ ಮಗ ಅಷ್ಟೊಂದು ದುರ್ಬಲನಲ್ಲ. ಹೀಗಾಗಿ ಆವರಣದಲ್ಲಿ ನೀರಿದ್ದ ಕಾರಣವೇ ಆತ ಕಾಲು ಜಾರಿ ಬಿದ್ದಿದ್ದಾನೆ. ಯಾಕಂದ್ರೆ ನಾನು ಆತನ ದೇಹವನ್ನು ಪರಿಶೀಲಿಸಿದಾಗ ಬಟ್ಟೆ ಒದ್ದೆಯಾಗಿತ್ತು ಅಂತ ಸ್ವಾತಿ ಆರೋಪಿಸಿದ್ದಾರೆ.

    ಆದ್ರೆ ಸ್ವಾತಿ ಅವರ ಆರೋಪಗಳನ್ನು ಶಾಲೆಯ ಪ್ರಾಂಶುಪಾಲೆ ಡಾ. ಕವಿತಾ ಶರ್ಮಾ ತಳ್ಳಿ ಹಾಕಿದ್ದಾರೆ. ಶಾಲೆಯಲ್ಲಿ ಆ ದಿನ ಪರೀಕ್ಷೆ ನಡೆಯುತ್ತಿತ್ತು. ಹೀಗಾಗಿ ಅರ್ಮನ್ ಪೆನ್ಸಿಲ್ ತರಲೆಂದು ಎಕ್ಸಾಂ ಹಾಲ್ ನಿಂದ ಹೊರಗಡೆ ಹೋಗಿದ್ದನು. ಈ ವೇಳೆ ಶಾಲೆಯ ಕಾರಿಡಾರ್ ನಲ್ಲಿ ಆತ ಕಾಲು ಜಾರಿ ಬಿದ್ದಿದ್ದಾನೆ ಅಂತ ಹೇಳಿದ್ದಾರೆ.

    ಇದೊಂದು ದುರದೃಷ್ಟಕರ ಘಟನೆಯಾಗಿದೆ. ಆತ ಇನ್ನೊಂದು ಕ್ಲಾಸಿಗೆ ನಡೆದುಕೊಂಡು ಹೋಗುತ್ತಿದ್ದಾಗ ಕಾಲು ಜಾರಿ ಬಿದ್ದಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದ್ರೆ ಆತನನ್ನು ಉಳಿಸಿಕೊಳ್ಳಲಾಗುತ್ತಿಲ್ಲ. ಆತ ಬಿದ್ದ ಜಾಗ ಅಥವಾ ಸುತ್ತಲೂ ನೀರು ಇರಲಿಲ್ಲ. ಪ್ರಕರಣದ ಕುರಿತಂತೆ ಪೊಲಿಸರು ತನಿಖೆ ಮುಂದುವರೆಸಿದ್ದಾರೆ ಅಂತ ಹೇಳಿದ್ರು.

    ಅರ್ಮನ್ ಕಾಲು ಜಾರಿ ಬಿದ್ದ ಜಾಗದ ಸುತ್ತಮುತ್ತ ಸಿಸಿಟಿವಿ ಅಳವಡಿಸಿಲ್ಲ ಅಂತ ಶಾಲೆಯ ಅಧಿಕಾರಿಗಳು ಹೇಳಿದ್ದಾರೆ. ಒಟ್ಟಿನಲ್ಲಿ ಬಾಲಕ ಪೋಷಕರ ಆರೋಪದ ಮೇರೆಗೆ ಇದೀಗ ಶಾಲೆಯ ಪ್ರಾಂಶುಪಾಲೆ ಹಾಗೂ ಆಡಳಿತ ಮಂಡಳಿ ವಿರುದ್ಧ ಎಫ್‍ಐಆರ್ ದಾಖಲಾಗಿದೆ.