Tag: GESCOM

  • ಜೆಸ್ಕಾಂ ಅಧಿಕಾರಿಗಳ ಚೆಲ್ಲಾಟ, ರೈತರಿಗೆ ಪ್ರಾಣ ಸಂಕಷ್ಟ

    ಜೆಸ್ಕಾಂ ಅಧಿಕಾರಿಗಳ ಚೆಲ್ಲಾಟ, ರೈತರಿಗೆ ಪ್ರಾಣ ಸಂಕಷ್ಟ

    – ವಿದ್ಯುತ್ ಕಣ್ಣಾಮುಚ್ಚಾಲೆಗೆ ಒಣಗುತ್ತಿರೋ ಬೆಳೆಗಳು

    ಯಾದಗಿರಿ: ಜಿಲ್ಲೆಯ ರೈತರ ಪಾಡು ಹೇಳ ತೀರದಾಗಿದೆ. ಕೊರೊನಾ ಸಂಕಷ್ಟದಿಂದ ಚೇತರಿಸಿಕೊಳ್ಳುವ ಹೊತ್ತಿನಲ್ಲಿಯೇ ಮಳೆ ಮತ್ತು ಭೀಮಾನದಿ ಪ್ರವಾಹ ಅನ್ನದಾತರ ಬದುಕನ್ನು ಕಸಿದುಕೊಳ್ಳುತ್ತಿದೆ. ಇಂತಹ ವೇಳೆಯಲ್ಲಿ ಜೆಸ್ಕಾಂ ಅಧಿಕಾರಿಗಳ ಚೆಲ್ಲಾಟ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

    ಯಾದಗಿರಿ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಬೆಳೆಗಾಗಿ 7 ರಿಂದ 9 ಗಂಟೆ ಡಬಲ್ ಫೇಸ್ ವಿದ್ಯುತ್ ನೀಡಬೇಕು. ಆದರೆ ಜೆಸ್ಕಾಂ ಅಧಿಕಾರಿಗಳು ಕೆಲ ಭಾಗದಲ್ಲಿ ಕೇವಲ 4 ರಿಂದ 5 ತಾಸು ವಿದ್ಯುತ್ ನೀಡುತ್ತಿದ್ದಾರೆ. ಅದರಲ್ಲೂ ಸಹ ಸಿಂಗಲ್ ಫೇಸ್ ಗಂಟೆಗೆ ಒಂದು ಸಲ ವಿದ್ಯುತ್ ತೆಗೆದು ಹಾಕುತ್ತಿದ್ದು, ಇದು ಪಂಪ್‍ಸೆಟ್ ನಂಬಿಕೊಂಡಿರುವ ರೈತರಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ. ಜೆಸ್ಕಾಂ ಎಇ ಗಳಿಗ ನಿರ್ಲಕ್ಷ್ಯ ಧೋರಣೆಗೆ ರೈತಾಪಿ ವರ್ಗದಲ್ಲಿ ಅಸಮಾಧಾನ ಕೇಳಿ ಬರುತ್ತಿದೆ.

    ಇನ್ನೂ ಯಾದಗಿರಿ ಜಿಲ್ಲೆಯ ಕೆಂಬಾವಿ ಜೆಸ್ಕಾಂ ಘಟಕದ ವ್ಯಾಪ್ತಿಗೆ ಒಳಪಡುವ ನಗನೂರ, ಗುಂಡಳ್ಳಿ, ಖಾನಾಪುರ ಎಸ್ ಕೆ, ಕಿರದಳ್ಳಿಯ ನೂರಾರು ರೈತರು ವಿದ್ಯುತ್ ನಂಬಿಕೊಂಡು ಹಲವಾರು ತೋಟಗಾರಿಕೆ ಮತ್ತು ವಾಣಿಜ್ಯ ಬೆಳೆಗಳನ್ನು ಲಕ್ಷಾಂತರ ರೂಪಾಯಿ ಖರ್ಚು ಹಾಕಿದ್ದಾರೆ. ನಾಟಿ ಮಾಡಿರುವ ಬೆಳೆಯಲ್ಲಾ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಇಲ್ಲದ ಕಾರಣ ಸಕಾಲಕ್ಕೆ ನೀರು ಸೀಗದೆ ಬೆಳೆ ಹಾಳಾಗುತ್ತಿದೆ. ಅದರಲ್ಲಿ ದ್ರಾಕ್ಷಿ ಬೆಳೆ ಪ್ರಮುಖವಾಗಿದೆ. ಅಲ್ಲದೆ ಜಿಲ್ಲೆಯ ಶಹಪುರ, ಸುರಪುರ, ಹುಣಸಗಿ, ವಡಗೇರಾ ಮತ್ತು ಗುರುಮಿಠಕಲ್ ಭಾಗದಲ್ಲಿ ಇದೇ ರೀತಿ ಪರಿಸ್ಥಿತಿಯಿದ್ದು, ಜಿಲ್ಲಾಡಳಿತ ಮಾತ್ರ ಜಾಣ ನಿದ್ದೆ ಜಾರಿದೆ.

  • ವಿದ್ಯುತ್ ಶಾಕ್- ಹಸುವಿನ ಪ್ರಾಣ ರಕ್ಷಿಸಲು ಹೋಗಿ ಬಾಲಕ ಸಾವು

    ವಿದ್ಯುತ್ ಶಾಕ್- ಹಸುವಿನ ಪ್ರಾಣ ರಕ್ಷಿಸಲು ಹೋಗಿ ಬಾಲಕ ಸಾವು

    ಕಲಬುರಗಿ: ವಿದ್ಯುತ್ ಶಾಕ್ ತಗುಲಿದ್ದ ಹಸುವಿನ ಪ್ರಾಣ ರಕ್ಷಿಸಲು ಹೋಗಿ ಬಾಲಕ ಬಲಿಯಾಗಿರುವ ಆಘಾತಕಾರಿ ಘಟನೆ ಕಲಬುರಗಿಯಲ್ಲಿ ನಡೆದಿದೆ.

    ಜಿಲ್ಲೆಯ ಶಹಬಾದ್ ತಾಲೂಕಿನ ಶಂಕರವಾಡಿ ಗ್ರಾಮದ ಬಳಿ ಘಟನೆ ನಡೆದಿದ್ದು, ಬೀರಣ್ಣ (15) ಮೃತ ಬಾಲಕ, ಹಸು ಮೇಯಿಸಲು ಕಾರ್ಖಾನೆ ಕಾಂಪೌಂಡ್ ಬಳಿ ತೆರಳಿದ್ದ. ಈ ವೇಳೆ ಕಾಂಪೌಂಡ್ ಬಳಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ಹಸು ತುಳಿದಿದೆ. ಇದನ್ನು ಕಂಡ ಬಾಲಕ, ತಕ್ಷಣ ಹಸುವನ್ನು ರಕ್ಷಿಸಲು ಹೋಗಿದ್ದಾನೆ. ಆಗ ಬಾಲಕನಿಗೂ ವಿದ್ಯುತ್ ಶಾಕ್ ತಗುಲಿದೆ. ದುರಾದೃಷ್ಟವಶಾತ್ 15 ವರ್ಷದ ಬಾಲಕ ಮತ್ತು ಹಸು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

    ಘಟನೆ ಬಳಿಕ ಸ್ಥಳಕ್ಕೆ ಜೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಈ ಕುರಿತು ಶಹಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕುಟುಂಬಸ್ಥರು ಹಾಗೂ ಸ್ಥಳೀಯರು ಜೆಸ್ಕಾಂ ನಿರ್ಲಕ್ಷ್ಯದ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಮಳೆರಾಯನ ಆರ್ಭಟಕ್ಕೆ 150ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗೆ- ಜೆಸ್ಕಾಂ ನಿರ್ಲಕ್ಷ್ಯಕ್ಕೆ ಜನ ಗರಂ

    ಮಳೆರಾಯನ ಆರ್ಭಟಕ್ಕೆ 150ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗೆ- ಜೆಸ್ಕಾಂ ನಿರ್ಲಕ್ಷ್ಯಕ್ಕೆ ಜನ ಗರಂ

    ಬಳ್ಳಾರಿ: ಕಳೆದ ಎರಡು ದಿನಗಳ ಹಿಂದೆ ಸುರಿದ ಬಿರುಗಾಳಿ ಸಹಿತ ಭಾರೀ ಮಳೆಗೆ ಬಳ್ಳಾರಿ ತಾಲೂಕಿನ ವಿವಿಧ ಗ್ರಾಮಗಳಲ್ಲಿನ ನೂರಾರು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ.

    ತಾಲೂಕಿನ ತಿರುಮಲನಗರ ಕ್ಯಾಂಪ್, ಧನಲಕ್ಷ್ಮಿ ಕ್ಯಾಂಪ್, ವಿಘ್ನೇಶ್ವರ ಕ್ಯಾಂಪ್, ಕಮ್ಮರಚೇಡು, ಶಂಕರಬಂಡೆ, ರೂಪನಗುಡಿ ಸೇರಿದಂತೆ ಹಲವೆಡೆ ಸರಿಸುಮಾರು 150ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಹೀಗಾಗಿ ತಾಲೂಕಿನ ಈ ಎಲ್ಲ ಗ್ರಾಮಗಳಲ್ಲಿ ವಿದ್ಯುತ್ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.

    ವಿದ್ಯುತ್ ಸಂಪರ್ಕವಿಲ್ಲದೆ, ಜನರು ಪರದಾಡುತ್ತಿದ್ದಾರೆ. ಆದರೆ ಜೆಸ್ಕಾಂ ಅಧಿಕಾರಿಗಳು ಮಾತ್ರ ಈವೆರೆಗೂ ವಿದ್ಯುತ್ ಕಂಬಗಳ ದುರಸ್ತಿ ಕಾರ್ಯವನ್ನ ಪ್ರಾರಂಭಿಸಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.