Tag: Geetha

  • ‘ಗೀತಾ’ಗಾಗಿ ಹಾರ್ಡ್‌ಕೋರ್ ಕನ್ನಡಿಗನಾದ ಗೋಲ್ಡನ್ ಸ್ಟಾರ್!

    ‘ಗೀತಾ’ಗಾಗಿ ಹಾರ್ಡ್‌ಕೋರ್ ಕನ್ನಡಿಗನಾದ ಗೋಲ್ಡನ್ ಸ್ಟಾರ್!

    ಬೆಂಗಳೂರು: ಮುಂಗಾರುಮಳೆಯ ಮಹಾ ಗೆಲುವಿನೊಂದಿಗೆ ಗೋಲ್ಡನ್ ಸ್ಟಾರ್ ಆಗಿ ಅವತರಿಸಿರೋ ಗಣೇಶ್ ಇದುವರೆಗೂ ಹಲವಾರು ಚಿತ್ರಗಳಲ್ಲಿ ನಾನಾ ಥರದ ಪಾತ್ರಗಳನ್ನು ಮಾಡಿದ್ದಾರೆ. ಹೆಚ್ಚಾಗಿ ಲವರ್ ಬಾಯ್ ಪಾತ್ರಗಳಲ್ಲಿಯೇ ಮಿಂಚುತ್ತಾ ಬಂದಿರೋ ಗಣೇಶ್ ಗೀತಾ ಚಿತ್ರದಲ್ಲಿ ಮಾತ್ರ ಇದುವರೆಗೂ ಕಾಣಿಸಿಕೊಂಡಿರದ ಪಾತ್ರದಲ್ಲಿ, ಗೆಟಪ್ಪಿನಲ್ಲಿ ಕಾಣಿಕೊಂಡಿದ್ದಾರೆಂಬುದಕ್ಕೆ ಇತ್ತೀಚೆಗೆ ಬಿಡುಗಡೆಯಾಗಿರೋ ಟ್ರೇಲರ್ ಮತ್ತು ಹಾಡುಗಳಲ್ಲಿಯೇ ಸಾಕ್ಷ್ಯಗಳು ಸಿಕ್ಕಿವೆ. ಈ ಸಿನಿಮಾದಲ್ಲಿ ಗಣೇಶ್ ಹಾರ್ಡ್‍ಕೋರ್ ಕನ್ನಡಾಭಿಮಾನಿಯಾಗಿ, ಕನ್ನಡಪರ ಹೋರಾಟಗಾರನಾಗಿ ನಟಿಸಿದ್ದಾರೆ.

    ಗೋಲ್ಡನ್ ಸ್ಟಾರ್ ಗಣೇಶ್ ಪಾಲಿಗೆ ಹಠಾತ್ತನೆ ಇಂಥಾದ್ದೊಂದು ರೂಪಾಂತರವನ್ನು ಕಲ್ಪಿಸಿ ಕೊಟ್ಟಿರುವವರು ನಿರ್ದೇಶಕ ವಿಜಯ್ ನಾಗೇಂದ್ರ. ಇವರ ಪಾಲಿಗಿದು ಚೊಚ್ಚಲ ಚಿತ್ರ. ಆದರೆ ಈ ಮೊದಲ ಪ್ರಯತ್ನದಲ್ಲಿಯೇ ಸವಾಲಿನಂಥಾ ಅದೆಷ್ಟೋ ಅಂಶಗಳನ್ನು ವಿಜಯ್ ಅಳವಡಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ಒಂದು ಇಮೇಜಿಗೆ ಹೊಂದಿಕೊಂಡ ನಟನಟಿಯರನ್ನು ಏಕಾಏಕಿ ಬೇರೆ ಥರದ ಪಾತ್ರದಲ್ಲಿ ಕಾಣಿಸೋದು ಸವಾಲಿನ ಕೆಲಸ. ಆದರೆ ಗೋಲ್ಡನ್ ಸ್ಟಾರ್ ಎಂಥಾ ಪಾತ್ರಕ್ಕಾದರೂ ನ್ಯಾಯ ಒದಗಿಸೋ ಕಸುವಿರುವ ನಟ. ಅದಕ್ಕೆ ತಕ್ಕುದಾದ ಕಥೆ ಮತ್ತು ಪಾತ್ರವನ್ನು ವಿಜಯ್ ನಾಗೇಂದ್ರ ಸೃಷ್ಟಿಸಿದ್ದಾರೆ. ಗಣೇಶ್ ಹೋಂ ಬ್ಯಾನರಿನಡಿಯಲ್ಲಿ ಈ ಚಿತ್ರವನ್ನು ಖ್ಯಾತ ನಿರ್ಮಾಪಕರಾದ ಸೈಯದ್ ಸಲಾಮ್ ಅವರ ಸಹಕಾರದೊಂದಿಗೆ ಶಿಲ್ಪಾ ಗಣೇಶ್ ನಿರ್ಮಾಣ ಮಾಡಿದ್ದಾರೆ.

    ಗಣೇಶ್ ಪಾಲಿಗಿದು ಮನ್ವಂತರದಂಥಾ ಚಿತ್ರ. ಯಾಕೆಂದರೆ, ನಿರ್ದೇಶಕರ ವಿಜಯ್ ನಾಗೇಂದ್ರ ಅವರ ಈವರೆಗಿನ ಇಮೇಜ್ ಹೊಸಾ ಥರದಲ್ಲಿ ಕಳೆಗಟ್ಟುವಂತೆ ಈ ಸಿನಿಮಾವನ್ನು ರೂಪಿಸಿದ್ದಾರೆ. ತೀರಾ ಕನ್ನಡದ ಘನತೆ ಎತ್ತಿ ಹಿಡಿಯುವ ನಿಟ್ಟಿನಲ್ಲಿ ನಡೆದ ಗೋಕಾಕ್ ಚಳುವಳಿಯಂಥಾ ಕಥೆಯನ್ನು ಮುಟ್ಟೋದೂ ಕೂಡಾ ಸಿನಿಮಾ ಚೌಕಟ್ಟಿನಲ್ಲಿ ಬಲು ಕಷ್ಟದ ಕೆಲಸ. ಆದರೆ ವಿಜಯ್ ಆಳವಾದ ಅಧ್ಯಯನದ ಮೂಲಕವೇ ಅದನ್ನು ಸಾಧ್ಯವಾಗಿಸಿಕೊಂಡಿದ್ದಾರೆ. ಮೂಲತಃ ಕನ್ನಡದ ಬಗ್ಗೆ ಅಪಾರ ಅಭಿಮಾನ ಹೊಂದಿರೋ ಗೋಲ್ಡನ್ ಸ್ಟಾರ್ ಗಣೇಶ್ ತೆರೆಯ ಮೇಲೆಯೂ ಪ್ರತೀ ಮನಸುಗಳಲ್ಲಿಯೂ ಕನ್ನಡತನದ ಕಿಚ್ಚು ಹಚ್ಚುವಂಥಾ ಪಾತ್ರದ ಮೂಲಕ ಮಿನುಗಲು ರೆಡಿಯಾಗಿದ್ದಾರೆ.

  • ಗೀತಾ ಟ್ರೇಲರ್: ಕನ್ನಡಾಭಿಮಾನಿಯಾಗಿ ಘರ್ಜಿಸಿದ ಗೋಲ್ಡನ್ ಗಣಿ!

    ಗೀತಾ ಟ್ರೇಲರ್: ಕನ್ನಡಾಭಿಮಾನಿಯಾಗಿ ಘರ್ಜಿಸಿದ ಗೋಲ್ಡನ್ ಗಣಿ!

    ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ತಮ್ಮ ಹೋಂ ಬ್ಯಾನರ್‍ನಲ್ಲಿ ನಿರ್ಮಾಣ ಮಾಡಿರೋ ಮೊದಲ ಚಿತ್ರವೆಂಬುದೂ ಸೇರಿದಂತೆ ‘ಗೀತಾ’ ಪ್ರೇಕ್ಷಕರನ್ನು ಸೆಳೆದುಕೊಂಡಿರೋದರ ಹಿಂದೆ ನಾನಾ ಕಾರಣಗಳಿವೆ. ಕೆಲ ದಿನಗಳ ಹಿಂದೆಯಷ್ಟೇ ಇದರ ಲಿರಿಕಲ್ ವೀಡಿಯೋ ಸಾಂಗ್ ಒಂದು ಬಿಡುಗಡೆಯಾಗಿತ್ತು ಅದರೊಂದಿಗೆ ಈ ಸಿನಿಮಾದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಕನ್ನಡ ಪರ ಹೋರಾಟಗಾರನ ಗೆಟಪ್ಪಿನಲ್ಲಿ ಕಾಣಿಸಿಕೊಂಡಿರೋದೂ ಸ್ಪಷ್ಟವಾಗಿತ್ತು. ಇದೀಗ ಗೀತಾದ ಟ್ರೇಲರ್ ರಿಲೀಸ್ ಆಗಿದೆ. ಇದರಲ್ಲಿ ಕನ್ನಡಪರ ಹೋರಾಟದ ಸ್ವರೂಪ ಮತ್ತಷ್ಟು ಸ್ಪಷ್ಟವಾಗಿಯೇ ಕಾಣಿಸಿಕೊಂಡಿದೆ.

    ಈ ಟ್ರೇಲರ್ ಗೀತಾ ಚಿತ್ರದ ಬಗ್ಗೆ ಪ್ರೇಕ್ಷಕರು ಮತ್ತಷ್ಟು ಮೋಹಗೊಳ್ಳುವಂತೆ ಮೂಡಿ ಬಂದಿದೆ. ಗಣೇಶ್ ಚಿತ್ರಗಳೆಂದ ಮೇಲೆ ಅದರಲ್ಲಿ ಪ್ರೀತಿ ಪ್ರೇಮದ ನವಿರು ಭಾವಗಳ ಕಥೆ ಇದ್ದೇ ತರುತ್ತದೆಂಬ ನಂಬಿಕೆ ಪ್ರೇಕ್ಷಕರಲ್ಲಿದೆ. ಅದನ್ನು ಬಯಸೋ ಅಭಿಮಾನಿ ವರ್ಗವೂ ದೊಡ್ಡ ಸಂಖ್ಯೆಯಲ್ಲಿಯೇ ಇದೆ. ಆದರೆ ಗೀತಾ ಚಿತ್ರದಲ್ಲಿ ಪ್ರೇಮ ಕಥಾನಕ ಮತ್ತು ಕನ್ನಡಪರ ಹೋರಾಟದ ಕಥನಗಳು ಬ್ಲೆಂಡ್ ಆಗಿರೋ ಸೂಚನೆಯನ್ನು ಈ ಟ್ರೇಲರ್ ರವಾನಿಸಿದೆ. ಗಣೇಶ್ ಅಂತೂ ಕನ್ನಡಾಭಿಮಾನದ ಡೈಲಾಗುಗಳೊಂದಿಗೆ ಕನ್ನಡ ಪರ ಹೋರಾಟಗಾರನಾಗಿ ಕನ್ನಡಿಗರೆಲ್ಲರೂ ರೋಮಾಂಚನಗೊಳ್ಳುವ ಗೆಟಪ್ಪಿನಲ್ಲಿಯೂ ಗಮನ ಸೆಳೆದಿದ್ದಾರೆ.

    ಇದೀಗ ಬಿಡುಗಡೆಯಾಗಿರೋ ಟ್ರೇಲರ್ ತನ್ನ ಸೀಮಿತ ಗಡುವಿನಲ್ಲಿಯೇ ಗೀತಾ ಚಿತ್ರದ ಬಗೆಗಿನ ಹಲವಾರು ಅಂಶಗಳನ್ನು ಅನಾವರಣಗೊಳಿಸಿದೆ. ಪ್ರೇಮ ಕಥೆಯ ವಿಚಾರದಲ್ಲಿಯೂ ಈ ಚಿತ್ರ ಭಿನ್ನವಾದ ಕಥೆಯನ್ನೇ ಹೊಂದಿದೆ ಅನ್ನೋದೂ ಕೂಡಾ ಈ ಟ್ರೇಲರ್ ಮೂಲಕವೇ ಸಾಬೀತಾಗಿದೆ. ಹೇಳಿ ಕೇಳಿ ಈ ಸಿನಿಮಾದಲ್ಲಿ ಮೂವರು ನಾಯಕಿಯರಿದ್ದಾರೆ. ಅವರೆಲ್ಲರನ್ನು ಬಳಸಿಕೊಂಡು ಗಣೇಸ್ ಪಾತ್ರದ ಸುತ್ತ ಸಾಗೋ ತ್ರಿಕೋನ ಪ್ರೇಮ ಕಥೆಯ ಸುಳಿವೂ ಕೂಡಾ ಸಿಕ್ಕಿದೆ. ಒಟ್ಟಾರೆಯಾಗಿ ಇದೇ ತಿಂಗಳ 27ರಂದು ಬಿಡುಗಡೆಗೊಳ್ಳಲಿರೋ ಈ ಸಿನಿಮಾ ಬಗ್ಗೆ ಮತ್ತಷ್ಟು ಪ್ರೇಕ್ಷಕರ ಚಿತ್ತ ಸೆಳೆಯುವಲ್ಲಿ ಈ ಟ್ರೇಲರ್ ಯಶ ಕಂಡಿದೆ.

  • ಗೀತಾ: ಕನ್ನಡ ಘಮಲಿನ ಲಿರಿಕಲ್ ವೀಡಿಯೋ ಬಿಡುಗಡೆ!

    ಗೀತಾ: ಕನ್ನಡ ಘಮಲಿನ ಲಿರಿಕಲ್ ವೀಡಿಯೋ ಬಿಡುಗಡೆ!

    ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಅವರ ಹೋಂ ಬ್ಯಾನರಿನಲ್ಲಿ ನಿರ್ಮಾಣಗೊಂಡ ಚಿತ್ರವೆಂಬುದೂ ಸೇರಿದಂತೆ `ಗೀತಾ’ ಚಿತ್ರ ಸದಾ ಒಂದಲ್ಲ ಒಂದು ಕಾರಣದಿಂದ ಸುದ್ದಿಯಾಗುತ್ತಿದೆ. ಇತ್ತೀಚೆಗಷ್ಟೇ ಈ ಚಿತ್ರಕ್ಕಾಗಿ ಪುನೀತ್ ರಾಜ್ ಕುಮಾರ್ ಹಾಡಿರೋ ಹಾಡೊಂದು ಬಿಡುಗಡೆಯಾಗಿದೆ ಎಂಬ ಸುದ್ದಿ ಹೊರಬಿದ್ದಿತ್ತು. ಇದೀಗ ಪ್ರತೀ ಕನ್ನಡಿಗರೂ ಥ್ರಿಲ್ ಆಗುವಂಥಾ ಕನ್ನಡದ ಘಮಲಿನ ಆ ಲಿರಿಕಲ್ ವೀಡಿಯೋ ಸಾಂಗ್ ಬಿಡುಗಡೆಯಾಗಿದೆ.

    ಕನ್ನಡವೇ ಸತ್ಯ ಎಂಬ ಸಾಲಿನಿಂದ ಶುರುವಾಗೋ ಈ ಹಾಡನ್ನು ಖ್ಯಾತ ನಿರ್ದೇಶಕ ಸಂತೋಷ್ ಆನಂದರಾಮ್ ಅವರು ಬರೆದಿದ್ದಾರೆ. ಇದಕ್ಕೆ ಆ ಸಾಲುಗಳ ಆವೇಗಕ್ಕೆ ತಕ್ಕುದಾದಂತೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಧ್ವನಿಯಾಗಿದ್ದಾರೆ. ನೊಬಿನ್ ಪೌಲ್ ಇದಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಲಿರಿಕಲ್ ವೀಡಿಯೋ ಬಿಡುಗಡೆಯಾಗಿ ಕೆಲವೇ ಕ್ಷಣಗಳಲ್ಲಿ ಹೆಚ್ಚು ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಳ್ಳುತ್ತಿದೆ. ಅದೇ ರೀತಿ ಕನ್ನಡತನದ ಘನತೆ ಮತ್ತು ಕೆಚ್ಚು ತುಂಬಿಕೊಂಡಂತಿರೋ ಈ ಹಾಡಿಗೆ ಒಳ್ಳೆಯ ಕಮೆಂಟುಗಳೂ ಬರುತ್ತಿವೆ. ಇದು ಗಣೇಶ್ ಸೇರಿದಂತೆ ಚಿತ್ರರಂಡ ಖುಷಿಗೊಳ್ಳುವಂತೆ ಮಾಡಿದೆ.

    ಈ ಚಿತ್ರವನ್ನು ಸೈಯದ್ ಸಲಾಮ್ ನಿರ್ಮಾಣ ಮಾಡಿದರೆ, ಗಣೇಶ್ ಮಡದಿ ಶಿಲ್ಪಾ ಗಣೇಶ್ ಸಹ ನಿರ್ಮಾಪಕಿಯಾಗಿ ಸಾಥ್ ನೀಡಿದ್ದಾರೆ. ಗಣೇಶ್ ಅವರನ್ನು ಇದುವರೆಗಿನ ಅಷ್ಟೂ ಚಿತ್ರಗಳಿಗಿಂತಲೂ ಬೇರೆಯದ್ದೇ ರೀತಿಯಲ್ಲಿ ಗೀತಾ ಚಿತ್ರ ಕಾಣಿಸಲಿದೆ ಎಂಬ ಮಾತುಗಳು ಆರಂಭದಿಂದಲೂ ಕೇಳಿ ಬರುತ್ತಿದ್ದವು. ಅದರ ಸ್ಪಷ್ಟ ಸೂಚನೆಗಳು ಈ ಲಿರಿಕಲ್ ವೀಡಿಯೋದಲ್ಲಿ ಕಂಡಿವೆ. ಇಲ್ಲಿ ಗಣೇಶ್ ಕನ್ನಡ ಪರ ಹೋರಾಟಗಾರನಾಗಿಯೂ ಕಾಣಿಸಿಕೊಂಡಿದ್ದಾರೆ. ಈ ಕಥೆಯಲ್ಲಿ ಗೋಕಾಕ್ ಚಳುವಳಿಯ ಬಗೆಗಿನ ಚಿತ್ರಣವೂ ಇದೆಯಂತೆ. ಇಂಥಾ ಎಲ್ಲ ಕಾರಣಗಳಿಂದ ಈಗ ಬಿಡುಗಡೆಯಾಗಿರೋ ಲಿರಿಕಲ್ ವೀಡಿಯೋ ಸಾಂಗ್ ಪ್ರೇಕ್ಷಕರನ್ನು ಸೆಳೆದುಕೊಂಡಿದೆ.

  • 39ನೇ ವಸಂತಕ್ಕೆ ಕಾಲಿಟ್ಟ ಗೋಲ್ಡನ್ ಸ್ಟಾರ್ – ಹುಟ್ಟುಹಬ್ಬಕ್ಕೆ ಗೀತಾ ಟೀಸರ್ ರಿಲೀಸ್

    39ನೇ ವಸಂತಕ್ಕೆ ಕಾಲಿಟ್ಟ ಗೋಲ್ಡನ್ ಸ್ಟಾರ್ – ಹುಟ್ಟುಹಬ್ಬಕ್ಕೆ ಗೀತಾ ಟೀಸರ್ ರಿಲೀಸ್

    ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಅವರು ಇಂದು 39ನೇ ವಸಂತಕ್ಕೆ ಕಾಲಿಟ್ಟಿದ್ದು, ಅವರ ಹುಟ್ಟುಹಬ್ಬಕ್ಕೆ ‘ಗೀತಾ’ ಚಿತ್ರದ ಟೀಸರ್ ಬಿಡುಗಡೆ ಆಗಿದೆ.

    ಗಣೇಶ್ ಅವರು ಈ ವರ್ಷ ತಮ್ಮ ಹುಟ್ಟುಹಬ್ಬವನ್ನು ಆಚರಿಸುತ್ತಿಲ್ಲ. ಈ ಬಗ್ಗೆ ಅವರು ತಮ್ಮ ಟ್ವಿಟ್ಟರಿನಲ್ಲಿ ಸ್ಪಷ್ಟನೆ ಕೂಡ ನೀಡಿದ್ದರು. ಇಂದು ಗಣೇಶ್ ಅವರ ಹುಟ್ಟುಹಬ್ಬದ ಪ್ರಯುಕ್ತವಾಗಿ ಅವರು ಅಭಿನಯದ ‘ಗೀತಾ’ ಚಿತ್ರದ ಟೀಸರ್ ರಿಲೀಸ್ ಆಗಿದೆ.

    ಗೀತಾ ಚಿತ್ರದ ಟೀಸರ್ ನಲ್ಲಿ ಗಣೇಶ್ ಕನ್ನಡ ಭಾಷೆಗಾಗಿ ಹೋರಾಟ ನಡೆಸಿದ್ದಾರೆ. ಅಲ್ಲದೆ ಗಣೇಶ್ ‘ಕರ್ನಾಟಕದಲ್ಲಿ ಕನ್ನಡಿಗನೇ ಯಜಮಾನ’, ‘ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ’ ಎಂಬ ಪಂಚಿಂಗ್ ಡೈಲಾಗ್‍ನಲ್ಲಿ ಹೊಡೆದಿದ್ದಾರೆ. ಈ ಚಿತ್ರದ ಚಿತ್ರೀಕರಣವನ್ನು ಮನಾಲಿ, ಕೋಲ್ಕತ್ತಾ, ಮೈಸೂರು, ಹೈದರಾಬಾದ್, ಬೆಂಗಳೂರು ಮತ್ತು ಇನ್ನಿತರ ಸ್ಥಳಗಳಲ್ಲಿ ನಡೆಸಲಾಗಿದೆ. ಗಣೇಶ್ ಅವರೊಡನೆ ಸಾನ್ವಿ, ಪಾರ್ವತಿ, ಪ್ರಯಾಗ ಮಾರ್ಟಿನ್, ಸುಧಾರಾಣಿ, ದೇವರಾಜ್, ಅಚ್ಯುತ್, ರಂಗಾಯಣ ರಘು ಮತ್ತು ಇನ್ನಿತರರು ಅಭಿನಯಿಸಿದ್ದಾರೆ.

    ಹುಟ್ಟುಹಬ್ಬ ಏಕೆ ಆಚರಿಸುತ್ತಿಲ್ಲ:
    ಗಣೇಶ್ ತಮ್ಮ ಟ್ವಿಟ್ಟರಿನಲ್ಲಿ, ನನ್ನ ಅಚ್ಚು ಮೆಚ್ಚಿನ ಪ್ರೀತಿಯ ಅಭಿಮಾನಿಗಳು, ಹಿತೈಷಿಗಳು, ಸ್ನೇಹಿತರಲ್ಲಿ ಒಂದು ಕಳಕಳಿಯ ವಿನಂತಿ. ಈ ಸಲ ನಾನು ಹುಟ್ಟುಹಬ್ಬ ಆಚರಿಸುತ್ತಿಲ್ಲ. ಕಾರಣ ಕೆಲವು ತಿಂಗಳ ಹಿಂದೆಯಷ್ಟೇ ನನ್ನ ತಂದೆಯವರನ್ನು ಅಗಲಿದ್ದೇನೆ ಅಲ್ಲದೇ ಈ ಸಂದರ್ಭದಲ್ಲಿ ಮನೆಯಲ್ಲಿ ನಾವ್ಯಾರೂ ಇರುವುದಿಲ್ಲ. ಆದ್ದರಿಂದ ದೂರದ ಊರುಗಳಿಂದ ಬಂದು ಕಾಯುವ ಪ್ರಯತ್ನ ಮಾಡಬೇಡಿ. ನನ್ನ ಹುಟ್ಟುಹಬ್ಬ ಆಚರಿಸಲು ದೂರದಿಂದ ಹಲವು ಸಿದ್ಧತೆಗಳೊಂದಿಗೆ ಬಂದು ಶುಭಕೋರಿ ಸಂಭ್ರಮಿಸುವ ನಿಮ್ಮ ಪ್ರೀತಿಗೆ ನಾನೆಂದೂ ಋಣಿ.

    ಆದ್ದರಿಂದ ಅಭಿಮಾನಿಗಳು ದಯವಿಟ್ಟು ಹಾರ, ಕೇಕ್, ಬ್ಯಾನರ್ ಗಳಿಗಾಗಿ ಹಣ ಖರ್ಚು ಮಾಡದೇ ಹತ್ತಿರದ ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ಸಹಾಯವಾಗುವಂತಹ ಕೆಲಸ ಮಾಡಿದರೆ ಅದೇ ನನಗೆ ನೀವು ಕೊಡುವ ಅತ್ಯುತ್ತಮ ಉಡುಗೊರೆ, ಇಷ್ಟು ಪ್ರೀತಿ, ಅಭಿಮಾನ ಹೊಂದಿರುವ ನೀವು ನನ್ನ ಕೋರಿಕೆಯನ್ನು ಅರ್ಥ ಮಾಡಿಕೊಂಡು, ಗಂಭೀರವಾಗಿ ಪರಿಗಣಿಸುವಿರಿ ಎಂಬ ಸಂಪೂರ್ಣ ವಿಶ್ವಾಸವಿದೆ. ದಯವಿಟ್ಟು ಸಹಕರಿಸಿ. ನಿಮ್ಮ ಪ್ರೀತಿ ಸದಾ ಇರಲಿ ಎಂದು ಗಣೇಶ್ ವಿನಂತಿಸಿಕೊಂಡಿದ್ದಾರೆ.

  • ಗೀತಾ ಮಾತಿನ ಚಿತ್ರೀಕರಣ ಮುಗೀತು!

    ಗೀತಾ ಮಾತಿನ ಚಿತ್ರೀಕರಣ ಮುಗೀತು!

    ಬೆಂಗಳೂರು: ನಿರ್ಮಾಪಕರಾದ ಸೈಯದ್ ಸಲಾಂ ಮತ್ತು ಶಿಲ್ಪಾ ಗಣೇಶ್ ಅವರ ಬ್ಯಾನರ್ ಗಳಾದ ಎಸ್ ಎಸ್ ಫಿಲ್ಮ್ ಮತ್ತು ಗೋಲ್ಡನ್ ಮೂವೀಸ್ ಅಡಿಯಲ್ಲಿ ಜಂಟಿಯಾಗಿ ನಿರ್ಮಿಸುತ್ತಿರುವ ಗೀತಾ ಚಿತ್ರದ ಮಾತಿನ ಚಿತ್ರೀಕರಣ ಮುಗಿದಿದೆ. ಇನ್ನು ಎರಡು ಹಾಡುಗಳ ಚಿತ್ರೀಕರಣ ಬಾಕಿ ಉಳಿದಿದೆ.

    ಮನಾಲಿ, ಕೊಲ್ಕತ್ತಾ, ಮೈಸೂರು, ಹೈದರಾಬಾದ್, ಬೆಂಗಳೂರು ಮತ್ತು ಇನ್ನಿತರ ಸ್ಥಳಗಳಲ್ಲಿ ಶೂಟಿಂಗ್ ನಡೆಸಿದೆ. ಗೋಲ್ಡನ್ ಸ್ಟಾರ್ ಗಣೇಶ್ ಅವರೊಡನೆ ಸಾನ್ವಿ, ಪಾರ್ವತಿ, ಪ್ರಯಾಗ ಮಾರ್ಟಿನ್, ಸುಧಾರಾಣಿ, ದೇವರಾಜ್, ಅಚ್ಯುತ್, ರಂಗಾಯಣ ರಘು ಮತ್ತು ಇನ್ನಿತರರು ಅಭಿನಯಿಸಿದ್ದಾರೆ.

    ಮಿಸ್ಟರ್ & ಮಿಸೆಸ್ ರಾಮಾಚಾರಿ ಮತ್ತು ರಾಜಕುಮಾರ ಚಿತ್ರದ ಸಹ ನಿರ್ದೇಶಕರು ಮತ್ತು ಸಂಭಾಷಣೆಕಾರರಾಗಿ ಕೆಲಸ ಮಾಡಿದ್ದ ವಿಜಯ್  ನಾಗೇಂದ್ರ ಅವರು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಅನುಪ್ ರೂಬೆನ್ಸ್ ಈ ಚಿತ್ರಕ್ಕೆ ಸಂಗೀತವನ್ನು ನೀಡುತ್ತಿದ್ದಾರೆ. ಚಿತ್ರಕ್ಕೆ ಶ್ರೀಶ ಕುಂದ್ರಳ್ಳಿ ಅವರ ಛಾಯಾಗ್ರಹಣವಿದೆ.

  • ಪತ್ನಿ ಆಸೆಯಂತೆ ಶಿವಣ್ಣನ ಮನೆಗೆ ಬಂತು ಹೊಸ ಅತಿಥಿ

    ಪತ್ನಿ ಆಸೆಯಂತೆ ಶಿವಣ್ಣನ ಮನೆಗೆ ಬಂತು ಹೊಸ ಅತಿಥಿ

    ಬೆಂಗಳೂರು: ಪತ್ನಿ ಗೀತಾ ಅವರ ಆಸೆಯಂತೆ ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಅವರ ಮನೆಗೆ ಹೊಸ ಅತಿಥಿವೊಂದು ಎಂಟ್ರಿ ಕೊಟ್ಟಿದೆ.

    ಇತ್ತೀಚೆಗೆ ಗೀತಾ ಶಿವರಾಜ್‍ಕುಮಾರ್ ಅವರು ಬರೋಬ್ಬರಿ 72 ಲಕ್ಷ ರೂ. ನೀಡಿ ನೀಲಿ ಬಣ್ಣದ ವೋಲ್ವೋ ಎಸ್ 90 ಕಾರನ್ನು ಖರೀದಿಸಿದ್ದಾರೆ. ಈ ಕಾರು ಅವರ ಮನೆಗೆ ಬರುತ್ತಿದ್ದಂತೆ ಶಿವಣ್ಣ ಅದನ್ನು ಪೂಜೆ ಮಾಡಿ ಬಳಿಕ ಲಾಂಗ್ ಡ್ರೈವ್‍ಗೆ ಹೋಗಿದ್ದಾರೆ.

    ಈ ಕಾರು 18 ಕಿ.ಮೀ ಮೈಲೇಜ್ ನೀಡುತ್ತದೆ. ಸದ್ಯ ಈ ಕಾರಿನಲ್ಲಿ ಶಿವಣ್ಣ ದಂಪತಿ ಒಂದು ಜಾಲಿ ರೈಡ್ ಗೆ ಹೋಗಿ ಬಂದಿದ್ದಾರೆ.

    ಶಿವರಾಜ್‍ಕುಮಾರ್ ಅವರ ಮನೆಯಲ್ಲಿ ಈಗಾಗಲೇ 5 ದುಬಾರಿ ಕಾರುಗಳಿವೆ. ಫಾರ್ಚುನರ್, ಎರಡು ಇನೋವಾ ಹಾಗೂ ನಿಸಾನ್ ಟಿಡಾ ಕಾರುಗಳಿದ್ದು, ಈಗ ಇವುಗಳ ಜೊತೆ ವೋಲ್ವೋ ಎಸ್ 90 ಕಾರು ಸೇರ್ಪಡೆ ಆಗಿದೆ.

    ಮಹಿಳಾ ದಿನಾಚರಣೆಯ ವಿಶೇಷವಾಗಿ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ತಮ್ಮ ಮಡದಿ ಅಶ್ವಿನಿಯವರಿಗೆ ಇಷ್ಟದ ಲಾಂಬೋರ್ಗಿನಿ ಕಾರನ್ನ ಉಡುಗೊರೆಯಾಗಿ ನೀಡಿದ್ದರು. ಈಗಾಗಲೇ ದರ್ಶನ್ ಹಾಗೂ ನಿಖಿಲ್ ಕುಮಾರಸ್ವಾಮಿ ಲ್ಯಾಂಬೋರ್ಗಿನಿ ಕಾರಿನ ಒಡೆಯರಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶಿವಣ್ಣ, ಗೀತಾರನ್ನು ಕರೆದೊಯ್ದ ಐಟಿ ಅಧಿಕಾರಿಗಳು

    ಶಿವಣ್ಣ, ಗೀತಾರನ್ನು ಕರೆದೊಯ್ದ ಐಟಿ ಅಧಿಕಾರಿಗಳು

    ಬೆಂಗಳೂರು: ನಟ ಶಿವರಾಜ್ ಕುಮಾರ್ ಮನೆಯಲ್ಲಿ ಕಳೆದ ದಿನದಿಂದ ಇಂದು ಕೂಡ ಐಟಿ ಅಧಿಕಾರಿಗಳು ಕಾರ್ಯಚರಣೆಯನ್ನು ಮುಂದುವರಿಸಿದ್ದು, ಈಗ ಅಧಿಕಾರುಗಳು ಶಿವಣ್ಣ ಮತ್ತು ಅವರ ಪತ್ನಿ ಗೀತಾರನ್ನು ಬ್ಯಾಂಕಿಗೆ ಕರೆದುಕೊಂಡು ಹೋಗಿದ್ದಾರೆ.

    ಗುರುವಾರ ದಾಳಿ ಮಾಡುವಾಗ ಅಧಿಕಾರಿಗಳು ಬ್ಯಾಂಕ್ ಖಾತೆ ಮತ್ತು ಲಾಕರ್ ಸೀಜ್ ಮಾಡಿದ್ದರು. ಹೀಗಾಗಿ ಇಂದು ಅಧಿಕಾರಿಗಳು ಬ್ಯಾಂಕ್ ಖಾತೆ, ಲಾಕರ್ ಪರಿಶೀಲನೆ ಮತ್ತು ಬ್ಯಾಂಕ್ ಲಾಕರ್ ಓಪನ್ ಮಾಡಲು ಶಿವಣ್ಣ ಮತ್ತು ಗೀತಾರನ್ನು ಬ್ಯಾಂಕಿಗೆ ಕರೆದುಕೊಂಡು ಹೋಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ಐಟಿ ದಾಳಿ ವೇಳೆ ಬೆಳಕಿಗೆ ಬಂತು ಮಹತ್ವದ ವಿಚಾರಗಳು

    ಗುರುವಾರ ಅಧಿಕಾರಿಗಳು ದಾಳಿ ಮುಗಿಸಿ ವಾಪಸ್ ಹೋಗಿದ್ದರು. ಇಂದು ಬೆಳಗ್ಗೆ ನಟ ಶಿವರಾಜ್ ಕುಮಾರ್ ಮನೆಗೆ ಖಾಸಗಿ ಇನ್ನೋವಾ ಕಾರಿನಲ್ಲಿ ಇಬ್ಬರು ಐಟಿ ಅಧಿಕಾರಿ ಆಗಮಿಸಿದ್ದರು. ಗುರುವಾರ ರಾತ್ರಿ ಮನೆಯಲ್ಲೇ ತಂಗಿದ್ದ ಮೂವರು ಅಧಿಕಾರಿಗಳು ಸೇರಿ ಒಟ್ಟು ಐದು ಜನರ ಐಟಿ ಅಧಿಕಾರಿಗಳ ತಂಡ ಶಿವಣ್ಣನ ಮನೆಯಲ್ಲಿ ಕಾರ್ಯಚರಣೆಯನ್ನು ಮುಂದುವರಿಸಿತ್ತು. ನಂತರ ಸ್ವಲ್ಪ ಸಮಯದ ನಂತರ ಲ್ಯಾಪ್ ಟಾಪ್ ಹಿಡಿದು ಮತ್ತೆ ಒಬ್ಬರು ಹಿರಿಯ ಅಧಿಕಾರಿ ಸಮೇತ ಮೂವರು ಐಟಿ ಅಧಿಕಾರಿಗಳು ಆಗಮಿಸಿದ್ದರು.

    ಒಬ್ಬ ಟೆಕ್ನಿಷಿಯನ್ ಅವರನ್ನು ಮನೆಗೆ ಕರೆಸಿಕೊಂಡು ಮನೆಯಲ್ಲಿರುವ ಕಂಪ್ಯೂಟರ್ ನಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಇಬ್ಬರು ಮಹಿಳೆಯರು, ಒಬ್ಬರು ಟೆಕ್ನಿಷಿಯನ್, ಉಳಿದ ಎಳು ಜನರ ತಂಡದಿಂದ ಶಿವಣ್ಣ ಮನೆಯಲ್ಲಿ ಐಟಿ ದಾಳಿ ಮುಂದುವರಿದಿತ್ತು. ಜೊತೆಗೆ ಇಬ್ಬರು ಮಹಿಳಾ ಅಧಿಕಾರಿಗಳು ಗೀತಾ ಶಿವರಾಜ್ ಕುಮಾರ್ ಅವರನ್ನು ವಿಚಾರಣೆ ಕೂಡ ಮಾಡಿದ್ದರು ಎಂದು ತಿಳಿದು ಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮನೆಯ ಬಾಲ್ಕನಿಯಲ್ಲೇ ನಟ ಶಿವಣ್ಣ ದಂಪತಿ ವಾಕಿಂಗ್

    ಮನೆಯ ಬಾಲ್ಕನಿಯಲ್ಲೇ ನಟ ಶಿವಣ್ಣ ದಂಪತಿ ವಾಕಿಂಗ್

    ಬೆಂಗಳೂರು: ಸ್ಯಾಂಡಲ್‍ವುಡ್ ನಟರ ಮನೆ ಐಟಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಕೂಡ ಅಧಿಕಾರಿಗಳ ಪರಿಶೀಲನೆ ಕಾರ್ಯಾಚರಣೆ ಮುಂದುವರಿದಿದ್ದು, ಪರಿಣಾಮ ನಟ ಶಿವರಾಜ್‍ಕುಮಾರ್ ದಂಪತಿಯಿಂದ ಮನೆಯ ಬಾಲ್ಕನಿಯಲ್ಲೇ ವಾಕಿಂಗ್ ಮಾಡಿದ್ದಾರೆ.

    ಐಟಿ ಅಧಿಕಾರಿಗಳು ದಾಳಿ ಮಾಡುವಾಗ ಸದಸ್ಯರು ಮನೆಯಿಂದ ಹೊರಗಡೆ ಹೋಗಲು ಅವಕಾಶ ಇರುವುದಿಲ್ಲ. ಆದರೆ ಶಿವಣ್ಣ ಅವರು ಆರೋಗ್ಯ ದೃಷ್ಟಿಯಿಂದ ಪ್ರತಿನಿತ್ಯ ಮನೆಯ ಸಮೀಪದ ಪಾರ್ಕಿನಲ್ಲಿ ವಾಕಿಂಗ್ ಮಾಡುತ್ತಿದ್ದರು. ಆದರೆ ಐಟಿ ದಾಳಿಯಿಂದ ಮನೆಯಿಂದ ಹೊರಗೆ ಹೋಗಲು ಸಾಧ್ಯವಾಗದಿದ್ದರಿಂದ ಮಾನ್ಯತಾ ಟೆಕ್‍ಪಾರ್ಕಿನಲ್ಲಿರುವ ನಿವಾಸದ ಬಾಲ್ಕನಿಯಲ್ಲಿ ನಟ ಶಿವರಾಜ್‍ಕುಮಾರ್ ತಮ್ಮ ಪತ್ನಿ ಗೀತಾ ಅವರ ಜೊತೆ ವಾಕಿಂಗ್ ಮಾಡುತ್ತಿದ್ದಾರೆ. ಇದನ್ನೂ ಓದಿ: ಹಿಂದಿನ ಚಿತ್ರದ ಸಂಭಾವನೆ ಎಷ್ಟು? – ಶಿವಣ್ಣರನ್ನು ವಿಚಾರಿಸುತ್ತಿರುವ ಐಟಿ ಅಧಿಕಾರಿಗಳು

    ಗುರುವಾರ ತಡರಾತ್ರಿ 12 ಗಂಟೆವರೆಗೆ ಐಟಿ ಅಧಿಕಾರಿಗಳಿಂದ ತಪಾಸಣೆ ಮಾಡಿದ್ದಾರೆ. ಒಟ್ಟು ಎಂಟು ಮಂದಿ ಐಟಿ ಅಧಿಕಾರಿಗಳ ತಂಡ ಶಿವರಾಜ್ ಕುಮಾರ್ ಮನೆಯಲ್ಲಿ ತಡರಾತ್ರಿವರೆಗೂ ಪರಿಶೀಲನೆ ನಡೆಸಿ ವಾಪಸ್ಸಾಗಿದ್ದರು. ಬಳಿಕ ರಾತ್ರಿ ಮೂವರು ಐಟಿ ಅಧಿಕಾರಿಗಳು ಶಿವಣ್ಣನ ಮನೆಯಲ್ಲೇ ತಂಗಿದ್ದು, ಉಳಿದ ಅಧಿಕಾರಿಗಳು ವಾಪಸ್ ಹೋಗಿದ್ದರು. ಅವರು ಇಂದು ಬೆಳಗ್ಗೆ ಬಂದ ನಂತರ ಮತ್ತೆ ಶೋಧ ಕಾರ್ಯಚರಣೆ ಮುಂದುವರಿಯಲಿದೆ.

    ನಟರು ಮತ್ತು ನಿರ್ಮಾಕಪಕರು ಮನೆಯಲ್ಲಿ ಸಿಕ್ಕಿದ್ದ ಆಸ್ತಿಪಾಸ್ತಿ ಪತ್ರ, ಇನ್ನಿತರ ದಾಖಲೆಗಳ ಬಗ್ಗೆ ಪ್ರಶ್ನೆ ಮೇಲೆ ಪ್ರಶ್ನೆ ಮಾಡಿ ಐಟಿ ಅಧಿಕಾರಿಗಳು ಉತ್ತರ ಪಡೆದುಕೊಂಡಿದ್ದಾರೆ. ಇನ್ನೂ ಕೆಲವು ಪ್ರಶ್ನೆಗಳಿಗೆ ಉತ್ತರ ಕೊಡಲು ನಟರು ಮತ್ತು ನಿರ್ಮಾಪಕರು ಸಮಯ ಬೇಕೆಂದಿದ್ದರು. ಇಂದೂ ಕೂಡ ಪರಿಶೀಲನೆ ಕಾರ್ಯಾಚರಣೆ ಮುಂದುವರಿಯುವ ಸಾಧ್ಯತೆ ಇದೆ. ಎಲ್ಲಾ ಸಂಪೂರ್ಣ ದಾಖಲೆಗಳಿಗೆ ಉತ್ತರ ಪಡೆಯಲು ಇಂದು ಕೂಡ ಪರಿಶೀಲನೆ ಮಾಡಲಿದ್ದಾರೆ. ದೊಡ್ಡ ದೊಡ್ಡ ಬ್ಯಸಿನೆಸ್ ಜಾಲ ಮತ್ತು ತೆರಿಗೆ ವಂಚನೆ ಪತ್ತೆ ಹಚ್ಚಲು ಐಟಿ ದಾಳಿ ನಡೆಸಲಾಗಿದೆ ಎಂಬುದಾಗಿ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗೋಲ್ಡನ್ ಸ್ಟಾರ್ ಗಣೇಶ್ ಚಿತ್ರಕ್ಕೆ ಶಾನ್ವಿ ನಾಯಕಿ!

    ಗೋಲ್ಡನ್ ಸ್ಟಾರ್ ಗಣೇಶ್ ಚಿತ್ರಕ್ಕೆ ಶಾನ್ವಿ ನಾಯಕಿ!

    ಗೋಲ್ಡನ್ ಸ್ಟಾರ್ ಗಣೇಶ್ ಗೀತಾ ಎಂಬ ಚಿತ್ರದಲ್ಲಿ ನಟಿಸುತ್ತಿರೋ ವಿಚಾರ ಗೊತ್ತೇ ಇದೆ. ಈ ಚಿತ್ರಕ್ಕೆ ಈಗಾಗಲೇ ಚಾಲನೆ ಸಿಕ್ಕಿದೆ. ಇದೇ ಸಮಯದಲ್ಲಿ ಬಾಕಿ ಉಳಿದಿದ್ದ ಮೂರನೇ ನಾಯಕಿಯ ಆಯ್ಕೆಯೂ ನಡೆದಿದೆ. ಶಾನ್ವಿ ಶ್ರೀವಾಸ್ತವ ಈ ಚಿತ್ರಕ್ಕೆ ಹೊಸತಾಗಿ ಎಂಟ್ರಿ ಕೊಟ್ಟಿದ್ದಾರೆ.

    ಗೀತಾ ಚಿತ್ರದಲ್ಲಿ ಮೂವರು ನಾಯಕಿಯರು ನಟಿಸಲಿದ್ದಾರೆ. ಈಗಾಗಲೇ ಮಲೆಯಾಳಿ ಚೆಲುವೆಯರಾದ ಪ್ರಯಾಗಾ ಮಾರ್ಟಿನ್ ಮತ್ತು ಪಾರ್ವತಿ ಅರುಣ್ ನಾಯಕಿಯರಾಗಿ ನಿಕ್ಕಿಯಾಗಿದ್ದರು. ಮೂರನೇ ನಾಯಕಿಗಾಗಿ ವ್ಯಾಪಕವಾಗಿ ಹುಡುಕಾಟ ಆರಂಭವಾಗಿತ್ತು. ಇದೀಗ ಆ ಪಾತ್ರಕ್ಕೆ ಶಾನ್ವಿ ಆಗಮನವಾಗಿದೆ.

    ಈ ಚಿತ್ರಕ್ಕೆ ಈ ಹಿಂದೆ ಮುಗುಳು ನಗೆ ಚಿತ್ರ ನಿರ್ಮಾಣ ಮಾಡಿದ್ದ ಸೈಯದ್ ಸಲಾಮ್ ಅವರೇ ಹಣ ಹೂಡಿದ್ದಾರೆ. ವಿಜಯ್ ನಾಗೇಂದ್ರ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಶಾನ್ವಿ ಶ್ರೀವಾಸ್ತವ ಮುಂದಿನ ಶೆಡ್ಯೂಲ್ ಹೊತ್ತಿಗೆಲ್ಲ ಚಿತ್ರತಂಡ ಸೇರಿಕೊಳ್ಳಲಿದ್ದಾರಂತೆ. ಮುಂದಿನ ಹಂತದ ಚಿತ್ರೀಕರಣ ಕೋಲ್ಕತ್ತಾದಲ್ಲಿ ನಡೆಯಲಿದೆ. ಅಲ್ಲಿಂದ ಕಾಶ್ಮೀರದಲ್ಲಿಯೂ ಚಿತ್ರೀಕರಣ ನಡೆಸಲು ಚಿತ್ರತಂಡ ತೀರ್ಮಾನಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಗೋಲ್ಡನ್ ಸ್ಟಾರ್ ಗಣೇಶ್‍ಗೆ 38ನೇ ಹುಟ್ಟುಹಬ್ಬದ ಸಂಭ್ರಮ

    ಗೋಲ್ಡನ್ ಸ್ಟಾರ್ ಗಣೇಶ್‍ಗೆ 38ನೇ ಹುಟ್ಟುಹಬ್ಬದ ಸಂಭ್ರಮ

    ಬೆಂಗಳೂರು: ಇಂದು ಗೋಲ್ಡನ್ ಸ್ಟಾರ್ ಗಣೇಶ್‍ಗೆ 38ನೇ ಹುಟ್ಟುಹಬ್ಬದ ಸಂಭ್ರಮ. ನೆಚ್ಚಿನ ನಟನ ಜನ್ಮದಿನದ ಸಂಭ್ರಮಕ್ಕಾಗಿಯೇ ಬೆಂಗಳೂರಿನ ಆರ್ ಆರ್ ನಗರದಲ್ಲಿರುವ ಮುಂಗಾರು ಮಳೆ ಹುಡುಗನ ಮನೆ ಮುಂದೆ ಅಭಿಮಾನಿಗಳು ಜಮಾಯಿಸಿದ್ದರು.

    ಅಭಿಮಾನಿಗಳ ಸಮ್ಮುಖದಲ್ಲಿ ಗಣೇಶ್ ಪತ್ನಿ ಶಿಲ್ಪಾ ಜೊತೆಗೆ ಕೇಕ್ ಕಟ್ ಮಾಡಿದ್ರು. ತಮ್ಮದೇ ಹೋಂ ಬ್ಯಾನರ್‍ನಲ್ಲಿ ನಿರ್ಮಾಣವಾಗ್ತಿರೋ ಗೀತಾ ಸಿನಿಮಾವೇ ಗಿಫ್ಟ್ ಅಂದ್ರು ಶಿಲ್ಪಾ. ಬರ್ತ್ ಡೇ ಹಿನ್ನೆಲೆಯಲ್ಲಿ ಇವತ್ತು ಬೆಳಗ್ಗೆ ಆರೆಂಜ್ ಚಿತ್ರದ ಟೀಸರ್ ರಿಲೀಸ್ ಆಗಲಿದೆ.

    ಗೋಲ್ಡನ್ ಸ್ಟಾರ್ ಗಣೇಶ್ ಈಗ ‘ಗೀತಾ’ ಸಿನಿಮಾದಲ್ಲಿ ನಟಿಸಲು ಎಲ್ಲ ತಯಾರಿ ಮಾಡಿಕೊಂಡಿದ್ದಾರೆ. ಈಗಾಗಲೇ ಮನೆಯ ಮುಂದೆ ದೊಡ್ಡ ಕಟೌಟ್ ನಿಲ್ಲಿಸಲಾಗಿದೆ. ಇದೇ ಮೊದಲ ಬಾರಿಗೆ ಸಿನಿಮಾ ಸೆಟ್ಟೇರುವ ಮೊದಲೇ ನಟರೊಬ್ಬರ ಕಟೌಟ್ ನಿಲ್ಲಿಸಿ ಅಭಿಮಾನಿಗಳು ಬರ್ತ್ ಡೇ ಆಚರಿಸಿದ್ದಾರೆ. ಸದ್ಯ ಗಣೇಶ್ ಇತ್ತೀಚಿನ ದಿನಗಳಲ್ಲಿ ವಿಭಿನ್ನ ಪಾತ್ರಗಳನ್ನು ಆಯ್ಕೆ ಮಾಡಿಕೊಂಡು ಹೊಸತನವನ್ನು ಪ್ರಯತ್ನಿಸುತ್ತಿದ್ದಾರೆ.